ಒಟ್ಟು 381 ಕಡೆಗಳಲ್ಲಿ , 74 ದಾಸರು , 340 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಕೆ ಮಾಡೆನ್ನ ನಮ್ಮಯ್ಯ ರಂಗ ಜೋಕೆ ಮಾಡೆನ್ನ ಪ ಲೋಕನಾಥನೆ ಜೋಕೆ ಮಾಡೆನ್ನ ಕಾಕುಬವಣೆಯ ಸಾಕುಮಾಡಿ ಏಕಚಿತ್ತದಿ ನಿಮ್ಮ ಭಜನೆ ಜೋಕಿನೊಳು ಇರಿಸು ದೇವ ಅ.ಪ ನಿಗಮಗೋಚರನೆ ಜಗದಯ್ಯ ವಿಜಯ್ಯ ಖಗಪತ್ವಾಹನನೆ ಅಗಧರನೆ ಈರೇಳು ಜಗವ ರಕ್ಷಿಪನೆ ರಘುಕುಲಾರ್ಯನೆ ಮಗನಬಗೆ ಕೇಳು ಕರುಣದಿಂದಲಿ ನಿಗಮಾತೀತನೆ ಮುಗಿವೆ ಕರಮಂ ಹಗಲು ಇರಲು ಸುಗುಣಿ ಸಂತರ ಸಂಗಸುಖ ಎನಗಗಲಿಸದೆ ಹರಿ 1 ಮೆರೆವವೇದವ ವರಸ್ಮøತಿಶಾಸ್ತ್ರವ ಕರುಣಿಸೈ ದೇವ ಪರಿಹರಿಸು ಎನ್ನ ಮರವೆ ಮಾಯವ ವರಭಕ್ತ ಜೀವ ಮರವೆ ಮಾಯದಿ ಸಿರಿಯವರ ತವಪರಮ ಚರಿತವ ಅರಿವು ನಿಲ್ಲಿಸಿ ಕರುಣದಿಂ ತವ ಚರಣಕುರುಹನು ಕರುಣಿಸಭವ 2 ದೃಢದಿ ಬೇಡುವೆನು ತಡಿಯೆನೀಭವ ಎಡರುತೊಡರನು ಗಡನೆ ಬಿಡಿಸೆನ್ನ ಕಡೆಗೆ ಮಾಡೆನ್ನ ನಿಮ್ಮಡಿಗೆ ಬಾಗುವೆನು ನುಡಿಸು ಎನ್ನ ಮೆಲ್ನುಡಿಯೊಳನುದಿನ ಬಿಡದೆ ತವ ಕೊಡು ಗೂಢಮಂತ್ರವ ಬಿಡದೆ ಕೊಡು ನಿನ್ನಡಿಯ ದಾಸರ ಸಡಗರದ್ಯನ್ನೊಡೆಯ ಶ್ರೀರಾಮ 3
--------------
ರಾಮದಾಸರು
ಜೋಜೋ ಜೋಜೋ ಲಾಲಿ ಗೋವಿಂದ ಜೋಜೋ ಜೋಜೋ ಲಾಲಿ ಮುಕುಂದ ಜೋಜೋ ಜೋಜೋ ಲಾಲಿ ಆನಂದ ಜೋಜೋ ಜೋಜೋ ಲಾಲಿ ಗೋಪಿಯ ಕಂದ ಪ ಚಿನ್ನದ ತೊಟ್ಳಿಗೆ ರನ್ನದ ಮಲುಕು ಕನ್ನಡಿ ಹೊಳೆವೊ ಮೇಲ್ಕಟ್ಟಿನ ಬೆಳಕು ಸ್ವರ್ಣ ಮಂಟಪದಿ ರಾಜಿಪದಿವ್ಯ ಹೊಳಪು ಕರ್ನೇರಲಂಕರಿಸಿ ನಲಿಯುವ ಕುಲುಕು ಜೋ ಜೋ1 ಅರಿಶಿನ ಕುಂಕುಮ ಗಂಧ ಪುಷ್ಪಗಳು ಸರಸೀಜಾಕ್ಷಗೆ ಮುತ್ತಿನ್ಹಾರ ಪದಕಗಳು ಸುರರೊಡೆಯಗೆ ಪಟ್ಟೆ ಪೀತಾಂಬರಗಳು ಹರುಷದಿಂದಿರಿಸಿ ನಲಿವ ಸ್ತ್ರೀಯರುಗಳು ಜೋ ಜೋ2 ಮುತ್ತೈದೆಯರೆಲ್ಲ ಬಂದು ನೆರೆದರು ಉತ್ತಮ ಸ್ವರ್ಗ ಕಲಶವ ಪೂಜಿಸುವರು ಚಿತ್ತಜನಯ್ಯನ ಎತ್ತಿಕೊಂಡಿಹರು ಜೋ ಜೋ3 ಕೇಶವನನ್ನು ತನ್ನಿ ನಾರಾಯಣನ್ನ ಮಾಧವ ಗೋವಿಂದನನ್ನ ಸಾಸಿರ ನಾಮದ ವಿಷ್ಣು ಮಧುಸೂದನನ್ನ ಸೋಸಿಲಿ ತ್ರಿವಿಕ್ರಮ ವಾಮನನ್ನ ಜೋ ಜೋ 4 ಶ್ರದ್ಧೆಯಲಿ ಶ್ರೀಧರ ಹೃಷಿಕೇಶನನ್ನ ಪದ್ಮನಾಭನ ಕೊಳ್ಳಿ ದಾಮೋದರನ್ನ ಶುದ್ಧ ಮನದಿ ಸಂಕರ್ಷಣ ವಾಸುದೇವನನ್ನ ಪ್ರದ್ಯುಮ್ನನನು ತನ್ನಿ ಅನಿರುದ್ಧನನ್ನ ಜೋ ಜೋ5 ಪುರುಷೋತ್ತಮನ ಕೊಳ್ಳಿ ಅದೋಕ್ಷಜನನ್ನ ನಾರಸಿಂಹನ ತನ್ನಿ ಅಚ್ಚುತನನ್ನ ಸರಸದಿ ಜನಾರ್ದನ ಉಪೇಂದ್ರನನ್ನ ಹರುಷದಿಂದಲಿ ಕೊಳ್ಳಿ ಹರಿ ಶ್ರೀಕೃಷ್ಣನನ್ನ ಜೋ ಜೋ 6 ಹೀಗೆಂದು ತೂಗುತ ಜೋಗುಳ ಹಾಡಿ ನಾಗವೇಣಿಯರು ಸಂಭ್ರಮದಿಂದ ಕೂಡಿ ಆಗ ಕಮಲನಾಭ ವಿಠ್ಠಲನ್ನ ನೋಡೀ ಬೇಗ ರಕ್ಷೆಗಳನಿತ್ತರು ತ್ವರೆ ಮಾಡಿ ಜೋ ಜೋ 7
--------------
ನಿಡಗುರುಕಿ ಜೀವೂಬಾಯಿ
ತನ್ನ ಕಷ್ಟದಿ ತನಗೆ ದೊರಕುವುದು ಹಾಗ ಉನ್ನಂತ ಭಾಗ್ಯಗಳು ಹರಿಯ ವಿನಿಯೋಗ ಪ ಕಟ್ಟಿಗೆಯ ಹೊರೆ ತಂದು ಪಟ್ಟಣದೊಳಿಳುಹಿದರು ಉಟ್ಟ ಬಹಿರ್ವಾಸವನು ಬಿಗಿದಿಟ್ಟರು ಮೊಟ್ಟೆಯನು ಕೊಂಡೊಯ್ದು ಇಟ್ಟದನು ಮಾರಿದರು ಹೊಟ್ಟೆ ತುಂಬಿಸಿ ಕಡೆಗೆ ಕಟ್ಟುವನು ಹಾಗ 1 ಪದಪದ್ಯಗಳ ಹೇಳಿ ಕುಣಿದಾಡಲು ಹದಿನಾರನೆಯ ವಿಧಿಯ ಸದನದೊಳು ಸವಿದುಣಲು ಕದನ ಕರ್ಕಶನಾಗಿ ಕಡಿದು ಬರೆ ಹಾಗ 2 ಸೂಜಿ ನೂಲನು ಕೊಂಡು ಬಾಜಾರದೊಳು ಕುಳಿತು ಸೋಜಿಗದ ಹೊಲಿಗೆಯನು ಮಾಡಿಕೊಡಲು ಕಾಜು ಬಳೆಗಳ ಹೊತ್ತು ದಣಿದು ಮಾರಿದರವಗೆ ರೋಜು ಉಳಿವುದು ಅಸ್ತಮಯಕೆ ಒಂದ್ಹಾಗ 3 ಭಾಗ್ಯವುಳ್ಳವನನ್ನು ಬಾಧಿಸಲು ಅವ ತನಗೆ ಕಾಗೆ ಕರಿದೆನಿಸಿ ತಾ ಕಸ್ತೂರಿ ಹೋಲುವುದೆ ಮೊಗೆಮೊಗೆ ಮಲ್ಲಿಗೆಯು ಪರಿಮಳಿಪುದೆ 4 ಹರಿಯ ಸೇವೆ ಮಾಡೆ ಇಹಪರದ ಸೌಖ್ಯಗಳು ಹರನ ಸೇವೆಯ ಮಾಡೆ ಪರಮ ಪದವು ಸಿರಿಯರಸ ವರಾಹತಿಮ್ಮಪ್ಪ ನಿನ್ನಡಿಯ ಕರುಣರಸ ಹೊರತಾಗಿ ಸಿರಿಯು ಸೇರುವಳೆ 5
--------------
ವರಹತಿಮ್ಮಪ್ಪ
ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ
ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು ಧ್ರುವ ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು ಸ್ಥೈರ್ಯವಿಲ್ಲದವ ತಪಸ್ಯಾದರೇನು ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು ಬಂಟ ಬಲ್ಲಿದನಾದರೇನು 1 ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು ಷಂಡ ಸಾವಿರ ಹೆಣ್ಣು ಮದುವ್ಯಾದರೇನು ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು ಕಂಡು ಕಾಣದ್ಹೆಳವನ ಕೊಂಡಾಡಲೇನು 2 ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು ಅನುಭವಿಸಿ ಕೊಳ್ಳದ ನರಜನ್ಮವೇನು ದೀನ ಮಹಿಪತಿಸ್ವಾಮಿಕಾಣದ ಕಂಗಳವೇನುಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಮಾಡುವದು ಮನುಜ ಧರ್ಮ | ನಮ್ಮದು ಬೇಡುವದು ಕಾಡುವದು ಪ ನಡೆ ನುಡಿಗೆ ತಪ್ಪು ನೋಡುವದು ನ್ಯಾಯವೇ ನಿನಗೆ ||ಬಡವರಾಟಗಳೆಂದು ಸಲುಹಯ್ಯ | ಮಾಡಲಬೇಡ ತಡವ |ಕಡಿದ್ಹಾಕು ಕಮಳಲೋಚನಾ | ಎನ್ನ ನಿನ್ನಡಿಗೆಸೇರಿಸು | ಕಡಲಶಯನ ಮೋಹನ್ನಾ 1 ಮಡಹಿ ಮಲ್ಲನ ಕೆಡವಿ | ಜೋಡು ಮತ್ತಿಯ ಮರವ ತಡವಿ | ಮಧು ಮೊದಲಾದವರನ್ನು | ಅಡವಿ ಕಿಚ್ಚವ ನುಂಗಿ | ಕಡುವಿ ಮಡುವ ಧುಮುಕಿ | ಬಡವಿ ಕುಬ್ಜಿಯ ಕೈಪಿಡಿದು ಯಶವ ಪಡೆದಿ 2 ನಡೆವವನು ಎಡವುವನೆಂದು | ಅಪರಾಧಗಳನುಬಡಿದಾಡದೆ ಒಡಲೊಳಗೆ ಹಿಡಿವ | ಮಡದಿಯನುನಿಮ್ಮ ಜಡೆಯಲಿರಿಸಿದ ಮನೆಯಲಿ ಎನ್ನ |ಸಡಗರದ ರುಕ್ಮದಿಂದಿಡಿದು ಲಾಲಿಸು 3
--------------
ರುಕ್ಮಾಂಗದರು
ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ಪ ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು 1 ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು 2 ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು 3
--------------
ಕನಕದಾಸ
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ. ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1 ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2 ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3 ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4 ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5 ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6 ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7 ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8 ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
--------------
ಗಲಗಲಿಅವ್ವನವರು
ದಯದಿ ಪಾಲಿಸೋ ವಾದಿರಾಜ ಗುರುವೇ | ನತಜನ ಸುರತರುವೇ ಪ ಹಯಮುಖ ಪದ ಸದ್ವನಜ ಸುಭೃಂಗಾ | ಪಾಲಿಸು ದಯಾಪಾಂಗಾ ಅ.ಪ. ರಜತ ಪೀಠದೊಳು ಕೃಷ್ಣ ಪೂಜೆಗಳನ್ನು | ಪರಿಪರಿ ರಚಿಸಿನ್ನೂ |ಕುಜನರ ಭೇದಿಪ ಭಜನೆ ಪದಗಳನ್ನೂ | ಸುಜನಕಿತ್ತೆ ನೀನೂ ||ಭಜಿಸೆ ಬಂದವರಿಗನ್ನೋದಕಗಳನೂ | ಏರ್ಪಡಿಸಿನ್ನೂ |ನಿಜ ಜನರ ಪೊರೆವ ಸುವ್ಯವಸ್ಥೆಗಳನ್ನೂ | ರಚಿಸಿ ಮೆರೆದೆ ನೀನೂ 1 ಅಂತರಂಗದಿ ಪೂಜಿಪೆ ಹಯವದನನ್ನ | ಭಾವಿ ಮರುತ ಎನ್ನ|ಅಂತರಂಗದೊಳು ನೆಲಿಸುತ ನೀಯೆನ್ನ | ಸಂಚಿತಾದಿಯನ್ನ ||ಅಂತಗಾಣಿಪ ಶ್ರೀ ಅಂತರಾತ್ಮನನ್ನ | ಚಿಂತೆ ಪಾಲಿಸು ಮುನ್ನ |ಯೆಂತು ವರ್ಣಿಸಲಿ ತವ ಮಹಿಮೆಗಳನ್ನ | ನಿಂತು ನಲಿ ವದನದೊಳೆನ್ನ 2| ಭರತ ಖಂಡದಿ ತೀರ್ಥ ಕ್ಷೇತ್ರ ಚರಿಸೀ | ತತ್ಪ್ರಂಬಂಧ ರಚಿಸೀ |ವಿರಚಿಸಿದೆಯೋ ರುಕ್ಮಿಣೀಶ ಕಾವ್ಯಾ | ಯುಕ್ತಿಮಲ್ಲಿಕೇಯಾ ||ಸುರಸ ಪದಗಳಲಿ ತತ್ವ ಪುಂಜವನ್ನ | ರಚಿಸಿ ಮೆರೆದೆರನ್ನ |ನಿರಣಯಾದಿಗಳ ಭಾವಗಳನ್ನ | ಕನ್ನಡದಿ ರಚಿಸದೆ ಘನ್ನ 3 ಸ್ವಾದಿ ಪುರದಿ ಬಲು ಮುದದಲಿ ಮೆರೆದಾ | ಬಿರಿದು ಪೊತ್ತ ಶೈವಾವಾದಿಸೆ ನಿನ್ನೊಳು ಸೋತು ನಿಂತನವ | ಪಾದದಿ ಬಿದ್ದು ಅವ || ಮೇದಿನಿಯೊಳ್ ನಿಮಗೆ ಸಮರು ಆವ | ಎಂದೊಪ್ಪಿಸಿದನು ಅವ |ಮೋದದಿಂದಲಿ ಬಸವ ಚಿನ್ಹಿತನಾದ | ತವ ಚರಿತೆ ಆಗಾಧಾ 4 ಪಂಚ ಸುವೃಂದಾವನಗಳ ರಚಿಸುತ್ತಾ | ತಾವ್ನಡುವಿರ ಬೇಕೆನುತಾ |ಅಂಚೆಗಮನ ಪ್ರಾಣ ಗಂಗಾಧರನಾ | ಗುರು ಗೋವಿಂದ ವಿಠಲನಾ ||ಸಂಚಿಂತಿಸಿ ನಿಲಿಸುತ ನಾಲ್ಕರಲ್ಲೀ | ಚತುರ ದಿಕ್ಕಿನಲ್ಲೀ |ಪಂಚರೂಪಿ ನಿಷ್ಕಿಂಚಿನ ಪ್ರಿಯ ಹರಿಯಾ | ಪುರವ ಸೇರಿದಯ್ಯಾ 5
--------------
ಗುರುಗೋವಿಂದವಿಠಲರು
ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ ಧರೆಯೊಳು ಸುಜನರಾ ಪೊರೆಯಲೋಸುಗ ನೀನು ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ 1 ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ ದೇಶ ದೇಶದಿ ಜನರು ಬಂದು ಕಾದಿಹರೋ2 ಕರೆದಾರೆ ಬರುವಂಥ ಕರುಣಸಾಗರ ನೀನು ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ 3 ಬೇಡಿದಳಾ ವರಗಳ ಕೊಡುವ ನೀನೆನುತಲಿ ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ 4 ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ ಮತಿಯ ಪಾಲಿಪುದು - ಶ್ರೀ ಗುರುರಾಘವೇಂದ್ರಾ 5
--------------
ರಾಧಾಬಾಯಿ
ದಯಮಾಡು ಬಡವಗೆ ಮಹರಾಯ ದಯಾಕರ ವಿಜಯವಿಠಲರಾಯ ಪ ದೃಢದಿಂದಲಿ ನಂಬಿ ಬೇಡುವೆನು ಕೊಡುಗಡ ನಿನ್ನಡಿಭಕ್ತಿಯನು ಕಡುಪೀಡಿಪ ಈ ಜಡಬಡತನದಿಂ ಕಡೆಹಾಯ್ಸೆನ್ನನು ಕಡುದಯದಿಂ ಪೊರೆ 1 ಸೆರೆಗೊಡ್ಡಿ ಬೇಡುವೆ ಮಾಧವ ಕರುಣದಿ ಕರುಣಿಸು ವರವ ಪರಿಭವ ದು:ಖವ ಪರಿಹರಿಸಿ ನಿಮ್ಮ ಸ್ಮರಣೆಯೊಳಿರಿಸೆನ್ನ 2 ಸತ್ಯಭಾಮೆರಮಾಕಾಂತನೆ ಭಕ್ತರ ಕಕ್ಕುಲಾತಿದೇವನೆ ನಿತ್ಯನಿರಂಜನ ಮುಕ್ತಿದಾಯಕ ಉತ್ತಮಮತಿಕೊಡು ನಿತ್ಯಾತ್ಮ ಶ್ರೀರಾಮ 3
--------------
ರಾಮದಾಸರು
ದಯವಾಗು ದೀನ ಬಂಧು ನಿಜ ಭಕ್ತ ಭಯ ಹರ ಸ್ಮಯ ಮುಖೇಂದು ಸಿಂಧು ನಿನ್ನಡಿಯ ಬಯಸುವೆನು ಭಕ್ತನೆಂದು ಪ. ಶ್ರೀ ಭೂಮಿಯರಸ ನೀನು ದಯವಾಗೆ ಭಾಗವತರುದಯವಹುದು ಯೋಗ ಭೋಗಗಳೆಂಬುದು ಮಿತಿರಹಿತ- ವಾಗಿ ತಾನೇರಿ ಬಹುದು 1 ತಾಪಾಗ್ನಿ ಶಮನಕಾರಿಯೆ ನಿ:ಶೇಷ ಭೂಪಾಲ ಮೌಳಿಸಿರಿಯೆ ಶ್ರೀಪತಿಯೆ ನಿನ್ನ ಮರೆಯೆ ಎನ್ನಲ್ಲಿ ಕೋಪಿಸದೆ ಸಲಹು ದೊರೆಯೆ 2 ಪೂರ್ವ ಗಿರಿನಾಥ ನಿನ್ನ ಸಂಸ್ಮರಣೆ ಸರ್ವ ದುರಿತೌಘವನ್ನ ಪರ್ವತ ಶೃಂಗವನ್ನು ನಿಶಿತ ಶತ- ಪರ್ವದೊಲ್ ತರಿವರನ್ನ 3
--------------
ತುಪಾಕಿ ವೆಂಕಟರಮಣಾಚಾರ್ಯ
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ದಾಸನ ಮೇಲಿಷ್ಟು ಬೇಸರವ್ಯಾಕೋ ಶೇಷಶಯನನೆ ನಿನ್ನ ಧ್ಯಾಸದೊಳಿರುವ ಪ ನಶಿಸಿಹೋಗುವ ಕಾಯದ್ವ್ಯಸನವನು ಪರಿಹರಿಸಿ ಹಸನಾದ ಮತಿಯೆನಗೆ ಒಸೆದು ನೀಡೆಂದು ನಿಶಿದಿವದಿ ನಿನ್ನಡಿಕುಸುಮಗಳನಂಬಿ ಮಾ ನಸದಿ ಭಜಿಸಲು ಎನಗೊಶನಾಗದಿರುವಿ1 ಜಡತನದ ಸಂಸಾರ ತೊಡರೆಡರು ಕಡಿದು ಗಡ ಜಡಮತಿಯ ತೊಡೆದೆನಗೆ ದೃಢ ನಿಶ್ಚಯವನು ಕೊಡುಯೆಂದು ದೃಢದಿ ನಿನ್ನಡಿಗೆರಗಿ ಬೇಡಿದರೆ ಒಡಲೊಳಗೆ ನಿಂದೆನ್ನ ಜಡತನಳಿವಲ್ಲಿ 2 ಶ್ರೀಶ ಶ್ರೀರಾಮ ನಿನ್ನ ಧ್ಯಾನಮಾಡಲು ಒಮ್ಮೆ ಅಘ ನಾಶನಲ್ಲೇನು ದಾಸಜನಕರುಣಾಬ್ಧಿ ದಾಸನೊಳ್ದಯವಾಗಿ ಪೋಷಿಸೈ ತವಪಾದ ನಿಜಧ್ಯಾಸವಿತ್ತು 3
--------------
ರಾಮದಾಸರು
ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ | ಭಾಸುರ ಕಾರ್ಪರಾಧೀಶನಾ ಸನ್ನಿಧಿ ವಾಸ ಕೃತನತ ಪೋಷಾ || ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು ಮುಂದೆ ಈತ ಹರಿಭಕ್ತಾಗ್ರೇಸರನೆಂದು ಮನಸ್ಸಿಗೆ ತಂದು | ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ ಜ್ಞಾನವ ಗರೆದ || ವೃಂದಾರಕ ಮುನಿಯೆಂದಿವರನು ಭಾವಿಸುತ ಅಭಿವಂದಿಸುತ 1 ಬೋಧ ಸಚ್ಛಾಸ್ತ್ರ ಧರ್ಮವ ಮುದದಿ ತಿಳಿಗನ್ನಡದದಿ ಸತಿ ಸುಳಾದಿ ರೂಪದಿ ವಿರಚಿಸಿ ದಯದಿ ಸಾರುತ ಜಗದಿ | ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ ಕಲುಷವ ಕಳೆದ | ಇಳೆಯೊಳು ಇವರು ಪೇಳಿದ ವಚನವು ವೇದ ದೊಳಗಿನ ಸ್ವಾದ 2 ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ ಅರ್ಚಕರಾದ | ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ ಅನುದಿನದಲ್ಲಿ || ನೇಮದಿ ತನ್ನನು ಸೇವಿಪ ಭಕುತರ ಕರವ ಕರುಣದಿ ಪಿಡಿವ || ಜಗದೊಳು ಮೆರೆದ 3
--------------
ಶಾಮಸುಂದರ ವಿಠಲ