ವಾಯುದೇವರು
ಆಂಜನೇಯ ಕುಂತೀತನಯ-
ಅಂಜನಾಭಪ್ರಿಯ ಮಧ್ವಾಖ್ಯರಾಯ ಪ.
ಮಂಜುಳಾಂಗ ಮೃತ್ಯುಂಜಯಾದಿ ಸುರ-
ನಿತ್ಯ ನಿ-
ರಂಜನ ದೇವಪ್ರಭಂಜನತನಯ ಅ.ಪ.
ರಾಮರಾಯಬಂಟ ದಿತಿಸುತ-
ಸ್ತೋಮಹರಣ ತುಂಟ
ಸ್ವಾಮಿಕಾರ್ಯಮನಪ್ರೇಮನಿರಾಮಯ
ಭೀಮಪರಾಕ್ರಮಧಾಮ ಘನಾಘನ-
ಶ್ಯಾಮ ನಿಕಾಮ ಸುಧೀಮಲಲಾಮ 1
ಚಿಂತಾಮಣಿ ರಾಮ ನೇಮ-
ವಾಂತು ಸಾರ್ವಭೌಮ
ಸಂತೋಷದಿ ಗಗನಾಂತರಪಂಥದಿಂ
ಅಂತರಿಸುತ ಮಹಾಂತೋದಧಿಯ
ಪ್ರಾಂತಕೆ ಹಾಯ್ದ ನಿಶ್ಚಿಂತ ಹನುಮಂತಾ 2
ಆಟನೋಟದಿಂದ ವನದೊಳು
ಸಾಟಿಯಾಗಿ ಬಂದ
ಮೀಟೆನಿಸುವ ಬಲು ಕಾಟಕ ದೈತ್ಯರ
ಕೂಟ ಕೆಡಹಿ ಪುರಕೋಟಿಯ ತಿಕ್ಕಿದ
ಪಾಟಲಮುಖ ಶತಕೋಟಿಶರೀರ 3
ಅಟ್ಟಹಾಸದಿಂದ ಕಮಲದಿ
ಪುಟ್ಟಿದಾಸ್ತ್ರದಿಂದ
ಕಟ್ಟಿಕೊಳ್ಳಿಸಿ ಜಗಜಟ್ಟಿ ಖ್ಯಾತಿಯಿಂದ
ದಟ್ಟಿಸಿ ಲಂಕೆಯ ಪಟ್ಟಣವನು ಸೂರೆ-
ಸುಟ್ಟುಬಿಟ್ಟ ಕಡುದಿಟ್ಟ ಹನುಮಂತಾ 4