ಒಟ್ಟು 313 ಕಡೆಗಳಲ್ಲಿ , 64 ದಾಸರು , 270 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿಳಿಯದು ಆರಿಗೆ ನಳಿನಾಕ್ಷನ ಘನ ವಿಲಸಿತಮಹಿಮೆ ಸುಲಭವಲ್ಲಮಮ ಪ ಒಳಗು ತಾನೆ ಹೊರಗು ತಾನೆ ಒಳಗ್ಹೊರಗೊಂದಾಗಿ ಬೆಳಗುವ ತಾನೆ ಬಳಗ ತಾನೆ ಬಂಧು ತಾನೆ ಹಲವು ಜೀವರ ಸಲೆರೂಪನು ತಾನೆ 1 ಹಸಿವು ತಾನೆ ತೃಷೆಯು ತಾನೆ ಹಸಿತೃಷೆ ತೀರಿಪ ಸೂತ್ರನು ತಾನೆ ಎಸೆವ ತತ್ವಮಸಿ ಮಹವಾಕ್ಯವ ಕುಶಲದಿ ನುಡಿಸುವ ಈಶನು ತಾನೆ 2 ರಕ್ಷಕ ತಾನೆ ಶಿಕ್ಷಕ ತಾನೆ ಸಾಕ್ಷಿಯಾಗಿ ನ್ಯಾಯ ವೀಕ್ಷಿಪ ತಾನೆ ಸೂಕ್ಷ್ಮಜ್ಞಾನವಿತ್ತಕ್ಷಯದ್ಹೊರೆಯುವ ಮೋಕ್ಷಕರ್ತ ಶ್ರೀರಾಮ ತಾನೆ 3
--------------
ರಾಮದಾಸರು
ತಿಳಿಯೊ ಮನವೆ ಯುಕ್ತಿಯ ಕಳಿಯೋ ನೀ ವಿಷಯಾಸಕ್ತಿಯ ಬಲಿಯೊ ಭಕ್ತಿಯ ಧ್ರುವ ಪಥ ಹೊಂದು ಈಗ ಹಣ್ಣು ಶರೀರಾಗದಾಗ ನಿನ್ನೊಳು ತಿಳಿ ಬ್ಯಾಗ 1 ಬಲವು ದೇಹಲಿದ್ದಾಗ ಬಲಿಯೊ ಭಾವ ಭಕ್ತಿಲೀಗ ನೆಲೆ ನಿಭಗೊಂಬುವ್ಹಾಂಗೆ ಸಲೆ ಮರೆಹೊಗು ಹೀಂಗ 2 ಬಂದ ಕೈಯಲಿ ಬ್ಯಾಗ ಹೊಂದು ಸದ್ಗುರು ಪಾದೀಗ ಎಂದೆಂದಗಲದ್ಹಾಂಗ ಸಂಧಿಸು ಘನ ಹೀಂಗ 3 ಸೋಹ್ಯದೋರುವ ಕೈಯ ಧ್ಯಾಯಿಸೊ ನೀ ಶ್ರೀಹರಿಯ ನ್ಯಾಯ ನಿನಗೆ ನಿಶ್ಚಯ ಇಹಪರಾಶ್ರಯ 4 ಗುರುಪಾದ ಕಂಡಾಕ್ಷಣ ಎರಗೊ ಮಹಿಪತಿ ಪೂರ್ಣ ಹರಿಯೊ ಅಹಂಭಾವಗುಣ ಬೆರಿಯೊ ನಿರ್ಗುಣ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತುತಿಸಲೆನ್ನೊಶವೆ ನಿನ್ನ ಶ್ರೀ ಗುರುರನ್ನ ಪ ತುತಿಸಲೆನ್ನೊಶವೆ ನಿ -ನ್ನತುಳ ಮಹಿಮ ಮಹಾ ಮತಿವಂತ ಜನರು ಸು - ಮತಿಗೆ ಸಿಲ್ಕದ ನಿನ್ನ ಅ.ಪ ಸ್ಮರಿಪ ಜನರ ಸುರ ತರು ಪಾಪಕಾಂತಾರ ನರ ಸಮ ಸಜ್ಜನ | ಶರಜನಿಚಯ ದಿನ ಪಾದ | ಸರಸಿಜ ಭಜಿಸುವ ಪರಮ ಭಕ್ತರ ಕುಮುದ | ವರ ನಿಚಯಕೆ ಸುಧಾ - ಪರಮ ಕರುಣಿಯು ಎಂದು ನಿನ್ನಯ ಪಾದ ಮೊರೆಯ ಪೊಕ್ಕೇನೊ ನಾನಿಂದು ನೀನೆ ಎನ್ನ ಮೊರೆಯ ಲಾಲಿಸು ಎಂದು ಬಿನ್ನೈಸಿದೆ ಪರಮಕೃಪಾಕರ ಪೊರೆಯೊ ಅನಾಥ ಬಂಧೂ 1 ದಯಕರ ನಿಜ - ಭಕ್ತಾ | ಮಯ ಹರ ಸುಖಸಾರಾ ಶ್ರಯವಾಗಿ ಸಂತತ | ನಯದಿಂದ ನಿಜಜನ ಭಯಕರ ಭವಹರ | ಜಯ ಜಯ ಜಯದಾತ ಜಯ ವಿಜಯಾತ್ಮಜ | ಜಯಕುಲ ದಿಗ್ವಿಜಯ ಜಯ ಕಾಲದಲಿ ನಿಜ | ಹಯಗ್ರೀವಮೂರ್ತಿಯ ದಯದಿಳೆಯೊಳು ಜನಿಸೀ | ಜನ್ಮದಿ ಮೂರ್ತಿ ತ್ರಯ ಪಾದವನೆ ಭಜಿಸಿ - ಧರಿಯೊಳು ಕ್ಷ - ತ್ರಿಯ ಕುಲದೊಳು ಜನಿಸಿ ಯುಧಿ ಭೀಮ - ಶಯನನಿಂದ ಹತನಾಗ್ಯಭüಯ ಸ್ಥಾನವನೆ ಬಯಸಿ 2 ಭೂಸುರ ವರನಾಗಿ | ಕಾಶ್ಯಪಿ ಸ್ಥಳದಲ್ಲಿ ವಾಸಮಾಡಿ ಶಿರಿ ವ್ಯಾಸ ಕೃಷ್ಣ ಪಾದೋ - ಪಾಸನ ಮಾಡುತ | ವ್ಯಾಸಮುನಿ ಆಗಿ ಭಾರ | ತೀಶ ಪ್ರತೀಕವ ವಾಸವಾಸರ ಸ್ಥಾ - ಪಿಸಿ ಯಂತ್ರೋದ್ಧಾರಾ ಶ್ರೀಶ ಮಧ್ವಮುನಿಯಾ - ಸ್ಥಾಪಿಸಿ ಅಲ್ಲಿ ವಾಸವ ಮಾಡಿ ತಾನೂ - ಪುರಂದರ ದಾಸರಾಯರಿಗೆ ಇನ್ನು - ಸುಮಂತ್ರೋಪ - ಅನುದಿನ ವಾಸಮಾಡಿದಿ ನೀನು 3 ಕ್ಷೋಣಿತಳದಿ ಕುಂಭ | ಕೋಣನಗರದಲ್ಲಿ ಕ್ಷೋಣಿದೆವೋತ್ತುಮ | ವೀಣವೆಂಕಟನಾಮಾ - ಕ್ಷೀಣಬಲ ಙÁ್ಞನ ತಾಣ | ಗೊಡದೆ ನಿನ್ನ ಜಾಣತನದಿ ನರ | ಮಾಣವಕನಂತೆ ಪಾಣಿ ಭಿಕ್ಷಾನ್ನವಾ | ಟಾಣಿ ಮಾಡುತ ನೀನು ಕ್ಷೋಣಿಪ ಮನಿಗೆ ಬಾರೇ - ನಿನ್ನ ವೀ - ಶುಭ ಲ - ಕ್ಷಣ ಬ್ಯಾರೆ ಬ್ಯಾರೇ ಇರಲು ನಿನ್ನ ಕ್ಷಣ ಬಿಡದಲೆ ಜನ ಮಣಿದು ನಮಿಸುತಿರೆ 4 ಜನಪ ನಿನ್ನಯ ಮಹ | ಘನ ಚರ್ಯವನೆ ನೋಡಿ ದಿನದಿನದಲಿ ಬಹು | ವಿನಯಪೂರ್ವಕ ಪಾದ ವನಜ ಸೇವಕÀನಾಗಿ |ತನು ಮನ ಧನ ಧಾನ್ಯ ಘನ ನಿನಗರ್ಪಿಸಿ | ನಿನ ಸಂಗವಾಗಲೂ ಜನುಮ ಇಲ್ಲೆಂಬುವ | ಘನ ಙÁ್ಞನ ಭಕುತಿಯ ಮನದಲ್ಲಿ ಯೈದುತಲೆ - ತಾನು ನಿತ್ಯ ಅನುಮಾನ ಮಾಡದಲೆ - ಇರಲು ಅವನ ಘನಸುಖ ರೂಪದಲ್ಲೆ - ಇರುವಂತೆ ಮನಪೂರ್ತಿ ಕರುಣಸಿದ್ಯನುಪಮ ಚರಿತಲ್ಲೆ 5 ಸತ್ಯನಾಮಕ ಸುತ | ಮೃತ್ಯುನಿಂದಲಿ ತಾನು ಸತ್ತುಪೋದ ವಾರ್ತೆ | ಬಿತ್ತರಿಸೆ ಲೋಕದಿ ಉತ್ತುಮ ನೀನಾಗ | ಸತ್ಯ ಸಂಕಲ್ಪವ ಗೊತ್ತು ತಿಳಿದು ಅವನ | ಮತ್ತೆ ಈ ಲೋಕಕ್ಕೆ ತತ್ಕಾಲದಲಿ ತಂದು | ಉತ್ತುಮ ಭಾರ್ಯಳ ಜತ್ತು ಮಾಡಿದ ವಾರ್ತೆಯಾ - ಕೇಳೀ ಶೈವ - ರುತ್ತುಮನಾತ್ಮಜನಾ - ಇವಾನಂತೆ ಸತ್ಯವೆಂದು ಪೇಳಿ ಮತ್ತೆ ಪೊರೆದ್ಯೊ ಜೀಯಾ 6 ಇನತೆ ಮೊದಲಾದ | ಫನತರ ನಿನ ಮಹಿಮೆ ನಿತ್ಯ | ಅನಿಮಿಷ ಮುನಿಜನ ಮನಕೆ ಸಿಲ್ಕದೆ ವೃಂದಾ - |ವನದಲಿ ನೀ ನಿಂತು ವನುತೆ ಸುತ ಧನ | ಧಾನ್ಯ ಮೊದಲಾದ ಅನುದಿನ ಸಲಿಸುತ್ತ ಜನರ ಪಾಲಿಸೊಗೋಸುಗಾ - ಹರಿಯು ನಿನಗೆ ಜನುಮಾವನಿತ್ತನೀಗ - ಅದಕೆ ನಿನ್ನ ಅನುದಿನ ತವಪಾದ ವನಜ ನಂಬಿದೆ ವೇಗ 7 ರಕ್ಷಿಸೋ ನೀ ಎನ್ನ | ಲಕ್ಷ್ಮೀರಮಣ ದೂತ ಮೋಕ್ಷಾದಿ ಪುರುಷಾರ್ಥ - | ಪೇಕ್ಷ ಪ್ರದಾಯಕ ಲಕ್ಷ ಜನರೊಳೆನ್ನ | ವೀಕ್ಷಿಸಿ ಪರಜನಾ - ಪೇಕ್ಷಾ ಮಾಡದಂತೆ | ಲಕ್ಷ್ಮೀಶ ನಾತ್ಮಜ ಭಿಕ್ಷಾನ್ನ ಬೇಡೋದು | ಲಕ್ಷಣವೇನಿದು - ಪೇಕ್ಷಾ ಮಾಡದೆ ನೀ ಎನ್ನಾ - ಕಾಯಲಿಬೇಕು ವಿಕ್ಷೀಸಿ ಙÁ್ಞನವನ್ನಾ - ಭಕುತಿ ಇತ್ತು - ರಕ್ಷಿಸು ಎಂದೆ ನಿನ್ನಾ ಇದೆ ಒಂದಾ ಪÉೀಕ್ಷೆ ಪೂರ್ತಿಸೊ ಕಲ್ಪವೃಕ್ಷ ನೀ ಎನಗೆ ಇನ್ನ 8 ಕಿಟಿಜ ಸರಿದ್ವರ | ತಟ ಕೃತ ಮಂದಿರ ಚಟುಲ ಮಧ್ವಮುನಿ | ಪಟು ಶಾಸ್ತ್ರದಿಂದಲಿ ಕುಟಿಲ ದುರ್ವಾದಿಗ | ಳ್ಥಟನೆ ಮುರಿದು ನಿಜ ಘಟನೆ ಮಾಡಿ ಪ್ರತಿ | ಭಟರಿಲ್ಲದಲೆ ನೀನು ಧಿಟನಾಗಿ ತ್ರಿಜಗದಿ - ಮೆರೆಯುತ ಶಠÀಜನರನು ತ್ವರದಿ - ಮರಿದು ಙÁ್ಞನಿ ಕಟಕ ಸುಪಾಲನದಿ ಪಟೋ ಎನಿಸಿ ಧಿಟಗುರು ಜಗನ್ನಾಥ ವಿಠಲನ್ನ ಭಜಿಸಿದೆ 9
--------------
ಗುರುಜಗನ್ನಾಥದಾಸರು
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ಥರವಲ್ಲ ಸ್ವಾಮಿ ಥರವಲ್ಲ ಪ. ಥರವಲ್ಲ ಸ್ವಾಮಿ ಈ ತೆರನ ಮಾಡುವುದು ಕರುಣ ಸಾಗರನೆಂಬ ಬಿರುದಿನ್ನು ನಿಲದು ಅ.ಪ. ಊರೊಳಗಿಹ ಜನರೆಲ್ಲರು ಕೂಡಿ ವಾರಿಜಾಕ್ಷನ ದಾಸನೆಂದು ಕೊಂಡಾಡಿ ಸಾರಿಸಾರಿಗೆ ನಿನ್ನ ಕೀರ್ತನೆ ಮಾಡಿ ಪೋರ ಪೇಚಾಡುವನೆಂಬರು ಕೂಡಿ1 ಪಾರಾಯಣದ ಪುಸ್ತಕವ ಕಟ್ಟಿಟ್ಟು ವಾರಿಜನಾಭ ನಿನ್ನಯ ಪೂಜೆ ಬಿಟ್ಟು ಕಾರಿ ಕೆಮ್ಮುತ ಬಿದ್ದಿರುವ ದೊಡ್ಡ ಗುಟ್ಟು ಯಾರ ಮೇಲಿನ್ನು ತೋರಿಸಲೆನ್ನ ಸಿಟ್ಟು 2 ಮೋಹ ಪಾಶದಿ ಮುಸುಕಿ ಕಟ್ಟಿದರೆ ಬಹ ಪಾತಕಗಳಿಗೆಲ್ಲ ನಾನಿದಿರೆ ನೀ ಹದಿನಾಲ್ಕು ಲೋಕೇಶನೆಂದೊದರೆ ದೇಹವ ಬಳಲಿಸಿದರೆ ನಾನೇನ್ಹೆದರೆ 3 ನಂಬಿರೊ ಭಕ್ತ ಕುಟುಂಬಿಯನೆಂದು ಅಂಬುಜಸಂಭವನ್ಯಾಕೆಂದನಂದು ಹಂಬಲಿಸಿದರು ನೀ ದಯದೋರದಿಂದು ಬೊಂಬೆಯೆ ಸರಿಯೆಂದು ಜನರೆಂಬೊ ಕುಂದು 4 ಸರ್ವದೋಷಹರ ಸಾಗರಜೇಶ ನಿರ್ವೇದದಿಂದ ನಾ ನುಡಿದೆನಾಕ್ರೋಶ ಸರ್ವಕಾಲಕು ಸಲಹುವ ನೀನೆ ಶ್ರೀಶ ಶರ್ವಾದಿ ವಂದ್ಯ ಶೇಷಾಚಲವಾಸ 5
--------------
ತುಪಾಕಿ ವೆಂಕಟರಮಣಾಚಾರ್ಯ
ದಂತಿಗಮನೆಯರು ಹರುಷದಲಿ ನೀಲಕುಂತಳೆಯ ರತಿರೂಪ ವಂತೆಯರು ಸೊಬಗು ಶ್ರೀ ಕುಂಕುಮವ ಸಂತವಾಡಿದರೂ ಪ ಕಳಹಂಸ ಗಿಳಿವಿಂಡುಗಳ ತಂಡ ಮಧುರದಿಂ ಕೆಲವ ಕೋಗಿಲೆಯ ವಿಹಗಾಳಿಗಳ್ ಪೊಳೆವ ಚೆಂದಳಿರ ವನದೊಳು ಮಂಟಪವ ರಚಿಸಿ ಲಲನೆಯರು ಚೆಲುವಿನಲಿ ಕೊಳವ ಸಿಂಗರಿಸಿ ಜಲಜ ನೈದಿಲೆಯ ಪೂವಲಿಯದೊಲ್ಘೇಂಕರಿಪ ಬಳಸಿನಲಿ ಕೊಳಗುತಿಪ್ಪಳಿಗಳಿಂ ಶೋಭಿಸುವ ಸಲಿಲದೊಳು ಮಲಯಜ ಸುಲಲಿತ ಕುಂಕುಮವೆರಸಿ ಸಲೆ ಪ್ರಹುಡೆ ಕೆಳನಲಿದು ಸಂತಸದೀ 1 ಮಂದಗಮನೆಯರು ಪೂರ್ಣೇಂದುವದನೆಯರು ಶುಭ್ರ ಕುಂದರದನೆಯರು ಅರವಿಂದ ನೇತ್ರೆಯರು ಗೋ ವಿಂದನೈತರಲು ಪೊನ್ನಂದಣದಲಿದಿರುಗೊಳ್ಳೆ ಕುಂದಣದ ರತ್ನಗಳಲಿ | ಬಂದಿಸಲು ದಂಡೆಗಳ ಚೆಂದದಿಂ ಪಿಡಿದು ಮಕರಂದಮಂ ಪೂರಯಿಸಿ ಕಂದರ್ಪಜನಕನನು ಸಂದಣಿಸಿ ತಮತಮಗೆ ಮುಂದುವರಿದು ಲೋವಿಡಿದು ಆನಂದದಿ ಸೂಸಿದರೂ 2 ಪದುಮಗಂಧಿಯರು ಸನ್ಮøದು ಕೀರವಾಣಿಯರು ಚದುರೆಯರ್ತೊಂಡೆವಣ್ಣಧರೆಯರು ಪೇರ್ಮೈಯ ಮದದ ಮದ್ದಾನೆಯರು ಸುದತಿಯರು ಸೌಂದರ್ಯ ಪದಪು ಗಾತಿಯರು ಬಂದೊದಗಿ ಮೂದಲಿಸಿ ಮಧುಸೂದನನ ಬಿಡದಿದಕೋ ಪಿಡಿಪಿ ಮೋಹ ನದ ಬಲೆಯನು ಬೀಸೆನುತ ಯುವತಿಯರುಗಳು ಮುದದಿಂದ ಬೆಂಗೊತ್ತಿ ಪ್ರಣಯ ಕದನದಿಂ ಸೋಲಿಸುತ ಎದೆಗೆಡಿಸಿ ನವಪರಿಮಳದಿ ಮುಸುಕಿದರೂ 3 ಅಡಿಗಡಿಗೆ ಬಟ್ಟ ಪೊಂಗೊಡ ಮೊಲೆಗಳಲುಗುತ್ತ ಕಾ ರಡಿಗಳಂ ಪೋಲ್ವ ಪೇರ್ಮುಡಿ ಸಡಿಲೆ ಹಾರಗಳ ಜಡೆಯಲೊಯ್ಯನೆ ಸಣ್ಣ ನಡು ಬಳುಕೆ ಲಾವಣ್ಯ ವೆಡೆಬಿಡದೆ ಕೋಮಲೆಯರೊಡನೆ ತವದಕಲೀ ಸಡಗರದಿ ಕುಸುಮಗಳ ಎಡೆಬಿಡದೆ ಬೀರೆ ಸೊಂ ಪಡರ್ದಂಗಲತೆಗಳಿಗೆ ತೊಡದ ಮನ್ಮಥಶರವ ಪತಿ ವಿಡಿದು ಮಡದಿಯರು ಅಲರ್ದೊಡೆಯದೊಡಿಸಿದರೂ 4 ತೊರೆದು ಮುಂಬರಿಯೆ ಯೌವನದ ಪೀತಾಂ ಬರದ ನೆರಿಗಳೋಸರಿಸೆ ಮುಂಜೆರಗನೆಳೆವುತ ವಾಮ ಕರದಂಗುಳಿಗಳಿಂದ ಕುರುಳ ನೇವರಿಸುತಾ ತುರದ ತರುಣಿಯರು ಶ್ರೀಹರಿಯ ತರುಬಿದರೂ ಸರಸಿ ಜಾಂಬಕನ ಪೇರುರವ ಕುಚಗಳ ಕೊನೆಯ ಲಿರಿದು ನಿಲ್ಲಿಸಿ ನಿಲ್ಲು ಹೋಗಬೇಡೆನುತ ಯುವತಿಯರು ಧರೆಯೊಳತ್ಯಧಿಕ ಸುರಪುರದ ಲಕ್ಷ್ಮೀಪತಿಯ ಸರಸನೆ ವವಿಡಿದು ಮೇಲ್ವರಿಯೆ ವೊಲಿಸಿದರೂ 5
--------------
ಕವಿ ಲಕ್ಷ್ಮೀಶ
ದಾಸ ದಾಸರ ಮನೆಯ ದಾಸಿಯರ ಮಗ ನಾನುಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಪ ಶಂಕು ದಾಸರ ಮನೆಯ ಮಂಕುದಾಸನು ನಾನುಮಂಕುದಾಸನು ನಾನು ಮರುಳುದಾಸಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ ಬಿಂಕದಿ ಬಾಗಿಲ ಕಾಯ್ವ ಬಡ ದಾಸ ನಾನಯ್ಯ 1 ಕಾಳಿದಾಸರ ಮನೆಯ ಕೀಳುದಾಸನು ನಾನುಆಳುದಾಸನು ನಾನು ಮೂಳದಾಸಫಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯಆಳಿನಾಳಿನ ದಾಸ ಅಡಿದಾಸ ನಾನಯ್ಯ 2 ಹಲವು ದಾಸರ ಮನೆಯ ಹೊಲೆಯ ದಾಸನು ನಾನುಕುಲವಿಲ್ಲದ ದಾಸ ಕುರುಬ ದಾಸಛಲದಿ ನಿನ್ನ ಭಜಿಪರ ಮನೆಯ ಮಾದಿಗ ದಾಸಸಲೆ ಮುಕ್ತಿ ಪಾಲಿಸೆನ್ನೊಡೆಯ ಕೇಶವನೆ 3
--------------
ಕನಕದಾಸ
ದಾಸಗುರೂ | ದಾಸಗುರೂ | ವಾಸವ ನಾಮಕ ಪ ಭೂಸುರರಿಗೆ ಧನರಾಶಿ ಸಮರ್ಪಿಸಿ ವ್ಯಾಸರಾಯರುಪದೇಶಗೊಂಡ ಹರಿ ಅ.ಪ ಜಲಜಭವನ ಪಿತನಾಜ್ಞೆಯಲಿ ಕಲಯುಗದಲಿ ಜನ್ಮ ತಾಳುತಲಿ ಅಲವ ಬೋಧಾಮೃತ ನೆಲೆಯನು ಸುಲಭದಿ ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ 1 ಪವನದೇವನ ಒಲಿಸುತಲಿ | ಮಾ ಧವನ ಸ್ತುತಿಸಿ ಸಲೆ ಕುಣಿಯುತಲಿ ಕವನದಿ ಭಕುತಿಯ ನವವಿಧ ಮಾರ್ಗವ ಅವನಿಗೆ ಬೀರಿದ ದಿವಜ ಮೌನಿವರ 2 ಕಾಮಿತ ಫಲಗಳ ಗರಿಯುತಲಿ ಬಲು ಪಾಮರ ಜನರನು ಸಲಹುತಲಿ ಶ್ರೀಮನೋವಲ್ಲಭ ಶಾಮುಂದರ ನಾಮಾಮೃತವನು ಪ್ರೇಮದಿಂದುಣಿದ 3
--------------
ಶಾಮಸುಂದರ ವಿಠಲ
ದಾಸರಿವರ ನೋಡಿರೊ | ಗುರು ವಿಜಯ |ದಾಸರಿವರ ಪಾಡಿರೋ ಪ ವ್ಯಾಸರಾಜ್ಞೆಯಲಿಂದ | ವ್ಯಾಸ ಕಾಶಿಗೆ ಪೋಗಿ |ಶ್ರೀಶಾನುಗ್ರಹದಲಿ | ಭಾಸಿಸೀ ಮೆರೆದಂಥ ಅ.ಪ. ಎರಡನೆ ಯುಗದೊಳಗೆ | ಸುರಲೀಲ | ವರಕಪಿ ಎಂದೆನೆಸಿ |ಶಿರಿ ರಾಮಚಂದ್ರನ್ನ | ಚರಣ ಸೇವಕರಾಗಿಸುರ ವಿರೋಧಿಗಳ ಬಹಳ ಸಂಹರಿಸಿದ 1 ಯಾದವರಲಿ ಜನಿಸಿ | ನಿಕಂಪಾಖ್ಯ | ಶ್ರೀದಕೃಷ್ಣನ ಭಜಿಸಿ |ಮಾಧವ ಗೆದುರಾಂತ | ದೈತ್ಯರ ಸದೆಬಡಿದುಯಾದವೇಶನ ಪದ | ಕರ್ಪಿಸಿ ಮೆರೆದಂಥ 2 ಪುರಂದರ ದಾಸರ | ವರ ಗೃಹದಲಿ ಇದ್ದುಹರಿಚರಿತೆ ಶ್ರವಣದಿ | ವಿಪ್ರನಾಗ್ಯುದೀಸಿದ 3 ಮಧ್ವಪತಿಯ ನಾಮದಿ | ಭೃಗ್ವಂಶದಿ | ಮುದ್ದು ಮಗನೆನಿಸಿಮಧ್ವೇಶ ಹರಿಪಾದ | ಶ್ರದ್ಧೆಯಿಂದಲಿ ಭಜಿಸಿಮಧ್ವರಾಯರ ಮತ | ತುತಿಸಿ ಮೋದಿಸಿದಂಥ 4 ಚೀಕನಪರಿ ಕ್ಷೇತ್ರದೀ | ದಾಸಪ್ಪನು | ಆ ಕೂಸಮ್ಮನ ಉದರದಿಬೇಕಾಗಿ ಜನಿಸುತ್ತ | ಪ್ರಾಕು ಪ್ರಾರಬ್ದವನೇಕ ಬಗೆಯಲಿ ಉಂಡ | ಮಾಕಳತ್ರನ ಕಂಡ 5 ಪುರಂದರ | ದಾಸರೂಪಿಯಲಿಂದ |ಸೂಸಿ ಶಾಸ್ತ್ರವ ಮಧ್ವ | ಭಾಷ್ಯಾನು ಸಾರದಿ |ಭಾಷೆ ಕನ್ನಡದಲ್ಲಿ | ಮೀಸಲೆನಿಸಿ ಪೇಳ್ದ 6 ಧ್ಯಾನೋಪಾಸನೆ ಕರ್ಮವ | ಯೋಗ್ಯರಿಗೆ | ಗಾನಗೈದಿಹ ಸುಜ್ಞಾನೀ | ಮಾನ್ಯ ಮಾನದ ದುಷ್ಟ | ಗಾನಕೆ ಮನ ಕೊಡದೆಮೌನಿಯಾಗುವ ಮಾರ್ಗ | ದಾನವ ಮಾಡೀದ 7 ಸ್ವಪ್ನದಲ್ಲೆನಗವರೂ | ದರ್ಶನದಿ | ಕೃಪ್ಪೆಯಲನುಗ್ರಹಿಸಿ |ಅಪ್ಪಾರ ಮಹಿಮರು | ತಪ್ಪದೆ ತ್ರಯ ಬಾರಿಒಪ್ಪಿ ತೀರ್ಥವನಿತ್ತು ಕಳುಹಿದ ಮಹಾಂತ 8 ವತ್ಸರ ಕಾರ್ತೀಕ | ಸಿತ ದಶಮಿ | ಆವಗುರುವಾಸರದಿಭಾವಜ ಪಿತ ಗುರು | ಗೋವಿಂದ ವಿಠಲನಭಾವದಿ ಕಂಡು ಸುಯೋಗದಿ ಪೊರಟಂಥ 9
--------------
ಗುರುಗೋವಿಂದವಿಠಲರು
ದೀನಬಂಧೋ ಹೇ ಭಲಾ ನೀನೆ ಸೈ ಸೈಯಲಾ ಪ ಪಾಸಲೆ ಶರಣರ ಪೊರೆವದಕಿನ್ನು ಬ್ಯಾಸರೇನಿಲ್ಲಲಾ 1 ದುಷ್ಟರ ದಂಡಿಸಲಾ ಮನಸಿಗೆ ಹುಟ್ಟಿದೆ ಕಲಕಲಾ 2 ಬಿಡದೆ ಶ್ರೀವಿಠಲಾ ಎನ್ನೊಳು ಮಾಡಿದೆಲೋ ಛಲಾ 3
--------------
ಶ್ರೀದವಿಠಲರು
ದುರಿತ ತ್ಯಜಿಸಿರೋ ಪರಮ ಸಾಧ ಐಕೂರು ನರಸಿಂಹಾರ್ಯರ ಪ ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ 1 ತರುಳತನದಲಿ | ಸದ್ಗುರುವರೇಣ್ಯರ ಚರಣ ಸೇವಿಸಿ ಶಾಸ್ತ್ರವರಿತ ಧೀರರ 2 ಸತತ ನಂಬಿದ ಶಿಷ್ಯತತಿಗೆ ಹರಿಗುಣ ಹಿತದಿ ಸುರಿದ | ಅಪ್ರತಿಮ ಮಹಿಮರ 3 ಪವನ ಶಾಸ್ತ್ರವೇದ | ಕವನವೆನ್ನುತ ವಿವರಿಸುತ್ತಲಿ ತನ್ನವರ ಪೊರೆದರ 4 ಏನು ಬಂದರು ಮನದಿ ಶ್ರೀನಿವಾಸನ ಧ್ಯಾನ ಬಿಡದಿಹ | ಮಹಾನುಭಾವರ 5 ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ 6 ಭುವನ ಮೇಲಿಹ ಇವರು ದಿವಿ ಭವಾಂಶರು ರವಿ ನಿಭಾಂಗರು | ಜವನ ಭವಣೆ | ತರಿದರು 7 ಇವರು ಪೇಳುವ ವಚನ ಶ್ರವವಣಗೈಯಲು ಶೌರಿ ಭುವನ ಪಡೆವರು 8 ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ ದ್ಯಂತ ಬಲ್ಲರು ಪರಮ ಶಾಂತಿ ಶೀಲರು 9 ಮೌನಧ್ಯಾನದ ಜ್ಞಾನ ಖೂನ ತೋರದೆ ಹೀನರಂದದಿ ಹೊರಗೆ ಕಾಣಿಸುವರು 10 ಬಾಲಕೃಷ್ಣನ ದಿವ್ಯಲೀಲೆ ಚರಿತೆಯ ಕಾಲ ಕಳೆಯರು 11 ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ ಇಂದಿರೇಶನೆ ತಾನೆ ತಂದ ನೆಂಬರು 12 ಪಾದ ಪೊಂದಿದ ಜನಕೆ | ಮೋದಗರೆವರು ವ್ಯಾಧಿ ಕಳೆದರು ವೇದ ಬೋಧಿಸಿದರು 13 ವಿವಿಧ ವೈಭವ ಮೇಣ್ | ಕುವರ ಭಾಗ್ಯವ ವಿವಿಧ ಭೋಗವ ಶಿಷ್ಯ ನಿವಹಕಿತ್ತರು 14 ನಿತ್ಯ ಪೇಳುತ ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು 15 ಕಾಮವಾಸನೆ ಸುಟ್ಟು | ನೇಮ ಪೂರ್ವಕ ರಾಮನೊಲಿಮೆಯ | ವಿಶ್ವಪ್ರೇಮವೆಂಬರು 16 ಈ ಸುಮಹಿಮರ | ಸದುಪದೇಶ ಕೊಳ್ಳಲು ಕ್ಲೇಶಬಾರದು | ಯಮನು ಘಾಸೆÉಗೊಳಿಸನು 17 ನಿರಯ ಪಾತ್ರರು 18 ಇನಿತುಪಾಸನೆಗೈವ ಘುನ ಮಹಾತ್ಮರ ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ 19 ಅರುಣನುದಿಯದಿ | ಇವರ ಚರಣ ಕಮಲವ ಸ್ಮರಣ ಮಾಡಲು | ಹರಿಯ ಕರುಣವಾಹದು 20 ಸಾಮಜವರ ವರದ ಶಾಮಸುಂದರನ ಪ್ರೇಮಪಾತ್ರ ನಿಷ್ಕಾಮ ಪೂರ್ಣರು 21
--------------
ಶಾಮಸುಂದರ ವಿಠಲ
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ದೇವಿ ಲಕ್ಷಣೆ ಎಮ್ಮ ಸಲಹ ಬೇಕಮ್ಮಭಾವದಲಿ ನೀನಿದ್ದು ಭಾವನಯ್ಯನ ತೋರೀ ಪ ಪಿತನು ಬೃಹತ್ಸೇನ ನಿನಗಾಗಿ ಸ್ವಯಂವರವಹಿತದಿಂದಲೆಸಗುತ್ತ ಲಕ್ಷ್ಯವನೆ ಬಿಗಿದೂ |ಅತಿಶಯದ ಧನುವಿಗೆ ಸಜ್ಜಿಸುತ ಬಾಣವನುಚತುರತೆಲಿ ಭೇದಿಪಗೆ ಸುತೆಯ ಪಣವೆಂದ1 ಮತ್ಸ್ಯ ಯಂತ್ರವಿದಲ್ಲಔಪಚಾರಿಕವೆಲ್ಲ ಸರ್ವವಿಧ ಛನ್ನಾ |ವೈಪರೀತ್ಯದಿ ದ್ವಾರ ಉಪರಿ ಇರುವುದು ಕೇಳಿಕಾಪುರುಷಗಿದು ಕಾಂಬ ಮಾರ್ಗವೇ ಇಲ್ಲ 2 ಸೂತನುತ ಮಾಗಧನು ಕೌತುಕದ ಕೌರವರುಪಾರ್ಥನೂ ಅವನಣ್ಣ ಭೀಮಸೇನಾ |ಆತು ಧನುವನು ಲಕ್ಷ್ಯ ಭೇದಿಸಲೆ ಬೇಕೆಂದುಪೃಥಿವಿಪರು ಮತ್ತಿತರು ಬಂದು ಸೇರಿದರು 3 ಸಜ್ಜುಗೈಯಲು 5ನುವ ಆರಿಂದಲಾಗದಿರೆಲಜ್ಯೆಯಿಂದಲಿ ಮರಳಿ 5ೀಗುವರೆ ಬಹಳ |ಅರ್ಜುನನು ತಾನೊಬ್ಬ ಲಕ್ಷ್ಯವೀಕ್ಷಣ ಶಕ್ತಅರ್ಜುನಾಗ್ರಜ ಹರಿಗೆ ಅಪರಾಧವೆನೆ ಸರಿದ 4 ನೆರೆದ ಸಭೆಯಲ್ಲಿ ಪುಷ್ಪಹಾರವನೆ ಪಿಡಿಯುತ್ತಬರುತ ವೈಯ್ಯಾರದಲಿ ಶಿರಿ ಕೃಷ್ಣ ಕಂಠದಲ್ಲಿ |ಇರಿಸಿ ಪರಮಾನಂದ ಭರಿತಳಾಗಲು ಹರಿಯುಕರಪಿಡಿದು ಹೊರವಂಟ ತನ್ನ ದ್ವಾರಕಿಗೇ 5 ಪರಿ ಪರಿ ಪುಷ್ಪ ವೃಷ್ಟಿಗಳ ಗರೆಯೇ |ದುರುಳರೆದುರಾಗಿ ಸಂಗರಕೆ ಬರುತಿರಲುಹರಿ ಭೀಮರೆದುರಿಸದೆ ದುರುಳರೋಡಿದರು 6 ಮೋದ ಬಡುವಂಥ |ಧೀವರರ ಮನೋಭೀಷ್ಟ ಪೂರ್ಣವನೆ ಗೈಯ್ಯುವನುದೇವ ಗುರು ಗೋವಿಂದ ವಿಠಲ ಕೃಪೆಯಿಂದ 7
--------------
ಗುರುಗೋವಿಂದವಿಠಲರು
ಧನ್ಯ ಧನ್ಯವಾಯಿತು ಜನುಮಾ | ಆವಪುಣ್ಯವೋ ಅರಿಯೇ ನಮ್ಮಾ ಪ ನಾನಾ ಜನ್ಮದ ಬಲಿಯನೆ ಗೆದ್ದು ಸಲೆ | ಮಾನುಷ ದೇಹದಲಿಂದು | ಮಾನುಭಾವರ ವಂಶದಿ ಬಂದು | ಅವರ | ಸಾನಿಧ್ಯ ಸೇವೆಯ ಪಡೆದು 1 ಗುರುಕ್ಷೇತ್ರವೇ ಯನಗಿದೇ ಕಾಶೀ | ಗಂಗೆ | ಮೆರೆವುದು ಗುರುತೀರ್ಥವೆನಿಸಿ | ಗುರು ವಿಶ್ವೇಶ್ವರ ನೆನೆವಾಸೀ | ಕಂಡು | ಪೂರಿತಾಯಿತು ಮನದಾಸಿ 2 ಭವ | ಕರ್ಮ | ಪಾದ ಧರ್ಮಾ | ನಿಜ | ನಂದನ ಗಾನಂದೋಬ್ರಹ್ಮಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಡತೆಯನೆಣಿಸಿದರೆ ಗುಣವೇನು ತೃಣಕುಕಡೆಯಾಗುವಲ್ಲಿ ಸಂದೇಹವಿಲ್ಲ ಪನೀನು ಹಿಂದೆಗೆಯೆ ಕಣ್ಣು ಕಾಣದೆಂಬೆಯಲ್ಲೋ ುೀಗಕಾಣು ಕಿಮಿಂದ ರೂಪ ಜಾಣೆಯ ಮಗನೆ 1ಕೇಳು ಮೂಗಿನಿಂದಾ ನುಡಿಯ ತಾಳು ಗಂಧವ ಬಾುಂದಾಹೇಳು ಮಾತ ಕಣ್ಣಿನಿಂದಾ ಕೂಳುಗೊಂಬೆ 2ನಡೆಯೊ ಕೈುಂದ ಕಾಲಿಂ ಪಿಡಿಯೊಗುದದಲುಣ್ಣೋ ಪಡೆಯೊ ನೀನುಪಸ್ಥೆಯ ಬಿಟ್ಟಾನಂದವಾ 3ವಾಕಿನಿಂ ವಿಸರ್ಗವನ್ನು ಸೋಕಿಸೊ ಸ್ಪರ್ಶವ ನೀನುತಾಕದೊಲ್ ತ್ವಗಿಂದ್ರಿಯವ ಕಾಕಿ ಮನವೆ 4ಜೀವನು ಕುರುಡನೇನೊ ಪ್ರಾಣಗಳ್ [ಕೊ]ರಡುಗಳೇನೊಯಾವಗವು ನೀನೊರ್ವ ಬಾಳುವೆಯೇನೊ 5ಕಾದಿ ಮನೆಗೆ ಕೇಡು ತಾ ದರಿದ್ರತೆಗೆ ಬೀಡುಸಾಧುವಾಗಿ ನಮ್ಮೊಳಾಡು ಕೆಡಬೇಡ ನೋಡು 6ಹತ್ತು ದಾರಿಯೊಳಾಡುವೆ ಗೊತ್ತಿಗೆ ನೀನಿಲ್ಲದಿರೊಮತ್ತನಾಹೆ ಕೆಣಕಲು ಸತ್ತವನಂತೆ 7ನಿನ್ನ ಹತ್ತಿರೆ ದೈವವು ಬನ್ನ ಬಡಿಸಲೆಮ್ಮನುಕಣ್ಣುಗಾಣದೆ ಸೇರಿಸಿತು ಕಾಲಗತಿುಂದಾ 8ತಿರುಪತೀಶನೊಲವನು ಸರಸದಿಂ ಸಾಧಿಪ ನೀನುತೊರೆಯಲೆಮ್ಮ ತಿಳಿದುದು ಜಾಣುಮೆ ತಾನು 9ಕಂ||ಕರಣಗಳಾಡಿದ ಮಾತನು ಹರುಷದಿ ಕೇಳುತ್ತ ಜೀವ ತನು ಸಹ ಮನಮಂ ಪರಿಪರಿ ವಿಧದಲಿ ಬೋಧಿಪ ಪರಿುಂ ದೂಸಿದನಾಗ ನಾಚುವ ತೆರದಿಂ
--------------
ತಿಮ್ಮಪ್ಪದಾಸರು