ಒಟ್ಟು 4045 ಕಡೆಗಳಲ್ಲಿ , 127 ದಾಸರು , 2776 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1 ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2 ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3 ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4 ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5
--------------
ಶ್ರೀಪಾದರಾಜರು
ನೀನೆ ರಕ್ಷಿಸಬೇಕು ಹೀನಬುದ್ಧಿಯ ನರನ ಪಯೇನೆಂಬೆ ವಿಷಯಗಳೊಳು ಮನಮುಳುಗಿ ಧ್ಯಾನವನೊಮ್ಮೆಯು ಮಾಡದ ಮರುಳ ಅ.ಪಕಂಡುದನೆಲ್ಲವ ಬಯಸಿ ದಂಡಿಸಲಾರದೆ ಮನವಕೆಂಡಕೆ ಮುತ್ತುವ ಶಲಭನ ತೆರದಿ ಕಂಡು ನೊಂದು ಮತ್ತದ ಬಿಡದಿರಲು 1ಕಾಯವ ನಿತ್ಯವಿದೆಂದು ಹೇಯದಿ ತೋರಲು ಕಂಡು ನೋಯದೆ ತಾಪತ್ರಯಗಳನುಂಡು ಆಯಸಗೊಳುತಿರಲಿದ ನೀ ಕಂಡು 2ದುಃಖದಿ ನೋವರ ನೋಡಿ ಸುಕ್ಕುತಲಾಕ್ಷಣದೊಳಗೆದುಃಖವು ಬಂದರೆ ಪರಿಹರವಾಗದೆ ಸಿಕ್ಕಿರೆ ಬಲೆಯೊಳು ದುಃಖಿಸುತಿರಲು 3ಪ್ರಾಚೀನ ಕರ್ಮಗಳು ವೀಚಿಗಳಂದದಿ ಬರಲುಸೂಚಿಸಿ ಶಿಕ್ಷಿಪ ಶಾಸ್ತ್ರದ ನೆಳಲೊಳು ಚಾಚದೆ ತಾವೆ ತಾವಾಗಿರಲು 4ದುರಿತಗಳೆ ಬಹುವಾಗಿ ಸ್ಫುರಿಸುತ್ತಲಿರಲಾಗಿಮರುಗುವ ರಕ್ಷಕ ನೀನಿರಲಾಗಿ ಮರೆಯೊಗದಿರಲೀ ದುರಿತವ ನೀಗಿ 5ದ್ವಂದ್ವಗಳೊಂದೆಂದೊಮ್ಮೆ ನಿಂದಿರೆ ಕರ್ಮದ ಹೆಮ್ಮೆಹೊಂದದು ಎಂದಿಗು ಅದು ತನ್ನ ಸೊಮ್ಮೆಯೆಂದಿಗೆ ಹೃದಯದಿ ನಿಲುವೆ ನೀನೊಮ್ಮೆ 6ಮಾನವ ಬಿಟ್ಟರೆ ಬುದ್ಧಿ ಜ್ಞಾನದ ಸಾಧನ ಸಿದ್ಧಿತಾನೇ ಬರುವುದು ಪುಣ್ಯಸಮೃದ್ಧಿ ಜ್ಞಾನಾತ್ಮಕ ಕೃಷ್ಣ ನೀನಿರು ಹೊದ್ದಿ 7ಭಜಿಸಿದನೆ ಭಕ್ತಿಯಲಿ ಯಜಿಸಿದನೆ ಯಾಗದಲಿದ್ವಿಜತನವನ್ನಾದರು ಬಿಡದಿದ್ದನೆ ಅಜಮಿಳನೆ ನಿನ್ನೊಲವಿಗೆ ಸಾಕ್ಷಿ 8ಕರುಣಕಟಾಕ್ಷವ ನೀನು ುರಿಸಲು ಧನ್ಯನು ನಾನುತಿರುಪತಿ ನಿಲಯ ಶ್ರೀ ವೆಂಕಟ ಕಾಣು ಗುರು ವಾಸುದೇವರೂಪಿನ ಚಿದ್ಭಾನು 9ಓಂ ದಾನವೇಂದ್ರ ವಿನಾಶಕಾಯ ನಮಃ
--------------
ತಿಮ್ಮಪ್ಪದಾಸರು
ನೀನೆನಗೆರವೆ ನಾನಿನ್ನೆಂತಗಲುವೆಬಾ ನನ್ನ ತನುವೆ ಸದ್ಗುರುವಿಗೊಂದಿಸುವರೆ ಪಮೊದಲಿಗಮಿತ ದುಷ್ಟತನುಗಳ ಸಂಗದಿಕುದಿದು ಸಂಸಾರಾಗ್ನಿಯೊಳು ಬಳಲಿದೆನುಅದರಿಂದ ನಿನ್ನ ನಿಗ್ರಹಿಸಿದೆನಲ್ಲದೆಪದರದಿರೆನ್ನೊಳು ಪಡೆಯೆ ನಿನ್ನೊಂದನೂ 1ಗುರುಸೇವೆಗಲಸದೆ ಛಳಿಮಳೆಯೆನ್ನದೆಬರಿಯ ಬಯಲ ಸಂಸಾರ ಭೋಗದಲಿಎರಗದಿರೆನ್ನ ದಾರಿಗೆ ಬಾ ನಿನ್ನಾರೈಕೆುರಲೆನ್ನೊಳಿನ್ನು ತಪಿಸಿ ಕಂಗೆಡಿಪುದಿಲ್ಲ 2ಶ್ರವಣ ಸುಖದಿ ನನ್ನ ಬೆರೆದು ಬೇರಾಗದೆಭವಶರಧಿಯ ದಾಂಟುನಂತೆ ನೀ ಮಾಡುವಿವರಿಸಿ ಹರಿಗುಣ ಕಥೆಗಳನೆಮ್ಮೊಳುಕವಿದಿಪ್ಪ ತಮವ ತೊಲಗಿಸಿಕೊಂಬ ನಾವಿನ್ನು 3ನಿನ್ನಿಂದ ಸಂಸಾರ ವಿಷಯ ಸುಖದ ಲಾಭನಿನ್ನಿಂದ ಕೃಛ್ರಾದಿ ತಪಸಿನ ಲಾಭನಿನ್ನಿಂದ ಸತ್ಕರ್ಮತೀರ್ಥಯಾತ್ರೆಯ ಲಾಭನಿನ್ನಿಂದ ವೈರಾಗ್ಯ ಭಾಗ್ಯದ ಲಾಭ 4ನಿನ್ನೊಳಗಿರುವಿಂದ್ರಿಯಂಗಳಿಂದ್ರಿಯಗಳೊಳುಣ್ಣುವ ಮನ ಮನದೊಳು ಕೂಡ್ವ ಜೀವಎನ್ನುವರೆನ್ನನೆನ್ನಿರವನರಿಯೆನಿದನಿನ್ನಿಂದ ಗುರುಕೃಪೆವಡೆದು ತಿಳಿಯಬೇಕೂ 5ನೆವವಿಲ್ಲದುಪಕಾರಗೈವೆ ನೀನೆನಗಾಗಿವಿವಿಧ ಭೋಗದ ಸುಖವೆನಗೆ ನಿನ್ನಿಂದವಿವರಿಸೆ ನಿನಗೆ ಉಂಟು ಲಾಭವು ಮತ್ತೆನವೆವೆಯಲ್ಲದೆ ವೃದ್ಧಿಯಾಗುವೆಯಾ ಪೇಳು 6ನಿನ್ನಿಂದ ಸುಖಬಟ್ಟು ನಿನ್ನ ಬಾಳಿಸಲಾರದೆನ್ನನುಳುಹುವದೆಂತನ್ಯಾಯ ಸುಖವುಉಣ್ಣುವರಾರಿದನುಂಡು ಬದುಕಿರುವಅಣ್ಣನ ತಿಳಿಯಲು ಗುರುವೆ ಗತಿ ಕಂಡ್ಯಾ 7ವಂದಿಸಿಯೂಳಿಗಗೈವಲ್ಲಿಯಲಸದೆದಂದುಗ ಸುಖಕಾಗಿ ದಾರಿದೆಗೆಯದೆಒಂದಾಗಿ ಯೆನ್ನೊಳಿದ್ದರೆ ನನ್ನ ಸುಖವ ನಾಹೊಂದಲು ನಿನಗಾನಂದವಪ್ಪುದೆ ಕೇಳು 8ಮರುಗಿ ಮನದಿ ನಮ್ಮ ಮರವೆಯಾಟವ ಕಂಡುತಿರುಪತಿ ವೆಂಕಟರಮಣನು ತಾನೆಗುರುವಾಸುದೇವಾರ್ಯನಾಗಿಹನಾತನಚರಣವ ಮರೆಯೊಕ್ಕು ಬದುಕುವ ನಡೆಬೇಗ 9ಕಂ||ಜೀವನ ನುಡಿಯನು ಲಾಲಿಸಿಭಾವದಿ ಸರಿಬಂದ ಬಗೆಯ ಕಾಣದೆ ಗರ್ವದಿತಾವೊಲಿವರೆ ಮನಬಾರದುನೀವೊಬ್ಬನೆ ಸಾಧಿಸೆನೆ ಮನ ಕೆರಳಿ ನುಡಿದುದೂ
--------------
ತಿಮ್ಮಪ್ಪದಾಸರು
ನೀನೇ ಕಾಪಾಡಬೇಕು ನಿರುತವು ಬಿಡದೆಯ- ಜ್ಞಾನಾಬ್ಧಿಯ ದಾಟಿಸು ಸೀ- ಕಮಲ ಭೃಂಗ ಶುಭಾಂಗ 1 ಸುಗ್ರೀವನ ಮಂತ್ರಿವರ ದ- ಶಗ್ರೀವನ ಗುದ್ದಿದವನೆ ಶತ್ರುನಿಕರವಂ ಶೀಘ್ರದಿ ಗೆಲುವಂದದಲಿಯ- ನುಗ್ರಹವ ಮಾಡುತಲೆಮ್ಮ ಕೈಪಿಡಿ ಹನುಮ 2 ತ್ವರಿತವತಿ ನಿಧಾನವಲಸಿಕೆಗಳನು ಬಿಡಿಸಿ ಪಿರಿಯರು ಪೇಳಿದ ಪರಿಯಲಿ ನೆರೆನಡೆವಂದದಲಿ ಸುಮತಿಯನು ಕೊಡು ಹನುಮ3 ಹೊರಗಿನ ಶತ್ರುಗಳಂ ವಾ- ಕ್ಪೌರುಷದಿ ವೋಡಿಸಲುಬಹುದು ಒಳಗಿನ ಕಾಮ್ಯಾ ದ್ಯರ ಗೆಲುವುದಕೆ ಶಾಂತಿಯೆ ಕ್ಷುರವಹುದು ದಯಮಾಡಿ ನೀನೆ ಕರುಣಿಸು ಹನುಮ4 ಕತ್ತಿಯಲಿ ಕಡಿದೆರೆರಡಾ- ಗುತ್ತಿರುವುದು ಜಡವು ವಾಕ್‍ಕತ್ತಿಯ ದೆಸೆಯಲಿ ನೆತ್ತಿಮೊದಲು ಪಾದವರಿಗು ಕತ್ತರಿಸಿದರೀತಿಯಹುದು ಕಾಯೈ ಹನುಮ 5 ಪರಧನ ಪರಾಕಾಮಿನಿಯರಿ ಕೊರಳೊಳರಿವೆಂಬ ರಜ್ಜುವಿಂದಲಿ ವಿರಾಗ ದೊಣ್ಣೆಯನು ಕಟ್ಟಿ ಕೈಪಿಡಿ ಹನುಮ 6 ಸಂಗವು ನಿತ್ಯಾಹ್ನೀಕಕೆ ಭಂಗವು ಬರುತಿಹುದು ಸದ್ವಿಷಯವಾದರದೆ ಬಂಗಾರವು ರತ್ನವು ತಾ ಹಿಂಗದೆ ಸೇರಿಸಿದ ರೀತಿ ಹಿತವೈ ಹನುಮ 7 ನವವಿಧ ಭಕ್ತಿಯ ಕೊಡು ರಾ- ಘವನಂಘ್ರಿಪರಾಗದಲಿ ಕಡು ವಿರತಿಯನು ನೀಂ ತವಕದಲಿ ಪಾಲಿಸುತಲಿ ನಿ- ನ್ನವರಂ ಕೈಪಿಡಿವುದೆಂದಿಗೂ ಬಿಡದೆ ಹನುಮ 8 ತಾನನುದಿನದಿ ಬರುವ ಕಷ್ಟಗಳನು ಪರಿಹರಿಸುತ್ತ ಹಿಂದೆ ತಿರುಗುತಲಿರುವಂ9
--------------
ಗುರುರಾಮವಿಠಲ
ನೀನೇ ಗತಿಯೆನಗಿನ್ನು ದೀನನಾದೆನು ಬಹಳ ನೀನಲ್ಲದಾರು ಬಳಿಕಾ ದೇವಾಏನು ಸಾಧನವುಂಟು ಶ್ರುತ್ಯರ್ಥಗೋಚರವೆ ಧ್ಯಾನಧಾರಣೆ ದೂರವು ದೇವಾ ಪಕಾಣದೇ ನಿನ್ನಂಘ್ರಿಕಮಲವನು ಭವವೆಂಬಕಾನನಕೆ ಗುರಿಯಾದೆನು ದೇವಾಪ್ರಾಣರಕ್ಷಕರಿಲ್ಲದತಿ ಕಷ್ಟಕೊಳಗಾದಏಣ ಕುಣಕನೊಲಾದೆನು ದೇವಾಏನೆಂಬೆ ಮೂಢತ್ವವೇ ಮೌಲ್ಯವೆನಗಾಯ್ತುಜ್ಞಾನ ದೊರಕೊಂಬುದೆಂತು ದೇವಾಜ್ಞಾನವಿಲ್ಲದೆ ಬಂಧ ಪರಿಹರಿಸದೆಂದೀಗಮಾನಸದಿ ಮರಗುತಿಹೆನು ದೇವಾ 1ದುರಿತಕೋಟಿಗಳ ಜನ್ಮಂಗಳಲಿ ಮಾಡಿದರೆದೊರಕಿತದರಿಂದ ಜಡವು ದೇವಾಪರಿಪರಿಯ ಕರ್ಮಗಳು ಜನ್ಮಗಳ ಕೊಡುವದಕೆತರತರದಿ ಕರವಿಡಿದಿವೆ ದೇವಾಗುರಿಯಾದೆನೀ ಪರಿಯ ಕರ್ಮಶರಧಿಯ ತೆರೆಗೆಪರಿಹರವ ಕಾಣೆನಿದಕೆ ದೇವಾಪರಮ ಪಾವನವಾದ ದುರಿತಹರ ನಾಮಕ್ಕೆಕರಗದೋ ನನ್ನ ಕರ್ಮ ದೇವಾ 2ಲೋಕದೊಳಗಿಹ ಪಾತಕರು ತಾವು ಜೊತೆಯಾಗಿಬೇಕೆಂದು ಪಾತಕವನು ದೇವಾಜೋಕೆಯಲಿ ಛಲವಿಡಿದು ಪಾಪರಾಶಿಯ ಮಾಡೆಸಾಕೆ ನಾಮದ ಸೋಂಕಿಗೆ ದೇವಾನೂಕುವುದು ನಿಷ್ಕøತಿಗೆ ಮಲತ ಪಾಪವ ನಾಮಬೇಕೆ ನೆರವೆಂಬುದದಕೆ ದೇವಾಯಾಕೆ ನಾನೊಬ್ಬ ಮಾಡಿದ ಪಾಪರಾಶಿಯನುನೂಕದಿಹ ಬಗೆುದೇನು ದೇವಾ 3ದುರಿತವೆನಗಿಲ್ಲೆಂದು ಸ್ಥಿರಬುದ್ಧಿುಂದೊಮ್ಮೆುರುತಿಹೆನು ಧೈರ್ಯವಿಡಿದು ದೇವಾಅರಿವು ಸಿಕ್ಕದೆ ಮರವೆ ಮುಂದಾಗಿ ನಿಂದಿರಲುಮರುಗಿ ಮತ್ತೊಮ್ಮೆ ಮನದಿ ದೇವಾಅರಿವೆಂತು ಸಿಕ್ಕುವದು ದುರಿತಭರಿತನಿಗೆಂದುಸ್ಥಿರಬುದ್ಧಿ ನಿಲ್ಲದಿಹುದು ದೇವಾಉರುಳುವುದು ಮನವೆಲ್ಲಿ ಪರಿವುತಿಹೆ ನಾನಲ್ಲಿಸ್ಥಿರವೆಂದಿಗೆನಗಪ್ಪುದು ದೇವಾ 4ಏನಾದಡೇನಘವು ಬಹಳವಾಗಿಹುದಿದಕೆಹೀನಬುದ್ಧಿಯೆ ಸಾಕ್ಷಿಯು ದೇವಾನಾನಿನಿತು ದೋಯಾದಡದೇನು ದೋಗಳನೀನೈಸೆ ರಕ್ಷಿಸುವನು ದೇವಾಭಾನುವಿನ ಮುಂಭಾಗದಲಿ ತಿಮಿರ ತಾ ನಿಂದುಏನಾಗಬಲ್ಲುದೈ ದೇವಾದೀನತನವಳಿವಂತೆ ಜ್ಞಾನವನು ಬಳಿಕಿತ್ತುಆನತನ ನೀ ರಕ್ಷಿಸು ದೇವಾ 5ಕಾಲ ಬಂದರೆ ಮೋಕ್ಷ ತಾನೆ ದೊರಕುವದೆಂದುಮೇಲಾಗಿ ಶ್ರುತಿ ನುಡಿಯಲು ದೇವಾಕಾಲವೆಂಬೀ ನದಿಗೆ ಕಡೆುಲ್ಲ ಮೋಕ್ಷಕ್ಕೆಕಾಲ ತಾ ಬಹು ದೂರವು ದೇವಾಕಾಲಕರ್ಮಗಳೆಂಬ ನೇಮವನೆ ದೃಢವಿಡಿಯೆಕಾಲವೇ ಕಲ್ಪಿತವದು ದೇವಾಲೀಲೆುಂ ನಿರ್ಮಿಸಿದ ಸಂಸಾರ ಭಂಜನೆಗೆಕಾಲವದು ನಿನ್ನ ಕೃಪೆಯು ದೇವಾ 6ನನ್ನ ನಂಬಿದವರ್ಗೆ ಸಂಸಾರಗೋಷ್ಪದವುಚೆನ್ನಾಗಿ ನಂಬಿಯೆಂದು ದೇವಾನಿನ್ನ ನುಡಿುಂದ ಗೀತೆಯಲಂದು ಬೋಧಿಸಿದೆಧನ್ಯನಾದನು ಪಾರ್ಥನು ದೇವಾಉನ್ನತದ ಯೋಗಾದಿ ಸಾಧನದಿ ಪರಿಹರವೆನಿನ್ನ ಕೃಪೆಯೇ ಮುಖ್ಯವು ದೇವಾನಿನ್ನ ನಂಬಿದೆನು ತಿರುಪತಿಯ ವೆಂಕಟರಮಣಧನ್ಯ ಧನ್ಯನು ಧನ್ಯನೂ ದೇವಾ 7ಕಂ|| ಬುಧವಾರದರ್ಚನೆಯನಿದಮುದದಿಂ ಸ್ವೀಕರಿಸಿ ನನ್ನ ಮೊರೆಯಂ ಕೇಳ್ದಾಬುಧ ಸಂಗವನಿತ್ತು ನಿನ್ನಪದಸೇವಕನೆನಿಪುದೆಂದು ವೆಂಕಟರಮಣಾಓಂ ಕಾಳೀಯ ಫಣಾಮಾಣಿಕ್ಯರಂಜಿತ ಶ್ರೀಪದಾಂಬುಜಾಯ ನಮಃ
--------------
ತಿಮ್ಮಪ್ಪದಾಸರು
ನೀನೊಲಿಯಬೇಕು ನೀನೊಲಿಯಬೇಕು 'ಜ್ಞಾನ'ೀನನಿಗೆ ನಿತ್ಯಾನಂದ ಮೂರುತಿಯೆ ವಾಸುದೇವಾರ್ಯ ಪನರಳಿ ಬಹುಭವದಿ ನಾನಾ ಯೋನಿಮುಖಗಳಿಂದುರುಳಿ ಕೋಟಲೆಗೊಂಡು ಪುಳು ಪಕ್ಷಿ ಪಶು ಜಲಜತರು ಶಿಲೆಗಳೆನಿಪ ಹಲವಲಿ ನವೆಸವೆದು ಸ್ತ್ರೀಪುರುಷತ್ವ ಭೇದವಹ ನರಜನುಮ ಬಹರೆ 1ಪುರುಷನೆನಿಸಿದರು ಪಾದೋರು ಬಾಹುಜ ಭೇದವರಿತು 'ಪ್ರತ್ವ 'ದ್ಯಾ ನಯ 'ಜ್ಞಾನಶರಧಿಯೆನಿಸುವ ಭಾಗ್ಯ ಬರುವ ಸಾಧನಗಳನುಕರುಣಿಸುವ ಪರಮೇಶನೊಲಿವಂತೆನಗೆ 2'ವೃತ ಫಲವಹ ಸಶಾಸ್ತ್ರ ನಿಗಮಾಧೀತಿಯೊಪ್ಪದಿತದುಕ್ತ ಕರ್ಮಾಚರಣೆಗೈಯುತ ಸಮರ್ಪಿಸುತ್ತೀಶ್ವರಗೆ ತತ್ಫಲವ ಬಯಸದೆತೆಪ್ಪಗಿರುವಧಿಕಾರಿಯಪ್ಪ ಸತ್ಪಥಕೆ3ಶೃತಿಯುಕ್ತಿ ಸ್ವಾನುಭವಗಳ ಬಲದಿ ಮನನಗೈಯುತಲಿ ನಿತ್ಯಾನಿತ್ಯ ವಸ್ತುಗಳ ತಿಳಿದನರ್ಥತೆಯರ್ಥಗಳೊಳು ವೈರಾಗ್ಯ ಭಾಗ್ಯವನೀವಮತಿ ಬಂದು ಭಕತಿ ಜ್ಞಾನಗಳಳವಡುವರೆ 4ಬಂದ ವೈರಾಗ್ಯ ನೆಲೆಗೊಂಡು ಬಳಸಿದ ಕ್ರಿಯಾದಂದುಗವು ಸಡಿಲಿ ಬ'ರಂಗ ವ್ಯಾಪಿಸಿ ಕನಸೆಂದು ಕಾಣುತಲೂಡಲುಣುತಲುಡಿಸಿದರುಡುತತಿಂದು ತೇಗುವ ಕರ್ಮ ಬೆಂದು ಸುಖಿಯಹರೆ 5ಹೊರಗೊಳಗುಗಾಣದಾಗಸದಂತೆ ಬಯಲಾಗಿಕರಣಗಳ ಕಾಲಾಟವುಡುಗಿ ಸ್ವ ವ್ಯತಿರಿಕ್ತವರಸಿದರು ಸಂತೃಪ್ತಿ ತೋರದೆ ಸ್ವಾನುಭವಬರಿಯರಿವೆ ನೆಲೆಯಾಗಿ ತಾನೆ ತಾನಹರೆ 6ನಿಂತವೇದಾಂತ ಪದ್ಧತಿಯ ನಿಲಿಸುವರೆ ಮೊದಲಂತೆ ಕೃಷ್ಣಾವತಾರದಿ ಪಾರ್ಥಗೊರೆದ ಕೃಪೆವಂತ ನೀ ಮರಳಿ ಚಿಕನಾಗಪುರದಲಿ ಹೊಳೆದನಂತಮ'ಮನಾಗಿರುವೆ ವಾಸುದೇವಾರ್ಯ 7
--------------
ತಿಮ್ಮಪ್ಪದಾಸರು
ನೀಯೆನ್ನ ಸದ್ಭಾಗ್ಯ ಆನಂದ ನಿಧಿಯೊ ಪ ಮಧುವೈರಿ ತಾಯಿಯಂದದಿ ಕಾಯೊ ಅ.ಪ ಏನಾಗುವ ಪ್ರೀತಿ ನಿನ್ನಿಂದ ಎನಗಯ್ಯ ಜ್ಞಾನಾದಿ ಆನಂದ ಸುಗುಣ ಸಿಂಧು ದೀನ ಬಾಂಧವ ನಿನ್ನಧೀನದವ ನಾನಯ್ಯ ನಿತ್ಯ ಪವಮಾನ ಹೃತ್ಸದನ 1 ವಿದ್ಯ ಬುದ್ಧಿ ಜ್ಞಾನ ಮನಕರಣ ಶಕ್ತಿ ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ ಸಿದ್ಧಿಸೈ ಈ ಜ್ಞಾನ ಸರ್ವಕಾಲದಿ ದೇವ 2 ನಾನು ನನ್ನದು ಎಂಬ ದೋಷದ ಮಕರಿ ಗಾನೆ ಸಿಕ್ಕಿದ ತೆರದಿ ಮೊರೆಯುತಿಹೆನೊ ದಾನವಂತಕನೆ ಶ್ರೀ ಜಯೇಶವಿಠಲ ದೀನ ಕರಿಯನು ಪೊರೆದ ತೆರದಿ ಸಲಹೊ ಎನ್ನ 3
--------------
ಜಯೇಶವಿಠಲ
ನೀರಜ ಯುಗ ಮನೋ - ವಾರಿಜದಲಿ ನಾ ಭಜಿಸುವೆನು ಪ ಸಾರಿದ ಜನರ‌ಘದೂರದಿ ಓಡಿಸಿ ಧಾರುಣಿಯೊಳು ಸುರಸೌರಭಿ ಎನಿಸಿಹ ಅ.ಪ ಅವರ ಪದಜಲ ಈ ಭುವನತ್ರಯ ಪಾವನ ತರವೆಂದೆನಿಸುವದೋ ಅವರ ಪದಯುಗ ಕೋವಿದಜನರು ಭಾವದಿ ದಿನದಿನ ಸೇವಿಪರೋ ಅವರ ಹೃದಯದಿ ನಾರಾಯಣ ಚ - ಕ್ರಾವತಾರವ ಧರಿಸಿಹನೊ ಶ್ರೀವರ ಹರಿ ಕರುಣಾವಲೋಕನದಿ ದೇವಸ್ವಭಾವವ ನೈದಿಹರೋ 1 ಆವ ಮಾನವನಿವರಚರಣ ಸೇವಕತೆರನೆಂದೆನಿಸುವನ್ನೋ ಕೋವಿದ ಜನರೆಲ್ಲರು ಆವನ ದೇವೋತ್ತುಮನೆಂದೆನಿಸುವನು ಪಾವನಿ ಮುಖ ದೇವೋತ್ತುಮರೆಲ್ಲರು ಈ ವಿಧ ಮಹಿಮೆಯ ತೀವ್ರದಿ ತೋರುವ 2 ಅವರು ಅವನೀ ದೇವತೆಗಳಿಗೆ ಜೀವನವಿತ್ತು ಪೊರೆದಿಹರೋ ಪಾವಕಘಾಕಿದ ಹಾರವ ಮತ್ತೆ ಭೂವರನಿಗೆ ತಂದಿತ್ತಿಹರೋ ಮಾವಿನ ರಸದಲಿ ಬಿದ್ದಿಹ ಶಿಶುವಿಗೆ ಜೀವನವಿತ್ತು ಕಾಯ್ದಿಹರೋ ಶೈವನ ನಿಜಶೈವವ ಬಿಡಿಸೀ ತಮ್ಮ ಸೇವೆಯನಿತ್ತು ಕಾಯ್ದಿಹರೋ 3 ಸಲಿಲವ ತಂದಿರುತಿಹ ನರನಿಗೆ ಸುಲಲಿತ ಮುಕ್ತಿಯನಿತ್ತಿಹರೋ ಚಲುವ ತನಯನಾ ಪುಲಿನದಿ ಪಡೆದಿಹ ಲಲನೆಯ ಚೈಲದಿ ಕಾದಿಹರೋ ಸಲಿಲವು ಇಲ್ಲದೆ ಬಳಲಿದ ಜನಕೆ ಸಲಿಲವನಿತ್ತು ಸಲಹಿದರೋ ಇಳೆಯೊಳು ಯತಿಕುಲತಿಲಕರೆಂದೆನಿಸಿ ಸಲಿದಂಥದು ತಾವು ಸಲಿಸಿಹರೋ 4 ಅನುದಿನದಲಿ ತಮ್ಮ ಪದಕಮಲವನು ಮನದಲಿ ಬಿಡದೆ ಭಜಿಸುವರಾ ಜನರಿಗೆ ನಿಜಘನಸುಖವನು ಕೊಟ್ಟವ - ರನುಸರಿಸೀ ಇರುತಿಹರಾ ಮನೋ ವಾಕ್ಕಾಯದಿ ನಂಬಿದ ಜನಕೆ ಜನುಮವನ್ನುನೀಡರು ಇವರ ಘನಗುಣ ನಿಧಿ ಗುರುಜಗನ್ನಾಥ ವಿಠಲ - ನಣುಗಾಗ್ರೇಸರೆರೆನಿಸಿಹರಾ 5
--------------
ಗುರುಜಗನ್ನಾಥದಾಸರು
ನೀರಜಗಂಧಿಯೇ ಹೇಳೇ ಸುಳಿದವರಾರಮ್ಮಾ | ನೀರಜ ಶರಪತಿ ಕಾಣಮ್ಮಾ ಪ ಅರುಣನಖಾಂಗುಲಿ ಗುಲ್ಫ ಗೆಜ್ಜೆ ಕಾ- ಪುರ ನೂಪುರದ ಲೊಪ್ಪುವನವದಾರಮ್ಮಾ | ಸರಸಿಯೊಳಗಪೊಕ್ಕು ತಮನಸುವ ಬಗೆದು | ವರಶೃತಿ ತಂದವ ಕಾಣಮ್ಮಾ 1 ಕಲಿ ದಶನಂದದಿ ಜಂಘೆ ಪೊಂಬಾಳೆಯ | ಪರಿಯ ತೊಡೆಯುಳ್ಳುವ ದಾರಮ್ಮಾ | ಶರಧಿ ಮಥಿಸುವಂದುಗಿರಿನಿಲ್ಲದಿರೆ ಬಂದು | ಭರದಿ ಬೆನ್ನೆವಿತ್ತವ ಕಾಣಮ್ಮ2 ಕಾಂಚನ ವಸನನಿರಿಯ ಮ್ಯಾಲ ವಡ್ಯಾಣ ಮಿಂಚಿನ ಘಂಟೆಯ ದಾರಮ್ಮಾ | ಕ್ಷಿತಿ ವಯ್ದದನುಜನ ಶೀಳಿ ವಿ | ರಂಚಿ ಗುಳಹಿದವ ಕಾಣಮ್ಮಾ3 ಕಿರಿಡೋಳ್ಳಾತ್ರಿವಳಿಯ ನವರತ್ನ ಪದಕಿಹ | ಉರಸಿನ ವತ್ಸನವ ದಾರಮ್ಮಾ | ನರಹರಿ ರೂಪದಿ ಹಿರಣ್ಯಕನನು ಕೊಂದು | ಶರಣನ ಕಾಯ್ದವ ಕಾಣಮ್ಮಾ4 ಕೌಸ್ತುಭಹಾರ ಮೌಕ್ತಿಕದ ಕೊರಳಲಿಹ | ಹಸ್ತ ಕಡಗದವ ನಾರಮ್ಮಾ | ಸ್ವಸ್ತಿ ಎನುತ ಬಂದು ಬೇಡಿ ಬಲಿಯಾಗರ್ವ | ಸ್ವಸ್ತಿ ಮಾಡಿವನು ಕಾಣಮ್ಮಾ5 ಕ | ಪೋಲ ಹೊಳಹಿನವ ದಾರಮ್ಮಾ | ಏಳು ಮೂರು ಬಾರಿ ಕ್ಷತ್ರಿಯ ರಾಯರ ಸೋಲಿಸಿ ಬಂದವ ಕಾಣಮ್ಮಾ6 ಕರ್ಪೂರ ಕರಡಿಗಿ ಬಾಯಿ ಸಂಪಿಗೆಯಂತೆ | ತೋರ್ಪ ನಾಶಿಕದವ ದಾರಮ್ಮಾ | ದರ್ಪ ಮುರಿದು ರಾವಣನ ತಲಿಯ ಧರೆ | ಗೊಟ್ಟಿಸಿದವ ನಿವ ಕಾಣಮ್ಮಾ7 ಕುಡಿಗಂಗಳ ಭ್ರೂಲತೆಯ ಪೆರೆನೆಣೆಸಲು | ಪೊಡವಿಯೊಳಗ ನಂಬಿದ್ದ ಪಾಂಡವರನು | ಬಿಡದೆ ಸ್ಪಾಪಿಸಿದವ ಕಾಣಮ್ಮಾ8 ಕುರುಳು ಗೂದಲು ತಳಕದ ಮಾಲ್ಯ ಮೌಲಿಕ | ಧರಸಿದ ಮುಕುಟವ ದಾರಮ್ಮಾ | ತರಳನಾಗಿ ಮುಪ್ಪುರ ನಾರಿಯರ ವೃತ | ತ್ವರಿತದಿ ಅಳಿದವ ಕಾಣಮ್ಮಾ9 ನೋಡಲು ಮನಸಿಗೆ ಮೋಹನೆ ಮಾಡುವ | ಪ್ರೌಡದಿ ಮನವವ ದಾರಮ್ಮಾ | ರೂಢಿಲಿ ಕುದುರೆಯ ಏರಿ ಕಲಿಮಲವ | ಝಾಡಿಸಿದವನಿವ ಕಾಣಮ್ಮ10 ಸಹಜದಿ ಸವಿಸವಿ ಮಾತಲಿ ಸೋಲಿಸು | ತಿಹ ಸರ್ವರಿಗಿವ ದಾರಮ್ಮಾ | ಮಹಿಪತಿ ಸುತನ ಹೃದಯದಲಿ ನಿಂತು ತನ್ನ| ಮಹಿಮೆ ಬೀರಿಸುವವ ಕಾಣಮ್ಮಾ11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರಜಾಕ್ಷ ನಿರ್ದಯವ್ಯಾಕೊ ಕರುಣದಿ ಎನ್ನಾ ಪ ಒಡಲಿಗನ್ನಾ ತೊಡಲು ಅರಿವೆ ಕೊಡುವವರನು ನಾ ಕಾಣೆ ಹರಿಯೇ ಬಡತನ ಕಂಗೆಡಿಸಿತೋ ಕಡೆಗ್ಹಾಯಿಸಯ್ಯ ತ್ವರದಿ ಗುಣಮಣಿಯೇ 1 ಖೂಳ ಜನರ ಆಳಾಗಿ ನಾ ಹಾಳು ಒಡಲನ್ನು ಹೊರೆಯಲಾರೇ ಕೂಳಿಗೋಸುಗ ಬಾಳಾಯ್ತೀಪರಿ ತಾಳಲಾರೆ ಕಾಯೋ ಮುರಾರೇ2 ನೀ ಕೈಬಿಡಬ್ಯಾಡೋ ಶ್ರೀ ಹನುಮೇಶವಿಠಲನೆ ಎನ್ನಾ ಇಷ್ಟದಂದರಿ ಥಟ್ಟನೆ ಮಾಡೋ 3
--------------
ಹನುಮೇಶವಿಠಲ
ನೀರಜಾಕ್ಷೇರೆಲ್ಲ ಬಂದು ಮಾರಜನಕಗೆ ಆರತಿ ಎತ್ತಿರೇ ನಾರಿಮಣಿ ಶ್ರೀ ರುಕ್ಮಿಣಿಮಣಿಗೆ ಪ ವೇದವನು ಕದ್ದ ಖಳನ ಬೇಧಿಸಿದವಗೆ ಆದರದಿಂದ ಮಂದರವೆಂಬೋ ಭೂಧರ ತಂದವಗೆ 1 ಕುಂಭಣಿಯನ್ನು ಬಿಡದೆ ತಂದ ಕುಂಭಿಣಿರಮಣಗೆ ಕಂಭದಿ ಬಂದು ದನುಜ ಡಿಂಭನ ಕಾಯ್ದ ನೃಹರಿಗೆ 2 ಭೂಮಿ ಬೇಡಿದವನಿಗೆ ದುಷ್ಟ ಭೂಮಿಪ ಹರನಿಗೆ ಕಾಮಿನಿಚೋರನ ಶಿರವ ತರಿದ ಸ್ವಾಮಿ ರಾಮಗೆ 3 ಪಾಂಡುಸುತರ ಸಲಹಿ ಖಳರ ದಂಡಿಸಿದವಗೆ ಚಂಡತ್ರಿಪುರರ ಹೆಂಡರ ವ್ರತವ ಖಂಡನೆ ಮಾಳ್ಪಗೆ 4 ದುರುಳ ನೃಪರ ತರಿದ ಕಲ್ಕಿಗೆ ವರದ ನಾಮಗಿರಿ ಶ್ರೀಹರಿಯ ಚರಣಕಮಲಕೆ 5
--------------
ವಿದ್ಯಾರತ್ನಾಕರತೀರ್ಥರು
ನೀರಿನೊಳು ಮುಳುಗುತಿರೆ ತೋರದಲಿ ಪೋಗುವರೆ ಕರ ಪಿಡಿವರೈ ತೋರು ಶೌರೇ ವಾರಿಜಾನಾಭ ಭಯ ತೋರುವರೆ ಕರುಣಾಳು ಬಾರದಿರುವಂಥ ಅಪರಾಧವೇನೆಲೊ ಹರೀ ಪ. ಪರಿ ಮನಸಿನೊಳಗೊಂದು ಪರಿ ವನಜನಯನನೆ ಭಯವ ತೋರಿ ತೋರೀ ಪರಿ ಏನೋ ಬಿನಗುದೈವರ ಗಂಡ ಪರಿಹರಿಸು ಗಂಡಾ1 ಕರಿಯ ನೀರೊಳು ಕಾಯ್ದೆ ಪೊರೆದೆ ನೀರೊಳು ಮನುವ ಧರಣಿ ಪ್ರಹ್ಲಾದರನು ಜಲದಿ ಸಲಹೀ ಬಿರುದು ಪೊತ್ತವ ಎನ್ನ ಪರಿಯನರಿಯೆಯೆ ದೇವ ಪೊರೆವರಿನ್ನಾರು ಹೇ ಕರುಣಾಳು ಶರಣೂ 2 ಮುಳುಗಿಹೆನು ಸಂಸಾರ ಗಣಿಸಲಾಗದ ಕರ್ಮ ಕರವ ಪಿಡಿದೂ ಧಣಿಸು ನಿನ ದಾಸತ್ವ ಧರೆಯೆ ಮೇಲ್ ಡಂಗುರದೀ ಘಣಿಶಾಯಿ ಗೋಪಾಲಕೃಷ್ಣವಿಠಲ ಕೈಪಿಡಿದು 3
--------------
ಅಂಬಾಬಾಯಿ
ನೀರೆ ದ್ವಾರಕೆಯ ಸೊಬಗು ಬ್ರಹ್ಮರಾಯ ಬಟ್ಟಾನು ಬೆರಗು ನೀರೆಪ. ಚದುರೆ ಬಾಜಾರದಿ ಕುದುರೆ ಸಾಲುಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟುಎದುರಿಗೆ ಬಾಹೋ ರಥಗಳೆಷ್ಟು ಅಂಬಾರಿಸದರಿನ ಆನೆ ಸೊಬಗೆಷ್ಟು1 ಹಿಂಡು ಗೆಳತಿಯರೆಲ್ಲ ತಂಡ ತಂಡ ನೆರೆದುದುಂಡು ಮಲ್ಲಿಗೆಯ ತುರುಬಿನದುಂಡು ಮಲ್ಲಿಗೆ ತುರುಬಿನ ಕುವರಿಯರು ಚಂಡನಾಡುವÀರು ಕಡೆಯಿಲ್ಲ 2 ನೀಲಮಾಣಿಕ ಬಿಗಿದ ಮೇಲಾದ ಮನೆಗಳುಮ್ಯಾಲೆ ಕನ್ನಡಿಯ ನಿಲ್ಲಿಸ್ಯಾವಮ್ಯಾಲೆ ಕನ್ನಡಿಯ ನಿಲ್ಲಿಸಿದ ಮನೆಯೊಳುಸಾಲು ದೀವಟಿಗೆ ಸೊಬಗೆಷ್ಟು 3 ಬಟ್ಟ ಮುತ್ತಿನ ತೋರಣ ಕಟ್ಟಿದ ಮನೆಯೊಳುಅಟ್ಟಳ ಮ್ಯಾಲೆ ಧ್ವಜಗಳುಅಟ್ಟಳ ಮ್ಯಾಲೆ ಧ್ವಜಗಳು ಗಗನಕ್ಕೆಮುಟ್ಟಿವೆಂಬಂತೆ ನಿಲ್ಲಿಸ್ಯಾವೆ4 ದೊರೆಗಳ ಮನೆಯಿಂದ ಬರೆದ ಚಿತ್ರದÀ ಬೊಂಬೆಗಳುಕರೆದಾವ ಕೈ ಬೀಸುತೆಕೈ ಬೀಸಿ ನಮ್ಮ ಎದುರಿಗೆಬರತಾವೆಂಬಂತೆ ನಿಲ್ಲಿಸ್ಯಾವ 5 ಏಳಂತಸ್ತಿನ ಮಾಳಿಗೆ ಮ್ಯಾಲಿನ ಗೊಂಬೆಗಳು ಬಾಳೆ ಎಲೆಯಂತೆ ಬಳಕುತ ಬಾಳೆ ಎಲೆಯಂತೆ ಬಳಕುತಕಿವಿಮಾತು ಹೇಳ್ಯಾವೆಂಬಂತೆ ನಿಲ್ಲಿಸ್ಯಾವೆ6 ಮದನ ಜನಕನು ಸುಳಿಯೋನೆಒಮ್ಮೊಮ್ಮೆ ಮುದದಿ ಭಕ್ತರನ ಸಲುಹಲಿ 7
--------------
ಗಲಗಲಿಅವ್ವನವರು
ನೀಲ ಕನಕಚೇಲ ಲೀಲಯಾ ಪ ಪುಲಿಶೈಲರಚಿತಲೀಲಾ ರಮಾಲೋಲ ಪಾಲಯಾ ಅ.ಪ ಶರದಿಂದುವದನ ಕುಂದರದನ ನಂದನಂದನಾ ಅರವಿಂದನಯನ ಸಿಂಧುಶಯನ ವಂದಿ ಚಂದನಾ 1 ಯದುರಾಜ ಕಲ್ಪಭೂಜದೇವರಾಜಪೂಜಿತ ಕರಿರಾಜರಾಜರಾಜ ಸಮವಿರಾಜ ರಾಜಿತ 2 ಘನದುರಿತ ಪಟುಲಹರಣ ಚಟುಲಚರಣಪಾಟಲಾ ಕರಿವರದ ವಿಮಲಚರಿತ ವಿಪುಲವರದವಿಠಲ 3
--------------
ವೆಂಕಟವರದಾರ್ಯರು
ನೀಲ ಚೇಲ ಲೀಲಯಾ ಪುಲಿಶೈಲರಚಿತಲೀಲರಮಾಲೋಲ ಪಾಲಯಾ ಪ ಶರದಿಂದುವದನ-ಕುಂದರದನ ನಂದ ನಂದನಾ ಅರವಿಂದ ನಯನ ಸಿಂಧುಶಯನ ವಂದಿ ಚಂದನಾ1 ಯದುರಾಜಕಲ್ಪಭೂಜದೇವ ರಾಜಪೂಜಿತ ಕರಿರಾಜರಾಜ ರಾಜ ಸಮ ವಿರಾಜ ರಾಜಿತ 2 ಘನದುರಿತ ಪಟುಲಹರಣ ಚಟುಲಚರಣ ಪಾಟಲಾ ಕರಿವರದ ವಿಮಲ ಚರಿತ ವಿಪುಲ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು