ಬಿನ್ನಪ ಕೇಳಯ್ಯಾ ಬಡವನ
ಮನ್ನಿಸು ಮಹರಾಯ ಪ
ಎನ್ನ ಭವಗುಣಗಳನ್ನು ಕಳೆದು ಪೊರೆ
ಸನ್ನುತಾಂಗ ಹರಿ ಉನ್ನತ ಮಹಿಮ ಅ.ಪ
ತೊಳಲಿಬಳಲಿ ಬಂದೆ ಸಂಸಾರದ್ಹೊಲಸಿ
ನೊಳಗೆ ನಿಂದೆ
ಅಳಿಯುವ ದೇಹಕೆ ಕಳವಳಿಸುವ ಮನ
ಮಲಿನತೊಳೆದು ನಿರ್ಮಲ ಮಾಡು ತಂದೆ 1
ಹುಟ್ಟಿ ನೀ ಸಾಯ್ವುದಕೆ ಬಂದಿಲ್ಲ
ಗಟ್ಟ್ಯಾಗಿರಲಿಕ್ಕೆ
ಸಠೆ ಈ ಲೋಕವು ದಿಟವಲ್ಲೆನಗೆ
ಬಟ್ಟೆ ತಪ್ಪಿಸು ತಂದೆ 2
ಇಷ್ಟುದಿನವು ಕಳೆದು ತಿಳಿಯದೆ
ಭ್ರಷ್ಟತನದಿ ಬಾಳ್ವೆ
ಇಷ್ಟು ದಿನ ದಿನಗಳ್ವ್ಯರ್ಥ ಕೆಟ್ಟಿದ್ದೆ ಸಾಕಯ್ಯ
ಶಿಷ್ಟಗುಣವಕೊಟ್ಟು ಸಲಹೊ ಶ್ರೀರಾಮ3