ಒಟ್ಟು 3042 ಕಡೆಗಳಲ್ಲಿ , 124 ದಾಸರು , 2171 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಟ್ಹ್ಯಾಗೆ ಇರಲಿನ್ನೀ ಚರಣ | ರಂಗ ಪ. ವಿಠ್ಠಲನಾ ಪುಟ್ಟ ಚರಣ ಬಿಟ್ಟು ಗೋಕುಲ ಪುಂಡಲೀಕನಿಗೊಲಿಯುತ ಇಟ್ಟಿಗೆ ಮೇಲ್ಹೊಂದಿ ನಿಂತಂಥ ಚರಣ ಅ.ಪ. ಭಕ್ತರಿಗೊಲಿಯುವ ಚರಣಾ | ವೇದ ಉಕ್ತಿಗೆ ನಿಲುಕದ ಚರಣಾ ಹತ್ತಿ ಪಾರ್ಥನ ರಥ ಮತ್ತೆ ಭೀಷ್ಮನಿಗೊಲಿದು ಹಸ್ತದಿ ಚಕ್ರವ ಪಿಡಿದು ಬಂದಾ ಚರಣ 1 ಬಲಿಯನ್ನು ತುಳಿದಂಥ ಚರಣಾ | ಮೂರು ಇಳೆಯನಳೆದ ಪುಟ್ಟ ಚರಣ ಕುಲಕೋಟಿ ಉದ್ಧಾರಗೈವಂಥ ಗಂಗೆಯ ಚಲುವ ಉಂಗುಟದಲ್ಲಿ ಪಡೆದ ಕೋಮಲ ಚರಣ 2 ಹಸ್ತಿ ಕರೆಯೆ ಬಂದ ಚರಣಾ | ಲಕ್ಷ್ಮಿ ವತ್ತುವೋ ಮೃದುತಳ ಚರಣಾ ಚಿತ್ತದೆ ಚಿಂತಿಪ ಭಕ್ತರ ಮನದೈವ ತೆತ್ತಿಗನಾಗಿ ಐವರ ಪೊರೆದಾ ಚರಣ3 ಭೀಮ ತೀರಾ ವಾಸ ಚರಣಾ | ಭಕ್ತ ರಾಮಯ ಹರಿಸುವ ಚರಣಾ ಕಾಮಜನಕ ಪಾಂಡುರಂಗವಿಠ್ಠಲನೆಂದು ಪ್ರೇಮದಿಂ ಭಜನೆಗೊಂಬುವ ಸ್ವಾಮಿ ಚರಣಾ 4 ಬಿಟ್ಟಿರಲಾರೆ ನೀ ಚರಣ | ಮನದಿ ಕಟ್ಟಿ ಹಾಕೂವೆ ನಾ ನೀ ಚರಣ ದಿಟ್ಟ ಶ್ರೀ ಗೋಪಾಲಕೃಷ್ಣವಿಠ್ಠಲ ಚರಣ ಇಟ್ಟು ಹೃತ್ಕಮಲದಿ ಪೂಜಿಪೆ ನೀ ಚರಣ 5
--------------
ಅಂಬಾಬಾಯಿ
ಬಿಡಬೇಡ ಕೈಯ ಪ ಕಡಲಶಯನ ನಿನ್ನಡಿಗೆರಗಿ ಬೇಡುವೆ ಅ.ಪ ಏನೊಂದನರಿಯದ ಮೂಢನಾಗಿರುವನ 1 ಮತಿಹೀನನಾದೆನು ಪತಿತ ಪಾವನ ಕಾಯೊ 2 ಮರೆಯಹೊಕ್ಕೆನು ಕಾಯೊ ಕರುಣಿಗಳರಸನೆ 3 ಮಕರಕುಂಡಲ ಧಾರಿ 4 ಕಾವ ಕರ್ತನೆ ಕುಲದೇವ ಸದಾನಂದ 5
--------------
ಸದಾನಂದರು
ಬಿಡಿ ಬಿಡಿ ಸಂದೇಹವನು ಪೊಡವಿ ಮನುಜರೆಲ್ಲಒಡೆಯನೊಬ್ಬನೆ ಜಗಕೆ ರಂಗವಿಠಲ ಪ ಹರಿಹರವಿರಿಂಚರೊಳು ಪರದೈವವಾರೆಂದುಪರಮ ಮುನಿಗಳು ವಿವಾದವನು ಮಾಡೆಸರಸಿಜಾತನ ಸುತನ ಭೃಗುವನಟ್ಟಲು ಪೋದಅರಿದು ಬಹೆನೆಂದು ಪದ್ಮಜನ ಸಭೆಗೆ1 ಮುನಿವರನು ಕಂಡು ಪದ್ಮಜಗೆ ವಂದಿಸದಿರಲುವನಜಭವ ಕೋಪವನು ಮಾಡಿ ಜರಿಯೆಮುನಿ ಪರಮ ತತ್ತ್ವ ಇವನಲ್ಲವೆಂದೆನೆ ಕನಲಿಮನಸಿಜವೈರಿಯ ಲೋಕಕೆ ಪೋದನು 2 ಹರ ಕಂಡು ಭೃಗುಮುನಿ ಬರಲು ತನ್ನನುಜನೆಂದುಭರವಸೆಯಲೆದ್ದು ತಕ್ಕೈಸ ಪÉÇೀಗೆ ಜರಿದು ಹರನನು ಮುಟ್ಟದಿರೆ ಶಂಕರನು ಕನಲಿಕರೆದ ಶೂಲವ ಜಡಿದು ಕೊಲಲುಬಗೆದ 3 ಹರನ ಕೋಪವ ಕಂಡು ಗಿರಿಜೆ ಚರಣವ ಪಿಡಿದುಕರುಣಿ ಮುನಿಯನು ಕಾಯಬÉೀಕೆಂದೆನಲುಮರಣ ಭಯದಿಂದ ನಿರ್ಮುಕ್ತನಾಗಿ ಮುನಿವರನು ಸರಸಿಜನಯ್ಯನಿಪ್ಪ ವೈಕುಂಠಕೆ ಪೋದನು 4 ಅಲ್ಲಿ ಮಹಲಕ್ಷುಮಿಯ ತೊಡೆಯಲ್ಲಿ ಪವಡಿಸಿ ಇರಲುಫುಲ್ಲನಾಭನ ಚರಣದಿಂದಲೊದೆಯೆಮೆಲ್ಲನೆ ಪಾದವ ಪಿಡಿದು ಮುನಿವರಗೆ ಪೊಡಮಟ್ಟುಇಲ್ಲಿ ಬಿಜಯಂಗೈಸಬೇಕೆಂದನು 5 ಪರಮ ಮುನಿ ನಿಮ್ಮ ಪದ ಸೋಂಕಲು ಪಾವನನಾದೆಚರಣರಜ ಪರಮ ಪಾವನ ಸುಲಭವೆಸಿರಿಗೆ ನೆಲೆವನೆಯಾದೆ ಪದಸಂಗದಿಂದಲೆನೆಪರಮ ಹರುಷದಲಿ ಮುನಿತನುವ ಮರೆದ 6 ಪರತತ್ವವನು ಕಂಡು ಬಂದು ಮುನಿವರನಂದುಒರೆಯೆ ಋಷಿವರರಿಗವರವರ ಪರಿಯಅರಿದರಾ ಮುನಿವರರು ಹರಿಯೆ ಪರದೈವವೆಂದುನೆರೆ ತಿಳಿದು ಭಜಿಸಿ ನರಹರಿಯ ಹರಿಯ 7 ಸುರರು ಕಡೆಯೆ ಕಡಲೊಳಗಿರ್ದಮಡದಿ ಮಹಾಲಕ್ಷುಮಿ ಅವತರಿಸಿ ಬರಲುಮೃಡ ಕಮಲಜ ಸುರಮುಖ್ಯರನು ಜರಿದು ಸಿಂಧುವಿನದಡದಲ್ಲಿ ಹರಿಯ ವರಿಸಿದಳು ವರನೆಂದು 8 ಕರಿಪತಿಯ ಸರಸಿಯೊಳು ಮೊಸಳೆ ಪಿಡಿಯಲು ಭರದಿಪರಮ ಪುರುಷ ಜಗತ್ಪತಿಯೆನಲುಗರುಡವಾಹನನಾಗಿ ಹರಿ ಬಂದವನ ಕಾಯ್ದಪರದೈವವಾರು ಜಗದೊಳಗೆ ಪೇಳಾ9 ರಾಜಸೂಯವ ಧರ್ಮಸುತ ಮಾಡೆ ಅವನಗ್ರ-ಪೂಜೆಗರುಹರು ಸುರರೊಳಾರೆಂದೆನಲುಭಾಜನನು ಸದ್ಗುಣನು ಕೃಷ್ಣನೊಬ್ಬನೆಯೆಂದುರಾಜಸಭೆಯಲಿ ದೇವವ್ರತ ನುಡಿದನು 10 ಗಂಗೆ ಈತನ ಪಾದಸಂಗದಿ ಪಾವನವೆನಲುಗಂಗಾಧರನು ಪರಮ ದಾಸನೆನಲುಮಂಗಳಾತ್ಮಕ ವಿಶ್ವಜನ್ಮಾದಿ ಕಾರಣನುರಂಗವಿಠಲರೇಯನ ನೆರೆನಂಬಿರೋ 11
--------------
ಶ್ರೀಪಾದರಾಜರು
ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ಬಿಡು ಬಿಡು ಮನದ ಸಂಶಯವನು ಪ ನಡಿ ನಡಿ ಪಿಡಿಯೊ ಗುರುಪಾದವನು ಅ.ಪ ಎವೆ ಮಾತ್ರ ವ್ಯತ್ಯಾಸವಿಲ್ಲದಿರು 1 ಯೋಗ್ಯತಾನುಸಾರ ಭಾಗ್ಯಬರುವದದು ಶ್ಲಾಘ್ಯವೆನ್ನುತ ದಾಸನಾಗಿರು 2 ಎರಡು ಸುಖಗಳನ್ನು ಗುರುರಾಮವಿಠಲನೇ ಕರುಣಿಸುವನು ಎಂದರಿತು ನಂಬು 3
--------------
ಗುರುರಾಮವಿಠಲ
ಬಿಡು ಬಿಡು ಮಾಯವನು ಕೆಡದಿರು ಕಪಟದಲಿ | ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ಪ ನಾನು ನನ್ನದು ಎಂಬೊ ಹೀನ ವಚನ ಸಲ್ಲ ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ 1 ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ | ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ 2 ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ | ಜನ್ಮಾಂತರ ಪಾಪ ಪೋಗುವುದು 3 ಜ್ಞಾನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು4 ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು | ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು5 ಸಂತೋಷಗಳು ಬರಲಿ ಸಂತಾಪಗಳು ಇರಲಿ | ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ 6 ಮಾನಿನಿ ನಂದನರು ಆರು ? | ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ7
--------------
ವಿಜಯದಾಸ
ಬಿದಿಗೆಯ ದಿವಸ (ಹನುಮಂತನನ್ನು ಕುರಿತು) ರಂಭೆ : ಕಮಲದಳಾಕ್ಷಿ ಪೇಳೆಲೆ ಈತನ್ಯಾರೆ ಸಮನಸನಾಗಿ ತೋರುವನಲ್ಲೆ ನೀರೆಪ. ಧನ್ಯನಾಗಿರುವ ದೊರೆಯ ಧರಿಸುತ್ತ ಚೆನ್ನಿಗನಾಗಿ ತೋರುವನಲ್ಲೆ ಈತ1 ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವ ಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2 ಸೋಮಾರ್ಕಶಿಖಿಯಂತಿರುವುದು ತ್ರಿನಾಮ ರಾಮಣೀಯಕ ಮನೋಹರ ಪೂರ್ಣಕಾಮ3 ವೀರವೈಷ್ಣವ ಮುದ್ದು ಮೋಹನಕಾಯ ಭೂರಿಭೂಷಣಭುಜಬಲ ಹರಿಪ್ರಿಯ4 ರೂಪ ನೋಡಲು ಕಾಮರೂಪನಂತಿರುವ ಚಾಪಲ ಪ್ರೌಢ ಚಿದ್ರೂಪನಂತಿರುವ 5 ಬಾಲವ ನೆಗಹಿ ಕಾಲೂರಿ ಶೋಭಿಸುವ ನೀಲದುಂಗುರದ ಹಸ್ತವ ನೀಡಿ ಮೆರೆವ 6 ಗೆಜ್ಜೆ ಕಾಲುಂಗರ ಪದಕ ಕಟ್ಟಾಣಿ ಸಜ್ಜನನಾಗಿ ತೋರುವನು ನಿಧಾನಿ 7 ಊರ್ವಶಿ : ತರುಣಿ ಕೇಳೀತನೆ ದೊರೆ ಮುಖ್ಯಪ್ರಾಣ ವರ ನಿಗಮಾಗಮ ಶಾಸ್ತ್ರಪ್ರವೀಣ 1 ಮಾಯವಾದಿಗಳ ಮಾರ್ಗವ ಖಂಡಿಸಿದ ರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆ ಚಟುಳ ಹನುಮನ ಉತ್ಕಟರೂಪ ಕಾಣೆ 1 ವಾಮನನಾದ ಕಾರಣವೇನೆ ಪೇಳೆ ನಾ ಮನಸೋತೆ ಎಂತುಂಟೊ ಹರಿಲೀಲೆ 2 ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳು ಸಾಗಿತು ಸೇವೆಯೆಂಬುದು ಮನಸಿನೊಳು1 ವಾದವ ಮಾಡಿ ವಿನೋದದಿ ಹರಿಯ ಪಾದಸೇವೆಗೆ ಮನನಾದ ಕೇಳಿದೆಯೊ2 ವೀರ ವೇಷವನಿದ ಕಂಡು ಶ್ರೀಹರಿಯ ದೂರವಾದನೋ ಎಂದು ಮನದೊಳು ನಿಜವು3 ಭೂರಿಭೂಷಣ ಸುಂದರ ರೂಪವಾಂತ4 ಇಂದಿನ ಸೇವೆಯೆನ್ನಿಂದತಿ ದಯದಿ ಮಂದರಧರಿಸಿಕೊಳ್ವುದು ಎಂದು ಭರದಿ5 ಒಯ್ಯನೆ ಪೇಳುತ್ತ ವಯ್ಯಾರದಿಂದ ಕೈಯನು ನೀಡಿ ಸಾನಂದದಿ ಬಂದ6 ಕಂತುಪಿತನು ಹನುಮಂತ ಮಾನಸಕೆ ಸಂತಸ ತಾಳಿ ಆನಂತನು ದಿಟಕೆ7 ಭೂರಿ ವೈಭವದಿ ಸ್ವಾರಿಯು ಪೊರಟ ಸಾಕಾರವ ಮುದದಿ8 ತೋರಿಸಿ ಭಕ್ತರ ಘೋರ ದುರಿತವ ಸೂರೆಗೊಳ್ಳುವನು ವಿಚಾರಿಸಿ ನಿಜವ9 ಹದನವಿದೀಗೆಲೆ ಬಿದಿಗೆಯ ದಿನದಿ ಮದನಜನಕನು ಮೈದೋರುವ ಮುದದಿ10 ಪ್ರತಿದಿನದಂತೆ ಶ್ರೀಪತಿ ದಯದಿಂದ ಅತಿಶಯ ಮಂಟಪದೊಳು ನಲವಿಂದ11 ಎಂತು ನಾ ವರ್ಣಿಪೆ ಕಂತುಜನಕನ ಅಂತ್ಯರಹಿತ ಗುಣಾನಂಮಹಿಮನ12 ಏಕಾಂತದಿ ಲೋಕೈಕನಾಯಕನು ಶ್ರೀಕರವಾಗಿ ನಿಂದನು ನಿತ್ಯಸುಖನು13 * * * ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾಪ. ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆ ತವಕದಿ ಬರುವತ್ತಿತ್ತವರನ್ನು ನೋಡದೆ 1 ಅಂದಣವೇರಿ ಮತ್ತೊಂದ ತಾ ನೋಡದೆ ಒಂದೇ ಮನದಿ ಬೇಗ ಮುಂದೆ ಬರುವನಮ್ಮಾ2 ಬಾಲಬ್ರಹ್ಮಚಾರಿ ಶಿಲೆಯಂತಿರುವನು ಅಲೋಚಿಸಲಿವ ಮೂಲಪುರುಷನಮ್ಮಾ3 ಪುಟ್ಟನಾದರು ಜಗಜಟ್ಟಿಯಂತಿರುವನು ದಿಟ್ಟನಿವನವನ ಮುಟ್ಟಿ ನೋಡಮ್ಮ 4 ಊರ್ವಶಿ : ನಾರೀ ಇವನೀಗ ಹೊಂತಕಾರಿ ಲೋಕಕ್ಕಾಧಾರಿ ಪ. ಕೊಬ್ಬಿದ ದೈತ್ಯರಿಗೀತನೆ ಕಾಲ ಹಬ್ಬುವದಾತ್ಮಕ್ಕೀತನೆ ಮೂಲ ಉಬ್ಬುವ ಹರಿಯೆಂದರೆ ಮೈಯೆಲ್ಲ ಒಬ್ಬನಿಗಾದರೂ ಬಗ್ಗುವನಲ್ಲ1 ಎಲ್ಲಿರುವನು ಹರಿ ಅಲ್ಲಿಹನೀತ ಬಲ್ಲಿದ ನಾರಾಯಣಗಿವ ದೂತ ಖುಲ್ಲರ ಮನಕತಿ ಝಲ್ಲೆನುವಾತ ಸುಲ್ಲಭನೆಯಿವ ಮುಂದಿನ ಧಾತ2 ಭೇದವಿಲ್ಲೆಂಬುದವರಿಗೆಯಿವ ತುಂಟ ಮೇದಿನಿ ಬಾಧಕರಿಗೆ ಯಿವ ಕಂಟ ಆದಿ ಮೂರುತಿ ಕೇಶವನಿಗೆ ಬಂಟ ಮಾಧವಭಕ್ತರಿಗೀತನೆ ನೆಂಟ 3 ದುರಿತಾರಣ್ಯದಹನ ನಿರ್ಲೇಪ ವರ ವೆಂಕಟಪತಿಯಿದಿರೊಳಗಿಪ್ಪ ಪರಮಾತ್ಮನ ಪರತತ್ತ್ವ ಸ್ವರೂಪ ಮರೆಮಾತೇನಿವ ದೊರೆ ಹನುಮಪ್ಪ4
--------------
ತುಪಾಕಿ ವೆಂಕಟರಮಣಾಚಾರ್ಯ
ಬಿನ್ನಪವ ಕೇಳು ಬಿನ್ನಪವ ಕೇಳೈಪ್ರಸನ್ನ ವೆಂಕಟರಮಣ ಪತೊಳಲಿದರು ಬಹುಭವದಿ ತೊಡರಿ ಬಂದಿಹ ಕರ್ಮತೊಲಗದೆ ಬಳಲಿಸುತಲಿಹುದು ಜಗದೀಶಸುಲಭ ಮಾರ್ಗವ ಕಾಣದಳಲುತಿರೆ ನೀನೆ ಕೃಪೆದಳೆದು ಗುರುರೂಪದಿಂ ಬಂದೆ ನನ್ನೆಡೆಗೆ 1ಗೆದ್ದೆನೆ ಭವವ ಗುರು ಒದ್ದು ನೂಕಿದ ದುರಿತವಿದ್ದರೂ ನನಗೆ ಭಯವಿಲ್ಲೆನ್ನುತಿಹೆನುಬದ್ಧತೆಯು ಬಿಡಲಿಲ್ಲ ಮೋಹ ಸಡಿಲುವುದಿಲ್ಲನಿರ್ಧರದಿ ನಿಜವು ತಾ ನಿಲುಕದಿಹುದೀಶ 2ಕಂಡ ಭಯ ಕಾಡುವುದು ಷಂಡತನವೋ ನನ್ನಪಂಡಿತತ್ವಾಭಿಮಾನದ ಬಲವೊ ತಿಳಿಯೆಪುಂಡರೀಕಾಕ್ಷ ನನ್ನೊಲವಿಗಿದಿರೆನಿಸದಿದುದಿಂಡುಗೆಡೆದಿಹೆನೀಗ ದಯಮಾಡು ಸ್ವಾಮೀ 3ನೀನೊಲಿದು ನಿರ್ಣಯವು ನಿಲುಕದಿಹುದೇಕೆ ಬಲುಮಾನಾವಮಾನಗಳು ತೊಲಗದಿಹವೇಕೆಹೀನಕರ್ಮಂಗಳಲಿ ರುಚಿಗೆಡದೆುಹುದೇಕೆದೀನವತ್ಸಲನೆ ದಮೈಯ ನಂಬಿದೆನು 4ನಿನ್ನವನು ನಾನಾಗಿ ನಿನ್ನಿದಿರೆ ರಿಪುಗಳಿಂಬನ್ನಬಡಲೊದಗದಪವಾದವೆನಗೀಗನನ್ನ ಕರ್ಮವದೆಂಬೆನೇ ಸ್ವತಂತ್ರತೆಯುಂಟೆರನ್ನ ತಿರುಪತಿಯ ವೆಂಕಟ ನೀನೆ ಬಲ್ಲೆ 5ಓಂ ಸತ್ಯವಾಚೇ ನಮಃ
--------------
ತಿಮ್ಮಪ್ಪದಾಸರು
ಬಿನ್ನವೆನ್ನೆಣೆಸದಿರು ಎಲೆ ಮಾನವಾ ಚನ್ನಕೇಶವ ಸ್ವಾಮಿ ಒಲಿದು ಪಾಲಿಸುವಾ ಪ ವಸುಧೆಯಲಿ ಚಲಿಸುತಿಂತ ಸಕಲ ಜಂತುಗಳೆಲ್ಲ ಹಸನಾಗಿ ತಿಳಿಯದೆ ನಿನ್ನಾತ್ಮವೆಂದು ತೃಷೆ ಕ್ಲೇಶಗಳು ಮುರಿದೊಗೆವ ಜೀವವನು ಕಸಕಸರಿ ಮಾಡದಿರು ಪರರಾತ್ಮವೆಂದು 1 ಅವರಿವರು ಬಂಧುಗಳು ಅಪ್ತೇಷ್ಟ ಸಹೃದರು ಇವರವರು ದೂಷಕರು ಪರಜಾತಿಯೆಂದು ಸವಿಸುತಲಿ ಮನಸನ್ನು ಪರಪಂಚವೆನಿಸುತ್ತ ಭವವನ್ನೆ ಸೆಲೆ ನಂಬಿ ಪರರಾತ್ಮವೆಂದು 2 ದಾಸದಾಸರಿಗೆಲ್ಲ ವಂದನೆಯ ಮಾಡುತ್ತ ದಾಸರೆಲ್ಲರು ಜಗದಿ ಏಕಾತ್ಮರೆಂಬ ವಾತನೆಯ ನಂಬದಲೆ ಬಿನ್ನಾತ್ಮರೆಂದೆಣಿಸಿ ವಾಸುಕೀಶಯನನೂ ಭಿನ್ನಾತ್ಮನೆಂದು 3
--------------
ಕರ್ಕಿ ಕೇಶವದಾಸ
ಬಿನ್ನಹ ಮಾಡುವೆನು ಅತ್ತಿಗೆಯರ ಚನ್ನಾಗಿ ಗೆಲಿಸೆಂದುಚದುರ ಮುದ್ಗಲವಾಸನೆದುರಿಗೆಮಧುರ ವಾಕ್ಯಗಳ ನುಡಿಸೆಂದು ಪ. ಗೋಕರ್ಣ ಹಿಮವಂತ ಕೇದಾರಿ ದೇಶಗೋಕುಲ ವೃಂದಾವನ ಮಥುರೆಯಗೋಕುಲ ವೃಂದಾವನ ಮಥುರೆಯ ಒಡೆಯನಸಾಕಲ್ಯದಿಂದ ಬಲಗೊಂಬೆ 1 ಕರವೀರ ಪುರವಾಸ ದೊರೆಯುಪಂಢರಿನಾಥವರವಡ್ಡಿಒಡೆಯ ಬದರಿಯವರವಡ್ಡಿಒಡೆಯ ಬದರಿ ನಾರಾಯಣಗೆಕರವ ಜೋಡಿಸುವೆ ಕರುಣಿಸು2 ಅಯೋಧ್ಯ ಪುರವಾಸ ಗಯಾ ಗದಾಧರಕೈವಲ್ಯ ನೀವ ಜಗದೊಡೆಯಕೈವಲ್ಯ ನೀವ ಜಗದೊಡೆಯನ ಪಾದಕೈಮುಗಿದು ಮೊದಲೆ ಬಲಗೊಂಬೆ3 ದೇಶ ದೇಶದ ಜನಕೆ ಲೇಸಾಗಿ ಸಲಹುವೆಶ್ರೀ ಸತಿದೇವಿ ಅರಸನೆಶ್ರೀ ಸತಿದೇವಿ ಅರಸನೆ ಕಾಶಿವಿಶ್ವೇಶ್ವರನ ಮೊದಲೆ ಬಲಗೊಂಬೆ4 ಹರಿಹರವಾಸಗೆ ಕರಗಳ ಜೋಡಿಸಿಸರ್ವರಿಗೆ ವರವ ಸುಲಭದಿಸರ್ವರಿಗೆ ವರವ ಸುಲಭದಿ ಕೊಡುವಹರದೆಯರ ಪಂಥವ ಗೆಲಿಸೆಂದು5 ಲಕ್ಷ್ಮಿರಮಣನೆ ಪಕ್ಷಿವಾಹನ ಸ್ವಾಮಿಕುಕ್ಷಿಲೆ ಜಗವ ಸಲಹುವೆಕುಕ್ಷಿಲೆ ಜಗವ ಸಲಹುವೆ ಶೂರ್ಪಾಲಿವೃಕ್ಷರಾಜನ ಬಲಗೊಂಬೆ6 ಗಲಗಲಿ ನರಸಿಂಹ ಬಲು ದಯವಂತಸುಲಭದಿ ವರವ ಕೊಡುವವನುಸುಲಭದಿ ವರವ ಕೊಡುವ ರಾಮೇಶನ ಚಲ್ವ ಮೂರ್ತಿಯ ಬಲಗೊಂಬೆ 7
--------------
ಗಲಗಲಿಅವ್ವನವರು
ಬೀಗಮುದ್ರೆಗಳಹವು ಬಹು ಬಾಗಿಲುಗಳಾಗಿಸಾಗರಾತ್ಮಜೆಯರಸ ಸುಖದಿ ಪವಡಿಸಲು ಪಪುರದ ಮುಂಭಾಗದಲಿ ಹೊಳೆವ ದ್ವಾರಗಳೈದುಹೊರಗುಭಯಪಾಶ್ರ್ವದಲಿ ಹೊಂದಿರುವವೆರಡುತೆರೆದು ಮುಚ್ಚುತಲಿರುವ ತತ್ಪಶ್ಚಿಮದಲೆರಡುಗುರಿಕಾರರೊಳಸರಿದು ಗೋಪ್ಯರಾಗುವರಿಂತು 1ಮೊದಲ ಜಾವದಲಿವನು ಮುಚ್ಚಿ ಮುದ್ರಿಸುತಿಹರುಹುದುಗಿದೊಳ ದ್ವಾರಗಳ ಹಾಗೆ ತೆರೆದಿಹರುಅದರೊಳರಸೆಡೆಯಾಡಿಯಾ ಭೋಗವನುಭವಿಸಿಕದಲಂತಃಪುರಕೆ ಕಡು ಮುದ್ರಿಸುವರು 2ಅಂತರದೊಳಿಹ ದ್ವಾರವವು ನಾಲ್ಕು ಬಳಿಕಲ್ಲಿಅಂತರಿಸದಧಿಪತಿಗಳವರು ನಾಲುವರುಸಂತತವು ಕಾದಿರುತ ಸರಿವರೊಳಮುಖವಾಗಿನಿಂತು ದೊರೆಯೊಡನಿವರ್ಗೆ ನಿದ್ರೆಯಾಗುವದಿಂತು 3ದ್ವಾರ ನಾಲ್ಕರೊಳೊಂದೆ ದೊಡ್ಡದದರಲಿ ದೊರೆಯುಸೇರಿ ನಿರತವು ತಾನು ಸಂಚರಿಪನಾಗಿಮೂರುಳಿದ ದ್ವಾರಗಳು ಮುಖ್ಯವಹುದಾದಡೆಯುತೋರುವೊಂದು ದ್ವಾರದಲಿ ತಾವೇಕವಾಗಿಹವು 4ಸಣ್ಣ ದ್ವಾರಗಳಿನ್ನು ಸಾವಿರಗಳುಂಟೊಳಗೆಕಣ್ಣಿ ಯೊಂದಿವಕೆಲ್ಲ ಕಟ್ಟಿರುವದದನುಪಿಣ್ಣವಾಗಿಯೆ ದೊರೆಯು ಪಿಡಿದೆಚ್ಚರದೊಳಿದ್ದುಕಣ್ಣಾಗಿ ತಾ ಕಾಯ್ವ ಕೋಟೆುದನೊಳಗಿದ್ದು 5ಯೋಗನಿದ್ರೆಯದೆಂದಡಿದು ಪರಮ ಪುರುಷನಿಗೆರಾಗವಿಲ್ಲದೆ ದೇವರಾಜಿಯಲಿ ನಿಂದುಭೋಗವನ್ನಿವರ್ಗೆಲ್ಲ ಬಹಿರಂಗದೊಳಗಿತ್ತುಭೋಗಾವಸಾನದಲಿ ಬಳಿಕೊಟ್ಟುಗೂಡಿಸಲು 6ಏಕನದ್ವಯನಮಲನೀಶ್ವರನು ಪರದಲ್ಲಿಪ್ರಾಕೃತದ ಪದ್ಧತಿಯ ಪರಿಪಾಲಿಸುತಲುಲೋಕೇಶ ತಿರುಪತಿಯ ಲೋಲ ವೆಂಕಟರಮಣನೀ ಕಳೇಬರದಲಿರಲಿಂದಿರೆಯನೊಳಕೊಂಡು 7ಓಂ ಸರ್ವಗ್ರಹರೂಪಿಣೇ ನಮಃ
--------------
ತಿಮ್ಮಪ್ಪದಾಸರು
ಬುದ್ಧಿಯ ನಾನೇ ಹೇಳುವೆ ಎಲೆ ಎಂಗರವಟ್ಟೆಬುದ್ಧಿಯ ನಾನು ಹೇಳುವೆಬುದ್ಧಿಯ ನಾನು ಹೇಳುವೆ ಶುದ್ಧ ಬ್ರಹ್ಮನು ನೀನು ಎಲೆ ಎಂಗರವಟ್ಟೆ ಪ ಸತಿ ಎಲ್ಲಿ ಹಿಂದಣ ಸುತರೆಲ್ಲಿಹಿಂದಾದುದನು ಬಿಟ್ಟು ಇಂದಿದು ನನ್ನದೆಂಬೆ ಎಲೆ ಎಂಗರವಟ್ಟಿ 1 ಮುಂದಾವ ಜನ್ಮ ಭೋಗಿಪೆಯೋ ಎಲೆ ಎಂಗರವಟ್ಟೆಮುಂದಾರ ಮದುವೆಯಹೆ ಎಲೆ ಎಂಗರವಟ್ಟೆಮುಂದಣ ತಾಯಿ ಯಾರು ಮುಂದಣ ತಂದೆ ಯಾರುಮುಂದಣ ಹಿಂದಣದರಿಯೆ ಇಂದಿನದು ಎನ್ನದೆಂಬೆ ಎಲೆ ಎಂಗರವಟ್ಟಿ2 ಭಿಕ್ಷವ ಹಾಕಲಾರಿ ಎಲೆ ಎಂಗರವಟ್ಟೆ ಕುಕ್ಷಿಗೆ ತಿನ್ನಲಾರಿಲಕ್ಷ ಹೊನ್ನುಗಳನ್ನು ನೆತ್ತಿಗೆ ಇಟ್ಟುಕೊಂಬೆಯಾ ಎಲೆ ಎಂಗರವಟ್ಟೆ 3 ತನುವಿದು ತನ್ನದೆಂಬೆ ಎಲೆ ಎಂಗರವಟ್ಟೆ ತನುವನು ನೋಡಿಕೊಂಬೆನಿನ್ನ ಮುಂದೆಯೇ ತನು ತಾನು ಹೋಗುವುದುತನುವದು ನಿನಗಿಲ್ಲ ತನು ಸಂಬಂಧವೆಂತೋ ಎಲೆ ಎಂಗರವಟ್ಟೆ4 ಹಿಡಿಯೋ ಗುರುಪಾದವನು ಎಲೆ ಎಂಗರವಟ್ಟೆ ಪಡೆಯೋ ಕಟಾಕ್ಷವನುಸಡಿಲದೇ ದೃಷ್ಟಿಯನು ತಿರುಹಿ ನಿನ್ನೊಳಗಿಟ್ಟುಒಡೆಯ ಚಿದಾನಂದನು ನೀನಾಗಿ ನೀನಿರು 5
--------------
ಚಿದಾನಂದ ಅವಧೂತರು
ಬೂದಿ ಮುಚ್ಚಿದ ಕೆಂಡದಂತಿಪ್ಪರು ಪ ಈ ಧರೆಯ ಮೇಲೆ ಶ್ರೀ ಹರಿಭಕ್ತ ಜನರು ಅ.ಪ ಅಂಗ ನೋಡಲು ಅಷ್ಟಾವಕ್ರವಾಗಿಪ್ಪರು ಕಂಗಳಿಂದಲಿ ನೋಡೆ ಘೋರತರರು ಮಂಗಳಾಂಗನ ಅಂತರಂಗದಲಿ ಭಜಿಸುತ್ತ ಹಿಂಗದೆ ಸಂತಜನ ಸಂಗದೊಳಗಿಹರು 1 ನಾಡ ಜನರುಗಳಂತೆ ನಡೆಯರು ನುಡಿಯರು ಕೂಡರು ಕುಟಿಲಜನ ಸಂಘದಲ್ಲಿ ಒಡಲು ತುಂಬಿಸಿಕೊಳರು ರೂಢಿಯೊಳಗೆಂದೆಂದು ಗೂಢವಾಗಿಹರು2 ಡಂಭಕತನದಿಂದ ಗೊಂಬೆನೆರಹಿಕೊಂಡು ಡೊಂಬ ಕುಣಿದಂತೆ ಕುಣಿದಾಡರು ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ ಬಿಂಬ ಮೂರುತಿಯನ್ನು ಕೊಂಡಾಡುತಿಹರು 3 ಶತ್ರು ಮಿತ್ರರುಗಳ ಸಮನಾಗಿ ಎಣಿಸುವರು ಪುತ್ರ ಮಿತ್ರ ಭ್ರಾತೃಗಳ ನೆಚ್ಚರು ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬುವರು 4 ಕಷ್ಟ ಸೌಖ್ಯಂಗಳನು ಕಲಿವರದಗರ್ಪಿಪರು ಇಟ್ಟುಕೊಟ್ಟಿದ್ದನ್ನ ಹರಿಕೊಟ್ಟನೆಂಬುವರು ಸಿರಿ ವಿಜಯವಿಠ್ಠಲನ ಪದಪದ್ಮಾ ಮುಟ್ಟಿ ಭಜಿಸಿ ಮುಕ್ತ ಸಾಮಾಜ್ರ್ಯ ಪಡೆಯುವರು5
--------------
ವಿಜಯದಾಸ
ಬೆಟ್ಟದ ಶೃಂಗವ ಹತ್ತಿ ಧುಮುಕುವೆ ನಾನು ಕೃಷ್ಣನೇ ಸರ್ವೋತ್ತಮ ಮತ್ತಾರೊಬ್ಬರಿಲ್ಲವೆಂದು ಪ ಪಂಕಜಾಸನಾಹಿಪ ಶಂಕರಾದಿಗಳು ಹರಿಗೆ ಕಿಂಕರರು ಮತ್ತು ಇವಗೆ ಪುತ್ರ ಪೌತ್ರರು `ಏಕೋ ನಾರಾಯಣ ಆಸೀನ್ನಬ್ರಹ್ಮೇ'ತಿ ಶ್ರುತಿಯೊಂದೇ ಸಾಕೊ ಮತ್ತಿನ್ಯಾಕೆ ಸಂಶಯ ಹರಿ ನೀನೆ ಗತಿಯೆಂದು 1 `ಯಂಕಾಮಯೇ' ಎಂಬ ಶ್ರುತಿ ಪಂಕಜಾಸನಾನಿಲ ಶಂಕರರೆಲ್ಲರೂ ಹರಿಕಿಂಕರರು ಸಿರಿಗೆ ಕಿಂಕರರೆಂಬುದ ನಿಶ್ಶಂಕವಾಗಿ ಪೇಳಲು ಶಂಕೆ ಯಾಕೊ ಸಲಹೊ ಶ್ರೀ ಪಂಕಜಲೋಚನನೆಂದು 2 ಜಾನಕಿ ವಿಯುಕ್ತನಾಗಿ ಕ್ಲೇಶಗಳಪಟ್ಟಿರುವ ಮತ್ತು ಜರಾಸಂಧಗಂಜಿ ಬೆಟ್ಟವೇರಿದನು ನಿರವದ್ಯ ನಿರನಿಷ್ಟ ಎಂಬೊ ಶ್ರುತಿಯನ್ನೆ ನೋಡಿ ನಿರ್ದೋಷನಿದನೆಂದು 3 ದೇವದತ್ತ ಯಜ್ಞದತ್ತ ಮೊದಲಾದ ಜನರಂತೆ ಪುರುಷನಾದ ಮೇಲೆ ಇವನಲ್ಪಗುಣನು ಎಂಬ ದುರ್ಮತಿಯ ಬಿಟ್ಟು ಗುಣಶ್ರುತ ಸವಿರುದ್ಧ ಎಂಬೋ ಶ್ರುತ್ಯರ್ಥವ ತಿಳಿದು ಹರಿಗುಣಪೂರ್ಣನೆಂದು 4 ಸೋಮಕುಲಶೇಖರನೆ ಭಾಮಾವಲ್ಲಭ ಬಲ ರಾಮನಿಗೆ ಸಹೋದರ ಸಾಮಗಪ್ರಿಯ ಶ್ರೀಮನ್ನಾಮಗಿರಿ ಶ್ರೀ ಸ್ವಾಮಿ ನೃಹರಿಯೆ ವಿದ್ಯಾ ರತ್ನಾಕರ ಯೋಗಿಯನ್ನು ಹರಿ ನೀನೆ ರಕ್ಷಿಸೆಂದು 5
--------------
ವಿದ್ಯಾರತ್ನಾಕರತೀರ್ಥರು
ಬೆಳಕಾ ತೋರಿಸೊ ಯೋಗಿಂದ್ರರ ಜನಕಾ |ಮಂತ್ರಾಲಯ ಪುರ ಪಾಲಕ ಪ ಫಾಲನಯನ ಪ್ರಿಯ | ಪಾಲಾಬ್ಭಿ ಶಾಯಿಯಶೀಲ ಮೂರುತಿ ತೋರೊ | ಮೇಲು ಕರುಣದಿ ಅ.ಪ. ಪತಿ ಭ್ರಾತೃ | ಪೇರ್ಮೆಯಿಂದಲಿ ನಿನ್ನನಿರ್ಮಮತಗೆ ಮೆಚ್ಚಿ | ಪರ್ಮನ ಮಾಡಿದ 1 ಕ್ಷಿತಿ ದೇಶವು 2 ಸಿರಿಗುರು ಗೋವಿಂದ ವಿಠ್ಠಲನಾ | ಭವ್ಯ ಸುಚರಣಾಸರಸಿಜ ಹೃದ್ವಾರಿಜದಲಿ ಪವನಾ | ನಲಿ ಸ್ಥಿತನಾಗಿಹನಾ |ತೋರಿ ಪೊರೆಯೊ | ಕರುಣಾಕರ ಗುರು ಸಾರಿ ಭಜಿಪೆ ತವ | ಚರಣಾಂಬುರುಹವ 3
--------------
ಗುರುಗೋವಿಂದವಿಠಲರು