ಒಟ್ಟು 160 ಕಡೆಗಳಲ್ಲಿ , 57 ದಾಸರು , 149 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ನರಸಿಂಹ ವಿಠಲ | ಕಾಪಾಡೊ ಇವಳಾ ಪ ದೀನ ಜನ ಮಂದಾರ | ಕಾರುಣ್ಯ ಮೂರ್ತೆ ಅ.ಪ. ತೈಜಸನೆ ನೀನಾಗಿ ಯೋಜಿಸಿದ ರೂಪವನುಮಾಜದಲೆ ಇತಿಹೆನೊ | ವಾಜಿ ವದನಾಖ್ಯಮೂಜಗಕ್ಕೊಡೆಯ ಹರಿ | ಗೋಜುಗಳ ಬಿಡಿಸುತ್ತವ್ಯಾಜ ರಹಿತನೆ ಕಾಯೊ | ಭ್ರಾಜಿಷ್ಗು ಮೂರ್ತೇ 1 ಹರಿ ಗುರೂ ಸದ್ಭಕುತಿ | ವರಜ್ಞಾನ ಕರುಣಿಸುತನಿರುತ ಪೊರೆ ಇವಳನ್ನ | ವೈರಾಗ್ಯವಿತ್ತೂ |ದುರಿತ ರಾಶಿಗಳಳಿದೂ | ಕರುಣಿಸೋ ನರಹರಿಯೇಮರುತಾಂತರಾತ್ಮಕನೆ | ಶರಣ ವತ್ಸಲನೇ 2 ಪಾದ ಕಮಲ ಸನ್ನುತ ಗುರೂ | ಗೋವಿಂದ ವಿಠಲಾ3
--------------
ಗುರುಗೋವಿಂದವಿಠಲರು
ಶ್ರೀ ಮೊದಲಗಿತ್ತಿ ಕೃಷ್ಣಣ್ಣನವರಿಗೆ ಅಂಕಿತಪದ ಕ |ಳಂಕ ರಹಿತನ ಮಾಡೋ ನೀ ಮಾಡೋ ಅ.ಪ. ಸಂತತ ನಿನ್ನಯ ಚರಿತೆಯ ಕೇಳಲಿ |ಅಂತರಾಗದಿ ಪಾಡಲಿ |ಸಂತರ ಸಹವಾಸವನು ಕೊಟ್ಟು ಸತತ ನಿ |ಶ್ಚಿಂತ ಪುರುಷನ ಮಾಡೋ ಕಾಪಾಡೋ 1 ಪಂಚಭೇದ ಮತಿಯನಿತು |ಮರುತ ಮತವನ್ನು ಪೊಂದಿ |ಸಿರಿಯರಸನೆ ತವಗುಣ ಕರ್ಮನಾಮವ |ವರ ಜಿಂಹ್ವಯೊಳಿರಿಸೋ, ಉದ್ಧರಿಸೋ 2 ಶ್ರೀಶ ಪ್ರಾಣೇಶ ವಿಠಲರೇಯ ನೀನ್ನನು |ಲೇಸಾಗಿ ಪ್ರಾರ್ಥಿಸುವೆ |ಆಶಿಯ ಬಿಡಿಸಿನ್ನು ಮೀಸಲ ಮನಮಾಡಿ |ನೀ ಸುಜ್ಞಾನವನೆ ಪಾಲಿಸೋ, ಲಾಲಿಸೋ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ವಿದ್ಯಾಧೀಶರು ದಯಮಾಡೋ ಗುರುವೇ ವಿದ್ಯಾಧೀಶ ಪ ಅವಿದ್ಯಾ ನಿನ್ನ ಹೊರತು ನನಗನ್ಯ ಗತಿಯಿಲ್ಲ ಧನ್ಯನಿನ್ನಯ ಕುಲ ಮುನ್ನ ಉದ್ಧರಿಸಯ್ಯಾ 1 ತಾಪ ನಿನಗೆ ಇಲ್ಲಾಪೋತಗೆಲ್ಲರು ಬೋಧಾ ಯೋತಿ ಸಿಕ್ಕುವುದುಂಟೆ 2 ಹಾಕಿದ ಬೀಜವಾ ಬೀಕಲ ಮಾಡೋರೆತೋಕನಲ್ಲೆ ಕೃಪ ಯಾಕೆ ಮಾಡವಲ್ಲಿ3 ಅನವದ್ಯ ಕುಲದಿ ಪುಟ್ಟಿವಿದ್ಯಾರಹಿತನಾಗಿ ಹದ್ದಿನಂದದಿ ನಾನು4 ನಿಂದಿಸುವರೊ ನಿನ್ನ ವಂದಿತ ಕುಲವನ್ನುಮುಂದೆ ಮಾರ್ಗವ ಪೇಳಿಂದಿರೇಶನ ಪ್ರೀಯಾ 5
--------------
ಇಂದಿರೇಶರು
ಶ್ರೀ ವ್ಯಾಸರಾಜರು ಏಸು ಮಹಿಮ ನೋಡೋ | ಶ್ರೀ ವ್ಯಾಸಮುನಿಯು ತಾನೂ ಪ ದಾಸಜನರ ಹೃದ್ದೊದ್ದೋಷ ಕಳೆದು ಸಂ | ತೋಷ ಕೊಡುವ ದೊರೆ ಅ.ಪ. ರಾಮಾಚಾರ್ಯರ ಗೃಹದಿ | ಭೂಮಿ ಸೋಕದೆ ಪುಟ್ಟಿಪ್ರೇಮದಿಂದಲಿ ಪುರು | ಷೋತ್ಮ ತೀರ್ಥರ ಗುಹದಿಯಾಮ ಯಾಮಕೆ ಪಾಲು | ಆಮಹಾಮುನಿ ಕೂಡೆಸೀಮೆ ಮೀರಿದ ತೇಜ | ಕೋಮಲ ಕಾಯನು 1 ಪೂರ್ಣ ಬೋಧರ ಪೀಠ | ಬ್ರಹ್ಮಣ್ಯರಿಂಗೊಂಡುಭವಾರ್ಣ ತಾರಿಸುವಂಥ | ನ್ಯಾಯ ಗ್ರಂಥವ ಮಾಡಿಕರ್ಣ ರಹಿತನ ಸುಶಯ್ಯನ ಮಾಡಿಕೊಂಡಅರ್ಣ ಸಂಪ್ರತಿಪಾದ್ಯ | ಕೃಷ್ಣನ್ನ ಮೆರೆಸೀದ 2 ಸುಜನ ಕುಮುದ ಚಂದ್ರ | ನಿಜಭಕ್ತ ಪರಿಪಾಲ ಪರಿವ್ರಾಜಾಕಾಚಾರ್ಯ | ವಿಜಯ ನಗರಿಲಿ ನೆಲೆಸೀಅಜನನಯ್ಯನ ನಾಮ | ಭಜನೆ ಪ್ರಾಕೃತದೊಳುನಿಜಜನ ಕೊರೆಯುತ | ಅಜೇಯನೆನಿಸಿದಂಥ 3 ಮಿಥ್ಯಾಮತವಗೆದ್ದು | ತಥ್ಯಾವು ಜಗವೆಂದುಸ್ತುತ ಶ್ರೀಹರಿಯ ಸರ್ವೋತ್ತುಮನೆನುತಸತ್ಯವು ಪಂಚ ಭೇದ | ನಿತ್ಯವು ತಾರತಮ್ಯಭೃತ್ಯರು ಬ್ರಹ್ಮ ದೇವತೆಗಳೆಂದೊರೆದ 4 ಪುರಂದರ | ದಾಸರೆಂದೆನಿಸೀದ 5 ಅಹಿಪರ್ವತಾಧೀಶ | ಅಹಿತಲ್ಪನ್ನಾಸೇವೆವಿಹಿತದಿ ದ್ವಿಷಡಾಬ್ದ | ಬಹುಗೈದು ಅರಸಿನಕುಹುಯೋಗವಾರಿಸಿ | ಮಹಿಯ ಸುರರಿಗೆಲ್ಲಸಹಸ್ರಾರು ಗ್ರಾಮಗಳ್ | ಜಹಗೀರುಗಳನಿತ್ತ 6 ಛಂದದಿಂದಲಿ ನವ | ವೃಂದಾವನಕೆ ಬಂದುವೃಂದಾವನದಿ ನಿಂದು | ಇಂದೀವರಾಕ್ಷನುನಂದ ಕಂದ ಗುರು ಗೋ | ವಿಂದ ವಿಠಲನ ಹೃನ್‍ಮಂದಿರದಲಿ ನೋಡಿ | ನಂದವ ಪಡುತಿರ್ಪ7
--------------
ಗುರುಗೋವಿಂದವಿಠಲರು
ಶ್ರೀ ಶ್ರೀ ವರವಿಠಲದಾಸರು ಶ್ರೀವರ ದಾಸರ್ಯಾ | ತವಗುಣಭಾವದೊಳ್ವರ್ಣಿಸುವಾ ಪ ಭಾವ ಭಕುತಿ ನಿತ್ತು | ನೀವೊಲಿಯೋ ಗುರುದೇವ ತಾಂಶರೆಂದು | ಅವನಿಯೊಳ್ಖ್ಯಾತಾ ಅ.ಪ. ಶ್ರೀನಿವಾಸ ಹರಿಯಾ | ಸೇವಿಸಿಜ್ಞಾನಿಗಳೆನಿಸಿರುವಾ |ಶ್ರೀನಿಧಿ ವಿಠಲನ | ಗಾನವ ಮಾಡುವಜ್ಞಾನಿಶ್ರೇಷ್ಠರಿಂ | ದಂಕಿತ ಪಡೆದ 1 ಇಂದು ಭಾಗ ವಾಸಾ | ಎನಿಸಿಹಚಂದ ಹರಿಯ ರೂಪಾ |ನಂದ ತುತಿಸಿ ಹೃ | ನ್ಮಂದಿರದಲಿ ನೋಡಿಬಂಧ ಕಳೆದೆ ಭೂ | ವೃಂದಾರಕವರ 2 ಗರ್ವ ರಹಿತನಾಗಿ | ಹರಿಯನುಸೇರ್ವ ಮಾರ್ಗ ಪಿಡಿದೀ |ಸರ್ವೋತ್ತಮ ಗುರು ಗೋವಿಂದ ವಿಠಲನು ಶರ್ವ ಮುಖ್ಯರಾ | ದೇವಾ ಸೇವ್ಯನೆಂದೇ 3
--------------
ಗುರುಗೋವಿಂದವಿಠಲರು
ಶ್ರೀ ಹಯಗ್ರೀವ ಮಂತ್ರಸ್ತೋತ್ರ ಜ್ಞಾನ ಬಲಾನಂದಾದಿ ಸರ್ವಗುಣ ವಾರಿನಿಧಿ ಅನಿಷ್ಟಹರ ಇಷ್ಟಪ್ರದ ಹಯಗ್ರೀವ ಅನಘ ಸನ್ನುತ ಸೇವ್ಯ ಘನ ದಯಾಂಬುಧೇ ನಮೋ ಗುರುಗ ಲಕ್ಷ್ಮೀಶ ಪ ಕಮಲಾಸನ ಋಷಿಯು ಗಾಯತ್ರಿಛಂದಸ್ಸು ಅಮಲಾಷ್ಟಾಕ್ಷರ ಮಂತ್ರ ದೇವತೆ ಹಯಾಸ್ಯ ಸೋಮ ಮಂಡಲ ಸ್ಥಿತನು ಅಕಳಂಕ ಕಾಂತಿಮಾನ್ ಅಮೃತ ತನ್ನಯ ಸ್ವರೂಪ ಕಿರಣ ಸುರಿಸುವನು 1 ನಾಶರಹಿತನು ಅವ್ಯಯ ನಿತ್ಯೋ ನಿತ್ಯಾನಾಮ ಅಂಡ ಬಹಿರಂತರದಿ ಎಲ್ಲೂ ಪುಸ್ತಕ ಚಿನ್ಮುದ್ರೆಯು ಶಂಖಾಕ್ಷ ಮಾಲಾಧರ ಕಾಶಿಸುತಿಹ ತುರಗ ವದನ ಸರ್ವಜ್ಞ2 ಪೂರ್ಣ ಜ್ಞಾನಾತ್ಮನು ಪೂರ್ಣ ಐಶ್ವರ್ಯಾತ್ಮ ಪೂರ್ಣ ಪ್ರಭಾತ್ಮನು ಪೂರ್ಣ ತೇಜಾತ್ಮಾ ಪೂರ್ಣಾನಾನಂದಾತ್ಮನು ಪೂರ್ಣ ಶಕ್ತ್ಯಾತ್ಮನು ಪೂರ್ಣ ಗುಣನಿಧಿ ಸದಾ ನಿರ್ದೋಷ ಈಶ 3 ಪ್ರತಿವಾದಿ ಜಯಪ್ರದನು ಸರ್ವ ವಿದ್ಯಾದಾತ ಬುದ್ದಿ ಸ್ಥೈರ್ಯ ಸತ್ಜ್ಞಾನ ವರ್ಚಸ್ಸು ಈವ ಮುಕ್ತ್ತಿಸಾಧನೆ ಅಪರೋಕ್ಷಜ್ಞಾನವನಿತ್ತು ಸಾಧು ಅಧಿಕಾರಿಗಳ ಯೋಗಕ್ಷೇಮ ವಹಿಪ 4 ಏಕದಶÀ ಶತÀ ಸಹಸ್ರಾನಂತ ರೂಪನೇ ಸ್ವಗತ ಭೇದ ವಿಲ್ಲದ ಸುಪೂರ್ಣ ಸ್ವತಂತ್ರ ಶ್ರೀಕದಶ ವಿಧಿಪಿತ ಪ್ರಸನ್ನ ಶ್ರೀನಿವಾಸ ನಮೋ ವ್ಯಾಂ ಕಪಿಲದತ್ತÀ ವರಾಹಹಯಗ್ರೀವ 5 ಶ್ರೀ ಮಧ್ವಾಂತರ್ಗತ ಶ್ರೀ ಕೃಷ್ಣಾರ್ಪಣಮಸ್ತು
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಶನ ಚರಣದಾಸನಾಗಿರ್ದರೆ ಆಶಾಪಾಶ ನೀಗಿರಬೇಕು ಪ ಈಶನರಿತ ಗುರು ಶಿಷ್ಯನಾಗಿರ್ದರೆ ದೂಷಣ ಭೂಷಣ್ಹೋಗಿರಬೇಕು ಅ.ಪ ಹರಿಸರ್ಮಣಾಮೃತ ಸುರಿವನಾಗಿರ್ದರೆ ಧರೆಯ ಭೋಗ ಮೀರಿರಬೇಕು ಪರತತ್ತ್ವದ ಮೂಲರಿತವನಾದರೆ ಮರವೆ ಮಾಯ ಹಾರಿರಬೇಕು 1 ವೇದ ವೇದಾಂತವ ಸಾಧಕನಾದರೆ ವಾದ ವಾಂಛಲ್ಯವ ತೊಡೆದಿರಬೇಕು ಬೋಧ ಪಡೆದು ನಿಜ ಸಾಧುವಾದರೆ ನಾದಶಬ್ದವಡಗಿರಬೇಕು 2 ಮಾನಸಪೂಜೆಯ ಖೂನ ಬಲ್ಲ್ಯಾದರೆ ತಾನು ತನ್ನನು ಅರಿತಿರಬೇಕು ಧ್ಯಾನವಿಡಿದು ನಿಜಜ್ಞಾನಿಯಾದರೆ ಮಾನಭಿಮಾನಕ್ಹೊರತಿರಬೇಕು 3 ಬೋಗದ್ವಾಸನ್ಹಿಂಗಿ ಭಾಗವತನಾದರೆ ಕೂಗಿನ ನೆಲೆ ತಿಳಿದಿರಬೇಕು ಯೋಗ ಬಲಿಸಿ ಮಹಯೋಗಿಯಾದರೆ ರಾಗರಹಿತನಾಗಿರಬೇಕು 4 ಲಿಂಗವ ಧರಿಸಿ ಜಂಗಮನಾದರೆ ಸಂಗರಹಿತನಾಗಿರಬೇಕು ಅಂಗ ಮೂರು ನೀಗಿ ಲಿಂಗ ತಾನಾದರೆ ಲಿಂಗಾಂಗ ಸಮರಸ ತೋರಬೇಕು 5 ಸತ್ಯವರಿತು ಸತ್ಪುರುಷನಾದರೆ ಸತ್ತಂತೆ ಜಗದೊಳಿರಬೇಕು ಮೃತ್ಯುಗೆಲಿದು ಪರಮಾರ್ಥಿಕನಾದರೆ ಮತ್ರ್ಯರ ಗುಣ ಮರ್ತಿರಬೇಕು 6 ಘೋರ ಭವಾಂಬುಧಿ ಪಾರುಗಂಡಿರ್ದರೆ ಪಾರ ಹಾರೈಕೆ ಅಳೆದಿರಬೇಕು ಸಾರಮೋಕ್ಷ ತನ್ನ ಸೇರಬೇಕಾದರೆ ಧೀರ ಶ್ರೀರಾಮನೊಲಿಸಿರಬೇಕು 7
--------------
ರಾಮದಾಸರು
ಶ್ರೀಶಪದ ಕಮಲಕ್ಕೆ ಮಧುಪ | ನಿನ್ನದಾಸನೆಂದೆನಿಸುವುದು ಧನಪ | ಸಖ ಮ-ಹೇಶನ ಸುತ ಪೇಳ್ವೆ ಭಿನ್ನಪ | ನೀ ಪ್ರ-ಕಾಶಿಪುದು ಮನವಿ ವಿಘ್ನಪ 1 ಪತಿ ಕರುಣಿ ಶುಭಗಾತ್ರ | ಗ್ರಂಥಲೇಸೆನಿಸಿ ಲಿಖಿಸಿದೆ ಪವಿತ್ರ | ಮೂರ್ತಿಪಾಶಾಂಕುಶ ಪಾಣಿ ಸುಚರಿತ್ರ 2 ಸ್ವಾಂತ | ದಲ್ಲಿಅಭಯ ನೀ ತಿಳಿಸು ನಿಶ್ಚಿಂತ 3 ವಿಘ್ನಪನೆ ದುರ್ವಿಷಯದಲ್ಲಿ | ಬಹಳಮಗ್ನವಿಹ ಮನವ ಹರಿಯಲ್ಲಿ | ನಿರತಲಗ್ನ ಮಾಡಿಸು ತ್ವರ್ಯದಲ್ಲಿ | ಇನ್ನೂ ವಿಘ್ನಗಳಿಗಂಜಿಕೆಯು ಎಲ್ಲಿ ? | 4 ಧನಪ ವಿಶ್ವಕ್ಸೇನ ಯಮಳ | ಆ ಅ-ಶ್ವಿನೀಗಳ್ಗೆ ಸಮ ಕರಿಗೊರಳ | ಪುತ್ರನನುಜನೇ ಶೇಷ ಶತಗರುಗಳ | ರಲ್ಲಿಗುಣೋತ್ತಮನೆ ಕಾಯೊ ನಮ್ಮಗಳ | 5 ಬವರ | ದಲ್ಲಿಗೌರಿಪತಿ ವರದಿ ಉದ್ಧಟರ | ಆದಕ್ರೂರಿ ಜನ ಸಂಹಾರಿ ಶೂರ | 6 ಸೂತ್ರ ಅಪರೂಪ | ಖಳರದರ್ಪ ಭಂಜನನೆ ಶುಭರೂಪ | 7 ಶ್ರೀಶನತಿ ನಿರ್ಮಲವು ಎನಿಪ | ನಾಭಿದೇಶಗತನಾಗಿಹನೆ ಗಣಪ | ರಕ್ತವಾಸೆರಡು ಶೋಭಿತನೆ ಸುರಪ | ಮಿತ್ರಮೂಷಕಾ ವರವಹನ ರೂಪ | 8 ಶಂಕರಾತ್ಮಜ ದೈತ್ಯ ಜನಕೆ | ಅತಿ ಭ-ಯಂಕರ ಗತಿಯ ನೀಡಲ್ಕೇ | ನೀನುಸಂಕಟ ಚತುರ್ಥಿಗ ಎನೆಲ್ಕೆ | ಹಾಗೆಮಂಕು ಜನಾವೃತವು ಮೋಹಕ್ಕೆ 9 ಸಿದ್ಧಿ ವಿಧ್ಯಾಧರರು ಎಂಬ | ಗಣಾರಾಧ್ಯ ಪದಕಮಲ ನಿನದೆಂಬ | ಜನಕೆಸಿದ್ಧಿದಾಯಕ ವೇಗ ಎಂಬ | ಮಹಿಮಬುದ್ಧಿ ವಿದ್ಯೆಗಳ ಕೊಡು ತುಂಬ 10 ಭಕ್ತವರ ಭವ್ಯಾತ್ಮ ಪರಮ | ಶಾಸ್ತ್ರಸಕ್ತವಾಗಲಿ ಮನವು ಅಧಮ | ವಿಷಯಸಕ್ತಿರಹಿತನ ಮಾಡಿ ಪರಮ | ಶುದ್ಧಭಕ್ತನೆಂದೆನಿಸು ನಿಸ್ಸೀಮ | 11 ಶಕ್ರ ಪೂಜಿಸುತ ಗುರು ನಿನ್ನ ವೈರಿಶುಕ್ರ ಶಿಷ್ಯರ ಕೊಂದ ನಿನ್ನ | ಆ ಉ-ರುಕ್ರಮ ರಾಮ ಪೂಜಿಸೆನ್ನ | ತೋರ್ದವಕ್ರ ತುಂಡನೆ ಕರುಣವನ್ನ 12 ಕೌರವನು ಭಜಿಸದಲೆ ನಿನ್ನ | ಆಸಮೀರನ ಗದೆಯಲಿಂದಿನ್ನ | ಹತನುತಾರಕಾಂತಕನನುಜ ಯೆನ್ನೆ | ಧರ್ಮಪ್ರೇರಕನೆ ಸಂತೈಸು ಎನ್ನ 13 ಮೂಕರನ ವಾಗ್ಮಿಗಳ ಗೈವ | ಗುರು ಕೃ-ಪಾಕರನೆ ಕಾಮಗಳ ಕೊಡುವ | ಪರಮಲೇಖಕನೆ ಮನ್ಮನದಲಿರುವ | ಬಹುವ್ಯಾಕುಲವ ಪರಿಹರಿಸು ದೇವ | 14 ಸತ್ತೆ ವೃತ್ತಿಯು ಮತ್ತೆ ಪ್ರಮಿತಿ | ಜಗಕೆಇತ್ತು ತಾ ಸೃಷ್ಟ್ಯಷ್ಟಕತ್ರ್ರೀ | ಎನಿಪಚಿತ್ತಜ ಪಿತನ ದಿವ್ಯ ಸ್ಮøತಿ | ಇತ್ತುನಿತ್ಯ ನೀ ಪಾಲಿಪುದು ಸದ್ಗತಿ 15 ಪಂಚವಕ್ತ್ರನ ತನಯ ಕೇಳೊ | ಎನಗೆಪಂಚಭೇದದ ಜ್ಞಾನ ಪೇಳೊ | ಹರಿಯುವಾಂಛಿತ ಪ್ರದನ ದಿಟ ಆಳೊ | ಭವದಿವಂಚಿಸದೆ ಕಾಯೊ ಕೃಪಾಳೊ | 16 ಏನು ಬೇಡುವುದಿಲ್ಲ ನಿನ್ನ | ದುಷ್ಟಯೋನಿಗಳು ಬರಲಂಜೆ ಘನ್ನ | ಲಕುಮಿಪ್ರಾಣಪತಿ ತತ್ವರಿಂದಿನ್ನ | ಕಾರ್ಯತಾನೆಂಬ ಮತಿಯ ಕೊಡು ಮುನ್ನ 17 ಭಕ್ತ ಜನ ಕಲ್ಪ ತರುವೆನಿಪ | ಉಮೆಯಪುತ್ರ ಮಮ ಮಮತೆಯನು ಹರಿಪ | ದಾಯಹತ್ತಿಹುದು ನಿನ್ನಲ್ಲಿ ಗಣಪ | ಕಳೆಯೊಎತ್ತಿ ಕೈ ಮುಗಿವೆ ಭವರೂಪ 18 ಜಯ ಜಯವು ಎಂಬೆ ವಿಘ್ನೇಶ | ತಾಪತ್ರಯಗಳಿನು ನೀನೇ ವಿನಾಶ | ಗೈದುಭಯ ಶೋಕರಹಿತ ವಿದ್ಯೇಶ | ಜನ್ಮಾಮಯ ಮೃತಿ ಹರಿಸೊ ನಭಕೀಶ | 19 ನಮಿಸುವೆನೊ ಹೇರೊಡಲ ನಿನ್ನ | ಕರುಣಿಕಮಲಾಕ್ಷ ಹರಿನಾಮವನ್ನ | ನಿರುತವಿಮಲ ಮನದಿ ನುಡಿವಂತೆ ಎನ್ನ | ಮಾಡಿಕಮಲೇಶ ಪದ ತೋರೊ ಘನ್ನ20 ಎರಡು ನವ ಮೂರು ಪದಗಳನ್ನ | ಗೌರಿತರಳನಲಿ ಇರುವಂಥ ಪ್ರಾಣ | ಪತಿಯುಗುರು ಗೋವಿಂದ ವಿಠ್ಠಲನಾ | ಪದದಿಇರಿಸುವರ ಹರಿ ಪೊರೆವ ಅವರನ 21
--------------
ಗುರುಗೋವಿಂದವಿಠಲರು
ಶ್ರೀಹರಿ ಕೀರ್ತನೆ ಅಗಲದಿರೋ ಮನ ಮಂದೀರದಿಂದ ಲೆನ್ನ ಎಂದೆಂದಿಗೂ ಕೃಷ್ಣ ಪ ಅಗಲದಿರೋ ಬ್ರಹ್ಮಾದಿ ವಂದಿತ ಪರಿ ಪೂರ್ಣ ಏಕನೆ ವಿಶ್ವ ಸಗುಣ ನಿರ್ಗುಣ ನಿರಜ ನಿಸ್ಸೀಮ ಅ.ಪ. ಕಷ್ಟವಿಲ್ಲದೆ ಸಕಲ- ಚೇಷ್ಟೆಯ ನಡಿಸುವೆ ಕೊಟ್ಟು ದೇಹಾದಿಗಳ- ಬಿಟ್ಟೇ ಜೀವರ ಭವದಿ ಗಿಟ್ಟೀಸೆ ತಮ್ಮ ತಮ್ಮ- ಪಟ್ಟಾ ಮುಕ್ತಿಯ ಬೇಗ ಒಟ್ಟಿನಿಂದಲಿ ಜೀವ ಜಗವಂದಿಷ್ಟು ಚಲಿಸದು ಬಿಟ್ಟು ನಿನ್ನನು ಗುಟ್ಟು ತಿಳಿಯದೆ ಭವದಿ ಕಂ- ಗೆಟ್ಟು ಬಳಲಿದೆ ಭಕ್ತಬಾಂಧವ ನಷ್ಟಕಷ್ಟಗಳಿಲ್ಲದಾ ಸಂತುಷಷ್ಟ ನೀಡುವ ಪ್ರಭುವೆ ಕರುಣಾ- ದೃಷ್ಟಿ ಬೀರುತ ಭಕ್ತಿ ಭಾಗ್ಯವ ಪುಷ್ಟಿಗೈಸುತಲೆನಗೆ ಸಂತತ 1 ಶ್ರೀಶಾನೊಬ್ಬನೆ ಸರ್ವ ತಂತ್ರ ಸ್ವತಂತ್ರನು ನಾಶರಹಿತನಿಗೆಲ್ಲಾ ದಾಸರೆ ಸರಿಸತತಾ ವಾಸುದೇವನು ಜೀವ ಜಗದಿಂ ವಿಲಕ್ಷಣನು ಈಸುಜ್ಞಾನವನೀಯೋ ಜನ್ಮಜನ್ಮಾಂತರಕು ದೋಷದೂರ ವಿಶೇಷ ಮಹಿಮ ಪೂರ್ಣ ವಿಶ್ವಗ ಶಶ್ವದೇಕ ವಿ- ಲಾಸ ಮಿಷಣಾಭರಣ ಭೂಷಿತ ಸಾಮಸರ್ವಾಧಾರ ನಿರುಪಮ ಓಸು ಶಬ್ದಗಳಿಂದ ವಾಚ್ಯನೆ- ನಾಶಗೈಸುತ ಕರ್ಮತ್ರಯಗಳ ಹೃದಯಗುಹೆಯಲಿ 2 ನಿತ್ಯನಿಗಮಾತೀತ-ನೀನೆ ಸತ್ಯರ ಸತ್ಯ ನಿತ್ಯತೃಪ್ತನು ಸ್ವರತ-ಮುಕ್ತೇಶ ಚಿನ್ಮಯನೂ ನಿತ್ಯಜೀವಗೆ ನೀನಿರ್ನಿಮಿತ್ತ ಬಂಧು ಸತತ ನಿತ್ಯಸ್ತೋತ್ರವನು ನುಡಿಸು-ಮೃತ್ಯೋಮೃತ್ಯುವೆ ದೇವಾ ಧಾಮ ವಿಶ್ವೋ ತ್ಪತ್ತಿ ಸ್ಥಿತಿಲಯ ಕರ್ತ ಪರಿಪರಿ ಜೀವ ಸತ್ತಾದಿ ಭಾಸಕ ನಾಥ ಮುಕ್ತಾಮುಕ್ತ ವಂದಿತ - ಭೂತಿ ಭೂರಿದನಾಂತಾತ್ಮ ಖ್ಯಾತ ಸರ್ವೋತ್ತಮ ಪರತ:ಪರಾಕ್ಷರ ವಿಷ್ಣುಸರ್ವಜ್ಞ 3 ಅಂಬುಜಾಕ್ಷನು ನೀನೇ-ಉಂಬುವೆ ಸರ್ವಸಾರ ತುಂಬಿರುವೆ ಒಳಹೊರಗೆ-ಬೆಂಬಲನು ಜಗಕೆಲ್ಲ ಬಿಂಬ ನೀ ಚಲಿಸೆ ಪ್ರತಿ ಬಿಂಬಾ ನಾ ಚಲಿಸುವೆ ನಂಬಿದೆ ಸಲಹಯ್ಯ-ಕಂಬುಚಕ್ರಾಂಕಿತನೆ ಕುಂಭಿಣೀಪತಿ ಕೃಷ್ಣಕೈಬಿಡೆ ಗೊಂಬೆ ಸರಿನಾಲ್ಲವೇನೈ ಡಿಂಬದೊಳಗಿನ ವೈರಿವೃಂದವು ಹಂಬಲಿಸಲೆಡೆಗೊಡವುಭವ ದೊಂಬಿ ಅಡಗಿಸು ದಕ್ಷಣಾಕ್ಷಿಗ-ಸ್ಥಂಭರೂಪಿಯೆ ಶರಣುಶರಣು ಎನಿಸೈ ನೀಡಿ ವಿಜ್ಞಾನ 4 ಮಂದರೋದ್ಧರ ಗೋವಿಂದ ನಿನ್ನಯ ಮಹಿಮೆ ಇಂದಿರೆಗಾಗದು ಸಾಕಲ್ಯ ತಿಳಿಯೆಸಿದ್ಧವಿದೂ ಛಂದಾ ಛ್ಚಾದಿತ ಗಾತ್ರ-ಬಂಧ ಮೋಕ್ಷಪ್ರದನೆ ಎಂದು ಕಾಂಬೆನೋ ನಿನ್ನ-ಮಂದನಾನಿಹೆ ಜಗದೀ ಸದ್ಮ ಪೂರ್ಣಾನಂದ ನಿನ್ನಯ ನಾಮ ವೃಂದದಿ ಬಂಧಿಸಿಹೆ ಜಗವೆಲ್ಲ ವಿಷ್ಣುವೆ-ಛಂದಬೃಹತೀಪತಿಯೆ ನೀನೈ ನಾಡಿ ಮೆರೆಯುವ ಇಂದಿರಾಪತಿ ಕೃಷ್ಣವಿಠಲನೆ-ನಿಂದು ತೋರುತ ನಿನ್ನ ರೂಪವ 5
--------------
ಕೃಷ್ಣವಿಠಲದಾಸರು
ಶ್ರೀಹರಿ ಸಂಕೀರ್ತನ ಅನ್ಯರಿಲ್ಲ ಗತಿ ಅಚ್ಯುತನಾನಂತ ಶ್ರೀಪತಿ ಅಜಪಿತ ಮಹಾಮತಿ ಪ. ಸತ್ಯಜ್ಞಾನಾನಂತುಗುಣಸಿಂಧು ಭಾಗವತಜನಬಂಧು ರಕ್ಷಿಸಿಂದು ಪ್ರತ್ಯಗಾತ್ಮ ಸುಹೃತ್ತಮ ಜರಾ- ಮೃತ್ಯುರಹಿತನೆ ಚಿತ್ತಸಾಕ್ಷಿಯೆ 1 ವಾಸುದೇವ ದಿನೇಶಕೋಟಿಪ್ರಭ ಪೂಜಿತವಿಬುಧ ಮೌನಿಸಭ ಪದ್ಮನಾಭ ದಾಸಜನಹೃದಯಾಶ್ರಯಸ್ಥಿತ ದೋಷಗಂಧವಿದೂರ ಶ್ರೀವರ 2 ಸಕಲ ಜಗದಾಧಾರಮೂರುತಿಯೆ ವಿಜಯರಥ ಸಾರಥಿಯೆ ಹರಿಯೆ ದೊರೆಯೆ ಶಕಟಮರ್ದನ ಶಾಙ್ರ್ಗಧರ ಶ್ರೀ ಲಕುಮಿನಾರಾಯಣ ನಮೋಸ್ತುತೇ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಷೋಡಶೋಪಚಾರ ಪೂಜೆಪೂಜಿಸುವೆನನವರತ ಪರಮ ಪುರುಷನನುನೈಜ ಮೂರ್ತಿಯನೀಗಲಭಿಮುಖಿಸಿ ನಿರ್ಗುಣದಿ ಪಹೃದಯಕಾಶಿಯಲಿಪ್ಪ ಜ್ಞಾನಗಂಗೆಯ ಮಿಂದುಮೃದುತರದ ಸತ್ವಗುಣವೆಂಬ ನಿತ್ಯಕರ್ಮವ ಮಾಡಿಒದಗಿ ಶಮೆದಮೆಯೆಂಬ ನಿತ್ಯಕರ್ಮವ ಮಾಡಿಮುದದಿಂದ ಪರಮಾತ್ಮನಿಹ ಮಂದಿರಕೆ ಬಂದು1ಧ್ಯಾನಪ್ರಣವ ಮಂಟಪದಲ್ಲಿ ಕನಕಮಯ ಪೀಠವನುತನುಕರಣಮನಃಪ್ರಕೃತಿ ಯೆಂಬ ನೆಲೆಗಳನುಅನುಕೂಲದಿಂ ರಚಿಸಿ ಸಚ್ಚಿದಾನಂದನನುಮನದಲ್ಲಿ ಧ್ಯಾನವನು ಬಳಿಕೀಗ ಮಾಡುವೆನು2ಆವಾಹನ-ಆಸನ-ಪಾದ್ಯದೇಶಕಾಲಾತೀತ ಪರಿಪೂರ್ಣನಾಗಿರುವವಾಸುದೇವನನೊಮ್ಮೆಯಾವಾಹಿಸುವೆನುಆಸನವನೀವೆ ಸರ್ವಾಧಾರವಸ್ತುವಿಗೆದೋಷರಹಿತನ ಪಾದಗಳ ತೊಳೆವೆನೊಲವಿನಲಿ 3ಅಘ್ರ್ಯ-ಆಚಮನ-ಮಧುಪರ್ಕಬೆಲೆರಹಿತಗಘ್ರ್ಯವನು ನೆರೆಕೊಟ್ಟು ಕರಗಳಿಗೆಸಲಿಲದಿಂ ಶುದ್ಧನಿಗೆ ಶುದ್ದಾಚಮನವಸಲಿಸಿ ಮಧುಪರ್ಕವನು ಕ್ಷೀರಸಾಗರಗಿತ್ತುವಿಲಯಾದಿ ಪಂಚಪದಗೆರೆದು ಪಂಚಾಮೃತವ 5ಸ್ನಾನ-ವಸ್ತ್ರಸ್ಮರಿಸಿದರೆ ಸಂಸಾರಮಲವಳಿವ ಮಹಿಮನಿಗೆಸುರನದಿಯ ಪಡೆದವನಿಗಭಿಷೇಕಗೊಳಿಸಿನಿರತ ದಿಗ್ವಸ್ತ್ರನಿಗೆ ವರದುಕೂಲವನುಡಿಸಿಕರಣ ಪ್ರೇರಕನಿಗುಪವೀತದುಪಚಾರದಲಿ 5ಆಭರಣಅಷ್ಟವಿಧಗಂಧವನು ಅಷ್ಟಮದ ರಹಿತನಿಗೆನಿಷ್ಠೆುಂ ಭಕ್ತಿರಸದಿಂದ ಹದಗೊಳಿಸಿಅಷ್ಟ ವಿಧಮೂರುತಿಗೆ ಮುಟ್ಟ ಲೇಪವ ಮಾಡಿದುಷ್ಟಮದವನು ಕುಟ್ಟಿ ದಿವ್ಯ ಕುಂಕುಮವಿಟ್ಟು 7ಪುಷ್ಪ-ಧೂಪ-ದೀಪ-ನೈವೇದ್ಯ-ತಾಂಬೂಲಪರಿಪರಿಯ ಪುಷ್ಪಗಳ ನಿರ್ವಾಸನಗೆ ತಿಮಿರಹರಪ್ರಭಗೆ ಧೂಪದೀಪಂಗಳನು ಬೆಳಗಿಪರಿಪೂರ್ಣಕಾಮನಿಗೆ ಷಡುರಸಾನ್ನವನಿತ್ತುಪರಮ ಮಂಗಳಗೆ ತಾಂಬೂಲದುಪಚಾರದಲಿ 8ಕೋಟಿಸೂರ್ಯಪ್ರಭಗೆ ಕೋಟಿವರ್ತಿಗಳುಳ್ಳಮೀಟಾದ ಮಂಗಳಾರತಿಯ ಪಿಡಿದೆತ್ತಿಕೋಟಿ ಮೂವನ್ಮೂವರೂರ ಪುಷ್ಪವ ಚಂದ್ರಜೂಟಸಖ ತಿರುಪತಿಯ ವೆಂಕಟನ ಪದಕಿತ್ತು 9ಓಂ ಶ್ರೀಶಾಯ ನಮಃ
--------------
ತಿಮ್ಮಪ್ಪದಾಸರು
ಸರಳಕವಿ ರಾಮಾರ್ಯ ಹರುಷದಿ ವಿರಚಿಸಿದ ವರವೆಂಕಟೇಶನ ಪರಮಲೀಲೆಯ ಚರಿತೆಯುನ್ನತ ಕೀರ್ತಿಯಾಂತಿಹುದು ನರರ ಭಕ್ತಿಯ ಪೆರ್ಚಿಸಲ್ಕಿದು ಕರದ ದಿವ್ಯಜ್ಯೋತಿಯಪ್ಪುದು ಬರೆದಕವಿಯಾಸೂರಿವಂಶದ ಶರಧಿಚಂದಿರನು 1 ಭರತಭಕ್ತಿ ಯೆನಿಪ್ಪ ಚರಿತೆಯ ಬರೆದು ತಾನೇ ಭರತನಾಗಿಹ ಪರಿಯ ತೋರುವ ಭಕ್ತಿಬೋಧಕ ಭಾವಭಂಗಿಯಲಿ ಸರಸ ಸರಳತೆ ಲಲಿತಪದಗಳ ಶರಧಿಯಪ್ಪುದು ಕಾವ್ಯಮಿದನಾ ದರದಿ ಮುದ್ರಣಗೊಳಿಸಿ ಹಂಚಿದ ಕವಿಯು ಧನ್ಯನಲೇ 2 ಕವಿ ವಿಶಿಷ್ಠಾದ್ವೈತತತ್ವೋ ದ್ಭವನು ಹರಿಹರ ಭೇದರಹಿತನು ನವರಸಾಲಂಕೃತಯುತ ಗೋಕರ್ಣ ಮಹಿಮೆಯನು ಶಿವನ ಸನ್ನುತಿಗೈದು ರಚಿಸುತೆ ಭುವಿಯ ರಕ್ಷಣೆಗೈವ ಶಿವಕೇ ಶವರ ನಾಮವನೇಕ ವೊಬ್ಬನೆ ದೈವತಾನೆಂಬ 3 ಭಕ್ತಿಕಾವ್ಯಂಗಳನು ರಚಿಸಿಹ ಭಕ್ತನೀತನ ವಹ್ನಿಪುರಕಾ ಸಕ್ತಿಯಾಂತೈತರ್ಪುದೆಂದೆವು ವೇಂಕಟೇಶ್ವರನ ಭಕ್ತಿಬೋಧಕ ಕೃತಿಗೆ ಮಂಗಳ ದುಕ್ತಿಯುತ್ಸವಕಾಗಿ ನಾವತಿ ಭಕ್ತಿ ಸುಸ್ವಾಗತವನೀವೆವು ಕೈಗಳಂ ಮುಗಿದು 4 ಕೃತಿಯ ರಚನೆಗೆ ಮೋಹಗೊಂಡೆವು ಕೃತಿಯನೋದಿಸಿ ಕೇಳಿ ನಲಿದೆವು ಕೃತಿಯ ಬರೆದಾ ಕವಿಯ ಭಕ್ತಿಗೆ ಮನವ ತೆತ್ತಿಹೆವು ಕೃತಿಯ ಕರ್ತಗೆ ಮಣಿದು ಮಹದುಪ ಕೃತಿಯ ಗೈದಿಹಿರೆಂಬುದಲ್ಲದೆ ಕೃತಿಯ ಬರೆದವಗಾವಭಾಗ್ಯವನಿತ್ತು ತಣಿಸುವೆವು5 ಪರಮಭಕ್ತನಿಗಿಂದು ವಂದಿಸಿ ನೆರೆದ ಪಂಡಿತ ಪೌರಸಭಿಕರ ನೇಮಗಳಪೊತ್ತು ಹರಿಯ ಪಾದಂಗಳಿಗೆ ವಂದಿಸಿ ವರಕವಿಗೆ 'ಕವಿರತ್ನ’ ನೆನ್ನುವ ಬಿರುದನೀವೆವು ಸರಳಕವಿವರನಿದನು ಕೈಗೊಳಲಿ 6 ಗಮಕಕೋಕಿಲನೆನಿಪ ಕೌಶಿಕ ನಮಲಕೃತಿವಾಚನವಗೈಯಲು ಅಮಿತಸಂತಸದಿಂದ ವಿವರಿಸುತಂತರಾರ್ಥಗಳ ಕ್ರಮದಿ ಪೇಳಲು ಸೂರ್ಯನಾರಣ ನಮಿತ ಹರ್ಷಾಂಬುಧಿಯೊಳಿಳಿಯುತೆ ರಮೆಯ ರಮಣನ ಪಾದಕೆರಗಿದ ಸರಳಕವಿರತ್ನ7 ಆ ಮಹಾಮುನಿ ಸೂತನಂದದಿ ರಾಮಚರಿತಾಮೃತವ ರಚಿಸುತೆ ಆ ಮಹೇಶ್ವರನಾತ್ಮಲಿಂಗವು ಭೂಮಿಗಿಳಿದಾಕಥೆಯ ಕಾವ್ಯವ ನೀ ಮಹಾಮತಿ ರಚಿಸಿ ಮುಕ್ತಿಯ ಮಾರ್ಗವಿಡಿದಿಹನು8 ಸರಳಕವಿರತ್ನನಾಸೂರಿ ರಾಮಾರ್ಯತಾಂ ವಿರಚಿಸಲಿ ಸದ್ಭಕ್ತಿ ಕಾವ್ಯಗಳನೋರಂತೆ ಸಿರಿಕಾಂತನೀತಂಗೆ ದೀರ್ಘಾಯುರಾರೋಗ್ಯಗಳ ಕುಡಲಿ ಕಡುಕೈಪೆಯೊಳು ನೆರೆ ಗಮಕ ಕಲೆಯ ಸತ್ಕೀರ್ತಿ ವಿಸ್ತರಗೊಳಲಿ ಸಿರಿಗನ್ನಡಂ ಚಿರಂ ಬಾಳ್ಗೆ ಸುಕ್ಷೇಮದಿಂ ವರವಹ್ನಿಪುರದರಸನೆಲ್ಲರಂ ರಕ್ಷಿಸಲಿ ಭದ್ರಂ ಶುಭಂ ಮಂಗಳಂ9
--------------
ಪರಿಶಿಷ್ಟಂ
ಸರುವದ ಪಠಿಸಿರೊ ಚತುರವಿಂಶತಿನಾಮ ಸಿರಿವಿರಿಂಚಾದಿಗಳಿಗೇ ಪ್ರಿಯಕರ ನಾಮ ಪ ಮಾಧವ ಗೋವಿಂದನ ಶ್ರೀಶ ವಿಷ್ಣು ಮಧುಸೂಧನ ತ್ರಿವಿಕ್ರಮನ 1 ವಾಮನ ಶ್ರೀಧರ ಹೃಷಿಕೇಶ ಪದುಮನಾಭ ದಾಮೋದರ ಸಂಕರುಷಣ ವಾಸುದೇವನ 2 ಅನಿರುದ್ಧ ಪುರುಷೋತ್ತಮ ದೇವನ ಅಧೋಕ್ಷಜ ನಾರಸಿಂಹ ಅಚ್ಯುತರಾಯನ 3 ಜನಾರ್ಧನ ಉಪೇಂದ್ರ ಹರಿ ಶ್ರೀ ಕೃಷ್ಣಸ್ವಾಮಿಯ ಜನನ ಮರಣ ರಹಿತನಾದ ಶ್ರೀನಿವಾಸನ 4 ಈ ಮಹಾನಾಮಂಗಳ ಪ್ರೇಮದಿಂ ಪಾಡಲು ಕಾಮಿತಾರ್ಥವೀವ ಶ್ರೀ ರಂಗೇಶವಿಠಲ 5
--------------
ರಂಗೇಶವಿಠಲದಾಸರು
ಸಾಧಿಸು ಪರಲೋಕ ಮನವೆ ನೀ ಸಾಧಿಸು ಪರಲೋಕ ಪ ಮಾಧವನ ಮಹ ಪಾದದಾಸರಿಂದ ಶೋಧಿಸಿ ನಯದಿ ಸಂಪಾದಿಸಿ ಜ್ಞಾನವ ಅ.ಪ ಭೇದಬುದ್ಧಿ ಬಿಡೋ ಸುಜನರಿಂ ವಾದಿಸಿ ಕೆಡಬೇಡೋ ಆದರದಿಂದಲಿ ಸಾಧು ಸಂತರ ಸು ಬೋಧ ವಾಕ್ಯಗಳ ಮೋದದಿಂ ಕೇಳುತ 1 ರಾಗರಹಿತನಾಗೋ ಸಂಸಾರ ಭೋಗದಾಸೆ ನೀಗೋ ಯೋಗಿಗಳಿಗೆ ತಲೆವಾಗಿ ದಿಟದಿ ನೀ ಹೋಗಲಾಡಿಸಿ ಭವಬೇಗ ಸುಪಥಕ್ಹತ್ತಿ 2 ಕಾಮಿತಂಗಳ ಅಳಿಯೋ ತನುಧನ ಪ್ರೇಮಮೋಹ ಕಳೆಯೋ ಕಾಮಜನಕ ನಮ್ಮ ಭೂಮಿಜೆಪತಿ ಶ್ರೀ ರಾಮನಾಮಬೆಂಬ ವಿಮಾನವೇರಿ 3
--------------
ರಾಮದಾಸರು
ಸಾಧು ಸಜ್ಜನ ಸತ್ಯಗುಣಕಿದಿರುಂಟೆಆದಿಕೇಶವನ ಪೋಲುವ ದೈವವುಂಟೆ ಪ ಸತ್ಯವ್ರತವುಳ್ಳವಗೆ ಮೃತ್ಯುಭಯವುಂಟೆಚಿತ್ತಶುದ್ಧಿಯಿಲ್ಲದವಗೆ ಪರಲೋಕವುಂಟೆವಿತ್ತವನರಸುವಂಗೆ ಮುಕ್ತಿಯೆಂಬುದುಂಟೆಉತ್ತಮರ ಸಂಗಕಿಂತಧಿಕ ಧರ್ಮವುಂಟೆ 1 ಸುತಲಾಭಕಿಂತಧಿಕ ಲಾಭವುಂಟೆಮತಿರಹಿತನೊಳು ಚತುರತೆಯುಂಟೆಪತಿಸೇವೆಗಿಂತಧಿಕ ಸೇವೆಯುಂಟೆಸತಿಯಿಲ್ಲದವಗೆ ಸಂಪದವೆಂಬುದುಂಟೆ 2 ಪಿಸುಣಗಿನ್ನಧಿಕ ಹೀನನುಂಟೆವಸುಧೆಯೊಳನ್ನದಾನಕೆ ಸರಿಯುಂಟೆಅಶನವ ತೊರೆದ ಯೋಗಿಗೆ ಭಯವುಂಟೆವ್ಯಸನಿಯಾದ ನೃಪನಿಗೆ ಸುಖವುಂಟೆ 3 ಧನಲೋಭಿಗಿನ್ನಧಿಕ ಹೀನನುಂಟೆಮನವಂಚಕ ಕಪಟಿಗೆ ನೀತಿಯುಂಟೆಸನುಮಾನಿಸುವ ಒಡೆಯಗೆ ಬಡತನವುಂಟೆವಿನಯವಾಗಿಹ ಸಂಗದೊಳು ಭಂಗವುಂಟೆ4 ಹರಿಭಕ್ತಿಯಿಲ್ಲದವಗೆ ಪರಲೋಕವುಂಟೆಪರಮಸಾತ್ತ್ವಿಕ ಗುಣಕೆ ಪಿರಿದುಂಟೆಪರನಿಂದೆಗಿಂತಧಿಕ ಪಾತಕವುಂಟೆವರದಾದಿಕೇಶವನಲ್ಲದೆ ದೈವವುಂಟೆ 5
--------------
ಕನಕದಾಸ