ಒಟ್ಟು 5385 ಕಡೆಗಳಲ್ಲಿ , 130 ದಾಸರು , 3673 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾಪ ಬ್ರಹ್ಮೇತಿ ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ ಸಿಂಧು ಕಾವೇರಿ ಕೃಷ್ಣವೇಣಿ ಗೋದೆ ತುಂಗೆ ನರ್ಮದಾ ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ1 ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ ವಿಕಳಮತಿಯಲಿಟ್ಟು ವರನಾದರೇನು ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ 2 ಜ್ಞಾನದಲ್ಲಿ ಪರರಿಗೆ ನ್ಯಾಯ ಪೇಳಿದರೇನು ಹಾನಿ ನೆನೆಸಿ ಕೀರ್ತಿಯ ಪಡೆದರೇನು ಧ್ಯಾನದಲಿ ಮಾನಸ ಪೂಜೆ ಮಾಡಿದರೇನು ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ 3 ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು ಪಾತ್ರಾಪಾತ್ರನರಿದು ನಡೆದರೇನು ಗಾತ್ರವನು ಬಳಲಸಿ ನೇಮ ಮಾಡಿದರೇನು ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ 4 ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು ಗಡಿಗಿ ಅಲ್ಲದೆ ಅದು ಪರುಶಾಗೋದೆ ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ 5
--------------
ವಿಜಯದಾಸ
ತಾಮರಸ ನೆರೆನಂಬಿದೆ ಪೊರೆಯೆನ್ನನು ಪ ಜನನ ಮರಣವಿದೂರ ನೀನಾಜನಪತಿಯ ತನುಜಾತನೆ ಅನಿಮಿಷೇಶರಿಗೊಡೆಯನೆನಿಸಿದೆ 1 ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ 2 ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ 3 ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ 4 ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತÀಪ್ರಭಾ ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ 5 ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರÀಲವೋ ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ 6 ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ ಮಂಗಗಳಿಗೆ ನೀನೊಲಿದಿಯಾ 7 ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ 8 ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ 9 ಶಾಂತಿಯ ಪೆÇಂದಿದ ಹರನ ಪೂಜಿಯಗೈದಿಯಾ 10 ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ 11 ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು 12 ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು 13 ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು 14 ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ15
--------------
ವರದೇಶವಿಠಲ
ತಾಮರಸ ನೆರೆ ನಂಬಿದೆ ಪ ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ. ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ ಉಪೇಕ್ಷೆ ಮಾಡಿ ಕಳೆದೆ ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ ಅಪಕಾರ ಕಾಣುತಿದೆಕೋ ನಿಪುಣನೆನಿಸುವೆನೆಂದು ಅಜ್ಞಾನಿಗಳ ಮುಂದೆ ತಪ ವೃದ್ಧರನ್ನು ಹಳಿವೆ ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1 ಮಾರನ ಉಪಟಳಾಕಾರದಲಿ ನಾ ಬಲು ಪೋರ ಬುದ್ಧಿಯನು ಮಾಡಿ ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ ಕೋರಿದ್ದು ಇತ್ತು ನೀಡಿ ಕ್ರೂರಮಾನವರೊಳಗೆ ಆಡಿ ವಾರಿಜನಾಭ ನಿನ್ನ ಆರಾಧನೆಯ ಮರೆದು ಧಾರಿಣೀ ಭಾರದೆ ಪರಲೋಕ ಮರೆದೆ 2 ಭೂಸುರರು ಚಂಡಾಲ ಜಾತಿಯೆನ್ನದೆ ಬಲು ಹೇಸಿಕಿಲ್ಲದೆ ತಿರುಗುವೆ ಪರಿ ವೇಷವನು ಧರಿಸಿ ಮೆರೆದೇ ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ ದಾಸ ಸಹವಾಸ ಜರೆದೆ ವಾಸುಕೀಶಯನ ವಸುದೇವತನಯನೆ ನಿನ್ನ ದಾಸನೆನ್ನಿಸದೆ ಅಪಹಾಸ ಮಾನವನಾದೆ 3 ಹರಿದಾಸರ ಬಳಿ ಅರಘಳಿಗೆ ಕೂತರೆ ಶಿರವ್ಯಾಧಿಯೆಂದೇಳುವೇ ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ ಮರೆದು ಲಾಲಿಸಿ ಕೇಳುವೆ ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ ಪರಮ ಹರುಷವ ತಾಳುವೆ ಗುರುಹಿರಿಯರೊಂದುತ್ತರವನಾಡಲು ಕೇಳಿ ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4 ನಾ ಮಾಡಿದಪರಾಧ ಎಣಿಸಿ ಬರೆದರೆ ಈ ಭೂಮಂಡಲವು ಸಾಲದಿಹುದೊ ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು ಈ ಮತಿಯ ಅದು ಪೋಲದು ಹೋಮ ಜಪತಪಗಳನು ಎಷ್ಟು ಮಾಡಲು ಪಾಪ ಸ್ತೋಮ ಎಂದಿಗು ಪೋಗದೊ ಸಾಮಜವರದ ಜಗನ್ನಾಥ ವಿಠಲ ನಿನ್ನ ಕಾಣಿ 5
--------------
ಜಗನ್ನಾಥದಾಸರು
ತಾಯಿತಂದೆಯರಿಗೆ ನಮನ (ವಾರ್ಧಕ ಷಟ್ಪದಿ) ಆನಮಿಪೆ ಮಾತೆ ಪಿತರರ್ಗೆ ಪ ಆನಮಿಸಿ ಈರ್ವರಿಗೆ | ಜ್ಞಾನ ಸಾಧನ ದೇಹದಾನ ಮಾಡ್ದದಕವರ | ಧೇನಿಸುತ ಪದವನಜಗಾನ ಮಾಡುವೆ ವಂಶದ ಅಕ್ಷೀಣ ವಾರ್ತೆಗಳ ಕೇಳ ಬಯಸುವರಾಲಿಸಿ ಅ.ಪ. ವಿಸ್ತರದ ಕೀರ್ತಿಯುತ | ಚಿತ್ತೂರು ಕೃಷ್ಣಾಖ್ಯರಿತ್ತ ಮಹಿ ಶೂರೊಳಗೆ | ನೆಲೆಸುತ್ತ ತಮ ಧರ್ಮಪತ್ನಿಯಲಿ ಚತುರ ಕುವ | ರರ ಪಡೆದು ಚತುರರಂಗೆಅಯ್ಯುತಿರೆ ವಿಧಿವಶದಲಿ |ಪೆತ್ತ ಪಿತ ಪರಪುರಕಡರೆ ಮಾತೆ ಕಡೆ ಕುವರಗೆತ್ತಣದು ವಿದ್ಯೆ ಎಂ | ದೆನ್ನಿಸದೆ ಸಲಹುತ್ತಉತ್ತಮರು ಬಕ್ಷಿತಿರು | ಮಲರ ವಂಶೋದ್ಭೂತ ಸುಬ್ಬರಾಯರ ಕುವರಿಯ 1 ಕಾಲ ಕಳೆಯುತಿರಲು 2 ಪತಿ ವಿಯೋಗವು ಆಯ್ತುಮಾರಿ ಕೋಪದ್ರವದಿ | ಮಾರಿ ಕಣಿವೆಲಿ ಪ್ರಥಮ ಅಪಮೃತ್ಯು ಸಂಭವಿಸಲು |ತಾರುಣ್ಯ ಉರುತರ | ವ್ಯಸನದಿಂ ನೂಕುತ್ತಪೋರನಭಿವೃದ್ಧಿಗಿ | ನ್ನೇನುಗತಿ ಎಂದೆನುತನಾರಾಯಣ ಸ್ಮರಣೆ | ಪರಿಪರಿಯಗೈಯ್ಸುತ್ತ ನಿಟ್ಟುಸಿರ ಬಿಡುತ್ತಿದ್ದಳು 3 ನಾಲ್ಕಾರು ವರುಷಗಳು | ದಾಯಾದ್ಯರೊಳು ದುಡಿದುನಾಲ್ಕೆಂಟು ಕಡುಕ್ರೂರ | ವಾಕ್ಕುಗಳ ಸಹಿಸುತ್ತಪ್ರಾಕ್ಕು ಕರ್ಮದ ಫಲವ | ಮುಕ್ಕಲೇಬೇಕೆಂಬ ವಾಕ್ಕುಗಳ ಮನ್ನಿಸುತಲಿ ||ನೂಕುತಿರೆ ಕೆಲಕಾಲ | ತೋಕಗಾಯ್ತುಪನಯನಕಾಕು ಮಾತುಗಳಾಡಿ | ನೂಕಲೂ ಗೃಹದಿಂದಆ ಕುಮಾರ ಧೃವನ | ನೂಕಿದಾಪರಿಯಾಯ್ತು ಎಂದೆನುತ ಹೊರ ಹೊರಡಲು 4 ಭವ ತರಣ | ಧವಣೆಯಲಿ ಕುವರಂಗೆ ವೈವಾಹ ತಾವಿರಚಿಸಿ 5 ಭಾಗವತ ವತ್ಸರ ವಸಿತ ದ್ವಿತಿಯ ತೃತಿಯ ತಿಥಿ ಹರಿ ಸ್ಮøತಿಲಿತನು ವಪ್ಪಿಸಿದಳು 6 ಭಾರತೀಶ ಪ್ರಿಯಗಭಿನ್ನಾತ್ಮನಮೊ ಗುರು ಗೋವಿಂದ ವಿಠ್ಠಲನ ದಾಸ ದಾಸಿಯರಿಗೇ ನಮೊ ಎಂಬೆನು 7
--------------
ಗುರುಗೋವಿಂದವಿಠಲರು
ತಾರಕ - ಹರಿ - ಪೊರೆಯೋ | ಹೇ ನರಹರಿತಾರಕ - ಹರಿ - ಪೊರೆಯೋ ||ಅ|| ಸಾರಾಸಾರವ ಕಾಣೆನೊ ನರಸಿಂಗಸಾರಿದೆ ತವ ಪದ ಸರಸಿಜ ರಂಗ ಅ.ಪ. ಭಾರ ಕರ್ತೃವೆ ಹರಿ ಭರಿಸುವೆ ಸಕಲರ | ಭರ್ತೃವೆಂದೆನಿಸೀಹರಣ ಬಾಂಧವರನ | ಪೊರೆವೆನೆಂಬ ಹಮ್ಮತಿಯಹರಿಸಿ ಎನ್ನಯ ದುಷ್ಟ | ಕಾರಕ ಭ್ರಮ ಬಿಡಿಸೊ 1 ಇತ್ತು ಇಂದ್ರಿಯಗಳ | ತತ್ವರ ಜೋಡಿಸಿಹೊತ್ತು ಹೊತ್ತಿಗೆ ತುತ್ತು | ಇತ್ತು ರಕ್ಷಿಸುತಿರೇ |ಮತ್ತೆ ಮದಿಂದ್ರಿಯವೇ | ಕರ್ತೃ ಎಂತೆಂದೊಂಬಮತಿ ಭ್ರಮ ಬಿಡಿಸುತ್ತ | ಹರಿಸೊ ಕ್ರಿಯಾ ಭ್ರಮ 2 ಕಾಯ ಬಂಧುಗಳೆಲ್ಲ | ಪ್ರೀಯರೆನಿಸಿಗೊಂಬದ್ರವ್ಯ ವಿಭ್ರಮ ಬಿಡಿಸೋ | ಕಾಯಜ ಪಿತನೇದಿವ್ಯ ಮೂರುತಿ ಗುರು | ಗೋವಿಂದ ವಿಠಲನೇಭವ್ಯ ರೂಪವ ತೋರಿ | ದರ್ವಿ ಜೀವನ ಕಾಯೊ 3
--------------
ಗುರುಗೋವಿಂದವಿಠಲರು
ತಾರಕ ನೀನೇ ಹರಿ ಮುರಾರಿ ಪ ಉದಕದಿ ನಕ್ರನು ಪದವೆಳೆಯಲು ನೊಂದು ಮದಗಜ ಹರಿಯನ್ನೆ ಮುದದಿ ಪೊರೆದ ಕಾರಣ 1 ತುಂಬಿದ ಸಭೆಯಲಿ ಮಾನ ಕೊಂಬುದ ಕೇಳಿ ನಂಬಿದ ದ್ರೌಪದಿಗಂಬರವಿತ್ತ ಕಾರಣ 2 ಶ್ರೀದವಿಠ್ಠಲ ನಿನ್ನ ಪಾದಪೂಜಿಸಲರಿಯೆ ಆದರದಿ ಅಜಾಮಿಳನನ ಕಾಯ್ದ ಕಾರಣ 3
--------------
ಶ್ರೀದವಿಠಲರು
ತಾರಕುಪದೇಶವೆಂಬ ಸಾರಣಿಯ ಕೊಟ್ಟು ಪೂರ್ವ ಕರ್ಮಗಳೆಂಬ ಕಿಲ್ಮಿಷಗಳ ತೊಳೆದು ಧ್ರುವ ನಿಜ ಬೋಧವೆಂಬ ಚೂರ್ಣ ಕೊಟ್ಟು ಭವಬೀಜವೆಂಬ ವ್ಯಾದಿಯ ಮೂಲನೆ ಸುಟ್ಟು ಙÁ್ಞನಾಮೃತವೆಂಬ ಕಷಾಯದಲಿ ಉತ್ಪತ್ತಿ ಸ್ಥಿತಿ ಲಯವೆಂಬ ತ್ರಿದೋಷವನು ಪರಿಹರಿಸಿದ ನಮ್ಮ ಗುರು ಭವರೋಗವೈದ್ಯ 1 ಕಾಯವೆ ಕೋವಿಯನೆ ಮಾಡಿ ಭಾವನೆಯ ಮದ್ದನೆ ತುಂಬಿ ಸೋಹ್ಯ ಸೊನ್ನೆಯ ರಂಜನಸಿಕ್ಕಿ ಲಯಲಕ್ಷವೆಂಬ ಗುಂಡಿನಲಿ ಭವಪಾಶವೆಂಬ ಗುರಿಯ ಕೆಡಹಿದ ನಮ್ಮ ಗುರುನಾಥ ಮಹಿಪತಿಯ 2
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ ಕಾಲ ಬಿಡಿಸುವುದೆನ್ನ ನೋವ ಪ. ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ- ನರುಹಲೇನಿಹುದಿನ್ನು ಜೀಯ ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ ವಿರಿವುತಿದೆ ಬಲ್ಲಿ ಮಹರಾಯ ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ ಸ್ಥಿರವಾಗಲೀ ನಿನ್ನ ಪಾಯ ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು ಧರಿಸಿ ವೋಡಿಸು ಶತ್ರುಮಾಯ 1 ಕಾಶೀಶ ಕಳುಹಿಸಿದ ಪೈಶಾಚ ದಕ್ಷಿಣಾಗ್ನಿಯನು ದೋಷವೆಣಿಸದ ಅಂಬರೀಷನಲಿ ಮುನಿದ ದು- ರ್ವಾಸ ಮುನಿಕೃತ ಕೃತ್ರಿಮವನು ನಾಶಗೈದಖಿಳಗುಣ ಭೂಷಣನೆ ನಿನಗೆನ್ನ ಪೋಷಣೆಯು ಬಹು ಭಾರವೇನು 2 ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು ಶರ್ವ ಸುರನಾಥ ಮುಖವಂದ್ಯ ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ- ಗಿರ್ವೆ ಗತಿಯಾಗಿ ಸುರವಂದ್ಯ ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು ಗರ್ವಿ ವೈರಿಗಳ ಸದೆ ಬಡಿದು ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ ಪರ್ವತೇಶನೆ ಬೇಗ ಒಲಿದು 3
--------------
ತುಪಾಕಿ ವೆಂಕಟರಮಣಾಚಾರ್ಯ
ತಿರುಪತಿ ಯಾತ್ರೆಯ ಮಾಡಿ ತಿರುಪತಿ ಪ ತಿರುಪತಿಯಾತ್ರೆಯ ಮಾಡಿ ಮನದ ದುರಿತಪಾಪಗಳನೀಡಾಡಿ ಆಹ ಸ್ಮರಕೋಟಿ ತೇಜನ ದರುಶನಲಾಭವು ದೊರಕಿದ ಸುಜನರ ಚರಿತೆಯ ಕೇಳುತ್ತ ಅ.ಪ ಸುಟ್ಟು ಹೋಗುವದಿದು ಚಂದ ಮೆಟ್ಟು ಮೆಟ್ಟಿಲನೇರುವ ವೃಂದ ಜನ ಸೃಷ್ಟಿಗೊಡೆಯ ಗೋವಿಂದ ಆಹಾ ದಿಟ್ಟಮನದಿ ಪರಮೇಷ್ಠಿಪಿತನ ಪಾಡಿ ಗಟ್ಯಾಗಿ ಗೋವಿಂದ ಗೋವಿಂದನೆನುವರು1 ಗಾಳಿಗೋಪುರವನ್ನೆ ದಾಟಿ ಭಕ್ತ- ರಾ ಮಂಟಪಕೆ ಉಂಟೆ ಸಾಟಿ ತಾಳ ಮೇಳದವರ ಗಲಾಟೀಯಿಂದ ಶೋಭಿಪ ಪವನನಕೋಟಿ ಕೇಳಿ ನೋಡುತ್ತ ಭಕುತಿಸೂರ್ಯಾಡುತ್ತ ಮಹಿಮೆ ಕೊಂ- ಡಾಡುತ್ತ ಪಾಡುತ್ತ ಕುಣಿವ ಸಜ್ಜನರೆಲ್ಲ 2 ಸ್ವಾಮಿ ಪುಷ್ಕರಣಿಯ ಸ್ನಾನ ಮಾಡಿ ಆ ಮಹವರಹದೇವರನ್ನ ಕಾಮ- ಧೇನೆಂಬ ಶ್ರೀ ಗುರುಗಳನ್ನ ನೋಡಿ ಆ ಮಹಾ ಅಶ್ವತ್ಥರಾಜನ್ನ ಸ್ತುತಿಸಿ ನೇಮದಿ ದಿಗ್ಗಾವಿ ಆಚಾರ್ಯರಿಗೆ ನಮಿಸಿ ಶ್ರೀಧರನಾಲಯ ದ್ವಾರಕ್ಕೆ ಪೋಗಲು 3 ಮೂರು ದ್ವಾರಗಳನ್ನೆ ದಾಟಿ ಮು- ರಾರಿಯ ಗುಡಿಸುತ್ತ ಕೋಟೆಯಲ್ಲಿ ಸಾರುವ ಭಕುತರ ಭೇಟಿಯಿಂದ ಅ- ಪಾರ ಜನುಮದ ಪಾಪಮೂಟೆ ಪೋಗಿ ಬೇಗದಿ ವಿಮಾನ ಶ್ರೀನಿವಾಸನ ನೋಡಿ ಸಾಗರಶಯನನ ದರುಶನ ಕೊಡುಕೊಡು ಎಂದು 4 ಕೊಪ್ಪರಿಗೆಯು ಮನೆಯಂತೆ ಹಣ ತಪ್ಪದೆ ಸುರಿಯುವರಂತೆ ನ- ಮ್ಮಪ್ಪ ವೆಂಕಟಸ್ವಾಮಿಯಂತೆ ತಪ್ಪನಾಡುವರ ಶಿಕ್ಷಿಪನಂತೆ ಆಹಾ ಕ್ಷಿಪ್ರದಿ ಶ್ರೀಧರನಪ್ಪಣೆಯಂದದಿ ಅಪ್ರಮೇಯನ ಸೇವೆಗೊಪ್ಪುವ ಸುಜನರು 5 ಹೇಮದ್ವಾರದಿ ನಿಂತ ಜನರು ನಮ್ಮ ಸ್ವಾಮಿ ಶೃಂಗಾರ ನೋಡುವರು ಶ್ರೀನಿ- ವಾಸನೆ ಸಲಹು ಎಂಬುವರು ಪಾಹಿ ಪಾಹಿ ಶ್ರೀಪತಿ ಎನ್ನುತಿಹರು ಶ್ರೀಶ ಗೋವಿಂದ ಗೋವಿಂದ ಗೋವಿಂದ ಮಾಧವ ಮಾತುಳಾಂತಕ ದೇವ ಮಾತು ಲಾಲಿಸು ಎಂದು6 ಚರಣದಂದಿಗೆ ಗೆಜ್ಜೆವಲಿಯೆ ಪೊನ್ನ ಸರಪಳಿ ಪಾಡಗ ನಲಿಯೆ ಒಳ್ಳೆ ಜರದ ಪೀತಾಂಬರ ಹೊಳೆಯೆ ಪಟ್ಟೆ ವರವಲ್ಲಿ ಹೊಳೆಯುತ್ತ ಮೆರೆಯೆ ಆಹ ಸರಗಳು ವಲಿಯುತ್ತ ಪದಕಂಗಳ್ಹೊಳೆಯುತ್ತ ಉರದಲ್ಲಿ ಶ್ರೀದೇವಿ ಇರುವ ವೈಭವ ನೋಡಿ7 ವರಶಂಖು ಚಕ್ರ ಹಸ್ತದಲಿ ದಿವ್ಯ ಸಿರದಿ ಕಿರೀಟ ಮೆರೆಯುತಲಿ ಪಟ್ಟೆ ತಿಲುಕ ಕಸ್ತೂರಿ ಹೊಳೆಯುತಲಿ ಥಳ ಥಳ ಹೊಳೆವ ಮುಖಕಾಂತಿಯಲಿ ಅಹ ಕಡೆಗಣ್ಣ ನೋಟದಿ ಜಗವಮೋಹನ ಮಾಳ್ಪ ಅಗಣಿತ ಮಹಿಮನ ಸುಗುಣವ ಪಾಡುತ್ತ 8 ಕರುಣಿಗಳರಸನೆ ದೇವ ತನ್ನ ಶರಣು ಹೊಕ್ಕವರನ್ನೆ ಕಾವ ತನ್ನ ಭಜಕರಿಗಭಯವ ನೀವ ಇನ್ನು ಸರಿಯುಂಟೆ ಶ್ರೀರಮಾದೇವ ಅಹ ಪರಿಸರನೊಡೆಯನ ನಿರುತದಿ ಧ್ಯಾನಿಸಿ ದುರಿತಗಳಳಿದು ಸದ್ಗತಿಯ ಪಡೆವರೆಲ್ಲ 9 ಕಾಲಹರಣ ಮಾಡದಂತೆ ತ್ರಿ- ಧಾಮನ ಸ್ಮರಿಸುವ ಚಿಂತೆಯಲ್ಲಿ ಆಲಸ್ಯ ತೊರೆದಿಹರಂತೆ ಶ್ರೀನಿ- ವಾಸನೆ ಇದಕ್ಹೊಣೆಯಂತೆ ಅಹ ಕಾಲಕಾಲಕೆ ತಕ್ಕ ಲೀಲೆಯ ತೋರುವ ಪಾದ ಧ್ಯಾನಿಪ ಸುಜನರು 10 ಹತ್ತವತಾರದ ಹರಿಯು ತನ್ನ ಭಕ್ತರು ಸ್ತುತಿಸುವ ಧ್ವನಿಯ ಕೇಳಿ ಚಿತ್ತದಿ ನಲಿಯುವ ಪರಿಯು ಸುರರು ವಿಸ್ತರಿಸುವ ದಿನಚರಿಯು ಅಹ ಭಕ್ತರ ಸ್ತುತಿಸಲು ಮತ್ತವರಿಗೊಲಿಯುವ 11
--------------
ನಿಡಗುರುಕಿ ಜೀವೂಬಾಯಿ
ತಿರುಪತಿ ವೆಂಕಟರಮಣ ನೀನು ಧರಣಿಯೊಳ್ಸರ್ವರಿಗಧಿಕ ತಿರುಪತಿ ವೇಂಕÀಟರಮಣ ಪ ಸ್ವಾಮಿ ಪುಷ್ಕರಿಣಿಯ ತಟದಿ ವಾಸ ಮಾಡಿಕೊಂಡಿರುವೆಯೊ ನೀನು | ಭೂಮಿಯೊಳಗೆಲ್ಲ ಸಾಧು ಸಜ್ಜನರು ನೇಮದಿಂದಲಿ ನಿನ್ನ ಸೇವಿಪರು 1 ಮಂಜುಗುಣಿಯ ಪುರದೊಳಗೆ ಬಂದು ಕಂಜಾಕ್ಷ ವರ ಚಕ್ರ ಶಂಖ ಮತ್ತೆ ಶರಚಾಪಗಳನ್ನೆತ್ತಿ ಮೆರೆದೀ 2 ಜಗಕೆಲ್ಲ ಶೇಷಾದ್ರಿಯಂಥ ಕ್ಷೇತ್ರವಿಲ್ಲೆಂದು ತೋರಿಸುತಿರುವಿ | ಖಗವರನನ್ನೇರಿ ತಿರುಗಿ ಬಂದು ತಿರುಪತಿ ಕ್ಷೇತ್ರದೊಳಿರುವಿ 3 ಪಾದ ಮುಟ್ಟದೆ ಜಾನುಗಳಿಂದ | ಬಂದು ಸಾಲಿಗ್ರಾಮದ ಮಾಲೆಯನ್ನು ಪಾದಕರ್ಪಿಸಿ ಸ್ತುತಿಸಿದರು ನಿನ್ನ 4 ಬಂದು ರಾಜೇಶ ಹಯಮುಖ ನಿನಗೆ | ಮಾಲೆ ಹಾಕುತ ಮುಂದೆ ನಿಂದಳು ಶಂಕೆಯಿಲ್ಲದೆ ನಮಿಸಿದಳು ಮುದದಿ 5
--------------
ವಿಶ್ವೇಂದ್ರತೀರ್ಥ
ತಿರುಪತಿಯ ಶ್ರೀ ವೆಂಕಟೇಶ ಕಮಲ ಪ ಹೇಮಮುಖದೀ ನದಿಯ ಕಂಡೇ ಗೋಮಿನೀ ಪದ್ಮಾವತಿ ಕಂಡೆಭೂಮಿಸುರರ ಮೇಳವ ಕಂಡೆ ಆ ಮಹಾ ಗಾಳಿಗೋಪುರ ಕಂಡೆ 1 ಸ್ವಾಮಿ ಪುಷ್ಕರಿಣೀಯ ಕಂಡೆ ಭೂಮಿ ವರಹಾ ದೇವರ ಕಂಡೆರಾಮದೂತನ ಪಾದವ ಕಂಡೆ ಸ್ವಾಮಿಯ ಮಹಾದ್ವಾರವ ಕಂಡೆ 2 ಹರಿಯು ಅಡಗಿದ ಹುತ್ತನು ಕಂಡೆ ಹರಿಯಧ್ವಜದ ಸ್ತಂಭವ ಕಂಡೆಪರಿಪರಿ ವೈಭವವನು ಕಂಡೆ ಪರಮಪುರುಷನಾ ಮೂರ್ತಿಯ ಕಂಡೆ 3 ಹರಿಹರಿ ಎನ್ನುವರನು ಕಂಡೆ ಹರಿದು ಒಳ ಪೋಗುವರನು ಕಂಡೆಹರಿಣಾಂಜನದ ತಾಡನ ಕಂಡೆ ಮಣಿಮಯಿಮುಕುಟವನು ಕಂಡೆ 4 ಹಣೆಯಲ್ಲಿಯ ನಾಮವ ಕಂಡೆ ಅನುಪಮಾದಂಗವನೂ ಕಂಡೆಕೊರಳ ಸರಗೀ ಸರಗಳ ಕಂಡೆ ಹರಳು ರತ್ನದಾಭರಣಗಳನು ಕಂಡೆ 5 ಉರದಿ ಶ್ರೀ ಭೂದೇವಿಯರ ಕಂಡೆ ಕರದಿ ಶುಭಶಂಖ ಚಕ್ರಗಳ ಕಂಡೆಗುರು ಶ್ರೀವಾದಿರಾಜರ್ಪಿಸಿದ ವರ ಶಾಲಿಗ್ರಾಮ ಹಾರವ ಕಂಡೆ 6 ಉದಗಿ ಪೀತಾಂಬರವ ಕಂಡೆ ನಡುವಿನೊಡ್ಯಾಣವನು ಕಂಡೆಜಡಿದ ಮಣಿಗಣ ಭೂಷಣನ ಕಂಡೆ ಜಡಜನಾಭನ ಮೂರ್ತಿಯ ಕಂಡೆ 7 ಅಂದದೀ ಕಾಲ್ಗಡಗವ ಕಂಡೆ ಸುಂದರ ಪಾದಗಳ ಕಂಡೆಮಂದಹಾಸ ಮುಖಾಬ್ಜ ಕಂಡೆ ಇಂದಿರೆಯ ರಮಣನ ಕಂಡೆ 8 ಆಗಮ ಶೃತಿ ಘೋಷವ ಕಂಡೆ ಭಾಗವತರಾ ಮೇಳವ ಕಂಡೆಬಾಗಿಲಾ ಬಲ ಹಸ್ತವ ಕಂಡೆ ಭಾಗೀರಥಿಯಾ ಪಿತನವ ಕಂಡೆ 9 ಚಿನ್ನದ ಕೂಪವನೂ ಕಂಡೆ ಅನ್ನಪೂರ್ಣಾದೇವಿಯ ಕಂಡೆರನ್ನದ ಹರಿವಾಣವ ಕಂಡೆ ಉಂಬುವ ವೈಭವವನು ಕಂಡೆ 10 ಕಪ್ಪದ ಕಣಜವನೂ ಕಂಡೆ ತಪ್ಪದೇಹಾರುವವರನು ಕಂಡೆಇಪ್ಪತ್ತು ದುಡ್ಡಿಗೆ ತೀರ್ಥ ಒಪ್ಪಿಲೇಮಾರುದನುರನು ಕಂಡೆ 11 ಸಾಸಿರ ನಾಮಗಳ ಒಡೆಯಾ ವಾಸುದೇವಾಚ್ಯುತನ ಕಂಡೆಕಾಸಿಗೆ ಕೈಚಾಚುವಂಥ ಕೇಸಕ್ಕ ತಿಮ್ಮಪ್ಪನ ಕಂಡೆ 12 ಆವ ಜನುಮದ ಸುಕೃತವೋ ಎನಗೆ ಭೂವೈಕುಂಠವನ್ನೇ ಕಂಡೆಶ್ರೀವಿಧಿಭವಾದಿ ವಂದ್ಯ ಐಹೊಳಿ ವೆಂಕಟೇಶನ ಕಂಡೆ 13 ಶುಭ ಮಂಗಲಂ ಸಿರಿಗೆಜಯ ಪುದವೀ ಪದ ಕೇಳಿ ಪೇಳಿದರೆ ಒಲಿದು ಫಲವೀವ ಕುಲಸ್ವಾಮಿ ಅವರೀಗೆ 14
--------------
ಐಹೊಳೆ ವೆಂಕಟೇಶ
ತಿಳಿ ಆದೆ ದೇವನು ಇರುತಿಹೆ ನೀ ಪ ಅದು ಕೊನೆಯಾಚೆಗೆ ಬೇರಿಲ್ಲ ಅದು ಮನಸಿಗೆ ನಿಲುಕುವದಲ್ಲ ಅದನನು ಭವದಲಿ ತಿಳಿಯಲ್ಲ ಬಿಡು ಮನಸಿನ ಗೊಡವೆಯನೆಲ್ಲ ಇದೆ ಜ್ಞಾನಾಗ್ನಿಯು ಸುಡುತಿಹುದೋ ಒದಗಿದ ಕರ್ಮದ ಕಾಷ್ಮಗಳ 1 ಮನವಡಗಿದ ಪದ ಪರಿಚಯವ ತನಿನಿದ್ರೆಯ ಮೀರಿದ ಸ್ಥಿತಿಯ ಅನುಭವದಲಿ ತರುವುದೆ ಯೋಗ ಅದನೇ ಯತ್ನದಿ ಸಾಧಿಸು ತಾ ನನಸಿನಲೇ ಗುರು ಮುಖದಿಂದ ಕೇಳಿ ನಿವೇಕದಿ ತಿಳಿ ಬೇಗಾ 2 ಎಚ್ಚರವಿದು ತಿಳಿ ಕನಸೆಂದು ಅಚ್ಚಳಿಯದ ಸ್ಥಿತಿ ನಾನೆಂದು ನಿಚ್ಚಳದಲಿ ನಿಶ್ಚಯಿಸುವದು ತುಚ್ಛದ ತೋರಿಕೆ ಎಂದು ತಿಳಿ ಸಚ್ಚಿತ್‍ಶಂಕರ ಬೋಧವನಾ 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳಿದು ನೋಡಿ ತನುವಿನೊಳು ತಮ್ಮ ನಿಜಖೂನ ಸುಳುಹು ದೋರಿಕುಡುವ ನೋಡಿ ನಿಜಾನಂದ ಘನ ಧ್ರುವ ತಮ್ಮ ಶುದ್ಧಿ ತಮಗಿಲ್ಲವೊ ಹೆಮ್ಮೆ ಬಹಳ ಘಮ್ಮ ಆದರೆ ಎಲ್ಲ ನೋಡಿ ಹೊಕ್ಕು ಮೃಗಜಲ ನಮ್ಮ ನಿಮ್ಮದೆಂದು ಹೊಡೆದಾಡಿ ಬಿತ್ತು ಬೀಳ ಸಮ್ಯಗ್ ಜ್ಞಾನದಿಂದ ತಿಳಿದವನೆ ವಿರಳ 1 ತನ್ನ ತಾ ತಿಳಿದವಗೇನು ಭಿನ್ನಭೇದವಿಲ್ಲ ಉನ್ಮನವಾಗಿ ಪೂರ್ಣ ತಿಳಿದವನೆ ಬಲ್ಲ ಧನ್ಯವಾದ ಮಹಿಮರಿನ್ನು ಮನಿಮನಿಗೆ ಇಲ್ಲ ಕಣ್ಣಾರೆ ಕಾಣುತಿಹ್ಯ ಗುಪ್ತಗುಹ್ಯವೆಲ್ಲ 2 ತಿಳುಹದೋರಿಕೊಟ್ಟ ಗುರು ಎನ್ನೊಳÀಗೆ ಪೂರ್ಣ ಹೊಳೆಹುತಿಹ್ಯಾನಂದ ಘನಸದ್ಗುರು ಪೂರ್ಣ ಥಳಥಳಿಸುತಿಹದು ಸದ್ಗತಿ ಸಾಧನ ಕಳೆದ ಮಹಿಪತಿ ನೋಡಿ ಜನನ ಮರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯ ಬರದೆಲೆ ಮನವೆ, ತೀರ್ಥ ಯಾತ್ರೆಯ ಫಲವು ಪ ಸುಲಭದಲಿ ಸದ್ಗತಿಯ ಸೂರೆಗೊಂಬುವರಿಗಲ್ಲದೆ ಅ ನೂರೆಂಟು ತಿರುಪತಿಯ ಯಾತ್ರೆಯನು ನಾನೊಲ್ಲೆವಾರದೊಂದ್ಹೊತ್ತು ಉಪವಾಸವನು ನಾನೊಲ್ಲೆಸಾರ ರೇಣುವೆಯುಂಡು ಕಡೆಯ ಬಾಗಿಲ ಕಾಯ್ವನೀರ ಗೌಡಿಯ ಮಗನ ಮಗನ ಮಗನೆನಿಸೆನ್ನ1 ಪಂಚಾನ್ನ ಪರಮಾನ್ನವಾವುದನು ನಾನೊಲ್ಲೆಚಂಚಲಗೊಳಿಸುವ ಭೋಗ ಭಾಗ್ಯವ ನಾನೊಲ್ಲೆಹಿಂಚದೆ ದಾಸೋಹ ಮಾಳ್ಪವರ ಮನೆಯ ಕಾಯ್ವಉಂಚ ಗೌಡಿಯ ಮಗನ ಮಗನ ಮಗನೆನಿಸೆನ್ನ2 ಪಟ್ಟಾವಳಿ ದುಕೂಲವನು ನಾನೊಲ್ಲೆಪಟ್ಟೆ ನಾಮದ ಬರಿಯ ಪ್ರದರ್ಶನ ನಾನೊಲ್ಲೆಸೃಷ್ಟಿಯೊಳು ನಿನ್ನ ಭಜಿಪ ಭಕ್ತರ ಮನೆ ಕಾಯ್ವಮುಟ್ಟುಗೌಡಿಯ ಮಗನ ಮಗನ ಮಗನೆನಿಸೆನ್ನ 3 ಮುತ್ತಿನಾಭರಣ ತಾಳಿ ಪದಕವ ನಾನೊಲ್ಲೆಸತ್ತಿಗೆಯ ನೆರಳಿನಲಿ ಸಾಗುವುದ ನಾನೊಲ್ಲೆನಿತ್ಯ ನಿನ್ನ ನೆನೆವರ ಮನೆಯ ಬಾಗಿಲ ಕಾಯ್ವತೊತ್ತುಗೌಡಿಯ ಮಗನ ಮಗನ ಮಗನೆನಿಸೆನ್ನ 4 ಆಶೆ ಪಾಶಗಳೆಂಬ ಜಂಜಾಟ ನಾನೊಲ್ಲೆದೇಶಾನುದೇಶಗಳ ತಿರುಗಾಟ ನಾನೊಲ್ಲೆಶ್ರೀಶಾದಿಕೇಶವನ ಭಜಿಪರ ಮನೆಯ ಕಾಯ್ವಕಸಗೌಡಿಯ ಮಗನ ಮಗನ ಮಗನೆನಿಸೆನ್ನ 5
--------------
ಕನಕದಾಸ
ತಿಳಿಯದಾಯಿತು ವಯಸು ಕಳೆದು ಹೋಯಿತು ಪ ಕಳವಳಿಸುತ ಕಡೆಗಾಣದೆ ಬಳಲಿ ತೊಳಲಿ ಪಾಪ ಹೆಚ್ಚಿ ಅ.ಪ ಸತಿಸುತರೆಂಬ ಬಲೆಗೆ ಸಿಲುಕಿ ಅತಿಶಯ ಮೋಹದಲಿ ಮುಳುಗಿ ಪಥಿಕರಾಡುವಂತೆ ನಡೆದು ಪತಿತನಾಗಿ ನಿಜದ ಮರ್ಮಾ 1 ಕೆಲದಿನ ಆಟದಿ ಲಲನೆಯರ ಕೂಟದಿ ಹಲವು ವಿದ್ಯೆಯ ಕಲಿತು ಪರರ ಒಲಿಸಿ ಸ್ತ್ರೋತ್ರಮಾಡಿ ಬೇಡಿ ಫಲವ ಕಾಣಲಿಲ್ಲ ಕೊನೆಗೆ ಹಲುಬಿ ಹಲುಬಿ ಬಾಯಿನೊಂದು 2 ನೀತಿ ಹೇಳುತಾ ಪರರ ನಿಂದೆಗೆಯ್ಯುತಾ ಗುರುಮುಖದಲಿ ಪರಮತತ್ವ 3 ಮತ್ತನಾಗುತ ದುರಾಸಕ್ತನೆನಿಸುತ ನಿತ್ಯಕರ್ಮವನ್ನು ತೊರೆದು ಸತ್ಯಶಮದಮಗಳ ಮರೆದು ಚಿತ್ತದಲಿ ನಿರ್ಮಲನಾಗದೆ ಚಿಂತಿಸುತಲಿ ನಿಜದ ನೆಲೆಯ 4 ಗುರುರಾಮವಿಠಲನ ಶ್ರೀಚರಣಕಮಲ ಸ್ಮರಣೆಗೈದು ಹೊರಗು ಒಳಗು ಒಂದೆ ವಿಧದಿ ಚರಿಸಿ ಸೌಖ್ಯಪಡೆವ ಬಗೆಯ 5
--------------
ಗುರುರಾಮವಿಠಲ