ಒಟ್ಟು 347 ಕಡೆಗಳಲ್ಲಿ , 69 ದಾಸರು , 303 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಡಂಭ ತೋರಿದರೆ ಬಂತೆ ಇಂಬವಾಗದ ಗುಂಭಗುರುತ ಪಥ 1 ಶಬ್ದ ಜ್ಞಾನದಿಂದ ನಿಗಗೇನು ಲಬ್ಧ ಲಬ್ಧಾ ಲಬ್ಧ ತಿಳಿಯಗೊಡುದು ನಿನ್ನ ಪ್ರಾರಬ್ಧ ಧ್ರುವ ನೀರ ಕಡಿದರೆ ಬಂತೆ ಸಾರಸದ ನವನೀತ ಮಾರಪೀತನಂಘ್ರಿ ಗುರುತಾಗುದೇ ಹಿತ 2 ಹರಿವ ಮೃಗಜಲವಾಯಿತೆ ಅರಿತುಕೊಂಬಗೆ ಗಂಗಾಮೃತ ಅಮೃತ ಹಸ್ತ 3 ಮಣಿ ಆದೀತೆ ರಾಜಿಸುವ ನವರತ್ನ ನಿಜತತ್ವ ತಿಳಿಯುದೊಂದೇ ವಾಜಿಯ ಯತ್ನ 4 ಹೊಂದಿ ಬದುಕಿರೊ ಮಹಿಪತಿ ತಂದೆಯ ಗುರುಪಾದ ಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಂದೆತಾಯಿ ನೀನೆ ಬಾ ಬೇಗನೆ ಪ ಮಂದರೋದ್ಧಾರ ಮನ್ಮಥ ಜನಕ ಆ- ಮಾಧವ ವಾಸುದೇವ ಗೋವಿಂದ ಮಧುಸೂಧನ ದಾಶರಥೇ ಸಂಕರ್ಷಣ ತ್ರಿವಿಕ್ರಮ ಹೃಷಿಕೇಶ ನಾರಸಿಂಹ ಪರಬ್ರಹ್ಮ 1 ಪದ್ಮನಾಭಾಚ್ಯುತ ದಾಮೋದರ ಜ- ಪ್ರದ್ಯುಮ್ನಧೋಕ್ಷಜ ನಾರಾಯಣ ಅನಿ- ರುದ್ಧ ವಿಷ್ಣು ಭೂಧರ ಉಪೇಂದ್ರ 2 ಅರಿತು ಚತುರ್ವಿಂಶತಿ ನಾಮವ ಶರಣರದುರಿತವ ಪರಿಹರಿಸುವನಮ್ಮ ಗುರುರಾಮವಿಠಲನೆ ನಿನ್ನನೆ ನಾಂ 3
--------------
ಗುರುರಾಮವಿಠಲ
ತಾ ಕಾಯುತಿದ್ದ ಕೃಷ್ಣನು ಗೋಪಾಲರನೂಗೋಕುಲದಲ್ಲಿ ಗೂಢನೂ ಪುೀಕುಂಭಿನಿಯೊಳಗಿರುತಿಹ ದುಷ್ಟರನೂಕುವ ಬಿಲದಲಿ ಅನುಪಮ ಧೀರಾ ಅ.ಪಅಸಿತ ಪಕ್ಷವು ಬಂದುದೂ ಮಾಸಗಳೊಳುಎಸೆವೇಕಾದಶಿಯೆಂಬುದು ಬರಲು ಅಂದುಬಸವಾಸುರಾನಾ ಬಡಿದು ತಾನಂದು ವ್ರಜದಿ ವಸುಧೇಶ ನಿದ್ದನೊಲಿದು ಅಸುರನು ಅಳಿಯಲು ಆ ವ್ರಜವುಳಿಯಲು ಹಸುಗಳು ಹೆಚ್ಚಲು ಹರಿ ತಾನಲಿಯಲು ವಸಗೆವ್ರಜದೊಳಗೆ ಬಹುಮಸಗೆ ಹೆಸರಾಗೆ 1ದ್ವಾದಶೀ ದಿವಸಾದಲ್ಲಿ ಉದಯಕಾಲವಾದುದು ''ತದಲ್ಲಿ ಶ್ರೀಕೃಷ್ಣನಿಗೆಬೋಧವಾಗಲು ಬೇಗದಲಿ ಬಾಲರು ಸಹಾ ಮಾಧವಾ ಮುದದಿಂದಲಿಕಾದಿರೆ ಗೋವ್ಗಳ ಕಾನನಮಧ್ಯದಿಕಾದಲು ಬಂದಾ ಕೇಶಿಯನುದಯದಿಕಾದಿ ಅಸುವಸಿಗಿದಿ ವೊದ'ದೀ ಈ 'ಧದಿ 2ವೃಂದಾಖ್ಯವಾದವನಾದಿ ಗೋಪಾಲಕರಾ ವೃಂದದಾ ವರಸ್ತೋಮವಾಮದಿ ನಿಂದಿದ್ದನಾಗಾಕಂದರ್ಪಕೋಟಿತೇಜದಿ ಕುಂಭಿನಿಯನ್ನು ಹೊಂದಿಸಿದನು ಹರುಷದಿ ಮಂದರಧಾರನು ಮಂಜುಳ ಮ'ಮನು ನಿಂದಿಹ ನೀರನು ನಿಜಗುಣಧಾಮನು ಅಂದು ಅಜಬಂಧು ತಾನೆಂದೂ ಅಲ್ಲಿನಿಂದು3ಘನ ನೀಲಾಳಕದ ವೃಂದ 'ುಶ್ರಿತವಾದಾಮಣಿಮಯ ಮಕುಟದಿಂದಾ ಮೂಡುವ ಕಾಂತಿಪಣೆಯಲ್ಲಿ ಮೊಳೆಯುವಂದಾ ಕಸ್ತುರಿತಿಲಕ ಗಣನೆಗೆ ಬರುವ ಛಂದಾ ಗುಣಿಸುವರಾರಿದ ಗುಣನಿಧಿಯೊಪ್ಪಿದ ಪ್ರಣತಪ್ರೇಮದ ಪದ ಮುಖ ಪದ್ಮದಗುಣನೂ ಗುರುತರನೂ 'ನಯವನೂ 'ವರಿಪನೂ 4ಸಿಂಗಾರಿಯ ಸೋಲಿಸುವಾ ಸುಭ್ರುವದಿಂದಾಮಂಗಳವಾದ ಮುಖದ ಮನ್ನಿಸುತಿಹಕಂಗಳ ಕೋಡಿವರಿವಾ ಕಟಾಕ್ಷವನ್ನೂ ಸಂಗಿಸಿದ ಸುಸ್ಮಿತವಾ ತೊಂಗುತ ತೋರಲು ತನ್ನಾಸಿಕವೂರಂಗಿಸಿ ರಾಜಿಸೆ ರದನಚ್ಛದವೂಹೊಂಗೆ ುೀರಂಗೆ ನೋಳ್ಪಂಗೆ ಭವ'ಂಗೆ 5ಕುಂಡಲಗಳ ಕಾಂತಿಯೂ ಕರ್ನಾಗಳಲ್ಲಿಮಂಡಿತವಾಗಿ ಮತ್ತೆಯೂ ಮುಕುರದಂಥಾಗಂಡ ಸ್ಥಳಗಳಲ್ಲಿಯೂ ಗೋಚರಿಸುತ ದಿಂಡಾಗಿ ತೋರೆ ದೀಪ್ತಿಯೂ ಪುಂಡರೀಕಾಕ್ಷನು ಪೊಳೆಯುತಲಿದ್ದನು'ಂಡುತ ಖಳರನು ಹೆದರುವ ಜನರನುಕಂಡೂ ಕರಕೊಂಡೂ ಕೈಕೊಂಡೂ ಹುರಿಗೊಂಡೂ6ವೇಣುವ 'ವರಿಸಲು 'ೀರನಾ ಮುದ್ದೂತಾನೊಂದು ತೇಜ ತೋರಾಲು ಅಂಗುಲೀಗಳುಅನುಕೂಲಗಳಾಗಾಲು ಉಂಗುರಗಳೊಳು ಮಾಣಿಕ್ಯಗಳು ಮೂಡಲುಭಾನುವ 'ುೀರಲು ಬಾಹುಗಳೊಪ್ಪಲುಗಾನಗಳಾಗಲು ಗೋವ್ಗಳು ಕೇಳಲುತಾನು ತೋರಿದನು ಜಾಣುವನು ಜಗಧರನೂ 7ಭೋಗಿಯ ಭೋಗದ ಹಾಗೆ ಬಾಹುಗಳಿರೆತೂಗಿ ಜಾನುಗಳ ತಾಗೆ ಕೇಯೂರಗಳರಾಗ ರಂಜಿತಗಳಾಗೆ ಕಂಕಣವಲಯ ಯೋಗದಿಂದಿರೆ 'ೀಗೆಆಗಿನ ಕಾಲದಲಮರಿದ ಶೃಂಗದುೀಗುರು ಕೃಷ್ಣನ ಇಷ್ಟ ಕೊಳಲಿನಯೋಗೀ ಇಹಭಾಗೀ ಗತರಾಗೀ ಗುರಿಯಾಗೀ8ಕಂಬುಕಂಧರದಿಂದಲೂ ಅಲ್ಲಿರುತಿಹತೊಂಬೆ ತಾರಹಾರಗಳು ಲಕ್ಷ್ಮಿಯು ತಾನುಇಂಬೀನುರದಲಿರಲು ಕೌಸ್ತುಭಕಾಂತಿ ತುಂಬಿ ನಾಭಿಯ ತಾಕಲುಅಂಬುಜ ಸಂಭವನಾಲಯ'ರಲುಜೃಂಭಿಸಿ ಮಾಲೆಯು ಜೋಲಿಡುತಿರಲೂನಂಬೀ ಬಹುತುಂಬೀ ುಹವೆಂಬೀ ಜಗದಿಂಬೀ 9ಕಟಿತಟದತಿಶಯವು ಕಾಂಚಿಯಧಾಮಾಸ್ಪುಟವಾಗಿ ಸ್ವರ್ಣವಸ್ತ್ರವು ಊರುಗಳಲ್ಲಿಗೆಘಟಿಸಿರೆ ಗೂಢವಾದವೂ ಜಾನುಗಳಿಂದ ಪಟು ಜಂಘೆ ಪುದುಗಿಹವೂಕಟಕಗಳಿಂದಲು ಕಡುಚೆಲುವೆನ್ನಲುಅಟಸುತಲಡಿಗಳು ಅತಿಮೃದುವೆನ್ನಲುದಿಟನೂ ನರನಟನೂ ಭವತಟನೂ ಪಟುತರನೂ 10ಕಮಲ ಸೋಕಲು ಕಂದುವ ಲಕ್ಷ್ಮೀಯಕರಕಮಲಕೆ ಕಾಂತಿಯನೀವ ಯೋಗಿಯ ಹೃದಯಕಮಲದಿ ಕುಳಿತಿರುವ ುೀ ದಿವ್ಯಪಾದ ಕಮಲವಕಾಣಿಸುವಾಕಮಲೆಯ ಕಾಂತನ ಕಮಲಜ ಜನಕನ ಕಮಲವ ಕಾವನ ಕಾಂತಿಯ 'ುೀರ್ವನಕ್ರಮವೂ ಕಾಮದವೂ ಶ್ರಮ ಶಮವೂ ಶೋಭನವೂ 11ಬಲಿಯ ಬಳಿಗೆ ಬಂಜವು ಭಾಗ್ಯವನಿತ್ತುಸಲ'ದ ಸೌಮ್ಯಗಳಿವು ಬ್ರಹ್ಮನು ಬಂದುತೊಳೆಯಲು ಬಂದು ತೋರುತಿದ್ದವು ಆ ಪಾದಗಳೆ ಇಳೆಯೊಳಗಿರುತಿಹವೂಕಲಿಮಲಹರಗಳು ಕಲಿಗಳ ಕಾವವುತಾಳಿದವು ನಾಗನ ತದ್ವಶವಾಗಲುಸಿಲುಕೀ ಸಿರಿತುಳುಕೀ ಅಘಕಲಕೀ ಅವು ನಿಲುಕೀ 12ಅಂಕುಶವರ'ಂದವು ಧ್ವಜವಜ್ರವಂಕೀತವಾಗಿಯಾಢ್ಯಾವು ಲಕ್ಷ್ಮಿಯ ಕುಚಕುಂಕುಮವನ್ನು ಕದ್ದವು ಭೂ'ುಗೆ ಪಾದ ಪಂಕಜಗಳು ಬಂದಾವುಕಿಂಕರರಭಿಮತ ಕಂಕೆಯನಟ್ಟುತಮಂಕುಗಳೆನಿಸುತ ಮಲೆವರ ಮುರಿಯುತಶಂಕೆ ಸಲೆ ಕೊಂಕೆ ಹೊರೆುಂಕೆ ಸಿರಿಸೋಂಕೆ13ಈ ರೀತಿಯಲಿ ಈಶನು ಇರುತಲಿರೆನಾರದ ಬಂದು ನಿಂದನು ಕಾಣುತ ಕೃಷ್ಣಕಾರುಣ್ಯ ನಿಧಿ ಕೇಳ್ದನು ಕ್ಷೇಮಗಳನು ತೋರುತ ರೂಪವ ತಾನುವಾರಿಜನೇತ್ರನು ವರದವರೇಣ್ಯನು'ುೀರದೆ ಮುನಿಯನು ಮಾತನು ನುಡಿದನುಸಿರೀ ಅನುಸಾರೀ ಬಗೆದೋರೀ ಮುರವೈರೀ 14ಅರಿತನು ಆತನನುವ ಆ ಕಂಸಗಾಗಅರು' ತೋರಿಸಿದರ್ಥವ ಅದು ತನ್ನ ಕಾರ್ಯನೆರವೇರುವತಿಶಯವ ತಾನಾಗಿ ಮುನ್ನ ಪಿರಿದಾಗಿ ಪ್ರೇರಿಸಿರುವಕರುಣಾವನಧಿಯು ಕಾರ್ಯವ ತೋರಿಯುಮುರಹರಮೂರ್ತಿಯು ಮುಂದಿರುವಲ್ಲಿಯುಅರಿತೂ ಅಲ್ಲಿಕುಳಿತೂ ಬರೆಹೊತ್ತೂ ುದಿರಿತ್ತು 15ಕಾಣುತ ಮುನಿಕೃಷ್ಣನ ಮಾನಸದಲ್ಲಿಧ್ಯಾನಿಸಿದನು ದೇವನ ತಾ ಬಂದುದನ್ನುತಾನು ತೋರಿಸಲು ತತ್ತ್ರಾಣ ಬಂದಾಗ ನ'ುಸಿ ಪ್ರಾಣೇಶಗತಿಪ್ರ'ೀಣಾಕೃಷ್ಣಾ ಕಂಸಗೆ ಹೊದ್ದುವ ರೀತಿಗೆಶ್ರೀನಿಧಿಯಾದಗೆ ಸೂಚಿಸಿ ಸ್ವಾ'ುಗೆತಾನು ಅಜಸೂನು ಅರು'ದನು ಅರಿತದನೂ 16ಮಾನುಷಮೂರ್ತಿಯಾಗಿಯೆ ಭೂ'ುಗೆ ಬಂದುಆನತರನು ಆಳಿಯೆ ಅರ್ಥವ ಸಲಿಸಿಧೇನುವಾಗಿಹೆ ಧೊರೆಯೆ ಯೆನ್ನುತ 'ೀಗೆ ಆನತನಾಗುತಲಿಯೆಮಾನಸಪುತ್ರನು ಮಾತನು ನುಡಿದನುಶ್ರೀನಿಧಿ ತಿರುಪತಿ ವೆಂಕಟರಮಣನುತಾನೂ ತಾಳಿದನೂ ಮಾನಸನೂ ಮಾಡ್ದುದನೂ 17
--------------
ತಿಮ್ಮಪ್ಪದಾಸರು
ತಾನೇ ಬ್ರಹ್ಮ ತಾನೇ ಬ್ರಹ್ಮತಾನೇ ತಾನೆಯಾಗಿ ತನ್ನನೆ ಮರೆತರೆ ಪ ಮನಸಿನೊಳಗೆ ಕೂಡಿ ಮನಸದು ಎರಡಾಗಿಮನದ ಅರಿವ ನಿಜದರಿವನೆ ಅರಿತರೆ1 ಬುದ್ಧಿಯೊಳಗೆ ಕೂಡಿ ಬುದ್ಧಿಯದು ಎರಡಾಗಿಬುದ್ಧಿಯ ಅರಿವು ನಿಜದರಿವನೆ ಅರಿತರೆ2 ಇಂದ್ರಿಯ ದೊಳಗೆ ಕೂಡಿ ಇಂದ್ರಿಯಗಳೆರಡಾಗಿಇಂದ್ರಿಯವರಿದ ಚಿದಾನಂದನು ಅರಿತರೆ 3
--------------
ಚಿದಾನಂದ ಅವಧೂತರು
ತಿರುಪೆಗಾರರಯ್ಯಾ ನಾವು ತಿಳಿದುಕೊಳ್ಳಿರೀ ಜೀಯಾ ನೀವು ಪ ತಿರುಪೆಗಾರರನು ತಿರಸ್ಕರಿಸದಿರಿ ತಿರುಪಿಲ್ಲದಿದ್ದರೆ ತೀರಹುದು ಅ.ಪ ತಿರುಪಿಲ್ಲವೇ ಧಗಡಿ ತಿರುಪು ವಡವೆಗಳು | ತಿರುಪುಹೂಜಿಗಳು ತಿರುಪು ಭರಣಿಗಳು | ತಿರುಪು ರಕ್ಷಣಿಯು 1 ವಾಲೆ ಏನಾಯಿತು ಅರಿತು ನೋಡದೇ ಮೂರ್ಖರಾಗದಿರೀ 2 ಗೊಣಗಬೇಡಿರಿ ನೀವೂ ಹಣವು ನಿಮಗು ನಮಗುಂಟು ವಿಚಾರಿಸೆ ಹಣವಿಲ್ಲದ ನರ ಹೆಣಕಿಂತ ಕಡಿಮೆ 3 ರಾಶಿಯೊಳೊಂದು ಹಿಡಿ | ತೆಗೆಯಲು ಹ್ರಾಸವೇನೋ ನೋಡಿ ಮೋಸವೆ ಬರುವುದು ಓಸುಜನರೇ ಕೇಳಿ 4 ನಿಮ್ಮ ದೊರೆಗಾಳು ನಮ್ಮ ಗುರುವಲ್ಲವೇ ನಿಮಗೆ ನಾವಾಳಾದರೂ ದಯೆಯಿಲ್ಲವೇ 5 ಧೀರನು ಬಹುಬಲ್ಲ ಭೋಗದಿಂದಲೆ ರೋಗ ಬರುವುದು ತ್ಯಾಗದಿಂದಲೆ ಯೋಗ ಒದಗುವುದು6 ಸತಿಗೆ ಒಡವೆಯಿಟ್ಟು | ಕಳೆಯಲು ಹಿತವೇ ನಿಮಗಷ್ಟು ಅತಿಶಯ ಭೋಗಗಳಪೇಕ್ಷಿಸುವಿರೈ 7 ಮರವೆಯೆ ಅತಿ ಕಷ್ಟ ಮರವೆಯೆ ದುಃಖವು ಮರವೆಯೆ ನರಕವು ಹರಿ ಕೃಪೆಪಡೆದು ಅರಿವು ಸಂಪಾದಿಸಿ 8 ತಿರುಕನು ಈಶ್ವರನೂ | ಇಂದ್ರಗಾಗಿ ತಿರುಪುಹಾಕಿರುವ ತ್ರಿಲೋಕಗಳಿಗೂ9
--------------
ಗುರುರಾಮವಿಠಲ
ತುಂಬಿ ಬೆಳಗುತಿರುವಿಯಂತೆ ಎ ನಗೆ ಕಾಣದ ಬಗೆಯಾಕಂತೆ ಪ ಜಗವನು ವ್ಯಾಪಿಸಿ ಬಗೆಬಗೆಯಿಂದಲಿ ಝಗಿಝಗಿಕಪೆಂಬಾನಂತ ಸ್ಮøತಿಗಳಿವೆ ಅ.ಪ ಸರಸಿಲಿ ಸ್ಮರಿಸಲು ಬಂದಂತೆ ತರುಣಿಯ ಸಭೆಯೊಳು ಕಾಯ್ದಂತೆ ಕರೆಯಲು ಕಂಬದಿ ಹೊರಟಂತೆ ತರಳಗೆ ಅಡವಿಲಿ ಒಲಿದಂತೆ ಅರಿತು ವಿಚಾರಿಸಿ ನೋಡಲಿವೆಲ್ಲ ನಿನ್ನ ಖರೆ ಪರತರಮಹಿಮ 1 ಅರಣ್ಯವಾಸಿಗಳ ಪರೀಕ್ಷಂತೆ ಅರಿತು ಪರುಷ ಕರುಣಿಸಿದಂತೆ ಚರಣದ್ವೊರೆಯ ತಮ್ಮನಂತೆ ಸ್ಥಿರಪಟ್ಟವನಿಗೆ ಕಟ್ಟ್ದಂತೆ ವರ ವೇದೋಕ್ತಿಗಳರಿತು ನೋಡಿದರೆ ಸ್ಮರಿಸುವ ಭಕುತರ ನಿರುತ ಚಿಂತಾಮಣಿ 2 ಪೊಡವಿಪಾಲನಿಗೆ ಶಾಪಂತೆ ಬಿಡದೆ ಚಕ್ರದಿಂದ ಕಾಯ್ದಂತೆ ಕಡಲ ಮಧ್ಯದಲಿ ಮನೆಯಂತೆ ದೃಢಕರಿಗೆ ಮೈ ನೆರಳಂತೆ ಕಡುದಯಾನಿಧಿ ಎನ್ನೊಡಲೊಳು ಬಿಡದಂತಿರಿಸಯ್ಯ ಒಡೆಯ ಶ್ರೀರಾಮ 3
--------------
ರಾಮದಾಸರು
ತೊರೆದು ಜೀವಿಸುಬಹುದೆ ಹರಿ ನಿನ್ನ ಚರಣವನುಬರಿಯ ಮಾತೇಕಿನ್ನು ಅರಿತು ಪೇಳುವೆನಯ್ಯ ಪ ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದುದಾಯಾದಿ ಬಂಧುಗಳ ಬಿಡಲುಬಹುದುರಾಯ ಮುನಿದರೆ ಮತ್ತೆ ರಾಜ್ಯವನು ಬಿಡಬಹುದುಕಾಯಜಪಿತ ನಿನ್ನಡಿಯ ಬಿಡಲಾಗದು 1 ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದುಪಡೆದ ಕ್ಷೇತ್ರವ ಬಿಟ್ಟು ಪೋಗಬಹುದುಮಡದಿ ಮಕ್ಕಳ ಕಡೆಗೆ ತೊಲಗಿಸಿಯು ಬಿಡಬಹುದುಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು 2 ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದುಮಾನಾಭಿಮಾನ ತಗ್ಗಿಸಲು ಬಹುದುಪ್ರಾಣನಾಯಕನಾದ ಆದಿಕೇಶವರಾಯಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದು 3
--------------
ಕನಕದಾಸ
ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಕೈಯ ಮುಗಿದೊಮ್ಮೆ | ಕೈ ... ತ್ರಾಹಿ ತ್ರಾಹಿ ತ್ರಾಹಿ ಎನ್ನಿ ಮನದಲಿನ್ನೊಮ್ಮೆ ಧ್ರುವ ಪುಣ್ಯಕ್ಷೇತ್ರವಹುದಿದು ಸಾರವಾಡಗ್ರಾಮ | ಸಾ... ಕಣ್ಣಾರೆ ಕಂಡು ಯಾತ್ರೆಗೆ ಬಾಹುದು ಬ್ರಹ್ಮಸ್ತೋಮ | ಬಾ... ಸಣ್ಣ ದೊಡ್ಡವರಿಗೆಲ್ಲ ಭಾಸುದು ಸಂಭ್ರಮ | ಭಾ... ದಣಿವು ಹಿಂಗಿ ದೋರುತಿಹುದು ಆನಂದೊಬ್ರಹ್ಮ 1 ಧರೆಯೊಳಧಿಕವಾದ ಕ್ಷೇತ್ರವಿದೆ ಕಾಶಿ | ಕ್ಷೇ... ಹರಿಯುತಿಹುದು ನೋಡಿ ಙÁ್ಞನ ಗಂಗೆಯು ಸೂಸಿ | ಙÁ್ಞ... ಸ್ಮರಣಿಯಿಂದ ಹರಿ ಸೇವ್ಯಾಹುದು ಪಾಪದರಾಶಿ | ಪಾ... ಗುರು ವಿಶ್ವೇಶ್ವರ ತಾರಿಸುತಿಹ ಕರುಣಿಸಿ 2 ಸರ್ವ ತೀರ್ಥ ಮಿಂದ ಫಲ ಬಾಹುದಿಲ್ಲೆ ನೋಡಿ | ಬಾ... ಪೂರ್ವ ಕರ್ಮಾದಿಗಳೆಲ್ಲ ಹೋದವಿಲ್ಲೆ ನೋಡಿ | ಹೋ... ಸರ್ವರು ಅರಿತು ನೀವು ಇದೆ ಯಾತ್ರೆಯ ಮಾಡಿ | ಇ... ನಿರ್ವಾಣ ಪರ್ವಣೀಯ ಫಲ ಬಾಹುದು ಕೈಗೂಡಿ3 ಪುಣ್ಯಗೈದ ವಿಶ್ವನಾಥ ಸತಿಸಹಗೂಡಿ | ಸ... ಜನುಮಾಂತ್ರದ ದೋಷಗಳದಿಲ್ಲೆ ನೋಡಿ | ಗ... ಘನ ಸುಖ ಪಡೆದುನುಮಾನ ಈಡ್ಯಾಡಿ | ಈ... ವರ್ಣಿಸಲಾಗುದು ಸ್ತುತಿ ಸ್ತವನ ಪಾಡಿ 4 ಮನವಿಟ್ಟು ಕೇಳಿ ಸ್ತುತಿ ಭಾವ ಭಕ್ತಿಯಿಂದ | ಭಾ... ಪುಣ್ಯಗೈತೆನ್ನ ಜೀವ ಅನುಭವದಿಂದ | ಅ... ಉನ್ಮನವಾಗಿ ದೋರಿತು ಬ್ರಹ್ಮಾನಂದ | ದೋ... ಧನ್ಯವಾದ ಮಹಿಪತಿ ಗುರು ಕೃಪೆಯಿಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾರಿ ತೋಚದಲ್ಲಾ ನನಗೆ ಏನು ಪ ನೀರಜಾಕ್ಷ ನಿನ್ನ ನೊಲಿಸುವ ಅ.ಪ ವಿಧಿ ಸಾಧಿಸುತ ವೇದವ್ಯಾಸ ನಿನ್ನ ಪ್ರೀತಿ ಸಾಧಿಸಲು ಮೂಢನಾನು 1 ದಂಡಕಾಲ ಕಳೆದುದಯ್ತು ಮಂಡೆಗೀಗ ಹತ್ತದವು ಫಂಡರೀಶ ಕೃಪೆಯಮಾಡೊ 2 ಹಾಡಿಪಾಡಿ ವಲಿಸಾಲು ರಾಗ ಈ ಭಾವ ತಾಳ ಕಾಣೆ ಕಾಡು ಕೋಣನಂತೆ ಇರ್ಪೆ ನೀಡಿ ಸಲಹೊ ಸರ್ವ ಶಕ್ತಿ 3 ದಾನಧರ್ಮತೀರ್ಥಯಾತ್ರೆ ನಾನು ಮಾಡೆ ಹುಟ್ಟು ಬಡವ ಶ್ವಾನನಂತೆ ತಿರಿದು ಉಂಬೆ ಸಾಧ್ಯವೇನು ನೀನೇ ನುಡಿಯೊ4 ನೆಂಟರಿಷ್ಟರೆಲ್ಲ ಎನ್ನ ಕೈಯ ಬಿಟ್ಟು ಹೋದರೈಯ ಒಂಟಿಯಾಗಿ ಅಲೆದು ಅಲವೆ ಭಂಟನೆನಿಸಿ ಕಾಯಬೇಕೊ 5 ದಾಸನಾಗಿ ಬಾಳೋದಕ್ಕೆ ಆಶೆಯಿನ್ನು ತೊಲಗಲಿಲ್ಲ ಮೊಸವೇನೆ ಬರಿಯ ವೇಷ ದೋಷದೂರ ಶ್ರೀಶವಲಿಯೊ 6 ಹಿಂದಿನವರ ಕಾಯ್ದಬಗೆಯು ಇಂದಿನವರಿಗೆ ಬರಿಯ ಕಥೆಯು ಮಂದನೆನ್ನ ಈಗ ಪಿಡಿದು ಮುಂದು ಮಾಡೊ ನಿನ್ನ ಖ್ಯಾತಿ7 ಶರಣ ಜನರ ಬಿಡನು ಎಂಬ ಖರೆಯಬಿರುದು ನಿನ್ನದೆಂದು ಹಿರಿಯರಿಂದ ಅರಿತುಬಂದೆ ಪರಮ ಕರುಣಿ ಕೈಯ ಪಿಡಿಯೊ8 ನಿನಗೆ ಯೆನ್ನ ಪೊರೆಯೆ ಕ್ಷಮಿಸಿ ದೋಷ ಪೊರೆಯೊ ಬೇಗ ನಮಿಪೆ ನಂಬಿ ನಿನ್ನನೀಗ 9
--------------
ಕೃಷ್ಣವಿಠಲದಾಸರು
ದಿನದಿನದೊಳು ಬಿಡದೊನಜಾಕ್ಷ ಪಾದ ಭಜಿಸಿ ನೀ ಸುಖಿಯಾಗೊ ಮನವೆ ಪ ನಂಬುಗೆ ಕಾರಣ ಅಂಬುಜಾಕ್ಷನ ಶ್ರೀಪಾ ದಾಂಬುಜ ಒಲಿಸಲು ಕುಂಭಿಣಿಯೊಳಗೆ ನಂಬಿ ಪ್ರಹ್ಲಾದ ಕರೆಯೆ ಕಂಬದಿಂ ಬಂದವನ ಬೆಂಬಿಡದಲೆ ಕಾಯ್ದನೆಂಬೋಕ್ತಿ ಕೇಳಿ ತಿಳಿದು 1 ದುರಿತದ ತವರಿದು ನರಕಕ್ಕೆ ಬೇರೆಲೊ ಮರವೆಸಂಸಾರ ಮಹಸರಸಿನಸರೋವರ ಸುರಸಿನೊಳ್ ಸಿಲ್ಕಲು ತಿರುಗರೆಂಬುವ ಹರಿಶರಣರ್ವಾಕ್ಯಗಳು ಸ್ಥಿರನಂಬೀ ಅರಿತು 2 ಕಿರಿಕಿರಿ ಸಂಸಾರ ಪರಿಪರಿಬಾಧಿಪ ಉರಿಕಿನ ತಿಂಡಿಯಿದು ನೆರೆನಂಬಬೇಡ ಜರಸುಖವಿಲ್ಲದ ಎರವಿನ ಕಾಯಕ್ಕೆ ಹಿರಿಹಿರಿ ಹಿಗ್ಗಿ ಕೆಡದಿರು ವಿವರಿಸಿನೋಡಿ 3 ಸತಿಸುತರಿವರೆಲ್ಲ ಅತಿಭಾಗ್ಯ ಇರುವನಕ ಸತತ ನಿನ್ನಯ ಸೇವೆ ಹಿತದಿಂ ಮಾಳ್ಪರು ಗತಿಸಿ ಪೋಗಲು ಭಾಗ್ಯ ಸತಿಸುತರೆ ನಿನ ಗತಿವೈರಿಗಳು ಕಾಣೊ ಮತಿಹೀನ ಮನಸೆ 4 ಇರುಳು ಹಲವು ಪಕ್ಷಿ ನೆರೆದುಂಡು ವೃಕ್ಷದಿ ತಿರುಗಿ ಉದಯದೊಳು ಹಾರಿಹೋಗ್ವ ತೆರದಿ ಸರುವ ಅಸ್ಥಿರವೆಂದು ಅರಿತು ವಿಚಾರಿಸಿ ಸ್ಥಿರಸುಖವನು ಪಡೆಯೊ ಶ್ರೀರಾಮನಡಿಗ್ಹೊಂದಿ 5
--------------
ರಾಮದಾಸರು
ದೀನ ಜನ ಅಭಿಮಾನವನು ನೀನು ಅನುದಿನದಲಿ | ರಕ್ಷಿಸುವೆ ಸಾನುಕೂಲದಿ | ಶ್ರೀ ನಿಧಿಯೆ ಧೀರ ಎಂದು | ವೀರ ಹರಿಮಾರ ಸಂಹಾರಸಖ ಕ್ರೂರ ಫಣಿದರ್ಪಹರನೇ | ಮುಕುಂದ ಮುಚಕುಂದ | ಪ್ರೀಯ ವರದನಾ ಮಾನಸದಿ ಅರಿತು ತವ ಕುರಿತು | ಭಕ್ತಿರತನಾಗಿಹ ಅನವರತ ಸುಖದಲಿಡುತಿಹ | ಕೃಷ್ಣಾ ಸಲಹು ಒಲವಿಂದ 1 ಅಂಕಿತ-ಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರಿತ ಪರಿಹರಿಸೋ ಭಾರಕನು ನೀನು ಪಾದ ಹೊಂದಿದವರಿಗೆಯಿನ್ನು ಪ ಮಾನವ ನಾನು ಮನ ಖಚಿತವಿಲ್ಲದ ಕಂದರಕೆ ಬಿದ್ದು ಬಹುಕಷ್ಟ ಪಡುತಾ ಸಂದೇಹವಾನು ಬಿಡದೆ ಸಂಶಯಿಸಿ ನಿನ್ನೊಮ್ಮೆ ಎಂದು ಕೊನಿಮದ ದೋಷದಿಂದ ಅದರಿಂದಾ 1 ಕಷ್ಟವನು ಪಡುವಾಗ ಕೃಷ್ಣ ನೀನೆ ಗತಿಯೆಂದು ಅಷ್ಟು ಮಾತ್ರ ಸುಖಬರಲು ಅರಿತು ನಿನ್ನ ನಿಷ್ಠರಾದವರನಾಸಂಖ್ಯ ಅರಿಯೆನು ಮಾಡ್ದ ದುಷ್ಟ ಬುದ್ಧಿಗಳಿಂದ ದುರುದ್ದೇಷದಿಂದಾ 2 ನೀನೆ ಸೂತ್ರಧಾರನಾಗಿರುವೆ ಸಕಲಕ್ಕೂ ನಾನೊಂದೂ ಅರಿಯದಜ್ಞಾನಿ ಹರಿಯೆ ಏನಾದರಾಗಲಿ ಇನ್ನು ಎನ್ನನು ಬಿಡದೆ ನೀ ದಯಮಾಡಿ ರಕ್ಷಿಸೋ ನಿಜ 'ಹೊನ್ನ ವಿಠ್ಠಲಾ 3
--------------
ಹೆನ್ನೆರಂಗದಾಸರು
ದೇವನಲ್ಲವೇನೋ ಸದ್ಗುರು ಮಹಾದೇವನಲ್ಲವೇನೋ | ಆದಿಯೋಳ್ ಸಿದ್ಧರು ಹೋದ ದಾರಿಯ | ತೋರಿ ಭೇದವ ಬಿಡಿಸಿದ ಮೂರುತಿ ಪ ನರಜನ್ಮದೊಳಗೆ ಬಂದು ನೀನು | ಪ್ರಪಂಚದ ಕಡಲು ಮಧ್ಯದಿ ನಿಂದು | ಅರಿತು ಮರೆತು ಒಮ್ಮೆ ಗುರುವೆಂದು ನೆನೆದರೆ | ಗುರುತಿಟ್ಟು ಅವರಿಗೆ ಪರತರ ತೋರುವ 1 ಆಶಾಪಾಶವ ಬಿಡಿಸಿ ಮಾಡಿದ | ದೋಷ ಭವಂಗಳ ಕರ್ಮವ ಕೆಡಿಸಿ | ನ್ಯಾಸ ಧ್ಯಾಸದಿ ಜಪ ಮಾಡೆ ಗುರು |ಬೋಧ ಪ್ರಕಾಶವ ತೋರಿದ ಈಶನು 2 ಭಕ್ತಿ ಜ್ಞಾನವ ಹಿಡಿದು ನಂಬಿದಗೆ | ಮುಕ್ತಿಯ ನಿಶ್ಚಯದಿ ಪಾಲಿಸುವ | ಕರ್ತೃ ಸದ್ಗುರು ಭವತಾರಕ ಧರೆಯಲಿ | ಪ್ರತ್ಯಕ್ಷವಾದಂಥ ಪರಬ್ರಹ್ಮರೂಪನು 3
--------------
ಭಾವತರಕರು
ದೇವನಾ ದರುಶನಾ ಜೀವನಾ ಪಾವನಾ ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ 1 ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ ದುರುಳ ಭವ ಗುರುವಿತ್ತಾತ್ಮಾನುಭವ 2 ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಧನ್ಯನಲ್ಲವೇ ಅವನು ಧನ್ಯನಲ್ಲವೆ ಪ ಪನ್ನಗಾರಿ ಧ್ವಜನ ಮಹಿಮೆಯನ್ನು ಪೊಗಳುತಿರುವ ನರನು ಅ.ಪ. ಅರುಣ ಉದಯದಲ್ಲಿ ಎದ್ದು ದುರಿತದೂರವನ್ನು ಸ್ಮರಿಸಿ ಹರುಷದಿಂದ ಶೌಚ ಕರ್ಮ ಅರಿತು ನಿರುತ ಚರಿಸುವರನು 1 ಸತ್ಯಮತದ ಪದ್ಧತಿಯನು ಚಿತ್ತವಿಟ್ಟು ಆಚರಿಸುತ ಭೃತ್ಯನೆಂದು ಪೇಳಿಕೊಳುವ ನಿತ್ಯ ತೃಪ್ತನಾದವರನು2 ಸಿರಿಯುತ ರಂಗೇಶವಿಠಲ ಸರುವ ದೇವರೊಡೆಯನೆಂದು ಸ್ಥಿರದಿ ನಂಬಿ ಅವನ ಪಾದ ಮರೆಯ ಹೊಕ್ಕ ಜಾಣ ನರನು 3
--------------
ರಂಗೇಶವಿಠಲದಾಸರು