ಒಂದು ಪಥವ ಹೊಂದಲರಿಯರೀ ಮನುಜರು
ಇಂದಿರೇಶನ ಪಾದವ ಕಾಣದೆ ಕೆಡುವರು ಧ್ರುವ
ಒಂದರೆ ಘಳಗಿ ನಾನೆವೆ ಮಾಡಿದೆನೆಂಬರು
ಒಂದರೆ ಘಳಗಿ ಪ್ರಾಚೀನವೆಂಬರು
ಒಂದರೆ ಘಳಗಿ ಈಶ್ವರ ಸೂತ್ರವೆಂಬರು
ಒಂದರೆ ಘಳಗಿ ತಾ ಏನೋ ಎಂತೆಂಬರು 1
ಒಮ್ಮೆ ಜಾಗೃತಿಯೊಳಿದೇ ನಿಜವೆಂಬರು
ಖರೆ ಎಂಬರು
ಒಮ್ಮೆ ಸುಷುಪ್ತ್ತಿಯೊಳಿದೇ ಸತ್ಯವೆಂಬರು
ಒಮ್ಮೆ ಇದರ ಶುದ್ಧಿ ತಿಳಿಯದಂತಿಹರು 2
ಒಂದು ತಿಳಿದರ ಸಕಲವು ಒಂದಾಗಿ ದೋರುವದು
ಒಂದರೊಳಗ ಸಕಳ ದೊರೆಕೊಂಬುದು
ಒಂದಾಗಿ ಸಲಹುವ ಮಹಿಪತಿ ಸ್ವಾಮಿಯ
ತಂದೆ ಸದ್ಗುರು ಭಾಸ್ಕರ ಕೋಟಿ ತೇಜನು 3