ಒಟ್ಟು 185 ಕಡೆಗಳಲ್ಲಿ , 57 ದಾಸರು , 175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಿಡು ಬಿಡು ಇನ್ನು ಸೋಗಾಚಾರ | ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ | ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು | ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ | ಪಡಚುತನವಲ್ಲದೆ ಭಾರಕನು ನೀನಲ್ಲ 1 ಸೀರಯನು ಕದ್ದಂದು ಕಡವಿನ ಮರವನೇರಿ | ಊರ ನಾರಿಯರ ಮಾನಕ್ಕೆ ಸೋತು || ಜಾರತನದವನಾಗಿ ತಿರಗಿ ಜಗದಾ ಭಂಡ | ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2 ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ | ತನುಜರ ಸಂಗಡಲಿದ್ದು ಎಂಜಲುಂಡು | ಮನುಜದೇಹವ ತೆತ್ತು ಬಿನಗು ಲೀಲಾಕೃತಿ | ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3 ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ | ಮಾತುಳನ ಕೊಂದು ಮುತ್ತೈಯಗೊಲಿದು | ಭೀತಿಯಲಿ ಪರರಾಯನ ಮಗಳ ಕೊಂಡು ಬಂದ | ಯಾತರ ಪೌರುಷದವನು ಲೋಕದೊಳಗೆಲ್ಲ 4 ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು | ಮಿತ್ರಭೇದವನಿಕ್ಕಿ ಬಂಧುಗಳಿಗೆ | ತೆತ್ತಿಗನು ನೀನಾಗಿ ವಾಜಿಗಳ ಪಿಡಿದು | ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5 ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ | ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ | ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ | ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6 ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ | ಜಲಜ ಸಂಭವ ಶಿವ ಇಂದ್ರಾದ್ಯರು | ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
--------------
ವಿಜಯದಾಸ
ಬೇಗನೆ ಕರೆತಾರೇ ಸಖಿಯೇ [ಬೆಗನೆಕರೆತಾರೆ] ಪ ನಾಗಶಯನನವ ಕೂಗದೆ ಬಾರನೆ ಅ.ಪ ಪೂತನಿ ಶಿಶುಗಳ ಫಾತಿಸುತಿಹಳೆಂಬ ಮಾತನವಗೆ ಪೇಳೆ ಭೀತಿಯತೋರಿ ಆತುರದಿಂದವ ಐತರುವನೆ ಸಖಿ ಪ್ರೀತಿಯೊಳೀವೆನೀ ರತುನದ ಹಾರವ 1 ಕರಿ ಧ್ರುವ ಪ್ರಹ್ಲಾದ ತರುಣಿ ಪಾಂಚಾಲಿ ಮೊರೆಯಿಡುವುದ ಹೇಳೆ ಭರದಲಿ ಬರುವ ಉರಗನ ಗರಳದಿ ಕರುತುರು ನೋಯುವ ಪರಿಯ ಬಿತ್ತರಿಸಿ | ಮುರಳೀಧರಗೆ 2 ಸಂಗಡ ಬರದಿರೆ ಭಂಗಿಸುವರು ಗೋ ಪಾಂಗನೆಯರು ಎಂದು ರಂಗಗೆ ಹೇಳೇ ಇಂಗಿತಜ್ಞನು ನಮ್ಮ ಮಾಂಗಿರಿಯರಸನು ಸಂಗಡ ಬರುವನು ಸಂದೇಹವಿಲ್ಲ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಭವ ಬಿಡಿಸಯ್ಯ ಹರಿ ನಿನ್ನ ನಾಮ ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ ಕೀಳುಯೋಚನೆ ಸರ್ವ ಕಡಿಸಯ್ಯ ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ ಮೂಳಮಾನವರ ಮಾತು ಮರೆಸಯ್ಯ 1 ನಿತ್ಯ ಸುಜನರೊಳಿರಿಸಯ್ಯ ಎನ್ನ ಸತ್ಯ ಶರಣರೊಳಾಡಿಸಯ್ಯ ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ ಮಿಥ್ಯಗುಣಂಗಳನ್ನು ಹರಿಸಯ್ಯ 2 ಕೋಪತಾಪಂಗಳ ವಧಿಸಯ್ಯ ಎನ್ನ ಪಾಪ ಮಾಫಿಗೊಳಿಸೆನ್ನಯ್ಯ ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ 3 ಭೂತಪ್ರೇತದಂಜಿಕ್ಹರಿಸಯ್ಯ ತಂದೆ ಜಾತಿಭೀತಿ ಮೊದಲ್ಹಾರಿಸಯ್ಯ ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ ತಾತ ಮಾತೆ ನೀನೆ ನಿಜವಯ್ಯ 4 ನರರಿಗೆ ಎರಗಿಸದಿರಯ್ಯ ಎನ್ನ ಶಿರ ನಿನ್ನ ಚರಣದಿ ಇರಿಸಯ್ಯ ಪರಲೋಕಸಾಧನ ತೋರಿಸಯ್ಯ ಎನ್ನ ಶರಣ ನೀನಾಗು ಶ್ರೀರಾಮಯ್ಯ 5
--------------
ರಾಮದಾಸರು
ಭವದ ಬಂಧವಿನ್ನೆನಗೆ ಯಾಕೆ ಭವಹರಣ ನಾಮ ಎನ್ನ ಜಿಹ್ವೆಯೊಳಗೆ ಇರುತಿರಲು ಪ ದುರಿತ ಭೀತಿ ಯಾಕೆ ಎನಗೆ ಕರ್ಮದ ಲೇಪವ್ಯಾಕೆ ಎನಗೆ ಕುಲ ಚಲಗಳ್ಯಾಕೆ ಎನಗೆ ಮಡಿಯು ಮೈಲಿಗ್ಯಾಕೆ ಅನುದಿನದಿ ಪಾವನಾತ್ಮಕನ ನೆನವು ಎನ್ನ ಮನದೊಳಿರಲು 1 ನಷ್ಟ ಪ್ರಪಂಚಂಟಿನ್ನ್ಯಾತಹೆÉ ಬಿಟ್ಟ ಬಡತನ ತಂತಿನಗ್ಯಾಕೆ ಹುಟ್ಟು ಸಾವು ಕಷ್ಟ ಮತ್ತ್ಯಾಕೆ ಕೆಟ್ಟ ಯಮನ ಅಂಜಿಕಿನ್ನ್ಯಾಕೆ ಸೃಷ್ಟಿ ಕರ್ತನ ಶಿಷ್ಟಪಾದ ನಿಷ್ಠೆಯೆನ್ನೊಳು ಗಟ್ಟಿಯಿರಲು 2 ನಿತ್ಯ ನೇಮ ಪೂಜೆ ಯಾಕೊ ಮತ್ತೆ ಜಪ ತಪವು ಯಾಕೊ ನಿತ್ಯ ನಿರ್ಮಲಾನಂದ ರೂಪಿ ಸತ್ತು ಚಿತ್ತನಂದದಾತ ಮುಕ್ತಿದಾಯಕ ಶ್ರೀರಾಮ ಪಾದ ಭಕ್ತನಾಗಿ ನಾ ಮೆರೆಯುತಿರಲು 3
--------------
ರಾಮದಾಸರು
ಭಾಗವತ ದಶಮಸ್ಕಂದ ಕಥೆ ಜಯ ಜಯ ರಾಮಾನುಜ ಪಾಹಿ ಜಯ ಜಯ ಶ್ರೀಕೃಷ್ಣಪಾಹಿ ಜಯ ಪಾಂಡವ ಮಿತ್ರ ಪಾಹಿ ಜಯ ಜಯ ಜಯತು ಪ ಭವ ಪ್ರಮುಖ ಸುರರಿ- ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ 1 ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು 2 ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು 3 ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ ತರಿವೆ ನೀಚರನೆಂದಾಕಾಶವಾಣಿಯಾಯಿತು 4 ಕನ್ನಿಕೆಯರು ಭುವಿಯೊಳವತರಿಸುವದೆನ್ನುತ 5 ಮೃಡ ಸಡಗರದಲಿ ತಮ್ಮ ನಿಳಯಗಳನು ಸಾರ್ದರು 6 ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ ಧಾರುಣಿಯ ಪಾಲಿಸುತೆ ಧರ್ಮದಿಂದಲಿ 7 ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ ಭಾವ ಮೈದ ಕಂಸ ರಥಕೆ ಸಾರಥಿಯಾದನು8 ನಭವುನುಡಿಯೆ ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ9 ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ 10 ಕೊಡಲು ಕಂಸ ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು 11 ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ 12 ಸೆರೆಯೊಳಿಡಿಸಿ ಘನವಿಭವದಿ ಭುವಿಯನಾಳುತಿರ್ದ ಕಂಸನು 13 ಸುರ ಋಷಿ ರಹಸ್ಯದಲಿ ಬಂದು ಪೇಳಿದ 14 ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು ತರಿದನಾರುಮಂದಿ ಸುತರ ತವಕದಲಿ 15 ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು 16 ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು 17 ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ 18 ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ 19 ಸುರರು ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು 20 ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ 21 ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು 22 ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ ಶೌರಿ ನೋಡಿದ 23 ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ ಗೋವುಗಳನು ಹತ್ತುಸಾವಿರ ಧಾರೆಯೆರೆದನು 24 ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ 25 ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ ಬಾಲನನ್ನು ನೋಡಿ ಮನದಿ ಭಯವ ಪಟ್ಟಳು 26 ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ ಶೌರಿ ನಡೆದನು 27 ಗೋಕುಲವನೈದಿ ಕಮಲನಾಭನಂ ಯಶೋದೆಯ ಬಳಿಯಲಿಟ್ಟನು 28 ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು ಜೋಕೆಯಿಂದ ಮೊದಲಿನಂತೆ ತೋರುತಿರ್ದನು 29 ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ ಝಳಪಿಸುತ್ತ ಖಡ್ಗವನ್ನು ಜವದಿ ಬಂದನು 30 ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ 31 ನಭದಿನಿಂತು ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? 32 ವೈರಿ ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು 33 ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ 34 ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ ಬರಲಿ ಹರಿಯು ಕೊಲುವೆವವನ ಭಯಬಿಡೆಂದರು 35 ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು ಪೂತನೆಯೆಂಬ ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು 36 ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು 37 ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು 38 ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ ಧೀರ ನಿನ್ನ ಮಗನೆನ್ನುತ ಗೋಪ ನುಡಿದನು39 ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ ಹಾಲಾಹಲವನೀಂಟಯಸುವನೆಳದು ಕೊಂದನು40 ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು 41 ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ 42 ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು43 ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು 44 ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ 45 ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು46 ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು 47 ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು 48 ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು 49 ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ ನಯದಿಂದ ಅರಿಯದವನಂತಿರುವ ತಾಯಿಗೆ 50 ಗೋಪಿ ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ 51 ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು 52 ವನಜನಾಭ ಕೃಷ್ಣನನ್ನು ದೂರುತಿರುವರು 53 ಸೂನು ನಮ್ಮ ಮನೆಗೆ ಬಂದು ಆನಂದದಿ ಯಾರು ಆಡದಾಟ ಆಡುವ 54 ಬಾಯಿಗೊರಸಲತ್ತೆ ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ 55 ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು ಕೋಲಿನಿಂದ ತಿವಿದು ವಡೆದು ಪಾಲ ಸವಿದನು56 ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು 57 ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ- ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ58 ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ 59 ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು ತಿನ್ನತಿರಲು ನಗುತ ನಗುತ ತಿರುಗುತಿರುವನು 60 ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು 61 ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ 62 ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ ವಾರಿಗೆಯವರಿಂದ ಕೂಡಿ ಕುಣಿಯುತಿರುವನು 63 ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ- ಚಿತ್ತರುಲಿಯಲಾಡುತೆಸೆದ ಮೋದದಿ64 ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು 65 ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು 66 ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು ಸ್ವಜನರನ್ನು ಪಾಲಿಸಿದನು ವೃಜಿನದೂರನು 67 ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ 68 ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ ಹರಿಯುತಾನು ತತ್ವದ್ರೂಪವಾಗಿ ಮೆರೆದನು 69 ನಾನಾಲಂಕಾರದಿ ಗೋವುಗಳ
--------------
ಗುರುರಾಮವಿಠಲ
ಭಾವದಲ್ಲಿಯೆ ಪೊರೆಯೊ ದೇವ ದೇವ ಪ ಜೀವೋತ್ತಮರಸ ದೇವ ಗೋಪಾಲಕ ಅ.ಪ ಸಂದೇಹ ಭೀತಿಯೊಳ್ ನೊಂದೆನೊ ಬಹುಕಾಲ ಗಂಧವಾಹನ ವಂದ್ಯ ಸರ್ವ ಬಂಧೊ ಭವ ಬೊಮ್ಮ ಸುರರಿಗೆ ಒಂದಿಷ್ಟು ವಶವಲ್ಲವೆಂದು ದಯ ಸಲ್ಲಿಸೊ 1 ಒಳಗಿನಾ ಅಘಮೂಲವಳಿಯದೆ ಇಷ್ಟಾರ್ಥ ಮಳೆಗರೆದರೇನೊ ಗುಣವ ಹೊಂದೆ ಹಲುಬಿ ಬೇಡುವುದೊಂದು ಒಲಿದು ಕೊಡುವುದೊಂದು ಫಲ ಬೇಧವಾದರೆ ಮನ ನಂಬಿಸುವುದೆಂತೊ 2 ಹರಿ ನಿನ್ನ ಇಚ್ಛೆಗೆ ಎದುರಿಲ್ಲವಾದರೆ ಶರಣ ಸುರಧೇನು ಖರೆಯಾದರೆ ನೆರೆ ನಂಬಿದೆ ನಿನ್ನ ಜಯೇಶವಿಠಲ ಸುರರು ಜಯವೆಂಬಂತೆ ಹರಿಕೆಯ ಸಲಿಸೊ 3
--------------
ಜಯೇಶವಿಠಲ
ಭೂತರಾಜನೆ ಕೇಳು ಯನ್ನ ಭಾವಿ ಲಿಖಿತಾವನ್ನು ಸೂಚಿಸು ಭವದಿ ಬಹು ಭೀತಿಗೊಳಿಪ ಭೌತಿಕ ಜೀವಿಗಳಾ ನೀ ದೂರಮಾಡಿ ಯನ್ನ ಗಾರುಮಾಡದೆ ಸಲಹಾಬೇಕುಕಾರುಣ್ಯ ನಿಧಿಯೇ ನಿನ್ನ ವನಜಪಾದದಲ್ಲಿ ನವವಿಧಾ ಭಕುತಿ ಕೊಟ್ಟು ನವನಿಧಿ ಚರಣ ಸರೋಜವನ್ನು ಹೃತ್ಸರಸೀದಾಲ್ಲ ಪೊಳೆವಂತೆ ಮಾಡೊಪಾಪಿ ಜನರ ತಾಪಾ ಸಹಿಸಲಾರೆನೋ ದೇವಾ ಶ್ವಾಸ ನಿಯಾಮಕ ಪ್ರೀಯಾ ಸ್ವಾದಿ ಪುರವಾಸಿ ತಂದೆವರದಗೋಪಾಲವಿಠ್ಠಲನ ದೂತಾ 1 ತಾಪ ದಾತ ಜನಕೆ ತಂದೆವರದ-ಗೋಪಾಲವಿಠ್ಠಲನ ನಿಲ್ಲಿಸುವಂತೆ ಕೃಪೆ ಮಾಡೈ 2 ನೀವಿ ಶಿಖಾಮಣಿ ತಂದೆವರದಗೋಪಾಲವಿಠಲನ ಆಪ್ತಾ 3 ದೂಷಿಯಾದವನ ನಿರ್ದೋಷ ಮಾಡುವಿ ದಾಸನೆಂದವನ ಪೋಷಿಸುವಿ ದೂಷಿಪರ ಘಾಸಿಗೊಳಿಸುವಿ ಹಂಸವಾಹನ ಪದ ಪೊಂದುವರ ಸಂಶಯಮಾಡದೆ ಸಮ್ಮೋದವಿತ್ತು ಸಲಹುವಿ ಶೂಲಧಾರಿಯೆ ನಿನ್ನ ಹಾಸಕೆ ನಮೋ ನಮೋಪಾಶದಿಂದ ಪಾಶಿಸಾದೆ ಸಲಹೋ ಪಾಶುಧರ ಪಾಲಾ ಪಶುಪತಿಯೋಗ್ಯಾ ಶಿರಹಾರ ಧಾರಿ ಮೃಗರಾಜ ಸೇವಕ ನದಿಧರಲಾಶಾಮಾನಿಲಯಾ ತಂದೆವರದಗೋಪಾಲವಿಠ್ಠಲನ ಪ್ರೀಯಾ 4 ಪರ ಕಾಮಿನೀಯಳ ಕಾಮುಕತನದಿಂದ ಕಾಮಿಸೇ ಕಾಮಾರಿಗಳೆಲ್ಲ ನೋಡಿ ಕಾಮಿಸುವರೈಕಾಮನಯ್ಯನಾ ಪ್ರೇಮದಿ ಕಾಂಬುವ ಯಾಮ ಯಾಮಕೆ ನಿನ್ನ ನಾಮ ಸ್ಮರಿಸುವಂತೆ ಮಾಡು ಕಾಮವಂದಿತ ತಂದೆವರದಗೋಪಾಲವಿಠ್ಠಲನ ತೋರೋ 5 ಜತೆ :ಭೀತಿಯಾ ಬಿಡಿಪಾ ದಾತಾನು ನೀನಯ್ಯ ಭೂತ ವಂದಿತ ತಂದೆವರದಗೋಪಾಲವಿಠಲನ ಭಜಕಾ 6
--------------
ತಂದೆವರದಗೋಪಾಲವಿಠಲರು
ಭೂತರಾಜರು ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೊಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ ಪ ಭಾವ ಶುದ್ಧದಿ ಓದಿ ಗ್ರಂಥಸಾರವಾ ವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ 1 ಅಷ್ಟ ಮಂದಿಯಾ ಅಮೃತವೃಷ್ಟಿಗರೆವರೂ ಶ್ರೀ ಕೃಷ್ಣಮಹಿಮೆಯ ತಾವು ಕೂಡಿ ಪಾಡೊರೊ2 ತಂದೆ ಎಂಬೊದೂ ತಾನು ಒಂದನರಿಯದೆ ನಿಂದೆ ಮಾಡಿ ತಾನೆ ಬಲುಕುಂದಿಗಳುಕುವಾ 3 ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂ ಸಿಟ್ಟಿನಿಂದ ಬೈದು ಬಹು ಕಷ್ಟಬಡುವನೊ 4 ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು ವ್ಯರ್ಥ ನೀನು ದಂಡಕಳುಕುವಿ 5 ಏನು ಪೇಳಲಿ ಇನ್ನೇನು ಹೇಳಲೀಜ್ಞಾನ ಶೂನ್ಯನಂತೆ ಶಿಕ್ಕಿ ನುಡಿಯ ಬ್ಯಾಡೆಲೋ 6 ಖುಲ್ಲ ಕೇಳೆಲೋ ಎಲೋ ಘಲ್ಲ ತೊಡದಿರೋನಿಗಮವೆಲ್ಲ ಪೇಳಿಸುವಾ ಕಲ್ಲಿನಿಂದಲೇ 7 ಶರಣು ಪೊಕ್ಕೆನೊ ಸ್ವಾಮಿ ಮರೆಯ ಪೊಕ್ಕೆನೊ ಕರುಣ ಮಾಡಿರೀ ಕಂಣು ತೆರೆದು ನೋಡಿರೀ 8 ಪಾದ ಸೋಂಕಲೂ9 ಭೀತಿಗೊಳಿಸುತಾನೇಕ ಭೂತ ಪ್ರೇತಕೇರಾಜನಾಗಿ ನೀನು ಭೂತ ಪ್ರೇತ ಗಣದೊಳು 10 ನಂದಿವಾಹನಾಪದಕೆ ಮುಂದೆ ಬಾಹುವೀ ಯನ್ನ ಕಂದ ನೀನು ನಾನೇ ಭಾವಿ ಮಂದಜಾಸನಾ 11 ಪಂಚವೃಂದದೀ ಸದ್ವøಂದ ಪೂಜ್ಯನಾ ದ್ವಂದ್ವ ಪೊಂದಿ ತಾನು ಸ್ವಾನಂದ ಪಡೆದನೂ 12 ಸ್ವಾದಿನಿಲಯನಾ ಬಲು ಪ್ರೀತಿ ಪಡೆದು ತಾ ತ್ರಿಶೂಲ ಧರಿಸಿದಾ ಭಾವಿ ಶೂಲ ರಮಣನೂ 13 ರೇಣು ಪಾದ ಫಣಿಯಲೀ ಪ್ರಾಣಿನಿಡದನಾ ಅವನ ಪ್ರಾಣ ಸೆಳೆವನಾ14 ಎಂತು ಪೇಳಲೀ ಇವರ ಅಚಿಂತ್ಯಮಹಿಮೆಯಾ ಶಾಂತಮೂರುತಿ ಶಶಿಕಾಂತ ಕೀರುತೀ15 ದೂಷಜನರನಾ ಬಲು ಘಾಸಿಗೊಳಿಸಿದಾ ಶಕ್ತಿದಾಯಕ ತಂದೆವರದಗೋಪಾಲವಿಠಲನು 16
--------------
ತಂದೆವರದಗೋಪಾಲವಿಠಲರು
ಭೂತರಾಜರು ಭೀತಿಯನ್ನು ಬಿಡಿಸು ಬೇಗ ಭೂತರಾಜನೆ ಪ. ಭಕ್ತಿಯಿಂದ ಬಾಗಿ ನಮಿಪೆ ಖ್ಯಾತಿವಂತನೆ ಅ.ಪ. ಕಾಮಬಾಣ ಕಡಿಮೆ ಮಾಡು ಭಾರಿಕಾಮಹರನೆರಾಮಧ್ಯಾನಿ ನೀಡು ವಾಮನ ದೇವನೇ 1 ಸಾರ ತಿಳುಹು ಗರಳಧಾರಿಯೇಕರವ ಮುಗಿದು ಬೇಡುವೆನು ತ್ವರಿತದಿಂದಲಿ 2 ತಂದೆವರದವಿಠಲನ್ನ ಹೃನ್ಮಂದಿರದೋಳ್‍ಛಂದದಿಂದ ತಂದು ತೋರೋ ಇಂದುಶೇಖರ 3
--------------
ಸಿರಿಗುರುತಂದೆವರದವಿಠಲರು
ಭೂತರಾಜರು ಭೂತರಾಜ, ಭೂತರಾಜ, ಭೂತರಾಜ ಜೈ ಜೈ ಜೈ ಪ ಭಾವಿರುದ್ರ ಜೈ ಜೈ ಜೈ ಅ.ಪ. ವಿನುತ ಗುರುವಿನಲ್ಲಿ ಮುನಿಗೆ ಜೈ ಜೈ ಜೈ 1 ಹರಿಯ ಮುಖಜರನ್ನು ಬಹಳ, ಜರಿದು ಜರಿದು ಗರ್ವ ದಿಂದ | ಬೊಮ್ಮರಕ್ಕಸ ಜೈ ಜೈ ಜೈ 2 ಘೋರ ಅಡವಿ ಸೇರಿ ಭರದಿ, ದಾರಿಯಲ್ಲಿ ಬಂದ ಜನರ | ಸೊರೆಕೊಂಡು ಮಾನಧನವ, ಕ್ರೂರನೆಂದು ಕರಸಿ ಕೊಂಡೆ3 ಜ್ಞಾನ ಪೂರ್ಣ ಗುರುವಿನೊಡನೆ, ಮಾನವಾದ ಪಕ್ಷಗೈದೆ4 ಶರಧಿ ವಾದಿರಾಜ, ಭರದಿ ಹರಿಸಿ ಕೀಳು ಜನ್ಮ | ಚರಣ ಭಜಿಪ ಭಾಗ್ಯಕೊಡಲು, ಮೆರದೆ ಭೂತರಾಜ ನೆನಿಸಿ |5 ಕ್ಷಮಿಸನೇನು ಸುತನಪಿತನು, ನಮಿಸಿ ನಿಂತ ನಿನಗೆ ನುಡಿದ | ಸುಖದಿ ಬಾಳೆಂದು6 ಗಾತ್ರ ಕೆಂಪು ನೇತ್ರ | ಚಾರು ವಡವೆ ಗಣವ ಧರಿಸಿ, ವೀರ ರೂಪದಿಂದ ಮೆರೆವೆ 7 ಹಾರಿ ಹೋಗಿ ಧನಪನೆಡೆಗೆ, ತೋರಿ ನಿನ್ನಶೌರ್ಯ ಪಡದು | ಭಾರಿ ರತ್ನ ಮಕುಟ ನುತಿಸಿ, ನೇರ ಶಿರದಲಿಟ್ಟೆ ಗುರುವಿಗೆ 8 ಪಥದಿ ಖಳನ ಕೊಂದು ಬೇಗ ರಥ ಸಮೇತ ಬದರಿಯಿಂದ ಪೃಥಿವಿ ಅಳೆದೆ ದೊರೆಯತಂದು, ವಿತತ ಮಹಿಮ ದುಷ್ಠದಮನ 9 ಕ್ಷೇತ್ರಪಾಲ ಶರಣು ಭಾವಿಸೂತ್ರ ವಲಿಯ ಬಿಡಲು ನಿನ್ನ ಗಾತ್ರಕೆಡಹಿ ಬೇಡಿ ಕೊಂಬೆ, ನೇತ್ರ ನೀಡೊ ಹರಿಯ ಕಾಂಬ ಜೈ10 ಕಳೆದು ಬೇಗ ಹೊಲಸು ಮನವ, ಬೆಳಿಸಿ ಹರಿಯ ದೃಢಸುಭಕ್ತಿ ಕಲಿಯ ತುಳಿವ ಶಕ್ತಿ ನೀಡಿ, ಕಲಸೊ ಸಾಧುಸಂಗ ಜೀಯ, ಜೈ11 ಭಂಗ ಗೈದು ನಿಂತೆ ಅಲ್ಲ ಲಿಂಗ ತಂದೆ ಕದರಿಯಿಂದ, ತುಂಗ ಮಹಿಮ ಮಂಗಳಾಂಗ ಜೈ12 ಕುಣಿದು ಮುದದಿ ಭಜಿಪೆ ಗರಳ ಕಂಠ ಭಾವಿ ಶರಣು, ಚರಣ ಪಿಡಿವೆ ಸ್ತೋತ್ರಪ್ರೀಯ ಜೈ13 ವೈರಿ ವೃಂದ ಮೋದ ಕೊಡಿಸು ತಿರ್ಪೆಭೂಪ |ಜೈ14 ರಾಜ ಬಿರುದು ಸಹಿತ ಭಾರಿ | ವಾಜಿ ಏರಿ ನಡೆಯೆ ವಾದಿ ಅಳಿಯೆ ಸಿಗದು ಜೈ 15 ವಂದು ಕಮ್ಮಿ ನಾಲ್ಕು ಹತ್ತು, ತಂದೆ ವಿಧಿಯ ಕಲ್ಪಗಳಲಿ | ಇಂದು ಉಂಬೆ ದಿವ್ಯ ಪದವಿ16 ಭೀತಿ ಕರವು ನಿನ್ನ ರೂಪ, ವ್ರಾತ್ಯಗಣಕೆ ವಾದಿ ರಾಜ | ದೂತ ನಿನಗೆ ಪ್ರತಿಯ ಕಾಣೆ, ಪ್ರೀತಿ ಸುರಿಸು ಭೃತ್ಯರೆಮಗೆ ಜೈ17 ರಾಜ ರೆಡೆಯ ಬಲದಿ ನೆಲಸಿ, ರಾಜ ಮಂತ್ರಿ ಕೆಲಸ ನಡೆಸಿ ಸೂಜಿ ತಪ್ಪಿಗೆಡೆಯ ಕೊಡದೆ, ರಾಜ ಕ್ಷೇತ್ರ ಕಾಯುತಿರ್ಪೆ ಬೈ18 ಕರ್ಣ ಗುಂಪು, ನಿನ್ನ ಸ್ತುತಿ ಸೇವಿಸುವರು | ದೊಣ್ಣಿ ಸೇವೆ ದುಡುಕಿ ದವಗೆ, ಚಿಣ್ಣರೆಂದು ತಪ್ಪ ಕ್ಷಮಿಸು ಜೈ19 ಚಿತ್ರ ವೈಯ ನಿನ್ನ ಚರಿತೆ, ಭಕ್ತರಿಂದ ಕೊಂಡು ಹರಿಕೆ ಕಿತ್ತು ವಗೆದು ವಿವಿಧ ದೋಷ, ಎತ್ತಿ ಕೊಡುವೆ ಕಾಮಿತಾರ್ಥಜೈ20 ಭೂತ ಪ್ರೇತ ಬಾಧೆ ಸಕಲ, ಆರ್ತಿನಾಶ ಪದವ ಪಠಿಸೆ | ನಲಿವ ಜೈ ಜೈ ಜೈ 21
--------------
ಕೃಷ್ಣವಿಠಲದಾಸರು
ಭೂಷಣ ಮಾಡಲು ಹಿಗ್ಗೇನೋ ಜನ ದೂಷಣಮಾಡಲು ದು:ಖೇನೋ ಪ ದೋಷನಾಶ ಜಗದೀಶ ಕೇಶ ತನ್ನ ದಾಸರಭಿಮಾನ್ಯೆಂದು ಶಾಶ್ವತರಿತವರಿಗೆ ಅ.ಪ ವಂದನೆಮಾಡಿ ಕೊಡುತಿಹ್ಯರೇನೋ ಮತ್ತು ನಿಂದೆಯನಾಡಿ ಕಸುಕೊಳ್ಳುವರೇನೋ ನಿಂದೆವಂದನಗಳೊಂದೇಯೆಂದು ಆ ನಂದನಕಂದನ್ನಾನಂದದಿ ಭಜಿಪರ್ಗೆ 1 ಸತಿಸುತರೊಲಿದರೆ ಬಂತೇನೋ ಮತ್ತು ಹಿತದಪ್ಪಿ ನಡೆದರೆ ಹೋಯ್ತೇನೋ ಗತಿಪ ಕ್ಷತಿಯ ಹಿತಾಹಿತಸ್ಥಿತಿ ಸಮವೆಂದು ಪತಿತಪಾವನ ಸತತದಿ ನುತಿಪರ್ಗೆ 2 ನೀತಿವಂತನೆನೆ ಬಂದ ಭಾಗ್ಯೇನೋ ಜಗ ಪಾತಕನೆನೆ ಬಂದ ಕುಂದೇನೋ ಪಾತಕಹರ ಭವಭೀತಿವಿನಾಶ ಜಗ ನ್ನಾಥ ಶ್ರೀರಾಮನ ಪ್ರೀತಿ ಪಡೆದವರಿಗೆ 3
--------------
ರಾಮದಾಸರು
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ
ಮಧ್ವರಾಯರಿಗೆ ನಮೋ ನಮೋ ಪ ಮಾಯವಾದಿಗಳ ಮತವ ಸೋಲಿಸಿ ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ ಅ.ಪ ದೈತ್ಯ ರಾವಣಗೆ ಹಲವು ಭೀತಿ ತೋರಿಸಿ ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು 1 ಮಂದ ಜರಾಸಂಧನಂಗವ ಸೀಳಿ ತಂದ ಕಪ್ಪವನ್ನು ಬಂದು ಧರ್ಮಗಿತ್ತ 2 ಕುಜನಾದಿಗಳ ನಿಜವಚನದಿ ಸೋಲಿಸಿ ವಿಜಯ ರಾಮಚಂದ್ರವಿಠಲ ಸರ್ವೋತ್ತಮನೆನಸಿದ 3
--------------
ವಿಜಯ ರಾಮಚಂದ್ರವಿಠಲ
ಮರೆಯದೆ ಸಲಹೊ ಮಾರುತೀಶ ಎನ್ನ ಶರಣೆಂಬೆನು ನಿನ್ನ ಪ ಶರಣಾಗತರನು ಬಿಡದೆ ಪೊರೆವ ಫನ್ನ- ಗಿರಿ ಅಂಜನೆತನಯಅ.ಪ ವನನದಿಗಿರಿಗುಹೆಗಳಲಿ ನಿನ್ನ ರೂಪ ತೋರುವುದೈ ಭೂಪ ಶರಧಿ ಲಂಘಿಸಿ ರಾವಣನಿಗೆ ತಾಪ ಪುಟ್ಟಿಸಿದೆಯೊ ರಘುಪ- ನಡಿಗಳ ಬಿಡದೆ ಸೇವಿಸುವರ ಪಾಪ ಮಾಡುವಿ ನಿರ್ಲೇಪ ಸಡಗರದಲಿ ನಿನ್ನೊಡೆಯನ ತೋರಪ್ಪ ಘನಗಿರಿ ಹನುಮಪ್ಪ 1 ಊರಿನಲಿ ಊರ್ಹೊರಗು ನಿನ್ನ ಮೂರ್ತಿ ಎಷ್ಟ್ಹೇಳಲಿ ಕೀರ್ತಿ ಪಾಡುತ ಪೊಗಳ್ವರು ನಿನ್ನಯ ಸತ್ಕೀರ್ತಿ ವರ್ಣಿಸುವುದೆ ಅರ್ಥಿ ಪಾಮರನೊಮ್ಮೆ ಪಾಡಲು ನಿನ್ನ ವಾರ್ತೆ ಪರಿಹಾರವೋ ಭೀತಿ ನಾಡೊಳು ನಿನ್ನ ಭಜಿಸುವವರ ಸಂಗ ನೀಡು ಕೃಪಾಪಾಂಗ2 ಕಡಲ ಶಯನನ ಅಡಿಗಳ ಸೇವಿಸುತ ಕಡುಹರುಷವ ಪಡುತ ಬಿಡದೆ ನಿನ್ನಯ ಸೇವಕರಿವರೆನುತ ಶ್ರೀಶಗೆ ಪೇಳುತ್ತ ಕೊಡಿಸುವಿ ಮುಕ್ತಿಯ ಧೃಡಭಕ್ತರಿಗೆ ಸತತ ರಾಮರ ಸ್ಮರಿಸುತ್ತ ಕಮಲನಾಭ ವಿಠ್ಠಲನನು ಸೇವಿಸುತಭಕ್ತರ ಸಲಹುತ್ತ3
--------------
ನಿಡಗುರುಕಿ ಜೀವೂಬಾಯಿ