ಒಟ್ಟು 106 ಕಡೆಗಳಲ್ಲಿ , 38 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಣಿಯ ನೋಡಿದೆನೋ ವೆಂಕಟನ ಮನದಣಿಯೆ ನೋಡಿದೆ ಶಿಖಾಮಣಿಯ ನಿರ್ಮಲನ ಪಕೇಸಕ್ಕಿಅನ್ನ ಉಂಬುವನ ದುಡ್ಡುಕಾಸು ಬಿಡದೆ ಹೊನ್ನುಗಳಿಸಿಕೊಂಬುವನ ||ದೋಸೆ ಅನ್ನವ ಮಾರಿಸುವನತನ್ನ ದಾಸರ ಮೇಳದಿ ಕುಣಿದಾಡುತಿಹನ 1ಗಂಟಿನೊಲ್ಲಿಯ ಹೊದ್ದಿಹನ-ಹೊರಹೊಂಟು ಹೋಗಿ ಬೇಟೆಯಾಡುತಲಿಹನ ||ಗಂಟೆ ನಾದಕೆ ಒಲಿಯುವನ ಭೂವೈ-ಕುಂಠವಿದೆಂದು ಹಸ್ತವ ತೋರಿದವನ 2ಬೆಟ್ಟದೊಳಗೆ ಇದುತಿಹನ ಮನಮುಟ್ಟೆ ಭಜಿಪ ಭಕುತರಿಗೊಲಿದವನ ||ಕೊಟ್ಟ ವರವ ತಪ್ಪದವನ ಈಸೃಷ್ಟಿಗಧಿಕಪುರಂದರವಿಠಲನ3
--------------
ಪುರಂದರದಾಸರು
ದೃಷ್ಟಿ ನಿನ್ನ ಪಾದದಲ್ಲಿ ನೆಡುವ ಹಾಗೆ - ಧರೆಯದುಷ್ಟ ಜನರ ಸಂಗಗಳನು ಬಿಡುವ ಹಾಗೆ ಪ.ಕೆಟ್ಟ ಮಾತ ಕಿವಿಯಿಂದ ಕೇಳದ ಹಾಗೆ ಮನವಕಟ್ಟು ಸದಾ ನಿನ್ನ ಧ್ಯಾನ ಬಿಡದ ಹಾಗೆ ಅಪದೃಷ್ಟನಾಗಿ ಕೈಯನೆತ್ತಿ ಕೊಡುವ ಹಾಗೆ ಶ್ರೀಕೃಷ್ಣ ನಿನ್ನ ಪೂಜೆಯನ್ನು ಮಾಡುವ ಹಾಗೆ ||ಭ್ರಷ್ಟನಾಗಿ ನಾಲ್ವರೊಳು ತಿರುಗದ ಹಾಗೆ ಬಲುಶಿಷ್ಟ ಜನರ ಸೇವೆಯನು ಮಾಡುವ ಹಾಗೆ 1ಪುಟ್ಟಿಸಿದ ತಾಯಿ - ತಂದೆಯಲ್ಲವೆ ನೀನು - ಒಂದುಹೊಟ್ಟೆಗಾಗಿ ದೈನ್ಯ ಪಡಬೇಕೇ ನಾನು ||ಪಟ್ಟೆ -ಪಟ್ಟಾವಳಿ ಬೇಡಲಿಲ್ಲ ನಾನು ಎನ್ನಗುಟ್ಟು ಅಭಿಮಾನಗಳ ಕಾಯೋ ನೀನು2ನಟ್ಟನಡು ನೀರೊಳೀಸಲಾರೆ ನಾನು ಎತ್ತಿಕಟ್ಟೆಯ ಸೇರಿಸಬೇಕಯ್ಯ ನೀನು ||ಬೆಟ್ಟದಷ್ಟು ಪಾಪ ಹೊತ್ತಿರುವೆ ನಾನು ಅದನುಸುಟ್ಟು ಬಿಡುಪುರಂದರ ವಿಠಲ ನೀನು3
--------------
ಪುರಂದರದಾಸರು
ನಮೋ ನಮೋ ಕಾಲಭೈರವ ಹರಿಯ ಚರಣ-ಸಮೀಪದೊಳಗಿದ್ದು ಮೆರೆವ ಪ.ಸಮೀಚೀನಜ್ಞಾನಭಕ್ತ-ಸಮೂಹವಕಾವಲಕ್ಷ್ಮೀ-ರಮಣನ ಕಾರ್ಯಮಂತ್ರಿ-ಯು ಮಾಧವನ ಸಮಾನಬಲ ಅ.ಪ.ಬೆಟ್ಟದೊಡೆಯ ಶ್ರೀನಿವಾಸನ ಪಾದಕಮಲ-ಮುಟ್ಟಿ ಭಜಿಪ ವೈರಿಮರ್ದನಸೃಷ್ಟಿ ಮೂರರಲ್ಲಿ ಕೀರ್ತಿ-ಪಟ್ಟ ದಿಟ್ಟ ಧೀರಪರಮನಿಷ್ಠ ಪುಷ್ಪ ತುಷ್ಟಿಪ್ರದ ಬ-ಲಿಷ್ಠ ಶ್ರೇಷ್ಠ ಭೂತಪತಿಯೆ 1ಶ್ರೀನಿವಾಸನಾಜೆÕ ಮೀರದೆ ನಡೆಸುವದೆ ಪ್ರ-ಧಾನ ಕಾರ್ಯ ನಿನ್ನದೆಂಬುದೆತಾನು ಕಿಂಚಿದರಿತು ಸನ್ನಿ-ಧಾನವನ್ನೋಲೈಸಿ ಬಂದೆದೀನಬಂಧು ಸುಗುಣಸಿಂಧುಮಾನತ್ರಾಣವಿತ್ತು ಸಲಹೊ 2ಅಂತರಂಗದಲ್ಲಿ ಪ್ರಾರ್ಥನೆ-ಮಾಡಿದರೆಸ್ವಂತ ಬಂದುಮಾಡುರಕ್ಷಣೆಅಂತ್ಯಕಾಲದಲ್ಲಿ ಹರಿಯಚಿಂತನೆಗೆ ವಿಘ್ನ ಬಾರ-ದಂತೆಕಾವಮಹಾ ತೇಜೋ-ವಂತ ಹೊಂಕಾರಿಸೂರಿ3ಕಾಲಕಾಲದಲ್ಲಿ ಭಕ್ತರ ಮನೋಭೀಷ್ಟಪಾಲಿಸುವ ಚಂದ್ರಶೇಖರಖೂಳಜನರ ಗರ್ವಮುರಿವಶೂಲಪಾಣಿ ಸುಗುಣಶ್ರೇಣಿಮೂಲಪತಿಯ ಪಾದಪದ್ಮಮೂಲದೊಳಗೆ ನಲಿವ ಚೆಲುವ 4ತೋರಿಕೊಳ್ಳದೆಭೂರಿಮಹಿಮೆಯ ಭಕ್ತರಿಂಗಾ-ಧಾರವಾಗಿ ರಾಜಿಸಿರುವೆಯಧೀರ ಲಕ್ಷ್ಮೀನಾರಾಯಣನಸೇರಿದಾನತರ್ಗೆ ಮಂ-ದಾರಮಹೋದಾರ ಗಂ-ಭೀರ ಧೀರ ಚಾರುಚರಿತ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಮ್ಮಪ್ಪ ಸುಮ್ಮಗಿರೊ ಗೋಪಾಲಾ-|ಗುಮ್ಮನು ಎಳೆದೊಯ್ವನು ಪಎಡದ ಕೈಯಲಿ ಕಪಾಲ-ಗೋಪಾಲಾ-|ಬಲದ ಕೈಯಲಿ ತ್ರಿಶೂಲ ||ಚಳಿಬೆಟ್ಟದ ಹೆಣ್ಣ ಮೈಯೊಳಿಟ್ಟವನಂತೆ |ಅಲೆದು ಸ್ಮಶಾನವ ತಿರುಗುವನಂತೆ 1ಮೂರು ಕಣ್ಣಿನವನೊ-ಗೋಪಾಲಾ-|ಐದು ತಲೆಗಳವನೊ ||ದಾರಿಯ ಪೋಗುವ ನಾರಿಯನೆಳತಂದು |ಸೇರಿಸಿ ಶಿರದಲ್ಲಿ ಹೊತ್ತನೊ 2ಚಂದ್ರನರ್ಧವ ಪಿಡಿದು-ತಲೆಯ ಮೇಲೆ-ಚೆಂದಕಿಟ್ಟಿರುವನಂತೆ ||ಅಂದಗಾರನಂತೆ [ಅನಲನೇತ್ರನಂತೆ] |ಮುಂದಿಪ್ಪ ಹುಡುಗನ ಕೊಂದು ತಿಂದವನಂತೆ 3ನಿನ್ನ ಮಗನ ಮಗನೊ-ಗೋಪಾಲಾ-|ಪನ್ನಗಭೂಷಣನೋ ||ಧನ್ಯನಾಗಿ ಶ್ರೀರಾಮ ನಾಮವನು |ಚೆನ್ನಾಗಿ ಚಿಂತಿಪನೊ 4ಕರಿಯಜಿನ ಪೊತ್ತವನೊ ಗೋಪಾಲಾ-|ನೆರೆದ ಭೂತ ತಂದವನೊ ||ಶರಧಿಶಯನ ನಿನ್ನಚರಣಪಂಕಜಭೃಂಗ|ಪುರಂದರವಿಠಲ ಪನ್ನಂಗ ಶಯನನೆ 5
--------------
ಪುರಂದರದಾಸರು
ನಾರಾಯಣ ಎನ್ನಿರೊ - ಶ್ರೀ ನರಹರಿ |ನಾರಾಯಣ ಎನ್ನಿರೊ ಪ.ನಾರಾಯಣನೆಂದು ಅಜಮಿಳಕೈವಲ್ಯ |ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪಚೋರರ ಭಯ ಎಲ್ಲವೊ - ಇದಕೆ ನೋಡೈ - |ದಾರರಂಜಿಕೆ ಇಲ್ಲವೊ ||ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||ಘೋರ ಪಾತಕವೆಲ್ಲ ಹಾರಬಿಡುವುದಿದು 1ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |ಬೇಸತ್ತು ತಿರುಗಲೇಕೆ |ವಾಸುದೇವನ ನಾಮ ವರ್ಣಿಸಿದವರಿಗೆ |ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |ಮೌನ ಮಂತ್ರಗಳೇತಕೆ ||ದೀನರಕ್ಷಕ ಬೆಟ್ಟದೊಡೆಯನಾದವನ |ಧ್ಯಾನಕೆ ಸಮವುಂಟೆ ಪುರಂದರವಿಠಲನ 3
--------------
ಪುರಂದರದಾಸರು
ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿಧನ್ಯನಾದೆನು ಧರೆಯೊಳು ||ಇನ್ನು ಈಭವಭಯಕೆ ಅಂಜಲೇತಕೆ ದೇವಚೆನ್ನ ಶ್ರೀ ವೆಂಕಟೇಶಾ ಈಶಾ ಪಏಸುಜನುಮದಸುಕೃತಫಲವು ಬಂದೊದಗಿತೋಈ ಸ್ವಾಮಿ ಪುಷ್ಕರಣಿಯೊಳ್ನಾ ಸ್ನಾನವನು ಮಾಡಿವರಾಹದೇವರ ನೋಡಿಶ್ರೀ ಸ್ವಾಮಿ ಮಹಾದ್ವಾರಕೆಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿಲೇಸಿನಿಂದಲಿ ಪೊಗಳುತಆ ಸುವರ್ಣದ ಗರುಡ ಗಂಬವನು ಸುತ್ತಿ ಸಂತೋಷದಿಂ ಕೊಂಡಾಡಿದೆ ಬಿಡದೆ 1ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲುದಟ್ಟಣೆಯ ಮಹಾಜನದೊಳುಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂಗೆಟ್ಟು ಹರಿಹರಿಯೆನುತಲಿಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿಕಟ್ಟಂಜನಕೆ ಪೋಗುತಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆಸುಟ್ಟೆ ಎನ್ನಯ ದುರಿತವಾ-ದೇವಾ 2ಶಿರದಲಿ ರವಿಕೋಟಿ ತೇಜದಿಂದೆಸೆಯುವಕಿರೀಟವರಕುಂಡಲಗಳಕೊರಳಲ್ಲಿ ಸರವೈಜಯಂತಿವನಮಾಲೆಯನುಪರಿಪರಿಯ ಹಾರಗಳನುಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳವರನಾಭಿಮಾಣಿಕವನುನಿರುಪ ಮಣಿಖಚಿತಕಟಿಸೂತ್ರಪೀತಾಂಬರವಚರಣಯುಗದಂದುಗೆಯನು - ಇನ್ನು 3ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆಲಕ್ಷ್ಮೀಪತಿ ಕಮಲಾಕ್ಷನೆಅಕ್ಷತ್ರಯಅಜಸುರೇಂದ್ರಾದಿವಂದಿತನೆಸಾಕ್ಷಾಜ್ಜಗನ್ನಾಥನೇರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರಪೇಕ್ಷ ನಿತ್ಯತೃಪ್ತನೇಕುಕ್ಷಿಯೊಳಗಿರೇಳು ಭುವನವನು ಪಾಲಿಪನೆರಕ್ಷಿಸುವುದೊಳಿತು ದಯದಿ -ಮುದದಿ 4ಉರಗಗಿರಿಯರಸ ನಿನ್ನಚರಣನೋಡಿದ ಮೇಲೆಉರಗಕರಿವ್ಯಾಘ್ರ ಸಿಂಹಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದಪರಿಪರಿಯ ಭಯಗಳುಂಟೇಪರಮವಿಷಯಗಳ ಲಂಪಟದೊಳಗೆ ಸಿಲುಕಿಸದೆಕರುಣಿಸುವುದೊಳಿತು ದಯವಾಸ್ಮರಗಧಿಕ ಲಾವಣ್ಯಪುರಂದರವಿಠಲನೇಶರಣಜನ ಕರುಣಾರ್ಣವಾ ದೇವಾ 5
--------------
ಪುರಂದರದಾಸರು
ಪಾದಕಂಡು ಪಾವನಾದೆನು ಶ್ರೀಗಿರಿಯ ನಿಲಯನಪಾದಕಂಡು ಪಾವನಾದೆನು ಪಪಾದಕಂಡು ಪಾವನಾದೆನುಮಾಧವನ ಪ್ರಸಾದ ಪಡೆದೆನುಹಾದಿಗಾಣದೆಪರಮದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇದಿನಿಯೊಳು ಜನುಮ ತಾಳಿಭೇದಮತದ ಹಾದಿಬಿಟ್ಟು ಅ.ಪನೀಲಬಣ್ಣದೊಪ್ಪುವ ಸುಂದರ ಶುಭಕಾಯಇಂದಿರೆಲೋಲತ್ರಿಜಗಮೋಹನಾಕಾರ ಕೊರಳಪದಕಮಾಲಕೌಸ್ತುಭಮುಕುಟಮಣಿಹಾರ ರತ್ನದುಂಗುರಕಾಲೊಳ್ಹೊಳೆಯುವ ಗೆಜ್ಜೆಸರಪಳಿಶೀಲವೈಷ್ಣವ ನಾಮ ಪಣೆಯಲಿಕಾಳರಕ್ಕಸಕುಲಸಂಹಾರನಪಾಲಸಾಗರಕನ್ನೆವರನಪಾಲಮೂಲೋಕಸಾರ್ವಭೌಮನಮೇಲು ಭೂವೈಕುಂಠದಲ್ಲಿ 1ಉಟ್ಟದುಕೂಲ ಶಲ್ಯ ಜರತಾರ ಕೈಯಲ್ಲಿ ಕಂಕಣಪಟ್ಟ ರತ್ನದ ನಡುವಿಗುಡಿದಾರ ವರ್ಣಿಸುವರಾರುಸೃಷ್ಟಿಯೊಳಗೀತ ಮೀರಿದವತಾರ ಇನಕೋಟಿ ಪ್ರಭಾಕರಬಿಟ್ಟು ವೈಕುಂಠ ಇಹ್ಯಕೆ ಸಾಗಿಬೆಟ್ಟದ ಮೇಲೆ ವಾಸನಾಗಿಕೊಟ್ಟು ವರಗಳ ಮೂರು ಜಗಕೆಶೆಟ್ಟಿಯಂದದಿ ಕಾಸುಕೊಳ್ಳುವದುಷ್ಟಭ್ರಷ್ಟ ಶಿಷ್ಟರೆಲ್ಲರಇಷ್ಟದಾಯಕದಿಟ್ಟ ದೇವನ 2ಒಂದೆ ಮನದಲಿ ಸಕಲ ಸೇವಕರು ಭಯಭಕುತಿಯಿಂದಬಂದು ಹರಕೆಯ ತಂದು ನೀಡುವರು ತುಂಬರನಾರದರೊಂದಿಗಾನದಿಂ ಪಾಡಿ ಪೊಗಳುವರು ಆನಂದ ಕೋರುವರುಹೊಂದಿ ಭಜಿಸುತ ಸಪ್ತಋಷಿಗಣಬಂದು ಇಳಿವರು ಬಿಡದೆಅನುದಿನವಂದ್ಯ ನಿಗಮಾದಿಬಂಧು ಭಜಿಪರಕಂದುಗೊರಳಾದಿ ಬ್ರಹ್ಮಸುರರಿಂಗಂಧಪರಿಮಳಕುಸುಮದ್ರವ್ಯಗಳಿಂದ ಸೇವೆಯ ಗೊಂಬದೇವನ 3ಉದಯಕಾಲದಿ ಬಾಲನವತಾರ ಮಧ್ಯಾಹ್ನಕಾಲದಿಸದಮಲಾಂಗ ಯೌವನಾಕಾರಸುಸಂಧ್ಯಾಕಾಲದಿಮುದುಕನಾಗಿ ಕಾಂಬ ಮನೋಹರ ಬಹುಮಹಿಮಗಾರಪದುಮವದನ ಮದನನಯ್ಯಪದುಮವತಿಯ ಪ್ರಾಣಪ್ರಿಯಒದಗಿಬಂದ ಭಕುತಜನರನುಸುದಯದಿಂದ ಕರೆದು ಪ್ರಸಾದಮುದದಿ ನೀಡುತ ಕೃಪೆಯದೋರಿಸದಮಲಸಂಪದವನೀವನ 4ತೀರದೀತನ ಲೋಕಶೃಂಗಾರ ಏರಿ ನೋಡಲುಪಾರಗಿರಿತುದಿ ಗಾಳಿಗೋಪುರ ಮುಂದೆ ನಡೆಯಲುದಾರಿಯಲಿಕೊಳ್ಳಏಳು ವಿಸ್ತಾರ ಪರಮಪರತರತೋರುವ ಮಹ ಗುಡಿಯು ಗೋಪುರದ್ವಾರ ಚಿನ್ನದ ಕಳಸ ಬಂಗಾರಗಾರುಮಾಡದೆ ದಾಸಜನರನುತಾರತಮ್ಯದಿ ಪೊರೆಯಲೋಸುಗುಸೇರಿಧಾರುಣಿ ವೈಕುಂಠವೆನಿಸಿದಧೀರವೆಂಕಟ ಶ್ರೀಶ ರಾಮನ 5
--------------
ರಾಮದಾಸರು
ಪಾರ್ವತಿ ಜಗದ್ಭರಿತೇ ಮಹೇಶ್ವರಿ |ಶರ್ವನಂಗನೆ ಖ್ಯಾತೆ ಪಸರ್ವ ಸ್ವತಂತ್ರೆಶರ್ವಾಣಿಕಾಳಾಹಿವೇಣಿ |ಸರ್ವಜನರ ಮದ | ಗರ್ವ ನಿವಾರಿಣಿ ಅ. ಪಸೃಷ್ಟಿಪಾಲಿನಿ ಗೌರೀ ಸರ್ವೇಶ್ವರಿ |ದುಷ್ಟಮರ್ದನ ಕಾರಿ |ಇಷ್ಟದಾಯಕಿಭವ| ಕಷ್ಟನಿವಾರಿಣಿಶಿಷ್ಟಪಾಲಿನಿ ಬೆಟ್ಟದ ಕಲಿಗೆ ಭವಾನಿಯೆ 1ಅಘನಾಶಿನಿ ದೇವೀ ಕಾತ್ಯಾಯಿನಿ |ಸುಗುಣರ ಸಂಜೀವಿ |ನಗೆಮೊಗವನು ತೋರಿ | ಸುಗುಣನೆಂದಿನಿಸೆನ್ನ |ಅಗಲಬೇಡವೋ ತಾಯೇ ಮುಗಿವೆನು ಕರವಾ 2ಪರಮಪಾವನೆ ನಿನ್ನಾ | ಭಕ್ತಿಯೊಳೀಗಾ |ಸ್ಮರಿಸಲರಿಯೆ ಮುನ್ನಾ |ತರಳಷಣ್ಮುಖನಂತೆ |ಪರಸಿ ರಕ್ಷಿಸೆ ಎನ್ನ | ಭರದಿ ಗೋವಿಂದನದಾಸನಿಗೊಲಿದು ||ಪಾರ್ವತಿ|| 3
--------------
ಗೋವಿಂದದಾಸ
ಪಾಲಿಸು ಪರಮಪಾವನ ಪದ್ಮಾವತೀರಮಣಪಾಲಿಸು ಪಯವಾರಿಧಿವಾಸ ಪದ್ಮಗದಾಧರ ಕೌಸ್ತುಭಭೂಷ ಪ.ನೀಲನಿಭಾಂಗನಿಖಿಲಸುರ ಮುನಿಜನಜಾಲಪಾಲಪಾಹಿಪಾರ್ಥಸಾರಥಿ ಅ.ಪ.ಮದನಜನಕ ಮಹಿಮಾಂಬುಧಿ ನಿನ್ನಪದಕಮಲವ ನಾ ಸ್ಮರಿಸದೆ ಎನ್ನಮದಮುಖತನವನು ಒದರುವದೆನ್ನಪದುಮನಾಭ ರಕ್ಷಿಸು ನೀ ಮುನ್ನಸದಯಾಂಬುಧಿ ನೀನಲ್ಲವೆ ನಿನ್ನೊಳು ಕ್ರೋಧಉದುಭವಿಸುವುದು ನಿಜವೇ ಭಕ್ತವಾತ್ಸಲ್ಯಇದಕೆ ನೀ ಊನ ತರುವೆ ಸಾಕು ಈ ಮರವೆಒದಗಿಸು ಸರ್ವಮನಸಿನೊಳ್ ಪುದು-ಗಿದಿಷ್ಟಾರ್ಥಗಳ ನೀ ದಯವಿಡುತ ಇಹಪರಗತಿಗಾ-ಸ್ಪದವಾದ ಸಂಪದವ ನೀ ಕೊಡು ತ್ವರಿತ ತ್ರೈಲೋಕ್ಯದಾತಮಧುಸೂದನ ಮಂದರಗಿರಿಧರ ನೀ-ರದ ನಿಭ ನಿರ್ಮಲ ನಿಜರೂಪಗುಣಸದನಾಚ್ಯುತ ರವಿಕುಲದೀಪ ನಿರ-ವಧಿ ಆನಂದ ರಸಾಲಾಪಬುಧಜನೋಪಲಾಲಿತ ಲೀಲಾಯತಉದಧಿಶಾಯಿ ಮಾನದ ಮಧುಸೂದನ 1ನಾಮಸ್ಮರಣೆಯೆ ನರಕೋದ್ಧಾರನೇಮವಿಲ್ಲೆಂಬುದು ನಿನ್ನ ವಿಚಾರಸಾಮಾರ್ಥದ ಗುಣಕೆಲ್ಲನುಸಾರಪಾಮರಮನಕಿದು ಈ ಗುಣಭಾರಶ್ರೀಮನೋಹರನೆ ಲಾಲಿಸೊ ಚಾತುರ್ಥಿಕ ಜ್ವರದಿಭ್ರಾಮಕನಾದೆ ಪಾಲಿಸೊ ದಾರಿದ್ರ್ಯವೆಂಬಸೀಮೆಯಿಂದಲಿ ದಾಟಿಸೊ ಸುಕೀರ್ತಿಯ ಮೆರೆಸೊಸಾಮಗಾನಲೋಲಸುಜನಸ್ತೋಮಭಾಗ್ಯನಿಧಿಯೆ ಎನ್ನ ಮನದ ಅಜ್ಞಾನವೆಂಬತಾಮಸಪರಿಹರಿಸಿ ಜ್ಞಾನೋದಯದ ಸದಾನಂದಈ ಮಹಾಭಾಗ್ಯಗಳೆಲ್ಲ ನೀನಿತ್ತಿರೆನೀ ಮಾಡುವುದೆಲ್ಲವು ಸಹಜಗುಣಧಾಮಾಶ್ರಿತ ನಿರ್ಜರಭೂಜಸುಜನಸ್ತೋಮಾರ್ಕಾಮಿತ ವಿಭ್ರಾಜಶ್ರೀಮಚ್ಛೇಷಾಚಲ ಮಂದಿರ ಸು-ತ್ರಾಮಾರ್ಚಿತ ಸದ್ರಾಮ ಶ್ರೀರಾಮ 2ಉಡುವ ಸೀರೆಯ ಸೆಳೆಯಲು ದ್ರುಪಜೆಯಕೊಡಲಿಲ್ಲವೆ ಬಹುವಸನ ಸಂತತಿಯಹಿಡಿಯವಲಕ್ಕಿಗೆ ದ್ವಾರಕ ಪತಿಯಕಡು ಸರಾಗವಾಯ್ತಿಂದಿನ ಪರಿಯಬಿಡುತ ಬೆಟ್ಟದ ಮಧ್ಯದಿ ನಿಂತರೆ ನಿನ್ನಬಿಡುವರ್ಯಾರಯ್ಯ ಶೀಘ್ರದಿ ಮನಸಿನಿಷ್ಟಕೊಡು ದಯವಿಟ್ಟು ಮುದದಿ ಕರುಣಾವುದಧಿಕಡುಲೋಭಿತನ ಬಿಡು ಮಹರಾಯಅಡಿಗಳಿಗೆರಗುವೆನು ಜಗದಯ್ಯ ಪೂರ್ವಾರ್ಜಿತಕರ್ಮವಡಂಬಡಿಸಿ ರಕ್ಷಿಸು ದಮ್ಮಯ್ಯ ಪಂಢರಿರಾಯಒಡೆಯ ಶ್ರೀ ಲಕ್ಷ್ಮೀನಾರಾಯಣನಡುನೀರೊಳು ಕೈಬಿಡುವೆಯ ನೀತೊಡಕೊಂಡ ಬಿರುದೇನಯ್ಯ ಈಕಡು ಕೃಪಣತನ ಸಾಕಯ್ಯಪೊಡವಿಯೊಳಗೆ ಪಡುತಿರುಪತಿಯೆಂಬದೃಢಕಾರ್ಕಳದೊಡೆಯ ಶ್ರೀನಿವಾಸನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಂಸಾರ ನಂಬುವೆಯ ಹೆಡ್ಡ ಈಸಂಸಾರವಿಹುದು ಮುಕ್ತಿಗೆ ಅಡ್ಡಪಮನೆಯು ಎಂಬುದುವಸ್ತಿ ಮಳಿಗೆಸತಿತನಯಹೋಹರು ಹಾದಿಗಳಿಗೆಎನಿತು ಮಮತೆ ಇದರೊಳಗೆ ಯಮಮನಮುಟ್ಟಿ ಹಿಡಿದಿಹ ಗುದಿಗೆ1ಸುಳ್ಳುಗಳಾಡೋದು ಎಷ್ಟುಮಹಾತಳ್ಳಿಕಾರಿಕೆ ಬೆಟ್ಟದಷ್ಟುಬೆಳ್ಳಿಟ್ಟು ಬಗುಳೋದು ಯಷ್ಟು ಯಮ ಕಕ್ಕಲಿಹಶೀಳುಯಂಬಾಕೊಲ್ಲೆಯಿವನ ಕುಟ್ಟುಕುಟ್ಟು2ಮಕ್ಕಳು ಮನೆಗಿಲ್ಲವೆಂಬ ಎನಗೆತಕ್ಕ ಹೆಂಡತಿ ಅಲ್ಲವೆಂಬರೊಕ್ಕವ ದಿನ ನೋಡಿಕೊಂಬ ಯಮಕಕ್ಕರಲಿರು ಶೀಳುಯೆಂಬ3ಗುರುಹಿರಿಯರ ನಿಂದಿಪನುಸತಿಮರುಕಕೆ ಹಲ್ಲು ತೆರವನುಹೊರಡಿಪ ತಂದೆ ತಾಯಿಯನುಯಮನರಕಕೆ ಹಾಕುಯೆಂಬುವನು4ನಾನಾರುಯೆಂಬುದು ಅಣಕೆ ಹಿಂದಕ್ಕೆನಿದ್ದೆಯೆಂಬುದು ಒಣಗಿಏನೋಮುದೆಂಬುದು ಜಣಗಿ ಚಿದಾನಂದ-ನೆಂಬುದು ಮುಣಗಿ5
--------------
ಚಿದಾನಂದ ಅವಧೂತರು
ಸುಳಿದವನಾರಮ್ಮಯ್ಯ ಬೆಟ್ಟದಮೇಲೆಹಳುವದೊಳಿಹ ತಿಮ್ಮಣ್ಣ ಪ.ವಾರೆದುರುಬಿಗೆ ಸಂಪಿಗೆಗೂಡಿ ವಿಹಗವನೇರಿ ಬರುವನಕ್ಕವಾರಿಜಾನನವಜ್ರಮಣಿದಂಥಾನಗೆ ಸೊಬಗೇರಿದಹರಿಕಾಣಕ್ಕ1ಅಡಿಗೊಮ್ಮೆ ಜೀಯಾ ಪರಾಕೆಂಬ ಸುರಮುನಿಗಡಣದ ವೀರನಾರಮ್ಮನುಡಿದರೆ ನುಡಿವ ನುಡಿಯದಿದ್ದರೊಲ್ಲದಬೆಡಗಿನ ಮಹಿಮ ನೀರೆ 2ಮಕರಕುಂಡಲಶಂಖ ಚಕ್ರಕೌಸ್ತುಭಶಿರಿಯುಕುತ ವಕ್ಷದವನಾವನೆಅಖಿಳಜಗವ ತನ್ನ ಬಸುರಲಿ ಬಚ್ಚಿಟ್ಟಸಖಶ್ರೀನಿವಾಸದೇವನೆ3ಸಾಮಗಾನವನಾದರಿಪ ಶಾಮಲಾಂಗದಕೋಮಲದಾರುಹೇಳೆವ್ಯೋಮಕಚಾಜಾದಿ ವಂದಿತಾನತಜನಪ್ರೇಮವಾರಿಧಿ ನೋಡೆಲೆ 4ಸಿರಿಅಂಜನಾದ್ರಿಯೊಳಾವಾಗ ಮಂಗಳಚರಿತನು ದಾರೆ ತಂಗಿಮರೆಹೊಕ್ಕವರಕಾವಪರಸನ್ನವೆಂಕಟವರದನ ನಂಬು ಬೇಗ 5
--------------
ಪ್ರಸನ್ನವೆಂಕಟದಾಸರು
ಹರಿ ನಿನ್ನೊಲುಮೆಯು ಆಗುವತನಕ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಅರಿತು ಸುಮ್ಮಗಿರುವುದೆ ಲೇಸು ಪ.ಮರಳಿ ಮರಳಿ ತಾ ಪಡೆಯದ ಭಾಗ್ಯವು |ಮರುಗಿದರೆ - ತನಗಾದೀತೆ ? ಅಪದೂರು ಬರುವ ನಂಬಿಗೆಯನು ಕೊಟ್ಟರೆ |ದುರ್ಜನ ಬರುವುದು ತಪ್ಪೀತೆ ||ದೂರ ನಿಂತು ಮೊರೆಯಿಟ್ಟು ಕೂಗಿದರೆ |ಚೋರರಿಗೆ ದಯ ಪುಟ್ಟೀತೆ |ಜಾರನಾರಿ ತಾ ಪತಿವ್ರತೆ ಎನ್ನಲು |ಜಾಣರಿಗೆ - ನಿಜ ತೋರೀತೆ ||ಊರ ಬಿಟ್ಟು ಬೇರೂರಿಗೆ ಹೋದರೆ |ಪ್ರಾರಬ್ಧವು ಬೇರಾದೀತೆ 1ಪಾಟುಪಡುವುದು ಪಣೆಯಲ್ಲಿರಲು |ಪಟ್ಟಮಂಚ ತನಗಾದೀತೆ ||ಹೊಟ್ಟೆಯಲ್ಲಿ ಸುತರಿಲ್ಲೆಂದು ಹೊರಳಲು |ಹುಟ್ಟು ಬಂಜೆಗೆ ಮಕ್ಕಳಾದೀತೆ ?||ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ |ಬೇಟೆಗಾರಗೆ ದಯ ಪುಟ್ಟೀತೆ ||ಕೆಟ್ಟ ಹಾವು ತಾ ಕಚ್ಚಿದ ವಿಷವದು |ಬಟ್ಟೆಯಲೊರಸಲು ಹೋದೀತೆ 2ಧನಿಕನ ಕಂಡು ಪಾಡಿ ಪೊಗಳಿದರೆ |ದಾರಿದ್ರ್ಯವು ತಾ ಹಿಂಗೀತೆ ||ದಿನದಿನ ನೊಸಲೊಳು ನಾಮವನಿಟ್ಟರೆ |ದೇವರಿಗೆ ತೃಪ್ತಿಯಾದೀತೆ ||ಎಣಿಸಿಕೊಂಡು ಎಳ ಹಂಜಿಯ ನೂತರೆ |ಅಣೆಯದ ಸಾಲವು ತೀರೀತೆ |ಅನುದಿನದಲಿ ಶ್ರೀ ಪುರಂದರವಿಠಲನ |ನೆನೆಯದಿದ್ದರೆಭವಹಿಂಗೀತೆ3
--------------
ಪುರಂದರದಾಸರು