ಒಟ್ಟು 103 ಕಡೆಗಳಲ್ಲಿ , 38 ದಾಸರು , 97 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೈದ್ಯವ ನಾನರಿಯೆ - ಭವರೋಗದ-|ವೈದ್ಯ ನೀನೆ ಹರಿಯೆ ಪನೀ ದಯದಿಂದೆನ್ನ ರಕ್ಷಿಸು-ಆದಿವೈದ್ಯ ಮುನ್ನ |ಪಾದೋದಕವನು ಎನಗೆ ಕೊಡಿಸು ಸರ್ವ-||ವ್ಯಾಧಿನಿವಾರಣ ಕಷಾಯ ನೀ ಕೊಡು 1ಹರಿನಿನ್ನ ಕರುಣವೆಂಬ-ಸ್ಮರಣೆಯ |ತ್ವರಿತ ಙ್ಞÕನದಿಂದ ||ಉರುತರ ಮಹಾತ್ಮೆಯ ಎನಗೆ ಕೊಡಿಸು ಸರ್ವ ||ದುರಿತನಿವಾರಣ ಕಷಾಯ ನೀ ಕೊಡು 2ಕೃಷ್ಣ ನೀ ಕೃಪೆವಿಡಿದು-ಕಪಟದ-|ಉಷ್ಣವಾಯುವಳಿದು ||ವಿಷ್ಣುಶಕ್ತಿಯೆಂದ ಅಭಯವ ಎನಗಿತ್ತು |ಇಷ್ಟವ ಸಲಿಸುವ ತೃಪ್ತಿಪಡಿಸುವಂಥ 3ನಿನ್ನ ದಾಸ ನಾನು-ದುರಿತಗ-|ಸಳೆನ್ನ ಕಾಡುವುವೇನು ||ಚೆನ್ನಾಗಿ ಕಾಯಕೆ ಶಕ್ತಿಯನಿತ್ತು ದೃಢ-|ವನ್ನು ಮಾಡಿ ಶ್ರೀಹರಿ ಸಲಹೆನ್ನನು 4ಪಂಡಿತದಯಾಸಿಂಧು-ಕಾಡುವ-|ಪಾಂಡುರೋಗ ಕೊಂದು ||ಪುಂಡರೀಕಾಕ್ಷಶ್ರೀಪುರಂದರವಿಠಲ ಅ-|ಖಂಡಮೂರುತಿ ಶ್ರೀಹರಿ ಸಲಹೆನ್ನನು 5
--------------
ಪುರಂದರದಾಸರು
ಶ್ರೀ ವಿಷ್ಣುಮಹಿಮೆ ಸಂಕೀರ್ತನೆ ಸರ್ವದಾ ವಿಸ್ಮøತಿಯನೀಗಿಮಾಡಿ ವೈಷ್ಣವರುಪ.ಪುಣ್ಯಮಾರ್ಗವನರಿಯದ ಮೂಢರಿಗೆಉನ್ನತಕುಟಿಲಪಾಮರಮನುಜರಿಗೆಘನ್ನ ಸಾಧನವಿದೆ ಮತ್ತೊಂದು ಕಾಣೆಪುಣ್ಯಶ್ಲೋಕನ ವಾರ್ತೆ ಕೀರ್ತನೆಯ ಪಠನೆ 1ಜನ್ಮ ಮರಣವಿಲ್ಲ ಅವ ಜೀವನ್ಮುಕ್ತಧನ್ಯ ವಿಶುದ್ಧಾತ್ಮ ನಿಜ ಹರಿಭಕ್ತಚಿನ್ಮಯಾಚ್ಯುತನ ಚಾರಿತ್ರ್ಯವಿಸ್ತರವವರ್ಣವರ್ಣಂಗಳಿಂದೆ ಪಾಡಿ ನಲಿಯುತ 2ಧರ್ಮ ಸುಮಾರ್ಗವರ್ಜಿತ ಕಲಿಯುಗದಿನಿರ್ಮಲಮನ ಹೊಂದಲೀಸದ ಭವದಿಧರ್ಮಪ್ರಭು ಶ್ರೀ ಹರಿಗುಣಕೀರ್ತನೆಉಮ್ಮಯದಲಿ ಮಾಡುವುದು ಹರಿಪ್ರಾರ್ಥನೆ 3ನಿರುತ ವಿಶುದ್ಧಾಂತರಾತ್ಮ ಶ್ರೀಹರಿಗೆಗುರುಸುಖತೀರ್ಥರ ತೀರ್ಥಜೀವರಿಗೆಹರಿಹರಿಹರಿಎಂದು ಕೂಗಿ ಬಾಳ್ವರಿಗೆ4ಅಘೋರ ಯಮಮಾರ್ಗ ನರಕ ಶ್ರೀಮದ್ಗರುಡಧ್ವಜ ನಾರಾಯಣಾಪವರ್ಗರಾಮ ರಾಮ ರಾಮ ರಾಮ ರಾಮನೆಂಬನಾಮಪಾಠಕರಿಗೆ ಸ್ವಪ್ನದಿ ವಜ್ರ್ಯ 5ಹೃದಯದಿ ಹರಿರೂಪ ಮುಖದಿ ಸದ್ಗಾನಉದರದಿ ನೈವೇದ್ಯ ಶಿರದಿ ನಿರ್ಮಾಲ್ಯಸುದರ್ಶನಶಂಖಾಂಕಿತ ಭುಜದವರಿಗೆಪದ್ಮನಾಭನ ನಾಮಕೀರ್ತನೆಕೈವಲ್ಯ6ಶತಕೋಟಿ ರಾಮಾಯಣ ಕೀರ್ತನೆ ಹನುಮಂತಯತಿ ಶುಕಾಚಾರ್ಯ ಭಾಗವತಶಾಸ್ತ್ರಸತತ ನಾರದದೇವ ಮುನಿತತಿ ನೃಪರೆಲ್ಲರತಿಪತಿಪಿತನ ಪೊಗಳಿ ಮುಕ್ತಾಗಿಹರು 7ಕಲಿಕಾಲದಲಿ ಕೇಶವಗೆ ಪ್ರಿಯ ಕೀರ್ತನೆಲಲಿತಸಾಧನವೆನಿಪುದೀ ಕೀರ್ತನೆಬಲುಶ್ರುತಿಮಥಿತಾರ್ಥಸಾರವೆ ಕೀರ್ತನೆಹುಲುಮಾನವರಿಗೆ ದೂರವು ಹರಿಕೀರ್ತನೆ 8ಭವರೋಗಭೇಷಜಹರಿನಾಮಕೀರ್ತನೆಭವವಾರ್ಧಿಪೋತ ಭವಾಟವಾಗ್ನಿಭವವಿಧಿಕೀರ್ತಿತಪದ ಪ್ರಸನ್ವೆಂಕಟಭವನದಾಸರು ಸವಿದುಂಬಾಮೃತವು 9
--------------
ಪ್ರಸನ್ನವೆಂಕಟದಾಸರು
ಶ್ರೀಕರ ಯದುಕುಲಶೇಖರ ದೇಹಿಲೋಕನಾಥ ದಾಸಲೋಲ ಮಾಂಪಾಹಿಪಶ್ರೀ ಮುರಳೀಧರಸಿಂಧುಗಂಭೀರಶ್ಯಾಮಸುಂದರ ಗೋಪೀಜಾರ ಯದುವೀರ 1ರುಕ್ಮಾಂಬರಧರ ರುಕ್ಮಗಿರೀಶಾರುಕ್ಮಿಣೀಧವ ಭವರೋಗ ವಿನಾಶಾ 2ಮಣಿಮಯ ಭೂಷಣ ಮಷಕಪುರೀಶಾಗುಣನಿಧಿ ಶ್ರೀವೇಣುಗೋಪಾಲ ಶ್ರೀಶಾ 3ಮಾರಜನಕಸುಕುಮಾರ ದಶವೇಷಾಧಾರುಣಿ ಶ್ರೀ ತುಲಸೀದಾಸ ಸುಪೋಷ 4
--------------
ತುಳಸೀರಾಮದಾಸರು
ಸಕಲ ಗ್ರಹಬಲ ನೀನೆ ಸರಸಿಜಾಕ್ಷ |ನಿಖಿಳವೇತಕೆ ಎನಗೆ ವಿಶ್ವವ್ಯಾಪಕ ಮೋಹಿ ಪರವಿಚಂದ್ರಬುಧನೀನೆರಾಹುಕೇತುವು ನೀನೆಕವಿಗುರುವು ಶನಿಯು ಮಂಗಳನು ನೀನೆ ||ದಿವಸ ರಾತ್ರಿಯು ನೀನೆ ನವವಿಧಾನವು ನೀನೆಭವರೋಗಹರ ನೀನೆ ರಕ್ಷಕನು ನೀನೆ 1ಪಕ್ಷಮಾಸವು ನೀನೆ ಪರ್ವಕಾಲವು ನೀನೆನಕ್ಷತ್ರಯೋಗ ಕರಣಗಳು ನೀನೆ ||ಅಕ್ಷಯವೆಂದು ದ್ರೌಪದಿಯಮಾನವಕಾಯ್ದಪಕ್ಷಿವಾಹನ ದೀನ ರಕ್ಷಕನು ನೀನೆ 2ಋತು ಕಾಲಗಳು ನೀನೆ ವ್ರತದಿನಂಗಳು ನೀನೆಕ್ರತುವುಸಂಧ್ಯಾನಸದ್ಗತಿಯು ನೀನೆಜಿತವಾಗಿ ಎನ್ನೊಡೆಯಪುರಂದರವಿಠಲನೆಶ್ರುತಿಗೆ ನಿಲುಕದ ಮಹ್ಮಾತ್ಮನು ಹರಿಯು ನೀನೆ 3
--------------
ಪುರಂದರದಾಸರು
ಹರಿಯೆ ಗತಿಯೆನ್ನಿರೈ ಶ್ರೀನರಹರಿಯೆ ಶರಣೆನ್ನಿರೈ ಪ.ಹರಿಪಾದಕಮಲವ ನಂಬದ ಮೂಢನು ಮನುಜನಲ್ಲದನುಜಶ್ರೀಹರಿಚರಿತಾಮೃತ ಕೇಳದೆ ಗರ್ವಿಪ ನರನು ಪಾಮರನÀು 1ಹರಿಯ ಬಂಟರ ಅನುಸರಣೆಗಳ ಪರಿತ್ಯಾಗಿ ವೃದ್ಧಗೂಗಿಹರಿಮಹಿಮೆಯ ಹೊಗಳಾಡದ ಮಾತಿನ ಮುಖನು ಮಂಡೂಕನು 2ಕೃಷ್ಣಗೆ ಪ್ರಿಯವ್ರತ ದಾನಕೆ ವಿಮುಖಾದ ಧನಪನವ ಕುಣಪಕೃಷ್ಣಾಕೃತಿಯ ಬಹಿರಂತದಿ ನೋಡದ ಜಾಣನವ ಕೋಣ 3ಕೃಷ್ಣಗೆ ನಮಿಸದೆಸತಿಸುತರೊಳು ಭೂರಿತುಷ್ಟ ಹಿತನಷ್ಟ ಶ್ರೀಕೃಷ್ಣನವರ ಕಂಡೆರಗದ ವಿಷಯದಭೋಗಿಭವರೋಗಿ4ಗೋವಿಂದ ಸರ್ವೋತ್ತಮನಿರೆ ಬೇರೆಂಬಜ್ಞಾನಿ ಮದ್ಯಪಾನಿಗೋವಿಂದನೊಳು ವಿಶ್ವಾಸಿಲ್ಲದ ಭಕ್ತಿಯ ಧೀರ ಶುದ್ಧಜಾರ5ಗೋವಿಂದ ತೀರ್ಥ ಪ್ರಸಾದÀವ ನರಿಯದ ಬಲ್ಲನೆ ಕಳ್ಳನುಗೋವಿಂದನೊಪ್ಪದ ಮತವಿಡಿದವ ಮಹಿಗೆಕಕ್ಕಸರಕ್ಕಸ6ಪ್ರಸನ್ನ ಮೂರುತಿ ವಿಧಿಭವವಂದ್ಯನ ಅರ್ಚಕ ಧನ್ಯರೆ ಮಾನ್ಯರುಪ್ರಸನ್ನವೆಂಕಟಪತಿ ಕಂಡುಂಡಾ ಭಕ್ತಿಯಾಸಕ್ತರೆ ಮುಕ್ತರು 7
--------------
ಪ್ರಸನ್ನವೆಂಕಟದಾಸರು
ಹರಿಯೆನ್ನಬಾರದೆಜಿಹ್ವೆವಾರಂವಾರಪ.ಪರಗತಿ ಮಾರ್ಗವು ದುರಿತವನಾಗ್ನಿಯುಪರಿಪರಿಭವರೋಗಕೌಷಧಅ.ಪ.ಉರಿವ ಕಾಳಕೂಟ ಕಂಠದಿ ದಹಿಸಲುಹರಿನಾಮ ಹರನ ಕಾಯ್ತುಕರಿಉರಗವಿಷಾಗ್ನಿ ಶಸ್ತ್ರ ಭಯದಲಿಹರಿನಾಮ ಶಿಶುವ ಕಾಯ್ತುಶರಧಿಲಿ ನಕ್ಕರ ಚರಣವ ಕಚ್ಚಿ ಬರೆಹರಿನಾಮ ಕರಿಯ ಕಾಯ್ತುನಿರಯನಿವಾಸರಸುರಋಷಿಮುಖದಿಂದಹರಿನಾಮ ಎಲ್ಲರ ಕಾಯ್ತು 1ಹಿರಿಯರ ನಿಕ್ಕರ ನುಡಿಯಿಂದಡವಿಲಿರೆಹರಿನಾಮ ಧ್ರುವನ ಕಾಯ್ತುಕುರುಕಂಟಕರುÀ ಅಭಿಮಾನವ ಕೊಳುತಿರೆಹರಿನಾಮ ಸತಿಯ ಕಾಯ್ತುಮರಳೊಮ್ಮೆ ದುರ್ವಾಸ ದ್ರೌಪದಿಗುಣಬೇಡೆಹರಿನಾಮ ಇರುಳೆ ಕಾಯ್ತುಗುರುಪುತ್ರನುರಿಬಾಣದುರವಣೆಗಡ್ಡಾಂತುಹರಿನಾಮ ಭ್ರೂಣವ ಕಾಯ್ತು 2ವರಬಲದಿಂದಲ್ಲಿ ಅಸುರರು ನೋಯಿಸಲುಹರಿನಾಮ ಸುರರ ಕಾಯ್ತುಚಿರಪಾಪ ಭವಯಾತ್ರೆ ಘಟಿಸಲು ತುದಿಯಲಿಹರಿನಾಮ ಭಟರ ಕಾಯ್ತುಶರಣರ ಮಹಿಮೆಯಂತಿರಲಿ ಅಪಮರಣದಿಹರಿನಾಮ ನನ್ನ ಕಾಯ್ತುಗುರುಮಧ್ವವರದ ಪ್ರಸನ್ವೆಂಕಟೇಶ ಶ್ರೀಹರಿನಾಮಗತಿಎನ್ನೆ ಕಾಯ್ತು3
--------------
ಪ್ರಸನ್ನವೆಂಕಟದಾಸರು
ಹ್ಯಾಗಾಹದು ಭವರೋಗಿಗಾರೋಗ್ಯಮ್ಯಾಗೆ ಮ್ಯಾಗಪಥÀ್ಯವಾಗುತಿದೆ ಕೃಷ್ಣ ಪ.ಗುಜ್ಜುಗಿರಿವ ಆಶಾಲಕ್ಷಣ ಚಳಿಲಜ್ಜೆಗೆಡಿಸುತಿವೆ ಗದಗದಿಸಿವಜ್ಜರಹೊದಪಿಲಿ ನಿಲವು ಕುಶಾಸ್ತ್ತ್ರದಗಜ್ಜರಿಕಾಯಿ ದಣಿಯೆ ಮೆಲುವವಗೆ 1ಮೊರಮೊರಸು ಮೂರ್ಪರಿ ಜ್ವರ ದಾಹದಿನಿರಸನ ರಸನಾಯಿತಿದರೊಳಗೆಅರಿಕಿಲ್ಲದಹ ಗಾರಿಗೆ ಕಾಮನಹರಿಬದನೆಕಾಯುಂಬುವಗೆ 2ಕಾಮಿನಿನೋಟದ ಕಾಮಾಲೆಯಾಯಿತುನೇಮದಿ ಸೊಬ್ಬೇರಿತು ಮೈಯಪ್ರೇಮದ ಚಕ್ಷುದೋಷ್ಯಾತರಲೈದದುಕಾಮತಪ್ತ ವರೇಣ್ಯವಗೆ 3ನಮ್ಮದು ನಮ್ಮದು ಕೋ ಕೋ ಎನ್ನುತಕೆಮ್ಮಿಗೆ ಖುಳಖುಳಸಿತುಕಾಯಹಮ್ಮುಗಳಕ್ಕರೆಯ ಖಣಿಯಾದ ಉಳ್ಳಿಯಹೆಮ್ಮೂಲಂಗಿಯ ತಿನುವವಗೆ 4ಜಗಸಟೆಯೆಂಬಗೆ ಸಂಗ್ರಹಣಿಯು ಅವನಿಗೆ ಪಾಂಡಿತ್ಯ ಪಾಂಡುರೋಗವಿಗಡಕುತರ್ಕ ಚಿಕಿತ್ಸದಿ ನೂಕುನುಗ್ಗೆ ತೊಂಡೆಕಾಯಿ ಸವಿವವಗೆ 5ಅಂಜದೆ ಸಲ್ಲದ ನಿಷಿಧಗÀಳುಂಡರೆನಂಜೇರದೆ ಬಿಡುವುದೆ ಬಳಿಕಾಕಂಜಾಕ್ಷನ ಬಿಟ್ಟಿತರ ಸುರಾಸುರರೆಂಜಲು ಮೈಲಿಗೆ ಬಿಡದವಗೆ 6ಹೃದ್ರೋಗವು ಹೋಗುವುದೆ ನಿಂಬ ಹರಿದ್ರದ ಹುಡಿ ತಲೆಗೊತ್ತಿದರೆನಿದ್ರಿಲ್ಲದೆಕರಪಂಜಲಿ ಕುಣಿದರೆರುದ್ರದುರಿತಹೊಡೆಯದೆ ಬಿಡುವುದೆ7ಇಂತೆ ದಿನಾಂತರ ಕ್ಷಯ ಮೇಲಿಕ್ಕಿತ್ತುಅಂತ್ಯೌಪದ ಯಮಪುರದೊಳಗೆಎಂತಾದರೆ ಮಾಡಿಸಿ ಕೊಂಡಳುತಿಹಭ್ರಾಂತ ಕಳಿಂಗದ ಪ್ರಿಯದವಗೆ 8ಮನ್ವಂತರ ಕಲ್ಪಾಂತರ ಈ ಕ್ಲೇಶಾನ್ವಯವೆಗ್ಗಳಭೋಗಿಸುತ ಪ್ರಸನ್ವೆಂಕಟಪತಿಗುರುಮಧ್ವೇಶಧನ್ವಂತ್ರಿಯ ಪದ ವಿಮುಖನಿಗೆ 9
--------------
ಪ್ರಸನ್ನವೆಂಕಟದಾಸರು