ಒಟ್ಟು 3159 ಕಡೆಗಳಲ್ಲಿ , 111 ದಾಸರು , 1823 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗೆ ಯಾರು | ಯಾರಿಗು ಯಾರು ಯಾರಿಲ್ಲಾ | ಯಾರಿಲ್ಲ ಪ ನಾರಾಯಣನೊಬ್ಬ | ಸಾರುವ ಸಮಯಕೆ ಬೇರೊಬ್ಬರಿಲ್ಲ ಕಂಡ್ಯಾ ಜೀವವೇ ಅ.ಪ. ತಂದೆ ತಾಯಿ ಸುತ | ಬಂಧು ಬಳಗ ಜನಮಂದಿಯೊಬ್ಬರು ಬರರೊ ||ಸಂದೋಹದಿಂದ ಜೀವ | ನೊಂದು ಪೋಗುವ ವೇಳೆಬಂಧು ಬಳಗ ರೋದನಾ | ಬಲು ರೋದನ 1 ಅಂದಾದರವನ್ಹಿಂದೆ | ಪೋಗೋರೊಬ್ಬರ ಕಾಣೆಸಂದೋಹ ಸುಟ್ಟು ಬರುವರೋ ||ಬಂದು ಮಶಣದಿಂದ | ಮಿಂದು ಮೆಲ್ಲದೆ ಇರುವಮಂದಿಯೊಬ್ಬರ ಕಾಣೆನೋ | ಎಲ್ಲು ಕಾಣೆನೊ 2 ಕಾಲ ಕಳೆಯುತ ಬರೆ | ಮೇಲಾದ ದುಃಖ ಮರೆಕಾಲಾ ನಾಮಕ ಲೀಲೆಯೋ ||ವ್ಯಾಳಾ ವ್ಯಾಳಕೆ ಮೆದ್ದು | ಜೋಲು ಮುಖವ ಬಿಟ್ಟುಲೀಲಾ ವಿನೋದ ಮಾಡರೇ | ಅದ ಬಿಡುವರೇ 3 ಪಥ ಸೇರೋ | ಅದ ಸೇರೋ 4 ಬಂದದ್ದು ಹೋದದ್ದು | ಮುಂದೆ ಬರುವುದನುದ್ವಂದ್ವಕರ್ಮಗಳೆಲ್ಲವಾ ||ಸುಂದರ ಗುರು ಗೋ | ವಿಂದ ವಿಠಲ ಪಾದದ್ವಂದ್ವ ಕರ್ಪಿಸೊ ಬಿಡದೇ | ಮರೆಯದೇ 5
--------------
ಗುರುಗೋವಿಂದವಿಠಲರು
ಯಾರು ಇದ್ದರೇನು ನಿನ್ನ ಪಥಕೆ ಬಾರರೋ ಶ್ರೀಹರಿ ಮುರಾರಿ ಎಂದು ಗತಿಯ ನೋಡಿ ಕೊಂಡಿರೋ ಪ ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು ತನ್ನವರು ಎಂದು ಬರುವರೋ ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ ಪರಿಕಾಲದಲ್ಲಿ ನಿನ್ನ ಕುಶಲವಾರ್ತೆಗಳನು ಮುನ್ನ ಕೇಳರೋ 1 ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲನೆರೆದು ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ ಬಂಟ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ ಮುಂದೆ ಸುಳಿಯರೋ 2 ತುಂಬಿ ಇರಲು ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ ವಡವೆ ವಸ್ತು ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ ಕೈಯ ನಿನ್ನ ನೊಂದ ನುಡಿಯ ನುಡಿಸರೋ 3 ಮಡದಿ ಮಕ್ಕಳೆಲ್ಲ ನಿನ್ನ ಒಡನೆ ಹುಟ್ಟಿದವರು ಸಹಿತ ಕಡು ಮಮತೆಯಿಂದಲವರು ನೋಡಿ ನಡೆವರೋ ಉಡಲು ತೊಡಲು ಒಡಲಿಗಿಷ್ಟು ಕಡಿಮೆಯಾಗಿ ಎಂದು ಹೊಡೆದು ಕೊಂಬರೋ 4 ಮೃತ್ಯುನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ ಸತ್ತು ಹುಟ್ಟಿ ಸಾಯ ಬೇಡಿ ಚಿತ್ತದಲ್ಲಿ ಭೀಮನಕೋಣೆ ಗೊತ್ತಿಲಿದ್ದ ಲಕ್ಷ್ಮೀಪತಿಯ ಒತ್ತಿ ಭಜಿಸಿರೋ 5
--------------
ಕವಿ ಪರಮದೇವದಾಸರು
ಯಾರೊಡನುಸುರವೆನೋ ಕಡಲಶಾಯಿ ಬಿಡದೆ ನಿನ್ನನು ಅಡಿಗಡಿಗೆ ಕೊಂಡಾಡುವ ಹುಡಗನ ಮೇಲಿಷ್ಟು ಕರುಣವಿಲ್ಲದರಿಂದ ಪ ಪೊಡವಿಯೊಳಗೆ ಜನಿಸಿರುವರೊಳಗೆ ನಾನೆ ಕಡೆ ಈಗ ಬಸುರಿನೋಳ್ ಪಡೆದ ಮಗನು ತನ್ನ ಮಡದಿ ಮಕ್ಕಳನು ಎನ್ನೊಡನಿತ್ತು ನಾಕಕೆ ನಡೆದನೆನಗೆ ನಡುಮರಣವ ಹೊರಸಿ 1 ಕೆಟ್ಟ ಬದುಕ ಕಾಣಲಾರೆ ಮಾಳ್ಪರೆ ಎನ್ನ ರಟ್ಟೆ ಬಲವು ತಗ್ಗಿ ಹೋಯ್ತು ಮೊಮ್ಮಕ್ಕಳ ಅಟ್ಟುಳಿ ಬರಿಸನ್ನವಸ್ತ್ರಾಭರಣಕೆಂದು ಕುಟ್ಟಿ ಕೊಂಬರು ಎನಗಿದಿರಾಗಿ ಶಿವನೇ 2 ನಾನು ಎಂಬುವರಿಲ್ಲ ಗೃಹಕೃತ್ಯದೊಳಗೆನ್ನ ಮಾನಿನಿಯೊರ್ವಳುಂಟಿದರೊಳು ಸೊಸೆಯಷ್ಟು ಏಕೆಂದ ರೇನು ಸಂಸಾರವಿದನು ಪವಮಾನ ಸುತನ ಕೋಣೆ ಲಕ್ಷ್ಮೀಶ ನಡೆಸು 3
--------------
ಕವಿ ಪರಮದೇವದಾಸರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ
ಯೋಗಿ ದಿವಾಳಿ ತನ್ನಉದ್ಯೋಗವುಡುಗಿ ಕೈಗಂಟು ಮುಳುಗಲು ಪ ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತುಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು1 ತಪ್ತನಾಲಕು ಒಡವೆ ತಾರದಲ ಹೋಯಿತುಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತುಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು2 ದೇಣಿಗಾರನು ಚಿದಾನಂದನು ಒಂದೇ ಕುಳಿತುದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆಮಾಣದಲೆ ತನ್ನಾಳು ಮಗನ ಮಾಡಿಕೊಂಡ3
--------------
ಚಿದಾನಂದ ಅವಧೂತರು
ಯೋಗಿ ವೇಷ ನೀಚನಾಯಿ ನಿನಗ್ಯಾತಕೆ ತತ್ವ ಭಾಷಾ ಹುಚ್ಚನಾಯಿ ನಿನಗೇತಕೆ ವಸ್ತ್ರ ಕಾಷಾ ಮುರುಕುನಾಯಿ ನಿನಗೇತಕೆ ಗುರುಪಾದವಾಸ ಹೊಲಸ ಪ ಕೊರಳಿಗೆ ಕಪನಿ ತೊಟ್ಟು ಜಪಸರವನೆ ಮುಂಗೈಯಲಿಟ್ಟು ತತ್ವಬರಿನುಡಿ ಸಾಲು ಸಾಲಿಟ್ಟು ಕಾಲಕೆರವನೆ ಇವನ ಬಾಯೊಳಗೆ ವಷಟ್ಟು ಭ್ರಷ್ಟಾ1 ನೀರೊಳಗೆ ನೆರಳನೆ ನೋಡಿ ಹಣೆಗೆಗೀರುವೆ ಗಂಧವ ತೀಡಿ ಪೋರಪೋರರ ಜೋಡನೆ ಕೂಡಿ ನಿನ್ನಮೋರೆಯ ಮೇಲೆ ಹುಯ್ಯಬೇಕು ಕಸ ಪುಡಿಕೆ ಕಡುಗ 2 ಅತ್ತ ಸಂಸಾರ ಕೆಟ್ಟುಮತ್ತಿತ್ತ ಗುರುಪಾದವ ಬಿಟ್ಟು ನೀನತ್ತತ್ತ ಉಭಯ ಭ್ರಷ್ಟಾ ನಿನಗೆಸತ್ತಿಹರು ಅರಮನೆಯ ಗೌಡೆಯರೆಷ್ಟು ಜಾಣ3 ಕಂಡ ಕಂಡಲ್ಲಿಯೇ ಉಂಡುದೊಡ್ಡ ಹೊಟ್ಟೆಯ ಬೆಳೆಸಿಕೊಂಡುಬಾಡದಂಡೆಯ ಮನೆಗಂಟಿಕೊಂಡು ನಿನ್ನಮಂಡೆಯ ಹೊಡಿಬೇಕು ಪಾಪಾರಿಕೊಂಡು ಹೊಲೆಯ 4 ಇಂದು ಕೆಟ್ಟಾ5
--------------
ಚಿದಾನಂದ ಅವಧೂತರು
ಯೋಗಿ ಯೋಗಿ ಪ ಉಡುವರ ಕಂಡು ಉಡುವನು ತಾನುತೊಡುವರ ಕಂಡು ತೊಡುವನು ತಾನುಕೊಡುವರ ಕಂಡು ಕೊಡುವನು ತಾನಾಗಿ 1 ನಡೆವರ ಕಂಡು ನಡೆವನು ತಾನುಹಿಡಿವರ ಕಂಡು ಹಿಡಿವನು ತಾನುಬಿಡುವರ ಕಂಡು ಬಿಡುವನು ತಾನು 2 ಪೇಳ್ವರ ಕಂಡು ಪೇಳ್ವನು ತಾನುಕೇಳ್ವರ ಕಂಡು ಕೇಳ್ವನು ತಾನುತಿಳಿವರ ಕಂಡು ತಿಳಿವನು ತಾನಾಗಿ3 ಆಡುವರ ಕಂಡು ಆಡುವನು ತಾನುಕಾಡುವರ ಕಂಡು ಕಾಡುವನು ತಾನುಓಡುವರ ಕಂಡು ಓಡುವನು ತಾನಾಗಿ 4 ಹಿರಿಯರ ಕಂಡು ಹಿರಿಯನೆ ತಾನಾಗಿಕಿರಿಯರ ಕಂಡು ಕಿರಿಯನೆ ತಾನಾಗಿಗುರು ಚಿದಾನಂದನೆ ತಾನಾಗಿ 5
--------------
ಚಿದಾನಂದ ಅವಧೂತರು
ರಕ್ಷಿಸೆ ಏಕನಾಥೆ ತಾಯೆ ದಯದಿಂದ ಎನ್ನನು ಸೊಕ್ಕಿದ ದೈತ್ಯ ಸಂಹಾರೆ ಶರಣ ಜನೋದ್ಧಾರೆ ಪ. ದುರಿತ ದುಃಖ ನಿವಾರಿ ಶರಣರ ಸಲಹುವ ದಾತೆ ಖಳರೆದೆಗಂತೆ ನಿಡಿ ಗುರುಳ ಬಾಲೆ ಪಲ್ಲವಪಾಣಿ ಸುರರ ನಾಯಕಿ ಅಖಿಲದೇವಮಾತೆ ವಿಖ್ಯಾತೆ 1 ಅಳುವಾಡುವ ರಂಗನ ಅದೇನರಿತು ಭಂಗ ಬಾಳ ಬಡಿಸಿದೆಯವ್ವ ಭಕ್ತರುದ್ಧಾರಿ ಕಾಳಗದೊಳು ಕಂಠೀರವೆ ಕರೆದಭಯವನೀವೆ ಸುಕೃತ ಪಂಥಗಾರ್ತಿ 2 ಹಿಂಡು ಭೂತಂಗಳಿಗೆಲ್ಲ ಹೆಚ್ಚಿನ ಬಿರುದನೆ ತಾಳ್ದೆ ಚಂಡಿ ಚಾಮುಂಡಿ ತ್ರೈಲೋಕ್ಯನಾಥೇ ಕಂಡು ನಮಿಸುವರ ಕಾಯ್ವೆ ಕಾಮಿತದಾತೆ 3 ಇಂದ್ರಾದಿ ದಿಕ್ಪಾಲಕರು ವಂದಿಸಿ ಸ್ತುತಿಮಾಡಲವರ ಬಂಧನವ ಪರಿಹರಿಸಿದೆಯೆ ಚಂದ್ರಮುಖಿಯೆ ಇಂದು ಬಂದ ಬಂಧನವ ಬಿಡಿಸಿ ಎಂದೂ ಎನ್ನ ನೀ ಕಾಯೆ ತಾಯೆ 4 ಮಲೆತ ಮಹಿಷಾಸುರನ ಕೊಂದೆ ಮಲೆಬೆನ್ನೂರಿನಲಿ ನಿಂದೆ ಬಲುನೇಮವಂತೆ ಸಂತೆಹರವಿಲೆ ನಿಂತೆ ಪುಲ್ಲಲೋಚನೆ ಪ್ರಖ್ಯಾತೆ ಪರಶುರಾಮನ ಮಾತೆ ಹೆಳವನಕಟ್ಟೆ ರಂಗನ ಸಹೋದರಿ5
--------------
ಹೆಳವನಕಟ್ಟೆ ಗಿರಿಯಮ್ಮ
ರಕ್ಷಿಸೊ ಸ್ವಾಮಿ ನೀ ಪಕ್ಷಿ ಸುವಾಹನ ಭಿಕ್ಷೆ ಸುನೀಡೊ ನೀ ಲಕ್ಷ ಸುಸಾಧನ ಅಕ್ಷಯಾನಂದ ನೀ ಲಕ್ಷುಮಿ ಜೀವನ ಪಕ್ಷ ನೀ ಪ್ರಾಣಕ ಈಕ್ಷಿಸಿದವನ 1 ಸೃಷ್ಟಿಗಧಿಕ ನೀ ವಿಷ್ಣು ಜನಾರ್ಧನ ಕಷ್ಟ ನೀ ಹಿಂಗಿಸೊ ದುಷ್ಟರ ಮರ್ದನ ಶಿಷ್ಟರ ಪಾಲಕ ಶ್ರೇಷ್ಠ ನಾರಾಯಣ ದೃಷ್ಟಿಸಿ ನೋಡೊ ನೀ ಕೃಷ್ಣ ಕೃಪಾಘನ2 ಈಶನೆಂದರಿಯದೆ ದೋಷದ ರಾಶಿ ನಾ ವಾಸನೆ ಪೂರಿಸೊ ದಾಸರ ದಾಸ ನಾ ಏಸು ತಾ ಜನ್ಮಕೆ ಬಂದು ಸೂಸಿದೆನೊ ಹೇಸಿತು ಜೀವನ ಸ್ಮರಿಸಬೇಕೆಂದು ನಾ 3 ನಿಮ್ಮನೆ ನೋಡಬೇಕೆಂದು ಬಂದೆ ನಾ ಘಮ್ಮನೆ ಪೂರಿಸೊ ಭಾವನೆ ಕಂದನ ತಮ್ಮನೆ ಬೇಡಿಕೊಂಬುದು ತಾ ವಂದನ ಅಮ್ಮ ನಮ್ಮಪ್ಪನೆ ಬಂಧು ನೀ ಎಂದೆ ನಾ 4 ಕಾಣದ ಪಾಮರ ಹೀನ ಸೂಕರ ಏನು ತಾ ಬಲ್ಲದು ಲೂನದ ಸೂಕರ ನೀನೆ ದಯಾನಿಧೆ ಜ್ಞಾನದ ಸಾಗರ ನ್ಯೂನ ನೋಡದೆ ತಾರಿಸೊ ಶ್ರೀಧರ 5 ಪಾರ ನೀ ಗೆಲಿಸೊ ದ್ವಾರಕಿನಾಥನೆ ಸಾರಿ ನೀ ಬೋಧವ ತಾರಿಸೊ ದಾತನೆ ತೋರಿ ನೀ ಪಾದವ ಬೀರು ಸ್ವಹಿತನೆ ಸಿರಿ ಲೋಲನೆ ನೀಕರುಣಿಸಿ ಮಾತನೆ 6 ಪಾಲಿಸೊ ಪ್ರಾಣವ ಬಾಲಮುಕುಂದನೆ ಲಾಲನೆ ನೋಡು ಗೋಪಾಲ ಗೋವಿಂದನೆ ತ್ಯಕ್ತ ನಾ ತಾಳು ನೀ ಸಚ್ಚಿದಾನಂದನೆ ಕೀಲನೆ ಹೇಳು ನೀ ಭಕ್ತಿಯ ವಂದನೆ 7 ದೇವರ ದೇವನೆ ಕಾವ ಕರುಣನೆ ಜೀವದ ಜೀವ ನೀ ಸ್ವಾಮಿ ಸರ್ವೇಶನೆ ಭಾವದ ಭಾವ ನೀ ಸಾವಿರ ನಾಮನೆ ಸೇವೆಗೆ ಯೋಗ್ಯನ ಮಾಡು ಸರ್ವೋತ್ಮನೆ 8 ಹಿಂಡ ದೈವಕೆ ಪ್ರಚಂಡ ಪರೇಶನೆ ಗಂಡು ಹೆಣ್ಣಿಗೆ ತಾ ಒಬ್ಬ ಸರ್ವೇಶನೆ ಮಂಡಿ ಮರೆಯಲಿಹನೆ ಮಹೇಶನೆ ಕಂಡುಕಾಂಬ ಸುಖದೋರು ದೇವನೆ 9 ವೇದಕ ನಿಲ್ಕದಾಭೇದ್ಯ ಪುರುಷನೆ ಸಾರ ಸುರಸನೆ ಅದಿಗಿಂದತ್ತಲ್ಯಾನಾದಿ ನಿರ್ವಿಶೇಷನೆ ಹಾದಿದೋರಿಕೊಡೊ ಭಕ್ತಿಗೊಂದೀಶನೆ 10 ಮಹಿಪತಿಗೆ ನೀ ಸ್ವಾಮಿ ಶ್ರೀನಾಥನೆ ಬಾಹ್ಯ ಅಂತ್ರಕೆ ನೀನೆವೆ ಸುದಾತನೆ ಸೋಹ್ಯದೋರಿಕೊಡೊ ಸಾಹ್ಯವುಳ್ಳಾತನೆ ತ್ರಾಹಿಯಂದವನ ಮಾಡು ಸನಾಥನೆ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಕ್ಷಿಸೋ ಗೌರೀವರ | ತ್ರಿಪುರದಶಿಕ್ಷಕ ದ್ರೋಣ ಕುವರ ಪ ಅಕ್ಷಿ ರಕ್ತ ರೇಖ ಮಾನಿ | ಯಕ್ಷೇಶ ಪ್ರಿಯ ಮಿತ್ರದಕ್ಷಾಧ್ವರಘ್ನ ರುದ್ರ | ತ್ರ್ಯಕ್ಷನೆ ಲೋಕಾಧ್ಯಕ್ಷಅ.ಪ. ವಿಭೂತಿ ಭಸ್ಮಾರ್ಚಿತ ||ಸು ಭಗಣೀಧೀಶ ಶಿರ | ನಭಕೀಶ ನಿನ್ನ ಸುತೆವಿಭವಾ ಪೊಗಳಲಳವೆ | ಕುಭವ ಪರೀಹರ 1 ಹಿಂಡು ನಖ ಮೃ | ಕಂಡ ಪರಿಪಾಲಕೊಂಡೆನ್ನ ಭಿನ್ನಪವ | ದಂಡಿಸೊ ದುಷ್ಟ ಮನ 2 ಗೋವುಗಳ್ಪರಿ ಪಾಲಕ5ಗೋಪೇರ | ದಾವಾಗ್ನಿಯಿಂ ರಕ್ಷ5ಭಾವ ಜನಯ್ಯ ಗುರು | ಗೋವಿಂದ ವಿಠಲನಭಾವದೊಳಗೆ ಕಾಂಬ ಭಾವವನೀವುದು 3
--------------
ಗುರುಗೋವಿಂದವಿಠಲರು
ರಕ್ಷಿಸೋ ಪವಮಾನ ಸದ್ಗುರುವರಾ ಪ ಜೀವರ ಬಂಧಗಳಿಂದ ಎಲ್ಲ ಪಾವನ ಮಾಳ್ಪದರಿಂದ ದೇವ ಪಾವನಮೂರ್ತಿಯು ನಿನ್ನ ಮುಖದಿ ಜಗ ತ್ಪಾವನ ಮಾಳ್ಪುದರಿಂದ ಪವನನೆಂಬೋರೆ ನಿನ್ನ ಅ.ಪ ಜ್ಞಾನೈಶ್ವರ್ಯ ವೈರಾಗ್ಯ ನಿನಗೆ ನಿನ್ನ ಸ್ವರೂಪ ಸ್ವಭಾವಕೆ ಯೋಗ್ಯ ನಿಜ ಘನ್ನ ಮಹಿಮ ನಿನ್ನ ಭಾಗ್ಯ | ಆಹಾ ತನು ಚತುಷ್ಟಯದೊಳಗನವರತ ವ್ಯಾಪ್ತನೋ ಇನ್ನೂ ಮುನ್ನೂ ಜಗತ್ಕಾರ್ಯ ನಿನ್ನದೋ ದೇವಾ1 ಬೃಹತಿನಾಮಕ ಕರುಣಾಳು ನಿನ್ನ ದೇಹದಿ ಭಗವದ್ರೂಪಗಳೂ ನಿತ್ಯನೋಡುತ ಅನೇಕಂಗಳು | ಆಹಾ ಬೃಹತಿ ಛಂದಸ್ಸು ಅನ್ನವು ಶ್ರೀಹರಿಗೆ ಛಂದಸ್ಸಿನಿಂದಾಚ್ಛಾದಿತ ತ್ವದ್ಗಾತ್ರನೊ2 ಪ್ರಾಣಾಪಾನ ವ್ಯಾನೋದಾನ ಸಮಾನಾದಿ ಪಂಚಪ್ರಾಣ ಜೀವ ಶ್ರೇಣಿಗಳೊಳಗೆ ನೀ ಪ್ರವೀಣ ಜಗತ್ರಾಣ ನೀನಹುದೋ ಸದ್ಗುಣ |ಆಹಾ ಪ್ರಾಣಾಪಾನದಿಂದ ದೇಹದ ಸ್ಥಿತಿ ಕಾರ್ಯಕ್ಷಣ ತಪ್ಪಲು ಕುಣಪನೆಂದಪರೋ ಈ ದೇಹಕೆ3 ಇಪ್ಪತ್ತೊಂದು ಸಾವಿರದಾರುನೂರು ಶ್ವಾಸ ತಪ್ಪದೆ ಜೀವರು ಮಾಡಿ ಅಹರ್ನಿಶಿ ದೇಹವ ಧರಿಪರೋ ನಿನ್ನ ಒಪ್ಪಿಗೆಯಂತೆ ಸಾಧಿಪರೋ | ಹಾ ಅಹೋರಾತ್ರಿ ಶ್ವಾಸನಿಯಾಮಕ ಜೀವರ್ಗೆ ಅಯುಮಾನವ ನೀವ ಮಾತರಿಶ್ವದೇವಾ 4 ನಿನ್ನಂತರದಿ ಇಟ್ಟು ಅವಸ್ಥಾಭೋಗ್ಯವನಿತ್ತು ತ್ವರದಿ | ಆಹಾ ಪಾವನ ಮೂರ್ತಿಗೆ ಅರ್ಪಿಸುತ್ತ ಶ್ರೀಪತಿ ಕರವ ಮುಗಿದು ನಿಂದಿಹೆ 5 ಪರಿಶುದ್ದ ಸತ್ವಾತ್ಮಕವಾಗಿ ಇನ್ನು ನಿರುತ ಪೂರ್ಣಪ್ರಜ್ಞನಾಗೀ ಜೀವ ಸ ರ್ವರೊಳು ಶುಚಿತಮನಾಗಿ ಇರ್ಪ ಮಾರುತ ನಿನ್ನೊಳು ಅನುವಾಗಿ |ಆಹಾ ಹರಿಯು ನಿನ್ನ ಶುಚಿ ತನುವಿನೊಳಿದ್ದು ಶುಚಿಹೃತ್ ಎಂದು ತಾ ನಿಂದು ನಲಿವನಯ್ಯ6 ಅಂಡಾವರಣದ ಗುಣತ್ರಯ ಕಂಡಿಹೆ ವ್ಯಾಪ್ತಸದ್ಗುಣ ಉ ದ್ದಂಡ ಮಹದ್ರೂಪನೆ ಮಹಘನ್ನ ಇನ್ನು ಮೃಡನಾಪೇಕ್ಷ ಶತಗುಣ | ಆಹಾ ತನುರೂಪದೊಳೆಲ್ಲ ಅಣುರೂಪವಾಗಿಹೆ ತೃಣಮೊದಲು ಸರ್ವಜೀವರೊಳು ವ್ಯಾಪ್ತನೊ7 ಅಂದು ತ್ರಿಕೋಟಿರೂಪದಲಿ ನಿಂತು ನಿಂದ ತ್ರಿವಿಕ್ರಮಾವತಾರದಲೀ ಸೇವೇ ಆ ನಂದದಿ ಸಲಿಸುತ್ತಲಲ್ಲಿ ಇನ್ನು ನಿಂದು ಅಂ ಡದ ಬಹಿರ್ಭಾಗದಲಿ |ಆಹಾ ಅಂಡ ಖರ್ಪರ ಉದ್ದಂಡ ಮೂರುತಿಯೊ 8 ವಾಯುಕೂರ್ಮನಾಗಿ ನಿಂದೇ ಜಗದಾದ್ಯಭಾರವು ಎಲ್ಲ ನಿನ್ನಿಂದೇ ಎಂದು ಕಾಯಜಪಿತ ತರುವ ಮುಂದೇ ನಿನ್ನ ಗಾಯತ್ರೀಪತಿಯ ಪಟ್ಟಕೆಂದೇ | ಆಹಾ ಶ್ರೀಯರಸಾ ಶ್ರೀ ವೇಂಕಟೇಶಾತ್ಮಕ ಉರಗಾದ್ರಿವಾಸವಿಠಲನ ನಿಜದಾಸ 9
--------------
ಉರಗಾದ್ರಿವಾಸವಿಠಲದಾಸರು
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು
ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ಬಡುವಳಂತರಂಗದಲ್ಲಿ ನಿನ್ನ ಅಂಗ ತಂದು ತೋರೈ ಪ ಕುಸುಮ ಗಂಧಿಯು ತಾನುಹಸುಮಗಳಲ್ಲವೆ ಪೊಸತಾಪ ಕಾಯಲಿಲ್ಲವೆ 1 ಕನ್ನೈದಿಲೆ ಸೌವಿಸು ಕಣ್ಣುಗಳಿಂದ ನಿನ್ನರ್ಚಿಸುವೆ ತವಕದಿ |ತನ್ನಾದ ಬೊಂಬೆ ತಾ ಎನ್ನ ನಿಮ್ಮ ಬಳಿಯಲಿಮನ್ನಿಸಿ ಕಳುಹಿದಳೈ 2 ಮುನಿದಗಲಿರುವದು ಮುನಿಜನ ವಂದ್ಯಗೆ ಮುನಿಗಳೊಪ್ಪರೀ ಮಾತನು ಕನಸಿನೊಳವಳ ಕೂಡ ಅನುಭವಿಸುವಾತಂಗೆಜನದ ನಾಚಿಕೆ ಯಾತಕೈ 3 ಅಂಚಗಮನಿ ತಾ ಮಿಂಚು ಮಂಚವ ಕಂಡುಸಂಚಿತವನು ನೆನೆವಳ ವಂಚನೆಯ ಬಿಟ್ಟುಮುಚ್ಚಾವಳ ಕೂಡೈ ನೀ ಕೆಂಚಿಯರಸರೊಲ್ಹದು 4 ಮಂದರ ಧರನೀಗ ಬಂದು ಸಂಮಿಸುವದು ರುಕ್ಮಕಂದನ ಸೊಲ್ಲಿಗೆ 5
--------------
ರುಕ್ಮಾಂಗದರು
ರಂಗ ಬಾರ ಕುರಂಗನಯನೆ ಮಂಗಳಾಂಗನ ಕರೆದುತಾರೆ ಪ ಅಂಗ ಸಂಗ ಸುಖವನಿತ್ತು ತಂಗೀ ಮನವ ಸೆಳೆದುಕೊಂಡ ಅ.ಪ ಸಂಚಿನಿಂದ ಒಳಗೆಬಂದು ಮಂಚಕೆನ್ನ ಗಂಡನ ಕಟ್ಟಿ ಮಿಂಚಿನಂತೆ ತೋರಿಪೋದ 1 ಕಂಚುಕದೊಳಿರುವ ಪಣ್ಗಳ ವಂಚಿಸದೆ ಕೊಡುಯೆಂದೆಂಬ ಸಂಚಿತಾರ್ಥದ ಪುಣ್ಯವೆಂದು ವಿರಿಂಚಿಪಿತನು ರೋಜಪಿಡಿದ 2 ಉಲ್ಲಸದೊಳಗಾಲಿಂಗಿಸುತ ಫುಲ್ಲಲೋಚನ ಪರವಶಗೈದ 3 ಮುನಿದುನಾನು ನಿಂದಿರಲು ಕನಿಕರದಿಂದ ಕುಣಿದು ಹಾಡಿ ಮನವನುಬ್ಬಿಸಿ ತನುವಮರೆಯಿಸಿ ಇವನತೆರದೊಳೆನ್ನನಾಳ್ದ 4 ಮೊಸರ ಕಡೆದು ಬೆಣ್ಣೆತೆಗೆಯೆ ಮೆಲ್ಲನೆ ಬೆನ್ನಹಿಂದೆ ಬಂದು ಅಸಮರೂಪ ತೋರುತಾಗ ಒಸೆಯುತದನು ಕದ್ದು ಮೆದ್ದ 5 ಹೋರಿಯೆನ್ನೊಡೆ ದಾರಿಬಿಡದೆ ಓರಿಗೆಯರ ಕಂಡು ಜಾರಿದ 6 ಕೊಳಲನೂದಿ ಒಳಗೆ ಬಂದು ಲಲನೆಯೇಳೆ ಎಂದವನ 7 ನೀರಮುಳಗಿ ಭಾರಹೊತ್ತು ಕೋರೆ ಮಸೆದ ನಾರಸಿಂಹ ಬುದ್ಧ ಕಲ್ಕಿ 8 ಪಕ್ಷಿವಾಹನ ಹೆಜ್ಜಾಜಿ ಯಧ್ಯಕ್ಷ ಚನ್ನಕೇಶವದೊರೆಯೆ ರಕ್ಷಿಸೆಂದು ನಂಬಿದವರ ಪಕ್ಷನಾಗಿ ಪಾಲನೆಗೈವ 9
--------------
ಶಾಮಶರ್ಮರು
ರಂಗ ಬಾರ ಬಾಲೆ ಕುರಂಗನಯನೆ ಕೇಳೆ ಪ ಹೀಂಗಿರಲಾರೆ ಶ್ರೀಹರಿಯ ಸಂಗ ಬಿಟ್ಟಮೇಲೆಈ ತಂಗಾಳಿಯ ದಾಳೆ ಬೆಳದಿಂಗಳಿÀನ ಢಾಳೆಗಿಳಿ ಭೃಂಗನ ಸ್ವರಗಳೆ ದೇವಾಂಗನಾ ಗಾಯನಗಳೆಅನಂಗಗಿದು ಪೇಳೆಅ.ಪ. ಪರ ಹೆಣ್ಣುಗಳನೆ ಕೂಡಿಬಲು ಬಣ್ಣಗೆಟ್ಟೋಡ್ಯಾಡಿ ಕಲಿಯನ್ನು ಸಂಹಾರಮಾಡಿ 1 ಯುಗಳಸ್ತನಗಳ ಮೇಲೆ ಒಳ್ಳೆ ಮುಗುಳು ಮಲ್ಲಿಗೆ ಮಾಲೆಬಗೆ ಬಗೆ ಅಲಂಕಾರದಿ ಸೊಗಸಿಲಿದ್ದ ವೇಳೆಖಗವಾಹನನು ಬಂದ ಎನ್ನ ಬಿಗಿದಪ್ಪುವೆನೆಂದನಗುತ ಮಾತನಾಡಳಿವಳು ಸುಗುಣೆಯಲ್ಲವೆಂದನಿಗಮ ಚೋರನ ಕೊಂದ ನಗವ ಬೆನ್ನಿಲಿ ತಂದಜಗವ ನೆಗಹುವೆನೆಂದ ಜಿಗಿದು ಕಂಭದಿ ಬಂದಮಗುವಿನಂದದಿ ನಿಂದ ಯಾತ್ರೆಗಳ ಮಾಡುವೆನೆಂದಅನ್ನಗಳ ಒಲ್ಲೆನೆಂದ ಬೆಣ್ಣೆಗಳ ಕದ್ದುತಿಂದನಗುತ ಬತ್ತಲೆನಿಂದ ತಾ ಸಿಗದೆ ಓಡುವೆನೆಂದ 2 ನಾರಿ ಈಗ ನಾನು ಮುರಾರಿಯ ಕಂಡೆನುವಾರಿಜಾಕ್ಷ ಬಾಯೆನ್ನಲು ಶಿರವ ಬಾಗಿದೆನೆಮಾರನಯ್ಯನು ಜಾಣೆ ಎನ್ನ ಮೋರೆಯ ನೋಡಿದನೆಜಾರನಾರಿ ಇವಳೆಂದು ಸೇರದೆ ಪೋದನೆನೀರೊಳಡಗಿದನೆ ಮೋರೆ ಮುಚ್ಚಿದನೆಕೋರೆ ತೋರಿದನೆ ಆ ಘೋರ ರೂಪಾದನೆಬ್ರಹ್ಮ-ಚಾರಿಯೆಂತೆಂದನೆ ಕ್ಷತ್ರಿಯರ ಸವರಿದನೆವಾರಿಧಿಯ ದಾಟಿದನೆ ಬಹುಜಾರನೆನಿಸಿದನೆನಾರೇರ ವ್ರತವಳಿದನೆ ಕುದುರೆ ಏರಿದ ಶ್ರೀಕೃಷ್ಣನೆ 3
--------------
ವ್ಯಾಸರಾಯರು