ಒಟ್ಟು 193 ಕಡೆಗಳಲ್ಲಿ , 53 ದಾಸರು , 174 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕ್ಷುಮೀನಾರಾಯಣ ಜಯಲಕ್ಷುಮೀ ನಾರಾಯಣ ಲಕ್ಷುಮೀನಾರಾಯಣ ಜಯ ಲಕ್ಷುಮೀ ನಾರಾಯಣ ಪ. ಪಾದ ದಾನವ ಗರ್ವಹರಣ ಗದಾದಿ ಧಾರಣ ಪರ್ವತಾರಿ ವರ ಪ್ರದ 1 ನಂಬಿಕೊಂಡಿಹೆ ನಿನ್ನ ದಿವ್ಯ ಪದಾಂಬುಜಗಳನು ಸರ್ವಕಾಲದಿ ಮನದೊಳಗಿಂಬುಗೊಳು ಕಮಲಾಂಬಕ 2 ಆರು ಸಂಖ್ಯೆಯ ಕಳ್ಳರೆನ್ನನು ಗಾರುಮಾಡುವರಾದರಿಂದತಿ ಧೀರ ನಿನ್ನ ಪದಾರವಿಂದಕೆ ದೂರುವೆನು ರಘುವೀರನೆ 3 ದುರ್ಮತಿಗಳಾದಸುರಹರಣಕೆ ಭರ್ಮಗರ್ಭನು ಬಂದು ಸ್ತುತಿಸಲು ಧರ್ಮಸಂಸ್ಥಾಪಿಸುತ ಬಹು ಶುಭಕರ್ಮ ತೋರುವ ಕರುಣಿಯೆ 4 ಸಪ್ತ ಋಷಿಗಳ ಕೂಡಿಕೊಂಡತಿ ಭಕ್ತಿಯಿಂದಲಿ ನಿನ್ನ ಭಜಿಸಿದ ಸತ್ಯವ್ರತನಿಗೆ ಸಕಲ ಶ್ರುತಿಗಳ ತತ್ವ ತಿಳಿಸಿದ ಮತ್ಸ್ಯನೆ 5 ಮುಳುಗಿಕೊಂಡಿಹ ಅಮಿತಗುರು ಮಂದರವ ಧರಿಸುತ ಅಮೃತರಸ ತೆಗೆದಿತ್ತನೆ 6 ದೈತ್ಯನ ತರಿದು ಬಿಸುಟು ವಿ- ಜನಿತ ಪವಿತ್ರ ಯಜ್ಞ ವರಾಹನೆ 7 ಘಡುಘಡಿಸಿ ಕಂಬದೊಳು ಬಂದ ಸಿಡಿಲಿನಂತಿಹ ನಖದಿ ದೈತ್ಯನ ಒಡಲ ಬಗೆದನು ಕೋಪದಿಂದ 8 ದಾನಕೊಂಡನಾನೆವನದಿ ದಾನವಾಹೃತ ಧರೆಯ ಕಸ್ಯಪಸೂನುಗಳಿಗೊಲಿದಿತ್ತನೆ 9 ದುಷ್ಟಭೂಭುಜಭಾರದಿಂದತಿ ಕಷ್ಟಪಡುತಿಹ ಧರೆಯ ಕರುಣಾ ನೃಪರ ಕಡಿದ 10 ನೀರಜಾವದನಾರವಿಂದ ಮಹಾ ರಸಾಸ್ವಾದನ ಪದ ಕಪಿವೀರನಿಗೆ ಸ್ವಾರಾಜ್ಯ ನೀಡಿದ ಮಾರುತಿಗೆ ದಯ ಮಾಡಿದ 11 ಬಾಲ ಲೀಲೆಯ ತೋರಿ ಗೋಪಕ ಬಾಲೆಯರ ಕೂಡಾಡಿದೆ ಖೂಳಕಂಸನ ಕೆಡಹಿ ದಾನವಮೂಲ ಕಿತ್ತು ಬಿಸಾಡಿದೆ 12 ಜೈನರನು ಮೋಹಿಸುವೆನೆಂದನುಮಾನವಿಲ್ಲದೆ ನಗ್ನನಾಗಿ ಹೀನ ಬುದ್ಧಿಯ ತಿಳಿಸಿ ತ್ರಿಪುರವ ಹಾನಿಗೈಸಿದ ಬೌದ್ಧನೆ 13 ಸುಧೆಯನು ಕರೆದು ಶಿರದಲಿ ತುಂಗ ವಿಷಯ ತರಂಗ ತಪ್ಪಿಸು ಅಂಗಭಂಗವ ಶಿಂಗನೆ 14 ಮಿಂಚಿನೊಡ್ಡಿದ ಮೇಷನಂದದಿ ಪಂಚವರ್ಣದ ತುರಗವೇರಿ ಸಂಚರಿಸಿ ಮ್ಲೇಂಛರನು ಕೊಲ್ಲಿಸಿ ಲಾಂಛಜೀವನ ವರದನೆ 15 ಮಂದಿರದಿ ನೀ ಬಂದು ರಕ್ಷಿಪೆ ಎಂದು ಸಕಲಾನಂದಗೊಂಡಿಹೆ ಇಂದಿರೇಶನೆ ಎಂದಿಗೂ ಈ ಅಂದದಿಂದಲಿನಿಂದ ಸಲಹು 16 ಕೇಶವಾದಿ ದ್ವಿದಶರೂಪವು ಮಾಸಗಳಿಧಿಷ್ಠಾನನಿಗೆ ಪ- ರೇಶ ಕಡೆಯಲಿರುವ ಕಾರ್ತಿಕವಾಸ ದಾಮೋದರ ಹರನೆ 17 ಬಳಲಿ ಕರ್ಮವ ಮಾಡಲಾರೆ ನಳಿನಜಾರ್ಜಿತ ನಿನ್ನ ಪಾದದ ನೆಳಲನಂಬಿ ಸುಮ್ಮನಿರುವೆ 18 ಅಖಿಳದೋಷ ನಿವಾರಣಾದ್ಭುತ ಸಕಲಸದ್ಗುಣಧಾರಣಾ ಕುಂಡಲ ಧಾರಿ ವೆಂಕಟಶಿಖರ ವರ ಸುಖಕಾರಣಾ 19
--------------
ತುಪಾಕಿ ವೆಂಕಟರಮಣಾಚಾರ್ಯ
ವಶವಾಗಿ ಉದ್ಧರಿಸಮ್ಮಾ ಪಾಲನ ಪ ಮತಿಯ ಕೊಡುತಿಪ್ಪ ಎನ್ನ ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ1 ಬುದ್ದ್ಯಾಭಿಮಾನಿ ದೇವಿ ಇಂದ್ರಾದ್ಯ ಸುರರನ್ನ ಕಾಯ್ವಿ ಗಾತ್ರನ ಧನಪತಿ ಮಿತ್ರನಾ 2 ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ ವಿಜಯವಿಠ್ಠಲರೇಯನ ದಾಸದಾಸನ ಕೈಲಾಸವಾಸನ ಜಗಕೆ ವಿಶೇಷನಾ 3
--------------
ವಿಜಯದಾಸ
ವಿಷ್ಣುಶತಕ ಶಿರಿದೇವಿ ಹೃತ್ಕುಮುದ ಚಂದ್ರಮನೆ ಕರುಣಾರ್ಣವಾಗಣಿತ ಸದ್ಗುಣನೇ ಭಂಜನ ಮುರಾಂತಕನೇ ಪರಮಾತ್ಮ ಪಾಲಿಸು ಪರಾತ್ಪರನೇ 1 ಕಮಲಾಸನಾದ್ರಿಜೆ ಮನೋಹರ ಮು ಖ್ಯಮರಾಳಿಯಂ ಭಕುತಿಯಿಂ ಬಲಗೊಂಡು ಮ- ಹಾತ್ಮರಾದ ಗುರುಪಾದಕೆ ನಾಂ ನಮಿಸೀ ಪ್ರಬಂಧವನು ಹೇಳುತಿಹೇಂ2 ನೂರಾದ ಪದ್ಯಗಳೊಳಾಂ ಸಕಲಂ ಧಾರಾಳವಾಗಿ ತವ ಸನ್ನಿದಿಯೋಳ್ ಸಾರಂಗಳಂ ಗ್ರಹಿಸಿ ಬಿನ್ನಯಿಪೇಂ ಶ್ರಿರಾಮನೀಂ ದಯದಿ ಲಾಲಿಸಿ ಕೇಳ್ 3 ಕವಿತಾ ಧುರೀಣತೆಯು ಬಂದುದು ನಿ_ ನವ ಯುಕ್ತಿ ಚತುರತೆಗಳೊಂದರಿಯೇಂ 4 ಜೀವಕ್ಕೆ ನೀನು ಮಿಗೆ ಚಿತ್ತದಿ ಶ್ರೀ ದೇವೀ ಮನೀಷದೊಳು ಬ್ರಹ್ಮನಿಹಂ ಯಾ ವಿಶ್ವನಾಥ ಸಹ ರುದ್ರ ಮನೋ ಭಾವಂಗಳಿಂಗೊಡೆಯನಾಗಿರುವಂ 5 ಸಲೆ ಹಮ್ಮಿಗಾ ತ್ರಿಪುರ ಸಂಹರನೇ ಉಳಿದಿಂದ್ರಿಯಗಳಿಗೆ ಜಿಷ್ಣುಮುಖರ್ ಒಳಗಿದ್ದು ಒಳ್ಳಿದನು ಕೆಟ್ಟುದನೂ ಬಲವಿತ್ತು ಮಾಡಿಸುವರೈ ಹರಿಯೆ 6 ಜಲಜಾತ್ಮಜಾಭಿಮತ ಬಂಧು ಪಥಂ ಗಳು ಮೂರು ಬಗೆಯು ನೋಡಿದರೆ 7 ಮಿಗೆ ಕರ್ಮಕರ್ಮವು ವಿಕರ್ಮಗಳೂ ಜಗದಲ್ಲಿ ಎಲ್ಲರಿಗು ಮೂಲವಿದೂ ತ್ರಿಗುಣ ಪ್ರಬದ್ಧರಹ ಜೀವಗಣಾ ಖಗರಾಜ ವಾಹನನೆ ಸಾಕ್ಷಿಯು ನೀಂ 8 ಸದಸದ್ವಿವೇಕಾವನು ಕಾಣದೆ ಸ ಚಿದಚಿದ್ವಿಲಕ್ಷಣನು ನೀನೆನದೇ ಮದಗರ್ವದಿಂದ ಮೆರೆದಾಂ ಕೆಡುವೇಂ 9 ಕುಹುಕಾತ್ಮರಾದವರ ಸಂಗದಿ ಬಂ- ದಿಹ ನೋವು ನಾನಕಟ ಬಣ್ಣಿಸೇಂ10 ಅಂತವರ್ಗವಾರ್ವರು ಶರೀರದೊಳಿ ದುರ್‍ವೃತ್ತಿ ಪುಟ್ಟಿಸುತ ಕೊಲ್ಲುತಿಹರ್ ಪರಮಾತ್ಮ ನಿನ್ನವರ ಸೇರಿರುವೇಂ 11 ಮಲಮೂತ್ರ ಕೂಪವಹ ದೇಹವಿದು ಜಲಗುಳ್ಳೆ ಎಂದರಿತಡಂ ಬರಿದೇ ಕಲುಷಾತ್ಮನಾದೆ ಕರಿರಾಜವರದಾ 12 ಹಸನಾಗಿ ತೋರುತಿಹ ದುರ್ವಿಷಯಂ ಬಿಸಿನೀರು ತುಂಬಿರುವ ಬಾವಿಯಿದುಂ ಕುಸುಮಾಸ್ತ್ರನೆಂಬ ಕಡುಗಳ್ಳನು ತಾ ನೆಸಗೀ ಪ್ರವಾಹದಲಿ ನೂಕುತಿಹಂ13 ಪಾದ ಪದ್ಮಂಗಳ ನಂಬಿದೆ ವೆಂ- ಮ್ಮವಮಾನ ಮಾನಗಳು ನಿನ್ನದುದೆಂ- ದ್ವ್ಯವಸಾಯವಂತರೆ ಮಹಾತ್ಮಕರೂ 14 ಜನುಮಗಳನೆತ್ತುತಲಿ ಜೀವರು ನಿಂ ನನು ಕಾಂಬ ಯೋಚನೆ ತಿರಸ್ಕರಿಸೀ ಘನ ಕಾಮಭೋಗಗಳಪೇಕ್ಷಿಸಿತಾಂ ಧನಕಾಗಿ ದುರ್ಜನರ ಸೇವಿಸುವರು 15 ಹಿತದಿಂದ ಎಲ್ಲರಿಗೆ ನೀನೆ ಇದಂ ಮತಿಹೀನರಾದವರು ಬಾಹ್ಯರ ನಂ- ಬುತ ದುಃಖದಿಂದಲವಿವೇಕರಹರ್ 16 ಗುಣಶೂನ್ಯ ನೀನೆನುತ ಕೊಂಚ ಜನಂ ಗಣಿಸಲ್ಕಸಾಧ್ಯವಹ ವಾದಗಳಿಂ ಘನ ತರ್ಕದಿಂದ ಅನುವಾದಿಸಿ ದುರ್ ಜನ ಮುಖ್ಯರೆನಿಸುತಿಹರ್ ಭುವಿಯೊಳ್ 17 ಅನುಮಾನವೇ ತಮಗೆ ಮುಖ್ಯವೆನು- ತನುಸಾರಿ ರಾಜಸದಿ ತಾಂ ಮುಳುಗೀ ವನಜಾಕ್ಷ ಕೋರಿಕೆಗಳಿಂ ಭಜಿಪರ್ 18 ಉದರ ಪ್ರಯುಕ್ತ ಪರರಾಶ್ರಯಿಸಿ ಪದ್ಯ ಪದ್ಯ ಪೇಳಿ ಬಹುನೀಚನು ನಾ- ನುದಯಾಸಮುದ್ರರೆಲೆ ನೀವೆನುತೇ ಸುದುರಾತ್ಮರಂ ಪೊಗಳಿ ಕೆಟ್ಟೆನು 19 ಹಿತತತ್ವ ಭಾವದಲಿ ದುರ್ಜನರು ಮತಿವಂತರಂತೆ ಬಹಿಯೋಳ್ ನಟಿಸಿ ಸತಿ ಪುತ್ರ ವಿತ್ತಗಳ ಮೋಹದಲೀ ವ್ಯಥೆಪಟ್ಟು ಬಾಯ್ಬಿಡುತ ನೋಯುತಿಹರ್20 ಮೊದಲಾಗಿ ಎಲ್ಲರನು ಮಾಯದಿ ನಿ- ನ್ನುದ ರಾಖ್ಯ ವಾರಿನಿಧಿಯಿಂದಲಿ ತಾವ್ ಉದಿಸಿರ್ಪರೆಂದುಸುರುಗುಂ ಶ್ರುತಿಗಳ್ 21 ಅನುಮಾನವುಳ್ಳ ಜನಕೆಂದಿಗು ಪಾ- ಮೂರ್ತಿ ನಿನ್ನ ಘನ ಜ್ಞಾನ ಸುಖಂ ತೃಣ ಮಾತ್ರವೂ ಬರದು ಸ್ವಪ್ನದೊಳು ಜನದಲ್ಲಿ ಕೀರ್ತಿ ಬಹಿಯೊಳ್ ಬರಿದೆ 22 ಗುರುಸೇವೆಯಿಂದ ತನುದಂಡಿಸಿ ತಾ ನಿರುತಂ ಸುಶಾಸ್ತ್ರಗಳ ನೋಡುತಲಿ ಸ್ಥಿರ ಚಿತ್ತನಾಗಿ ಶ್ರವಣಾದಿಗಳಿಂ ಹರಿಭಕ್ತರಿಂದ ಕಡೆಸೇರುತಿಹಂ 23 ಕವಿಯಾದವರ್ ನಿರುತವುಂ ಮಿಗೆ ಭಾ- ಗವತಾದಿ ಗ್ರಂಥಗಳ ಸಜ್ಜನರಿಂ ಕಿವಿಯಿಂದ ಕೇಳುವುದಕಂ ಬಹು ಜ- ನ್ಮವು ಪಕ್ವವಾಗಿ ಸಲೆ ಪ್ರಾಪ್ತಿಸುಗುಂ 24 ಹರಿಕೃಷ್ಣ ಕೇಶವ ಮುಕುಂದ ನೃಕೇ- ಸರಿ ವಿಷ್ಣುವಾಮನ ತ್ರಿವಿಕ್ರಮ ಶ್ರೀ ಪದ್ಮನಾಭ ಮಧುಸೂದನ ಹೇ ಪುರಷೋತ್ತಮೌಚ್ಯುತ ಜನಾರ್ದನನೇ 25 ವಸುದೇವ ನಂದನ ಮುರಾಂತಕನೇ ಹೃಷಿಕೇಶ ನಾರೇಯಣ ಮಾಧವನೇ ಪರಿ ಪಾ- ಲಿಸುಪೇಂದ್ರ ಭಕ್ತರ ಅಧೋಕ್ಷಜನೇ 26 ಪರಮಾತ್ಮ ನೀನೆಮಗೆ ಎನ್ನುತನಂ- ಬರು ನಿನ್ನ ತಾಮಸರು ಸತ್ಯವಿದು ನೆರೆ ನೋವಿನಿಂಬಳಲಿ ತಾವ್ ಮಿಗೆ ಸಂ- ಸರಣ ಪ್ರವಾಹದೊಳು ಬೀಳುತಿಹರ್ 27 ದ್ಗುಣದಲ್ಲಿ ದುರ್ಗುಣಗಳೇ ಗಣಿಸಿ ಘನ ಮೋಹ ದುಃಖದೊಳು ಸತತ ನಿ- ನ್ನನು ಕಾಂಬ ಯೋಚನೆಯ ಬಿಟ್ಟಿರುವರ್ 28 ನ್ನನು ನಂಬಿ ನಂಬಿದಲೆ ತಾವ್ ನಿರತಂ- ಘನ ಕಾಮ ಕ್ರೋಧ ಮದ ಮತ್ಸರದಿಂ ಜನದಿಂದ ಯತ್ನವನು ಮಾಡುತಿಹರ್ 29 ದೇವಾದಿದೇವ ದಿವಿ ಭೂಮಿಗಳೋಳ್ ಭಾವ ಪ್ರಭೇದದಲಿ ಧ್ಯಾನಿಪರಿಂ- ಗೀ ವೇಷ್ಟಸಿದ್ಧಿಗಳ ನೀನೆ ಸದಾ 30 ಯೋಗಿ ಜನವಂದಿತ ಸ- ಜ್ಜನಕಲ್ಪವೃಕ್ಷ ಜಗದೇಕ ವಿಭೋ ವನಜಾಕ್ಷ ಇಂದಿರೆಯ ವಲ್ಲಭ ಬ್ರಾ- ಹ್ಮಣ ಪ್ರೀಯ ಭಕ್ತಸುಖದಾಯಕನೇ 31 ರವಿಕೋಟಿತೇಜ ರಮಣೀಯ ಕಥಾ- ತವನಾಮ ಕೀರ್ತನೆಯ ಮಾಳ್ಪರ ಪಾ- ಪವ ನೀನೆ ಓಡಿಸುವುದೇನರಿದೈ 32 ವರಾಹ ನೃಕೇ- ಸರಿ ವಾಮನಾವನಿ ಸುರೋತ್ತಮ ಭಾ- ಸ್ಕರ ವಂಶ ಚಂದ್ರವಸುದೇವಜ ಭಾ ಬುದ್ಧ ಕಲ್ಕ ವಪುಷೇ ನಮಃ 33 ಮುನಿಕರ್ದಮಂಗುದಿಸಿ ತಾಯಿಗೆ ಪಾ ವನ ರಾಜಯೋಗವನು ಬೋಧಿಸಿದೈ ಘನಯೋಗಿವರ್ಯ ಕಪಿಲಾಖ್ಯನೆನಿ- ನ್ನನು ನಂಬಿ ಪ್ರಾರ್ಥಿಸುವೆನಾನನಿಶಂ 34 ರ್ಜುನ ಕಾರ್ತವೀರ್ಯಗುಪದೇಶಿಸಿದೇ ಘನಯೋಗ ಬೋಧೆಯನು ಹೈಹಯರ್ ತಾ ವನುವಾದ ಶಿಷ್ಯರೆಲೆದತ್ತವಿಭೋ 35 ಋಷಭಾಖ್ಯನಾಗಿ ಸುತರಿಂಗೆ ಮಹಾ ಋಷಿಚರ್ಯ ಬೋಧಿಸಲವರ್ ತಿಳಿದು ದಶಯೋಗಿವಂದಧಿಕ ಎಂಬತ್ತು ಭೂ- ಮಿಸುರಕ್ರಿವೃತ್ತಿಯಲಿ ಶೋಭಿಸಿದರ್ 36 ಜಂಭ್ವಾಖ್ಯ ದ್ವೀಪದೊಳು ಖಂಡಗಳಿಂ ಅಂಭೋಜನಾಭ ತವನೇಮದಲೀ 37 ಹರಿ ನೀನೆ ಪುಟ್ಟಿಯದು ಸ್ಥಾಪಿಸಿ ದು ರ್ನರರನ್ನು ಕೊಂದು ಶರಣಾಗತರಂ ಪರಿಪಾಲಿಸುತ್ತಿರುವೆ ಸಂತತವುಂ 38 ಕಲಿಕಾಲವೀಗ ಖಳರೆಲ್ಲರು ಸ- ತ್ಕುಲದಲೆ ಪುಟ್ಟಿ ನೆರೆ ಸಾಧುಗಳಂ ಬಲುಬಾಧಿಸುತ್ತ ದುರಿತಂ ಘಳಿಸೇ ನರಕಂಗಳಲ್ಲಿ ನೆರೆಯಾಗುತಿಹರ್ 39 ಪರಮಾತ್ಮ ತತ್ವದಲಿಯೇ ಮರವು ದುರ್ವಿದ್ಯವಭ್ಯಸಿಪುದಕೆ ಮನವು 40 ಪರರನ್ನು ನೋಡಿಯವರಂತೆ ತಾ ವಿರಬೇಕೆನ್ನುತ್ತಲನಿಶಂ ಬಳಲೀ ಗುರುಯತ್ನಮಾಡಿ ವಿಫಲಾಗಲು ಶ್ರೀ ಹರಿ ನಿನ್ನದೂರುತಿರುವರ್ ದುರುಳರ್41 ಕರ್ಣ ಮುಖರಿಂದಲಿ ಸಂ ಗರದಲ್ಲಿ ಕಾದಿ ಮಡಿದಂ ಬರಿದೇ42 ಜಮದಗ್ನಿ ಪುತ್ರನಿಗೆ ಶಿಷ್ಯನು ಭೀ ಷ್ಮಮಹಾ ಪರಾಕ್ರಮಿಯು ದ್ರೋಣನುತಾಂ ಕಮಲಾಪ್ತಪುತ್ರ ಕಲಿ ಶಲ್ಯ ಮುಖ್ಯರ್ ಭ್ರಮೆಯಿಂದಲನ್ನಕಸುಗಳ್ ತೊರೆದರ್ 43 ಯಮಜಂ ವೃಕೋದರನು ಫಲ್ಗುಣನೂ ಯಮಳರ್ ತವಾಂಫ್ರಿಸ್ಮøತಿಯೇ ಬಲವಾ- ಗಿ ಮಹಾಪದಂಗಳನು ದಾಂಟಿದರೈ ಸುಮಬಾಣನಯ್ಯನೆ ಮಹಾತ್ಮರವರ್ 44 ಹರಿ ನಿನ್ನ ಡಿಂಗರಿಗರಿಗಾಶ್ರಯವೇ ವರಭಾಗ್ಯ ನಿತ್ಯಸುಖವೆನ್ನುತಲೀ ಅರಿದುತ್ತಮರ್ ಬಯಸರೆಂದಿಗು ಪಾ- ಮರರಂತೆ ತುಚ್ಛಗಳ ಸ್ವಪ್ನದೊಳು 45 ಸಲೆ ಚಿನ್ನ ಬೆಳ್ಳಿ ಬೆಲೆ ಹೆಚ್ಚು ಪಟ ಗಳ ಗೃಹಕ್ಷೇತ್ರ ಸುತದಾರ ಧನ- ಗಳ ನಿತ್ಯವೆಂದರಿದು ಲೆಕ್ಕಿಸದೇ ಜಲಜಾಕ್ಷ ನಿನ್ನ ಭಜಿಪರ್ ಸುಜನರ್ 46 ಸುಜನಾಬ್ಧಿ ಚಂದ್ರ ಸುಗುಣಾರ್ಣವ ನೀ ನಿತ್ಯ ನಿರವದ್ಯ ಸ್ವಭಾ ವಜ ಕರ್ಮದಿಂ ಸಕಲ ಪ್ರಾಣಿಗಳೂ ನಿಜಯೋಗ್ಯತೆಯಂತೆ ವರ್ತಿಪುದು 47 ಕರುಣಾನಿಧೇ ಕಮಲಲೋಚನನೆ ಸು- ರರಾಜ ಸೋದರನೆ ಭಾವಜನೈ ಯರಮಾಧಿನಾಥ ಯದುವಂಶ ಭೂ ರಥಾಂಗ ಪಾಣಿಯೆ ಜನಾರ್ದನನೇ 48 ರಘುವಂಶಕೇತು ರವಿಮಂಡಲದೋಳ್ ಭಗವನ್ನಿರಂತರದಿ ನೀನಿರುತೆ ಜಗಕೆಲ್ಲ ಕಾಲದನುಸಾರದಿ ನೀ ನಘನಾಳಿಯಿಂದ ಮಳೆಯಂ ಕೊಡುವೇ 49 ವಿಭುದಾಗ್ರಗಣ್ಯರಹ ಜ್ಞಾನಿಗಳೂ ಶುಭವನ್ನು ಲೋಕಕೆ ಸದಾಚರಿಸಿ ನಭ ಭೂಮಿ ಮಧ್ಯದಲಿ ಕೀರ್ತಿ ಸೌ- ರಭವಾಗಿ ಸ್ಥಾಪಿಸಿ ವಿಮುಕ್ತರಹರ್ 50 ಯೋಗ ಪ್ರವರ್ತನೆಯಲೇ ಸುಖಿಸಿ ರೋಗಾದ್ಯುಪದ್ರಗಳು ಇಲ್ಲದಲೇ ರಾಗಾದಿ ದೋಷಗಳ ಸುಟ್ಟಿರುವರ್ 51 ಮನವಾಕ್ಕು ಕಾಯಗಳೊಳೊಂದೆ ವಿಧಂ ಋಣಮುಖ್ಯ ಸೂತಕಗಳಿಲ್ಲದೆಲೇ ಗುಣವಂತರೆನ್ನಿಸಿಯೇ ಶೋಭಿಸುತಾ ಜನದಲ್ಲಿ ಮೌನದಲಿ ವರ್ತಿಸುವರ್ 52 ನರರೊಳ್ ದಿವೌಕಸರು ಪುಟ್ಟುತಲೀ ಹರಿಭಕ್ತಿಯುಕ್ತರೆನಿಸುತ್ತಲಿಸ- ತ್ವರದಿಂದ ಸಾಧನವ ಮಾಡುತಲೀ<
--------------
ಗುರುರಾಮವಿಠಲ
ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ ಪಂಕಜಾಸನಕುವರ ಮನದ ಶಂಕ ನಾಶಗೈಸಿ ಶೇಷಪ ರ್ಯಂಕಶಯನನ ಪಾದ ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ ಕಠಿಣವೆನ್ನಯ ಕುಟಿಲಮತಿಯ ಜಟಿಲಕಳೆದು ನಿಷ್ಕುಟಿಲ ಮನದೊಳು ವಿಠಲಮೂರ್ತಿಯ ಧೇನಿಸಲು ಹೃ ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1 ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ ನಿರುತ ಶ್ರೀಹರಿಚಾರುಚರಣಸ್ಮರಣೆ ಕರುಣಿಸಿ ಪೊರೆಯೋ ಗುರುವರ ಸುರನದೀಧರ ಪಾರ್ವತೀವರ ಕರಿಗೊರಳ ಕೈಲಾಸಮಂದಿರ2 ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ ಸರ್ಪಗಿರಿ ಶ್ರಿ ವೆಂಕಟೇಶಗೆ ಸರ್ವಭಕ್ತಿ ಸಮರ್ಪಿಸಯ್ಯ ಆಪತ್ತುಹರ ಸಂಪತ್ತುಕರ ಶಾರ್ವರೀಕರಧರ ಶುಭಕರ 3 ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ ಶಂಭು ಶಚಿಪತಿಬಿಂಬ ಗುರುವರ ಸಾಂಬ ಪೊಂಬಸುರಕುವರ ತ್ರ್ಯಂಬಕಾ ತ್ರಿಪುರಾಂತಕ ಶುಕ 4 ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ ನಿರುತ ಹೃದಯಸದನದೊಳನ ವರತ ಉರಗಾದ್ರಿವಾಸ ವಿಠಲನ ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
--------------
ಉರಗಾದ್ರಿವಾಸವಿಠಲದಾಸರು
ಶರಣು ಹೋಗುವೆನಯ್ಯ ನಾನು ಪ ಸಿರಿ ಅಜಭವ ಶಕ್ರ ಸುರಸ್ತೋಮಗಳನೆಲ್ಲ ಸರಸದಿಂದ ಆಳ್ವ ಪರಮಪುರುಷ ಹರಿಗೆ ಶಿರಬಾಗಿ ನಮಿಸುತ ಅ.ಪ. ನಿರುತ ಆನಂದದಿ ಮೆರೆದು ಇರುವಂಥ ನಿರಜ ನಿತ್ಯನು ಆದ ಉರಗನ ಮೇಲ್ವರಗುತ ಪರಮ ಪರಾತ್ಪರ ಪರಮವೇದದ ಸಾರ ಪರಮ ಸದ್ಗುಣ ಪೂರ್ಣ ಪುರುಷಸೂಕ್ತ ವಂದ್ಯ ಪರಿಪರಿ ರೂಪದಿ ಸರ್ವತ್ರ ಇರುವಂಥ ನಿರ್ಗುಣ ನಿರಾಕಾರ ನಿರುಪಮ ನಿಸ್ಸೀಮ ನಿರುತ ತೃಪ್ತನು ಆದ ಸರ್ವಸಾರ ಭೋಕ್ತ ಸರ್ವರ ಬಿಂಬನು ಸರ್ವಗುಣ ಪೂರ್ಣ ಸರ್ವರ ಆಧಾರ ಸರ್ವೇಶ ಸ್ವತಂತ್ರ ಸರ್ವಶಬ್ದ ವಾಚ್ಯ ಸರ್ವರಿಂ ಭಿನ್ನನು ಸರಸಸೃಷ್ಟಿಯ ಮಾಳ್ವ ನೀರಜನಾಭಗೆ ಚರಣವ ಪಿಡಿಯುತ್ತ ಉರುಗಾಯನ ದೇವ ಸಲಹು ಸಲಹೆಂದು 1 ವಾರಿಯೊಳಾಡುವ ಭಾರವಹೊರುವ ಕೋರೆಯತೀಡುವ ಕರುಳಾನು ಬಗೆಯುವ ವರವಟು ಆಗುವ ಪರಶುವ ಪಿಡಿಯುವ ನಾರಿಯ ಹುಡುಕುವ ನಾರಿಯ ಕದಿಯುವ ಬರಿಮೈಯ್ಯ ತೋರುವ ತುರುಗವನೇರುವ ನಾರಿಯು ಆದವ ಭಾರತ ಮಾಡುವ ವರ ಸಾಂಖ್ಯ ಹೇಳುವ ಕರಿಯನು ಪೊರೆಯುವ ಪೋರಗೆ ಒಲಿದವ ವರ ಋಷಭನಾದ ಹರಿ ಯಜ್ಞ ನಾದವ ತರಿವ ರೋಗಂಗಳ ವರಹಂಸ ರೂಪನು ತುರುಗ ವೇಷಧಾರಿ ನಾರಾಯಣ ಮುನಿಯೆ ಗುರು ದತ್ತಾತ್ರೇಯನೆ ಪರಿಸರ ಪರಮಾಪ್ತ ಪೊರೆಯೊ ಮಹಿದಾಸನೆಂದು ಕರವೆತ್ತಿ ಮುಗಿಯುತ 2 ಪಾಪಿಯ ಪೊರೆದವಗೆ ತಾಪ ಇಲ್ಲದವಗೆ ಅಪವರ್ಗದಾತಗೆ ವಿಪನ ಏರಿದವಗೆ ಗೋಪತಿಯಾದವಗೆ ತಾಪವ ಮೆದ್ದವಗೆ ಚಾಪವ ಮುರಿದವಗೆ ಚಪಲ ಇಲ್ಲ ದವಗೆ ಕಪಟರ ವೈರಿಗೆ ಗುಪ್ತದಿ ಇರುವಗೆ ವಿಪ್ರನ ಸಖನಿಗೆ ಅಪ್ರಮೇಯನಿಗೆ ಗೋಪೇರ ವಿಟನಿಗೆ ತಾಪಸ ಪ್ರೀಯಗೆ ವಿಪ್ರಶಿಶು ತಂದವಗೆ ಮುಪ್ಪಿಲ್ಲ ದವಗೆ ತ್ರಿಪುರಾರಿ ಸಖಗೆ ಕೃಪಣ ವತ್ಸಲನಿಗೆ ತಪ್ಪು ಮಾಡದವಗೆ ಆಪ್ತತಮನಿಗೆ ಸಪ್ತ ಶಿವವ್ಯಕ್ತನಿಗೆ ಶ್ರೀಪತಿಯಾದವಗೆ ಕಪಟನಾಟಕ ಪ್ರಭು ಗೋಪಾಲಕೃಷ್ಣಗೆ ಒಪ್ಪಿಸಿ ಸರ್ವಸ್ವ ಅಪ್ಪನೆ ಅಪ್ಪನೆ ತಪ್ಪದೆ ಸಲಹೆಂದು 3 ಅನ್ನವು ಆದವಗೆ ಅನ್ನಾದ ನೆಂಬುವಗೆ ಅನ್ನದ ಖ್ಯಾತನಿಗೆ ಚಿನ್ಮಯ ರೂಪಗೆ ಬೆಣ್ಣೆಯ ಕಳ್ಳಗೆ ಅನಾಥನಾದವಗೆ ಕನಕಮಯನಿಗೆ ಅನಂತರೂಪನಿಗೆ ಉಣ್ಣದೆ ಇರುವವಗೆ ಉಣ್ಣುತ ಉಣಿಸುವವಗೆ ಜ್ಞಾನಿಗಮ್ಯನಿಗೆ ಜ್ಞಾನ ದಾಯಕನಿಗೆ ಗುಣತ್ರಯ ದೂರಗೆ ಭಾನುವ ತಡೆದವಗೆ ಆನತ ಬಂಧುವಿಗೆ ಅನುಪಮನಾದವಗೆ ತನುಮನ ಪ್ರೇರಿಪಗೆ ದಾನವ ವೈರಿಗೆ ತನ್ನಲ್ಲೆ ರಮಿಸುವನಿಗೆ ಮನ್ಮಥ ಪಿತನಿಗೆ ಪೆಣ್ಣಿನ ಪೊರೆದವಗೆ ಅಣುವಿಗೆ ಅಣುವಿಹಗೆ ಘನಕೆ ಘನ ತಮನಿಗೆ ಕಣ್ಣಿಲ್ಲದೆ ನೋಳ್ಪ ಉನ್ನತ ಪ್ರಭುವಿಗೆ ಬೆನ್ನು ಬೀಳುವೆ ನಾನು ಇನ್ನು ಕಾಯೋ ಎಂದು 4 ಹೇಯನಾಗದ ಶೃತಿ ಗೇಯನು ಸುಜನರ ಪ್ರೀಯನು ಸರ್ವರ ಕಾಯುವ ಸುಂದರ ಹಯಮುಖ ಸರ್ವದ ಪ್ರಾಯದಿ ಮೆರೆಯುವ ಗಾಯನ ಪ್ರಿಯನಾದ ಮಾಯಾರಮಣ ಭಾವ ಮಾಯೆ ಹರಿಸಿ ಮುಕ್ತಿ ಭಾಗ್ಯ ಭಕ್ತರಿಗೀವ ತೋಯಜಾಂಬಕ ಸುರ ನಾಯಕರಿಗೆ ಭಕ್ತಿ ತೋಯದಿ ಮುಳುಗಿಪ ಶ್ರೀಯರಸಾಭಯ ದಾಯಕ ಗುರು ಮಧ್ವ ರಾಯರ ಪ್ರಿಯನಾದ ಜೇಯ ಜಯಮುನಿ ವಾಯುವಿನ ಅಂತರದಿ ನವನೀತ ಧರಿಸಿರ್ಪ ತಾಂಡವ ಸಿರಿಕೃಷ್ಣ ವಿಠಲ ರಾಯನಿಗೆ ಕಾಯ ವಾಚಮನದಿ ಗೈಯ್ಯುವ ಸಕಲವನು ಈಯುತ ನಮಿಸುತ ಜೀಯನೆ ಜೀಯನೆ ಕಾಯಯ್ಯ ಕಾಯೆಂದು 5
--------------
ಕೃಷ್ಣವಿಠಲದಾಸರು
ಶಿವರಗಳೆ ಉದಯದಲೆದ್ದು ಸದಾಶಿವ ಎನ್ನಿ |ಅದರಿಂದಲಿ ಸದ್ಗತಿಗಿರುವದು ಒಂದೇ ಹಾದಿ |ನಾನಾ ಗ್ರಂಥಗಳ್ಯಾತಕ ಓದೀ |ಓದಿದರೋದಲಿ ಬೇಕಧ್ಯಾತ್ಮಾ ||ಸಾಧಿಸಿ ಬರುವನು ಶಿವ ಸರ್ವೋತ್ತಮಾಸರ್ವೋತ್ತಮ ತಿಳಿದರೆ ಸಾಕು |ಅನೇಕ ಶಾಸ್ತ್ರಗಳೇತಕೆ ಬೇಕು |ಬೇಕೆಂಬೋದೇ ಬಿಡುವದೆ ಪರಮಾರ್ಥಲೋಕದ ಪರಿಯಲ್ಲಿರುವದೆ ಸ್ವಾರ್ಥ |ಸ್ವಾರ್ಥಕೆ ಪರಮಾರ್ಥಕೆ ಬಹು ದೂರಾ |ಎರಡೂ ಸಮನಿಸಿದವನೇ ಧೀರಾ ||ಧೀರ ಉದಾರಗೆ ಆರ ಹಂಗಿಲ್ಲಾ |ಸೂರೆಗೊಂಡನು ಮೂಜಗವೆಲ್ಲಾ |ಎಲ್ಲರಿಗೆ ತಾ ಬಲು ಕಿರಿದಾಗಿ |ಬಲ್ಲತನದ ಬಡಿವಾರವ3ೀಗಿನೀಗಿ ನಿಶ್ಚಿಂತ್ಯಾದರ ತ್ಯಾಗಿ ||ತ್ಯಾಗವು ಬಲಿತರೆ ಅವನೇ ಯೋಗಿಯೋಗಿಗೆ ಮೂಲಾ ಐಕ್ಯದ ಮಾಟಾ |ಬೇಗನೆ ತಿಳಿಯದು ಜೀವ ಶಿವ ಕೂಟಾ |ಕೂಟವ ತಿಳಿಯದೆ ಯಾತರ ಜ್ಞಾನಿ |ಚಾಟಕನಾದರೆ ಜ್ಞಾನಕೆ ಹಾನಿಹಾನಿಗೆ ಹಾನಿ ತಂದವ ಜಾಣಾಸ್ವಾನುಭವದಲಿದ್ದವ ಪ್ರತಿಗಾಣಾ |ಪ್ರತಿಗಾಣನು ಶಿವರತಿಯುಳ್ಳವನು |ಗತಿ ಬಯಸುವನು ಗುರು ಚರಣವನು |ಚರಣಗಳಲ್ಲಿ ವರಗಳು ಉಂಟು |ಗುರುಹಿರಿಯರಿಗೆ ಶರಣು ಹೋಗಿರಿ |ಪರಿಣಾಮದ ಘೋರಿಗೆ ಪರಿಪರಿ ಸ್ತುತಿಗಳು |ಪರಿ ಪರಿಸ್ತುತಿಗೆ ಪರಿಪರಿ ಪೂಜೀ |ಪರಿಪರಿ ಪೂಜಿಗೆ ಪರಿಪರಿ ವಾಜೀ ||ವಾಜಿ ಒಂದಾದರೆ ಸಹಜವೆ ತಾನು |ಮೂಜಗದೊಳಗಿದು ಸೋಜಿಗವೇನು |ಸೋಜಿಗವೆಂಬದು ಶ್ರಮದಲಿ ಮಾಯಾ ಕಂಟಕ ಕಾಕು ಭಂಗ ಬ್ರಹ್ಮಜ್ಞಾನ ಯೋಗಿ ಬ್ರಹ್ಮಜ್ಞಾನ ಬ್ರಹ್ಮಜ್ಞಾನ |ಸಿದ್ಧಗುರು ತ್ರಿಪುರಾಂತಕ ಧ್ಯಾನ |ಪ್ರಕಾಶ ಮುಖದಲಿ ಹೇಳಿದ ರಗಳಿ |ಶಿವ ಸಾಯೋಜ್ಯವೆ ಬೈಲನೆ ಹೊಗಳಿ ||
--------------
ನರಸಿಂಹ
ಶೌರಿ ಬಾರೋ ಶ್ರೀಹರಿ ಪ ಬಾರೋ ಬಾರೋ ಕರುಣಾನಿಧಿ ನಿನ್ನನು ಬಾರಿ ಬಾರಿಗೆ ಸಿರಬಾಗಿ ನಮಿಸುವೆನು ಅ.ಪ ಮಾರನಯ್ಯನೆ ಮಂಗಳರೂಪ ತೋರೊ ಬೇಗನೆ ಸಾರಸಾಕ್ಷ ಸನ್ಮಂಗಳ ಮಹಿಮನೆ ತೋರೋ ನಿನ್ನ ಮಹಾ ಮೀನರೂಪವನು 1 ಸುಂದರಾನನ ಚಂದಿರವದನ ಮಂದಹಾಸನೆ ದುರಿತ ಕಳೆವಂದದಿ ಬೆನ್ನಿಲಿ ಮಂದರವೆತ್ತಿದ2 ಆದಿದೈತ್ಯನು ಭೂದೇವಿಯಪಹಾರ ಗೈದನು ಆ ದಿತಿಜರ ಸಂಹಾರ ಮಾಡಲು ನೆಲ ವರಾಹ ಬೇಗ 3 ಕಂದನಾಡಿದ ಆ ನುಡಿ ಕೇಳಿಯಾನಂದ ತಾಳಿದ ಮಂದರೋದ್ಧರ ಮುಚುಕುಂದ ವರದ ಸುರ- ಗಂಗೆಯ ಪಿತ ನರಸಿಂಗರೂಪದಿ 4 ಬಾಲರೂಪದಿ ಬೇಡಿದ ದಾನ ಭೂಮಿ ಮಾತ್ರದಿ ಬೇಡಿದುದನೆ ಕೊಟ್ಟಾಮಹೀಪಾಲನ ದೂಡಿ ಪಾತಾಳಕ್ಕೆ ಬಾಗಿಲ ಕಾಯ್ದೆ 5 ಶೂರ ರಾಜರ ಸಂಹಾರ ಮಾಡಿ ತೋರಿ ಶೌರ್ಯವ ಸಾಗರಶಯನಗೆ ತೋರಿ ಪರಾಕ್ರಮ ಶೂಲಿಯ ಧನುವಿತ್ತೆ ರೇಣುಕಾತ್ಮಜ 6 ವಾನರಾಧಿಪ ಹಗಲಿರುಳು ಭಕ್ತಿಮಾಡಿ ಧ್ಯಾನಿಪ ಶ್ರೀ ಮಾನಿನಿಯಳ ಕೈಪಿಡಿಯುತ ಅಯೋಧ್ಯದಿ ಮೆರೆದ ಶ್ರೀರಾಮ ಚಂದಿರನೆ 7 ಪಾಂಡುನಂದನ ಮಾಡಿದ ನಿನ್ನ ಬಂಡಿ ಬೋವನ ಸಂದೇಹಿಸದಲೆ ಅಂದು ಅವರ ಮನೆ ಎಂಜಲ ಬಳಿದ ಮುಕುಂದನೆ ಬೇಗದಿ 8 ಮಂಗಳಾತ್ಮಕ ತ್ರಿಪುರರ ಮದ ಭಂಗನಾಶಕ ಮಂಗಳಮಹಿಮ ವಿಹಂಗವಾಹನ ಸುರ ಸಂಗೀತಲೋಲ ಕೃಪಾಂಗ ದಯಾನಿಧೆ 9 ತೇಜಿಯನೇರುತ ಸುಜನರು ಮಾಳ್ಪಪೂಜೆಗೊಳ್ಳುತ ರಾಜೀವಾಕ್ಷ ರಕ್ಕಸ ಸಂಹಾರಕ ಅ- ಪಾರ ಮಹಿಮ ರಥವೇರುತ ತವಕದಿ 10 ಕಂಜಲೋಚನ ಕಮಲಾಯತಾಕ್ಷ ಮಂಜುಭೂಷಣ ಕಂಜದಳಾಂಬಕ ಕಮಲನಾಭ ವಿಠ್ಠಲಝಗಝಗಿಸುವ ಮದ್ಹøದಯ ಮಂಟಪಕೇ 11
--------------
ನಿಡಗುರುಕಿ ಜೀವೂಬಾಯಿ
ಶ್ರೀ ಮಹಾದೇವದೇವಗೆಸೋಮಶೇಖರನಿಗೆವಾಮಾಂಕದೊಳು ಪಾರ್ವತಿಯಪ್ರೇಮದಿಂದ ತಾಳ್ದವಗೆಹೇಮದಾರತಿಯ ಬೆಳಗಿರೆ 1 ಮಾರಮರ್ದನಗೆ ತ್ರಿಪು-ರಾರಿಗೆ ಶ್ರೀಕರನಿಗೆಶಾರದೆ ಲಕ್ಷ್ಮಿಯರು ವೈ-ಯಾರದಿಂದ ಪಾಡುತಮೇರುವೆಯಾರತಿಯ ಬೆಳಗಿರೆ 2 ಕರುಣಾಸಾಗರಗೆ ಶ್ರೀ-ಕರಗೆ ಸರ್ವೇಶಗೆಪರಮ ಪಾವನಗೆಪಾರ್ವತಿಗೆ ವನಿತೆಯರುಕುರುಜಿನಾರತಿಯ ಬೆಳಗಿರೆ 3 ದೇವದುಂದುಭಿ ಮೊಳಗೆದೇವತೆಗಳೆಲ್ಲಾ ನೆರೆದುಹೂವಿನ ಮಳೆಗರೆಯೆಭಾವಕಿಯರು ಮಾದೇವಗೆಹೂವಿನಾರತಿಯ ಬೆಳಗಿರೆ 4 ಪಂಕಜಾಕ್ಷಿಯರು ಕೂಡಿಭೋಂಕನೆ ಗಾನವ ಪಾಡಿಕಂಕಣ ಕಡಗ ಝಣ ಝಣರೆನೆ ಶ್ರೀರಾಮೇಶಗೆಕುಂಕುಮದಾರತಿಯ ಬೆಳಗಿರೆ5
--------------
ಕೆಳದಿ ವೆಂಕಣ್ಣ ಕವಿ
ಶ್ರೀ ವಿಷ್ಣ್ವಾಷ್ಟಕ (ಪಾಲಯಾಚ್ಯುತ ಎಂಬತೆ) ಕಾವುದೋ ಹರಿ | ಕಾವುದೋ ಹರಿಕಾವುದೊ ಕರುಣಾರ್ಣವ ಪ ಜೀವರಂತರ ಬಾಹ್ಯ ನೆಲಸಿಹಶ್ರೀವರಾ ಶ್ರೀ ಭೂಧರಾ ಅ.ಪ. ನಿತ್ಯ ನೂತನ | ನಿರ್ವಿಕಾರನೆ | ಸತ್ಯನೆ ನೀ ನಿತ್ಯನೇಭೃತ್ಯ ವತ್ಸಲ | ಭವವನಾನಲ | ಕೃತ್ಯನೆ ದಯ ಪೂರ್ಣನೇ ||ಮೃತ್ಯು ವರ್ಜಿತ | ಪ್ರತ್ಯಗಾತ್ಮನೆ | ಕರ್ತನೇ ನಿರ್ಲಿಪ್ತನೇಸತ್ಯ ಕಾಮ ಶರಣ ಶಾಶ್ವತ | ಸ್ತುತ್ಯನೇ ಜಗ ವ್ಯಾಪ್ತನೇ 1 ಅಮಿತ ತೇಜನೆ | ಸರ್ವರನ ಸಲಹೂವನೇ ||ಸರ್ವ ಶಬ್ದ ಪ್ರವೃತಿ ಕಾರಣ | ಸರ್ವಗುಣ ಪರಿಪೂರ್ಣನೆಸರ್ವತೊಮುಖ ಬಾಹು ಚರಣನೆ | ಶರ್ವ ವಂದ್ಯ ಸುಮಹಿಮನೆ2 ವೀತಭಯ ವಿಶ್ವೇಶ ವಿಧಿಪಿತ | ಮಾತುಳಾಂತಕ ಪಾಲಕಾಭೂತ ಭಾವನನಂತ ಭಾಸ್ಕರ | ದ್ಯೋತಕ ಮಹಕೌತುಕ ||ಗೌತಮ ಪ್ರಿಯ ಮಡದಿ ಕಾಯ್ದಾ | ನಾಥ ರಕ್ಷಕ ಶಿಕ್ಷಕಾಖ್ಯಾತ ರಾವಣ ಕುಂಭಕರ್ಣನ | ಹಂತಕ ವಿಶ್ವಾಸಕ 3 ಮಣಿ ಭವ ಮೋಚಕಅಣು ಮಹದ್ಗತ ವ್ಯಾಪ್ಯವ್ಯಾಪಕ | ಸಾಧಕ ಖಲ ಬಾಧಕ |ತೃಣ ಮೊದಲು ಬ್ರಹ್ಮಾಂತ ಜೀವರ | ಪಾಲಕ ಪರಿಪೋಷಕ 4 ಮೀನ ಕಮಠನೆ ಕೋಲ ನರಹರಿ | ವಾಮನಾ ಸುಭಾಮನಾರೇಣುಕಾತ್ಮಜ ರಾವಣಾಂತಕ | ದಾಶರಥಿ ನರ ಸಾರಥೀ ||ಧೇನುಕಾಸುರ ಮಥನ ತ್ರಿಪುರವ | ಹಾನಿಗೈದನೆ ಬುದ್ಧನೆಮಾನುಷಾಕೃತಿಲ್ಹಯವನೇರಿದ | ಕಲ್ಕಿಯೇ ಕಲಹ ಪ್ರಿಯೆ 5 ಉದಿತ ಭಾಸ್ಕರನಂತ ತೇಜನೆ | ಉದರ ನಾಮಕ ಪಾಚಕಸುದತಿಯರು ಹದಿನಾರು ಸಾವಿರ | ವಾಳ್ದನೇ ಬ್ರಹ್ಮಚರ್ಯನೇ||ಮಧು ವಿರೋಧಿಯೆ ಮಧ್ವಮಾನಸ | ಮಂದಿರ ಬಹುಸುಂದರಹೃದಯದಲಿ ನೀ ಬದಿಗನೆನಿಸುತ | ಪೂಜಿತ ಸುರ ಪೂಜಿತ 6 ಸೃಷ್ಟಿ ಸ್ಥಿತಿ ಮೊದಲಾದ ಅಷ್ಟಕ | ಕರ್ತೃಕ ಪ್ರಾವರ್ತಕಅಷ್ಟದಳ ಸತ್ಕಮಲಧಿಷ್ಠಿತ | ಪ್ರಾಜ್ಞಾನೇ ವಿಶ್ವಜ್ಞನೇಜಿಷ್ಣು ಸಖ ಶ್ರೀಕೃಷ್ಣ ಕೃಷ್ಣೆಯ | ಭೀಷ್ಟದಾ ಶಿಷ್ಟೇಷ್ಟದಾಪುಷ್ಟ ಮಹಿಮಾ ಪ್ರವಿಷ್ಟ ರೂಪನ | ವಿಷ್ಟನೇ ನಿವಿಷ್ಟನೇ 7 ಗೋವಿದಾಂಪತಿ ಗೋವಪಾಲಕ | ಮಾವ ಮಾರಕ ಕಾರಕ ||ಭೂವರಾಹ ಸುಭಾವಜಾರಿಜ | ಷಣ್ಮುಖ ಪರಿಪಾಲಕ ||ಗೋವಿಂದ ಗುರು ಗೋವಿಂದವಿಠಲ | ಗೋವ್ಗಳ್ವರ್ಧನ ಗಿರಿಧರಪಾವಮಾನಿಯ ಪ್ರೀಯ ಸಿರಿಧರ | ಕಾವ ಶರಣರ ಭವಹರಾ 8|
--------------
ಗುರುಗೋವಿಂದವಿಠಲರು
ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27
--------------
ಅಂಬಾಬಾಯಿ
ಶ್ರೀ ವೆಂಕಟೇಶ ಸ್ತೋತ್ರ(2) ವೈಕುಂಠವಾಸ ಹರಿ ಶ್ರೀ ಕಂಠನುತ ನಿನ್ನ ಸಾಕಾರರೂಪ ತೋರೋ ಯಾಕಿಂತು ನಿರ್ದಯವು ಈ ಕುಮತಿ ಮೇಲಿನ್ನು ನೀ ಕರುಣಿಸೀಗ ಕಾಯೊ 1 ವಾಕು ಲಾಲಿಸುತ ನೀ ಬೇಕೆಂದು ಬೆಟ್ಟದಲ್ಲಿ ಲೋಕದ ಜನರನ್ನು ಸಾಕುತ್ತ ನಿಂತಿರುವ ಆಕಳ ಕಾಯ್ದ ದೇವಾ 2 ಕನಸು ಮನಸೀನಲ್ಲಿ ವನಜಾಕ್ಷ ನಿನ ದಿವ್ಯ ಘನರೂಪವನ್ನೆ ತೋರೊ ಅನುರಾಗದಿಂದ ಸಲಹೋ 3 ವೆಂಕಟಗಿರಿನಿಲಯ ಮಂಕುಮತಿಯ ಬಿಡಿಸಿ ಸಂಕಟಗಳನೆ ಹರಿಸೊ ಶಂಖಚಕ್ರಾಂಕಿತನೆ ಪಂಕಜಪಾದ ಮನ ಪಂಕಜದೊಳಗೆ ತೋರೊ 4 ಪದ್ಮಾಕ್ಷ ಪದ್ಮಮುಖ ಪದ್ಮಾನಾಭನೆ ನಿನ್ನ ಪದ್ಮ ಪಾದವೆ ಗತಿಯೊ ಪದ್ಮಾವತಿಪ್ರಿಯ ಪದ್ಮಹಸ್ತಾನೆ ನಿನ್ನ ಪದ್ಮಾದಿ ನಿನ್ನ ತೋರೊ 5 ಸೃಷ್ಟಿ ಸ್ಥಿತಿ ಲಯಕೆ ಕರ್ತಾನೆ ಎನ್ನ ಮನ ದಿಷ್ಟಾವ ಸಲಿಸಿ ಕಾಯೋ ಥಟ್ಟಾನೆ ಮನಕೆ ತೋರೊ 6 ತತ್ವಾಧಿಪತಿಗಳೊಳು ವ್ಯಾಪ್ತಾನಾಗಿರುತಿರ್ದು ಕರ್ಮ ಮಾಳ್ಪೆ ಎತ್ತಾ ನೋಡಿದರು ಸುರರರ್ಥಿಯಿಂ ಸ್ತುತಿಸುವರೊ ನಿತ್ಯಾಮೂರುತಿ ನೀ ಎಂದೂ 7 ನಿಗಮಾದಿ ವೇದದಿಂ ಬಗೆಬಾಗೆ ಸ್ತುತಿಸಿ ಕೊಂ ಬಗಣೀತ ಮಹಿಮ ದೇವಾ ಖಗರಾಜ ವಾಹನನೆ ನಗೆಮೊಗದ ಚೆಲುವ ಪ ನ್ನಗಶಾಯಿ ಸಲಹೊ ಎನ್ನ 8 ನಿತ್ಯಾ ತೃಪ್ತಾನೆ ಹರಿ ನಿತ್ಯಾ ಪ್ರಾಪ್ತಾನೆ ಸಿರಿ ನಿತ್ಯಾ ವಿಯೊಗಿ ದೇವಾ ನಿತ್ಯ ನಿರ್ವೀಕಾರ ನಿತ್ಯಾ ಕಲ್ಯಾಣಪೂರ್ಣ 9 ಜೀವಾಂತರಾತ್ಮಕನೆ ಜೀವಾ ನಿಯಾಮಕನೆ ಜೀವಾದಿ ಭಿನ್ನ ದೇವಾ ಜೀವೇಶ ಜೀವರಿಂ ಸೇವ್ಯಾನೆಂದೆನಿಪ್ಪೆ ಜೀವಾರ ಕರ್ಮಕರ್ತ 10 ಸತ್ವಾರಜೋತಮದಿ ನಿತ್ಯಾ ಸೃಷ್ಟೀಸುತಲಿ ವ್ಯಾಪ್ತಾನಾಗಿರುವೆ ಜಗದಿ ಸತ್ಯಾಮೂರುತಿ ಜಗತ್ಕರ್ತಾ ಕಾರಣರೂಪ ಸತ್ಯಾಧಿಪತಿಯ ವಂದ್ಯ 11 ಆದಿಯಲಿ ಅಸುರ ತಾ ವೇದ ಕದ್ದೊಯ್ಯೆ ಛೇದೀಸಿ ತಮನ ಕೊಂದೂ ನಿಗಮ ತಂದಾದರದಿ ಸುತಗಿತ್ತೆ ಶ್ರೀಧರನೆ ಮಚ್ಛರೂಪಿ 12 ಸುರರೆಲ್ಲ ಕಂಗೆಟ್ಟು ಮೊರೆ ಇಡಲು ನಿನ್ನ ಬಲು ಕರುಣೆಯಿಂದಾಲಿ ಬಂದೂ ಗಿರಿ ಎತ್ತಿ ಅಮೃತವ ಸುರರೀಗೆ ತಂದಿತ್ತ ವರ ಕೂರ್ಮರೂಪಿ ಸಲಹೊ 13 ಆದಿಹಿರಣ್ಯಾಕ್ಷ ಮೇದಿನಿಯ ಕದ್ದೊಯ್ಯೆ ಛೇದೀಸಿ ಅವನ ಕಾಯಾ ಆದರಿಸಿ ಧರಣಿಯನು ಆ ದಿವಿಜರಿಗೆ ಇತ್ತೆ ವರಾಹ ಕಾಯೊ 14 ದುಷ್ಟಾದಾನವ ಸುತನು ಅಟ್ಟೂಳಿಪಡಿಸುತಿರೆ ಸೃಷ್ಟೀಶ ಪೊರೆಯೊ ಎನಲು ಪುಟ್ಟಿ ನೀ ಸ್ಥಂಭದಲಿ ಕುಟ್ಟೀ ಅಸುರನನ್ನು ಪುಟ್ಟಾನ ಕಾಯ್ದ ನೃಹರಿ 15 ಇಂದ್ರಾಲೋಕಾವನು ಬಲೀಂದ್ರಾನಾಕ್ರಮಿಸಿರಲು ಪೇಂದ್ರಾ ನೀನಾಗಿ ಬಂದೂ ಇಂದ್ರಾರಿಗೇಸುತಲ ಚಂದಾದಿತ್ತು ನೀ ನಿಂದ್ರಾಗೆ ಸ್ವರ್ಗವಿತ್ತೆ 16 ಪಿತನ ಆಜ್ಞೇಗೆ ಪತಿವ್ರತೆ ಮಾತೆ ಶಿರವಳಿದು ಮತಿವಂತನೆನಿಸಿ ಮೆರೆದೇ ಖತಿಯಿಂದ ಕ್ಷತ್ರಿಕುಲ ಹತಗೈಸಿ ಮೆರೆದ ಅ ಪ್ರತಿ ಭಾರ್ಗವಾನೆ ಕಾಯೋ 17 ಸೇತು ಬಂಧನಗೈದು ಖ್ಯಾತ ರಾವಣನೊರಸಿ ಸೀತೇಯ ತಂದ ರಾಮಾ ಮಾತೆ ವಚನಕಾಯ್ದೆ ವಾತಾತ್ಮಜನ ಪೊರೆದೆ ಪ್ರೀತಿಯಿಂದೆನ್ನ ಕಾಯೊ 18 ವನದಲ್ಲಿ ನಿಂತು ಘನಧ್ವನಿಯಿಂದ ಕೊಳಲೂದಿ ವನಜಾಕ್ಷಿಯರನೆ ಕಾಯ್ದೆ ಮುನಿವಂದ್ಯ ಶ್ರೀ ಕೃಷ್ಣ ಮುನಿನಾರದಗೊಲಿದೆ ಸನಕಾದಿ ವಂದ್ಯ ಸಲಹೋ 19 ತ್ರಿಪುರಾಲಲನೆಯಾರ ವ್ರತಭಂಗವನೆಗೈದು ನಿಪುಣಾನೆಂದೆನಿಸಿ ಮೆರೆದೆ ಬುದ್ಧ ತ್ರಿಪುರಾರಿ ವಂದ್ಯ ಹರಿ ಕೃಪೆಮಾಡಿ ಸಲಹೊ ಎನ್ನ 20 ಕಲಿಬಾಧೆ ವೆಗ್ಗಳಿಸೆ ಛಲದಿಂದ ದುಷ್ಟರನು ತಲೆಯಾ ಚೆಂಡಾಡಿ ಮೆರೆದೆ ಬಲವಂತ ಹಯವೇರಿ ಕಲಿದೈತ್ಯರನು ಕೊಂದೆ ನಳಿನಾಕ್ಷ ಕಲ್ಕಿ ಕಾಯೊ 21 ಭಕ್ತಾವತ್ಸಲನಾಗಿ ಮುಕ್ತಾಜೀವರ ಕಾಯ್ವೆ ಶಕ್ತಾವಂತನೆ ಸ್ವಾಮಿ ಮುಕ್ತೀದಾಯಕ ನೀನೆ ಮುಕ್ತಾಶ್ರಯನು ನೀನೆ ಮುಕ್ತಾರಿಗೊಡೆಯ ನೀನೆ 22 ಬಂದೇಯೊ ಭಕ್ತರನು ಚಂದಾದಿಂದಲಿ ಪೊರೆಯ ಬೇ ಕೆಂದೂ ನೀ ನಾಗಗಿರಿಗೆ ನಂದಾಕಂದಾನೆ ಹರಿ ಇಂದಿರೆಯರಸ ಬಹು ಸುಂದಾರ ಶ್ರೀನಿವಾಸ 23 ಹಿಂದೇ ಮಾಡೀದ ಪುಣ್ಯ ಬಂದೂ ತಾ ಒದಗಿಗೋ ವಿಂದಾನ ಗಿರಿಯ ಯಾತ್ರೇ ಸಂದೀಸೆ ವೇಂಕಟನ ಸಂದಾರುಶನದಿಂದ ದುರಿತ 24 ಜಯ ಗುರುಗಳಂತರ್ಯ ಜಯ ನಾಗಶಯನ ಹರೆ ಜಯ ವೆಂಕಟಾದ್ರಿನಿಲಯ ಜಯ ತಂದೆ ಮುದ್ದುಮೋಹನ ದಾಸವರದ ಜಯ ಪದ್ಮನಾಭ ಜಯ ಭೋ 25 ಸ್ವಾಮೀ ಕಾಸಾರದತಿ ಪ್ರೇಮಾದಿ ನೆಲಸಿ ಸುರ ಕಾಮೀತವೀವ ಪ್ರಭುವೇ ಸ್ವಾಮಿ ಶ್ರೀ ವೇಂಕಟನೆ ನೇಮಾದಿಂದಲಿ ಭಜಿಪೆ ಕಾಮೀತವೀಯೊ ದೇವಾ 26 ಇಷ್ಟೂ ಬಿನ್ನಪವನ್ನು ಕೃಷ್ಣಾಮೂರುತಿ ಕೇಳಿ ಕಷ್ಟಾವ ಬಿಡಿಸಿ ಕಾಯೋ ದಿಟ್ಟಾ ಶ್ರೀ ಗೋಪಾಲಕೃಷ್ಣವಿಠ್ಠಾಲಾನೆ ಶ್ರೇಷ್ಠಾ ಶ್ರೀ ಗುರುವರದನೇ 27 ಸೀತಾಪತಿವಿಠಲ ದಾಸಳ ನಿರ್ಯಾಣ ಪದ 266 ಮಾಧವನಾ ಪುರ ಸೇರಲು ಬೇಗ ಪ. ಪುಟ್ಟಿದಾರಭ್ಯದಿ ನಿಷ್ಟೆನೇಮದೊಳಿದ್ದು ಕಷ್ಟಪರಂಪರೆ ಸಹಿಸುತ ಜಗದಿ ಹರಿಯ ಕರುಣದಿ ಗುರುಕೃಪೆ ಪಡೆದಿ 1 ಹಿರಿಯೂರೆನ್ನುವ ಪುರ ವರ ವೇದಾವತಿ ತೀರ ಪರಮ ಸಾತ್ವಿಕರಲ್ಲಿ ಜನುಮ ತಳೆದಿ ತುಳಸಿಯ ವರದಿ ಮುದ್ದಿನಿಂ ಬೆಳೆದಿ 2 ಶಿಷ್ಟ ಸಂಪ್ರದಾಯ ಕಟ್ಟಿನೊಳಗೆ ನಿನ ಗಷ್ಟಮ ವರುಷದಿ ಮದುವೆಯ ಮಾಡಿ ಹರುಷವಗೂಡಿ ಹರಿಯ ಕೊಂಡಾಡಿ 3 ಸತಿ ರುಕ್ಮಿಣೀಬಾಯಿ ಹೆಸರಿನಿಂ ಬಾಳ್ವೆಯ ಬಹು ಅಲ್ಪಕಾಲ ಕೊಟ್ಟನೆ ಸಿರಿಲೋಲ ಮುಸುಕಿತು ಮಾಯಜಾಲ 4 ಸಂಸಾರ ಕೈಕೊಂಡು ವಂಶಕೊಬ್ಬನ ಪಡೆದು ಕಂಸಾರಿ ಕರುಣದಿ ಇರುತಿರೆ ನೀನು ವಿಧಿ ತಂದೊಡ್ಡಿದನು 5 ಎರಡು ವರ್ಷದ ಮಗುವ ಕರದಲ್ಲಿ ಕೈಕೊಂಡು ಪರಿಪರಿ ಕಷ್ಟದಿ ಶಿಶುವ ಬೆಳೆಸಿದೆ ವಿದ್ಯೆ ಕಲಿಸಿದೆ ಪುತ್ರಗ್ಹರಸಿದೆ 6 ಒಬ್ಬ ಆ ಮಗನರ್ಥಿ ಸಂಸಾರವನೆ ಕಂಡು ಉಬ್ಬಿ ಹರುಷಾದಲ್ಲಿ ಇರುತಿರೆ ನೀನು ಮೊಮ್ಮಕ್ಕಳನು ಪಡೆದೆ ನಾಲ್ವರನು 7 ಘಟಿಸುತ ಸ್ವಪ್ನದಿ ಸೇವೆಗೈಯ್ಯೆಂದು ಅಭಯವನಂದು ಕೊಡಲು ದಯಸಿಂಧು 8 ಮರುದಿನ ಮನೆಯಲ್ಲೆ ಭರದಿ ಸೇವೆಯ ಕೊಂಡು ಹರಿವಾಯುಗಳನಿಟ್ಟು ಸುತ್ತುವರಿಯುತ್ತ ಎಡವಿ ಬೀಳುತ್ತ ಪ್ರದಕ್ಷಿಣೆ ಬರುತಾ 9 ಒಲಿದು ಆ ಭಕ್ತಿಗೆ ವರನೇತ್ರವಿತ್ತನು ನಳಿನನಾಭನ ಭಕ್ತ ಘಟಿಕಾಚಲನಿಲಯ ಭಾರತಿಪ್ರೀಯ ದಿವಿಜರ ಒಡೆಯ 10 ಭಕ್ತಿ ವಿರಕ್ತಿ ಜ್ಞಾನವು ಚಿತ್ತದಿ ಮೂಡಿ ಸೋತ್ತಮರಾದ ಶ್ರೀ ವಿಬುಧರ ದಯದಿ ಮೋಕ್ಷಸಾಧನದಿ ದಿನಗಳ ಕಳೆದಿ 11 ಶ್ರವಣ ಕೀರ್ತನ ಸ್ಮರಣೆ ಮನನಾದಿಗಳನೆಲ್ಲ ತವಕದಿ ಕೈಕೊಂಡು ಮೋದದಿ ಮೆರೆದಿ ಕಷ್ಟವ ಮೆರೆದಿ ಹರಿಗುರು ದಯದಿ 12 ಪ್ರಥಮ ಯಾಮದಲೆದ್ದು ಜಿತಮನದಿಂದ ಶ್ರೀ ಪತಿಯ ಸ್ತೋತ್ರಗಳನ್ನು ವದನದಿ ಸತತ ಪರಿಯಂತ 13 ಉಚ್ಛಸ್ವರದಿ ನೀನು ಪಾಡಿದ್ಹಾಡುಗಳಿಂದು ಅಚ್ಚಳಿಯದೆ ನಮ್ಮ ಸ್ಮರಣೆಯೊಳ್ನಿಂತು ಹರುಷವನಾಂತು ಮರೆಯುವುದೆಂತು 14 ವೃದ್ಧಾಪ್ಯ ತಲೆದೋರೆ ಇದ್ದೊಬ್ಬ ಪುತ್ರನು ಪದ್ಮನಾಭನ ಪುರ ಸೇರಿ ನಿನ್ನಗಲಿ ದುಃಖದಿ ಬಳಲಿ ತೊಳಲಿದೆ ಬಳಲಿ 15 ಪೌತ್ರರಿಬ್ಬರು ನಿನ್ನ ಹೆತ್ತಮ್ಮನಂದದಿ ಚಿತ್ತದಿ ತಿಳಿದಿನ್ನು ಸಲಹುತ್ತಿರಲು ಹರಿದಯ ಬರಲು ದುಃಖ ಮರೆಯಲು 16 ಕಲ್ಯಾಣನಗರದಿ ಕಿರಿಯ ಮೊಮ್ಮಗನಿರೆ ಆಹ್ಲಾದದಿಂದ ನೀನವನಲ್ಲಿ ಇರಲು ಸದ್ಗುರು ಬರಲು ಜ್ಞಾನವೆರೆಯಲು 17 ಹರಿದಾಸಕೂಟದ ವರ ಅಂಕಿತವ ಕೊಂಡು ಗುರುಕರುಣವ ಪೊಂದಿ ನೀ ನಮಗೆಲ್ಲ ಸನ್ಮಾರ್ಗಕ್ಕೆಲ್ಲ ಮೊದಲಾದೆಯಲ್ಲ 18 ಶ್ರೀ ತಂದೆ ಮುದ್ದುಮೋಹನದಾಸರ ದಯದಿ ಸೀತಾಪತಿವಿಠ್ಠಲನ್ನ ಒಲಿಸಿದೆ ಧ್ಯಾನದೋಳ್ತಂದೆ ಆನಂದಪಡೆದೆ 19 ಕಂಚಿ ಕಾಳಹಸ್ತಿ ಶ್ರೀ ರಂಗಯಾತ್ರೆಯ ಸಂಚಿಂತನೇಯಿಂದ ಗೈದೆಯೆ ನೀನು ಗಳಿಸಿದೆ ಇನ್ನು ಭಕುತಿಯ ಪೊನ್ನು 20 ಉಡುಪಿ ಮಂತ್ರಾಲಯ ಸೇತು ರಾಮೇಶ್ವರ ಕಡು ಭಕ್ತಿಯಲಿ ತಿರುಪತಿ ಕ್ಷೇತ್ರ ಚರಿಸಿ ಕಷ್ಟವ ಸಹಿಸಿ ಶ್ರೀ ಹರಿಗೆ ಅರ್ಪಿಸಿ 21 ಕಡುಕೃಪೆಯಿಂದಂದು ಕಣ್ಣನ್ನೆ ಕೊಟ್ಟಂತ ಮೃಡಪಿತ ಘಟಿಕಾಚಲೇಶನ್ನ ಕೂಡಿ ಕಣ್ತುಂಬ ನೋಡಿ ತನುವನೀಡಾಡಿ 22 ಅಂತರಂಗದ ಬಿಂಬ ಸರ್ವಾಂತರ್ಯಾಮಿ ಎಂ ತೆಂಬಂಥ ಚಿಂತನೆ ಸಂತತಗೈದೆ ಅಭಿಮಾನ ತೊರೆದೆ ದ್ವಂದ್ವ ಸಹಿಸಿದೆ 23 ವ್ರತನೇಮ ಜಪತಪ ಸತತದಿಗೈಯ್ಯುತ್ತ ಕ್ಷಿತಿವಾರ್ತೆಗೆಳಸಾದೆ ಮನವನ್ನೆ ಸೆಳೆದು ಹರಿಪಾದಕ್ಕೆರದು ಹಿತವನ್ನೆ ಮರೆದು 24 ಭಾಗವತಾದಿ ಸಚ್ಛಾಶ್ತ್ರ ಶ್ರವಣಗೈದು ಜಾಗ್ರತಳಾದಿ ಭೂಸುರರ ಸೇವೆಯಲಿ ಸೂಕ್ಷ್ಮಧರ್ಮದಲಿ ಪುಣ್ಯಗಳಿಸುತಲಿ 25 ಸತತಬಿಂಬಕ್ರಿಯ ವ್ರತವಂದೆ ಕೈಕೊಂಡು ಜತನದಿ ಮರೆಯದೆ ಪ್ರತಿಕಾರ್ಯದಲ್ಲಿ ಅರ್ಪಿಸಿ ಹರಿಯಲ್ಲಿ ಇದ್ದೆ ಮೋದದಲಿ 26 ಮುಖ್ಯಪ್ರಾಣನ ದಯ ಮುಖ್ಯಮಾಡುತ ಇನ್ನು ಅಕ್ಕರೆ ಭಕ್ತಿಯ ತೋರಿದೆ ನೀನು ಬೆನ್ನು ಬಿಡದವನು ನಿನ್ನ ಸಲಹಿದನು 27 ಭಾರತಿಪತಿ ಮುಖ್ಯಪ್ರಾಣಾಂತರ್ಗತನೆಂಬ ವಾರುತಿ ಇಲ್ಲದ ವಚನವೆ ಇಲ್ಲಾ ನಿನ್ನ ಈ ಸೊಲ್ಲ ಮರೆಯಲೊಶವಲ್ಲ 28 ಶ್ರೀ ರಾಮಚಂದ್ರನ ಆರಾಧನೆಯಗೈದು ಸಾರತತ್ವವ ತಿಳಿದು ಸಾಧಿಸಿ ಪಥವ ಸಹಸ್ರಾರು ಜಪವ ಗೈದೆ ತಪವ 29 ನೀ ಹಾಡಿದ ಸ್ತೋತ್ರ ನಿನ್ನ ಸನ್ಮಾರ್ಗವ ನನ್ನೆಯಿಂದಲಿ ಎರೆದೆ ಹೆಣ್ಣು ಮಕ್ಕಳಿಗೆ ಸ್ಮರಿಸುವರೀಗೆ ಸತ್ಕೀರ್ತಿಯದಾಗೆ 30 ಹರಿ ಗುರು ವರತತ್ವ ದಿವಿಜರಭಿಮಾನಿಗಳ ನಿರುತದಿ ಚಿಂತಿಸಿ ಸಾಧನಗೈದೆ ಕಾಲವ ಕಳೆದೆ ಹರಿಪಾದಕ್ಕೆರೆದೆÀ 31 ಬಿಂಬಾನು ಸಂಧಾನ ಚತುರಳಾಗಿ ನೀನು ಸಂಭ್ರಮದಿಂದ ಶ್ರೀ ಮಧ್ವಶಾಸ್ತ್ರದಲಿ ಮನಸ ನೀಡುತಲಿ ಸುಖ ಸುರಿಯಲಿ 32 ಒದ್ದು ತಾಪತ್ರಯ ಸದ್ಗುರು ಕೃಪೆ ಪೊಂದಿ ಗೆದ್ದೆ ನೀ ಸುಲಭದಿ ಭವದ ಬಂಧನವ ಪಡೆದೆ ಹರಿ ದಯವ ಕೊಟ್ಟಿತೆ ಮುದವ 33 ಪೇಳಲೋಶವೆ ಹೇ ದಯಾಳು ನಿನ್ನಯ ಗುಣ ಬಾಳಿದೆ ಧರೆಯೊಳು ತೊಂಬತ್ತೈದೊರುಷ ವೃದ್ಧಾಪ್ಯದೋಷ ನಿನಗಿಲ್ಲ ಲೇಶ 34 ಇಂದ್ರಿಯಂಗಳು ಎಲ್ಲ ಒಂದು ಕುಗ್ಗದೆ ಒಬ್ಬ ರಿಂದಲು ಸೇವೆಯ ಕೊಳದೆ ಲವಲವಿಕೆ ಯಿಂದಿರುವ ಬಯಕೆ ಸಲಿಸೀತೆ ಮನಕೆ 35 ಕಿರಿಯ ಮೊಮ್ಮೊಗ ರಮಾಕಾಂತನಲ್ಲಿರುತಿರೆ ಕರೆಹೇಳಿ ಕಳುಹಿದ ಹರಿ ತನ್ನ ಪುರಕೆ ಕ್ಲಿಪ್ತಕಾಲಕ್ಕೆ ಆಗೆ ಮನವರಿಕೆ 36
--------------
ಅಂಬಾಬಾಯಿ
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು
ಶ್ರೀರುಕ್ಮಿಣೀರಮಣ ತಾನುಡಿಸಿದಂತೆ ನಾಂ ಧಾರುಣಿಪ ಜನಮೇಜಯಂಗೆ ಮುನಿ ಪೇಳಿಸಿದ ಹದಿನೆಂಟುಪದ್ಯಗಳೊಳಾಲಿಸುವುದು ದನುಜದಿವಿಜರೀ ಭುವಿಯೊಳವತಿರಿಸಿದರುಸುಯೋ ಧನಪಾಂಡುತನಯರಂ ಸೈರಿಸದೆಭೇದಮಂ ಕಟ್ಟಿಸಿಯರಗಿನಮನೆಯೊಳವರನಿಡಲು | ವನಜಲೋಚನನ ಕೃಪೆಯಿಮದದಂದಾಟಿಕಾ ನನದಲಿ ಹಿಡಿಂಬಬಕರಂ ಮುರಿದುದೃಪದರಾ ಪುತ್ರರಪಡೆದರಾದಿಪರ್ವದಲ್ಲಿ 1 ರಾಜಸೂಯಾಭಿಧಾನದ ಯಾಗಕಾರಣದೊ ಳಾಜರಾಸಂಧಾದಿಗಳ ಕೊಲಿಸಿನೃಪಧರ್ಮ ಜೂಜಿನಲಿಸೋಲಿಸಲು ಪಂಚಪಾಂಡವರಂ ಸ ರೋಜಾಕ್ಷಿ ದ್ರೌಪದಿಯ ಭಂಗಪಡಿಸಲ್ಕೆಪಂ- ಸಭಾಪರ್ವದಲಿ 2 ಅಡವಿಯೊಳು ವಾಸವಾಗಿರಲು ಪಾಂಡುಸುತರ್ಗೆ ಪೊಡವಿ ಸುರರರುಹಿಸಲ್ ಸತ್ಕಥೆಗಳಾಲಿಸುತ ಘೋಷಯೊಳಹಿತನ ಬಿಡಿಸಿದಂ ಗಂಧರ್ವಪತಿಯಿಂದ ಪಾರ್ಥನೀ ರಡಿಸಿ ನಾಲ್ವರುಮೂರ್ಛೆಪೊಂದಲ್ಕೆಯಕ್ಷಂಗೆ ಅರಣ್ಯಪರ್ವದೊಳಗೆ 3 ಬಂದುಮಾತ್ಸ್ಯಾಲಯದಲಜ್ಞಾತವಾಸದೊಳ ಗಂದುಪಾಂಡವರಿರಲ್ ಕೀಚಕಾಧಮನು ಸೈ- ಭೀಮಗಂಧರ್ವ ವ್ಯಾಜದಿಂದ ಕೊಂದವಾರ್ತೆಯ ಕುರುಪಕೇಳಿ ಸೇನೆಸಹಿತ ಪಾರ್ಥಗೆ ವಿರಾಟಪರ್ವದಲ್ಲಿ 4 ದೇವಕೃಷ್ಣಸಂಧಿಗೆ ತರಲ್ ಕುರುಪದು ರ್ಭಾವದೊಳಗಿರಲದಂ ತಿಳಿದುವಿದುರನ ಮನೆಯೊ ಕೌರವಸಭೆಗೆಪೋಗಿ ಈವುದೈದೂರುಗಳ ಪಾಂಡವರಿಗೆನೆ ಭೇದ ಭಾವದಿ ಸುಯೋಧನಂಸೂಜ್ಯಾಗ್ರಭೂಮಿಯಂ ತಾ ನೀವುದಿಲ್ಲವೆನೆ ಯುದ್ಧನಿಶ್ಚಯಗೈದನುದ್ಯೋಗಪರ್ವದಲಿ 5 ಕುರುಪತಿಯು ಗಂಗಾಸುತಗೆ ಪಟ್ಟಗಟ್ಟಿದಂ ಎರೆಡುಬಲಮಂ ಸೇರಿಯಿರಲರ್ಜುನಂ ತನ್ನ ವರಕೊಲ್ವದೆಂತೆನಲ್ ಹರಿವಿಶ್ವರೂಪಮಂ ತೋರಿತತ್ವವತಿಳಿಸಲು ತರುವಾಯ ಹತ್ತುದಿನಕಾದುತಿರಲಾಗಭೀ ಷ್ಮರಿಗೆಷಂಡನನೆವದಿ ಶಸ್ತ್ರಸಂನ್ಯಾಸ ವಾ ಭೀಷ್ಮಪರ್ವದಿಕಥೆಯಿದು 6 ಗುರುಗಳಿಗೆ ಪಟ್ಟಾಭಿಷೇಕವಾಯಿತುದ್ರೋಣ ದೊರೆಯಹಿಡಿತಹೆನೆಂದು ತಪ್ಪೆಸಂಶಪ್ತಕರ ನರನೊಡನೆ ಕಾದಿದರು ಪಾರ್ಥಸುತಪೊಕ್ಕುಪದ್ಮವ್ಯೂಹ- -ದೊಳುಮಡಿಯಲು ನರಪ್ರತಿಜ್ಞೆಯಗೈದು ಸೈಂಧವನ ವಧಿಸಿದನ ಸುರ ಘಟೋತ್ಕಚ ರಾತ್ರಿಯುದ್ಧದೋಳ್ ಸಂದನಾ ದಿನದಲಿದ್ರೋಣಪರ್ವದೊಳಗೆ 7 ಕುರುಸೈನ್ಯಬತ್ತಿರುವ ಶರಧಿಯೋಲಾಯ್ತು ದಿನ ಕರಸುತಗೆ ಪಟ್ಟವಂಗಟ್ಟಿ ದುರ್ಯೋಧನಂ ಹರನುತ್ರಿಪುರವ ಗೆದ್ದಕಥೆಯವಿಸ್ತರಿಸಿ ಸಾರಥಿಯ ಮಾಡಲು ಶಲ್ಯನ ನರನವಿಕ್ರಮಪೊಗಳಿ ಕರ್ಣನಬಲವನುಧಿ ಕ್ಕರಿಸೆಮಾದ್ರೇಶ್ವರಂ ಕರ್ಣನತಿ ಖಾತಿಯಿಂ ದೆರಡುದಿನ ಕಾದಿಯರ್ಜುನನಿಂದ ಮಡಿದ ಸೂತಜ ಕರ್ಣಪರ್ವದಲಿ 8 ಸೂತಜನಮರಣದಲಿ ಶಲ್ಯಗಾಯಿತು ಪಟ್ಟ ಶಕುನಿಯಂಸಹದೇವಸಂಹರಿಸಲು ಪಾತಕಿ ಸುಯೋದನಂ ಕೊಳನಪೊಕ್ಕಿರಲು ಯಮ ಜಾತಾದಿಗಳು ಪೋಗಿ ನುಡಿಸಲ್ಕೆಜಲ ಪೊರಟು ಕುರುಪನು ಶಲ್ಯಪರ್ವದೊಳಗೆ 9 ಗುರುಜಂಗೆ ಬೆಸಸಿದಂ ಕುರುರಾಯ ಪಾಂಡವರ ಶಿರವತಹುದೆನುತಲಶ್ವತ್ಥಾಮಪಾಳಯದಿ ಜೀವಬಿಡಲು ನರಭೀಮಸೇನರಾವಾರ್ತೆಯಂ ಕೇಳುತಲೆ ತರುಬಿ ಹಿಡಿದೆಳೆ ತಂದು ದ್ರೌಣಿಯಂ ಶಿಕ್ಷಿಸಲ್ ಸುಪ್ತಪರ್ವದಲಿ 10 ರಣದಿ ಮಡಿದಿರುವ ನೃಪರರಸಿಯರ್ ಅಂಧಭೂ ಪನು ಸತಿಯುಸಹಿತಲೈತರುತಿರಲ್ ಕಳನೊಳಗೆ ತಮ್ಮಪತಿಗಳನಪ್ಪಲು ಪೆಣಗಳೊಟ್ಟೈಸಿ ಸಂಸ್ಕಾರಕ್ರಿಯೆಗಳವಿದು ರನುಗೈದನನ್ನೆಗಂ ಧೃತರಾಷ್ಟ್ರನರಸಿ ಕೃ ಸ್ತ್ರೀಪರ್ವದಲಿ 11 ತನಗೆ ಕರ್ಣಸಹೋದರನೆಂಬ ವಾರ್ತೆಯಮ ಜನು ಕೇಳಿ ಶೋಕದಿವಿರಕ್ತಿಯಿಂದಿರೆ ಸಕಲ ಘನಬಂಧುವಧೆ ಮಹಾದೋಷವೆಂತೆಂದು ಭೀ ಷ್ಮನ ಕೇಳಲರುಹಿದಂ ರಾಜನೀತಿಯ ಧರ್ಮ ವನು ಕಷ್ಟಕಾಳಧರ್ಮವ ಮೋಕ್ಷಧರ್ಮವೆಂಬಿದುಶಾಂತಿಪರ್ವದಲಿ 12 ಅತಿಶಯ ದಾನಧರ್ಮದ ಲಕ್ಷಣಗಳಂ ನಿ ಯತಮಾದ ವರ್ಣಾಶ್ರಮಾಚಾರಕ್ರಮದಸಂ ತತಿಗಳಂ ಶಿವವಿಷ್ಣುಗಳಮಹಿಮೆ ಬ್ರಹ್ಮಸಾಕ್ಷಾತ್ಕಾರಸದ್ಬೋಧೆಯ ಕಥೆಗಳರುಹಿಸಿ ನದೀಸುತಧರ್ಮಜನ ಮನೋ ಪತಿ ಕೃಷ್ಣನಂ ಧ್ಯಾನಿಸುತ ಮುಕ್ತನಾದನಿದು- -ಮಾನುಶಾಸನ ಪರ್ವದಿ 13 ಗುರುಸುತನ ಬ್ರಹ್ಮಾಸ್ತ್ರಮಂಚಕ್ರದಿಂದಸಂ ಹರಿಸಿ ಕೃಷ್ಣಂಕಾಯ್ದನುತ್ತರೆಯಗರ್ಭಮಂ ನೇಮದಿಂದ ಪರಿಪರಿಸುವಸ್ತುಗಳನೆಲ್ಲ ತಂದುಯೈ ವರು ಮಹಾಸಂತಸದಿಹರಿ ಸಹಾಯದಿ ಮಾಡಿ ಸಂಪೂಜಿಸಿದರಶ್ವಮೇಧಕಪರ್ವದಿ 14 ಅಂಧಭೂಪತಿ ಕೌರವಸ್ತ್ರೀಯರುಂ ಕುಂತಿ ಗಾಂಧಾರಿ ಸಹಿತಬರೆ ತೆರಳಿದಂತಪಗೈಯ್ಯೆ ಮುವ್ವರುಪವಾಸದೊಳಿರೆ ಬಂದುದಾಕಾಳ್ಗಿಚ್ಚಿನೋಲ್ ಮಹಾಜ್ವಾಲೆಯೋಳ್ ಪೊಂದಿದರ್ ವಿದುರಧರಾತ್ಮಜನಕೂಡಿದಂ ಬಂದುಯಮಜನುಪುರದಿ ಶ್ರಾದ್ಧಗಳಮಾಡ್ದನಾಶ್ರಮ- -ವಾಸಪರ್ವದೊಳಗೆ 15 ವರುಷಗಳು ಷಟತ್ರೀಂತಿಯು ರಾಜ್ಯವಾಳುತಿರೆ ಬರುಬರುತಲುತ್ಪಾತಗಳುಪುಟ್ಟಿದವು ಯಾದ ಮಡಿದರೆಂಬವಾರ್ತೆಯನು ಕೇಳಿ ನರನು ನಡೆತಂದು ಶೋಕದೊಳುಳಿದವರನುತಾ ಕರದೊಯಿದು ವಜ್ರಾಖ್ಯನಂ ಯಿಂದ್ರಪ್ರಸ್ಥದೋಳ್ ಮುಸಲಪರ್ವದಕಥೆಯಿದು 16 ನರನಮೊಮ್ಮಗೆ ಪಟ್ಟವಂಗಟ್ಟಿಯೈವರುಂ ತೆರಳಿದರ್ಪಾಂಡವರ್ ಸತಿಸಹಿತಬರುತ ಹಿಮ ನಕುಲನುಂ ಸುರಪಸುತನು ವರಭೀಮಸೇನನುಂ ಬಿದ್ದರಾನೃಪತಿಯೋ ರ್ವರನುಕಾಣದೆಯೊಬ್ಬನೇಪೋಗುತಿರೆ ಕಷ್ಟ ಪ್ರಸ್ಥಾನಪರ್ವದೊಳಗೆ 17 ಮ್ಮಂದಿರೆಲ್ಲೆನಲವಂ ಸುರನದಿಯತೋರಲ್ಕೆ ತನ್ನವರೆಲ್ಲರ ನೋಡುತ ಪೊಂದಿದಂ ಯಮನೊಡನೆ ಪವನನೋಳ್ ಭೀಮನರ ನಿಂದನಂ ಯಮಳರಶ್ವಿನಿಯರೊಳ್ಕಲಿಮುಖ್ಯ ಸಂದೋಹದೋಳ್ ಸುಯೋಧನ ಪ್ರಮುಖರೊಂದಿದರ್ ಸ್ವರ್ಗಾರೋಹಣಪರ್ವದಿ 18 ಈಮಹಭಾರತ ಶತಸಹಸ್ರಗ್ರಂಥವನು ಹಾ ಮುನಿ ಪರಾಶರಾತ್ಮಜಪೇಳ್ದನದುವೆ ಗುರು ಸಂಕ್ಷೇಪಭಾರತವನು ಪ್ರೇಮದಿಂದಾಲಿಸುವ ಸಜ್ಜನರಿಗನುದಿನಂ ಕಾಮಿತಾರ್ಥವನಿಹಪರಂಗಳೊಳ್ಸುಖವಗುರು ರಾಮವಿಠ್ಠಲಕೊಡುವಭಾಗ್ಯವಲ್ಲೀನಗರ- -ನಿಲಯನರಹರಿಕರುಣದಿ 19
--------------
ಗುರುರಾಮವಿಠಲ
ಶ್ರೀಲೋಲನಲ್ಲೆ ಭಾಮೆ ಅವಲೋಲನಲ್ಲೆ ಭಾಮೆ ಪ ಲೋಲನೊ ಬಾಲನೊ ಗೋಪಾಲನೊ ನಾನರಿಯೆ ಅ.ಪ. ಇಂದು ತಮನ ಕೊಂದು ವೇದವ ತಂದವನಲ್ಲೆ ಭಾಮೆ ಅವತಂದವನಲ್ಲೆ ಭಾಮೆ ತಂದವನೊ ಬಂದವನೊ ಅದರಂದವನು ನಾನರಿಯೆ 1 ಅರ್ಥಿಯಿಂದಲಿ ಗಿರಿಯ ಬೆನ್ನಿಲಿ ಪೊತ್ತವನಲ್ಲೆ ಭಾಮೆ ಅವ ಪೊತ್ತನಲ್ಲೆ ಭಾಮೆ ಪೊತ್ತವನೊ ತೆತ್ತವನೊ ಅದರರ್ಥವನು ನಾನರಿಯೆ 2 ವರಾಹ ಸ್ವಾಮಿಯಲ್ಲೆ ಭಾಮೆ ಅವ ಸ್ವಾಮಿಯಲ್ಲೆ ಭಾಮೆ ಸ್ವಾಮಿಯೊ ಪ್ರೇಮಿಯೊ ಬಹು ಕಾಮಿಯೊ ನಾನರಿಯೆ3 ತರಳ ಪ್ರಹ್ಲಾದನಿಗೊಲಿದ ನರಹರಿಯಲ್ಲೆ ಭಾಮೆ ಅವ ನರಹರಿಯಲ್ಲೆ ಭಾಮೆ ನರಹರಿಯೊ ಸಿರಿದೊರೆಯೊ ಆ ಉರವಣಿಗೆಯ ನಾನರಿಯೆ4 ನೆಲನ ಈರಡಿ ಮಾಡಿ ಅಳೆದ ಚೆಲುವನಲ್ಲೆ ಭಾಮೆ ಅವ ಚೆಲುವನಲ್ಲೆ ಭಾಮೆ ಚೆಲುವನೊ ಮಲೆವನೊ ಅಂಡಲೆವನೊ ನಾನರಿಯೆ 5 ಕೊಡಲಿ ಮಸೆದು ರಾಯರನೆಲ್ಲ ಕೆಡಹಿದನಲ್ಲೆ ಭಾಮೆ ಅವ ಕೆಡಹಿದನಲ್ಲೆ ಭಾಮೆ ಕೆಡಹಿದನೊ ಮಡುಹಿದನೊ ಆ ತೊಡರವನು ನಾನರಿಯೆ 6 ಸೀತಾ ಚೋರನ ಕೊಂದ ರಘುನಾಥನಲ್ಲೆ ಭಾಮೆ ಅವ ನಾಥನಲ್ಲೆ ಭಾಮೆ ನಾಥನೊ ಖ್ಯಾತನೊ ಆ ಮಾತನು ನಾನರಿಯೇ 7 ಮಾವನ ಕೊಲಲು ಮಧುರೆಗೆ ಪೋದ ದೇವನಲ್ಲೆ ಭಾಮೆ ಅವ ದೇವನಲ್ಲೆ ಭಾಮೆ ದೇವನೊ ಭಾವನೋ ಗೋ ಕಾವನೊ ನಾನರಿಯೆ8 ತ್ರಿಪುರಾಂಗನೆಯರ ವ್ರತವನಳಿದ ಚಪಳನಲ್ಲೆ ಭಾಮೆ ಅವ ಚಪಳನಲ್ಲೆ ಭಾಮೆ ಚಪಳನೊ ವಿಪುಳನೊ ಆ ವಿಪರೀತವ ನಾನರಿಯೆ 9 ಓಜೆಯಿಂದ ತೇಜಿಯನೇರಿದ ರಾಜನಲ್ಲೆ ಭಾಮೆ ಅವ ರಾಜನಲ್ಲೆ ಭಾಮೆ ರಾಜನೊ ಭೋಜನೊ ಆ ಸೋಜಿಗವ ನಾನರಿಯೆ 10 ಸೃಷ್ಟಿಗೆ ಕರ್ತನು ವಿಜಯವಿಠ್ಠಲನಲ್ಲೆ ಭಾಮೆ ಅವ ವಿಠ್ಠಲನಲ್ಲೆ ಭಾಮೆ ವಿಠ್ಠಲನಾದರೆ ಇಷ್ಟೊಂದ್ಯಾತಕೆ ದಟ್ಟಡಿಗಳಿಗೊಂದಿಸುವೆ 11
--------------
ವಿಜಯದಾಸ