ಒಟ್ಟು 1559 ಕಡೆಗಳಲ್ಲಿ , 113 ದಾಸರು , 1275 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಲಂ ಮಹಾಲಿಂಗ ದೇವನಿಗೆ ಗಂಗೋತ್ತಮಾಂಗಗೆ ಪ.ತುಂಗಬಲ ಭದ್ರಾಂಗ ಸದಯಾ-ಪಾಂಗ ಭಕ್ತಜನಾಂಗರಕ್ಷಗೆಅಂಗಜಾರಿ ಕುರಂಗಹಸ್ತಗೆಸಂಗೀತ ಪ್ರೇಮಾಂತರಂಗ ನಿಸ್ಸಂಗಗೆ 1ವಾಮದೇವಗೆ ವಾಸವಾದಿ ಸು-ಧಾಮವಿಬುಧಸ್ತೋಮ ವಿನುತಗೆವ್ಯೋಮಕೇಶಗೆ ಸೋಮಚೂಡಗೆಭೀಮವಿಕ್ರಮಗೆ ಹೈಮವತಿಪತಿಗೆ 2ಪ್ರಾಣಪತಿ ಲಕ್ಷ್ಮೀನಾರಾಯಣ-ಧ್ಯಾನಪರಗೆ ಪಾವಂಜೆಗ್ರಾಮ ಪ್ರ-ಧಾನಪುರುಷಗೆ ದೀನಜನಸಂ-ತಾನಗೀಶಾನಗೆಜ್ಞಾನಿಜಗದ್ಗುರುವಿಗೆ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ |ಮಡಿ ಮಾಡುವ ಬಗೆ ಬೇರುಂಟು ಪ.ಪೊಡವಿ ಪಾಲಕನ ಧ್ಯಾನ ಮಾಡುವುದು |ಬಿಡದೆ ಭಜಿಸುಮದು ಅದು ಮಡಿಯಾ ಅಪಬಟ್ಟೆಯ ನೀರೊಳಗಿಟ್ಟು ಒಣಗಿಸಿ |ಉಟ್ಟರೆ ಅದು ತಾ ಮಡಿಯಲ್ಲ ||ಹೊಟ್ಟೆಯೊಳಗಿನ ಕಾಮ - ಕ್ರೋಧಗಳ |ಬಿಟ್ಟರೆ ಅದು ತಾ ಮಡಿಯೊ 1ಪರಧನ ಪರಸತಿ ಪರನಿಂದೆಗಳನು |ಜರೆದಹಂಕಾರಗಳನೆ ತೊರೆದು ||ಹರಿಹರಿಯೆಂದು ದೃಢದಿ ಮನದಲಿಇರುಳು ಹಗಲು ಸ್ಮರಿಸಲು ಮಡಿಯೋ 2ಎಚ್ಚರವಿಲ್ಲದೆ ಮಲ ಮೂತ್ರ ದೇಹವ |ನೆಚ್ಚಿ ಕೆಡಲು ಬೇಡಲೊ ಮನವೆ ||ಅಚ್ಚುತಾನಂತನ ನಾಮವ ಮನಗೊಂಡು |ಸಚ್ಚಿಂತೆಯಲಿರುವುದೆ ಮಡಿಯೊ 3ಭೂಸುರರು ಮಧ್ಯಾಹ್ನಕಾಲದಲಿ |ಹಸಿದು ಬಳಲಿ ಬಂದರೆ ಮನೆಗೆ ||ಬೇಸತ್ತು ನಮಗೆ ಗತಿಯಿಲ್ಲ ಹೋಗೆಂದು |ಹಸನಾಗಿ ಉಂಬುವುದು ಅದು ಮಡಿಯೊ ? 4ದಶಮಿ - ದ್ವಾದಶಿಯ ಪುಣ್ಯಕಾಲದಲಿ |ವಸುದೇವ ಸುತನ ಪೂಜಿಸದೆ ||ದೋಷಕಂಜದೆ ಪರರನ್ನು ಭುಜಿಸಿ ಯಮ - |ಪಾಶಕೆ ಬೀಳ್ವುದು ಹುಸಿಮಡಿಯೊ ? 5ಸ್ನಾನ -ಸಂಧ್ಯಾನ ಮೊದಲಾದ ಕರ್ಮಗಳೆಲ್ಲ |ಜಾÕನ -ಮಾನ - ಸುಮ್ಮಾನದಿಂದ ||ದೀನವಂದ್ಯನಸುಜನ ಸಂತರ್ಪಣ |ಅನುದಿನಮಾಡುವುದು ಘನಮಡಿಯೊ6ಗುರು ಹಿರಿಯರ ಹರಿದಾಸರ ನೆನೆದು |ಚರಣಕೆರಗಿ ಭಯ ಭಕ್ತಿಯಿಂದ ||ಪರಿಪರಿ ವಿಧದಲಿ ಪುರಂದರವಿಠಲನ |ನೆರನೆಂಬುವುದು ಉತ್ತಮ ಮಡಿಯೊ 7
--------------
ಪುರಂದರದಾಸರು
ಮಡಿಯಾಗಿ ತಂಗಿ ಮಹಾಲಿಂಗ ಪೂಜೆ ಮಾಡೆಮುಕ್ತಿ ಸದನಕೇರುವೆ ನೋಡೇಪದೇಹವೆಂಬ ಮನೆಯ ಸಾರಿಸೆಮೋಹವೆಂಬ ತಂಗಳ ಮಡಕೆ ಹೊರಗಿರಿಸೆಸೋಹಂ ಎಂಬ ರಂಗವಲ್ಲಿಯನಿಡೆಜ್ಯೋತಿಯನು ಬೆಳಗಿಸೆ ನೀನು1ನಾನಾವಾಸನೆಯ ಮೈಲಿಗೆಯನು ಬಿಡೆಮನಮೈಲಿಗೆಯನು ತೊಳೆಸ್ವಾನುಭವದ ಪೀತಾಂಬರವನುಡೆನಾನು ಎಂಬ ಕಸವನು ಗುಡಿಸೆನಾದದ ಸುಖವನು ಅನುಭವಿಸೆ ನೀನು2ಧ್ಯಾನ ಮನನೆನಪಿಲ್ಲದಾಗಿಸ್ವಸ್ಥಾನದಲ್ಲಿ ಭಾನುವೀಗ ಬೆಳಗಿದಂತಾಗಿ ನೀನುನಾನು ಎಂಬುದು ಅಳಿದು ನೀನೆಚಿದಾನಂದನಾಗಿ ಪೂಜಿಸು3
--------------
ಚಿದಾನಂದ ಅವಧೂತರು
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು
ಮನವು ನಿನ್ನಲಿ ನಿಲ್ಲಲಿಅನುದಿನನಿನ್ನ ನೆನೆದುಮನವು ನಿನ್ನಲಿ ನಿಲ್ಲಲಿ ಪ.ದುಃಖ ಸುಖ ಲೆಕ್ಕಿಸದೆ ಮುಖ್ಯ ಫಲ ಮುಂದರಿಸೆಮಿಕ್ಕುತ್ತ ಸೊಕ್ಕಿ ಮೋಹಕ್ಕೆ ಸಿಕ್ಕದೆ 1ನಿನ್ನಗುಣವರ್ಣಿಸುತ ನಿನ್ನವರ ಮನ್ನಿಸುತನಿನ್ನಪಾವನ್ನಲಾವಣ್ಯ ಧ್ಯಾನಿಸೆ2ಸಂತೋಷ ನಿರಂತರವು ಸಂತ ಜನ ಸಹವಾಸವುಶಾಂತತ್ವವಾಂತು ಮಹಾಂತಧೈರ್ಯದಿ 3ಭಕ್ತಿ ಸುವಿರಕ್ತಿ ಜ್ಞಾನ ಮುಕ್ತಿಗೆ ಮುಖ್ಯ ಕಾರಣಚಿತ್ತದೊಳಿತ್ತೆಲ್ಲ ಹೊತ್ತುಹೊತ್ತಿಗೆ4ಪ್ರಿಯ ಶ್ರೀಲಕ್ಷುಮಿನಾರಾಯಣ ಪರಾಯಣನಧೈರ್ಯದಂತರ್ಯ ಗಾಂಭೀರ್ಯ ಭಾವದಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಮನುಜ ತಪ್ಪೆ ಮಂಡೆಯ ಬೋಳುಶುನಕತಪ್ಪೆ ಕುಂಡೆಯ ಬೋಳುತೃಣದಾಸೆಗೆ ಕುರಿಯ ಸರ್ವಾಂಗ ಬೋಳ ಕಂಡೆನಯ್ಯ 1ತನುಬೋಳಾದ ಬೋಳೆಲ್ಲ ತಮ್ಮ ಗೋಳು ಕಾಣಿರೊಮನದೊಳು ದುರಾಶೆಂಬ ಹೀನಕ್ಲೇಶಗಳ್ಹೆಚ್ಚುತಿರಲು 2ಅನಾಥಬಂಧು ಹಯವದನ ನಿನ್ನಧ್ಯಾನ ಚಿಮ್ಮಟದೊ [ಳೆನ್ನ] ಕೂದಲಕಿತ್ತುಮುಕ್ತಿಬೋಳನ ಮಾಡೊ 3
--------------
ವಾದಿರಾಜ
ಮನುಷ್ಯನಾದ ಫಲವೇನುಶ್ರೀನಿವಾಸನ ಕಂಡು ಸುಖಿಯಾಗದನಕ ಪ.ಭಾನುಉದಿಸದ ಮುನ್ನ ಸ್ವಾಮಿ ಪುಷ್ಕರಿಣಿಯಲಿಸ್ನಾನಸಂಧ್ಯಾನಜಪಗಳನೆ ಮಾಡಿಸಾನುರಾಗದಿ ಶ್ರೀವರಹಗೆ ನಮಿಸಿತಾನಖಿಳ ಪುಣ್ಯವನು ಸೂರೆಗೊಳದನಕ 1ಹಸ್ತದಲಿ ವೈಕುಂಠವೆಂದು ತೋರುವ ವಿಮಾನಸ್ಥಾಚ್ಯುತನ ಕರ್ಮಗುಣನಾಮವಸ್ವಸ್ಥಮತಿಯಾಗಿ ಕೊಂಡಾಡಿ ಕುಣಿದಾಡಿ ತಾವಿಸ್ತರದಕೈವಲ್ಯಪಡೆಯದನಕ2ತುಲಸಿ ಬರ್ಹಕೆ ಪೋಲ್ವ ಆ ಮಹಾಪ್ರಸಾದವನುಅಲಸದೆ ಸೇವಿಸಿ ಕೃತಾರ್ಥನಾಗಿಹಲವು ದುರಿತಾರಿ ಪ್ರಸನ್ವೆಂಕಟಗಿರಿಯನಿಲಯನೆ ಗತಿಯೆಂದು ಭಜಿಸದನಕ 3
--------------
ಪ್ರಸನ್ನವೆಂಕಟದಾಸರು
ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ ಪಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪಜಾÕನಿಗಳುನಿತ್ಯಅನ್ನ-ಪಾನದಿಗಳನ್ನು ಬಿಟ್ಟು |ನಾನಾವಿಧ ತಪವಿದ್ದರು-ಧ್ಯಾನಕೆ ಸಿಲುಕದವನ 1ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು |ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ 2ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ |ಹಲವು ಆಭರಣಂಗಳು-ಜಲವು ಆಗಿ ಜಾಣತನದಿ 3ರಂಗನು ಭುಲೋಕದಿ-ಭುಜಂಗ ಗಿರಿಯೊಳಾಲ ಮೇಲು |ಮಂಗಪತಿಯಾಗಿ ನಿನ್ನ-ಅಂಗೀಕರಿಸುವಂತೆ 4ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು |ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ 5ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ |ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ 6ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ |ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ 7
--------------
ಪುರಂದರದಾಸರು
ಮಲವು ತೊಳೆಯಬಲ್ಲುದೆಮನವ ತೊಳೆಯದನಕ ಪಹಲುವು ನೀರಿನೊಳಗೆ ಪೊಕ್ಕುಹಲುಬಿದರಿನ್ನೇನು ಫಲ? ಅಪಬೋಗಫಲವನುಂಡು ವಿಷಯ ಭೋಗದಿಂದ ಮತ್ತರಾಗಿಭೋಗಬೇಡಿ ಜನರು ಜೀವಕಾಗಿ ಮುನಿವರುಯೋಗಿಯಂತೆ ಜನರ ಮೆಚ್ಚುಗಾಗಿ ಹೋಗಿ ಉದಯದಲ್ಲಿಕಾಗೆಯಂತೆ ಮುಳುಗಿದರೆ ಅಮೋಘ ಫಲವು ಬಾಹೊದೆ? 1ಪರರ ಕೇಡಬಯಸಿಗುರು - ಹಿರಿಯರನ್ನು ನಿಂದಿಸುತಪರಮ ಸೌಖ್ಯದಿಂದ ಪರಸ್ತ್ರೀಯರನ್ನ ಆಳುತಪರಮಯೋಗನಿಷ್ಟೆಯೆಂದು ಧರೆಯ ಮೇಲೆ ಡಂಭತೋರಿಹರಿವ ನದಿಯ ತೀರದಲ್ಲಿ ಪರಿಯು ಬಕ ಧ್ಯಾನದಂಥ 2ತಂದೆ - ತಾಯಿ ತಿರುತಿನ್ನಲು ಒಂದು ದಿವಸ ಕೇಳಲಿಲ್ಲಮಂದಗಮನೆಯರೊಡನೆ ಆನಂದದಿಂದ ನಲಿಯುತತಂದೆಯ ಹೆಸರಿನಿಂದ ನೂರು ಮಂದಿಗುಣಿಸಿ ಹರುಷದಿಂದತಂದೆ ತೃಪ್ತನಾದನೆಂಬ ಮಂದಮತಿಯ ಜನರುಗಳ 3ಕಾಸವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿದೇಶದಿಂದ ದೇಶಕಿಳಿದು ಕಾಶಿಯಾತ್ರೆ ಮಾಡಲುಆಶಾಪಾಶ ಬಿಡದ ಮನದ ಕೂಸಿನಂತೆ ಕಾಡುತಿಪ್ಪವೇಶಧಾರಿಗಳಿಗೆ ಆ ಕಾಶಿಯ ಫಲ ಬಾಹೊದೆ? 4ಏನು ಮಾಡಲೇನು ಫಲ - ಏನು ನೋಡಲೇನು ಫಲಜ್ಞಾನವಿಲ್ಲದಚ್ಯುತನ ಧ್ಯಾನವಿಲ್ಲದವರಿಗೆಮೌನ ನೇಮ ನಿಷ್ಠೆ ಪರಾಧೀನವೆಂಬುದ ತಿಳಿದುಕೊಂಡುದೀನನಾಥ ಪುರಂದರವಿಠಲನ ನಿಲುಕಲೊಲ್ಲದೆ 5
--------------
ಪುರಂದರದಾಸರು
ಮಹಾಲಕ್ಷ್ಮಿ50ದಯಮಾಡಮ್ಮ ದಯಮಾಡಮ್ಮಹಯವದನನ ಪ್ರಿಯೆ ಪವಿನಯದಿಂದ ಬೇಡುವೆನೆ ಕಮಲನೇತ್ರೆಯೆ ಅ.ಪಶಂಬರಾರಿಪಿತನ ರಾಣಿ ನಂಬಿಸ್ತುತಿಸುವೆಅಂಬುಜನಾಭನ ಧ್ಯಾನಸಂಭ್ರಮಎನಗೀಯೆ1ಗೆಜ್ಜೆಪಾದ ಧ್ವನಿಗಳಿಂದ ಮೂರ್ಜಗ ಮೋಹಿಸುತ್ತಸಜ್ಜನರ ಸೇವೆಗೊಳ್ಳುತ ಜನಾರ್ದನನ ಪ್ರೀತೆ 2ತ್ರಿಗುಣಾಭಿಮಾನಿಯೆ ನಿನ್ನ ಪೊಗಳುವ ಭಕ್ತರಬಗೆ ಬಗೆ ತಾಪತ್ರಯಗಳ ಕಳೆದುಮಿಗೆ ಸೌಖ್ಯವ ನೀಯೆ 3ಪದ್ಮಾಕ್ಷಿಯೆ ಪದ್ಮಸದನೆ ಪದ್ಮಪಾಣಿಯೆಪದ್ಮನಾಭನಗೂಡುತಲಿ ಹೃತ್ಪದ್ಮದಲಿ ಪೊಳೆಯೆ 4ಕನಕಾಭರಣಗಳಿಂದಲಿ ಪೊಳೆಯುವ ಕಮಲನೇತ್ರೆಯೆಕಮಲನಾಭವಿಠ್ಠಲನ ಕೂಡಿಕರುಣದಿ ಬಾರೆತಾಯೆ 5
--------------
ನಿಡಗುರುಕಿ ಜೀವೂಬಾಯಿ
ಮಾಡುವ ಬನ್ನಿ ನಾವು ನೀವು ಎಲ್ಲರು ಏಕಾರತಿಯಗೂಢ ಚಿದಾನಂದನೊಳು ಕೂಡಿಕೊಂಬರ್ಥಿಯಪನೀರು ಲವಣ ಕೂಡಿ ಒಂದೇ ನೀರು ನಿಜವೆ ಆದಂತೆಕಾರಣಾತ್ಮಕನೆಲ್ಲ ಕರಗಿಹೋಗುವ ಏಕಾರತಿ1ಉರಿಯುವ ಕರ್ಪೂರವ ತಗುಲಿ ಉರಿಯು ತಾನಾಗಿ ಬೆಳಗಿದಂತೆನರನು ತಾನೇ ಸಾಕ್ಷಾತ್ ಹರನಾದುದೇ ಏಕಾರತಿ2ಕೀಟಭೃಂಗ ಧ್ಯಾನದಿಂದ ಕೀಟ ಭೃಂಗವಾದ ತೆರದಿಪಾಡಿ ಚಿದಾನಂದ ತಾನೇ ತಾನಾದುದೇ ಏಕಾರತಿ3
--------------
ಚಿದಾನಂದ ಅವಧೂತರು
ಮಾನವಜನ್ಮ ದೊಡ್ಡದು - ಇದ |ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ ಪ.ಕಣ್ಣು ಕೈಕಾಲ್ಕಿವಿ ನಾಲಗೆ ಇರಲಿಕ್ಕೆ |ಮಣ್ಣುಮುಕ್ಕಿ ಮರುಳಾಗುವರೆ ||ಹೊನ್ನು ಹೆಣ್ಣಿಗಾಗಿ ಹರಿನಾಮಾಮೃತವನು |ಉಣ್ಣದೆ ಉಪವಾಸವಿರುವರೇನೋ 1ಕಾಲನವರು ಬಂದು ಕರಪಿಡಿದೆಳೆವಾಗ |ತಾಳು ತಾಳೆಂದರೆ ಕೇಳುವರೆ ? ||ವೇಳೆ ಹೋಗದ ಮುನ್ನ ಧರ್ಮವ ಗಳಿಸಿರೊ |ಸುಳ್ಳಿನ ಸಂಸಾರ ಸುಳಿಗೆ ಸಿಲುಕಬೇಡಿ 2ಏನು ಕಾರಣ ಯದುಪತಿಯನು ಮರೆತಿರಿ |ಧ್ಯಾನ್ಯ - ಧನ -ಸತಿ - ಸುತರಿವು ನಿತ್ಯವೆ? ||ಇನ್ನಾದರು ಶ್ರೀ ಪುರಂದರವಿಠಲನ |ಚೆನ್ನಾಗಿ ಭಜಿಸಿ ನೀವ್ ಸುಖಿಯಾಗಿರಯ್ಯ 3
--------------
ಪುರಂದರದಾಸರು
ಮಾನಾಭಿಮಾನವಿಲ್ಲವೇ | ಮಹಲಕ್ಷ್ಮೀ ನಿನಗೆ ಪಹೀನ ಜನಂಗಳ ಬೇಡುತ ನಿರುತವುಹೀನ ವೃತ್ತಿಯಿಂದೋಡುತ ತಿರುಗುವೆ 1ದೀನಾವನ ಬಿರುದೇನಾಯಿತೋ ಶ್ರೀದಾನಿ ನಿನ ನಂಬಿದ ದಾಸನ ವಿಷಯದಿ 2ಜಾನಕಿ ಶ್ರೀ ರಘುನಾಯಕಿ ತವಪದಧ್ಯಾನವು ನನಗೆ ನಿಧಾನವು ಲಕುಮೀ 3ಹೇಮಕುಧರ ಧಾಮೇಶ್ವರಿ ತುಲಸಿರಾಮದಾಸನ ಸಂರಕ್ಷಣೆ ಮಾಡುವ 4
--------------
ತುಳಸೀರಾಮದಾಸರು
ಮುಕ್ಕ ನಿನ್ನ ನಡತೆ ನೋಡೋಮುಕ್ಕ ನಿನ್ನ ನಡತೆ ನೋಡೋತಕ್ಕ ಯಮನ ಶಿಕ್ಷೆಯಿಹುದುಸೊಕ್ಕ ಬೇಡವೋ ಮುಂದೆ ದುಃಖಗಳಿಸಿಹರೊಕ್ಕ ಕಕ್ಕಸಬಡುವೆಯೋ ಕಾಸದು ಹೋದರೆದಕ್ಕಿಸಿಕೊಂಬೆಯಾ ಎಲೆ ಹುಚ್ಚು ಮೂಳಪಗುರುಹಿರಿಯರ ನಿಂದೆ ಮಾಡಿಅವರಚರಣಸ್ಥಳವ ಜರೆದಾಡಿ ದುಷ್ಟದುರುಳರ ಜೋಡುಗೂಡಿ ನೀನುಬರಿದೆ ಆಯುಷ್ಯ ಕಳೆದೆ ಓಡಾಡಿ ಎಲೆಖೋಡಿಭರಭರದಿಂದಿಳಿವರು ಕಾಲನ ದೂತರುಕೊರಳನೆ ಕಡಿವರು ಎಲೆ ಹುಚ್ಚು ಮೂಳ1ನಿನ್ನನು ನೀನೇ ನೋಡಿಕೊಂಬೆ ನಾನುಚೆನ್ನಾಗಿ ಇಹೆನು ಎಂದೆಂಬೆ ಹುಚ್ಚುಕುನ್ನಿಯಂತೆ ಓಡಾಡಿ ಒದರಿಕೊಂಬೆಜಾರಕನ್ನೆಯರ ಜೋಡುಗೊಂಬೆ ನಾಕಾಣೆನೆಂಬೆಇನ್ನೇನು ಹೇಳಲಿ ಕಾಲನ ದೂತರುಬೆನ್ನಲಿ ಸುಳಿವರು ಎಲೆ ಹುಚ್ಚು ಮೂಳ2ಹೆಂಡತಿ ನೋಡಿ ಹಲ್ಲು ತೆರೆವೆ ಆಕೆಯಗೊಂಡೆ ಚವುರಿ ನೋಡಿ ಬೆರೆವೆಕಂಡ ಕಂಡ ವಿಷಯಕ್ಕೆ ಮನವೊಲಿದೆ ಅಂಟಿಕೊಂಡಿವೆ ಅಜ್ಞಾನ ಮರೆವೆಚಂಡ ಯಮದೂತರುಚಂಡಿಕೆಹಿಡಿದುಮಂಡೆಗೆ ಒದೆವರು ಎಲೆ ಹುಚ್ಚು ಮೂಳ3ಬಾಲೆಯ ಸುತರ ನಂಬುವೆಯೋ ಕೊಪ್ಪವಾಲೆಗಳ ಮಾಡಿಸಿ ಇಡುವ ಯಮನಾಳುಗಳು ಕೈ ಬಿಡುವರೇನೋ ನಿನ್ನಬಾಳು ವ್ಯರ್ಥವಾಯಿತು ಬಿಡಿಪರಿಲ್ಲವೋಸೀಳುವೆನೆನುತಲಿಕಾಲದೂತರುಕಾಲ್ಹಿಡಿದೆಳೆವರೋ ಎಲೆ ಹುಚ್ಚು ಮೂಳ4ಇನ್ನಾದರೂ ಜ್ಞಾನವ ತಿಳಿಯೋಚೆನ್ನಾಗಿ ಧ್ಯಾನದಿ ಬಲಿಯೋ ಕಂಡುನಿನ್ನೊಳು ಥಳಥಳ ಹೊಳೆಯೋನಿನ್ನ ಜನ್ಮ ಜನ್ಮವೆಲ್ಲ ಕಳೆಯೋಬ್ರಹ್ಮನಾಗಿ ಬೆಳೆಯೋರತ್ನದೊಳಗೆ ರತ್ನ ಬೆಳಗಿದಂತೆಚೆನ್ನ ಚಿದಾನಂದ ನೀ ನಿತ್ಯನಾಗೋ5
--------------
ಚಿದಾನಂದ ಅವಧೂತರು
ಮೋಕ್ಷೋಪಾಯಕಾನಂದ ಮುನೀಂದ್ರನಶಿಕ್ಷಾ ಮಾರ್ಗಹುದಯ್ಯಲಕ್ಷ್ಷ್ಯಶ:ಲಕ್ಷಣವಾರ್ಹೇಳೇನುಲಕ್ಷದಿ ಗುಣವಿಲ್ಲಯ್ಯ ಪ.ಸುಕೃತತಾನಾದರೆ ಚಿರಕಾಲಕೆ ಒಮ್ಮೆಧಿಕೃತವಾಹುದು ಭವತುಷ್ಟಿಸುಖವೆಂಬುದು ಸ್ವರೂಪಾನಂದಾನುಭವವಿಕಸವಾಗುವ ಜ್ಞಾನದೃಷ್ಟಿ ಆಸುಖವಾಪೇಕ್ಷಿಸಿ ಪ್ರಕೃತವುದಾಸಿಪದಖಿಳ ಮಹಾತ್ಮರಭೀಷ್ಟಿಸಕಳಾನಿಷ್ಟವ ಸಾಗಿಸುವ ಶ್ರೀಸುಖತೀರ್ಥರ ಶುಭಗೋಷ್ಟಿ 1ಕಿವಿಯಲಿ ಸತ್ಶಾಸ್ತ್ತ್ರವಕೇಳಿಧ್ಯಾನಮನನವ ಸಾಧಿಪುದೆ ದೇವಸಾರ್ಥಿಕುವಲಯಪ್ರಿಯಕುಲತಿಲಕನು ಮೆಚ್ಚಿಹನವಭಕುತಿಯಪಥಕೀರ್ತಿಅವಿರಳ ಎದೆಗದ್ದಿಗೆಯೊಳು ಮೆರೆವನಸವಿಗುಣ ನಿರ್ಣಯವಾರ್ತಿವಿವರಿಸಿ ವಾರಂವಾರ ವರದ ಮದ್ಧವ ಜಗದ್ಗುರು ವರಮೂರ್ತಿ 2ಈಶ್ವರ ಸಾಕ್ಷಾತ್ಕಾರದ ಭೇದರಹಸ್ಯ ವಿಚಾರವಂತಯೋಗಿನಶ್ವರಾನಶ್ವರವರಿತ ವೈರಾಗ್ಯದಐಶ್ವರ್ಯಾನ್ವಿತಭೋಗಿಶಾಶ್ವತ ಪ್ರತ್ಯಕ್ಷಾದಿ ತ್ರಿಪ್ರಮಾಣಭಾಷ್ಯಕ ಶ್ರೀಪದಯೋಗಿವಿಶ್ವದೊಡೆಯ ಪ್ರಸನ್ವೆಂಕಟಪತಿ ಪದವಿಶ್ವಾಸಿಕ ಮುನಿಯೋಗಿ 3
--------------
ಪ್ರಸನ್ನವೆಂಕಟದಾಸರು