(ಜಗನ್ನಾಥದಾಸರ ಪ್ರಾರ್ಥನೆ)
ಯಾತಕಿನ್ನನಾಥನೆಂಬುವುದು ಕರುಣಾಳು ಜಗ
ನ್ನಾಥದಾಸರ ಸೇರಿಕೊಂಬುವುದು ಪ.
ಭೀತಿಕರ ಬಹು ಜನ್ಮಕೃತ ಮಹಾ
ಪಾತಕಾದಿಗಳನ್ನು ಭೇದಿಸೆ
ಮಾತುಳಾಂತಕನಂಘ್ರಿ ಕಮಲದಿ
ನೀತಭಕ್ತಿಯ ನೀಡಿ ಸಲಹುವ ಅ.ಪ .
ಘೋರತರ ಸಂಸಾರಪಾರಾವಾರ ದಾಟಿಸುವ ಲಕ್ಷ್ಮೀ
ನಿತ್ಯ ಭಾರ ವಹಿಸಿರುವ
ಮೂರು ಲೋಕಾಧಾರ ದುರಿತೌಘಾರಿ ಕೃಷ್ಣಕಥಾಮೃತಾಬ್ಧಿಯ
ಸಾರ ತೆಗೆದು ಖರಾರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ 1
ಶ್ರೀ ರಮಾಪತಿ ಸರ್ವ ಸುಗುಣಾಧಾರ ದಯದಿಂದ ಒಲಿಯಲು
ಸೇರಿ ಬರುವುದು ಸರ್ವಸಂಪತ್ಸಾರವಾನಂದ
ಕಾರುಣಿಕತನದಿಂದಲಿಂತುಪಕಾರ ಮಾಡಿದ ದೀನಜರಿಗೆಧೀರ ಶೇಷಗಿರೀಂದ್ರನಿರವನು ತೋರಿದನು ನಿಜಭಕ್ತ ಬುಧರಿಗೆ 2