ಒಟ್ಟು 125 ಕಡೆಗಳಲ್ಲಿ , 44 ದಾಸರು , 121 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಸತ್ಯವ್ರತರು ಶಿರಿ ಸತ್ಯವ್ರತಸುರ ತರುವೆ ನಿಮ್ಮಯಪಾದವರಶತ ಪತ್ರಕ್ಕೆಭಿನಮಿಪೇ ಪ ಪರಮ ದುರ್ಮತದ್ವಾಂತ ಭಾಸ್ಕರವರಸುಜ್ಞಾನಾಕಾಂಕ್ಷಿಯಾಗಿಹೆನಿರತ ಶ್ರೀ ಮದಾನಂದ ತೀರ್ಥರವರಸು ಭಾಷ್ಯಾಮೃತವ ನುಣಿಸೋ ಅ.ಪ. ಪೊಗಳಲೆನ್ನಳವೆ ನಿಮ್ಮಗಣಿತ ಮಹಿಮೆಯಜನದಿ ವಿಖ್ಯಾತರೆ ಗುರುವೇ |ಸುಗುಣಿತವ ಭಕ್ತರ್ಗೆ ಕಾಡುವವಿಗಡ ಅಪಸ್ಮಾರ ಕುಷ್ಠವುಮಿಗಿಲು ರೋಗಾದಿಗಳ ಕಳೆಯುತಬಗೆ ಬಗೆಂದಲಿ ಸ್ತುತ್ಯರಾಗಿಹ 1 ಸರಿತು ಪ್ರವಹದಿ ಎರಡೆರಡು ಸುತರ್ಗಳಹರಣ ಪೋಗಲು ಖೇದದೀ |ವರದ್ವಿಜನು ರಘುನಾಥಾಖ್ಯ ಭಕ್ತಿಲಿಶಿರಿಸತ್ಯವ್ರತರನು ಸೇವೆಗೈಯ್ಯುಲುಅರಿತು ಸಂತಾನಾಷ್ಟ ಕಂಗಳತ್ವರಿತ ಕರುಣಿಸಿ ಪೊರೆದಗುರುವರ2 ಶಿರಿಸತ್ಯ ಸಮಧರೀ ವೃಂದಾವನದ ಬಳಿಶಿರಿಮನ್ಯಾಯಾಸುಧೆ ಪಠಿಸೇ |ಗುರುವರರು ಸಂತುಷ್ಟ ಪಡುತಲಿಶಿರವತೂಗಲು ಅಂತರಂಗದಿವರಸುವೃಂದಾವನವು ತನ್ನಯಶಿರವ ತೂಗುತ ತೋರಿತಚ್ಛರಿ 3 ವಾದಿಭಹರ್ಯಕ್ಷ ಮೇಧಾವಿ ವಿಭುಧೇಡ್ಯಸುಧಾಪಿವೃತಿ ಕರ್ತಾರ |ಮೇಧಿನಿಯ ಸಂಚರಿಸಿದುರ್ವಾದಿಗಳ ಬಲು ಖಂಡಿಸುತಭೋಧಿಸುತ ತತ್ವಗಳ ಸುಜನಕೆಹಾದಿಮೋಕ್ಷಕೆ ತೋರ್ದ ಯತಿವರ 4 ವೇದವಿದ್ಯಾಖ್ಯ ಸತ್ಕರಜರೆಂದೆನಿಸುತ್ತಮೋದ ತೀರ್ಥರ ಸೇವೆಗೈದೂ |ಹಾದಿ ಚರಿಸುತ ಸಾಂಗ್ಲಿಕ್ಷೇತ್ರದಿಆದರದಿ ವೃಂದಾವನವ ಪೊಕ್ಕುನಾದಗುರು ಗೋವಿಂದ ವಿಠಲನಮೋದ ಧ್ಯಾನಾಸಕ್ತ ಗುರುವರ 5
--------------
ಗುರುಗೋವಿಂದವಿಠಲರು
ಸಕಲ ದಿವಿಜಾರಾಧ್ಯ ಚರಣ ಪ ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ || ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ || ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||
--------------
ರುಕ್ಮಾಂಗದರು
ಸಂತೆಯ ನೋಡಲು ಬಂದವನಾ | ಭ್ರಾಂತತನವ ನೋಡಿ ಮಾನವನಾ ಪ ಪರಿ ವಾಸನೆಕಾರರು ವಿಷಯದ | ಸರಕಿನ ಚಟ್ಟೆಯ ರಂಗಡಿಯು | ದುರುಳತ ನವಗುಣ ಭೂಸಿನ ರಾಶಿಯು | ನೆರೆದಿಹ ಸಂದಣಿ ಜನದೊಳಗ 1 ಇಂತಿಹ ನರದೇಹ ಪ್ಯಾಟೆಯ ಸಡಗರ | ಪ್ರಾಂತವ ಕಾಣದೆ ಮರುಳಾಗಿ | ನಿಂತಲ್ಲಿ ನಿಲ್ಲದೆ ನೋಡುತ ತಿರುಗುತ | ಕಂಥಿಯ ಕಳೆದನು ಹೆಗಲಿನಾ 2 ಗುರುಮಹೀಪತಿ ಸ್ವಾಮಿಯ ಗಡಚಿನ | ಶರಣಿರವಳಿಹುಗದೆವೆ ಮರೆದು | ಧರಿಯೊಳು ಉಣಲಿಲ್ಲ ಉಡಲಿಲ್ಲ ಬಂದಿವ | ಬರುದೆವೆ ಮುಮ್ಮಳಿ ಘಳಿಸಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಗುರು ದಯಾ ಸಾಧ್ಯವಾಗದೇ ಜ್ಞಾನವಿಲ್ಲಾ | ಸದ್ಗತಿ ಕೀಲರಿತವನೇ ಬಲ್ಲಾ ಪ ಖಟಪಟ ವೃತದೊಳಿಲ್ಲಾ | ಘಟಮಟ ಶಬ್ದದೊಳಿಲ್ಲಾ | ಥಟ್ಟನೆ ಸಂಸಾರ ತೊರೆದರಿಲ್ಲಾ 1 ಬಹೂನಾಂ ಜನ್ಮನಾ ಜಾಯಂತೆ | ಜ್ಞಾನವಾನ್ ಮಾಂ ಪ್ರಪದ್ಯತೆ | ಶ್ರೀ ಹರಿ ಹೇಳಿದ ಗಾದಿಮಾತೆ 2 ವಸುಧಿಯೊಳೆಲ್ಲಾ ಜನಕೆ | ಹಿಂಗಾದರ ಸಾಧನ ಬೇಕು | ಋಷಿಮುನಿಗಳು ಸಾಹಸಬಡುವರ್ಯಾಕ 3 ಮನುಷ್ಯಣಾಂ ಸಹಸ್ರೇಷು | ವೆಂಬಾ ಗೀತೆಯ ನುಡಿಲೇಸು | ಜನದಲಿ ಗರ್ವಾಭಿಮಾನಿಗೆ ಬಿರುಸು 4 ಅಂಬು ತಾನು | ಎರಗುದೇ ಗುರಿಯಾ ಸ್ಥಳವನು | ಗುರುಮಹಿಪತಿ ನಂದನು ಸಾರಿದ ನಿಜನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸನ್ಮಾರ್ಗ ಸನ್ಮಾರ್ಗಯಿದು ಪ ಮನ್ಮಥ ಜನಕನ ಮನದಿ ಭಜಿಸುವುದು ಅ.ಪ ಕರ್ತ ನೀನು ಹರಿಭೃತ್ಯನಾನು ಯೆಂ- ದತ್ಯಂತ ಮನೋಹರುಷದಿ ಕುಣಿವದು 1 ಪದುಮ ನಾಭನಿಗೆ ಪೂಜೆಯೆಂದರಿವುದು 2 ಛಳಿಮಳೆಗಾಳಿ ಬಿಸಿಲುಗಳೊಳಗೆ ಶ್ರೀ ವಿಭೂತಿ ತಿಳಿಯುವುದು 3 ಕರೆಕರೆ ಸಂಸಾರದ ಭಾರದೆ ತಾ ಮರೆಯದೆ ನಿರತವು ಹರಿಗರ್ಪಿಸುವುದು 4 ಪಾಮರಜನದೊಳು ಸೇರದೆ ಶ್ರೀಗುರು- ರಾಮ ವಿಠ್ಠಲನ ನಾಮ ಜಪಿಸುವುದು 5
--------------
ಗುರುರಾಮವಿಠಲ
ಸಮೀರನ ಮಹಿಮೆ ಪೇಳುವೆವಾಸುದೇವ ವಿಧೀರ ಮುಖಸುರರಾಶಿತಸ್ತ್ರೀ ಮುನಿಯತೀಶ ಸು-ದಾಸರಭಿ ನಮಿಪೆ ಪ ವಾರಿಧಿಯನು ದಾಟುಲೋಸುಗಶ್ರೀ ರಮೇಶನ ನಮಿಸಿ ಗಿರಿಯನುಚಾರು ಚರಣದಿ ಮೆಚ್ಚಿ ಮೇಲಕೆ ಹಾರಿದನು ಹನುಮಾ 1 ಹರಿಯ ಬಲವನು ಸರಿಸಿ ಪೋದುವುತರುಗಳಬ್ಧಿಯು ಯಾದಸಂಗಳುಶರಧಿ ತಳಗತ ಕಪಿಯಗೋಸುಗಗಿರಿಯು ಎದ್ದಿಹನು 2 ಧರಣಿಧರ ಪಕ ನಾಶ ಕಾಲದಿಮರುತ ರಕ್ಷಿತ ಪಕ್ಷ ಹೈಮನುಶರಧಿ ಭೇದಿಸಿ ಹನುಮ ವಿಹೃತಿಗೆತ್ವರದಿ ಬಂದಿಹನು 3 ಪರಮ ಪೌರುಷ ಬ ಲನು ಕಪಿವರಚರಿಸದಲೆ ವಿಶ್ರಮವನದರೊಳುಹರುಷದಿಂದಪ್ಯವನ ಕಂಡನುಉರಗ ಮಾತೆಯನು 4 ಸುರಸೆಯೆಂಬುವ ನಾಗಮಾತೆಗೆವರವ ನೀಡುತ ಕಪಿಯ ಬಲವನುಅರಿಯಲೋಸುಗ ಕಳುಹಿಸೀದರುಸುರರು ಶರಧಿಯಲಿ 5 ಯಾವ ವಸ್ತುವ ತಿನ್ನೋ ಇಚ್ಛೆಯು ೀವಿ ನಿನಗಾಗುವದೊ ಅದು ತವಬಾಯಿಗನ್ನಾಗಿರಲಿ ಎಂದರುದೇವತೋತ್ತುಮರು 6 ಸುರರ ವರವನು ಕಾಯೊಗೋಸುಗಸುರಸೆ ಮುಖದೊಳು ಹೊಕ್ಕು ಹೊರಡುತಪರಮಮಣು ರೂಪದಲಿ ದಿವಿಜರಹರುಷ ಬಡಿಸಿದನು 7 ಅಸುವರಾತ್ಮಜನುರು ಪರಾಕ್ರಮಹೃಷಿತರಾಗುತ ನೋಡಿ ದಿವಿಜರುಕುಸುಮವೃಷ್ಟಿಯ ಮಾಡುತವನಲಿಯಶಸು ಪಾಡಿದರು 8 ಛಾಯಾ ಪ್ರಾಣಿಗಳನ್ನು ಹಿಡಿಯುವಮಾಯಾ ಸಿಂಹಕೆ ನಾಮ ಕಸುರಿಯವಾಯುಸುತ ನೋಡಿದನು ಎದುರೆ ವಿಹಾಯ ಮಾರ್ಗದಲಿ 9 ವಿಧಿಯು ಲಂಕೆಯ ಕಾಯಲೋಸುಗಸುತಿಗ್ವರಗಳನಿತ್ತು ಕಾದಿಹಾಮದದಿ ಅಸುರಿಯು ತನ್ನ ಛಾಯವವದಗಿ ಪಿಡಿದಿಹಳು 10 ಆಗ ಆಕೆಯ ಪೊಕ್ಕು ಪೊಟ್ಟೆಯಯೋಗದಿಂದಲಿ ಪಾವಮಾನಿಯುಬೇಗ ಬಂದನು ಹೊರಗೆ ತತ್ತನುಭಾಗ ಮಾಡುತಲೆ 11 ಆತ್ಮಬಲವಮಿತೆಂದು ತೋರಿವಿಧಾತೃ ವರವುಳ್ಳವಳ ಕೊಲ್ಲುತವಾತನಂತೆ ತ್ರಿಕೂಟ ಪರ್ವತಕೀತ ಹಾರಿದನು 12 ಬೆಕ್ಕಿನಂದದಿ ಹನುಮ ತನ್ನಯಚಿಕ್ಕ ರೂಪವ ಮಾಡಿ ಲಂಕೆಯಪೊಕ್ಕು ನಿಶಿಯಲಿ ಮಧ್ಯಮಾರ್ಗದಿರಕ್ಕಸಿಯ ಕಂಡಾ 13 ಬಟ್ಟಿಯಲಿ ಬಂದಡ್ಡಗಟ್ಟುವದುಷ್ಟ ರಾಕ್ಷಸೀಯನ್ನು ಗೆಲ್ಲುತಮುಷ್ಟಿಯಿಂದಲಿ ಹೊಡೆದು ಲಂಕಾಪಟ್ಟಣವ ಪೊಕ್ಕಾ 14 ಪುರದ ಹೊರಗೊಳಗ್ಹೊಕ್ಕು ರಾಮನತರುಳೆ ಕಾಣದೆ ಹನುಮ ಶಿಂಶುಪತರುನ ಮೂಲದಿ ಕಂಡ ಸೀತೆಯಉರುತರಾಕೃತಿಯಾ 15 ನರಜನಂಗಳ ಮೋಹ ಮಾಡುವಪರಮ ಪುರುಷನ ಚೇಷ್ಟೆಗಳನನುಸರಿಸಿ ನಡೆಯುವ ದೇವಿ ಚರಿಯನುಸರಿಸಿ ಚೇಷ್ಟಿಸಿದಾ 16 ರಾಮನಿಂದಲಿ ಅಂಗುಲಿಯನುಪ್ರೇಮದಿಂದಲಿ ಕೇಸರಿಯ ಸುತಾಭೂಮಿ ಜಾತೆಗೆ ಕೊಟ್ಟು ಸುಖಿಸಿದಾನಾಮ ಹದ್ದನದಿ 17 ರುಚಿ ನೀಡಿದವು ರಾವಣನ್ಹರಣ ಕಾಲದಲಿ 18 ಧರಣಿದೇವಿಯ ಸುತೆಯ ತನ್ನಯಪರಮ ಚೂಡಾಮಣಿಯನಿತ್ತಳುಗುರುತು ತೋರಿಸು ರಾಮದೇವಗೆಮರುತಾ ಸುತನೆಂದು 19 ಸೀತೆ ಹನುಮರದೀ ವಿಡಂಬನಯಾತು ಧಾನರಿಗಲ್ಲಾ ನಾಕಗಭೂತ ವಿಡಂಬನ ಧೈತ್ಯವಂಚನಹೇತು ಆಗುವದು 20 ಇಂಥ ಕಾರ್ಯವ ಮಾಡಿ ತನ್ನಯಾನಂಥ ಪೌರುಷ ಪ್ರಕಟ ಮಾಡುವದಿಂತು ಮನವನು ಮಾಡಿದನು ಮತಿವಂತ ವಾನರನು 21 ಚಾರು ಶಿಂಶುಪ ಬಿಟ್ಟು ರಾಕ್ಷಸವಾರ ವಳಿಸುವ ಮನದಿ ಹನುಮನುಭೂರಿವನವನು ಮುರಿದು ಲಂಕೆಯತೋರಣೇರಿದನು 22 ಭೃತ್ಯ ಜನರಿಗೆಕಟ್ಟಿ ಹಾಕಿರಿ ಕಪಿಯನೆಂದನುರುಷ್ಟನಾಗುತಲೆ 23 ಹರನ ವರದಲಿ ಮರಣ ವರ್ಜಿತಸರವ ಭೃತ್ಯರು ರಾಕ್ಷಸೇಶನಮರುತ ಸೂನುನ ಮೇಲೆ ಬಂದರುಪರಮ ವೇಗದಲಿ 24 ಹತ್ತು ಒಂದು ಕೋಟಿ ಯೂಥವತತ್ಸಮಾನ ಪುರಃ ಸರಾನ್ವಿತಎತ್ತಿ ಆಯುಧ ಸೈನ್ಯ ಹನುಮನಸುತ್ತಿಕೊಂಡಿಹುದು 25 ಹಿಡಿದು ಕರದಲಿ ಆಯುಧಂಗಳಹೊಡೆವ ಸೈನ್ಯವ ನೋಡಿ ಹನುಮನುಹೊಡೆದು ಕರತಳದಿಂದಲೆಲ್ಲರಪುಡಿಯ ಮಾಡಿದನು 26 ನೀಲಕಂಠನ ವರಗಿರಿಪ್ರಭಏಳುಮಂದಿಯ ಮಂದಿ ಪುತ್ರರಕಾಲಿನಿಂದಲಿ ಒದ್ದು ಕೆಡಹಿದನಾಳು ಮಾಧವನಾ 27 ಧುರದಿ ಮುಂಭಾಗದಲಿ ಪೋಗುವಗರುವ ಮಾಡುವ ರಾಕ್ಷಸಂಗಳಮುರಿದು ಸೈನ್ಯದ ತೃತೀಯ ಭಾಗವಹರಿಯು ಕೊಂದಿಹನು 28 ಪೋರ ಬಲವನು ಕೇಳಿ ಹನುಮನಚಾರ ಮುಖದಲಿ ಸ್ವಾತ್ಮ ಸದೃಶರುಮಾರ ಕಾಕ್ಷಾಭಿಧನ ಕಳುಹಿದ ವೀರ ರಾವಣನು 29 ಉತ್ತುಮಾಸ್ತ್ರಗಳಿಂದ ಮಂತ್ರಿತವೆತ್ತಿ ಬಾಣಗಳ್ಹೊಡೆದು ಹನುಮನಕೆತ್ತಿ ಹಾಕಲು ಅಕ್ಷ ಸಾಲದೆಶಕ್ತಿ ನಿಂತಿಹನು 30 ಮಂಡ ಮಧ್ಯೆಯ ತನಯ ಅಕ್ಷನುಪುಂಡ ರಾವಣ ಸಮನು ಸೈನ್ಯದಹಿಂಡಿನೊಳು ತೃತೀಯಾಂಶ ಯಂದುದ್ದಂಡ ಚಿಂತಿಸಿದಾ 31 ಹತ್ತು ತಲೆಯವನನ್ನೆ ಕೊಲ್ಲುವದುತ್ತಮಾತ್ಮವು ಆದರೀತನುತುತ್ತು ರಾಮಗೆ ಕಾರಣಿಂಥಾಕೃತ್ಯ ಥರವಲ್ಲಾ 32 ಇಂದ್ರಜಿತನನು ನಾನು ಈಗಲೆಕೊಂದು ಹಾಕಿದರಿವನ ಕೃತಿಗಳಛಂದ ನೋಡುವುದಿಲ್ಲಾ ಕಪಿಗಳವೃಂದ ಯುದ್ಧದಲಿ 33 ತತ್ಸಮಾಗಿಹ ಮೂರನೆಯವನ್ಹತ್ಯೆ ಮಾಡುವೆನೆಂದು ಹನುಮನುಚಿತ್ತದಲಿ ಚಿಂತಿಸುತ ತತ್ವದ ವೆತ್ತಿ ಹಾರಿದನು 34 ತಿರುಹಿ ಚಕ್ರದ ತೆರನೆ ರಾಕ್ಷಸರರಸೀನಾತ್ಮಜನನ್ನು ಕ್ಷಣದಲಿಧರಿಯ ಮೇಲಪ್ಪಳಿಸಿ ಒಗೆದನುಮರುತನಾತ್ಮಜನು 35 ಹನುಮನಿಂದಲಿ ತನ್ನ ಕುವರನುಹನನ ಪೊಂದಲು ನೋಡಿ ರಾವಣಮನದಿ ಶೋಕಿಸುತಾತನಣ್ಣನರಣಕೆ ಕಳುಹಿದನು36 ಇಂದ್ರಜಿತು ಪರಮಾಸ್ತ್ರಯುತ ಶರವೃಂದದಲಿ ಹೊಡೆದು ಹನುಮನಹಿಂದಕಟ್ಟಲು ಶಕ್ತಿ ಸಾಲದೆನಿಂದು ಚಿಂತಿಸಿದಾ 37 ಸರವ ದುಃಸಹವಾದ ಬ್ರಹ್ಮನಪರಮಮಸ್ತ್ರವ ಬಿಡಲು ರಾವಣಿಹರಿಯು ವ್ಯಾಕುಲನಾಗದಲೆ ಈಪರಿಯ ಚಿಂತಿಸಿದಾ 38 ವಾಣಿನಾಥನ ಎಷ್ಟೊ ವರಗಳನಾನು ಮೀರಿದೆ ದುಷ್ಟ ಜನದಲಿಮಾನಿನೀಯನು ಕಾರಣಾತನಮಾನ ಮಾಡುವೆನು 39 ದುಷ್ಟ ರಾಕ್ಷಸರೆಲ್ಲ ಎನ್ನನುಕಟ್ಟಿ ಮಾಡುವದೇನು ಪುರಿವಳಗಿಷ್ಟು ಪೋಗಲು ರಾಕ್ಷಸೇಶನಭೆಟ್ಟಿಯಾಗುವದು 40 ಹೀಗೆ ಚಿಂತಿಸಿ ಹನುಮನಸ್ತ್ರಕೆಬಾಗಿ ನಿಲ್ಲಲು ಅನ್ಯ ಪಾಶಗಳಾಗೆ ಬಿಗಿದರು ಬ್ರಹ್ಮನಸ್ತ್ರವುಸಾಗಿತಾಕ್ಷಣದಿ 41 ಕಟ್ಟಿ ಕಪಿಯನು ರಾಕ್ಷಸೇಶನ ಭೆಟ್ಟಿಗೊಯ್ಯಲು ಆತನೀತನದೃಷ್ಟಿಯಿಂದಲೆ ನೋಡಿ ಪ್ರಶವನೆಷ್ಟೊ ಮಾಡಿದನು 42 ಕಪಿಯೆ ನೀನು ಕುತೋಸಿ ಕಸ್ಯವಾಕೃತಿಯ ಮಾಡಿದಿ ಯಾತಕೀಪರಿಕಿತವ ಕೇಳಲು ರಾಮನೊಂದಿಸಿ ಚತುರ ನುಡಿದಿಹನು 43 ಹೀನ ರಾವಣ ತಿಳಿಯೇ ಎನ್ನನು ಮಾನವೇಶ್ವರ ರಾಮದೂತನುಹಾನಿಮಾಡಲು ನಿನ್ನ ಕುಲವನುನಾನು ಬಂದಿಹೆನು 44 ಜಾನಕೀಯನು ರಾಮದೇವಗೆಮಾನದಿಂದಲಿ ಕೊಡದೆ ಹೋದರೆಹಾನಿ ಪೊಂದುವಿ ಕೇಳೊ ನೀ ನಿಜಮಾನವರ ನೀ ಕೂಡಿ 45 ಶಕ್ತರಾಗರು ಸರ್ವ ದಿವಿಜರುಮತ್ರ್ಯನಾತನ ಬಾಣ ಧರಿಸಲುಎತ್ತೋ ನಿನಗಿವಗಿನ್ನು ಧರಿಸಲುಹತ್ತು ತಲೆಯವನೆ 46 ಸಿಟ್ಟು ಬಂದರೆ ಆತನೆದುರಿಲಿಘಟ್ಟಿನಿಲ್ಲುವನಾವ ರಾಕ್ಷಸಇಷ್ಟು ಸುರದಾನವರೊಳಾತನದೃಷ್ಟಿಸಲು ಕಾಣೆ 47 ಇಂಥಾ ಮಾತನು ಕೇಳುತಾತನಅಂತ ಮಾಡಿರಿಯನ್ನೆ ವಿಭೀಷಣಶಾಂತ ಮಾಡಲು ಪುಚ್ಛ ದಹಿಸಿರಿಯಂತ ನುಡಿದಿಹನು 48 ಅರಿವೆಯಿಂದಲಿ ಸುತ್ತಿ ಬಾಲಕೆಉರಿಯನ್ಹಚ್ಚಲು ಯಾತುಧಾನರುಮರುತ ಮಿತ್ರನು ಸುಡದೆ ಹನುಮಗೆಹರುಷ ನೀಡಿದನು 49 ಯಾತುಧಾನರು ಮಾಡಿದಂಥಪಘಾತವೆಲ್ಲವ ಸಹನ ಮಾಡಿದವಾತಪೋತನು ಲಂಕೆ ದಹಿಸುವಕೌತುಕಾತ್ಮದಲಿ 50 ತನ್ನ ತೇಜದಿ ವಿಶ್ವಕರ್ಮಜಘನ್ನಪುರಿಯನು ಸುಟ್ಟು ಬಾಲಗವನ್ಹಿಯಿಂದಲೆ ಸರ್ವತಃ ಕಪಿಧನ್ಯ ಚರಿಸುತಲೆ 51 ಹೇಮರತ್ನಗಳಿಂದ ನಿರ್ಮಿಸಿದಾಮಹಾ ಪುರಿಯನ್ನು ರಾಕ್ಷಸಸ್ತೋಮದಿಂದಲಿ ಸಹಿತ ಸುಟ್ಟುಸುಧಾಮ ಗರ್ಜಿಸಿದಾ 52 ಹನುಮಸಾತ್ಮಜ ರಾಕ್ಷಶೇಶನತೃಣ ಸಮಾನವ ಮಾಡಿ ನೋಡಲುದನುಜರೆಲ್ಲರ ಭಸ್ಮ ಮಾಡುತಕ್ಷಣದಿ ಹಾರಿದನು 53 ಕಡಲ ದಾಟುತ ಕಪಿಗಳಿಂದಲಿಧಡದಿ ಪೂಜಿತನಾಗಿ ಮಧುವನುಕುಡಿದು ರವಿಜನ ವನದಿ ರಾಘವನಡಿಗೆ ಬಂದಿಹನು 54 ಸೀತೆ ನೀಡಿದ ಚೂಡಾರತ್ನವನಾಥನಂಘ್ರಿಯೊಳಿತ್ತು ಸರ್ವಶಗಾತ್ರದಿಂದಲಿ ನಮಿಸಿ ರಾಮಗೆಶಾತ ನೀಡಿದನು 55 ರಾಮನಾದರು ಇವಗೆ ನೀಡುವಕಾಮ ನೋಡದೆ ಭಕ್ತಿಭರಿತಗೆಪ್ರೇಮದಿಂದಲಿ ಅಪ್ಪಿಕೊಂಡನುಶ್ರೀ ಮನೋಹರನು 56 ಇಂದಿರೇಶನೆ ಎನ್ನ ಚಿತ್ತದಿನಿಂದುಮಾಡಿದ ನೀಸುಕವನವನಿಂದು ಭಕ್ತಿಲಿ ತತ್ಪುದಾಂಬುಜದ್ವಂದ್ವಕರ್ಪಿಸುವೆ 57 ಇತಿ ಶ್ರೀ ಸುಂದರ ಕಾಂಡಃ ಸಮಾಪ್ತಃ (ಪ್ರಾಕೃತ)ಶ್ರೀ ಗುರುವರದ ಇಂದಿರೇಶಾರ್ಪಣಮಸ್ತು ನೋಡುವೆನು ನೋಡುವೆನು ತೋರಿಸುನಿಮ್ಮ ನೋಡುವೆ ಪ ನೋಡುವೆ ಮಾಡು ದಯ ಎನ್ನೊಳುರೂಢಿಯೊಳಗೆ ನಿಮ್ಮ ಪಾಡುತ ಮಹಿಮೆ ಅ.ಪ. ಮದನ ಜನಕನೊಳು ಕದನ ಮಾಡಿದ ದು-ರ್ಯೋಧನನ ಶಿರದೊಳಿಟ್ಟ ಪದುಮ ಪಾದಗಳನು 1 ನೂರುಗಾವುದ ಜಲ ಹಾರುವಾಗಲೆ ದಿವ್ಯಭೂರುಹ ಕೆಡದಿಹ ಊರುಗಳನ್ನು ಸ್ವಾಮಿ 2 ಕೆಟ್ಟ ಬಕನ ಕೊಂದು ಅಷ್ಟು ಅನ್ನವನುಂಡಹೊಟ್ಟಿ ನೋಡುವೆ ದಿವ್ಯ ದೃಷ್ಟಿ ನೀಡಿರಿ ಸ್ವಾಮಿ 3 ಭೂಮಿ ಸುತೆಯ ವಾರ್ತೆ ರಾಮನು ಕೇಳಿದಾಪ್ರೇಮಾಲಿಂಗನವಿತ್ತ ಆ ಮಹಾವುರವನ್ನೆ 4 ಮದಗಜಗಳ ಕೂಡ ಕದನ ಮಾಡಿದ ದಿವ್ಯಗದೆಯ ಪಿಡಿದ ಕರವದು ಮಗಳನು ಸ್ವಾಮಿ 5 ಅಜಗರ ನಹುಷನ ವಿಜಯ ಸಹೋದರ ಪದುಮನಾಭನ ಗುಣಮುದದಿ ಸಾರುತ ದೈತ್ಯ ಕದನಗೆಳೆದ ನಿನ್ನ ವದನಕಮಲವನ್ನು 6 ವೇದ ಶಾಸ್ತ್ರಗಳನ್ನು ಓದಿ ಹೇಳುತ ಶಿಷ್ಯಮೋದಗರೆವ ನಿನ್ನ ವಾಣಿ ಸ್ವಾದು ಕೇಳುವೆ ನಿನ್ನ 7 ಇಂದಿರೇಶನ ದಯದಿಂದ ಗೆಲಿದಿ ಇಪ್ಪ-ತ್ತೊಂದು ಮತವ ಆನಂದ ತೀರ್ಥರೆ ನಿಮ್ಮ 8
--------------
ಇಂದಿರೇಶರು
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ ನೂಕು ಭವದ ಬೇಸರ ದುಷ್ಕರ್ಮವನೀಗ ಪ. ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು ಬಾಧಿಪ ಖಳನುದರ ಸೀಳ್ದಗೆ ಸರಿದೋರು ಪಾದನಖದಿ ಬೊಮ್ಮಾಂಡವನೊಡೆದನ ಸಾರು ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು 1 ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು ಖ್ಯಾತ ದಿಗಂಬರದೇವನ ಕುಶಲವ ನೋಡು ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು 2 ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ ಕನಸಿನೊಳಾದರು ಪೋಗದಿರಧಮರ ಬಳಿಗೆ ಗು- ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ 3
--------------
ವಾದಿರಾಜ
ಸಾಧಕರೊಳು ಸಿದ್ಧನು | ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ ಭಕ್ತಿಯ ಹಡಗವ ಸಾರಿ ಭವಾಂಬುಧಿ | ಯುಕ್ತಿಲಿ ದಾಟಿ ಮನೋರಥದಾ | ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ | ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ 1 ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ | ನೆನೆಯದೆ ಅರ್ಪಣೆಯಾಗುವದು | ಜನದೊಳು ಅವರವರಂತೆ ಸೋಪಾಧಿಕ | ಯೋಗಿ 2 ಕ್ಷೀರ ನೀರ ಭೇದ ಮಾಡುವ ಹಂಸ ವಿ | ಚಾರದಿ ಸಾರಾಸಾರವ ತಿಳಿದು | ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ | ಧಾರುಣಿ ಜನರನು ತಾರಿಸುವಾ 3 ಪುಣ್ಯದ ಫಲದಾಶೆಯಾತಕ ಬಾಲಗ | ಹೊನ್ನ ತಾ ಗುಂಬೆಂಬ ತ್ಯರನಂದದಿ | ಪರಿ | ಚೆನ್ನಾಗಿ ತಿಳಿದಿಹ ನಿದ್ವಂದಿಯೋ 4 ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ | ಬೆಲ್ಲಸವಿದ ಮೂಕನಂದದಲಿ | ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ | ನಿಲ್ಲವ ಗುರು ಮಹಿಪತಿ ಪ್ರಭು ಶರಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1 ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2 ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿರಿ ಪಾರ್ಥಸಖನಾ ಗುಣಕೀರ್ತನೆ ಮಾಡಲು ಪ ಯಂಟೆಂಟೆರಡುನಾಲ್ಕು ಸಾವಿರ ನುಡಿಯಲಿ ಯಂಟೆಂಟೆರಡು ರೂಪದಲಿ ಯಂಟೆಂಟೆರಡು ಮೂರೈದು ವ್ಯಂಜನದಿ ಯಂಟೆಂಟು ಮತ್ತೆಂಟು ಸ್ವರವ ತಿಳಿ 1 ಕಮಲ ಕರ್ಣಿಕೆಯಲ್ಲಿ ಯಂಟೆಂಟೆರಡರ ನಾಲ್ಕು ಸ್ತಂಭರಥ ಮಂಟಪದೊಳಗಿನ ವೆಂಕಟನ ನೋಡು2 ಯಂಟೆಂಟು ಕರಗಳಲಿ ಯಂಟಾಯುಧ ಪಿಡಿದು ಯಂಟು ದಿಕ್ಕಿನಲಿ ತಿರುಗುತಲಿ ಯಂಟು ವಿಧದಿ ಪ್ರೇರಣೆ ಮಾಡುವ ನಮ್ಮಾ ನೆಂಟ ತಂದೆಗುರುಗೋಪಾಲವಿಠಲನು 3
--------------
ಗುರುತಂದೆವರದಗೋಪಾಲವಿಠಲರು
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ ಬಡವರಿಗೆ ಆಧಾರಿ ಭಕ್ತಜನ ಸಹಕಾರಿ ಪರಿ ಮಾಡುತಿಹ್ಯ ಮನೋಹರಿ 1 ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ 2 ಅನಾಥ ಬಂಧುನೀತ ದೀನದಯಾಳು ಸಾಕ್ಷಾತ ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ ಮನೋಭಾವ ಪೂರಿತ ಎನಗುಳ್ಳ ದೇವದತ್ತ ದಾತ ಭಾನುಕೋಟಿ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹನುಮಂತ ದೇವನ ನೋಡಿ ಘನ ವಿಜ್ಞಾನ ಧನವನ್ನು ಬೇಡಿ ಪ ಅನುಮಾನ ಸಲ್ಲ ಸುರಧೇನುವೆನಿಸುವನು ತನ್ನ ನೆನೆವರಿಗೆ ಅ.ಪ. ಅಂಜನದೇವಿಯೊಳ್ ಪುಟ್ಟಿ | ಪ್ರ- ಭಂಜನ ಸುತ ಜಗಜಟ್ಟಿ | ಶ್ರೀ ಕಂಜನಾಭನನು ಕಂಡು ಭಜಿಸುತಲಿ ತಾನು ರಂಜಿಪನು 1 ಪಾಥೋದಿಯನು ನೆರೆದಾಟಿ | ರಘು - ನಾಥನ ಮಡದಿಗೆ ಭೇಟಿ | ಇತ್ತು ಖ್ಯಾತ ಲಂಕೆಯನು ವೀತಿ- ಹೋತ್ರನಿಗೆ ಕೊಟ್ಟ ಬಲುದಿಟ್ಟ 2 ಸಂಜೀವನಾದ್ರಿಯ ತಂದು | ಕಪಿ ಪುಂಜವನೆಬ್ಬಿಸಿ ನಿಂದು | ತುಸ ಅಂಜಕಿಲ್ಲದಲೆ ಅಸುರರನು ಭಂಜಿಸಿ ನಿಂತ ಜಯವಂತ 3 ಶ್ರೀರಾಮಚಂದ್ರನು ಒಲಿದು | ಮಹ ಪಾರಮೇಷ್ಠ್ಯವನೀಯೆ ನಲಿದು | ಮುಕ್ತಾ ಹಾರ ಪಡೆದ ಗಂಭೀರ ಶೂರ ರಣಧೀರ ಉದಾರ 4 ಎಂತೆಂತು ಸೇವಿಪ ಜಂತು | ಗಳಿ ಗಂತಂತೆ ಫಲವೀವನಿಂತು | ಶ್ರೀ - ಕಾಂತ ನಾಮವನು ಆಂತು ಭಜಿಪರಲಿ ಪ್ರೇಮ ಬಹುನೇಮ 5
--------------
ಲಕ್ಷ್ಮೀನಾರಯಣರಾಯರು
ಹಿಡಿ ಮನವೇ ಸಂತರ ಸಂಗ ಪ ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
(ಮಂಗಳೂರಿನ ಗಣೇಶನನ್ನು ನೆನೆದು)ಶ್ರೀ ಗಜವಕ್ತ್ರ ಪವಿತ್ರ ನಮೋ ಮನುಮಥಜಿತಸುತನಯ ಪ.ಬಾಗುವೆ ಶಿರ ಶರಣೌಘಶರಣ್ಯ ಸು-ರೌಘಸನ್ನುತ ಮಹಾಗುಮ ಸಾಗರ ಅ.ಪ.ಸಿದ್ಧಸಮೂಹಾರಾಧ್ಯ ಪದದ್ವಯ ಶೋಭ ಸೂರ್ಯಾಭಶುದ್ಧಾತ್ಮ ಫಣಿಪಬದ್ಧಕಟಿವಿಗತಲೋಭಹೃದ್ಯಜನದುರಿತಭಿದ್ಯ ವಿನಾಯಕವಿದ್ಯಾದಿ ಸಕಲ ಬುದ್ಧಿಪ್ರದಾಯಕ 1ಏಕದಂತಚಾಮೀಕರಖಚಿತ ವಿಭೂಷ ಗಣೇಶಪಾಕಹ ಪ್ರಮುಖ ದಿವೌಕಸಪೂಜ್ಯ ವಿಲಾಸಶೋಕರಹಿತ ನಿವ್ರ್ಯಾಕುಲ ಮಾನಸಲೇಖಕಾಗ್ರಣಿ ಪರಾಕೆನ್ನಬಿನ್ನಪ2ವರಮಂಗಲಪುರ ಶರಭಗಣೇಶ್ವರ ಧೀರ ಉದಾರಸುರುಚಿರ ಶುಕ್ಲಾಂಬರಧರ ವಿಘ್ನವಿದಾರಹರಿಲಕ್ಷ್ಮೀನಾರಾಯಣಶರಣರಗುರುಗುಹಾಗ್ರಜ ಮನೋಹರ ಸುಚರಿತ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕ್ಷೀರಸಾಗರದಲೆರಡೀರೈದು ಯೋಜನದ |ಮೇರೆಯಲಿ ವರತ್ರಿಕೂಟಾದ್ರಿ ಶೃಂಗತ್ರಯದಿ |ರಾರಾಜಿಸುವ ತಾಮ್ರ-ರಜತ-ಕಾಂಚನದಿಂದನಾರಾಯಣಾಂಶದಿಂದ ||ಪಾರಿಜಾತಾಂಭೋಜ ಬಕುಳ ಮಲ್ಲಿಗೆ ಜಾಜಿ |ಸೌರಭದಲಶ್ವತ್ಥಪೂಗಪುನ್ನಾಗಜಂ |ಬೀರತರುಗುಲ್ಮಶಾಖಾಮೃಗಗಳೆಸೆವಲ್ಲಿವಾರಣೀಂದ್ರನು ಮೆರೆದನು 2ಆನೆ ಹೆಣ್ಣಾನೆ ಮರಿಯಾನೆಗಳ ಸಹಿತಲ್ಲಿ |ಕಾನನದಿ ತೊಳಲುತ್ತ ಬೇಸಗೆಯ ಬಿಸಿಲಲ್ಲಿ |ತಾನು ನೀರಡಿಸಿ ಬಂದೊಂದು ಸರಸಿಯ ತಟಕೆಪಾನಾಭಿಲಾಷೆಯಿಂದ ||ನಾನಾಪ್ರಕಾರದಿಂ ಜಲಕ್ರೀಡೆಯಾಡುತಿರ |ಲೇನಿದೆತ್ತಣ ರಭಸವೆಂದುಗ್ರಕೋಪದಿಂ |ಒತ್ತಿ ಪಿಡಿದೆಳೆಯುತಿರೆ ಎತ್ತಣದಿನೇನೆನುತ |ಮತ್ತಇಭರಾಜನೌಡೊತ್ತಿ ನೋಡುತ್ತಂಘ್ರಿ |ಎತ್ತಿ ತಂದನು ತಡಿಗೆ ಮತ್ತೆ ನಡುಮಡುವಿನೊಳುಅತ್ತಲೇ ತಿರುಗೆನೆಗಳೆ||ಇತ್ತಂಡದಿಂತು ಕಾದಿದರು ಸಾವಿರ ವರುಷ |ಉತ್ತರಿಸಿತೇನೆಂಬೆ ಮತ್ತಾ ಗಜೇದ್ರಂಗೆ |ಸತ್ತ್ವ ತಗ್ಗಿತು ತನ್ನ ಮನದೊಳಗೆ ಚಿಂತಿಸಿತುಮತ್ತಾರು ಗತಿಯೆನುತಲಿ 4ಬಂದುದಾ ಸಮಯದಲಿ ಹಿಂದೆ ಮಾಡಿದ ಪುಣ್ಯ |ದಿಂದ ದಿವ್ಯಜಾÕನ ಕಣ್ದೆರೆದು ಮನದೊಳರ |ವಿಂದನಾಭಾಚ್ಯುತ ಮುಕುಂದಮಾಧವಕೃಷ್ಣನಿಖಿಲ ಮುನಿವೃಂದವಂದ್ಯ ||ಇಂದಿರಾರಮಣ ಗೋವಿಂದ ಕೇಶವ ಭಕ್ತ |ಬಂಧು ಕರುಣಾಸಿಂಧು ತಂದೆ ನೀ ಗತಿಯೆನಗೆ |ಇಂದುಸಿಲ್ಕಿದೆನು ಬಲು ದಂದುಗದಮಾಯಾಪ್ರ-ಬಂಧಕನೆ ನೆಗಳಿನಿಂದ 5ಪರಮಾತ್ಮ ಪರಮೇಶ ಪರತತ್ತ್ವ ಪರಿಪೂಜ್ಯ |ಪರತರ ಪರಂಜೋತಿಪರಮಪಾವನಮೂರ್ತಿ |ಪರಮೇಷ್ಟಿಪರಬ್ರಹ್ಮಪರಮಪರಮಾಕಾಶ |ಪರಿಪೂರ್ಣ ಪರಮಪುರುಷ ||ನಿರುಪಮ ನಿಜಾನಂದ ನಿರ್ಲಯ ನಿರಾಕಾರ |ನಿರವಧಿಕನಿರ್ಗುಣನಿರಂಜನನಿರಾಧಾರ |ನಿರವದ್ಯನಿಸ್ಸಂಗ ನಿಶ್ಚಿಂತ ನಿಖಿಲೇಶಇರದೆ ನೀ ಸಲಹೆಂದನು 6ಇಂತೆನುತ ಮೂಚ್ರ್ಛೆಯಲಿ ಗುಪ್ತಕಂಠಸ್ವರದ |ಕಾಂತ ನಡುನೀರೊಳಗೆ ತೇಲಿ ಮುಳುಗುತಲಿರೆ ಅ- |ನೆಗಳ ಬಾಯನು ಚಕ್ರದಲಿ ಸೀಳಿ ಕರಿವರದ |ಒಗುವ ಕರಣದಲಿ ಮೈದಡಹಲ್ಕೆ ಗಜಜನ್ಮ |ತೆಗೆದುದಾಕ್ಷಣಕೆ ಮಣಿಮುಕುಟ - ಕುಂಡಲದಿಂದನಗಧರನು ಓಲೈಸಿದ ||ವಿಗಡದೇವಲ ಮುನಿಯ ಶಾಪದಲಿ ದಾರುಣಿಯೊ- |ಳಗೆ ನಕ್ರನಾಗಿ ಹೂಹೂ ಎಂಬ ಗಂಧರ್ವ |ಮಗುಳಿಪುರವನು ಕಂಡು ನಿಜಗತಿಗೆ ಐದಿದಿನುಕಮಲಾಕ್ಷಮಿಗೆ ಮೆರೆದನು 8ಮಣಿಮುಕುಟಕುಂಡಲಪದಕಹಾರ ಕಡಗಕಂ- |ಕಣ ಕೌಸ್ತು ಭೊಜ್ವ ್ಜಲಾಂಗದವೈಜಯಂತಿಭೂ- |ಷಣ ಶಂಖ-ಚಕ್ರ-ಗದೆ-ಪದ್ಮ ಧರಿಸಿಹಹಸ್ತಪಣಿಯ ಕಸ್ತುರಿ ತಿಲಕದಾ ||ಝಣಝಣಿಪ ನೂಪುರದ ದಂತಪಂಕ್ತಿಯ ಕೃಪೇ- |ಕ್ಷಣದ ಸಿರಿಮೊಗದ ಪೀತಾಂಬರದ ಮೂರುತಿಗೆ |ಮಣಿದು ಜಂiÀi ಜಯಜಯಾಎಂಬ ಸುರನರರಸಂ- |ದಣಿಯಿಂದೆಹರಿಮೆರೆದನು 9ಹರಹರಿಎನುತ್ತಂಘ್ರಿಗೆರಗಲಿಭವರನನಾ- |ದರದಿಂದಲೆತ್ತುತಲಿ ಕೇಳ್ಮಗನೆ ನೀನೆನ್ನ |ವಿರಜಶರಪರಿಧಿಯಾ ಸರವನಹಿಪತಿಯನ್ನುಪರಜನ್ಮನೀ ಲಕುಮಿಯ ||ಪರಮೇಷ್ಟಿ-ಭವರ ಮನು-ಮುನಿಗಳನು ಧರಣಿಯನು |ಆವಾವನಿದನುದಯದಲ್ಲೆದ್ದು ಭಕ್ತಿಯಲಿ |ಭಾವಶುದ್ಧಿಯಲಿ ತಾ ಹೇಳಿಕೊಳುವನೊ ಅವನ- |ಘಾವಳಿಯ ಪರಿಹರಿಸಿ ಸುಙ್ಞÕನವೀವೆ ದೇ-ಹಾವಸಾನದಲೆನುತಲಿ ||ಶ್ರೀವಾಸುದೇವನಾಜಾÕನೆಸಿ ಗಜೇಂದ್ರ ಸಹಿ- |ತಾವಿಹಂಗಾಧಿಪನನೇರಿ ವೈಕುಂಠಕ್ಕೆ |ದೇವ ಬಿಜಯಂಗೈದಪುರಂದರವಿಠಲನ
--------------
ಪುರಂದರದಾಸರು