ಒಟ್ಟು 1726 ಕಡೆಗಳಲ್ಲಿ , 116 ದಾಸರು , 1424 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸುರಸತಿಯರ ಆರತಿ-ಶೋಭನೆಕಂ|| ಹರೆದುದು ಜನತತಿ ಶ್ರೀಹರಿವರಶಯ್ಯಾಸನದಲಿಪ್ಪ ಸಮಯದಲೆನ್ನಾಪರಿಯನು ಬಿನ್ನವಿಸುವೆ ನಾಂಸಿರಿಚರಣವನೊತ್ತುತೊತ್ತುತೆಮ್ಮರಸನಿಗೇಆದಿತ್ಯವಾರದರ್ಚನೆಯಾದುದು ನಿನ್ನೊಲವಿನಿಂದ ಬಿನ್ನಹವಿದ ನೀನಾದರಿಸಿ ಸಲಹು ತಿರುಪತಿಭೂಧರ ಶುಭದಿವ್ಯಸದನ ವೆಂಕಟರಮಣಾಸಿರಿಧರಣಿಯರೊಡೆವೆರಸಿ ಹರುಷದಿ ವೆಂಕಟಪತಿಯುಇರೆ ಹಂಸತಲ್ಪದೆಡೆಯಲ್ಲಿ ಸುರಸತಿಯರುಕುರುಜಿನಾರತಿಯಾ ಬೆಳಗಿದರು ಶೋಭನವೆ 1ವೇದವನುದ್ಧರಿಸಿದಗೆ ಭೂಧರವನು ತಾಳ್ದವಗೆಮೇದಿನಿಯನೆತ್ತಿ ನಿಲಿಸಿದಗೆ ನಿಲಿಸಿದ ವೆಂಕಟಪತಿಗೆಮೋದದಲಾರತಿಯಾ ಬೆಳಗಿದರು ಶೋಭನವೆ 2ನರಹರಿ ರೂಪಾದವಗೆ ಧರಣಿಯನಳೆದಾ ಹರಿಗೆದುರುಳ ಕ್ಷತ್ರಿಯರಾ ತರಿದವಗೆ ತರಿದಾ ವೆಂಕಟಪತಿಗೆತರುಣಿಯರಾರತಿಯಾ ಬೆಳಗಿದರು ಶೋಭನವೆ 3ಜಾನಕಿಯನು ವರಿಸಿದವಗೆ ಧೇನುಕನನು ಬಡಿದವಗೆಮಾನಿನಿಯರ ವ್ರತವನಳಿದವಗೆ ಅಳಿದಾ ವೆಂಕಟಪತಿಗೆಜಾಣೆಯರಾರತಿಯಾ ಬೆಳಗಿದರು ಶೋಭನವೆ 4ತುರುಗವನೇರಿದ ಹರಿಗೆ ಶರಣಾಗತವತ್ಸಲಗೆತಿರುಪತಿಯ ಕ್ಷೇತ್ರದರಸಗೆ ಅರಸ ವೆಂಕಟಪತಿಗೆಪರಿಪರಿಯಾರತಿಯಾ ಬೆಳಗಿದರು ಶೋಭನವೆ 5ಓಂ ಬರ್ಹಿಬರ್ಹಾವತಂಸಕಾಯ ನಮಃ
--------------
ತಿಮ್ಮಪ್ಪದಾಸರು
ಸುವ್ವಿ ಶ್ರೀ ದೇವಿರಮಣ ಸುವ್ವಿ ಸರ್ಪರಾಜಶಯನ ಹರಣ ಸುವ್ವಿ ನಾರಾಯಣ ಪ ಭವ್ಯಚರಿತ ದುರಿತವಿಪಿನ ಹವ್ಯವಾಹನ ಭವೇಂದ್ರಾದಿ ಸೇವ್ಯಮಾನ ಸುಪ್ರಸಿದ್ಧ ಸುಲಭsÀ ಮೂರುತಿ ಅವ್ಯಯಾಮಿತ ಸುಖಾತ್ಮ ದಿವ್ಯ ಮಹಿಮೆ ತುತಿಪೆ ಸುವಿವೇಕಿಗಳಿಗೆ ಕೊಡುವುದಮಿತ ಮೋದವ 1 ವಾಸವಾದ್ಯಮರ ವಾರಾಶಿ ಶಾರದೇಂದು ಮಧ್ವ ದೇಶಿಕಾರ್ಯ ಚಿತ್ತ ಸಿಂಹಪೀಠಮಧ್ಯಗ ದೇಶಕಾಲ ವ್ಯಾಪ್ತ ಸರ್ವೇಶ ಸಾರ್ವಭೌಮ ಶ್ರೀಮ ಹೀ ಸಮೇತ ಕೃಷ್ಣ ಕೊಡಲಿ ಎಮಗೆ ಮಂಗಳ 2 ಕಮಲ ಸಂಭವನ ವೇದ ತಮನು ಒಯ್ಯತಿರಲು ಲಕ್ಷ್ಮೀ ಶರಧಿ ಮಥನದಿ ಕಮಠ ರೂಪಿನಿಂದ ಸುರರಿಗಮೃತವಿತ್ತು ಕಾಯ್ದ ಅಖಿಳ ಸುಮನಸೇಂದ್ರ ಸ್ವಾಮಿ ಕೊಡಲಿ ಎಮಗೆ ಮಂಗಳ 3 ಕನಕ ಲೋಚನನ ಸದೆದು ಮನುಜಸಿಂಹ ವೇಷನಾದ ದ್ಯುನದಿ ಪಡೆದು ಜನನಿ ಕಡಿದು ವನವ ಚರಿಸಿದ ಜನಪ ಕಂಸನ್ನೊದೆದು ತಿರಿಪುರವನಿತೆಯರ ಸುವ್ರ್ರತ ವಿನುತ ಕಲಿ ದೇವರಾಜ ಎಮ್ಮ ಸಲಹಲಿ 4 ಪಾಹಿ ಪಾವನ ಚರಿತ್ರ ಪಾಹಿ ಪದ್ಮ ಪತ್ರನೇತ್ರ ನಿಗಮ ಗಾತ್ರ ಮಾಂ ಪಾಹಿ ಸಜ್ಜನಸುಮಿತ್ರ ಪಾಹಿ ದೋಷದೂರ ಸುಗುಣ ಪಾಹಿ ಜಗನ್ನಾಥ ವಿಠಲ ಜಯ ತ್ರಿಧಾಮಗ 5
--------------
ಜಗನ್ನಾಥದಾಸರು
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ವರ ವಾಣಿರಮಣಗೆ ಶರಣೆಂಬೆ ಸುವ್ವಿ ವರ ವಾಣಿರಮಣಗೆ ಶರಣೆಂದು ಪೇಳಿದ ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ 1 ¥ಕ್ಕಿವಾಹನ್ನ ಜಗಕ್ಕೆ ಮೋಹನ್ನ ರಕ್ಕಸದಾಹನ್ನನಿವ ಸುವ್ವಿ ರಕ್ಕಸದಾಹನ್ನನಿವ ತನ್ನ ಮರೆ- ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ 2 ಯಶೋದೆಯ ಕಂದ ತನ್ನ ವಿಷವನುಣ್ಣೆಂದ ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ 3 ಶಕಟಾಸುರನ್ನ ಮೆಟ್ಟಿ ಕೊಂದ ಬಲು ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ- ಸ್ತಕದಮೇಲೆ ನಲಿವುತ ನಿಂದ ಸುವ್ವಿ4 ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ 5 ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ ಭೃತ್ಯರಿಗೊಲಿದು ವರವಿತ್ತ ಸುವ್ವಿ ಭೃತ್ಯರಿಗೊಲಿದು ವರವಿತ್ತ ತನ್ನ ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ 6 ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ [ಕೊಂದಪೆ]ನೆಂದು ಬಂದ ಬಕನ ಸುವ್ವಿ [ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ ಕೊಂದು ಬಿಸುಟಾನೆ ಸುವ್ವಿ 7 ಕಲ್ಪತರುವಂತೆ ನಮ್ಮ ತನ್ನಧರಿಂದ ಕೊಳಲನೂದುವ ಚೆಲುವಗೆ ಸುವ್ವಿ ಕೊಳಲನೂದುವ ಚೆಲುವ ಗಾನಲೋಲ ಗೋ- ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ 8 ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ ಮಂಗಳ ವಿಲಾಸವನು [ರಚಿಸಿದ]ಸುವ್ವಿ ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ 9 ಮಧುರೆಗೆ ಪೋಗಿ ಮಲ್ಲರಸುವ ನೀಗಿ ಮದಾಂಧ ಮಾವನ್ನ ಮಡುಹಿದ ಸುವ್ವಿ ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ ಮುದದಿ ತನ್ನವರ ಮುದ್ದಿಸಿದ ಸುವ್ವಿ 10 ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ ದುರ್ಮನವ ಬಿಡದೆ ಹರಿಯಲಿಡು ಸುವ್ವಿ ದುರ್ಮನವ ಬಿಡದೆ ಹರಿಯಲಿಡು ಮನವ ಕಾಮಿನಿಯೊಳಾಡಿ ಕೆಡಬೇಡ ಸುವ್ವಿ 11 ದುರುಳರ ನೋಡಿ ದೂರಕ್ಕೋಡು ಹರಿ- ಶರಣಡಿಗೆ ಪೊಡಮಡು ಸುವ್ವಿ ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು- ಚರಿತವ ಪಾಡುವರೊಳಗಾಡು ಸುವ್ವಿ 12 ಏರಲರಿಯದವ ಮರನೇರಿ ಬಿದ್ದು ಸಾವಂತೆ ನೀರ ಮೀನುಗಳು ಕರಗುವಂತೆ ಸುವ್ವಿ ನೀರ ಮೀನುಗಳು ಕರಗುವಂತೆ ಮನುಜ ನೀ ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ 13 ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ 14 ದುರುಳ ಕೀಚಕ ಕೆಟ್ಟ ಪರಧನಕೆ ಮರುಳಾಗಿ ಕುರುರಾಯ ಸುವ್ವಿ ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು ಒರೆವ ಭಾರತವ ನಿರುತ ಕೇಳು ಸುವ್ವಿ 15 ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ ಭೇದವಿಲ್ಲವೆಂಬ ಮತದಲ್ಲಿ ಸುವ್ವಿ ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ ಗೆದ್ದಾನೆಂತು ಬಿದ್ದಾನೆಂತು ಸುವ್ವಿ 16 ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ 17 ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ- ರ್ವತ್ರ ಜೀವ ಭೇದವುಂಟೆಂಬುವಗೆ ಭೇದ ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ 18 ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ ಪ್ರತ್ಯೇಕ ಜೀವರ ಇರವು ಸುವ್ವಿ 19 ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ- ನ್ನರ್ಥವ ತಾ ಕಾಣಲರಿಯನು ಸುವ್ವಿ ತ- ನ್ನರ್ಥವ ತಾ ಕಾಣಲರಿಯನು ಅದರಿಂದ ನಾ- ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ 20 ಬೊಮ್ಮ ಮಿಥ್ಯವಲ್ಲವೋ ನಿನ್ನ ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ- ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ 21 ಸತ್ತ ಪೆಣನುಂಟು ಸಾಯದ ವಸ್ತುಂಟು ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ [ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ 22 ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ- ಬರ್ಥ ತಾ ಕೂಡಲರಿಯದು ಸುವ್ವಿ ಎಂ- ಬರ್ಥ ತಾ ಕೂಡಲರಿಯದು ಅದರಿಂದ ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ23 ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ 24 ಇಲ್ಲ ಜಗವೆಂಬುದನು ಈಗ ಕಂಡದ ಕಾರಣ ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ [ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ 25 ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ 26 ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ 27 ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ- ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ 28 ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ- ವೇಕಿಗಳೆಲ್ಲ ಬಲ್ಲರು ಸುವ್ವಿ ವಿ- ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ 29 ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ- ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ ವೈಕುಂಠದ ವಾಸನೆ ಲೇಸು ಸುವ್ವಿ 30 ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ 31 ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ- ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ 32 ನಗರ ಕೃಷ್ಣಗೆ ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ34 ಇಂತು ಹಯವದನ ನಿಶ್ಚಿಂತ ಜಗತ್ಕಾಂತ ಸಂತರನು ಸದಾ ಸಲಹುವ ಸುವ್ವಿ ಸಂತರನು ಸದಾ ಸಲಹುವ ಮಾರಾಂತರ ಕೃ- ತಾಂತನ ಬಳಿಗೆ ಕಳುಹುವ ಸುವ್ವಿ 35
--------------
ವಾದಿರಾಜ
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ ಸುವ್ವಿ ಸುವ್ವಿ ನಮ್ಮ ಶ್ರೀರಮಣನೆನೆಸಿದ ವಿನೋದಿ ಹರಿ ಸರ್ವೋತ್ತಮಗೆ ಸುವ್ವಿಪ. ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ ಪರಮೇಷ್ಠಿ ಗುರುಗಳಿಗೆ ಶರಣೆಂಬೆ ಸುವ್ವಿ ಪರಮೇಷ್ಠಿ ಗುರುಗಳಿಗೆ ಹರಿ ಪರನೆಂದು ಪೇಳ್ವ ಶ್ರೀಮದಾನಂದತೀರ್ಥರಿಗೆ ಸಾಸೀರ ಶರಣೆಂಬೆ 1 ವಾಸುದೇವ ಪರ ಸಂಕರ್ಷಣ ಅತಿಕ್ರೂರಸಂಹಾರಕಾರ ಸುವ್ವಿ ಸಂಕರ್ಷಣ ಅತಿಕ್ರೂರಸಂಹಾರಕಾರ ಪ್ರದ್ಯುಮ್ನ ಬೊಮ್ಮ ಕುಮಾರನಂತೆ ಸುವ್ವಿ 2 ಸೂಕರ ನರಹರಿ ಕಾಯ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ3 ಮುಖ್ಯಪ್ರಾಣ ಆವಲ್ಲಿ ನಾರಾಯಣ ಇವರಿಬ್ಬರ ಗುಣವನರಿಯದವನೆ ಸುವ್ವಿ ಇವರಿಬ್ಬರ ಗುಣವ ಅರಿಯದವನೆ ಗೌಣನೆಂಬರ್ಥದಲಿ ಬ್ರಹ್ಮಸೂತ್ರ [ದಂಬಂತೆ] ಸುವ್ವಿ4 ಆತ್ಮನು ಅತಂತ್ರ ಪರಮಾತ್ಮನು ಸ್ವತಂತ್ರ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ಸುವ್ವಿ ದುಃ- ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ವಾದಿ ಜ್ಞಾನಾನಂದಕ ಹರಿಗೆ ಸಮರಿಲ್ಲ ಸುವ್ವಿ 5 ಜಡದಲ್ಲಿ ಜೀವಾತ್ಮ ಜಡ ಜೀವರÀಲಿ ಪರಮಾತ್ಮ ಕ್ರೀಡೆಯಿಂದ ಏಕಾತ್ಮ ಬಿಡದಿಹ ಸುವ್ವಿ ಕ್ರೀಡೆಯಿಂದ ಏಕಾತ್ಮ ಬಿಡದಿಹುದು ವಾದಿ ದ್ವಾಸುಪರ್ಣ ವೆಂಬೋ ಶ್ರುತಿ ಲೇಸು ಲೇಸು ಸುವ್ವಿ 6 ಜಡ ಹರಿಗಳ ಭೇದ ಜೀವ ಜೀವಕೆ ಭೇದ ಜೀವೇಶ್ವರಗೆ ಭೇದ ಶರೀರ ಭೇದ ಸುವ್ವಿ ಜಡ ಜೀವರಿಗೆ ಭೇದ ಶರೀರ ಭೇದ [ವೆನ್ನಿ] ಜಡಜೀವ ಭೇದ ಪಂಚಭೇದಗಳು ಸುವ್ವಿ 7 ಪಂಚಭೇದಗಳೆಂಬ ಪ್ರಪಂಚದಲಿ ಸಕಲ ವೈಕುಂಠದೊಳಗಿನ ವಿವರ ಒಂದುಂಟು ಕೇಳು ಸುವ್ವಿ ವೈಕುಂಠÀದೊಳಗಿನ ವಿವರ ಒಂದುಂಟು ಕೇಳು ವಾದಿ ಸಾಕು ಸಾಕು ನಾಲ್ಕುವಿಧ ಮುಕ್ತಿಯುಂಟಲ್ಲಿ ಸುವ್ವಿ 8 ಶ್ರವಣಕೀರ್ತನ ಹರಿಸ್ಮರಣೆ ಸೇವನ ಪೂಜನ ವಂದನ ಹರಿದಾಸ್ಯ ಸಖ್ಯಮಾತ್ಮನಿವೇದನೆ ಸುವ್ವಿ [ಹರಿದಾಸ್ಯ ಸಖ್ಯಮಾತ್ಮ ನಿವೇದನೆಗಳು ತಮ್ಮ] ಅರ್ಥ ಕೂಡೊಂಬತ್ತುಭಕ್ತಿ ಸತ್ಯ ಉಂಟು ಸುವ್ವಿ 9 ಜೀವೇಶ[ನೊಂದು] ಹರಿನಿರ್ಗುಣನೆಂದು ಅಪೂರ್ಣ ಗುಣನೆಂದು ಬ್ರಹ್ಮಾದಿಗಳೊಂದು ಸುವ್ವಿ ಬ್ರಹ್ಮಾದಿಗಳೊಂದು ಸಮರಧಿಕಾರ ಅವತಾರ ಎಲ್ಲ ಒಂದೆ ಎಂಬುವಗೆ ಸುವ್ವಿ 10 ಅವತಾರವೆಲ್ಲ ಅಂಶವತಾರವೆಂದ ಹರಿಭಕ್ತರಲ್ಲಿ ಕೋಪ ಸುವ್ಯಕ್ತವಾಯಿತು ಸುವ್ವಿ ಕೋಪ ಸುವ್ಯಕ್ತವಾಯಿತು ವಾದಿ ಹರಿಭಕ್ತರೊಡನೆ ಕೋಪಂಗಳು ವ್ಯರ್ಥವಾಯಿತು ಸುವ್ವಿ 11 ಪಂಚಮಹಾಭೂತ ದೇಹ ಸಂಚಯರೆಲ್ಲ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಸುವ್ವಿ ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಮುಕ್ತರ ದೇಹವೆಲ್ಲ ಸುಖದ ಸಂದೋಹವಂತೆ ಸುವ್ವಿ 12 ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ ಪಿರಿಯವಾದವು[ನೂರೊಂದು] ಐದು ಸುವ್ವಿ ಪಿರಿಯವಾದವು[ನೂರೊಂದು] ಐದು ಮೂರು ಒಂದು ಈ ಪರಿಯಾಗಿ ಇಪ್ಪುವಂತೆ ಸುವ್ವಿ 13 ಇಳಾನಾಡಿ ಸಾವಿರ ಸೀಳುಮಾಡಿ ಅದರೊಳು ಸೀಳುಮಾಡಿದರೇಳು ವಿರಳನಂತೆ ಸುವ್ವಿ ಸೀಳುಮಾಡಿದರೇಳು ವಿರಳನಂತೆ ನಾಡಿಯಲ್ಲಿ ರಕ್ತವರ್ಣನಾಗಿ ನಾರಾಯಣನಿಹ್ಯ ಸುವ್ವಿ 14 ಒಂದುನಾಡೀ ಪೆಸರು ಸುಷುಮ್ನನಾಡಿಯೆಂಬರು ಅದರಂತರ ಕಡೆಯಲಿ ರಂಧ್ರವಂತೆ ಸುವ್ವಿ ಅದರಂತರ ಕಡೆಯಲಿ ರಂಧ್ರÀ್ರವಂತೆ ನಾಡಿಯಲಿ ಕಮಲ ಮಧ್ಯದಲಿ ತಾ ವಿಮಲನಂತೆ ಸುವ್ವಿ 15 ನಾಡಿ ಮೂಲದೊಳು ನಾಲ್ಕುದಳದ ಕಮಲವುಂಟು [ನೀಲ]ವರ್ಣದಿಂದ ಸಂಪೂರ್ಣನಂತೆ ಸುವ್ವಿ [ನೀಲ]ವರ್ಣದಿಂದ ಸಂಪೂರ್ಣ[ನೀಲವರ್ಣ ಅನಿರುದ್ಧ] ನಲ್ಲಿ ತಾ ವಾಸನಂತೆ ಸುವ್ವಿ 16 ಪೊಕ್ಕುಳಲಿ ಆರುದಳ ಇಕ್ಕ್ಕು ರೀತಿಯಿಂದಲೇಳು [ಬಿಂಕನಾದ] ಸಂಕರ್ಷಣ ಮುಖ್ಯನಂತೆ ಸುವ್ವಿ [ಬಿಂಕನಾದ ಸಂಕರ್ಷಣ] ಮುಖ್ಯನಂತೆ ಜೀವಗೆ ಪಿಂಗಳ ವರ್ಣನಾಗಿ ಹಿಂಗದಿಹ ಸುವ್ವಿ 17 ಇಡಾನಾಡಿ [ಉದೀಚಿ] ಪಿಂಗಳ ದಕ್ಷಿಣದಲಿ ಪ್ರತೀಚಿ [ವಜ್ರಿಕೋ ಪೂರ್ವಾ ಅಂತೆ] ಸುವ್ವಿ ಪ್ರತೀಚಿ ವಜ್ರಿಕೋದೀಚಿ ಬ್ರಹ್ಮನಾಡಿ ಸುತ್ತಾ ಪಂಚನಾಡಿಗಳ ಪಂಚರೂಪಗಳೆ ಸುವ್ವಿ 18 ಎಂಟುದಳ ಕೆಂಪು ಉಂಟು ಹೃದಯ ಕಮಲದಲಿ ವೈಕುಂಠಪತಿ ಚತುರನ ಮಂಟಪವೆ ಸುವ್ವಿ ವೈಕುಂಠಪತಿ ಚತುರನ ಮಂಟಪದ ಮಧ್ಯದಲಿ ವಾಯು ಜೀವರಿಗೆ ಸಹಾಯನಂತೆ ಸುವ್ವಿ 19 ಕೂದಲ ಕೊನೆಯ ಹತ್ತು ಸಾವಿರ ವಿಧವನೆಮಾಡಿ ಜೀವ ಪರಿಮಾಣ ಒಂದೆ ಕಂಡ್ಯ ಸುವ್ವಿ ಜೀವ ಪರಿಮಾಣ ಒಂದೆ ಕಂಡ್ಯ ಚತುರನ ಅಂಗುಷ್ಟದÀಷ್ಟು ಜೀವ [ಅಂಶನಂತೆ] ಸುವ್ವಿ 20 ಸ್ಥೂಲಾಂಗುಷ್ಠ ಪರಿಮಾಣ ಪ್ರಾಜ್ಞನಾದ ನಾರಾಯಣ ಹೃದಯಕಮಲದ ಒಳಗೆ ವಿಮಲನಂತೆ ಸುವ್ವಿ ಹೃದಯಕಮಲದ ಒಳಗೆ ವಿಮಲನಂತೆ [ಜೀವಂಗಾ ರೂಪದಲಿ] ಹರಿ ತಾ ರಕ್ಷಿಪನಂತೆ ಸುವ್ವಿ 21 ಹೃದಯಾಕಾಶದಲಿ ಪ್ರಾದೇಶ ಪರಿಮಾಣ ಆದಿ ಪುರುಷನಿಹ್ಯ ಈ ವಿಧವಾಗಿ ಸುವ್ವಿ ಆದಿ ಪುರುಷನಿಹ್ಯ ಈ ವಿಧವಾಗಿ ಜೀವಗೆ ಗೃಹದೋಪಾದಿಯಲಿ ಹರಿ ರಕ್ಷಕನಂತೆ ಸುವ್ವಿ 22 ಕಂಠದೇಶದಲಿ ಉಂಟು ತೈಜಸಮೂರ್ತಿ ಕರ ಹತ್ತೊಂಬತ್ತು ಶಿರಗಳು ಸುವ್ವಿ ಕರ ಹತ್ತೊಂಬತ್ತು ಶಿರಗಳು ಮಧ್ಯದಲ್ಲಿ ಕರಿಮುಖ ಹಸ್ತಿಯಾಗಿಪ್ಪನಂತೆ ಸುವ್ವಿ 23 ಕಿರುನಾಲಗೆಯಲ್ಲಿ ಎರಡುದಳ ಕಮಲ ಅರವಿಂದ ಪದ್ಮದಲಿ ನಾರಾಯಣನಿಹ್ಯ ಸುವ್ವಿ ಅರವಿಂದ ಪದ್ಮದಲಿ ನಾರಾಯಣನಿಹ್ಯ ಹರಿಯು ರೂಪವೆಲ್ಲವಾಗಿ ಇಪ್ಪನಂತೆ ಸುವ್ವಿ 24 ದÀಕ್ಷಿಣಾಕ್ಷಿಯಲಿ ಲಕ್ಷಣ ವಿಶ್ವಮೂರ್ತಿ ಶಿಕ್ಷಕನಾಗಿ ಜೀವರ ವಂಶರಕ್ಷಕನಂತೆ ಸುವ್ವಿ ಜೀವರ ವಂಶರಕ್ಷಕನನ್ನೆ [ಜಾಗರವ ಕಾಣಿಸೋನಷ್ಟೆ] ವಾಣಿ ನಿಪುಣನಂತೆ ಸುವ್ವಿ 25 ಈ ದೇವರು ಪ್ರಾಜ್ಞನಾದ ಹರಿಯ ಕೂಡಿ ನಿದಾನಿಸಲು ಜೀವಂಗೆ ಸುಖತೇಜಸವು ಸುವ್ವಿ ನಿದಾನಿಸಲು ಜೀವಂಗೆ ಸುಖತೇಜಸವು ಅನೇಕಾಗಿ ತೈಜಸನಲ್ಲಿ ಸ್ವಪ್ನಭಾಗ್ಯ ಸುವ್ವಿ 26 ಹುಬ್ಬುಗಳ ಮಧ್ಯದಲಿ ಶುಭ್ರ ನಾಲ್ಕುದಳ ಕಮಲ ಅನಿರುದ್ಧ ನೀಲಾಭ್ರವರ್ಣ ಸುವ್ವಿ ಅನಿರುದ್ಧ ನೀಲಾಭ್ರವರ್ಣನಾಗಿ ಹರಿ ಅಲ್ಲಿ ಅದೃಶ್ಯವಾಗಿರುವನಂತೆ ಸುವ್ವಿ 27 ಶಿರದಲ್ಲಿ ಶುಭ್ರ ಹನ್ನೆರಡುದಳ ಕಮಲ ಅರುಣವರ್ಣನಾದ ನಾರಾಯಣನಿಹ್ಯ ಸುವ್ವಿ ಅರುಣವರ್ಣನಾದ ನಾರಾಯಣನಿಹ್ಯ ಹರಿಯು ಈ ಪರಿಯಲಿ ತಿಳಿದವರಧಿಕರಂತೆ ಸುವ್ವಿ 28 ಬ್ರಹ್ಮಹತ್ಯ ಶಿರಸ್ಕಂಚ ಸ್ವರ್ಣಸ್ತೇಯ ಭುಜದ್ವಯಂ ಸುರಾಪಾನ ಹೃದಾಯುಕ್ತಂ ಗುರುತಲ್ಪ ಸುವ್ವಿ ಸುರಾಪಾನ ಹೃದಾಯುಕ್ತಂ ಗುರುತಲ್ಪ ಕಟಿದ್ವಯಂ ಪಾದ ಪಾಪರೂಪಗಳೆ ಸುವ್ವಿ29 ಪಾತಕ ಪ್ರತ್ಯಂಗಗಳು ಉಪಪಾತಕ ರೋಮಂಗಳು ಪಾಪಪುರುಷ ರಕ್ತನೇತ್ರ ನೀಲಪುರುಷ ಸುವ್ವಿ ಪಾಪಪುರುಷ ರಕ್ತನೇತ್ರ ನೀಲಪುರುಷನಾಗಿ ವಾಸ ವಾಮಕುಕ್ಷಿಯಲಿ ನ್ಯಾಸವಂತೆ ಸುವ್ವಿ 30 ಪುರುಷ ಷೋಡಶನಾದ ಷಟ್ಕೋಣದಲ್ಲಿ ಪ್ರದ್ಯುಮ್ನನಿಹ್ಯ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ಸುವ್ವಿ ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ದೇಹ ಪವಿತ್ರ [ವಾಸುದೇವರಲ್ಲಿ ಸುವ್ವಿ]31 ಹನ್ನೆರಡಂಗುಲಮೇಲೆ ಹನ್ನೆರಡುದಳ ಕಮಲ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ಸುವ್ವಿ [ಪ್ರಪÀನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ತುರಿಯ ಸಿತದಳದಲ್ಲಿ ನಿಧಾನಿಸಲು ಸುವ್ವಿ 32 ಮುಖ್ಯಪ್ರಾಣನೆಂಬೊ ಗುರುವು ಹರಿಗೆ ಸಖ್ಯನಾದ ಬಂದ ದುಃಖ ಪರಿಹರಿಸಿ ಸುಖಬಡಿಸುವ ಸುವ್ವಿ ಬಂದ ದುಃಖ ಪರಿಹರಿಸಿ ಸುಖಬಡಿಸುವ ಮಾರುತನು ಹನುಮ ಭೀಮಸೇನ ರೂಪಗಳು ಸುವ್ವಿ 33 ಮೂರನೆ ಅವತಾರ ಆನಂದತೀರ್ಥರು ವೀರವೈಷ್ಣವರಿಗೆ ಆದಿಗುರುಗಳು ಸುವ್ವಿ ಪಾದ ನೆನೆದರೆ ಘೋರ ಸಂಸಾರವನು ನೀಗಿಸುವನು ಸುವ್ವಿ 34 ಘೋರ ಸಂಸಾರವನು ನೀಗಿಸುವ ಹಯವದನ ತನ್ನ ಪಾದದ ಸಮೀಪದಲಿಟ್ಟು ಸಲಹುವ ಸುವ್ವಿ ಪಾದದ ಸಮೀಪದಲಿಟ್ಟು ಸಲಹುವ ಹಯವದನ ಖೇದಗಳ ಬಿಡಿಸಿ ರಕ್ಷಿಸುವ ಸುವ್ವಿ 35
--------------
ವಾದಿರಾಜ
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು
ಸೂರ್ಯ ಮಂಡಲ ಮಧ್ಯವರ್ತಿ | ಕಾರ್ಯ- ಕಾರಣ ಪ್ರಕೃತಿಗಳಿಗೆ ಚಕ್ರವರ್ತಿ-ವಿಜ್ಞಾನ ಸ್ಫೂರ್ತಿ-ವಿರಾಟಮೂರ್ತಿ ಪ ಪಾದ ತುರ್ಯನಾಮಕ ಲೋಕ- ಮರ್ಯಾದಾ ಸ್ಥಾಪಕ ಮಾದೇವಿರಮಣ-ಶತಕೋಟಿ ಕಿರಣ-ತೋರೋ ತವ ಚರಣ 1 ಅಮಿತ ನಿರಕ್ಷರ ಕುಕ್ಷಿಗಳ್ ನಿತ್ಯ ಮಾಡುವ ತ- ಪ್ಪಕ್ಷಮಿಸಬೇಕಪ್ಪ-ನಾವು ನಿನಗೆ ಕಪ್ಪ 2 ಕಮಲ ಸಂಭವ ಹೃದ್ಯ ನ್ಯಾಯಧರ್ಮಯುಕ್ತ ನಿಗಮಾಂತವೇದ್ಯ ಚೋದ್ಯ 3 ಹಾರ ಕಿರೀಟ ಕೇಯೂರ ಮಕರಕುಂಡಲ ಧಾರಿ ಸ್ವರ್ಣಮಯಾಂಗ ಧೃತ ಶಂಖ ಚಕ್ರ-ಶಿಕ್ಷಿತ ಶುಕ್ರ-ಪರಿಹರಿಸು ವಕ್ರ4 ವೃಷ್ಟಿಯ ಕೊಟ್ಟು ಸಂತುಷ್ಟಿ ಪೊಂದಿಸು ಜಗ ಜಟ್ಟಿ ಶ್ರೀ ಗುರುರಾಮವಿಠ್ಠಲ ಸ್ವಾಮಿ ಶಿಷ್ಟ ಜನಪ್ರೇಮಿ-ಸರ್ವಾಂತರ್ಯಾಮಿ5
--------------
ಗುರುರಾಮವಿಠಲ
ಸೃಷ್ಟಿಗೊಡೆಯನಿಗೆ ಜಯ ಮಂಗಳಂ ಕಾಲುಂ- ಶುಭ ಮಂಗಳಂ ಶುಭ ಕ- ಮಲಾಲಯ ರಮಣನಿಗೆ ಜಯ ಮಂಗಳಂ ಬಾಲಕ ರೂಪದಿಂದಾಲದೆಲೆಯ ಮೇಲೆ ಲೀಲೆ ತೋರುವ ಗೋಪಾಲನಿಗೆ 1 ನೀಲಳಕಗಳ ಸಿರಿಮುಡಿಗಟ್ಟಿ ಮ- ರಾಳ ಸಿಂಘಗಳಿಂದದಲಂಕರಿಸಿ ಕಾಲದಿಂದಿಗೆ ಗೆಜ್ಜೆ ಘಲ ಘಲಿಸುತ ತನ್ನ ಕಾಲಕರದೊಳೆತ್ತಿ ಕುಣಿಸುವಗೆ2 ವಾರಿಜ ಭವಪಿತ ಮಾರಕೋಟಿ ಶೃಂ- ಗಾರ ಮೂರುತಿ ಮುಖವಾರಿಜವ ತೋರುವ ಸುಧಾರಸ ವಾರುಧಿ ಗೋಪಕು- ಮಾರ ಶೇಷಾಚಲಧಾರನಿಗೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ. ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ. ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ 1 ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ 2 ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ 3
--------------
ವಾದಿರಾಜ
ಸೇವೇ ಶ್ರೀರಮಣಂ ಸದಾ ಸೇವಕಾರ್ತಿಹರಣಂ ಪ ಪಾವನ ವಾಘ್ರಾಚಲವಿಹರಣಂ ಅ.ಪ ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿಪತ್ರಂ ಖಂಡಪರಶುಕೃತಸನ್ನುತಿಪಾತ್ರಂ ಚಂಡಕಿರಣಶತಸನ್ನಿಭಗಾತ್ರಂ7 1 ಕುಲಿಶಧರಾತ್ಮಜ ಮಿತ್ರಂ ಸುಲಲಿತ ಕರಧೃತ ಗೋತ್ರಂ ಕಲಿತರಥಾಂಗಧರಾಸಿತನುತ್ರಂ ಕಲಿಮಲಖಂಡನ ನಿಜಚಾರಿತ್ರಂ2 ಭಾವಿತಜನ ಮಂದಾರಂ ಭಾವಜಜನಕಮುದಾರಂ ಸೇವಕರಕ್ಷಣ ಧೃತಶರೀರಂ ದೇವಸಮೂಹಾಕಲಿತ ವಿಹಾರಂ3 ಶಂಕರಹೃದಯಧ್ಯೇಯಂ ಕಿಂಕರಜನ ಸಮುದಾಯಂ ನಿಜನಾಮಧೇಯ 4 ಪರಮಪುರುಷಮನವಂದ್ಯಂ ಸರಸಗುಣಾಕರಮಾದ್ಯಂ ವರದವಿಠಲಮಖಿಲಾಗಮಬೋಧ್ಯಂ 5
--------------
ವೆಂಕಟವರದಾರ್ಯರು
ಸೇವೇ ಶ್ರೀರಮಣಂ-ಸದಾ-ಸೇವಕಾರ್ತಿಹರಣಂ ಪ ಪಾವಕ ಶತರುಚಿ ರುಚಿರಾಭರಣಂ ಪಾವನವ್ಯಾಘ್ರಾಚಲವಿಹರಣಂ ಅ.ಪ. ಪುಂಡರೀಕಾಯತ ನೇತ್ರಂ ಮಂಡಿತ ಖಗಪತಿ ಪತ್ರಂ ಶತ ಸನ್ನಿಭಗಾತ್ರಂ1 ಕುಲಿಶಧರಾತ್ಮಜಮಿತ್ರಂ-ಸುಲಲಿತ ಕರಧೃತ ಗೋತ್ರಂ ನಿಜ ಚಾರಿತ್ರಂ2 ಭಾವಿತ ಜನ ಮಂದಾರಂ-ಭಾವಜ-ಜನಕ ಮುದಾರಂ ಸಮೂಹಾಕಲಿತ ವಿಹಾರಂ3 ಶಂಕರ ಹೃದಯಧ್ಯೇಯಂ ಕಿಂಕರ ಜನ ಸಮುದಾಯಂ ನಿಜನಾಮಧೇಯಂ 4 ಪರಮ ಪುರುಷಮನವದ್ಯಂ ಸರಸಗುಣಾಕರ ಮಾದ್ಯಂ ವಿಠಲ ಮಖಿಳಾಗಮ ಬೋಧ್ಯಂ 5
--------------
ಸರಗೂರು ವೆಂಕಟವರದಾರ್ಯರು
ಸೋಜಿಗ ಸೋಜಿಗ ಗೋವಿಂದನ ಸೋಜಿಗ ಗೋಪಾಲನ ಸೋಜಿಗ ಪ ಇಂದಿರೆ ರಮಣ ಈ ಪರಬ್ರಹ್ಮ | ಮಂದರೋದ್ಧಾರ ಈ ದೇವಾ | ತಂದೆ ತಾಯಿ ತ್ರೈಲೋಕ್ಯಕ್ಕೆ ತಾನಾಗಿ ನಂದ | ಆನಂದ ಯಶೋದೆಗೆ ಮಗನಾದ ನೋಡಮ್ಮ || ಸೋಜಿಗ 1 ಸದಮಲ ಸ್ವರೂಪ ಸಚ್ಚಿದಾನಂದನು |ಮುನಿಜನ ವಂದಿಪನು ಈ ದೇವ ಮುನಿಜನ ವಂದಿಪನು |ಪದುಮನಾಭ ಪೀತಾಂಬರಧರ ದೇವ ವಿದುರನ | ಆವಿದುರನ ಮನೆಯಲ್ಲಿ ಉಂಡದ್ದು ನೋಡಮ್ಮ ಸೋಜಿಗ2 ನಾನಾ ದೇವರ ದೇವ ನಾರಾಯಣ ಹರಿ ನಿಜಸುರ ವಂದಿ-ಪನು ಈ ದೇವ | ಭಾನು ಕೋಟಿ ತೇಜ ಜ್ಞಾನ-ಬೋಧನ ಸ್ವಾಮಿ | ತಾನಾಗಿ ಭಕುತಿಗೆ ಒಲಿದದ್ದುನೋಡಮ್ಮ ಸೋಜಿಗ 3
--------------
ಜ್ಞಾನಬೋದಕರು
ಸೌಭಾಗ್ಯ ಸಂಪನ್ನ ಸಂಪೂರ್ಣ ಶ್ರೀ ಭೂನೀಳಾ ರಮಣ ಕಲ್ಯಾಣ ಪ ಆಧಾರದೇವ ಭೇದ ರಹಿತ ಭಾವ ಮೋದಕರಾ ಶ್ರೀವಾಸುದೇವ 1 ಯಶೋದೆಯ ಸಂಗದ ಮರಿಯೆ ದಶಾವತಾರಿ ಶೇಷಶಾಯಿಯೆ 2 ಗರುಡವಾಹನ ಗಜವರದ ಗಮನ ದುರಿತನಾಶನ ಜಾಜೀಜನಾರ್ಧನ 3
--------------
ಶಾಮಶರ್ಮರು
ಸ್ಮರಣೆಯೊಂದಿರೆ ಸಾಲದೆ ಶ್ರೀಹರಿನಾಮ ಪ. ತರಣಿಕೋಟಿಭಾಸುರ ಶ್ರೀನಾರಾಯಣನ 1 ಕಾಲನವರ ಕಂಡು ಬಾಲನ ಕರೆದಗೆ ಸಾಲೋಕ್ಯವಿತ್ತ ಶ್ರೀನಾರಾಯಣನ 2 ತರಳ ಪ್ರಹ್ಲಾದನು ಕರೆಯೆ ಕಂಬದಿ ಬಂದು ನರಮೃಗೇಂದ್ರನಾಗಿ ಪೊರೆದ ನಾರಾಯಣನ 3 ಮಾತೆಯ ಸವತಿಯ ಮಾತಿಗಾಗಿ ಬಂ- ದಾತನ ಕಾಯ್ದ ಶ್ರೀನಾಥ ನಾರಾಯಣನ 4 ಮೊಸಳೆಯ ಬಾಧೆಗೆ ಹಸಿದು ಕೂಗಲಾಗಿ ಬಸವಳಿದಿಹನ ರಕ್ಷಿಸಿದ ನಾರಾಯಣನ 5 ಕಾದೆಣ್ಣೆಯೊಳು ಕರುಣೋದಯದಿ ಸುಧನ್ವ- ಗಾದರಿಸಿ ರಕ್ಷಿಸಿದಾದಿನಾರಾಯಣನ 6 ಮಾರಜನಕ ರಮಾರಮಣ ಲಕ್ಷ್ಮೀ- ನಾರಾಯಣನ ಪಾದಾರವಿಂದಯುಗ 7
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ಮರಿಸಿ ಬದುಕಿ ಸಾರ್ಥಕೆನಿಸಿ | ವ್ಯರ್ಥ ಆಯು ಕಳೆಯದಂತೆಕರುಣಿಯಿಂದ ಶರಣರನ್ನ | ಪೊರೆವ ಹರಿಯನು ಪ ಪಾದ | ದ್ವಿಜ ಸುಧಾಮಗೊಲಿದ ಪಾದಭಜನೆ ಮಾಳ್ಪ ಸಾಧು ಜನರ | ನಿಜದಿ ಪೊರೆಯುವಾ 1 ಭೂಮಿಯಳೆದು ಬಲಿಯ ತುಳಿದ | ಸುಮನದಿಂದ ಬಾಗಿಲಕಾಯ್ದಭೂಮಿರಮಣನಾದ ಹರಿಯ | ಭೂಮಗುಣನ ಭವ್ಯ ಪಾದವಾ 2 ಸತಿ ಪಾದ | ವನ್ನೂ ಬಿಡದೆ ಸತತಾ 3 ರಕ್ಕಸಾರ ಸೊಕ್ಕ ಮುರಿದ | ತರ್ಕಕೆ ಗೋಚರಿಸಲೊಲ್ಲಪಕ್ಷಿವಾಹ ಪನ್ನಗಶಯನ | ಮಕ್ಕಳ ಮಾಣಿಕ್ಯ ಪಾದವ 4 ಸುರರು ತಮ್ಮ ಹೃದಯದಲ್ಲಿಹರುಷದಿಂದ ಪೂಜಿಪಾ | ಗುರು ಗೋವಿಂದ ವಿಠಲನಾ 5
--------------
ಗುರುಗೋವಿಂದವಿಠಲರು
ಸ್ಮರಿಸಿ ಬದುಕಿರೊ ಸರ್ವಾನಂದ ಗುರುಗಳ ನಿರುತದಿಂದ ಇಷ್ಟಫಲವ ನೀಡೋ ವರಗಳ ಬೇಡಿ ಪ ಆದಿಕಲ್ಲಿನಲ್ಲಿ ಮಹಾದೇವ ಕರೆಯೆ ಬಂದು ನಿಂತ ಶ್ರೀದೇವಿರಮಣನ ಮುದ್ದು ಪಾದಾಂಬುಜವ ಪೂಜಿಸುವರ 1 ಉತ್ತಮವಾಗಿದ್ದ ದಿವ್ಯ ಛತ್ರ ವಿಜಯತೀರ್ಥ ನಿರ್ಮಿಸಿ ನಿತ್ಯದಲಿ ಮೃಷ್ಟಾನ್ನದಾನ ವಿಸ್ತಾರವನೆ ಪೇಳಲೊಶವೆ 2 ಕುಷ್ಠರೋಗ ವ್ಯಾಧಿ ಜ್ವರ ಚತುರ್ಥಿ(?) ಭಯಭೀತಿಗಳನ್ನೆಲ್ಲ ಬಿಟ್ಟೋಡಿಸಿ ತೀರ್ಥ ಅಂಗಾರದಲಿ ಸಮಸ್ತರ ಮಹಿ(ಮೆ)ಯ ನೋಡಿ 3 ಸಂತಾನ ಸಯುತದ ಫಲವ ನಿಂತು ಕೊಡುತ ಮಂತ್ರಾಕ್ಷತೆಯ ಗ್ರಂಥ ಪದಸುಳಾದಿಯ ಲಕ್ಷ್ಮೀಕಾಂತಗೆ ಮಾಡರ್ಪಿಸುವರ 4 ಹರಿಯ ದಿವ್ಹ್ಯಾಸಿಕÉಯ ನಾಮ ಗುರು ವಿಜಯರಾ- ಬಿಡದೆ ಭಜನೆ ಮಾಡುವವರ5
--------------
ಹರಪನಹಳ್ಳಿಭೀಮವ್ವ