ವಿಜಯರಾಯ ಭಜಿಸೋ ಹೇ ಮನುಜಾ ನೀ ಪ
ಪಾದ ಭಜಿಸುವ ಮನುಜರ
ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ಅ.ಪ
ಮೊದಲು ಬೃಗುಮುನಿರೂಪದಿ ಶೀ-
ಘ್ರದಿ ಪೋಗಿ ಬರಲು ಶ್ರೀಹರಿ ಲೋ-
ವಿಧಿ ವಿಷ್ಣು ಶಿವರೊಳು
ಪದುಮನಾಭನಕಿಂತ ಅಧಿಕರಿಲ್ಲೆಂದು ನಾ
ರದ ಮುನಿಗರುಹಿದ 1
ಜಗದೊಳು ಸಕಲ ಕ್ಷೇತ್ರ ತೀರ್ಥಗಳ
ಮಹಿಮೆಯ ವರ್ಣಿಸುತ ಖಗರಾಜ
ಗಮನ ಶ್ರೀ ಭಗವದ್ಗುಣಗಳನ್ನು
ಬಗೆ ಬಗೆ ಪದಸುಳಾದಿಗಳಿಂದ ತುತಿಸಿದ 2
ಕಾಶಿಯೊಳಗೆ ಸಂಪ್ರಾಪ್ತ ಪುರಂದರ
ದಾಸರಿಂದಲಿ ಅಂಕಿತ
ಶೇಷಶಯನ ಶ್ರೀನಿವಾಸ 'ಕಾರ್ಪರನರ-
ಕೇಸರಿ ' ಗತಿ ಪ್ರಿಯ ದಾಸರೆಂದೆನಿಸಿದ 3