ವನಭೋಜನ
ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ.
ಮಧುಸೂದನ ತನ್ನ ಸದನದಿಂದಲಿ ಒಮ್ಮೆ
ಒದಗಿ ಪಯಣಗೈದು ಪದುಳದಿ ಮಂಡಿಪ 1
ವಾಸುದೇವ ತಂಪಾಶುಗದಿಂದಾ-
ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2
ಭಾಗವತರು ಅನುರಾಗದಿ ಕೂಡಿ ಸ-
ರಾಗದಿ ಯೋಗಾರೋಗಣೆಮಾಡುವದೀಗ 3
ಸತ್ಪಾತ್ರ ವಿಯೋಗ ಸು-
ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4
ತರುಗುಲ್ಮಾವಳಿ ಸುರಮುನಿಗಳು ಕಾಣೆ
ಉರು ಪಾಷಾಣವೆಲ್ಲವು ಸಚ್ಚರಿತವು 5
ರಂಭೆ : ಪೋಗಿ ಬರುವ ವನಕ್ಕಾಗಿ
ನಾಗವೇಣಿ ಲೇಸಾಗಿ ಬೇಗ ನಾವು ಪ.
ಭಾಗವತಾದಿ ಸಮಾಗಮವಾದರೆ
ಭಾಗ್ಯವಂತೆಯರ್ನಾವಾಗಿ 1
ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು
ಹರಿಪ್ರಸಾದವೆಂದು ಸಾಗಿ ಬೇಗ 2
ನಾರಿ ನಿನ್ನ ಉಪಕಾರ ಮರೆಯೆ ನಾ
ಭೂರಿ ಪುಣ್ಯವಶಳಾಗಿ 3
ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ
ಶ್ರೀನಿವಾಸನ ಭೇಟಿಗಾಗಿ 4
ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ.
ವಿಭುಧೋತ್ತಮರೆಲ್ಲರು ಕೂಡುತ್ತ
ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ.
ಕ್ಷೀರಾರ್ಣವದೊಳಗಾಳಿದವಂಗೆ
ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ
ನೀರಜನಾಭನ ನಿಖಿಲ ಚರಾಚರ
ಪೂರಿತ ಕಲ್ಮಷದೊರಗೆ ಕ್ಷೀರದ1
ಚದುರತನದಿ ಗೊಲ್ಲರೊಳಾಡಿದಗೆ
ದಧಿಪಾಲ್ ಬೆಣ್ಣೆಯ ಸವಿದುಂಡವಗೆ
ಮದನಜನಕ ಮಹಿಮಾಂಬುಧಿ ಕರುಣಾ-
ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2
ಶ್ರುತಿಸ್ಮøತಿತತಿನುತ ರತಿಪತಿಪಿತಗೆ
ಅತುಲಿತಗುಣ ಸೂನೃತಭಾಷಿತಗೆ
ದಿತಿಸುತಹತ ಶೋಭಿತ ಮೂರುತಿ ಶಾ-
ಶ್ವತವಾಶ್ರಿತ ವಾಂಛಿತಗೆ ಘೃತವ 3
ಮಧುಸೂದನ ಮಂದರಗಿರಿಧರೆಗೆ
ಮೃದುವಾಕ್ಯಗೆ ಮಂಗಲಾಂಗನಿಗೆ
ಪದಮಳಾಕ್ಷ ಪರಾತ್ಪರವಸ್ತು ನೀ-
ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4
ಕರುಣಾಕರ ಕಮಲಜತಾತನಿಗೆ
ದುರುಳ ಸುಬಾಹು ತಾಟಕಿ ಮರ್ದನಗೆ
ನರಕಾಂತಕ ನಾರಾಯಣ ಸಕಲಾ-
ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5
ಎಳೆತುಳಸೀವನಮಾಲಾಧರಗೆ
ಫಲದಾಯಕ ಪರಬ್ರಹ್ಮರೂಪನಿಗೆ
ಕಲುಷರಹಿತ ನಿರ್ಮಲಚಾರಿತ್ರ್ಯ ನಿ-
ಶ್ಚಲಿತಾನಂದ ನಿತ್ಯನಿಗಳ ನೀರಿನ 6
ಕನಕಾಂಬರಧರ ಶೋಭತನಿಂಗೆ
ಮನಕಾನಂದವ ಪಡಿಸುವನಿಂಗೆ
ಚಿನಮಯ ಪರಿಪೂರ್ಣ ವಿಶ್ವಂಭರ
ಜನಕಜಾ ವರನಿಗೆ ಕನಕಾನನೀಕದ 7
* * *
ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ.
ಶಿರದೊಳು ರತ್ನಕಿರೀಟದ ಝಳಕ
ಮೆರೆವ ಲಲಾಟದಿ ಕಸ್ತೂರಿತಿಲಕ
ವರ ಕರ್ಣಕುಂಡಲಗಳ ಮಯಕನಕ
ಚೆಲುವ ಚರಾಚರಭರಿತಜ ಜನಕ1
ಕಂಬುಕಂಠದಿ ಕೌಸ್ತುಭವನಮಾಲ
ಇಂಬಾಗಿಹ ಭೂಷಣ ಶುಭಲೋಲ
ಸಂಭ್ರಮಿಸುವ ಮೋಹನ ಗುಣಶೀಲ
ಅಂಬುಜನಾಭಾಶ್ರಿತಜನಪಾಲ 2
ಶಂಖಸುದರ್ಶನಗದಾಪದ್ಮ ಧಾರಿ
ಕಂಕಣವೇಣುವಡ್ಯಾಣವಿಹಾರಿ
ಬಿಂಕದ ಬಿರುದಾಂಕಿತ ಕಂಸಾರಿ
ಶಂಕೆಯಿಲ್ಲದ ಭೂಷಣಾಲಂಕಾರಿ 3
ಎಡಬಲದಲಿ ಮಡದಿಯರ ವಿಲಾಸ
ಕಡುಬೆಡಗಿನ ಪೀತಾಂಬರಭೂಷ
ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ
ಒಡೆಯ ಶ್ರೀನಾರಾಯಣ ಸರ್ವೇಶ 4
ಈ ರೀತಿಯಲಿ ಶೃಂಗಾರನಾಗುತ್ತ
ಭೂರಿಭಕ್ತರ ಕಣ್ಮನಕೆ ತೋರುತ್ತ
ನಾರದಾದಿ ಮುನಿವರ ಗೋಚರದ
ಚಾರುಚರಣವನು ತೋರಿಸಿ ಪೊರೆದ 5
* * *
ಆರೋಗಣೆಯ ಗೈದನು ಶ್ರೀರಂಗ
ಸಾರಸವಾದ ಸಮಸ್ತ ವಸ್ತುಗಳ ಪ.
ಧೂಪದೀಪನೈವೇದ್ಯವಿಧಾನ
ಶ್ರೀಪರಮಾತ್ಮ ಮಂಗಲಗುಣಪೂರ್ಣ 1
ಸುರತರುವಿನ ಸೌಭಾಗ್ಯದ ತೆರನ
ಮರಕತಮಯ ಹರಿವಾಣದೊಳಿದನ 2
ಭಕುತರ ಸೌಖ್ಯವಿನ್ನೇನೆಂಬುವೆನು
ಶಕುತ ಶ್ರೀಮಾಧವ ನಿರತ ತೋರುವನು 3
* * *
ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ
ಗಾರತಿ ಶ್ರೀನಿವಾಸಂ ಪ.
ಮಂಗಲಾಂಗ ನರಸಿಂಗ ಮನೋಹರ
ರಂಗರಾಯ ಶ್ರೀಗಂಗಾಜನಕಗೆ 1
ಮಾಧವ ಮಧುಹರ ಮೋದಭರಿತ ಜಗ-
ದಾಧಾರ ವೇಣುನಾದವಿನೋದಗೆ 2
ನಿತ್ಯನಿರಂಜನ ಸತ್ಯಸ್ವರೂಪಗೆ
ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3
ಭೋಜನವ ಗೈದರು ಪ.
ಮೂಜಗತ್ಪತಿಯ ಪ್ರಸಾದಪ್ರತಾಪದಿ
ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1
ಜಿಹ್ವೆಗೆ ರುಚಿಕರವಪ್ಪುದ
ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ
ತೆಗೆದು ಸಂತೋಷ ಬೆಡಗುಗಳ ತೋರುತ್ತ 2
ಹಪ್ಪಳ ಸಂಡಿಗೆಯು
ತಪ್ಪು ಒಗರ ಶಾಲ್ಯನ್ನಗಳೆಲ್ಲವ
ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3
ಹೋಳಿಗೆಯು
ಕಾಯದ ಜಡಗಳು ಮಾಯಕವಾದವು
ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4
ಸುರರು ಉರಗ ಮಾನವರೆಲ್ಲರೂ
ದೊರೆಯ ಪ್ರಸಾದವು ದೊರಕಿತು ಎನುತ ವಿ-
ಸ್ತರವಾದ ತೋಷದಿ ಭರದಿಂದೊದಗುತಲಿ 5
ಭೋಗವಿನ್ನಂತೆಯಿಲ್ಲಿ
ರೋಗ ದುರಿತವೆಲ್ಲ ನೀಗಿತು ಎನುತನು-
ರಾಗದಿ ಸವಿದುಂಡು ತೇಗಿದರೆಲ್ಲರು 6
ಪುಣ್ಯ-ಫಲದಿಂದ ದೊರಕಿತಲ್ಲೇ
ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ
ಜಲಜಂತು ಸಹವು ನಿರ್ಮಲಿನವಾದವು ಕಾಣೆ 7
ಪಾವನವಾದರು
ಹಿಂಡು ಉದ್ದಂಡ ಮೃಗಗಳೆಲ್ಲ
&ಟಿb