ಒಟ್ಟು 4842 ಕಡೆಗಳಲ್ಲಿ , 131 ದಾಸರು , 3185 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸವರವರದ ವಿಠಲ | ಸಲಹೊ ಇವಳಾ ಪ ಈಶಾದಿ ದಿವಿಜೇಡ್ಯ | ವಾಸವಾನುಜನೇ ಅ.ಪ. ಕ್ಲೇಶನಾಶನನೆ ಮ | ಧ್ವೇಶ ನಿನ್ನಡಿ ದಾಸ್ಯಆಶಿಸೂವಳ ಬಿಡದೆ | ಶ್ರೀಶ ಕೈಪಿಡಿದೂದೋಷರಾಶಿಯ ಕಳೆದು | ಪೋಷಿಸಲು ಬಿನ್ನವಿಪೆಹೇಸದಾಶಿವ ವಂದ್ಯ | ಮೇಶ ಮಹಿದಾಸಾ 1 ಪತಿಸೇವೆ ಗುರುಸೇವೆ | ಹಿತದಿಂದ ಮಾಳ್ಪಂಥಮತಿಯನೆ ಕರುಣಿಸುತ | ಕ್ಷಿತಿರಮಣ ನಿನ್ನಾಸ್ಮøತಿಯ ಕೊಡು ಸತತ ಸಂ | ಸೃತಿಯನೇ ಕಳೆಯಲ್ಕೆಗತಿಗೋತ್ರ ನೀನಾಗಿ | ಪಥದೋರೊ ಹರಿಯೇ 2 ಏಕಮೇವನೆ ದೇವ | ಪ್ರಾಕ್ಕು ಕರ್ಮವ ಕಳೆದುನೀ ಕೊಡುತ ಸುಜ್ಞಾನ | ಭಕುತಿ ವೈರಾಗ್ಯಕಾಕು ಸಂಗವ ಕೊಡದೆ | ನೀಕೊಟ್ಟು ಸತ್ಸಂಗಮಾಕಳತ್ರನೆ ಸಲಹೊ | ಈಕೆ ಕೈ ಪಿಡಿದೂ 3 ಖೇಚರೋತ್ತಮ ವಾಹ | ಕೀಚಕಾರಿ ಪ್ರಿಯನೆಮೋಚಕೇಚ್ಛೆಲಿ ಸವ್ಯ | ಸಾಚಿಸಖಕೃಷ್ಣಾ |ವಾಚಾಮಗೋಚರನೆ | ನೀಚೋಚ್ಚ ತರತಮವವಾಚಿಸುತ ಇವಳಲ್ಲಿ | ಮೋಕ್ಷಪ್ರದನಾಗೋ 4 ದೇವವರ ಭವ್ಯಾತ್ಮ | ಭಾವಕೊಲಿಯುವ ಹರಿಯೆನೀವೊಲಿಯದಿನ್ನಿಲ್ಲ | ಆವ ಈ ಜಗದೀ |ಕಾವುದಿವಳನು ಎಂದು | ಭಾವದಲಿ ಭಿನ್ನೈಪೆಭಾವುಕರ ಪಾಲ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ದಿನ ದಿನ ಹರಿಕೃಷ್ಣಯೆನುತಿರೆ ಮನುಜನ ಮನವೆ ವೈಕುಂಠವೆಂದೆನಿಸುವುದು ಪ ನೆನೆಯುವ ಭಕ್ತನ ಕಿವಿಯಲಿ ಕೊಳಲಿನ ದನಿಜನಿಪುದು ಕಂಬನಿ ಮಿನುಗುವುದು ಅ.ಪ ಪೊಡವಿ ಪತಿಯ ಎಡತೊಡೆಯೊಳಿದ್ದಾ ಮುದ್ದು ಹುಡುಗನ ಬಲತಾಯಿ ಪಿಡಿದೆಳೆಯೇ ಕಡು ದುಗುಡದಿ ಶಿಶು ಅಡವಿಯೊಳಗೆ ಸಿರಿ ಯೊಡೆಯನ ಕಂಡು ಕೊಂಡಾಡಿದನು 1 ದ್ಯೂತದೊಳೆಲ್ಲವ ಸೋತರ ಸತಿಯಳ ಘಾತಿಸಿ ಸೀರೆಯ ಸೆಳೆದಾಗ ಭೀತಿಯಿಂದಲಿ ಪರಂಜ್ಯೋತಿ ಕೃಷ್ಣಾಯೆನೆ ಪ್ರೀತಿಯೊಳಕ್ಷಯ ವರವಿತ್ತಾ ಕೃಷ್ಣಾ2 ಕೂಗಿದೊಡನೆ ತ್ವರೆಯಾಗಿ ಬರುವ ನಮ್ಮ ನಾಗಶಯನ ಮಾಂಗಿರಿಪತಿಯ ರಾಗದಿ ಪೂಜಿಸಿ ವಂದಿಸಲವನನು- ರಾಗದಿ ನರ್ತಿಪನೆಡಬಲದಲಿ ರಂಗಾ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದಿನಗಳನು ಕಳೆವ ಜನರೆ ಸುಜನರು ವನಜನಾಭನ ದಾಸರ ಸಮಾಗಮದಿಂದ ಪ. ಅರುಣೋದಯದಲೆದ್ದು ಆಚಮನ ಕೃತಿಯಿಂದ ಪರಿಶುದ್ಧರಾಗಿ ಇಹಪರಗಳಿಂದ ಎರಡುವಿಧ ಸುಖವೀವ ಗುರುಮಧ್ವಮುನಿವರನ ಪರಮಮತವಿಡಿದು ಹರಿಕಥಾಮೃತ ಸವಿದು 1 ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ- ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು ಭಾನುನಾಮಕನಾದ ಪರಮಾತ್ಮನಂಘ್ರಿಯನು ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ 2 ವಾಸುದೇವ ಅಡಿಗಡಿಗೆ ನೆನೆದು ಪಾವಕಗೆ ಪ್ರಾತರಾಹುತಿಯನಿತ್ತು ಭಾವಜ್ಞರಲಿ ಸಕಲಪುರಾಣಗಳ ಕೇಳಿ ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ 3 ನದನದಿಗಳಲಿ ಸ್ನಾನವನು ಮಾಡಿ ಕಂಠÀದಲಿ ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ- ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ4 ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ ದೇವಪೂಜೆಯ ಮಾಡಿ ದೇವೇಶಗೆ ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ- ದೇವ ಬಲಿಹರಣ ಅತಿಥಿ ಪೂಜೆಗಳಿಂದ 5 ಪರಮ ಹರುಷದಿಂದ ದೇವ ಪ್ರಸಾದವನು ವರ ಮಾತೃ ಪಿತೃ ಸೋದರರು ಸಹಿತ ಪರಮ ಸಖರ ಪಂಙÂ್ತ ಪಾವನರೊಡಗೂಡಿ ನರಹರೆ ಎನುತ ಭೋಜನ ಮಾಡಿ ಮೋದಿಸುತ 6 ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ ಶ್ರೀಯರಸನಂಘ್ರಿ ಸೇವೆಯನು ಮಾಡಿ ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ- ರಾಯಣನ ಗುಣಗಳನು ಪೊಗಳುತಲಿ 7 ತನುಮನವÀ ಶ್ರೀಹರಿಯಾಧೀನವ ಮಾಡಿ ಅನುಸರಿಸಿ ಭಾಗ್ಯಬಡತನ ಎಣಿಸದೆ ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ8 ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ ಪಾವನ ಚರಿತ್ರ ಹಯವದನನ ನೆನೆದು 9
--------------
ವಾದಿರಾಜ
ದಿವನಿಶಿ ತವಪಾದ ದಿವ್ಯಧ್ಯಾನವನಿತ್ತು ಪ ವಿಷಯಲಂಟಪನಾಗಿ ವ್ಯಸನ ಕೂಪದಿ ಬಿದ್ದು ಮಸಣ ಬುದ್ಧಿಯಿಂ ಕೆಡುವ ಶಿಶುವನುಲಕ್ಷಿಸಿ 1 ಪುಸಿಯ ಸಂಸಾರವ ವಿಷಮವೆಂದರಿಯದೆ ದೆಸೆಗೆಟ್ಟು ಬಳಲುವ ದಾಸನೋಳ್ದಯವಿಟ್ಟು2 ಸುಜನರೊಲುಮೆಯಿತ್ತು ಗಜಿಬಿಜಿ ತೊಲಗಿಸಿ ನಿಜಜ್ಞಾನ ದಯಮಾಡು ಸುಜನಾರ್ಯ ಶ್ರೀರಾಮ3
--------------
ರಾಮದಾಸರು
ದೀನ ಜನ ಅಭಿಮಾನವನು ನೀನು ಅನುದಿನದಲಿ | ರಕ್ಷಿಸುವೆ ಸಾನುಕೂಲದಿ | ಶ್ರೀ ನಿಧಿಯೆ ಧೀರ ಎಂದು | ವೀರ ಹರಿಮಾರ ಸಂಹಾರಸಖ ಕ್ರೂರ ಫಣಿದರ್ಪಹರನೇ | ಮುಕುಂದ ಮುಚಕುಂದ | ಪ್ರೀಯ ವರದನಾ ಮಾನಸದಿ ಅರಿತು ತವ ಕುರಿತು | ಭಕ್ತಿರತನಾಗಿಹ ಅನವರತ ಸುಖದಲಿಡುತಿಹ | ಕೃಷ್ಣಾ ಸಲಹು ಒಲವಿಂದ 1 ಅಂಕಿತ-ಕೃಷ್ಣ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದೀನ ಪಾಲನೆ ಗಾನಲೋಲನೆ ಸುಜನ ಪ್ರಿಯನೇ ಪ ಈ ನರಜನ್ಮದ ಕಾನನದಲಿ ಬಲು ದೀನನಾಗಿ ಗುಣಗಾನ ಮಾಡುವೆನೊ ಅ.ಪ ದುಷ್ಟಭೋಗಗಳನುಭವಿಸುತ ಸದಾ ಭ್ರಷ್ಟನಾದೆ ನಾನು ಅಷ್ಟಿಷ್ಟಲ್ಲದೆ ಮರುಗುತಿರುವೆ ಪರ ಮೇಷ್ಟಿ ಜನಕ ಎನ್ನ ನಿಷ್ಠನ ಮಾಡೊ 1 ಜಪವ ಮಾಡಲಿಲ್ಲ ತಪವ ಮಾಡಲಿಲ್ಲ ಉಪವಾಸವ ಕಾಣೆ ತಪಿಸುತಿರುವೆ ಎನ್ನ ಅಪರಾಧಗಳಿಗೆ ಕುಪಿತನಾಗದಿರೊ ದ್ವಿಪ್ರವರ ವರದ 2 ಧರ್ಮವ ಬಿಟ್ಟು ಸತ್ಕರ್ಮವ ತ್ಯಜಿಸುತ ದುರ್ಮಾರ್ಗದಲಿ ಬಲು ಹೆಮ್ಮೆ ಮಾಡಿದ ನನ್ನ ಹಮ್ಮು ಮುರಿದಿಹುದು ಬೊಮ್ಮ ಜನಕ ಸುಪ್ರಸನ್ನನಾಗೆಲೊ 3
--------------
ವಿದ್ಯಾಪ್ರಸನ್ನತೀರ್ಥರು
ದೀನಜನ ಮಂದಾರನೇ ಪ ಮಂದಭಾಗ್ಯವ ಕೂಡ ಮಂದಹಾಸವೇಅ.ಪ. ಸರ್ವತ್ರದಲಿ ನೀನಿದ್ದು ಸಲಹುವಿ-ಸ್ಮøತಿ ಕೊಡುವುದುಚಿತವೇ 1 ಪಾಪದೊಳು ಶಿಲ್ಕಿಸಿ ಮಹಾಪಾಪಿ ಎಂದೆನಿಸಿ ವಳಹೊರಗೆ ಪರಿಪೂರ್ಣನಾಗಿ2 ಮಂದರನು ಪೊರೆವದಕೆ ಸಂಧಿಕಾಲವು ಬಂದೊದಗಿದೆ ತಂದೆವರದಗೋಪಾಲವಿಠ್ಠಲನ ಪ್ರೀಯಾ 3
--------------
ತಂದೆವರದಗೋಪಾಲವಿಠಲರು
ದೀನನ ಸೇರಿದರೇನು ಫಲ ರಾಮ ಗುಣ ಹೀನನ ಸೇರಿದರೇನು ಫಲ ಪ ಮಕ್ಕಳು ಜನಿಸದರೇನು ಫಲ ಒಕ್ಕಲುತನದಿಂದೇನು ಫಲ 1 ಜನನೀ ಜನಕರಿಗೇನು ಫಲ ಮನುಜರಿಗೇನು ಫಲ 2 ಅರಿಯದೆ ಕೊಂಡವಗೇನು ಫಲ ಹರಿಯವನಾಗಿರಲೇನು ಫಲ 3 ಹೆಂಡತಿಯಿರಲೇನು ಫಲ ಗಂಡಸುತದಿಂದೇನು ಫಲ 4 ತೆರದಲಿ ಸಿಂಗರಸಿದರೇನು ಫಲ ಪರಿಪರಿ ಪುಣ್ಯದಿಂದೇನು ಫಲ5
--------------
ವೆಂಕಟವರದಾರ್ಯರು
ದೀನಬಂಧು ನೀ ದಯಾಸಿಂಧು ಪ ಆಪನ್ನ ಜನರನು ಮನ್ನಿಸಿ ಸಲಹಿ ಪ್ರಸನ್ನನಾಗುವೆ 1 ಕಂಜಲೋಚನ ನಿನಗಂಜಲಿ ಮುಗಿಯುವೆ ಕುಂಜರ ವರದ ಭುಜಂಗ ಶಯನ 2 ಘನ್ನಮಹಿಮ ಪ್ರಾಣನಾಥ ವಿಠ್ಠಲರಾಯ ಮನ್ನಿಸಿ ಪ್ರಸನ್ನನಾಗಿ ಎನ್ನಸಲಹೋ ಸ್ವಾಮಿ 3
--------------
ಬಾಗೇಪಲ್ಲಿ ಶೇಷದಾಸರು
ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1 ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2 ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3 ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4 ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5
--------------
ಚಿದಾನಂದ ಅವಧೂತರು
ದುಂಡು ಮುಖವುಳ್ಳ ಹುಡುಗನ ಕಂಡಿರಾಚಂಡನಾಡುತ ಬಂದ ಚದುರೆಯರ ಓಣಿಯಲಿ ಪ ಕರದೊಳಗೆ ಕೊಳಲಿಹುದು ಚರಣದೊಳು ರುಳಿಗೆಜ್ಜೆಕೊರಳೊಳಗೆ ಸರಪದಕ ಗುರುಳು ಮುಖದಿಜರದೊಲ್ಲಿ ಹೊದ್ದಿಹನು ಸ್ಮರನ ಮೋಹಿಪ ರೂಪಸಿರಿಯ ಕಂಡರೆ ಅವನ ಪರರು ಬಿಡರಮ್ಮ 1 ವಾರಿಜಾಕ್ಷೆರೆ ಬಹಳ ಜಾರಚೋರೆನ್ನ ಮಗವಾರೆನೋಟದಿ ಮನಸು ಹಾರಿಸುವನುಸಾರಿದರೆ ಮನೆಗಳಿಗೆ ದ್ವಾರಯಿಕ್ಕುತೆ ಬನ್ನಿದೂರು ಪೇಳಲು ಕೇಳಿ ಸಾರಿದೆನು ಮೊದಲೆ 2 ಕಂದನಾಗುವ ಕ್ಷಣದಿ ಒಂದೆ ಪ್ರಾಯದ ಪುರುಷಸುಂದರಾಂಗಿಯಳಾಗಿ ಬರುವನಂದಬಾಲನ ಮಹಿಮೆ ಬಂದು ನಂಬಲಿ ಬೇಡಿಇಂದಿರೇಶನು ಬಹಳ ಮಂದಿ ಮೋಹಿಸುವ 3
--------------
ಇಂದಿರೇಶರು
ದುಂಡುಗಟ್ಟಿ ನಿಂತರಮ್ಮದುಂಡುಗಟ್ಟುತ ಎಲ್ಲರೂದುಂಡುಗಟ್ಟುತ ಪೆಂಡೆಯಗೆಜ್ಜೆಗಳು ಘಿಲ್ಲು ಘಿಲಕು ಎನ್ನುತ ಪ. ಕೋಗಿಲಂತೆ ಸ್ವರವನೆತ್ತಿಬಾಗಿ ಬಳಕುತ್ತ ಎಲ್ಲರೂಬಾಗಿ ಬಳುಕುತ್ತ ನಾಗವೇಣಿಯರುಚಂದ್ರನ್ಹಾಂಗೆ ಒಪ್ಪುತ ಚಂದ್ರನ್ಹಾಂಗೆ ಒಪ್ಪುತ1 ಕಮಲ ಮುದದಿ ಎತ್ತಿಮುಗಿಯುತರಂಗಗೆ ಎತ್ತಿ ಮುಗಿಯುತ 2 ಲಕುಮೇಶನಲ್ಲೆ ಸ್ನೇಹ ಉಕ್ಕಿ ಚೆಲ್ಲುತ ಶರದಿ ಉಕ್ಕಿಚಲ್ಲುತ ಅಕ್ಕನೇತ್ರವೆಂಬೊ ಕುಮುದ ಚಕ್ಕನೆ ಅರಳುತ ಚಕ್ಕನರಳುತ 3 ರಂಗನಂಫ್ರಿಗೆರಗುವಂತೆ ಭೃಂಗವಾಗುತ ಎರಗಿಭೃಂಗವಾಗುತ ತಮ್ಮಅಂಗ ಮರೆದು ಮುದದಿಉತ್ತುಂಗರಾಗುತ ಉತ್ತುಂಗರಾಗುತ4 ಹರವಿದ ಕ್ಯಾದಿಗೆಯು ನÀವಿಲು ಗರಿಯಂತೊಪ್ಪುತ ನವಿಲುಗರಿಯಂತೊಪ್ಪುತ ಶ್ರೀ ರಾಮೇಶನೆಂಬೊ ಮುಗಿಲಿಗೆ ಪರಿವೆ ನಲಿಯುತ ಪರಿವೆನಲಿಯುತ5
--------------
ಗಲಗಲಿಅವ್ವನವರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುಮ್ಮ ದುಮ್ಮೆನ್ನಿ ದುಮ್ಮ ಸಾಲವೆನ್ನಿ ಪ ನರಜನ್ಮ ಫಾಲ್ಗುಣ ಪೌರ್ಣಿಮೆ ಬಂದಿದೆ | ಮರಿಯ ಬ್ಯಾಡಿ ತನು ಧನ ಮನದೀ | ಹರಿದಾಸ ರಾಹವರೆಲ್ಲರು ಹೋಳಿಯ | ಪರಮಾನಂದದ ಲ್ಯಾಡುವ ಬನ್ನಿರಣ್ಣಾ 1 ಜ್ಞಾನಾಗ್ನಿಯ ಪ್ರಜ್ವಲದಿಂದಾ | ಹಮ್ಮೆಂಬ ಕಾಮನ ಹೋಳಿಯದಹಿಸಿ | ಒಮ್ಮನದಿ ನಲಿದಾಡಿರಣ್ಣಾ 2 ಹರಿನಾಮ ಕುಂಕುಮ ಸಾರಿ ಚಲ್ಯಾಡುತ | ಧರಿಸುತ ಹೃದಯ ಶಿರಸದಲಿ | ಕರದಲಿ ವಿಚಾರ ಬೆತ್ತ ಹೊಯ್ದಾಡುತ | ಹರುಷದಿಂದಲಿ ಕುಣಿದಾಡಿರಣ್ಣಾ 3 ಪರಿ ಪರಿ ಸಾಧನ ದೋರಿಸುತಾ | ಕರುಣದಿ ಆಡಿಸುತಿಲ್ಲಿ ನಿಂದಿರಲು | ದುರಿತಭಯಕ ಅಂಜ ಬ್ಯಾಡಿರಣ್ಣಾ 4 ಸಂಚಿತ ಬೂದಿಯ ಚಲ್ಲಿ ಪರಮಾ | ರ್ಥದ ಗಂಗಿಯೊಳು ಮಿಂದು ಶುಚಿಯಾಗಿ | ಪದುಮಾಶ್ರಯದಿಂದ ಗತಿಪಡಿರಣ್ಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರಿತ ಗಜಕೇಸರಿಯೆ ತ್ರಿಲೋಕದ ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ | ಕರುಣವ ಮಾಡಿ ಪರಿಯಲಿ ಸಾರಂಗ | ಧರನೆ ಧರಣಿಧರ ವರ ಪರಿಯಂತಾ ಪ ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು | ಹೇಮ ಮುನೀಶ್ವರ ಕಾಮಿಸಿ ಹರಿಪಾದ | ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ || ಸಾಮಜವರದನ ನಾಮವ ನೆನೆಯಲು | ಹೇಮ ತೀರಥದೊಳು | ತಾ ಮನಗೊಂಬ ನಾಮನೆ ಪಡೆದು 1 ಮಂಗಳಾಂಗಿಯೇ ಬರಲು ರಂಗರಾಯನು ಸಾ | ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು | ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ | ತುಂಗ ಮಹಿಮ ವಿಹಂಗಾದಿಗಳಿಂದ ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ 2 ಜಯ ಕುಂಭಘೋಣನಿಲಯಾನೆನೆಸುವ ಉ | ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ | ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ | ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ | ನಯನ ಮೀತಾರ ಪಾಲಯಪಾವನದೇವಾ | ದಯಮುಖ ಹರಾ ವಿಜಯವಿಠ್ಠಲಪರಾ 3
--------------
ವಿಜಯದಾಸ