ಒಟ್ಟು 119 ಕಡೆಗಳಲ್ಲಿ , 51 ದಾಸರು , 114 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಬೇಡುವೆ ಹರಿಯ ಮುರಾರಿಯ ಸ್ಮರ ಕೋಟಿತೇಜನ ಸುರಮುನಿವಂದ್ಯನ ಪ ಮನ್ಮಥಕೋಟಿ ಲಾವಣ್ಯರೂಪದಿ ಮೆರೆವ ಮನ್ಮಥಯ್ಯನ ಪೊಗಳುತ್ತಲಿ ಚಿನ್ಮಯರೂಪನ ಚಿದ್ರೂಪನಾದನ ಹೃನ್ಮನದಲಿ ಪಾಡಿಪೊಗಳಿ ಕೊಂಡಾಡುತ ಅ.ಪ ಮನ್ಮನÀದೊಳು ಸ್ಮರಿಸಿ ಸ್ಮರಿಪ ಭಾಗ್ಯವು ಮುನ್ನ ಕರುಣಿಸಿ ಸಲಹು ಬಲು ಸಂ- ಪನ್ನ ನಿನಗೆದುರಿಲ್ಲ ಧರೆಯೊಳು ಪನ್ನಗಾದ್ರಿ ನಿವಾಸ ಶ್ರೀಶನ1 ವಿಶ್ವವ್ಯಾಪಕ ನೀನೆ ವಿಶ್ವಮೂರುತಿ ನೀನೆ ವಿಶ್ವ ನೀನೆ ಶ್ರೀ- ವಿಶ್ವವಸುನಾಮ ಸಂವತ್ಸರದೊಳು ಮೆರೆವ ವಿಶ್ವಮೂರುತಿ ಶ್ರೀ ಸರ್ವೇಶ್ವರ ನೀನೆಂದು2 ವಿಶ್ವಮಯ ವಿಶ್ವೇಶ ಶ್ರೀಹರಿ ವಿಶ್ವನಾಮಕ ವಿಮಲ ಸುಖಮಯ ವಿಶ್ವವನು ಉದರದೊಳು ಧರಿಸಿದ ವಿಶ್ವವನು ವದನದಲಿ ತೋರ್ದನ 3 ಕಮಲದಳಾಕ್ಷನ ಕಮನೀಯ ರೂಪನ ಕಮಲ ಸಂಭವನ ಪೆತ್ತಿಹ ಧೀರನ ಕಮಲಮುಖಿಯ ಕರಕಮಲದಿ ಪೂಜ್ಯನ ಕಮಲೆಯೊಡಗೂಡುತ ನಲಿವನ 4 ಕಮಲ ಕರದೊಳು ಪಿಡಿದ ಕಮಲೆಯ ಕಮಲನಾಭನ ಪಿತನೆ ಮುದದೊಳು ಕಮಲೆಯನು ಕೈಪಿಡಿದು ಮೆರೆಯುವ ಕಮಲನಾಭವಿಠ್ಠಲನ ಪ್ರತಿದಿನ5
--------------
ನಿಡಗುರುಕಿ ಜೀವೂಬಾಯಿ
ಸ್ಮರಿಸುವರಘಹರ ರಾಘವೇಂದ್ರ ಗುರುಆರುಮೊರೆ ಇಡುವೆನು ತವಪದದಲ್ಲೀ ಪ ಸುರತರು ನಿನ್ನನು | ನಿರುತದಿ ನುತಿಸುವವರವನೆ ಕರುಣಿಸು | ಗುರು ರಾಘವೇಂದ್ರ ಅ.ಪ. ಕೃತ ಯುಗದೊಳು ತಾ | ಮುನಿ ಕಶ್ಯಪನಸುತನಲಿ ಮೋದದಿ | ಸುತನಾಗಿ ಜನಿಸುತ |ಪಿತನತಿ ಬಾಧೆಗೆ | ಅಳುಕದೆ ಮನ್ಮಥಪಿತನಧಿಕೆಂದು ಬಹು | ಸಾರಿದೆ ಗುರುವರ 1 ಜನಪ ಪ್ರತೀಪನ | ಸುತ ವರನೆನಿಸುತಜನಿಸುತ ಪ್ರೀತಿಲಿ | ದ್ವಾಪರದಲ್ಲೀ |ಘನಬಲ ಬಾಹ್ಲೀಕ | ನೆನಿಸುತ ನೀನೂಅನಿರುದ್ಧ ಮೂರ್ತಿಯ | ಸೇವಿಸಿ ಮೆರೆದೆ 2 ನ್ಯಾಯಾ ಮೃತ ಚಂ | ದ್ರಿಕೆಗಳ ರಚಿಸುತಮಾಯ ಮತವನು | ಪರಿಪರಿ ಜೆರೆಯುತ |ಕಾಯ ಜನಯ್ಯನ | ಕೀರ್ತಿಯ ಬೀರುತತೋಯಜಾಕ್ಷ ಹರಿ | ಅಧಿಕೆಂದು ಸಾರಿದೆ 3 ಸಂಗವ ತೊರೆದು | ಸುಧೀಂದ್ರರ ಕರಜನೆತಂಗಾತೀರದಿ | ಮಂತ್ರಾಲಯದಲಿ |ಮಂಗಳ ಮಹಿಮನ | ಧ್ಯಾನವ ಗೈಯುತತುಂಗ ವಿಕ್ರಮ ಹರಿ | ಪರನೆಂದು ಸಾರಿದೆ 4 ವಾತನ ಮತ ವಿ | ಸ್ತರಿಸಿದ ಧೀರನೆದ್ವೈತ ದುಂದುಭಿಯ | ಮೊಳಗಿಸಿದಾತನೆ |ದೂತರ ಪ್ರಿಯ ಗುರು | ಗೋವಿಂದ ವಿಠಲನಪ್ರೀತಿಲಿ ಭಜಿಸುವ | ದಾಸಾಗ್ರಣಿಯೇ 5
--------------
ಗುರುಗೋವಿಂದವಿಠಲರು
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು ಸರಸಿಜಭವಾದ್ಯರಿಗೆ ಬಿಡದು ಪ ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ ದಿರದಾವ ಜನುಮವಾಗೆ ಪ್ರಾಣಿ ಅ.ಪ. ವಾರಿಜಭವನ ನೋಡು ಮುನಿಶಾಪದಿಂ ಧಾರುಣಿಯೊಳು ಪೂಜೆ ತೊರೆದ ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ- ತಾರವಿಲ್ಲದವನಾದನೋ ಪ್ರಾಣಿ1 ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು ಯುಗದೊಳಗೆ ಕೋತ್ಯಾದನಲ್ಲೋ ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ 2 ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ ಅವನಿಪತಿ ಮೊರೆ ಹೊಕ್ಕನಲ್ಲೊ ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ 3 ಇಂದ್ರ ತರ್ಕವನೋದಿ ನರಿಯಾದ ಪರಸತಿ- ಯಿಂದ ಮೇಷ ವೃಷಣನಾಭ ಕಂದರ್ಪ ಶರೀರದಿಂದ ನಾಶನನಾಗಿ ಬಂದ ಮೀನಿನ ಗರ್ಭದಿಂದ ಪ್ರಾಣಿ4 ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ ಭಾರ್ಯರಿಗೆ ಶಿಲುಕಿ ತಮ್ಮಾ ವೀರ್ಯವನು ಕಳಕೊಂಡು ಬರಿದಾದರೋ ಕರ್ಮ- ಕಾರ್ಯ ವಾರಿಗು ಬಿಡದೆಲೋ ಪ್ರಾಣಿ 5 ಪಾವಕನು ಸರ್ವಭಕ್ಷಕನಾದ ಮಿಕ್ಕಾದ ಅವಾವ ಸುರರ ಕರ್ಮಂಗಳ ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು ಪಾವನ್ನ ನೀನಾಗೆಲೋ ಪ್ರಾಣಿ 6 ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ ಸಾವು ಸಾಕಲ್ಯದಿ ಮರೆಯದಲೆ ಕ್ಲುಪ್ತ ಮಾಡಿಪ್ಪನೋ ಅದನು ಆವನಾದರು ಮೀರಲೊಳÀವೇ ಪ್ರಾಣಿ 7 ಉಣಬೇಕು ಉಣಬೇಕು ಮತ್ತೆ ಉಣಲೀಬೇಕು ತ್ರಿ-ಗುಣ ಕಾರ್ಯರ ಭವಣೆ ಮನುಜ ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು ಅಣುಮಾತ್ರವೂ ತಪ್ಪವೋ ಪ್ರಾಣಿ 8 ಧೀರನಾಗಲಿ ಮಹಾಶೂರನಾಗಲಿ ಮತ್ತೆ ಧಾರುಣೀಪತಿ ಭಾಗ್ಯನಾಗೆ ಆರಿಗಾದರು ಬಿಡದು ಪರೀಕ್ಷಿತರಾಯನು ನೀರೊಳಗಿದ್ದ ತಿಳಿಯೋ ಪ್ರಾಣಿ 9 ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ- ಬಿಲ ಸಪ್ತದ್ವೀಪ ಪಾತಾಳದಿ ನಭ ಸ್ವರ್ಗಾದಿಲೋಕ ಜನನಿಯ ಜಠರ- ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ 10 ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ ಗುಣವಂತ ಜನರು ಒಂದು ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ 11 ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ- ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ 12 ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು ರೊಕ್ಕಾ ಸುಖ ದುಃಖ ಕಾರಣಗಳು ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ- ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ 13 ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ- ದೇಶಕ್ಕೆ ಒಯ್ಯುವುದು ಕಾಲ ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ- ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ 14 ಮಾರುತ ಭಾರತಿ ಶೇಷ ಶಿವ ಪಾರ್ವತಿ- ಸರಸಿಜ ಬಾಂಧವಾಗ್ನಿ ಧರ್ಮ ಕಾಲ ಮೃತ್ಯು ಕಾಲನ ದೂತರು ಅರಸುತಿಪ್ಪರು ಲವ ತೃಟಿಯ ಪ್ರಾಣಿ 15 ಇವರಿವರಿಗುತ್ತಮರು ಇವರಿವರಗಧಮರು ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು ವಿವರದಲಿ ತಿಳಿ ತಾರತಮ್ಯ ಪ್ರಾಣಿ 16 ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ ಶಕುತಿಯಿಲ್ಲವೊ ಕಾಣೊ ಮರುಳೆ ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ- ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ 17 ಕರುಣಾ ಕಟಾಕ್ಷವುಳ್ಳನಕ ಸುರ ನರೋರಗ ಯಕ್ಷಲೋಕದಲ್ಲಿದ್ದವರು ಬರಿದೆ ಕೂಗಿದರೇನು ಆಹುದೋ ಪ್ರಾಣಿ 18 ಕಾಲ ತಪ್ಪಿಸಿ ಕಾವ ಹರಿತಾನು ಸಾವ ಕಾಲವ ಮಾತ್ರ ತಪ್ಪಿಸನೋ ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ 19 ಭಗವವÀಸ್ವತಂತ್ರವನು ತಿಳಿಯದೆ ಮರುಳಾಗಿ ಜಗದೊಳಗೆ ಚರಿಸದಿರೊ ಮಾನವ ಅಘ ದೂರನಾಗೊ ನಾನಾ ಬಗೆಯಿಂದಲ- ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ 20 ಹಲವು ಮಾತೇನಿನ್ನು ದಾಸಭಾವವ ವಹಿಸಿ ಕಲಿಯುಗದೊಳಗೆ ಸಂಚರಿಸೆಲೊ ಬಲವಂತ ವಿಜಯವಿಠ್ಠಲನ ಪಾದಾಂಬುಜವ ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ 21
--------------
ವಿಜಯದಾಸ
ಹುಡದಿಯಾಡುವದೇನು ಮಡದಿಯೋರ್ವಳು ನಾನು ಮಮತೆಯದು ಸರಿಯಲ್ಲಾ ಪ ನಾರೊಮೈಯವನಾಗಿ ಭಾರಪೊತ್ತವನಾಗಿ ಭಾರಿ ಸೂಕರನಾಗಿ ಬೆದರಿಪ ಕ್ರೂರಡವಿ ಮೃಗರಾಜನಾಗಿ 1 ಪೋರಪಟು ತಾನಾಗಿ ಶೀರ್ಪರ ಶುದ್ರತನಾಗಿ ಆರ್ಭಟಿಪ ಕೋದಂಡ ಕರನಾಗಿ ಧೃತ ಚಕ್ರನಾಗಿ2 ತೀರ ಬತ್ತಲೆಯಾಗಿ ಆರೂಢಹಯ ತಾನಾಗಿ ಪಾಯ [?] ಕಾಣೆ ಧೀರನರಸಿಂಹವಿಠಲನಾಗಿ 3
--------------
ನರಸಿಂಹವಿಠಲರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಆಟಪಾಟವ ನೋಡಿ ಧನ್ಯರು ರಂಗಯ್ಯನಾಡ್ವಆಟಪಾಟವ ನೋಡಿ ಧನ್ಯರು ಪ.ಹೊಕ್ಕಳಲ್ಲಿರೊ ಮಗನು ಕಂಡರೆನಕ್ಕಾನೆಂಬ ಹೇಯ ಬಿಟ್ಟುಚಿಕ್ಕರೊಡನೆ ನಂದವ್ರಜದಿಮಕ್ಕಳಂತಲಿಪ್ಪ ರಂಗನಾಟ 1ಅಂಗಳದಲ್ಲಿದ್ದ ಪಂಕದಲ್ಲಿಮುಂಗೈಯ ಮುರಾರಿ ಕೃಷ್ಣಸಂಗದೆಳೆಯ ಮಕ್ಕಳೊಡನೆಹಿಂಗದೆ ಬೈಯ್ಯಾಟವಾಡುವಾಟ 2ಚಿನ್ನ ಬಾ ನೀ ಹಸಿದೆಯೆಂದುಚೆನ್ನ ನೀ ಉಣಿಸಿದರೊಲ್ಲದೆಕನ್ನವಿಕ್ಕಿ ಗೊಲ್ಲರ ಮನೆಯಬೆಣ್ಣೆಮೊಸರಸೂರ್ಯಾಡಿಮೆಲ್ಲುವಾಟ3ರಂಬಿಸಿಗೋಪಿನೀಲವರ್ಣದಬೊಂಬೆ ಬಾಲ ತೋಟಿ ಬೇಡೆನೆಕೊಂಬು ಕೊಳಲು ಸೆಳೆದು ಹೆಟ್ಟಿಕುಟ್ಟುವಡೆÉೂಂಬಿಕಾರ ವೀರಧೀರನಾಡುವಾಟ 4ಅಡಗಿದರ್ಭಕರ ಬಲ್ಪಿನಿಂದಲೆಹಿಡಿದುತಂದು ಚಿಣ್ಣಿ ಚಂಡನಾಡುತಬಡಿದು ಸೋಲಿಸಿ ದೂರು ಬರುವ ಮುನ್ನೆಹುಡಿಯ ಹೊರಳೇಳುವ ತೊಂಡೆಕಾರ ದೇವನಾಟ 5ಮೃತ್ತಿಕೆಯನುಂಬ ಮಗನ ಕಂಡುಮತ್ತೆಶೋದೆ ಅಕ್ಕಟೆಂದುತುತ್ತಿಸಿದ ಮಣ್ಣ ತೆಗೆಯಲಾಗಳೆಮತ್ರ್ಯನಾಕವಿಸ್ತಾರ ತೋರಿದ6ಹಲವು ಹಗ್ಗದಿಂ ಕಟ್ಟಿದಗೋಪಿಲಲನೆಗಚ್ಚರಿಯಾಗಿ ಉಲೂಖಲನ ಎಳೆದು ಮತ್ತಿಯ ಮರಗಳಛಲದಿ ಮುರಿದ ವಿಚಿತ್ರ ಚರಿತ್ರನ 7ಕರುಣದೋರಿ ಗೋಪಾಂಗನೇರತೋರದ ಮೊಲೆಯುಂಡ ವರಶಿಶುಗಳಉರುಳಗೆಡಹ್ಯವರೊಳು ನಲಿವದುರುಳಮಾಯಕಾರಖಿಳರೊಡೆಯನ8ಆರ ಪುಣ್ಯವೆಂತಂತೆ ಲೀಲೆಯತೆÉೂೀರಿ ಮುದ್ದು ಮೋಹವ ಬೀರಿದಸಾರಿದ ಭಕ್ತವತ್ಸಲ ನಮ್ಮಜಾರಚೋರ ಪ್ರಸನ್ವೆಂಕಟೇಶನಾಡುವ ಆಟ 9
--------------
ಪ್ರಸನ್ನವೆಂಕಟದಾಸರು
ಕಡಲದಾಟಿದ ಬಲುಧೀರನೆ ಬಂದುಒಡಲ ಹೊಕ್ಕವರಿಗುದಾರನೆ ಪ.ಬಿಡದೆ ಭಕ್ತರ ಕೈಯವಿಡಿದು ರಕ್ಷಿಸುವ ಎನ್ನೊಡೆಯ ಹನುಮರಾಯ ಅಡವಿಯನಿಲಯಅ.ಪ.ದೃಢದಿಂದ ಲಂಕೆಯ ಪೊಕ್ಕನೆ ದೇವಮೃಡನಿಂದ ಪೂಜೆಗೆ ತಕ್ಕನೆಪೊಡವಿಯ ಮಗಳನು ಕಂಡನೆ ಕಿತ್ತುಗಿಡ ವನಗಳ ಫಲ ಉಂಡನೆಅಡಿಗಡಿಗೊದಗಿದ ಕಿಡಿಗೇಡಿ ರಕ್ಕಸರ್ಹೊಡೆದು ಪುರವನೆಲ್ಲ ಕಿಡಿಗಂಜಿಸಿದ ಧೀರ 1ತಡೆಯದೆ ಸುದ್ದಿಯ ತಂದನೆ ಜಗದೊಡೆಯ ರಾಮನ ಮುಂದೆ ನಿಂದನೆಪಿಡಿದೆತ್ತಿ ತರುಗಿರಿ ಪೊತ್ತನೆ ಕಪಿಗಡಣಕ್ಕೆ ಒಬ್ಬನೆ ಕರ್ತನೆಜಡಧಿ ದಾರಿಯಕಟ್ಟಿನಡೆದು ರಾವಣನೆದೆಒಡೆಗುದ್ದಿಕಾಳಗಜಡಿದುಮಾಡಿಸಿದೆ2ಪೆಡಕಿಲಾಸನವಿತ್ತು ದಾತಗೆತುಷ್ಟಿಬಡಿಸಿದೆ ಶ್ರೀರಘುನಾಥಗೆಕಡುವೇಗ ಸಂಜೀವ ಸಲಿಸಿದೆ ನೊಂದುಪುಡಿವಟ್ಟ ಕಟಕವ ನಿಲಿಸಿದೆಬಡವರಾಧಾರಿ ನಿನ್ನಡಿಗೆರಗುವೆ ಲೇಸಕೊಡು ಪ್ರಸನ್ವೆಂಕಟ ಒಡೆಯನನಿಲಯ3
--------------
ಪ್ರಸನ್ನವೆಂಕಟದಾಸರು
ಗುರುವಿನ ಒಲುಮೆಯು ಆಗುವ ತನಕ |ದೊರೆಯದಣ್ಣ ಮುಕುತಿ ಪ.ಪರಿಪರಿ ಶಾಸ್ತ್ರವನೇಕವನೋದಿ |ವ್ಯರ್ಥವಾಯಿತು ಭಕುತಿ ಅಪಆರು ಶಾಸ್ತ್ರಗಳನೋದಿದರೇನು |ಮೂರಾರು ಪುರಾಣವ ಮುಗಿಸಿದರೇನು ||ಸಾರಿ ಸಜ್ಜನರ ಸಂಗವ ಮಾಡದೆ |ಧೀರನಾಗಿ ತಾ ಮೆರೆದರೇನು ? 1ಕೊರಳೊಳು ಮಾಲೆಯ ಧರಿಸಿದರೇನು |ಕರದಲಿ ಜಪಮಣಿ ಎಣಿಸಿದರೇನು ||ಮರುಳನಂತೆ ತಾ ಶರೀರಕೆ ಬೂದಿಯ |ಒರಸಿಕೊಂಡು ತಾ ತಿರುಗಿದರೇನು 2ನಾರಿಯರ ಸಂಗವ ಅಳಿದರೇನು|ಶರೀರಕೆ ದುಃಖವ ಪಡಿಸಿದರೇನು|ಮಾರಯ್ಯ ಶ್ರೀ ಪುರಂದರವಿಠಲನ |ಮರೆಯದೆ ಮನದೊಳು ಬೆರೆಯುವ ತನಕ 3
--------------
ಪುರಂದರದಾಸರು
ತದಿಗೆಯ ದಿವಸ(ಶೇಷ ದೇವರನ್ನು ಕುರಿತು)ರಂಭೆ :ನ್ಯಾರೆಂಬುದನೆನಗೆ ಪೇಳೆಕ್ರೂರತನದಿ ತಾ ತೋರುವನೀಗ ಮ-ಹೋರಗನೆನ್ನುತ ಕೋರಿಕೆ ಬರುವದು 1ಒಂದೆರಡು ಶಿರವಲ್ಲ ಬಹುಹೊಂದಿಹವು ಸಟೆಯಲ್ಲಕಂಧರದಲಿ ಕಪ್ಪಂದದಿ ತೋರ್ಪವುಚಂದಿರಮುಖಿ ಯಾರೆಂದೆನಗರುಹೆಲೆ 2ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-ಸಾಮಾನ್ಯನೆ ಕಾಣೆಭೂಮಿಯ ಪೊತ್ತ ನಿರಾಮಯನಾದಸುಧೀಮನಿವನು ಜಾಣೆ 1ವಾಸುದೇವಗೆ ಈತ ಹಾಸಿಗೆಯವ ನಿ-ರ್ದೋಷನಿವನು ಜಾಣೆಸಾಸಿರಮುಖದ ವಿಲಾಸನಾಗಿಹ ಮಹಾ-ಶೇಷನಿವನು ಕಾಣೆ 2ಅದರಿಂದಲಿ ಕೇಳ್ ತದಿಗೆಯ ದಿವಸದಿಮಧುಸೂದನನಿವನಅಧಿಕಾನಂದದಿ ಒದಗಿಸಿ ಬರುವನುಇದೆಯಿಂದಿನಹದನ3ಎಂದಿನಂತೆ ಪುರಂದರವಂದ್ಯ ಮುಕುಂದಸಾನಂದದಲಿಅಂದಣವೇರಿ ಗೋವಿಂದ ಬರುವನೊಲ-ವಿಂದತಿ ಚಂದದಲಿ 4ಕಂಟಕಗಳು ಎಲ್ಲುಂಟೆಂಬಂತೆ ನೃಪ-ಕಂಠೀರವಗೈದಘಂಟಾನಾದದಿ ಮಂಟಪದೊಳು ವೈ-ಕುಂಠನು ಮಂಡಿಸಿದಾ 5ಕಾಂತಾಮಣಿ ಕೇಳಿಂತೀಪರಿ ಶ್ರೀ-ಕಾಂತ ನತತಂಡಸಂತವಿಸುತ ಮಹಾಂತಮಹಿಮನೇ-ಕಾಂತಸೇವೆಯಗೊಂಡ 6* * *ಪರಶಿವನನ್ನು ಕುರಿತುರಂಭೆ : ಯಾರಮ್ಮಾ ಮಹಾವೀರನಂತಿರುವನುಯಾರಮ್ಮಾ ಇವನ್ಯಾವ ಶೂರ ಯಾವಊರಿಂದ ಬಂದ ಪ್ರವೀರ ಆಹಾಮಾರಜನಕನ ವಿಸ್ತಾರಪೂಜೆಯ ವೇಳ್ಯಧೀರನಂದದಿ ತಾ ವಿಚಾರ ಮಾಡುವನೀತ 1ಕರದಿ ತ್ರಿಶೂಲವ ಧರಿಸಿ ಮತ್ತೆವರಕೃಷ್ಣಾಜಿನವನುಕರಿಸಿಹರಿಚರಣಸನ್ನಿಧಿಗೆ ಸತ್ಕರಿಸಿ ಆಹಾಜರಿಯ ದುಕೂಲವ ನಿರಿದುಟ್ಟುಕೊಂಡು ವಿ-ಸ್ತರವಾದ ತೋಷದಿ ಮೆರದು ನಲಿವ ಕಾಣೆ 2ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.ಈತನೀಗ ಪೂರ್ವದೊಳಗೆಭೂತನಾಥ ಸೇವೆಯೊಲಿದಓತು ವಿಷ್ಣುಭಕ್ತಿಯಿಂದಪೂತನಾದ ಪುಣ್ಯಪುರುಷ ಅ.ಪ.ಊರು ಇವಗೆ ಮೊದಲು ಗಂಗಾತೀರವಾಯ್ತುವೇಣುತಾ ವಿ-ಚಾರದಿಂದ ಪೊದನೈಉದಾರತನದಿ ರಾಮೇಶ್ವರಕೆಸಾರಗ್ರಹಿತ ಮುಕ್ತಿ ಪಥವನು ಕರುಣದಿಂದತೋರಿಸುವನು ವಿಷ್ಣುವೆಂದೆನುತ ಗಿರಿಯನೇರಿ ಕರುಣ ವಾರಿಧಿಯಪದಾರವಿಂದಸೇವೆಗೈದುಮಾರಪಿತನ ಭಕ್ತಿಯೊಳು ತಾ ಹೇರಿನಲಿವ ಚಾರುಚರಿತ 1ಪರಮಪುರುಷ ಹರುಷದಿಂದೀಪುರಕೆಬರುವಕಾಲದಲ್ಲಿಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆಚರಿಸುವ ತ್ರಿಕಾಲಪ್ರಜÕನು ಇವನ ಗುಣವ-ನರಿವರ್ಯಾರು ಮನುಜಭುಜಂಗರಲಿಮಹತ್‍ಕಾರಣೀಕಪುರುಷನಿವ ಮಹಾ ಬಲಾಢ್ಯಕರುಣವುಳ್ಳ ವಿಷ್ಣುಭಕ್ತ 2ಶ್ರೀನಿವಾಸ ಕರುಣದಿಂಪ್ರಧಾನಿಯೆಂದು ನಡೆಸಿಕೊಡುವಏನಗೈದರೀತ ಮನದಿ ತಾನುತೋಷಪಟ್ಟು ಇರುವಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತನಾನಾ ಉಪದ್ರವಗಳ ಬಿಡಿಸುವ ಧನಿಯ ಆಜೆÕಏನ ದೊರಕಿತದನು ಬೇಗ ತಾನೆಬಂದು ಪೇಳಿ ಜನರಮಾನಿಸುತ ನಿಧಾನಗೊಳಿಸಿಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |ಕ್ಷಿತಿಸುರಗುರುಸುಗುಣ ಸಾಂದ್ರನ ಮುನಿಪನ ಪಭಾಗವತರ ಪ್ರಿಯನೆನಿಪನ ಪ್ರಣತ ಜನರ |ರೋಗ ಕಳೆದು ಸುಖ ಕೊಡುವನ ಕುಮತಗಳನು |ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |ಯೋಗಿವರ್ಯರವಿಪ್ರಕಾಶನಾ ಅನಘನ 1ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |ಭೋಗತೊರೆದ ನಿಷ್ಪ್ರಪಂಚನ ದುರ್ಮತಿಗಳ |ಯೋಗಕೊಲಿಯದಿಪ್ಪ ಧೀರನಭವಭಯವನು |ನೀಗಿಹರಿಯ ಸದನವ ತೋರ್ಪನಾ ವರದನ 2ಕಲಿಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||ಜಲಧಿಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |ನಿಲಯಶ್ರೀ ವಸುಧೇಂದ್ರ ಪುತ್ರನ ವಿರಕ್ತನ3
--------------
ಪ್ರಾಣೇಶದಾಸರು
ತೊಟ್ಟಿಲ ತೂಗುವೆ ಕೃಷ್ಣನ ತೊಟ್ಟಿಲ ತೂಗುವೆಪುಟ್ಟಬಾಲಕರೊಳುಪರಮಶ್ರೇಷ್ಠನಾದನಾಪಮೀನನಾಗಿ ಭಾರಪೊತ್ತು ಬೇರು ಮೆಲ್ಲಿದನಕ್ನೂರರೂಪ ತೋರಿ ಭೂಮಿದಾನ ಬೇಡ್ದನ 1ಭೂಮಿಪರ ಸಂಹರಿಸಿದ ಶ್ರೀರಾಮಚಂದ್ರನಮಾವ ಕಂಸನ ತರಿದ ಬಲರಾಮನನುಜನ 2ಬುದ್ಧರೂಪದಿಂದ ತ್ರಿಪುರರನೊದ್ದ ಧೀರನಮುದ್ದು ತೇಜಿನೇರಿ ಮೆರೆದ ಪದ್ಮನಾಭನ 3ಉಲಿವು ಮಾಡಬೇಡಿರಮ್ಮ ಚಲುವ ಮಲಗುವನಳಿನನಾಭನನ್ನು ಸ್ಮರಿಸಿ ನಲಿದು ಪಾಡುವ 4ಕಮಲಮುಖಿಯರೆಲ್ಲ ಬನ್ನಿ ಕುಣಿದು ಪಾಡುವಕಮಲನಾಭ ವಿಠ್ಠಲನಂಘ್ರಿ ಸ್ಮರಣೆ ಮಾಡುವ 5
--------------
ನಿಡಗುರುಕಿ ಜೀವೂಬಾಯಿ
ನಾನೆಲ್ಲ್ಲು ಪೋಗಲಿಲ್ಲ ನಾರಿಯರೆನ್ನದೂರುವರಿದ ನೋಡಮ್ಮ ಪವಾರಿಗೆಯ ಗೆಳತಿಯರು ಸೇರುತಕೂಡಿ ಮಾತುಗಳಾಡಿ ನಗುವರುಚಾಡಿ ಮಾತುಗಳ್ಹೇಳ ಬರುವರುಕೇಳಿಮನದಲಿ ಕೋಪಿಸದಿರುಅ.ಪಬ್ರಹ್ಮನ ಪಿತನೆಂಬೊರೊ ಎನ್ನನು ಪುಟ್ಟಸಣ್ಣ ಕೂಸೆಂದರಿಯರೆಬ್ರಹ್ಮಾಂಡೋದರನೆಂಬೋರೇ ಕೇಳಮ್ಮಯ್ಯಸಣ್ಣುದುರನೆಂದರಿಯರೆಬೆಣ್ಣೆ ಕಳ್ಳನು ಸಣ್ಣವನು ಎಂದುಕಣ್ಣು ಸನ್ನೆಗೆ ಚಂದ ನಗುವರುಚಿನ್ನನೆಂದು ಮುದ್ದಿಸುವರೆನ್ನುತಕನ್ಯೆಯರು ಅಪಹಾಸ್ಯ ಮಾಳ್ಪರು 1ನೀರ ಪೊಕ್ಕವನೆಂಬೋರೆ ವೇದ ತಂದಿತ್ತನಾರುವ ಮಯ್ಯವನೆಂಬೋರೇಭಾರಪೊತ್ತವನೆಂಬೋರೇ ಮೋರೆ ತಗ್ಗಿಸಿದಘೋರರೂಪನು ಎಂಬೋರೇಕೋರೆ ದಾಡಿಯ ನೆಗಹಿ ಧರಣಿಯಶೂರ ಹಿರಣ್ಯಾಕ್ಷಕನ ಸೀಳಿದಕ್ರೂರ ರೂಪವ ಧರಿಸಿ ಕರುಳಿನಮಾಲೆ ಹಾಕಿದ ಧೀರನೆಂಬೋರು 2ಮೂರು ಪಾದದ ಭೂಮಿಯ ಬೇಡಲು ಬ್ರಹ್ಮ-ಚಾರಿಯಾದನು ಎಂಬೋರೇಮೂರು ಏಳೆನಿಸಿಕೊಂಡು ಧರಣಿಯ ಸುತ್ತಿದಧೀರ ರಾಮನು ಎಂಬೋರೇನಾರು ವಸ್ತ್ರವ ಧರಿಸಿವನವನಸೇರಿವಾನರರೊಡನೆ ಚರಿಸಿದನಾರಿಯರ ವಸ್ತ್ರಗಳ ಕದ್ದ ನವ-ನೀತ ಚೋರನೆಂದೆನಿಸುತ ನಗುವರು 3ಬತ್ತಲಿರುವನೆಂಬೋರೇ ತ್ರಿಪುರಗೆದ್ದಉತ್ತಮಹರಿಎಂಬೋರೇಉತ್ತುಮಾಶ್ವವನೇರುತ ಧರೆಯಲಿ ಮೆರೆದಮತ್ತೆ ರಾವುತನೆಂಬೋರೇಹತ್ತು ವಿಧದಲಿ ಅವತರಿಸಿ ನಿಜಭಕ್ತರನು ರಕ್ಷಿಸಿದೆನೆಂಬೋರುಮುಕ್ತಿದಾಯಕ ಹರಿಗೆ ಸಮರುಅಧಿಕರ್ಯಾರಿಲ್ಲೆನುತ ನಗುವರು 4ಮುದ್ದು ಮಾತಗಳಕೇಳಿಸಂಭ್ರಮದಿಂದಎದ್ದು ಮಗನನಪ್ಪುತಶ್ರದ್ಧೆಯಿಂದಲಿ ನೋಡುವ ತೊಡೆಯಲಿಟ್ಟುಮುದ್ದಿಸಿ ನಸುನಗುತಾಪದ್ಮನಾಭಶ್ರೀ ಕಮಲನಾಭನ ವಿ-ಠ್ಠಲನ ಮುಡಿನೇವರಿಸಿ ಹರುಷದಿತಿದ್ದುತಲಿ ಮುಂಗುರಳು ನಗುಮುಖಮುದ್ದಿಸುತ ಮುದದಿಂದ ನಲಿವಳು 5ಲಾಲಿಸಿದಳು ಮಗನ ಗೋಪೀದೇವಿಲಾಲಿಸಿದಳು ಮಗನ
--------------
ನಿಡಗುರುಕಿ ಜೀವೂಬಾಯಿ
ನೆನೆಯಿರೊ ಭಕುತ ಜನರು-ಅನುದಿನವೂನೆನೆಯಿರೊ ಭಕುತ ಜನರುಗಳು ಪಘನಮಹಿಮನ ಸೇವೆಯ ಮಾಡಿದರಾಮನದಲಿ ನೆನೆದ ಅಭೀಷ್ಟವೀವ ಹನುಮಂತ ಅ.ಪಒಂದು ಯುಗದಿ ಹನುಮಂತಾವತಾರನಾಗಿಬಂದು ನೆರೆದಯೋಧ್ಯಾಪುರಕಾ ||ಬಂದ ಧೀರನ ನೋಡಿ ಸುಜನರೆಲ್ಲ-ನಂದದಿಂದಲಿ ಪಾಡಿ 1ವಾಯು ಕುಮಾರಕ ದ್ವಾಪರದಲಿ ಭೀಮ-ರಾಯನೆಂದೆನಿಸಿದ ಕೌರವ ಬಲದಿ ||ನಾಯಕನಾಗಿ ಬಂದ ದುಃಶಾಸನ-ಕಾಯವಳಿದು ನಿಂದ 2ಕಾಯಜಪಿತನ ಮುಂದೆ ಕೌರವರ ತಂದು ರಾಜ-ಸೂಯಯಾಗವ ಮಾಡಿದ ಬಲವಂತ ||ರಾಯರಾಯರ ಧೀರ-ಹನುಮಂತ-ಪ್ರಿಯ ಜನ ಮಂದಾರ 3ಗುರುಮಧ್ವಮುನಿಯಾಗಿ ಹರಿಗತಿಪ್ರಿಯನಾಗಿ-ಕರುಣಾಕರನಾಗಿ ಶರಣರ ಪೊರೆವ ||ಮೆರೆವ ಶ್ರೀ ಹನುಮಂತನ-ದೇವನ ಸ್ಮರಿಸಿರೊ ಗುಣವಂತನ 4ಲಂಕಾಪಟ್ಟಣದ ಸಮೀಪ ಸಮುದ್ರ ದಾಟಿಪಂಕಜನಾಭಶ್ರೀ ಪುರಂದರವಿಠಲನಲೆಂಕ ರಾವಣನ ಗೆದ್ದ-ಈ ಹನುಮಂತ-ಪಂಕಜಮುಖಿಯ ಕಂಡ 5
--------------
ಪುರಂದರದಾಸರು
ಬಣ್ಣಿಸಿಗೋಪಿತಾ ಹರಿಸಿದಳು |ಎಣ್ಣೆಯನೂಡುತ ಯದುಕುಲ ತಿಲಕನ ಪಆಯುಷ್ಯವಂತನಾಗು ಅತಿ ಬಲ್ಲಿದನಾಗು |ಮಾಯಾವಿ ಖಳರ ಮರ್ದನ ನಾಗು ||ರಾಯರ ಪಾಲಿಸು ರಕ್ಕಸರ ಸೋಲಿಸು |ವಾಯುಸುತಗೆ ನೀ ಒಡೆಯನಾಗೆನುತಲಿ 1ಧೀರನು ನೀನಾಗು ದಯಾಂಬುಧಿಯಾಗು |ಆ ರುಕ್ಮಿಣಿಗೆ ನೀನರಸನಾಗು ||ಮಾರನ ಪಿತನಾಗು ಮಧುಸೂದನನಾಗು |ದ್ವಾರಾವತಿಗೆ ನೀ ದೊರೆಯಾಗೆನುತಲಿ 2ಆನಂದ ನೀನಾಗುಅಚ್ಯುತನೀನಾಗು |ದಾನವಂತಕನಾಗುದಯವಾಗು|ಶ್ರೀನಿವಾಸನಾಗು ಶ್ರೀಧರ ನೀನಾಗು |ಜ್ಞಾನಿಪುರಂದರವಿಠಲನಾಗೆನುತಲಿ3
--------------
ಪುರಂದರದಾಸರು
ಬಾರನ್ಯಾತಕೆ ವಾರಿಜಾನನೆ ಶ್ರೀಮಾರಜನಕಸಕಲ ಸುಖಕೆ ಕಾರಣನು ಕರುಣಿಸಿ ತಾನೆಪ.ಭುವನೇಶನಿನಿಯಳಣುಗ ತಾ ಪಿಡಿದು ಜರಿದ ಬಲಹಗೆಹ್ಯಾವಿಲೆಳೆದವನೊಳು ಕಾದಿ ತಾವೊಲಿದ ದೊರೆಯ ನಮಿಸಿಭಾವಕದಿದು ಇಷ್ಟವ ಪಡೆದನ ಜನನಿಸುತರಜೀವಕೆಡರು ಬರಲಿ ಕಳಿದನೆ ರಂಧ್ರ ಪೊಳಲದೇವ ಭಗಿನಿ ತುತಿಯ ಕೇಳ್ದನೆಇಂದುವದನೆ1ಹರಿಪದಸ್ಥನೆರೆಯನಿಂದ ಹರುಷದೊರೆದ ಪುರುಷನುಗ್ರಕರಿಯ ಮೈಯು ಬರಲಿ ಕಳೆದ ನರಟುನುಳ್ಳವನು ಭುವಿಲಿಹರಗೊಲಿಸಿ ಎಬಡ ಗಡ ಹೆಣ್ಣಿನ ಒಡಲ ಪೊಡೆಯುಉರಿಯಲರಿದ ಸಿರಿಯವರದನೆ ಬಾಳರುಚಿಯುಳ್ಹರಿಯನಟ್ಟಿಜವದಿಕಾಯ್ದನೆಕುಂದರದನೆ2ಭಾರಮಣನ ಅಗ್ರಜಳ ಕಿಶೋರಬಾಣಪ್ರಿಯಜನವತಾರನರಮನೆಗೊಲಿದು ವಿಷದ್ವಿಜನ್ನ ಧ್ವಜ ಕರೆದರೆಬಾರದೇನೆ ಮೂಗಮುರಿವನೆ ತನ್ನ ನಂಬಿಸಾರಿದವರ ಮನದೊಳಿರುವನೆ ಪ್ರಸನ್ನವೆಂಕಟಧೀರನೊಬ್ಬ ಜಗಕೆ ಚೆಲುವನೆ ಭಾಮಿನಿ 3
--------------
ಪ್ರಸನ್ನವೆಂಕಟದಾಸರು