ಒಟ್ಟು 151 ಕಡೆಗಳಲ್ಲಿ , 43 ದಾಸರು , 146 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು
ಲಕ್ಷ್ಮೀ ನಾರಾಯಣ ವಿಠಲ | ಪೊರೆಯ ಬೇಕಿವಳಾ ಪ ವಾಹನ ದೇವ | ಲಕ್ಷುಮಿಯ ರಮಣಾ ಅ.ಪ. ಸೃಷ್ಟಿ ಸ್ಥಿತಿ ಸಂಹಾರ | ಅಷ್ಟಕ್ಕು ಕಾರಣನೆಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೇ |ಶಿಷ್ಟ ಸದಾಚಾರ | ನಿಷ್ಠೆಯಲಿ ಗೈಯ್ಯುವಳುಶಿಷ್ಟೇಷ್ಟ ಹರಿಯೆ ಸದ | ಭೀಷ್ಟಗಳಗರೆಯೋ 1 ವಿೂಸಲೆಂದೆನಿಸಿರುವ | ದಾಸತ್ವದಾಕಾಂಕ್ಷೆಸಾಸಿರಕ್ಕೋರ್ವರಿಗೆ | ಲೇಸು ಪುಟ್ಟವುದೋಈ ಸಮಯದಲ್ಲೀಕೆ | ಆಶಿಸುತ್ತಿಹಳಯ್ಯಕೇಶವನೆ ಒಲಿದಿವಳ | ದಾಸ್ಯ ಸ್ವೀಕರಿಸೋ 2 ಶುದ್ಧ ತರತಮ ಜ್ಞಾನ | ಮಧ್ವೇಶನಲಿ ಭಕುತಿಇದ್ವದಕೆ ತೃಪ್ತಿಯಿಂ | ಬದ್ಧ ವೈರಾಗ್ಯಾಸಿದ್ಧಿಸುತ ಸಾಧನದಿ | ಬದ್ಧ ಕಂಕಣಳೆನಿಸೊಅದ್ವಿತೀಯನೆ ಹರಿಯೆ | ಮಧ್ವಾಂತರಾತ್ಮಾ 3 ಮುಪ್ಪುರದ ವೈರಿನುತ | ಸರ್ಪಶಯನನೆ ದೇವಾಸ್ವಪ್ನ ಸೂಚನೆಯಂತೆ | ಗೋಪ್ಯದಂಕಿತವಾಸುಪ್ತೀಶ ಇತ್ತಿಹೆನೊ | ಒಪ್ಪಿ ಕೈಪಿಡಿ ಇವಳಗುಪ್ತ ಮಹಿಮನೆ ದೇವ | ಆಪ್ರಕಟ ಹರಿಯೇ 4 ಶರ್ವಾದಿ ದಿವಿಜೇಡ್ಯ ಶಾರ್ವರೀಕರ ಪಾಲದುರ್ವಾದಿ ತಿಮಿರಕ್ಕೆ ಮಾರ್ತಾಂಡ ರೂಪೀದರ್ವಿ ಜೀವಿಯ ಕಾವ | ನಿರ್ವಹಣೆ ನಿನ್ನದೋಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರಾಹ ಹರಿ ವಿಠಲ | ಕಾಪಾಡೊ ಇವನಾ ಪ ನಿರುತ ತವನಾಮ ಸ್ಮøತಿ | ಕರುಣಿಸುತ ಕಾಯೋಅ.ಪ. ತಾರಕವು ತವನಾಮ | ಸ್ಮರಣೆ ಮಾತ್ರದಿ ಎಂದುಒರಲುತಿದೆ ವೇದಗಳು | ಕರಿವರದ ಹರಿಯೇತರುಳ ಸಾಧ್ವೀ ಯುವಕ | ಮೊರೆಯಿಡುವನಂಕಿತಕೆಒರೆದಿಹೆನು ಅದರಿಂದ | ಕರೆದು ಕೈ ಪಿಡಿಯೋ 1 ಕಾಮವರದನೆ ದೇವ | ಕಾಮಿತಾರ್ಥಗಳಿತ್ತುನೇಮದಿಂ ಪೊರೆಯುವುದು | ಕಾಮಪಿತ ಹರಿಯೇ |ನೇಮ ನಿಷ್ಠೆಯಲಿಂದ | ಧೀಮಂತ ಪದಕೆರಗಿಸೌಮನಸ್ಯದಿ ಸೇವೆ | ಸಲ್ಲಿಸುವನಯ್ಯಾ 2 ಹರಿಯೆ ಸರ್ವೋತ್ತಮನು | ಸಿರಿವಾಯು ಮೊದಲಾದಸುರರೆಲ್ಲ ಕಿಂಕರೆಂಬ ಮತಿಯ ಕೊಟ್ಟುವರಜ್ಞಾನ ಭಕುತಿಯನೆ ಕರುಣಿಸುತ ಪೊರೆಯಯ್ಯಾವರದ ಗುರು ಗೋವಿಂದ ವಿಠಲ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು
ವಾಸುದೇವ ಬಲ್ಲಭಾಸುರಾಂಗ ಶ್ರೀವಾಸುಕಿಶಯನನಸಾಸಿರ ನಾಮವ ಲೇಸಾಗಿ ಪಠಿಸದೆ ಪ ಮುರ ಮುಷ್ಟಿಕ ವೈರಿಯನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ 1 ಕಾಯವು ಸ್ಥಿರವಲ್ಲ ಎನ್ನೊಳುಮಾಯೆ ತುಂಬಿತಲ್ಲಪ್ರಾಯಮದದಿ ಪರಸ್ತ್ರೀಯರ ಕೊಂಡಾಡಿಕಾಯಜಜನಕನ ಗಾಯನ ಮಾಡದೆ2 ಕಂಗಳಿಂದಲಿ ನೋಡೋ ದೇವ ನಿ -ನ್ನಂಗಸಂಗವ ನೀಡೋಮಂಗಳಮಹಿಮ ಶ್ರೀರಂಗವಿಠಲ ಮುಂ-ದಂಗಬಾರದಂತೆ ನೀ ದಯಮಾಡೋ 3
--------------
ಶ್ರೀಪಾದರಾಜರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಷ್ಣು ತೀರ್ಥರಪಾದ | ನಿಷ್ಠೆಯಿಂದಲಿ ಭಜಿಸೆಇಷ್ಟಾರ್ಥ ಸಲಿಸೂವರ್ | ಕೃಷ್ಣಪೂಜಕರೂ ಪ ಜಿಷ್ಣುಸಖ ಶ್ರೀ | ಕೃಷ್ಣ ಭಕುತರುಶ್ರೇಷ್ಠ ದಂಪತಿ | ಗರ್ಭಜಾತರುಸುಷ್ಠಜಯಮುನಿ | ಸೇವೆಯಿಂದಲಿಇಷ್ಟವರದಿಂ | ದುದಯರಾದರು 1 ಬಾಲ್ಯದಲ್ಲು ಪನೀತ | ಆರ್ಯರಿಂದು ಪದಿಷ್ಟಆರ್ಯ ಐಜೀವರ್ಯ | ಗುರುಕುಲವಸಿತ |ಕ್ರೌರ್ಯ ಹರಿಜಪ | ದೈರ್ಯದಿಂದಲಿವೀರ್ಯವತ್ತರ | ಜಪಿಸಿ ಗುರುಸುತವರ್ಯನಪಮೃತಿ | ಕಳೆದು ಗುರುವಿಂಮಾನ್ಯವಂತನು | ಎನಿಸಿ ಮೆರೆದ 2 ಮಲದ ಅಪಹಾರಿಯ | ಜಲಪ್ರವಾಹದಿ ನಿಂದುಘಳಿಗೆ ಇರಲು ಉದಯ | ವಲಿಸಿ ಮಧ್ವವಿಜಯಒಲಿಮೆಯಿಂದಲಿ | ಸೂರ್ಯನಘ್ರ್ಯವಕಾಲಮೀರದೆ | ತಾನು ಕೊಡುತಲಿಮೂಲಗ್ರಂಥವ | ತಿಳಿಯ ಬೋಧವಇಳೆಯ ಸುರರಿಗೆ | ಪೇಳ್ದ ಮಹಿಮಾ 3 ಅವಧೂತ ಚರ್ಯದಿ | ಅವನಿಯೊಳ್ಚರಿಸುತ್ತಭುವನ ಪಾವನ ಸುಧೆ | ದಿವಿಜರಿ ಗುಣಿಸೀ |ಶ್ರವಣ ಗೈಸುತ | ಸುಧೆಯ ಗ್ರಂಥವಅವನಿಯೊಳು | ತತ್ವಾರ್ಥಬೋಧಿಸಿಪ್ರವರ ಭೂಸುರ | ಮುಕ್ತಿಮಾರ್ಗದಹವಣೆ ಗೈದಿಹ | ಭುವಿಯದಿವಿಜ 4 ವನವನಚರಿಸುತ್ತ | ಮುನಿವಳ್ಳಿಯಲಿಮುನಿಯೋಗ್ಯವೆನಿಸುವ | ವಾನಪ್ರಸ್ಥಾಶ್ರಮದಿ |ಘನಸುವ್ರತವನೆ | ಅಸಿಯಪತ್ರದಿಮನವನಿರಿಸುತ | ಗಣ್ಯನಾದೆಯೊಅನಘ ಹರಿಕಾ | ರುಣ್ಯ ನಿನ್ನಲಿಗಣನೆಗೈಯ್ಯಲು | ಮನುಜಗಸದಳ 5 ಯತಿ ಸತ್ಯವರರಿಂದ | ಯತಿ ಆಶ್ರಮವ ಪೊಂದಿಕ್ಷಿತಿಯ ಸಂಚರಿಸುತ್ತ | ಅನ್ನಾಳಿಗಾಗಮೀಸೀ |ಹಿತನು ದೇಶಾದಿ | ಪತಿಯ ರೋಗವಹತಗೈದು ಅನ್ನವ | ಜೊತೆಲುಂಬುವಯತನ ಸಾಧಿತ | ಪ್ರಾಪ್ತಕ್ಷಾಮವಹತವ ಗೈಸಿದೆ | ರಮೆಯನೊಲಿಸೀ 6 ಬೋಧ | ಗ್ರಂಥಗಳ್ರಚಿಸೀ |ಮೋದದಿಂ ವೃಂದಾವನಸ್ಥರುಸಾದು ಸೇವೆಗೆ ಅಭಯನೀಡುತನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತರಾಗಿಹ7
--------------
ಗುರುಗೋವಿಂದವಿಠಲರು
ವೆಂಕಟಾ ಹರಿವಿಠಲ | ಪಂಕಕಳೆದಿವನಾ ಪ ಪಂಕಜಾಕ್ಷನೆ ದೇವ | ಕಾಪಾಡ ಬೇಕೋ ಅ.ಪ. ಅಂಧಕಾರದಲಿಪ್ಪ | ಮಂದಮತಿಯುದ್ಧರವಮಂದರೋದ್ಧಾರಿ ಹರಿ | ಮಾಡಿ ಪೊರೆಯಿವನಾ |ನಂದಮುನಿ ಮತ ತಿಳಿಸಿ | ಸಂದೇಹಗಳ ಕಳೆದುಸಂದೋಹ ಸಂಸ್ಥಿತನ | ಉದ್ಧರಿಸೊ ಬೇಕೋ 1 ಸೃಷ್ಟ್ಯಾದಿ ತವ ಮಹಿಮೆ | ನಿಷ್ಠೆಯಿಂದಲಿ ಭಜಿಪಸುಷ್ಠುಮನವನೆಯಿತ್ತು | ಕಾಪಾಡೊ ಹರಿಯೇಕೃಷ್ಣಮಾರುತಿ ಇವನ | ಕಷ್ಟ ಸಂಚಯ ಕಳೆದುಶ್ರೇಷ್ಠ ತವದಾಸ್ಯದಲಿ | ಇಟ್ಟು ಪೊರೆ ಇವನಾ 2 ಸತ್ಸಂಗ ಸದ್ವ್ಯಸನ | ಸನ್ಮಾರ್ಗದಲಿ ಇಟ್ಟುಕುತ್ಸಿತರ ಸಂಗವನು | ದೊರಗೈ ಹರಿಯೇ ಮತ್ಸ ಕೇತನ ಜನಕ | ಭಕ್ತವತ್ಸಲನಾಗಿವತ್ಸನ್ನ ಪೊರೆವವರು | ಮತ್ತಾರು ಇಹರೋ 3 ಹರಿಗುರುಗಳಾ ಸೇವಾ | ಪರಮ ಪ್ರೀತಿಲಿ ಮಾಳ್ವವರಮತಿಯನೇ ಕೊಟ್ಟು | ಪೊರೆಯ ಬೇಕಿವನಾ |ಹರಿಯ ನಾಮಾಮೃತವ | ನಿರುತದಲಿ ಸವಿದುಂಬಪರಮ ಸೌಭಾಗ್ಯವನೆ | ಕರುಣಿಸೋ ಹರಿಯೇ 4 ಸರ್ವಜ್ಞ ಸರ್ವೇಶ | ಸರ್ವ ಸ್ವಾತಂತ್ರನೇಭವವನದಿ ಉತ್ತರಿಸಿ | ಪೊರೆಯ ಬೇಕಿವನಾ |ದುರ್ವಿಭಾವ್ಯನೆ ಗುರು | ಗೋವಿಂದ ವಿಠಲನೇದರ್ವಿಜೀವಿಯ ಪೊರೆಯೆ | ಪ್ರಾರ್ಥಿಸುವೆ ಹರಿಯೆ 5
--------------
ಗುರುಗೋವಿಂದವಿಠಲರು
ವೇಣುಧರ ವಿಠಲಾ | ನೀನೆ ಪೊರೆ ಇವಳಾ ಪ ಕಾಣೆ ನಿನ್ಹೊರತು ಕಾ | ರುಣ್ಯ ಮೂರುತಿಯೆ ಅ.ಪ. ಸ್ವಾಪದಲಿ ಗುರುರೂಪ | ರೂಪ ಸಮ್ಮುಖದಲ್ಲಿಗೋಪಕೃಷ್ಣಾಕೃತಿಯ | ಪಡೆದಿಹಳು ಇವಳುಶ್ರೀಪತಿಯೆ ನಿನ್ನೊಲಿಮೆ | ಆಪಾರವಿರುತಿರಲುಪ್ರಾಪಿಸುತ ಅಂಕಿತವ | ಒಪ್ಪಿಸಿಹೆ ನಿನಗೇ 1 ಪಥ ತೋರೋ ಹರಿಯೇ2 ಪತಿ ಸುತನೆ | ಕಾರುಣ್ಯ ತೋರಿ ಆ-ಪಾರ ದುಷ್ಕರ್ಮಗಳ | ಪಾರಗಾಣಿಪುದೋ |ಮಾರುತನ ಮತದಲ್ಲಿ | ಧೀರೆ ಎಂದೆನಿಸಿ ಸಂ-ಸಾರ ಸಾಗರವನ್ನು | ದಾಟಿಸೋ ಹರಿಯೇ 3 ಸೃಷ್ಟಿ ಸ್ಥಿತಿ ಲಯ ಕರ್ತ | ಕೃಷ್ಣಮಾರುತಿ ದೇವಅಷ್ಟಸೌಭಾಗ್ಯಗಳ | ಕೊಟ್ಟು ಕಾಪಾಡೋವಿಷ್ಟರಶ್ರವ ಹರಿಯೆ | ನಿಷ್ಠೆ ಆಚಾರದಲಿಕೊಟ್ಟು ಕೈಪಿಡಿ ಇವಳ | ಜಿಷ್ಣುಸಖ ಹರಿಯೇ 4 ಸರ್ವದಾ ತವ ಮಹಿಮೆ | ಶ್ರವಣ ಸುಖ ಸಾಧನವಹವಣೀಸಿ ತವನಾಮ | ವಜ್ರಾಂಗಿ ತೊಡಿಸೀಭವವನುತ್ತರಿಸತ್ಕಿ | ಬಿನೈಪೆ ಶ್ರೀ ಹರಿಯೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವೈದೇಹಿ ಪಾಲಿಸೆನ್ನಂ ನಂಬಿದೆ ನಿನ್ನಂ ಪ. ವೇದವಿದಿತೇ ತವಪಾದವ ಸ್ಮರಿಸುವ ಕರವ ಅ.ಪ. ಕಾಮಿತಾರ್ಥವ ನೀಡುವಳೆಂಬುವ ಬಿರುದಾಂಕಿತೆಯಾಗಿರುವ ಕಾಮಜನನೀ ನಿನ್ನ ನಾಮ ಮಂತ್ರಗಳನ್ನು ನೇಮನಿಷ್ಠೆಯೋಳ್ ಜಪಿಸುವಂದದಿ ಸು ಪ್ರೇಮದಿಂದಲಿ ವಿಮಲಮತಿಕೊಡು 1 ಜಾನಕಿನಾಮವ ಧರಿಸಿ ದಾನವಕುಲವೆಂಬ ಕಾನನಂಗಳಿಗಂತು ಹವ್ಯ ವಾಹನನೆನಿಪ ರಾಮನ ಕೈಯಪಿಡಿದ ಪರಮಪಾವನೆ 2 ಶಮದಮಾದಿಗಳಿಂದ ಮೆರೆಯುತಲಿರ್ಪ ಕ್ಷಮೆಗೆ ನೀ ನೆಲೆಯೆಂದು ಯಮಿಕುಲವರ್ಯರು ನಮಿಸಿ ಸ್ತುತಿಸುತ್ತಿಹರು ವಿಮಲ ಶೇಷಾದ್ರಿನಾಥನ ರಮಣಿ ನಿನ್ನಡಿ ಮಣಿದು ಬೇಡುವೆ 3
--------------
ನಂಜನಗೂಡು ತಿರುಮಲಾಂಬಾ
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ ಪರ ಕೃತ್ತಿ ವಾಸನ ಪೂಜೆಯನ್ನು ಮಾಡದೆ ಪ ಹಿಂದೆ ಜನನಿ ಗರ್ಭವಾಸದಿಂದ ಹೊರಟು ಬಂದ ಮೇಲೆ ಕೊಂದು ದಿವಸನಾನು ನಿಷ್ಠೆಯಿಂದ ಲಿರ್ದು ಆಗಮೋಕ್ತ ದಿಂದ ಶಿವಗೆ ಜಲದಿ ರುದ್ರದಿಂದ ಜಳಕ ಗೈದು ಶ್ರೀ ಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ 1 ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯ ಭೂಮಿಯಲ್ಲಿ ವಾಸ ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯಪುರುಷರೊಡನೆ ಸಂಗ ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ 2 ಮಂಡೆ ಜುಟ್ಟ ಸೂತ್ರವನ್ನು ಖಂಡಿಸಿರ್ದುಯತಿಎನುತ್ತ ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು ಮೊಂಡತನದಿ ಸಕಲ ವಿಷಯ ಭೋಗವನು ಭೋಗಿಸುತ್ತ ಮಂಡೆ ಬೋಳನಾದರೇನು ಮನವ ಬÉೂೀಳಮಾಡದೆ 3 ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ ಘೋರಪಾತಕಂಗಳನು ಸುಟ್ಟುಸೂರೆಮಾಡದೆ 4 ಬೆಟ್ಟದೊಳಗನಂತ ವ್ಯಕ್ಷ ಹುಟ್ಟಿಮಡಿದ ವೊಲು ಜನ್ಮ ನಷ್ಟ ವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು ಕೆಟ್ಟು ಹೋಗ ಬೇಡ ಲಕ್ಷ್ಮೀಪತಿಯ ಸ್ಮರಣೆಮಾಡದೆ 5
--------------
ಕವಿ ಪರಮದೇವದಾಸರು
ಶ್ರೀ ಗೋಪಾಲದಾಸರು ಕಾಪಾಡು ಕಾಪಾಡು | ಗೋಪಾಲರಾಯಾ ಪ ತಾಪತ್ರಯಗಳ ಕಳೆದು | ಶ್ರೀ ಪತಿಯ ತೋರಿಅ.ಪ. ಕಾಮಮದ ಮಾತ್ಸರ್ಯ ಸೀಮೆ ಮೀರುತ ಚರ್ಯಕಾಮಿಸುತ ಮನ್ಮನದ ಸೀಮೆಯೊಳು ನೆಲೆಸೀ |ನೇಮ ನಿಷ್ಠೆಗಳಳಿದು ಭೂಮಗುಣಿ ಸುಸ್ತವನಕಾಮನಕೆ ಪ್ರತಿ ಬಂಧ ಸ್ತೋಮದಂತಿಹುದೊ 1 ಕರ್ಮ ಕೆಸರ ಕಳೆಯುತಲೀ 2 ಭಕ್ತಿಸಾಕಾರಿ ಹರಿ | ಭಕ್ತಿ ಗುರು ಭಕ್ತಿಗಳವ್ಯಕ್ತಗೈವುದು ಮನದಿ ತ್ಯಕ್ತದೋಷಾದಿ |ಗುಪ್ತ ಮಹಿಮಾ ಗುರು ಗೋವಿಂದ ವಿಠ್ಠಲನವ್ಯಕ್ತ ಕಾಣುವ ಹದನ ಬಿತ್ತರಿಸೊ ಕರುಣಾ 3
--------------
ಗುರುಗೋವಿಂದವಿಠಲರು
ಶ್ರೀ ರಾಘವೇಂದ್ರರು (4) ಈತನೆ ಶ್ರೀ ಪ್ರಲ್ಹಾದನು ಆಹ್ಲಾದಕರನು ಪ ಈತನೆ ಪ್ರಲ್ಹಾದ ಜಗನ್ಮಾತಾಲಕುಮಿಪತಿಯ ಗುಣವಭೂತಳದಲ್ಲಿ ತೋರಿ ಬಹು ನಿರ್ಭಿತಿಯಿಂದ ಮೆರೆದ ಗುರು ಅ.ಪ. ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆಕಷ್ಟ ಬಡಿಸೆ ಸುತಗೆ ಜವದಲಿಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಅಸುರನಂದನಶ್ರೇಷ್ಠ ನಖದಿಂ ಬಗೆಯ ನಿಷ್ಠೆಯಿಂದ ನಮಿಸಿದ ಗುರು 1 ಶೂರ ಬಾಲ್ಹೀಕನೆನಿಸಿದ ಬ್ರಹ್ಮಣಮುನಿ ಪಾದಾರವಿಂದ ದಯದಿ ಭಜಿಸಿದಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾಸಾರಪಾನ ಮಾಡಿ ವಿಭುದಚಾರು ಚಂದ್ರಿಕಾ ರಚಿಸಿದ ಗುರು 2 ಸಿಂಧುಶಯನ ಶ್ರೀ ರಮಾಪತಿ ವಿಠ್ಠಲನ ಭಕುತಿಯಿಂದ ಭಜಿಪ ರಾಘವೇಂದ್ರಯತಿಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 3
--------------
ರಮಾಪತಿವಿಠಲರು
ಶ್ರೀ ಶ್ರೀನಿವಾಸ ಭಕುತರ ಪೋಷ ಮಾಂ ಪಾಹಿ ಸುರೇಶ ಪ ಆರಾಧಕ ಪರಿವಾರವ ಪೊರೆಯಲು ಧಾರುಣಿಯೊಳು ಶಿರಿವಾರನಿವಾಸ ಅ.ಪ ವಾರಿಜೋದ್ಭವ ಮುಖಸುರ ಸಂಶೇವ್ಯಫಣಿ ರಾಜ ಸುಶಯ್ಯಾ ಸೇರಿಸೇವಿಪರಘ ತಿಮಿರಕೆ ಸೂರ್ಯ ನೀರದ ನಿಭಕಾಯ ಧಾರುಣಿ ಸುರಪರಿ ಗುರುಮೂರುತಿ ಪ್ರಿಯ 1 ಕಂದರ್ಪನಯ್ಯ ಕವಿಜನಗೇಯ ಬಂಧುರ ಶುಭನಿಲಯ ನಂದನಂದನ ಮಾಮುದ್ಧರ ಕೃಪಯಾನಾಮುಗಿವೆನು ಕೈಯ್ಯಾ ಇಂದಿಗೂ ಬುಧ ಜನರಿಂದ ವೈಭವದಿ ಸ್ಯಂದನವೇರಿದ ಸುಂದರಕಾಯಾ 2 ಇಳಿದೇವಾರ್ಪಿತ ಶ್ರೀ ತುಳಸಿಯ ಹಾರ ಪೀತಾಂಬರಧಾರ ಕುಂಡಲ ಮುಕುಟಾಲಂಕಾರ ಭೂಷಿತ ಶರೀರಾ ಜಲಧಿ ಶಯನ ಮಂಗಳ ರೂಪನೆಭವ ಕಲುಷ ವಿದೂರ 3 ಕೃಷ್ಣರಾಯಾನೆಂಬುವ ಸದ್ಭಕ್ತ ಇರುತಿರಲು ವಿರಕ್ತ ಸಾಷ್ಟಾಂಗ ನಮಸ್ಕøತಿ ಸೇವಾಸಕ್ತ ಗ್ರಾಮವ ರಕ್ಷಿಸುತ ನಿಷ್ಠೆಯಿಂದ ಮನಮುಟ್ಟಿ ಭಜಿಸುತಿರೆ ಥಟ್ಟನೆ ವಲಿದಖಿ ಲೇಷ್ಟ ಪ್ರದಾತಾ 4 ದೇಶಾದಾಗತ ಭಕುತರ ಅಭಿಲಾಷಾ ಪೂರೈಸಲು ಅನಿಶಾ ವಾಸಾ ಮಾಡಿದಿ ಗಿರಿಯೊಳು ಸರ್ವೇಶ ಕೊಡು ಸತ್ಸಹವಾಸ ದೇಶದಿ ಕಾರ್ಪರವಾಸ ಲಕ್ಷ್ಮಿನರಕೇಸರಿ ರೂಪನೆ ಶೇಷಗಿರೀಶ5
--------------
ಕಾರ್ಪರ ನರಹರಿದಾಸರು
ಶ್ರೀಪತೀ-ಎನಗೇನು ಗತೀ ನನಗಾಗಲಿ ನಿನ್ನಲಿ ರತೀ ಪ ಚಪಲ ತನದಿ ಬಹು ಕಪಟಭಕುತಿನಟಿಸಿ ಗುಪಿತ ದೋಷಿಯು ಆದೆ ಅ.ಪ. ಬಟ್ಟೆ ನೋಡಲು ಬಹು ಛಂಧ-ಮೇಲೆ ಘಟ್ಟಿ ಬಣ್ಣದ ಕಾವಿ ಶಾಟಿ ಹಾಗೆ ಪಟ್ಟೆಮಡಿಗಳ ಭಾರೀ ಥಳಕೊ-ಬಹಳ ದಟ್ಟ ತುಳಸೀಸರಗಳ ಹೊಳಪೂ ಆಹಾ ಸೃಷ್ಠಿಗೊಡೆಯನೆ ಎನ್ನ ಕೆಟ್ಟ ತನಗಳನ್ನು ಎಷ್ಟೆಂದು ಬಣ್ಣಿಪೆ ನಿಟ್ಟ ನೆನೆಯದೆ ಪರರ ದೃಷ್ಟಿನೋಡುತ ಹಿಗ್ಗಿ ಅಟ್ಟಹಾಸದಿ ಕುಣಿದು ಮಾನವ ನನಗೇ 1 ವೇದ ವಾದಗಳೇನು ಕಾಣೆ-ಶುದ್ಧ ಸಾಧು ಕರ್ಮಗಳೊಂದು ಇಲ್ಲ-ಜನರ ಮೋದಗೋಸುಗವೇನೆ ಎಲ್ಲ_ಕಾಮ ಕ್ರೋಧವ ನಿಬಿಡಿತೇನೇ ಬಿಚ್ಚೆಹೃದಯಾ ಆಹಾ ಮಧ್ವರಾಯರ ಶಾಸ್ತ್ರ ಗ್ರಂಥ ಸಹ ತಿಳಿಯದೆಲೆ ಸಿದ್ಧ ಸಾಧಕನಂತೆ ಸಾಧುಲಿಂಗವ ತೋರಿ ಮುಗ್ಧಗೈಯ್ಯುತ ಮಂದಿ ಮೆದ್ದು ಪಕ್ವಾನ್ನಗಳ ಗೆದ್ದುಕೊಳ್ಳುವೆ ಬಹಳ ದಕ್ಷಿಣೆ ಬಹುಮಾನ 2 ನೇಮನಿಷ್ಠೆಗಳಾಟ ಹೊರಗೆ-ಗೃಹದಿ ಪ್ರೇಮವಿಲಾಸ ಆಟ ಕೂಟಜನ ಸ್ತೋಮರೆಲ್ಲವ ನುಡಿವ ನೀತಿ ಖ್ಯಾತಿ ಕಾಮುಕನಾಗಿ ಚರಿಸಿದೆ ಜಗದೀ ಆಹಾ ಹೇಮದಾಸೆಗೆ ಸೂಳೆ ಪ್ರೇಮವ ತೋರ್ಪಂತೆ ಕಾಮಿತಪ್ರದ ನಿನ್ನ ನಾಮ ಸವಿಯನುಣ್ಣದೆ ತಾಮಸರಿಗೆ ಉಪದೇಶ ನೀಡುತ ಸತ್ಯ- ಭಾಮೆಯರಸ ನಿನಗೆ ದೂರನಾದೆನಲ್ಲಾ 3 ಹಾಡಿಹಾಡುವೆ ಎತ್ತಿ ಸುತ್ತ ಜನರು ನೋಡಿ ಹಿಗ್ಗುತ ಬಾಪು ಬಾಪು ನುಡಿಗೆ ಹಾಡಿನಲ್ಲಿಹ ಸವಿಯುಣ್ಣ ದೇನೆ ಆಡಿ ಆಡಿಪೆ ಶಿರವ ಜ್ಞಾನಿಯಂತೆ ಆಹಾ ಕೇಡು ಚಿಂತಿಸಿ ಪರರ ಸ್ವಾರ್ಥಗೋಸುಗನಿತ್ಯ ಕಾಡಿ ಬೇಡುತ ಜನರ ದೂಡುತಿಹೆ ಸಂಸಾರ ಪ್ರೌಢ ಭಕ್ತರ ಗೋಷ್ಠಿಕೂಡಿ ಭಜಿಸದ ಎನ್ನ ಗಾಢ ಡಂಭಕೆ ಜಗದಿ ಈಡು ಕಾಣಿಸು ಸ್ವಾಮಿ4 ಭಾರಿ ಶಾಲುಗಳನ್ನೆ ಹೊದ್ದು-ನಿತ್ಯ ಕೇರಿಕೇರಿ ಪುರಾಣಗಳನ್ನು ಮೆದ್ದು-ಹಾರಿ ಹಾರುತ ತತ್ವರಾಶಿ ನುಡಿದು-ಊರು ಜ- ನರಮುಂದೆ ಪಾಂಡಿತ್ಯ ತೋರ್ಪೆ ಆಹಾ ತೋರಿ ತೋರುವೆ ಪರಮವೈರಾಗ್ಯ ಭಕ್ತಿಯ ದೂರಿ ದೂಡುವೆ ಪರರ ಹುಳುಕುಗಳನು ಎತ್ತಿ ಪಾರುಗಾಣದ ಕರುಣ ತೋರದಿದ್ದರೆ ಇನ್ನು 5 ಗುಡಿಗೆ ಹೋಗುವೆ ನಾನು-ನಿತ್ಯ ಅಲ್ಲಿ ಬೆಡಗು ಸ್ತ್ರೀಯರ ಹುಡುಕುವುದೇನೆ ಕೃತ್ಯ ದೃಢಭಕುತಿಯನು ಮಾಡಲೊಲ್ಲೆ ಸತ್ಯ-ನ ಮಡದಿ ಮಕ್ಕಳಿಗಿಲ್ಲ ಭೃತ್ಯಾನುಭೃತ್ಯಾ ಆಹಾ ಹುಡುಕೀ ನೋಡಿದಾಗ್ಯೂ ವಿರಕ್ತಿ ಭಕ್ತಿಗಳಿಲ್ಲ ಬಿಡಲು ಪೊರೆಯೆ ಪುರಾಣಶಾಸ್ತ್ರಗಳನ್ನು ನಿತ್ಯ ಎನ್ನ ಅನಾದಿ ನೀ ಕಲಿಸದಿದ್ದರೆ ಈಗ 6 ದೊಡ್ಡ ಪಂಡಿತ ನಾನೆಂಬ ಹೆಮ್ಮೆ-ಶುದ್ಧ ದಡ್ಡನೆಂಬುದ ಬಲ್ಲೆ ಮನದಿ-ಹಾಗೂ ಅಡ್ಡ ಬೀಳೆನು ಭಕ್ತ ಗಣಕೆ ಸುಳ್ಳು ವೊಡ್ಡುತವರನು ಹಳಿದೂ-ಕುದಿದೇ ಮನದೀ ಆಹಾ ದುಡ್ಡುಗೋಸುಗ ಬಹಳ ದೊಡ್ಡ ದಾಸನು ಎನಿಸೀ ಹೆಡ್ಡಮಂದಿಯ ಮುಂದೆ ದೊಡ್ಡ ಭಾಷಣ ಮಾಳ್ವೆ ಗುಡ್ಡದೊಡೆಯನೆ ಭಕ್ತಜಿಡ್ಡುಲೇಶವು ಕಾಣೆ ದೊಡ್ಡ ನಾಮವ ಹಾಕಿ ಸಡ್ಡೆ ಮಾಡದೆ ತಿರಿವ 7 ಕಚ್ಚಿ ಬಿಡದಿಹ ತುಚ್ಛ ಕಲಿಯು-ಬಹಳ ಮೆಚ್ಚಿ ಬಂದಿಹ ನವನು ಬಿಡುವನೇನು ಇಚ್ಛೆ ನನ್ನದು ನಡೆಯದೇ ನೊಂದು ತುಚ್ಛ ವಿಷಯದಿ ಸೆಳೆದು ಸೆಳೆಯುತಿಹನು ಆಹಾ ಇಚ್ಛೆಯಿಂದಲಿ ಜಗವ ಸೃಜಿಸಿ ಪಾಲಿಪಲೀಲೆ ಹಚ್ಚಿಕೊಂಡಿಹ ನಿನಗೆ ನನ್ನ ಪಾಲಿಪುದೇನು ಹೆಚ್ಚು ಕಾರ್ಯವೆ ಜೀಯ ಮುಚ್ಚಿಕೊಂಡಹ ನಿನ್ನ ಸ್ವಚ್ಛ ಬಿಂಬವ ತೊರಿ ಮೆಚ್ಚಿ ಕೊಡದಿರೆ ಜ್ಞಾನ 8 ಶ್ವಾಸಮತದಲಿ ಜನ್ಮ ವಿತ್ತೆ-ವಿಜಯ ದಾಸರ ಪ್ರಿಯ ಮೋಹನ್ನ ಪರಂಪರೆಯ ದಾಸನೆನಿಸಿ ಯೆನ್ನ ಮೆರೆಸಿ ಹೀಗೆ ದೋಷಿಗೈವುದು ಥರವೆ ಶ್ರೀಭಕ್ತಪ್ರಿಯ ಆಹಾ ವಾಸುದೇವನೆ ತುರ್ಯಲೇಸು ದೃಷ್ಟಿಯ ಬೀರೆ ನಾಶವಾಗದೆ ದೋಷ ಭಾಸವಾಗದೆ ಜ್ಞಾನ ಕಾಸುಬೀಡೆನು ಹಿರಿಯ ದಾಸರ ಗುಣ ನೋಡಿ ಲೇಸು ನೀಡೆಂತೆಂಬೆ ಶ್ರೀಕೃಷ್ಣವಿಠಲಾ9
--------------
ಕೃಷ್ಣವಿಠಲದಾಸರು