ಒಟ್ಟು 108 ಕಡೆಗಳಲ್ಲಿ , 41 ದಾಸರು , 103 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು
ಬಣ್ಣಿಸಲಳವೇ ನಿನ್ನ ಪಬಣ್ಣಿಸಲಳವಲ್ಲ ಭಕುತವತ್ಸಲ ದೇವಪನ್ನಗ ಶಯನ ಪಾಲ್ಗಡಲೊಡೆಯನೆ ರಂಗಅ.ಪಅಸಮ ಪರಾಕ್ರಮಿ ತಮನೆಂಬ ದೈತ್ಯನುಶಶಿಧರನ ವರದಿ ಶಕ್ರಾದ್ಯರಿಗಳುಕದೆಬಿಸಜಸಂಭವನ ಠಕ್ಕಿಸಿ ನಿಗಮವ ಕದ್ದುವಿಷಧಿಯೊಳಡಗಿರಲ್ ಒದಗಿ ಬಂದಮರರುವಸುಧೀಶ ಕಾಯಬೇಕೆಂದೆನಲವನ ಮ -ರ್ದಿಸಿ ವೇದಾವಳಿಯ ತಂದು ಮೆರೆದ ದಶದಿಸೆಯೊಳು ಬೊಮ್ಮಗಂದು ವೇದವ ಕರುಣಿಸದೆ ಕಂಜಾಕ್ಷ ಕೇಶವ ದಯಾಸಿಂಧು 1ಇಂದ್ರಾದಿ ಸಕಲ ದೇವತೆಗಳೆಲ್ಲರು ದೈತ್ಯವೃಂದವೊಂದಾಗಿ ಮತ್ಸರವ ಮರೆದು ಕೂಡಿಬಂದು ನೆರೆದುಮುರಹರ ನಿನ್ನ ಮತದಿಂದಮಂದರಾದ್ರಿಯ ಕಡೆಗೋಲ ಗೈಯ್ದತುಳ ಫಣೀಂದ್ರನ ತನು ನೇಣಿನಂದದಿ ಬಂಧಿಸಿ ||ಸಿಂಧು ಮಥಿಸುತಿರಲು ಘನಾಚಲವಂದು ಮುಳುಗಿ ಪೋಗಲು ಬೆನ್ನಾಂತು ಮುಕುಂದ ನೆಗಹಿದೆಸುರರು ಜಯ ಜಯವೆನಲು2ಖಳಶಿರೋಮಣಿ ಕನಕಾಕ್ಷನೆಂಬಸುರ ನಿನ್ನೊಳು ಸೆಣಸುವೆನೆಂಬ ಗರುವದಿಂದಲಿ ಬಹುಬಲದಿಂದುದ್ಧಟನಾಗಿ ದಿವಿಜರನಂಜಿಸಿಇಳೆಯ ಕದ್ದು ರಸಾತಳದೊಳಗಿರೆ ನಿನ್ನಪೊಳೆವ ಕೋರೆಗಳಿಂದ ತಿವಿದು ರಕ್ಕಸನ ಅ ||ಪ್ಪಳಿಸಿ ಕೊಂದವನ ದಿಂಡು ಗೆಡಹಿ ಮಹೀಲಲನೆಯೊಡನೆ ಕೈಕೊಂಡು ಪಾಲಿಸಿದೆ ಪೂಮಳೆಗರೆದರುಅಮರರು ನೆಲೆಗೊಂಡು3ಹಗಲಿರುಳಳಿವಿಲ್ಲದಸುರ ಕಶಿಪು ತನ್ನಮಗನ ಹರಿಯ ತೋರೆಂದಧಿಕ ಬಾಧಿಸುತಿರೆಬಗಿದು ಕಂಬವನೊಡೆದಧಿಕ ರೋಷಾಗ್ನಿ ಕಾರ್ಬೊಗೆ ಸೂಸಿ ಗಗನಮಂಡಲ ಧಗ - ಧಗಧಗಧಗಿಪ ಪ್ರಜ್ವಾಲೆಯನುಗುಳಿ ಹಿರಣ್ಯಕನ ಕುರುಗುರಿಂದೊಡಲ ಸೀಳಿ ಕರುಳಮಾಲೆತೆಗೆದು ಕಂಠದಲಿ ತಾಳಿ ಒಪ್ಪಿದೆನರಮೃಗರೂಪೀ ತ್ರಾಹಿಯೆನಲು ಶಶಿಮೌಳಿ 4ಕುಲಿಶಧರನ ಗೆದ್ದು ಕುವಲಯದೊಳು ಭುಜಬಲವಿಕ್ರಮದಲಿ ಸೌಭಾಗ್ಯದುನ್ನತಿಯಿಂದಬಲಿ ವಾಜಿಮೇಧ ಗೆಯ್ಯಲು ವಟುವೇಷದಿಂದಿಳಿದು ತ್ರಿಪಾದ ಭೂಮಿಯ ದಾನವ ಬೇಡಿಬಲುಹಮ್ಮ ಮುರಿಯಬೇಕೆಂದವನ ಶಿರಮೆಟ್ಟಿ ||ನೆಲನ ಈರಡಿಮಾಡಿದೆ ಚರಣವಿಟ್ಟುಜಲಜಜಾಂಡವನೊಡೆದೆ ಅಂಗುಷ್ಟದಿಸುಲಲಿತಸುಮನಸ ನದಿಯ ನೀ ಪಡೆದೆ5ಪೊಡವಿಪತಿಗಳೊಳಗಧಿಕ ಕಾರ್ತವೀರ್ಯಕಡುಧೀರ ದೇವ ದೈತ್ಯರಿಗಂಜದವನ ಬೆಂಬಿಡದೆ ಸಂಗ್ರಾಮದೊಳಧಿಕ ಸಮರ್ಥನಹೊಡೆದು ತೋಳ್ಗಳ ಕುಟ್ಟಿ ಕೆಡಹಿ ಆಗಸದೊಳುಮೃಢಮುಖ್ಯ ದೇವಸಂತತಿ ನೋಡೆ ಕ್ಷತ್ರಿಯರಪಡೆಯನೆಲ್ಲವ ಸವರಿ ಮಾತೆಯ ಶಿರಕಡಿದು ತತ್ಪತಿಗೆ ತೋರಿ ಪಿಡಿದೆ ಗಂಡುಗೊಡಲಿಯ ಕರದಿಬಲ್ಲಿದ ದನುಜಾರಿ6ದಶರಥರಾಯ ಕೌಸಲ್ಯಾನಂದನನಾಗಿಋಷಿ ವಿಶ್ವಾಮಿತ್ರನಧ್ವರವ ರಕ್ಷಿಸಿಘನವಿಷಕಂಠಧನುವ ಖಂಡಿಸಿ ಜಾನಕಿಯ ತಂದುತ್ರಿಶಿರದೂಷಣ ಖರರಳಿದು ವಾಲಿಯನಂದುನಿತಿ ಶಾಸ್ತ್ರದಿಂದ ಸಂಹರಿಸಿ ಸಾಗರವ ಬಂಧಿಸಿ ರಾವಣನ ಶಿರವ ಕತ್ತರಿಸಿ ರಂಜಿಸುವ ಲಂಕಾಪುರವ ವಿಭೀಷಣಗೆಎಸೆವ ಪಟ್ಟವ ಕಟ್ಟಿದೆಲೆ ದೇವಗರುವ 7ದೇವಕಿ ವಸುದೇವರಲ್ಲಿ ಜನಿಸಿ ಲೋಕಪಾವನಗೆಯ್ದು ಪನ್ನಗನ ಪೆಡೆಯ ಮೆಟ್ಟಿಗೋವಳನಾಗಿ ಗೋವರ್ಧನ ಗಿರಿಯೆತ್ತಿಮಾವ ಮಲ್ಲರ ಕೊಂದು ಪಾರಿಜಾತವ ತಂದುಆ ವಿಪ್ರನಲಿ ಓದಿ ಪೋದಪತ್ಯವನಿತ್ತ ||ತಾವರೆದಳಸುನೇತ್ರ ತ್ರಿಭುವನ ಸಂಜೀವಪರಮ ಪವಿತ್ರ ಶ್ರೀ ರುಕ್ಮಿಣಿದೇವಿ ಮನೋಹರ ಶುಭನೀಲಗಾತ್ರ 8ಸರಸಿಜಾಸನಭವ ಇಂದ್ರಾದಿಗಳುಕದೆದುರುಳ ದಾನವರಿರಲಂದು ಖೇಚರದೊಳುನಿರುಪಮ ನೀನೆ ಒಂದೊಂದು ರೂಪಗಳಿಂದಹರಗೆ ಸಹಾಯವಾಗಿ ದನುಜಸ್ತ್ರೀಯರ ವ್ರತಪರಿಹಾರ ಮಾಡಿ ಆಯಾಸವಿಲ್ಲದಲೆ ಮುಪ್ಪುರವ ಅಳಿದ ನಿಸ್ಸೀಮ ಅಖಿಳಶ್ರುತಿಯರಸೆ ಕಾಣದ ಮಹಿಮ ಹೇಸಾಮಜವರದ ಸುಪರ್ಣವಾಹನ ಸಾರ್ವಭೌಮ 9ಮಣಿಮಯ ಯುಕ್ತ ಆಭರಣದಿಂದೆಸೆವ ಲಕ್ಷಣವುಳ್ಳ ದಿವ್ಯ ವಾಜಿಯನೇರಿಧುರದೊಳುಕುಣಿವ ಮೀಸೆಯ ಘೋರವದನ ಖಡ್ಗ ಚರ್ಮವನು ಕೊಂಡು ದ್ರುಹಿಣಾದಿಗಳು ಪೊಗಳಲುಕಲಿದನುಜರೆಲ್ಲರನೊಂದೆ ದಿನದೊಳು ಸವರಿದ ||ರಣಭಯಂಕರ ಪ್ರಜಂಡ ಮೂಜಗದೊಳುಎಣೆಗಾಣಿನೆಲೊಉದ್ದಂಡ ಕಲ್ಕಿ ದಿನಮಣಿ ಕೋಟಿತೇಜ ದುಷ್ಕøತ ಕುಲ ಖಂಡ10ಚಿತ್ತಜನಯ್ಯನೆ ಚಿನ್ಮಯ ಗಾತ್ರನೆಉತ್ತಮದರ ಚಕ್ರ ಗದೆ ಜಲಜಾಂಕನೆಸುತ್ತಲು ಅರಸಲು ನಿನಗೆಲ್ಲಿ ಸರಿಕಾಣೆಹೊತ್ತು ಹೊತ್ತಿಗಾದಿತ್ಯರಬಿನ್ನಪಕೇಳಿಹತ್ತವತಾರದಿ ಅಸುರರ ಮಡುಹಿದೆನಿತ್ಯ ತ್ರಿಸ್ಥಾನವಾಸ ವಾಗಿಹ ಸರ್ವಭಕ್ತರ ಮನೋವಿಲಾಸ ಸಲಹೋ ಪುರುಷೋತ್ತಮಪುರಂದರ ವಿಠಲ ತಿರುಮಲೇಶ11
--------------
ಪುರಂದರದಾಸರು
ಬಯಲಭಾವಿಯ ನೀರಿಗೆ ಬಂದಳೊಬ್ಬಳು ಬಾಲೆ |ಬಾಯಾರಿ ಬಿದ್ದಳು ಕೊಡವೊಡೆಯಿತು ನೀರುರುಳಿತು ಪ.ನೀರಿಲ್ಲದೆ ನೆರಳಿಲ್ಲದೆ ಬೇರಿಲ್ಲದೆ ಸಸಿಹುಟ್ಟಿಹೂವಿಲ್ಲದೆ ಕಾಯಿಲ್ಲದೆ ಅದು ಫಲಕೆ ಬಂದು ||ಕರವಿಲ್ಲದೆ ಕಾಲಿಲ್ಲದೆ ಕೊಯ್ವರಯ್ವರು ಆ ಹಣ್ಣನು |ಮರುಳಾಯಿತು ಮೂವತ್ತು ಸಾವಿರ ಮಂದಿ 1ಕುರುಡ ಕಂಡನು ಸರ್ಪನಡುವಿರುಳು ಬಾಹುದನು |ಮೂಕ ಕಂಡನು ಕನಸ ಕಿವುಡನು ಕೇಳಿದ ||ಇರವು ಹಾರಿತು ಗಗನಕೆ ಮರವು ಮುರಿಯಿತು ನೋಡಿ |ವಿಧಿತನ್ನ ಬೇಟಿಗೆ ಹೋಗುವ ಸಡಗರ ನೋಡಿ2ಕಿಚ್ಚಿನ ಕೊಡದವಳೆ ನೀ ಬಂದೆ ತೋರಣಗಟ್ಟಿ |ರಚ್ಚಿಗೆ ಬಾಹೋರು ನಾಲುವರೊಳಗೆಉಚ್ಚರಿಸಲೂ ಸಲ್ಲ ಕೇಳು ಪುರುಷನ ಸೊಲ್ಲಅಚ್ಚಪುರಂದರವಿಠಲ ತಾನೆ ಬಲ್ಲ 3
--------------
ಪುರಂದರದಾಸರು
ಭಾವೆಗೋಪಾಲ ಸವತಿ ಪಾಲಾದನಲ್ಲೆಯುಕ್ತಿ ಯುಕ್ತಿಲೆ ಒಲಿವೋಕೌತುಕನೋಡ ನಲ್ಲೆಪ.ಹೆಣ್ಣು ನಮ್ಮಿಬ್ಬರ ಕಣ್ಣಿಗೆ ಇಂಗುಹಚ್ಚಿಸುವರ್ಣದಂತೆ ಹೊಳೆಯುತಸುವರ್ಣದಂತೆ ಹೊಳೆಯುತ ರಮಿಸುತನಮ್ಮಣ್ಣನ ಕೂಡ ಇರುವೋಳು 1ನಿತ್ಯಪ್ರಕಾಶನ ಅತ್ಯಂತ ಬೆರೆದಿರೆಹತ್ತಿರ ಆಕೆ ರಮಿಸುತಹತ್ತಿರ ಆಕೆ ರಮಿಸುತಿರಲುಎಲ್ಲಾ ಪತ್ನಿಯರು ಮಾಡೊ ತೆರನೇನ 2ಕಾಲದಲ್ಲಿದ್ದ ಹರಿಯ ಮೇಲಾಗಿ ಸ್ತುತಿಸುತಕಾಲಾಲವ ತ್ರುಟಿಯು ಬಿಡದಲೆಕಾಲಾಲವ ತ್ರುಟಿಯು ಬಿಡದಲೆ ರಮಿಸಿಎಲ್ಲಾ ಬಾಲೆಯರು ಮಾಡೊತೆರನೇನ 3ದೇಶದಲ್ಲಿದ್ದ ಹರಿಯಲೇಸಾಗಿ ಬೆರೆದಿರೆಲೇಶವಬಿಡದೆ ರಮಿಸುತಲೇಶವ ಬಿಡದೆ ಇರಲುನಮ್ಮ ಆಶೆ ಪೂರೈಸೊ ಬಗೆ ಹ್ಯಾಂಗೆ 4ರುದ್ರಾದಿ ವಂದ್ಯನ ಬದ್ದಾಗಿ ರಮಿಸುತಮುದ್ದು ಕೋಮಲೆಯು ಇರತಾಳೆಮುದ್ದು ಕೋಮಲೆಯು ಇರತಾಳೆನಿಮ್ಮ ಬುದ್ಧಿ ಎಲ್ಲಿ ಹೋಗಿ ಅಡಗಿತ 5ಬ್ರಮ್ಹನ ಮಾತಿಗೆ ತಮ್ಮಂಜಿಕೆಯು ಏನಅಮ್ಮ ಅಚ್ಯುತನ ಒಡಗೂಡಿಅಮ್ಮ ಅಚ್ಯುತನ ಒಡಗೂಡಿ ರಮಿಸಿದಾಗನಿಮ್ಮ ಹೆಮ್ಮಿಎಲ್ಲಿ ಹೋಗಿ ಅಡಗಿತ 6ಮುದ್ದು ರಾಮೇಶನ ಕದ್ದಿಲೆ ಕರೆದಿರೆಹರದೆಯರುಹರಿಯ ರಮಿಸುತಹರದೆಯರುಹರಿಯ ರಮಿಸುತ ಗಗನಕೆ
--------------
ಗಲಗಲಿಅವ್ವನವರು
ಮಾಮಝ ಭಾಪುರೆ ಭಳಿರೆ ಹನುಮಂತರಾಮಪದ ಸೇವಿಪ ವೀರ ಹನುಮಂತ ಪಹುಟ್ಟುತಲೆ ಹೊನ್ನ ಕಚ್ಚುಟವ ಕುಂಡಲವೆರಸಿನಿಷ್ಠೆಯಲಿ ರಘುಪತಿಯ ಪಾದವನೆ ಕಂಡು ||ದಿಟ್ಟಿ ಹರಿದಾಡಿ ಮನಮುಟ್ಟಿ ಪೂಜಿಸಲಜನಪಟ್ಟಕನುವಾದ ಸಿರಿವಂತ ಹನುಮಂತ 1ಅಂಬರಕೆ ಪುಟನೆಗೆದು ಅಂಬುಧಿಯನೆರೆದಾಟಿಕುಂಭಿನಿಯ ಮಗಳಿಗುಂಗುರವನಿತ್ತು |ಬೆಂಬಿಡದೆ ಲಂಕೆಯನು ಸಂಭ್ರಮದಿ ಸಖಗಿತ್ತೆಗಂಭೀರ ವೀರಾಧಿವೀರ ಹನುಮಂತ 2ಅತಿದುರಳ ರಕ್ಕಸನು ರಥದ ಮೇಲಿರಲು ರಘು-ಪತಿಯು ಪದಚರಿಯಾಗಿ ನಿಂತಿರಲು ನೋಡಿ ||ಪೃಥವಿ- ಗಗನಕೆ ಬೆಳೆದು ರಥವಾದೆ ಒಡೆಯನಿಗೆಅತಿ ಭಯಂಕರ ಸತ್ತ್ವವಂತ ಹನುಮಂತ 3ಒಡೆಯ ಉಣಕರೆಯಲಂದಡಿಗಡಿಗೆ ಕೈಮುಗಿದುದೃಢಭಕ್ತಿಯಿಂದ ಮೌನದಿ ಕುಳಿತು ||ಎಡಿಯಕೊಂಡೆದ್ದೋಡಿ ಗಗನದಿ ಸುರರಿಗೆಕೊಡುತ ಸವಿದುಂಡ ಗುಣವಂತ ಹನುಮಂತ 4ಪ್ರಥಮದಲಿ ಹನುಮಂತ ದ್ವಿತೀಯದಲಿ ಕಲಿಭೀಮತೃತೀಯದಲಿಗುರುಮಧ್ವಮುನಿಯೆನಿಸೀ ||ಪ್ರತಿಯಿಲ್ಲದಲೆ ಮೆರೆದೆಪುರಂದರವಿಠಲನಸುತ್ತ ನಿನಗಾರು ಸರಿ -ವಿಜಯಹನುಮಂತ5
--------------
ಪುರಂದರದಾಸರು
ಲಾಲಿ ತ್ರಿಭುವನಪಾವನಲಾಲಿ ಪ.ಗೋವಳ ಕುಲದೊಳು ಪುಟ್ಟಿದಗೆಲಾಲಿ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವರ್ಕಳನು ಸಲಹಿದೆಗೆಲಾಲಿ ||ಗೋವುಗಳನೆಲ ಕಾಯ್ದವಗೆಲಾಲಿಗೋವಿಂದ ಪರಮಾನಂದಗೆಲಾಲಿ..............ಲಾಲಿ1ನಖದಲಿ ಗಂಗೆಯ ಪಡೆದಗೆಲಾಲಿಶಕಟನ ಮುರಿದು ಒತ್ತಿದವಗೆಲಾಲಿ ||ಅಖಿಳ ವೇದಂಗಳ ತಂದಗೆಲಾಲಿರುಕುಮಿಣಿಯರಸ ವಿಠಲನಿಗೆಲಾಲಿ...........ಲಾಲಿ2ಗಗನವ ಮುರಿದು ಒತ್ತಿದಗೆಲಾಲಿನಿಗಮಗಳನು ತಂದಿತ್ತಗೆಲಾಲಿ ||ಹಗೆಗಳನೆಲ್ಲರ ಗೆಲಿದಗೆಲಾಲಿಜಗವನು ಉದರದಿ ಧರಿಸಿದಗೆಲಾಲಿ........ಲಾಲಿ3ಬೊಟ್ಟಿಲಿ ಬೆಟ್ಟವನೆತ್ತಿದಗೆಲಾಲಿಮೆಟ್ಟಿಲಿ ಭೂಮಿಯನಳೆದಗೆಲಾಲಿ ||ಜಟ್ಟಿಗರನೆಲ್ಲ ಗೆಲಿದಗೆಲಾಲಿಕಟ್ಟುಗ್ರ ಶ್ರೀ ನರಸಿಂಹಗೆಲಾಲಿ......................ಲಾಲಿ4ಶರಧಿಗೆ ಸೇತುವೆಗಟ್ಟಿದಗೆಲಾಲಿಸುರರ ಸೆರೆಯನು ಬಿಡಿಸಿದಗೆಲಾಲಿ ||ಕರಿಮೊರೆಯಿಡಲು ಬಂದೊದಗಿದಗೆಲಾಲಿವರದ ಪುರಂದರವಿಠಲಗೆಲಾಲಿ...........ಲಾಲಿ5
--------------
ಪುರಂದರದಾಸರು
ಶಕ್ತನಾದರೆ ನಂಟರೆಲ್ಲ ಹಿತರು - ಅಶಕ್ತನಾದರೆ ಆಪ್ತರವರೆ ವೈರಿಗಳು ಪ.ಕಮಲಾರ್ಕರಿಗೆ ನಿರುತ ಕಡುನಂಟುತನವಿರಲುಕಮಲ ತಾ ಜಲದೊಳಗೆ ಆಡುತಿಹುದುಕ್ರಮತಪ್ಪಿ ನೀರಿನಿಂದ ತಡಿಗೆ ಬೀಳಲು ರವಿಯಅಮಿತ ಕಿರಣಗಳಿಂದ ಕಂದಿ ಪೋಗುವುದು 1ವನದೊಳುರಿ ಸುಡುತಿರಲು ವಾಯು ತಾ ಸೋಂಕಲ್ಕೆಘನ ಪ್ರಜ್ವಲಸುತಿಹುದು ಗಗನಕಡರಿಮನೆಯೊಳಿರ್ದಾ ದೀಪ ಮಾರುತನು ಸೋಂಕಿದರೆಘನಶಕ್ತಿ ತಪ್ಪಿ ತಾ ನಂದಿ ಹೋಗುವುದು 2ವರದ ಶ್ರೀ ಪುರಂದರವಿಠಲನ ದಯವಿರಲುಸರುವ ಜನರೆಲ್ಲ ಮೂಜಗದಿ ಹಿತರುಕರಿಯ ಸಲುಹಿದ ಹರಿಯ ಕರುಣ ತಪ್ಪಿದ ಮೇಲೆಮೊರೆಹೊಕ್ಕರೂ ಕಾಯ್ವ ಮಹಿಮರುಂಟೇ ದೇವ 3
--------------
ಪುರಂದರದಾಸರು
ಶರಣು ಶರಣು ಶರ್ವಾಣಿಯೆ ಈಕ್ಷಿಸುಶರಣು ಶರ್ವನ ರಾಣಿ ಕಲ್ಯಾಣೀಶರಣು ಶರಣು ಸರ್ವೇಶ್ವರಿ ರಕ್ಷಿಸುಶರಣ ಜನರ ಶ್ರೇಣಿ ಫಣಿವೇಣಿ ಪಹಿಮಕರ ಶೈಲ ಕುಮಾರಿ ಸುರಾಸುರನಮಿತೆ ಉಮಾದೇವಿ ಮಹದೇವಿಪ್ರಮಥಾಧಿಪೆ ಕೌಮಾರಿ ಪರಾತ್ಪರೆವಿಮಲೆ ಕೋಮಲಾಂಗಿ ಶ್ವೇತಾಂಗಿ 1ವೈರಿಕಳೌಘ ವಿಹಾರಿಣಿ ಪೂರಿಣಿಗೌರಿ ಸೋದರಿ ನೀನೆ ಪ್ರವೀಣೆಸೈರಣೆ ಸುರ್ಜಿತೆ ತೋರುವ ಕಾರಣೆಗೌರೀ ಗಗನವಾಣೀ ಶುಕವಾಣಿ 2ಮಂದಸ್ಮಿತಮುಖ ಚಂದ್ರಕೋಟಿಸಂಕಾಶೆ ವಿಶ್ವರೂಪೆ ಜಿತಪಾಪೆಸುಂದರಾಂಗಿ ಗೋವಿಂದದಾಸನಹೃನ್ಮಂದಿರ ಸುಮವಾಸೆ ಸಂತೋಷೆ 3
--------------
ಗೋವಿಂದದಾಸ
ಶ್ರೀ ತತ್ತ್ವವಾದ ಮತವ ಪಶ್ರೀ ತತ್ತ್ವವಾದ ಮತವಾರ್ದಿಶುಭಚಂದ್ರಮನ |ಭೂತಲದೊಳಪ್ರತಿಮನೆನಿಪ ಶ್ರೀಯತಿವರನ |ಪ್ರೀತಿಯಿಂ ಭಜಿಸೆ ಇಷ್ಟಾರ್ಥಗಳಸಲಿಸುವವಾತಜಾತನ ಸ್ಮರಿಸಿರೈ ಅ.ಪಶ್ರೀಮಾರುತನು ತ್ರೇತೆಯಲಿ ಹನುಮನೆಂದೆನಿಸಿ |ತಾ ಮುದದಿ ಅಂಜನಾದೇವಿ ಗರ್ಭದಿ ಜನಿಸಿ |ರಾಮಪಾದಾಂಬುರುಹ ಭಜಿಸಿ ಸದ್ಬಕ್ತಿಯಲಿಸ್ವಾಮಿಯಾಜೆÕಯನೆ ಕೊಂಡು |ನೇಮದಿಂ ಸಾಗರವ ದಾಟಿ ಲಂಕೆಯ ಪೊಕ್ಕು |ಪ್ರೇಮದಿಂದೊಯ್ದ ಮುದ್ರೆಯ ಜಾನಕಿಗೆ ಕೊಟ್ಟು |ಆ ಮಹದ್ವನದ ದನುಜರನೆಲ್ಲವಳಿದ - ನಿಸ್ಸೀಮ -ಹನುಮನ ಭಜಿಸಿರೈ 1ದ್ವಾಪರದಿ ಮಾರುತನು ಕುಂತಿದಾರಕನೆನಿಸಿ |ದ್ವಾಪರನ ಯುಕ್ತಯಿಂದುತ್ಕøಷ್ಟರಾಗಿದ್ದ |ಪಾಪಿಗಳನಳಿದು ಕೀಚಕ - ಜರಾಸಂಧಾದಿಭೂಪಾಲಕರನು ತರಿದು ||ದ್ರೌಪದಿಗೆ ಸೌಗಂಧಿ ಕುಸುಮವನು ತರಪೋಗ -ಲಾಪಥದೊಳಸುರಮಣಿಮಂತಕದನವ ಮಾಡೆ|ಕೋಪದಿಂದವನ ಮರ್ದಿಸಿದನತಿಬಲವಂತನಾ ಪುರುಷನಂ ಭಜಿಸಿರೈ 2ಕಲಿಯುಗವು ಪ್ರಾಪ್ತವಾಗಲು ಮಧ್ವನಾಮದಿಂದಿಳೆಯೊಳವತರಿಸಿ ಸೋಹಂ ಎಂಬ ಶಂಕರನಹುಲುಮತಂಗಳಜರಿದುಮಾಯಿಗಳಗೆಲಿದು ಮೋಹನ ಶಾಸ್ತ್ರಬಲೆಯನರಿದುಮತಿತ ದರುಶನವೈದ ನುಂಗಿ ಜೀರ್ಣಿಸಿಕೊಂಡುಪ್ರಲಯ ಭೈರವನೆಂಬ ಬಿರುದ ಅವನಿಯ ಮೇಲೆನೆಲೆಗೊಳಿಸಿ ವಿಷ್ಣು ಪರದೈವವೆಂದರುಹಿದಾಅಲವಭೋದರ ಭಜಿಸಿರೈ 3ಪ್ರತಿವಾದಿಗಿದಿರಾಗಿ ತಲೆಯೆತ್ತದಂತೆ ಸಂ-ತತ ಧರೆಯೊಳದ್ವೈತವಂಕುರಿಸದಂತೆ ದು-ರ್ಮತದ ಮೋಹನಶಾಸ್ತ್ರ ಪಲ್ಲವಿಸದಂತೆ ಮಾಯಿಗಳಮತಗಳ ಮತ ಹೆಚ್ಚದಂತೆ ||ಕ್ಷಿತಿಯೊಳಗೆ ಶ್ರೀತತ್ತ್ವವಾದ ನೆಲಸಿಪ್ಪಂತೆ |ಶ್ರುತಿಶಾಸ್ತ್ರವದ್ವೈತವಂ ಬಿಟ್ಟು ಸೆಳೆವಂತೆಪ್ರತಿಪಾದಿಸುವ ಖಳರ ದುರ್ಭಾಷ್ಯಗಳ ಜರಿದಯತಿರಾಯರು ಭಜಿಸಿರೈ 4ಪರಮವೈಷ್ಣವರ ಮಿಂಚಿಡುವ ರತ್ನದ ಸಾಣೆ |ಪರವಾದಿಗಳ ಬೆನ್ನ ಮುರಿವ ವಜ್ರದ ಸಾಣೆ |ಗುರುಮಧ್ವಮುನಿಯ ಬಲುವಿದ್ಯ ಸಾಮಥ್ರ್ಯಕ್ಕೆಸರಿಗಾಣೆ ಲೋಕದೊಳಗೆ ||ಧರೆಯೊಳಗೆ ಶ್ರೀತತ್ತ್ವವಾಗಿ ನೆಲಸಿಹ ವೀಣೆ |ಚರಿಸದಂತಿಳೆಯಲದ್ವೈತಕಿಕ್ಕಿದ ಆಣೆ |ವರಮೂರ್ತಿ ಚೈತನ್ಯ ವಂದ್ಯ ಸುತ್ರಾಮನೇ |ಪೂರ್ಣಪ್ರಜÕರ ಭಜಿಸಿರೈ 5ಅಕಳಂಕ ಚರಿತನೆ ಮುಮುಕ್ಷ ಮಸ್ತಕದಮಣಿ|ನಿಖಿಳಪೌರಾಣಶ್ರುತಿ ಶಾಸ್ತ್ರದಾಗಮದಖಣಿ|ಸಕಲವಾದಿಗಳ ಜಿಹ್ವೆಯಲಿ ಮೆಟ್ಟಿದಆಣಿಭಾಗವತಚಿಂತಾಮಣಿ ||ಯುಕುತಿ ಪರಿಪೂರ್ಣಯತ್ಯಾಶ್ರಮಕೆಕಟ್ಟಾಣಿ|ಪ್ರಕಟ ಕವಿಜನಕಮಲವ್ಯೂಹಕೆಗಗನಮಣಿ|ಸಕಲ ಜಗವಂದ್ಯ ಚೈತನ್ಯ ಚಿಂತಾಮಣಿಮುಖ್ಯಪ್ರಾಣರ ಭಜಿಸಿರೈ 6ಮುಂದೆ ಅಜನಾಗಿ ಪವಮಾನ ಕೃತಯುಗದಲ್ಲಿ |ಒಂದು ನಿಮಿಷದಲಿ ಸೃಜಿಸುವನು ಸಚರಾಚರವ |ಸಂದೇಹವಿಲ್ಲ ತಪ್ಪದು ವೇದವಾಕ್ಯವಿದುಹಿಂದೆ ಶ್ರೀಹರಿಸೇವೆಯ ||ಒಂದು ಬಯಸದಲೆ ನಿಚ್ಚಟದ ಭಕ್ತಿಯಲಿ ತಾ -ನಂದು ಮಾಡಿದಸುಕೃತ- ಫಲದಿಂದ ಬ್ರಹ್ಮತ್ವ |ಬಂದು ಯುಗ -ಯುಗದೊಳವರಿತರಿಸಿ ದೃಷ್ಟವತೋರ್ಪನಂದ ಮುನಿಪರ ಭಜಿಸಿರೈ 7
--------------
ಪುರಂದರದಾಸರು
ಶ್ರೀ ವಿಷ್ಣು ಸ್ಮರಣೆಯಿಂ ಸಾಧು ಸಂಸರ್ಗಶ್ರೀ ವಿಷ್ಣು ಸ್ಮರಣೆಯೆಂಬುದೆಅಪವರ್ಗಶ್ರೀ ವಿಷ್ಣು ಸ್ಮರಣೆಲಿ ಸದ್ಬುದ್ಧಿ ದೀರ್ಘಶ್ರೀ ವಿಷ್ಣು ಸ್ಮರಣೆಗೆಚ್ಚರ ಬುಧವರ್ಗ ಪ.ಶೀತಲವಾಯ್ತುಹಾಲಾಹಲಹರಗೆಮಾತೆ ದ್ರೌಪದಿ ಲಜ್ಜೆ ಕಾಯಿತು ಮರುಗೆಪಾತಕಿಅಜಾಮಿಳನ ಪಾಪವು ಕರಗೆಪೂತರಾಗ್ವರು ಸುಜನರು ಒಳಹೊರಗೆ 1ಸಿರಿಅರ್ಥ ಮಾಡಲಚ್ಚರವಾದ ಸ್ಮರಣೆಪರಸೋದ್ವಾಪರಿಯೆಂಬುವ ಗುಹ್ಯಸ್ಮರಣೆವಿರಿಂಚಿಗೆ ತೃಪ್ತಿಯಾಗದ ನಾಮಸ್ಮರಣೆಉರಗೇಶನ ಜಿಹ್ವೆಗೆ ನಿಲುಕದ ಸ್ಮರಣೆ 2ತ್ಯಾಗಭೋಗಯೋಗ ಛಿದ್ರ ಮುಚ್ಚುವುದುಭೂಗಗನಸ್ಥರ ಪುಣ್ಯ ಹೆಚ್ಚುವುದುಕೂಗ್ಯಾಡಿ ಕುಣಿವರಾನಂದ ಫಲವಿದುಶ್ರೀ ಗಂಗಾಜನಕನ ತಂದು ತೋರುವುದು 3ಭೂಪ್ರದಕ್ಷಿಣೆ ತೀರ್ಥಯಾತ್ರೆಗೆ ಮಿಗಿಲು ಅಸಂಪ್ರಜ್ಞಾತಸ್ಥರಿಗೆ ಹರಿಗೋಲುಸುಪ್ರಾಪ್ತ ಮುಕ್ತರುಂಬಮೃತ ಕಣಗಳುಶ್ರೀ ಪ್ರಾಣನಾಥನ ನಾಮಾವಳಿಗಳು 4ಸ್ವಾದನ್ನದೊಟ್ಟಿಲು ಹರಿನಾಮಸ್ಮರಣೆಮಧ್ವಶಾಸ್ತ್ರಜÕರ ವಚನಾಗ್ನಿಗೆ ಅರಣಿಅದ್ವೈತಮತಧ್ವಾಂತಕ್ಕುದಿತ ಸತ್ತರಣಿ ಶ್ರೀಮದ್ವಿಷ್ಣು ಪ್ರಸನ್ವೆಂಕಟನ ಸ್ಮರಣೆ 5
--------------
ಪ್ರಸನ್ನವೆಂಕಟದಾಸರು
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪಕುಹಕರ ಸಂಗವ ಮಾಡದೆಖೇಚರ|ವಹನನಾಳುಗಳ ಆಳಾಗೀ ||ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ 1ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತವಿಜ್ಞಾನಘಳಿಸುವದೆ 2ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ 3ತತ್ವಭಿಮಾನಿಗಳೆಲ್ಲಸಮೀರಪ್ರ- |ವರ್ತಿಸಿದಂದದಿ ವರ್ತಿಪರೂ ||ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯಶಿವಾದ್ಯರು ಛಿನ್ನರು ಎಂಬುದೆ 4ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ 5ಚೇತನಚೇತನವಾದ ಜಗತ್ಯವು |ವಾತನಧೀನದೊಳಿರುತಿಹದೂ ||ಆತನು ರಮೆಯಧೀನವಳುಹರಿ|ದೂತಳೆಂದು ನಿಶ್ಚಯ ತಿಳಕೊಂಬುದೆ 6ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದಹರಿಮಾರುತ ಮಾತ್ರಾ ||ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭಪ್ರಮುಖರಿಗೊಂದಿಸುತಿಪ್ಪುದೆ 7ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನುಹರಿಎಂಬುದೆ 8ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||ಹರಿವಿಧಿಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ 9ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗಭೂಷಣನೊಳಿದ್ದು ಲಯಾ ||ದ್ವಿಜರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ 10ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||ಮಂದರಧರಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ 11ಜ್ಞಾನಾನಂದಾದಿ ಗುಣಭರಿತಹರಿ|ಹೀನತನವನೆಂದಿಗ್ಯು ಅರಿಯಾ ||ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ 12ಝಷಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ 13ಆಪಗ ವನಧಿಯನಳನಿಳಶಶಿರವಿ|ಈ ಪೊಡವೀವನನಿರಂತರದೀ ||ಶ್ರೀಪತಿಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ 14ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||ಹುಸಿಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ 15ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||ಏನು ನೋಡೆ ನಿರ್ಮಲನಾಗಿಹಹರಿ|ಭಾನುಸಖ ಜಲದೊಳಿರುವಂತೆಂಬುದೆ16ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ17ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ 18ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನಗುಣಮಹತ್ಮಿಯನೂ ||ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇಕೇಳಿವಿಜ್ಞಾನಘಳಿಸುವದೆ 19ಕಾಲಿಲ್ಲದೆ ನಡಿಯಲು ಬಲ್ಲನುಹರಿ|ಕೇಳುವ ಕಿಂವಿಯಿಲ್ಲದೆ ತನ್ನಾ ||ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿಅಹಿಮಾಡಿಹನೆಂಬುದೆ 20ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜÕವು ಯಿದು ಎಂದರಿವುದೆ 21ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||ಮೃತ್ಯುಂಜಯಸಖಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ 22ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿಶಯನಗೆ ಎಂದೆಂದೂ ||ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ 23ಬ್ರಹ್ಮಾದಿಗಳಿಗೆ ಜನಕನು ಶ್ರೀಪರ|ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ 24ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ 25ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ 26ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವಕುಟುಂಬಿಯು ಕೈಕೊಂಬಾ ||ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ27ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ 28ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜದಳಾಕ್ಷನ ಒಲಿಸಿರೊ ಎಂಬುದೆ 29ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ 30ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ31ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ 32ಈ ಕರ್ಮವ ಮಾಡಿದೆ ಯನಗೀಪರಿ|ಸಾಕಲ್ಲ್ಯೆವು ಆಯಿತು ಎಂದೂ ||ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ 33ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ 34ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀಪರಿಲೀಲಗಳೆಂಬುದೆ 35ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ 36ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||ಲೋಪವ ಮಾಡದೆ ನಿರ್ಜಲ ಜಾಗರ- |ವಾಪರಮಮುದದಿ ನಡಸುತಲಿಪ್ಪುದೆ 33ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ 38ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲಹರಿಅವಗೆಂದೂ ||ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತಸರ್ವಜÕ ಸುಗುಣ ಪೂರ್ಣೆಂಬುದೆ 39ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ 40ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||ತೃತಿಯದಿ ಸತ್ತೀಥ್ರ್ಯಾತ್ರಿಗಳನುಮಾ|ಡುತಲಲ್ಲೆಲ್ಲಿಹ ಮಹಿಮಿ ಕೇಳುವದು 41ಘೋರತರ ಕುಸಂಸಾರವೆಂಬ ಈ |ವಾರಿಧಿತ್ವರದಾಟುವದಕ್ಕೇ ||ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ 42ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ 43ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ 44ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ 45ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ 46ಗುರುಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||ಮರುತಾಂತರ್ಗತನೋಲ್ಗವನಲ್ಲದೆ |ನರಸ್ತೋತ್ರವ ಸ್ವಪ್ನದಿ ಮಾಡದಿಹದೆ 47ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ 48ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ 49ಹೊತ್ತರಾದಿನಿಶಿಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ 50ಹಾನಿ ಲಾಭ ಜಯ ಅಪಜಯ ಮಾನಪ- |ಮಾನಸುಖಾಸುಖ ಸಮ ಮಾಡೀ ||ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ 51
--------------
ಪ್ರಾಣೇಶದಾಸರು
ಸಮಸ್ತ ನಾಮಮಣಿಗಣ ಷಟ್ಚರಣ ಪದ್ಯಮಾಲಾಶ್ರೀ ರಮಾವರ ಶ್ರುತಿವಿನುತ ಸುಖಸಾರಗೃಹಕೆ ಸರ್ವೇಶ ಸುರದ್ರುಮವಾರಿಜಾಕ್ಷ ಮುಕುಂದಮುರಹರನಾರಸಿಂಹ ನಮೋಪ.ಗರುಡಗಮನ ಗುಡಾಳಕಾಖಿಳಶರಣಜನಸುರಧೇನುಸುರಮಣಿಕರುಣಸಾಗರ ಕಾಮಿತಾರ್ಥದದುರಿತಗಜಸಿಂಹಾಸರಸಿಜಾಸನಸೇವ್ಯಮುಕ್ತಾಭರಣನಮಿತ ಸುರೇಶ ನಿಶಾಚರಹರಣಶೀಲ ಸದಾಗಮ ಜೆÕೀಯಾದಿ ಪುರುಷ ನಮೋ 1ವಿಶ್ವಗರ್ಭ ವಿಚಿತ್ರಚರಿತ ಶುಭಾಶ್ವವದನ ವಿಶಾಲವಿಕ್ರಮಶಶ್ವದೇಕ ಸುವ್ಯಾಪ್ತ ಜ್ಞಾನಾನಂದ ಬಲಪೂರ್ಣನಶ್ವರೇಶ್ವರ ಸವಿತರೇಶ್ವರಈಶ್ವರೇಶ್ವರವೇದಗೋಚರಸುಸ್ವಭಾವ ನವಾಂಬುದಾಂಗ ಕೃಪಾಳು ಕೃಷ್ಣ ನಮೋ 2ಜನಪಮುನಿನುತ ತಾಟಕಾಂತಕಜನಕಜಾವರ ಲಕ್ಷ್ಮಣಾಗ್ರಜಜನಕ ವಾಗ್ವರ ಇಂದ್ರಪೂಜಿತ ಸೂರ್ಯಸುತಪಾಲದಿನಪ ಕುಲಪತಿ ದೀನವತ್ಸಲವನಧಿಬಂಧ ವಿಹಾರದಶಶಿರಹನನಕಾರಣ ಭರತಪಾಲಕ ರಾಮರಾಜ ನಮೋ3ಪೂತನಾಂತಕ ಶಕಟಮಾರಕವಾತಚಕ್ರಾನಿಷ್ಟಹರ ನವನೀತ ಪ್ರಿಯ ದಧಿಸಾರ ಭೋಜಕ ಗೋಪವಧುಲೋಲಶೀತಕರ ಕುಲತಿಲಕ ಶ್ರುತಿವಿಖ್ಯಾತಕರಿಚಾಣೂರ ಬಕಹರ&ಟsquo;ಮಾತುಳಾಂತಕ ಪಾರ್ಥಸ್ಥಾಪಕ ಕೌರವಾಂತ ನಮೋ 4ಚಕ್ರ ಶಂಖ ಗದಾಬ್ಜಧರ ತ್ರಿವಿಕ್ರಮಾಚ್ಯುತ ವರಹ ವಾಮನನಕ್ರಶಿಕ್ಷಕ ನಾಗರಕ್ಷಕ ನಿತ್ಯತೃಪ್ತ ಹರೇಶಕ್ರಗಿರಿಶಾರ್ಚಿತ ಪದಾಬ್ಜ ತ್ರಿವಕ್ರವಧು ಸೌಂದರ್ಯದಾಯಕಅಕ್ರುರಾಭೀಷ್ಟದ ವಿದುರ ಉದ್ಧವವರೇಣ್ಯ ನಮೋಮ 5ಮಧುಮಥನ ಕೈಟಭವಿದಾರಣಕುಧರವರ ಆನಂತವರ್ಣಾಭಿಧ ಜನಾರ್ದನ ಸಾಮಗಾಯನ ವೇದ್ಯಅನವದ್ಯವಿಧಿನಿಷೇಧಾಲಿಪ್ತ ಸತತ ವಿಬುಧನಿಯಾಮಕ ನಿರ್ಭಯಾತ್ಮ ತ್ರಿವಿಧ ಜನಾಶ್ರಯ ಕುಶಶಯನ ಶಾರಙ್ಗಪಾಣಿ ನಮೋ 6ವಾಸುದೇವಕುಭಾರವಾಹಕವಾಸವೇಯ ಕಪಿಲ ಋಷಭಮಹಿದಾಸ ಯಜ್ಞಾದತ್ತ ನಾರಾಯಣ ನಿರಾಮಯ ಭೋಶ್ರೀಸನಾತನ ಸಕಲಭುವನ ನಿವಾಸ ಸಂಕರುಷಣ ಸದಾಸ್ಮಿತಹಾಸ ದಿವಾಕರೇಕ್ಷಣಸ್ವಪ್ರಕಾಶನಮೋ7ಶೇಷಶಯನ ಜಗಚ್ಚರಾಚರಪೋಷಕಾಧಾರಕ ಸ್ವಜನ ಹೃದ್ಭೂಷಣಾಪರಿಚ್ಛಿನ್ನ ಅಪ್ರಮೇಯಾದಿ ಶ್ರುತಿವಕ್ತಘೋಷ ವರ್ಣ ಸುಪೂರ್ಣ ವಾಚ್ಯಾಶೇಷದೋಷವಿದೂರ ಖಳಜನಭೀಷಣಾಪ್ರಾಕೃತ ಅನುಪಮ ಪರಮಪುರುಷ ನಮೋ 8ಇಹದ್ಭಯ ಕ್ಷಯಕರ ಗುಣತ್ರಯರಹಿತ ವೃದ್ಧಿ ಹ್ರಾಸವರ್ಜಿತವಿಹಗತೈಜಸಪ್ರಾಜÕವಿಶ್ವಾವಸ್ಥತ್ರಯದಾತಾಅಹಿತನಾಶ ಪರೇಶ ಗಹನಾತ್ಗಹನಅವ್ಯಯಅತಿಶಯಾದ್ಭುತಬಹುಳ ಜೀವಾಂತರಿಯ ಅಂತರ್ಬಹಿಃಸ್ವತಂತ್ರ ನಮೋ 9ಪೂರ್ಣ ಕಾಮಾಂಬೋಧಿ ಶ್ರೀವಟಪರ್ಣತಲ್ಪ ಪರಾತ್ಪರಾಪ್ರತಿವರ್ಣ ನಿಗಮಾಗಮ ಅತಕ್ರ್ಯಾನಂತ ಸದ್ಗುಣ ಧೇನಿರ್ಣಯಾತೀತಾನಿರುದ್ದ ಸುಖಾರ್ಣವಾಚ್ಯುತ ಸೌಖ್ಯಕರ ನವಕೀರ್ಣ ವಿಗ್ರಹಪದ್ಮನಾಭಉದಾರಲೀಲ ನಮೋ10ಮೋಕ್ಷವಲ್ಲಭ ಭವಮಲಘ್ನ ಮುಮುಕ್ಷುವರದ ಮುನೀಂದ್ರ ಸುಮನೋಧ್ಯಕ್ಷ ದಾಮೋದರ ದಯಾಪರ ಜಿತದಿತಿಜ ಸಮರಭಿಕ್ಷುಕಾನ್ವಯಪ್ರಿಯ ಸಮಾಧಿಕಪಕ್ಷ ಸೃಷ್ಟ್ಯಾದ್ಯಷ್ಟ ಕಾರಣದಕ್ಷಾಧ್ವರಹರ ಬ್ರಹ್ಮ ನಿವಹಾದ್ಭಿನ್ನರೂಪ ನಮೋ 11ಕಂಠಕೌಸ್ತುಭಭೂಷಣಾಂಶಾಕುಂಠಿತಾತ್ಮೈಶ್ವರ್ಯ ಅಶುಭವಿಲುಂಠಕಾಧೋಕ್ಷಜ ಉಪೇಂದ್ರನೆ ಶ್ರೀಶ ಅನಿರುದ್ಧಕುಂಠಿತ ಜನನ ಮರಣ ಶಿರಿ ವೈಕುಂಠಪಾಬ್ಜಾಮ್ಲಾನ ತುಲಸೀಕಂಠಮಾಲಾನ್ವಿತ ಸುಗಂಧ ಜ್ಞಾನಕೋಶ ನಮೋ 12ನಿರ್ಜರೇಷ್ಟದ ನೀತಫಲದನೆದುರ್ಜನಾರ್ದಕ ದೂಷಣಾಂತಕನಿರ್ಜಿತಾಖಿಳ ಸುಜನಪಾಲಕ ನಿಶಾಚರೌಘಹರವರ್ಜಿತಕಲುಷನಿತ್ಯವಿಬುಧರಊರ್ಜಿತರ ಚಾರಿತ್ರವಿಮಲ ಗುಣಾರ್ಜಿತೋದಧಿ ವಿಪದಧ್ವಜ ವೈರಾಗ್ಯ ಪುರುಷ ನಮೋ 13ಅಪುಶಯನ ಆದ್ಯಾಪ್ತ ಇಷ್ಟಜನ ಪರಗತಿಪ್ರದ ಈಶ ವರನುತಉಪಮವಿರಹಿತ ಊಧ್ರ್ವಗಪ್ರಿಯ ಋಜು ಭೃನ್ರೂಪಧರಲುಪತ ದುಷ್ಕøತ ಲೋಕ ಮೋದಕಚಪಲ ಏಕಾನೇಕ ವಿಗ್ರಹಸ್ವಪರ ಐಶ್ವರ್ಯೋಜ ಔದಾರ್ಯ ಸಹಸ್ರ ನಮೋ 14ಕರುಣನಿಧಿ ಖಳಹರ ಗರಾದಪಘರಘರಧಿ ಸಮ್ಯಙ್ಞ್ನಮಕ ಸುಚರಿತಪ್ರಾಕೃತಛವಿರಹಿತ ಜನಪಾಲಝಷಋಷಭಾಞುರು ಜಗತ್ಪರ್ಯಟನಕಮಠಡಮರ ಧರೇಢ್ಯನೆ ಗೂಢ ಗುಣಚಿತ್ಪರಕುಧರಧಿಕೋಚ್ಚರ ಜಾರಗ ಧನುಹನ್ಧನದನಮೋ15ನರಸಖಾಮಿತಪಶುಪಫಣಿಮದಹರ ಬಲಾನುಜಭರಿತವಿಕ್ರಮಮರುತ ಕಾಂಗಯರುಘ್ನ ನೆರಲೇಶ್ವಶುರ ಲಕ್ಷ್ಮೀಶಾವರದರಾಟ್ ಶಶಿವದನ ಷಕೃಸನಿರುತ ಸರ್ವಭುಕ್ ಯಜÕ ಹವ್ಯೇಶ್ವರ ಸ್ವತೃಪ್ತ ಸ್ವಪೂರ್ಣಲಕ್ಷ್ಮೀಧರ ಯಜ್ಞಾಂಗ ನಮೋ 16ಕಪಟನಾಟಕಕಾಲಕಿತವಭಯಪರಿಹರ ಕೀಚಕರಿಪುಪ್ರಿಯಕುಪುರುಷಾಂತಕ ಕೂಬಕೇಶನೆ ಕೈವಲ್ಯಕೀಶವಿಪುಲಕೋಶನೆ ಕೌಶಿಕಮುನಿ ಮಖ ಪರಿಪೋಷಕಕಂಬುಕಂಧರತÀಪನ ಕೋಟಿಪ್ರಕಾಶ ಕಶ್ಯಪಸುತ ಸುರೇಂದ್ರ ನಮೋ 17ಖರವಿದಾರಕ ಖಾದಿ ಪಂಚಕಭರಿತನಖಿಳ ವ್ರಜಸಖೀಮನೋಹರ ಸುಖುರಪುಟ ಶೋಭಿತ ಖಡ್ಗ ಖೂಚ್ರ್ಛ ಇಷುಪಾಣಿಸುರಸಖೇಳನ ಪರಸುಖೈಕ ಶರಿರ ವಿಶಿಷ್ಟ ಸುಖೋದಯಾಂಕುರವರಸುಖೌಘಾಖಂಡಪರಶೋ ದುಃಖಹರಣ ನಮೋ18ಗಗನನಾಭಾಗಾಧ ಚರಿತ ಗಿರಿಗಣಸೇವ್ಯ ಸುಗೀತಪ್ರಿಯ ಗುಪ್ತಗುಣ ಗೂಢಧಿ ಗೇಹ್ಯತ್ರಯಯುತ ಗೈದಿಹನೆ ಗೋಪ್ತಾಸ್ವಗತ ಗೌರವ ಗಂವ್ಹರಾಂಕಿತಸುಗಃನೋತ್ತರ ಶುಭಸುಖಾಕರಸುಗಮಸೂಕ್ಷ್ಮ್ಮ ಸುದುರ್ಗಮಾಲಯ ವಿಜಿತರೋಷ ನಮೋ19ಘಟಶ್ರವಣ ಘಾತಕ ಲಘಿಮಯುಕ್ಚಟುಲಗಾತ್ರಾ ಘೀಜನಹರಣಪಟು ರಘುದ್ವಹ ಪಿಶಿತಭೋಜಕ ಘೂಕಖದ್ಯೋತಕಠಿಣ ಘೇರಟಮಾನಖಳಸಂಕಟ ನಿವಾರಕಘೋರಯೋಧಕನಟಕಾಘೌಘ ವಿದಾರ ಘಂಟಾಚಾಪ ದೀರ್ಘ ನಮೋ 20ಚಕ್ಷುಷಾಲಯ ಚಾರುಗುಣಚಿತ್ಕುಕ್ಷ್ಷೆ ಚೀರದ್ವಯ ಚುತೇತರರಕ್ಷ ಚೂಡಾಚೇಷ್ಟ ಚೈದ್ಯಹರಾದ್ಯ ಚೋರಾರೇರಿಕ್ಷಜಾತಾವರ ಚೌರಾಶಿತಿಲಕ್ಷ ಪ್ರತಿಮಾದ್ಯಕ್ಷಚಂದನವಕ್ಷ ವನಸ್ರಗ್ಧರ ಋಚಃಸ್ವನ ಪ್ರೀಯಪುರುಷ ನಮೋ 21ಛತ್ರಯುಕ್ ಛಾಯಘ್ನ ಛಿಧ್ವರಕ್ಷುತೃಷಾರ್ದಕ ಛೇದವರ್ಜಿತ* * * ಸ್ವೇಚ್ಚೈಕಚರ ಇಚ್ಛೋದ್ರೇಕ ಮಾಂದ್ಯಹರಶತ್ರುಭಿತ್ಸಚ್ಛೌರ್ಯ ಭೂಷಿತಸತ್ರಭುಕ ಛಂದೋಮಯಾತ್ಮಕಪುತ್ರ ಪೌತ್ರ ಪ್ರಪೌತ್ರ ಶೋಭಿತ ಸ್ವಚ್ಛಃ ವರ್ಣ ನಮೋ 22ಜಯತರಾನನ ಜಾಡ್ಯಹರಜಿತಭಯನಿಚಯ ಜೀವೌಘರಕ್ಷಯಜುರ್ಯಜಾಸುರ ಜೂಕನುತ ಸುರಜೇಷ್ಠ ಜೈನಧಿಹನ್ಲಯ ಜಲಾಶ್ರಯ ಜೋತಿರ್ಮಯ ತನುವ್ಯಯ ವ್ರಜೌಕಸ ವಂದ್ಯ ಜಂಬುನಿಲಯ ಕುವಲಯನಯನ ಅಜಸ್ರಾನಂದ ಬಲಗ ನಮೋ 23ಝಡಿತಿಚರ ಝಂಝಾಮರುಚ್ಚರಝಡುಪಚರ ಝಿಲ್ಲಿಕ ವನೇಚರಜಡಧಿಚರ ಝೀರಿತ ಸುರ ಝುಂಟಾವಲಯ ಝೂಣಿಚರ ?ಒಡನೆ ಝೇಂಕರಿಸುತಲಿ ಝೈಡಿಯುದೃಢದಿ ಝೋಂಡಿಯೋಳ್ಚ್ಚರಿಸಿ ಝೌಂಕರಿಸ್ಯೊಡಲಿನೊಳು ಝಂಕಾರಪೂರ್ಣನೆ ಝಷಪತಿಯೆ ನಮೋ 24ಪಟಲಹೈಮಕಟಾಹಭಂಜಕನಿಟಿಲದೃಕ್ ಟೀಕಾರ್ಥಸುಪ್ರಿಯಕಟುಮತಿಘ್ನ ಭವೇಡ್ಯಾ ಟಂಕಾನ್ವಿತ ಕರಾಬ್ಜೇಕಾಜಠರಜಡಹ ಕುಠಾರಧರಸತ್ಕಠಿಣಕರ ಸುಕಠೋರ ಯೋಧ ಕಮಠವಿಕಾರ ಶಠೌಘಸಂಹರ ನೃಹರೆ ಭೃಗುಜ ನಮೋ 25ಕುಂಡಲೀಶ ಷಡಾಸ್ಯಸನ್ನುತಪಂಡಿತಾರ್ಚಿತ ಪಾಂಡುರಾಂಬರಮಂಡಲೇಶ ಬಿಡೌಜನುತ ನೃವಿಡಂಬನ ಚರಿತ್ರಪಂಢರಾಪುರ ರಾಜವಿಠಲಾಖಂಡಮತಿ ಪಾಖಂಡ ದೂಷಕಖಂಡಮರಕ ಪ್ರಭುಘ್ನಮುನಿ ಪುಂಡರೀಕವರದ ನಮೋ 26ಪ್ರಣತಪ್ರಿಯ ಪ್ರಣಾಯ್ಯಪ್ರಿಯ ವಿಪಫಣಿಪಪ್ರಿಯ ವಾಣೀಧವಪ್ರಿಯಅಣುಮಹದ್ರೇಣೂಸ್ಥಪ್ರಿಯ ಸುಗಣೇಶ ಪ್ರಿಯಕರನೇಕ್ಷಣ ಕ್ಷಣೈಕ್ಯ ಸುವ್ಯಕ್ತಧಾರಣಗುಣಗಣೋತ್ಪಾಟಣ ರಣೌಘಾಂಗಣ ಭಯೋಚ್ಚಾಟಣ ಗುಣಾಂಕ ಶರಣ್ಯಸುಖದ ನಮೋ 27ತÀಥ್ಯವ್ರತ ಸತ್ತಾತ್ವಿಕಾಗಮಕಥ್ಯ ತಿಲಮಾತ್ರಾರ್ಪಕೇಷ್ಟದಮಿಥ್ಯದೂಷಕ ತೀರ್ಥಶ್ರವ ತುರ್ಯಾತ್ಮಾತೂರ್ಣಪ್ರಿಯನಿತ್ಯತೇಜಸ ತೈತ್ತಿರಿಯಶ್ರುತಿಸ್ತುತ್ಯ ತೋಯಾಯನ ಧೃತೌಷಧಪಥ್ಯ ತಾಂತ್ರಿಕಪರಮಚೇತಃಪರಮಕಾಲ ನಮೋ28ಪ್ರಥಮಪುರುಷ ಪೃಥಾತ್ಮಜಾನ್ವಗಮಥಿತವೀರ್ಯ ರಥೀಂದ್ರ ಪರಿಚರಪೃಥಿವಿ ಪೂಜಿತ ಸ್ಥೂಲಕೃತ್ಯಥೇಚ್ಛ ಸ್ಥೈರ್ಯಮತೇಪಥಿಕಸದನ ಯಥೋಕ್ತ ಫಲದ ವಿಪಥರಥೌಘಪ ಸುರಥಚರಣ ಕುಪಥಗÀ ದೂರಕ ಬ್ರಹ್ಮಸ್ತಂಭಾಂತಸ್ಥ ಸ್ವಸ್ಥಃ ನಮೋ 29ದಹರ ವ್ಯೋಮಗ ದಾತೃ ದಾಂತ ಹೃದ್ಗುಹಸದನ ಕರ್ತ ತುಹಿನಬಿಂಬಗಅಹಿಪದೀಪ್ತ ಮಯೂಖ ದುರ್ಗಾವ್ಯಾಕೃತಾಂಬರಗಾಅಹಿತದೂಷಕ ದೇವ ದೈತ್ಯರದೋಹನ ಕಾರ್ಯಗ ದೌತ್ಯಕರ್ಮಗದ್ರುಹಿಣದೇಹ್ಯಗ ದಂಡಕಾರಕ ದರ್ಪಕಸಹ ನಮೋ 30ಧÀರ್ಮನಿಚಯಪ ಧಾತು ಸಮುಹಪಕರ್ಮಧಿಷÀಣಪ ಧೀರಪ್ರಜÕಪನರ್ಮವಾಗ್ಮಿಪ ಧುನಿಕದಂಬಪ ಧೂರ್ಜಟಾಂಕಿತಪಚÀರ್ಮಖಡ್ಗಪಧೇನುವಿಪ್ರಪಮರ್ಮ ಧೈರ್ಯಾಂಕಿತನಧೋಕ್ಷಜನಿರ್ಮಲಾತ್ಮಕ ಧೌಮ್ಯಗರ್ಗಪ ಧನ್ಯಧನಪ ನಮೋ 31ನಗವಿಧೃತಕರ ನಾಗಗರ್ವಹನ್ನಿಗಮರಿಪುನಾಶಕ ನೀತಪ್ರಭುಸುಗುಣಸೇವ್ಯ ನುತಜನಮಂದಾರ ನೂತನಾಬ್ಜಾಂಘ್ರೀಯುಗ ಯುಗಾಂತಕ ನೇಮನೈಷ್ಟಿಕಸುಗುಣನೋದಧಿ ನೌಗ ನಂದಕವಿಗತ ಸ್ನೇಹವಿನಷ್ಟ ಜಗದೋದ್ಧರಣಶೀಲ ನಮೋ 32ಪವನ ಮತಿ ಪರಿಪಾಕ ಬಿಂಬಸ್ತವನನಿರತ ಪಿನಾಕಿಮೋಹನಸುವಧು ಪೀಯೂಷಧರ ಪುಷ್ಪವಿಹಾಸ ಪೂರ್ಣಪ್ರಭಾಕವಿವರದ ಪೇಶಲ ಜಟಿಲ ಪೈಲವಿನುತ ಶುಕವಿಪೋಷ ಪೌರಾಣವಿರಚಕ ಪಂಚನಿಶಿ ಭಾರತ ಸೂತ್ರಕರ್ತ ನಮೋ 33ಫಲಿತ ಸದ್ರಸ ಫಾಲಲೇಖಕಲಲಿತ ಸ್ಫೀತಾತ್ಮಕ ಸ್ಫುಟಥಭೃಜ್ವಲ ಮರುತ ಪಯಫೇನ ಭುಕ್ಷತ ಸ್ಫೋಟಾತಂಕಹಾಬಲಬಲದ ಬಾಣಘ್ನ ಬಿಲಗಿರಿನಿಲಯಮುನಿ ಹೃನ್ನಿಲಯಬುಧಮಂಡಲ ವಿರಾಜಿತ ಬೋಧಯುತಕರ ಬಂಧಮೋಕ್ಷ ನಮೋ 34ಭದ್ರಪದ ಭಾವಕ ಭಿಷಗ್ವರರುದ್ರಭೀಕರ ಭುಕ್ತಿದಾ ದಾರಿದ್ರ್ಯದೂರಕ ಭೂರಿಭೂತಿದ ಭೇದವಾದೀಶಾಹೃದ್ರುಜಹನ್ ಭೈಷ್ಮೀಶ ಭೋಜೇಶಾದ್ರಿಕುಲಿಶಕುಶಸ್ಥಳೋಕ ಸುಪದ್ರವಾರ್ದಕ ಭೌಮವರಪ್ರದ ಭಂಗರಹಿತ ನಮೋ 35ಮಕರಧ್ವಜಜಿತ ಮಾಸಖಾಮಿತಭುಕುಲಜೀವನ ಮೀನ ಮುರಲಿಧರಕರ ಮೂಲಕವೀಂದ್ರ ಮೇಧ್ಯಚರಿತ್ರ ಮೈಥುಳಪಾಸುಕರಮೋಹಕ ಮೌನಿಪೂಜಕಚಕಿತಕರ ದನುಜೇಂದ್ರ ಕಷಣಾಂಬಕ ಬಕಾಂತಕ ಮಂಜುಹಾಸ ಮಹಾಧಿರಾಜ ನಮೋ 36ಯಜÕ ಭಿಕ್ಷುಕ ಯಾಜÕರತ ಯಿಂದ್ರಾಜÕ ದೂಷಕ ಯೀಷಣಾರ್ದಕಸುಜÕರಾಡ್ಯುಗ ಯೂಗಸಂಭವ ಯೂಥಪೋತ್ತಂಸಅಜÕಭಿದ್ಯೇಕೇಶ ಮೌನಿಗಣಜÕ ಯೌವನ ಪುಂಸಯಂತ್ರಾರ್ಥಜÕ ಪೋಷಕ ಕಿಂಕರೋಧೃತ ಕಾಮುಕಾಷ್ಟ ನಮೋ 37ರಸಿಕರಾಜಪ ರಾಜ್ಯಚಕ್ರಪವಸುಪ ವೃಕ್ಷಪ ಕುಲಪರೀಕ್ಷಿಪಪ್ರಸರಪಾಂಥಪ ರುಚಿಗುಣೌಘಪರೂಪಬಹುರೂಪಾಅಸುಪ ರೇತೋದ್ಭವಪ ರೈಗಪರಸಪ ರೋಷಪ ರೌಪ್ಯನಗಪಪಕುಸುಮಬಾಣಪ ರಂಗಕ್ಷೇತ್ರಪ ರಹಸ್ಯಪಾಲ ನಮೋ 38ಲವಜನಕ ಲಾಘವ ಕರಾಬ್ಜ ಲಿಪ್ತವಿಮಲ ಶ್ರೀ ಚಂದನಾಂಗ ಸುಕವಿನಚರಲುಬ್ಧ ವಧು ಪೂಜ್ಯನುಲೂಖ ಲೋಧಕನೇಭವಜಪಾಕ್ಷರ ಲೇಶ ಮೋಹ ಮದವಿರಹಿತ ಲೋಭಘ್ನ ಲೌಕಿಕಪ್ರವಹೇತರ ಲಂಕೌಕಸಾರ್ದಕ ಲಬ್ಧತುಷ್ಟನಮೋ39ವಕ್ತøವರ ವಾಲ್ಮೀಕಿ ಕೃತೀಶ ವಿವಿಕ್ತಮತಿ ಪದವೀಶಗತಿದನೆವುಕ್ತ ಸುಚರಿತ ಊಧ್ರ್ವಪಟ ಪ್ರಸ್ಥಾಪ ವೇದ್ಯ ನಮೋರಿಕ್ತಭಯ ವೈದೇಹಿ ಮನೋಹರತ್ಯಕ್ತಪ್ರಾಕೃತವೋಂ ವೌಷಡಾದ್ಯುಕ್ತಿವಾಚಕ ವಂದ್ಯವಂದಿತ ವಹಕ ವಾಹಕ ನಮೋ 40ಶಮಯುತಾಗ್ರಣಿ ಶಾಮಶಿವಕರಗಮನಶೀಘ್ರಗ ಶುದ್ಧ ವಿದ್ಯೋದ್ಯಮ ಶುಚಿವ್ರತ ಶೂರ್ಪನಖಿ ಮದಹರ್ತ ಶೇಷಸಹಯಮ ದಯಾಂಬುಧೆ ಶೈಲಗ್ರಹ ಸಂಯಮಿ ಗಣಾರ್ಥಿತ ಶೋಕತಾಪ ಪ್ರಶಮನ ಶೌಚಾಚಾರಯುತ ಪ್ರಭೊ ಶಾಂತ ಶಸ್ತ ನಮೋ 41ಷಡ್ವಿಭೂತೆ ನಿಷಾದ ಭಯಹರಷಡ್ವಧೂಧವ ಋಷಿವಧೂಸಖಶಾಡ್ವಲಚರ ಇಷೀಕ ಇಷುಧರ ಕಾಂಡ ಸುವಿಹಾರಾಷಡ್ವಿಕಾರಾತೀತ ವಿಜಿತಾನಡ್ವಷೇಚಿತ ಸೌರಭೇಯ ಭೂವಿಡ್ವರಘ್ನ ವೃಕ್ಷೌಘಘ್ನ ಸ್ವರ್ಣ ನಿಷಂಗಚಾಪನಮೋ42ಸರಸಿಜಾನನ ಸಾಧ್ಯ ಸಿದ್ಧನಿಕರಕರಾರ್ಚಕ ಸೀಕ್ಷರಕ್ಷಕಸುರಹೃನ್ಮಂದಿರಸೂರಿಹೃದ್ಗುಹಸೇವ್ಯ ಸುರಮೌಳಿನಿರುಜ ಸೈಂಧವಕಾಸ್ತø ಸೋಮಾಭರಣತೋಷಕ ಸೌಮ್ಯ ರತ್ನಾಕರನಿರಂಜನಸಂಜಯೋತ್ಸವ ಸಹಜಶೂರ ನಮೋ43ಹಲಿ ಸಹಗ ಹಾರ್ದಿಕ ಮನೋಗತಫಲ ಹಿರಣ್ಮಯವಸನ ಹೀರಾವಲಯ ಹುತ ಭುಗ್ಬಲದ ಹೂಣಪವಿತ್ರ ಹೇತ್ವರ್ಥಜಲಧಿಪುರಪತೆ ಹೈಮರಾಶಿದಬಲಿದ ಹೋಮದ ಹೋತ್ರಭಾಗದಸುಲಲಿತೋದನ ಪರಮಹಂಸ ಸತ್ಕುಲ ಹರುಷ ನಮೋ 44ಪಳಲವಾಂತ ಕಳಾಢ್ಯ ಯಜ್ಞಾವಳಿ ಕೃತಾದರ ನಿವ್ರ್ಯಳೀಕ ನಿಖಿಳ ಕೃಪಾಳುವರೇಣ್ಯಜೀವ ಜಿಳೂಕ( ಜಾಳಕ?) ತೃಪ್ತಿಕರಸ್ಥಳಕಳೇವರಭರಿತ ಬ್ರಹ್ಮ ವಿಪುಳ ಕಳೈಕ್ಯ ತಳೋಧ್ರ್ವಮದ ವಿಹ್ವಳ ಬಳೌಘನೆ ನಿಷ್ಕಳಂಕ ಕಳಾಪ್ರವೀಣ ನಮೋ 45ಕ್ಷತರಹಿತ ಕ್ಷಾರಾಬ್ಧಿ ಬಂಧಕಕ್ಷಿತಿಭರಹರ ಕ್ಷೀರನಿಧಿಗ್ರಹಅತುಳಗ್ರಹ ಕ್ಷುದ್ರಾರೆ ಕ್ಷೂರಾಯುಧನೆ ಕ್ಷೇಮೇಶಗತಿಗತೇ ದೀಕ್ಷೈಕ್ಯಕ್ಷೋಣಿಪತಿಪತೇ ಕ್ಷೌಮರಥ ಕ್ಷಾಂತಿಭರಿತ ನೃಗೋದ್ಧರ ಕ್ಷತ್ರವಲ್ಲಭ ಕ್ಷತ್ರವೇಷ ನಮೋ 46ಏಕರಾಡ್ ವಿಶ್ವೇಕಕಾರಕಏಕವ್ಯಾಪಕ ಏಕಸ್ಥಾಪಕಏಕಭೋಜಕ ಏಕಯಾಜಕ ಏಕತೋಕಾತ್ಮಏಕಸೃಜ ಭುವನೈಕವರ್ಧಕಏಕಮಾರಕ ಏಕತಾರಕಏಕಯಾಚಕ ಏಕಸೂಚಕ ಏಕಪತ್ರನಮೋ 47ದ್ವಯಕ್ರಿಯೇಶ್ವರ ದ್ವಯಪಥೇಶ್ವರದ್ವಯಸುವಿಸ್ತರ ದ್ವಯವಿಗೋಚರದ್ವಯನಿವಾರಕ ದ್ವಯಪ್ರದಾಯಕ ದ್ವಯಸಮಯಪೂರ್ಣದ್ವಯ ಪ್ರವಾಹಕ ದ್ವಯನಿಯಾಮಕದ್ವ್ವಯನಿರಂತರ ದ್ವಯದ್ವಯೇತರದ್ವಯಸುಬೋಧಕ ದ್ವಯಪ್ರಸ್ಥಾಪಕ ದ್ವಯಭಯಘ್ನ ನಮೋ48ತ್ರಯ ಸುವಿಗ್ರಹ ತ್ರಿಪದಕಾಲತ್ರಯಗ ತ್ರಿದಿವಪ ತ್ರಿಪಥಗಪಿತ ತ್ರಿನಯನಾರಿಹನ್ ತ್ರಿಪುರಮೋಹಕ ತ್ರಯ ಸ್ತ್ರಿಂಶತ್ ಸುರಪತ್ರಿಯುಗುದಿತ ತ್ರಿಗುಣೇಶ ಸಾಗರತ್ರಯಪ ಪಂಚಕತ್ರಿವಿಧಭಾಷ್ಯನಿಚಯಕಚಕ ತ್ರಿದಶಾರ್ಚ ತ್ರಿಜಗದ್ಧರಣಮಾರ್ಗನಮೋ49ಚತುರ್ವಿಧಾತ್ಮಾ ಚತುರ್ಭುಜಾಂಚಿತಚತುರ್ಮುಖಾಧಿಪ ಚತುರ್ವಿಧಾರ್ಥದಚತುರ್ವರ್ಣಾಶ್ರಯ ಚತುರ್ಮುಕ್ತಿ ಚತುಷ್ಟಯೇಶ್ವರ ತೇಚತುಃಸಮುದ್ರಗ ಚತುರತರಮತಿಚತುರ್ವಿಧಾಯಥ ಚತುರ್ಬಲಾಂಬುಧಿಚತುರವೇದಾರ್ಥಿತಚರಣ ಚತುಶ್ಯಾಸ್ತ್ತ್ರಪೂಜ್ಯನಮೋ 50ಪಂಚಮುಖಮುಖ ಪಂಚಮುಖನುತಪಂಚಜನರಿಪು ಪಂಚಮೋಕ್ಷದಪಂಚಪಾಂಡವಪ್ರಾಣ ವರಪಂಚಾಕೃತಾವ್ರಾತಪಂಚಶರಪಿತ ಪಂಚವ್ಯೂಹ ಸುಪಂಚಭಿದಮತ ಪಂಚಪರ್ವಹಪಂಚಕಾಲಜÕ್ಯಜÕ ಸಂಭೃತಪಂಚಬಾಣನಮೋ51ಷಟ್ಸಹೋದರ ಷಟ್ಚರಣಚರಷಟ್ಸಪತ್ನಹನ್ ಷಡೂರ್ಮಿಹರಷಟ್‍ಶಕ್ತ್ಯಾತ್ಮಕ ಷಡ್ಗುಣೋತ್ತರ ಷಡೃತುಪ್ರವಹಷಟ್ಕರಾಭಿದ ಷಟ್ಪರೋಕ್ಷದಷಟ್ಕ್ಕ್ರಯುಗ ಷಟ್ಶಾಸ್ತ್ರಪ್ರಿಯತಮ ಷಟ್ಕಸಹಗÀ ನಮೋ 52------------------------- 53ಅಷ್ಟಕಾರಣ ಶ್ಲಿಷ್ಟ ಮಹಿಷಿಯರಷ್ಟಕಾಶ್ರಯ ಅಷ್ಟಮದಹರಅಷ್ಟಕಾಷ್ಟಿಗ ಅಷ್ಟಭೂತಿದ ವ್ಯಷ್ಟಸೃತ್ಯಹಅಷ್ಟದಂಶಕ್ಷೋಣಿಪ್ರಜಹರಅಷ್ಟನಾಗಪ ಅಷ್ಟಭುಜಧರಅಷ್ಟ ಆಯುಧ ಸಂಭೃತಾಷ್ಟೌಷಧ ತ್ರಿಭಂಗ ನಮೋ 54ನವಸುರತ್ನಾಭರಣಯುಕ್ ತ್ರಿರ್ನವಕಪ್ರಿಯ ನವದ್ವಾರಪುರ ಪ್ರಭೊನವಶಯುಕ್ತ್ಯಾತ್ಮಕ ನವಗ್ರಹ ನವದೃಯಾಗದ್ರುಣನವರಸೇಶ್ವರ ನವಪ್ರಜೇಶಪನವನಿಧೀಶ ನವಾರ್ಥದೆ ದಾನವರಿಪುವೆ ನವಕೋಟ್ಯಮರರಿಂ ನಮಿತಚರಣ ನಮೋ 55ದಶಶತಾನನ ದಶಶತಾಂಬಕದಶಶತ ಸುತೋರ್ದಂಡ ದರಕಳದಶದಶಾಭಿದ ದಶಶತಾಭಿದ ದಶಖಗಾಮರಪದಶವರೂಥಜ ದಶಮುಖಘ್ನ ತ್ರಿದಶ ಭಯಾಂತಕ ದಶಕಕುಭ ಹಸತ್ದಶನ ದಶಮತಿಭಾಷ್ಯ ಋತದಶನೀಶದ್ರಕ್ಷ ನಮೋ 56ಶತಸುಖಾರ್ಥಿ ಶತಾಬ್ದಶಯನ ಸುಶತಮಖಾರ್ಚಿತ ಶತಗೋಪಿಪತೆಶತಸೋಮನೃಪಶತಕ ಸ್ಥಾಪಕ ಶತಶತಾಂಶುಧರಾಶತಕುರುಜಹನ್ ಶತಕುಲೋದ್ಧರಶತಾಯುಃಪ್ರದ ಶತಾಪರಾಧಿಪಶತಸಹಸ್ರಾರ್ಕಭ ಶತಪತ್ರಾಕ್ಷ ಸುಖದ ನಮೋ 57ಕ್ಷಿತಿಪ್ಲವೋದ್ಧರಕ್ಷಿತಿಭೃತೋದ್ಧರಕ್ಷಿತಿತಳೋದ್ಧರಕ್ಷಿತಿಚಲನಕರಕ್ಷಿತಿತ್ರಿಪದಧರ ಕ್ಷಿತಿಪಕ್ಷಯಕರ ಕ್ಷಿತಿಕನ್ಯಾಸುವರಕ್ಷಿತಿಜನಾಶಕ್ಷಿತಿಖಳಮೋಹಕಕ್ಷಿತಿಭರಾರ್ದಕ ಕ್ಷಿತಿಪಾಲನಪರಕ್ಷಿತಿವಲಯಚರ ಕ್ಷಿತಿಜನೇತರ ಕ್ಷಿತಿಸುರೇಶ ನಮೋ 58ಅಂಬುಗಮನ ಪಯೋಂಬುಮಥನ ಲಯಾಂಬು ತಳಗಾರುಣಾಂಬು ಸಟ ಬಾಹ್ಯಾಂಬುವಾಹಕ ಅಂಬುಶೋಷಕ ಅಂಬುಧಿಮದಘ್ನಅಂಬುಗೃಹ ಮೋಹಾಂಬುಧೆ ಧರ್ಮಾಂಬು ಶ್ರೀಮತ ಅಂಬುಜೇಶ ಸುಧಾಂಬುಧಿ ಸಮಾನೋದರಾಂಬುದಗಾತ್ರ ಕಪಿತ ನಮೋ 59ಅಗ್ನಿನಿಭ ಅಬ್ಧ್ಯಾಗ್ನಿ ಸಹಚರಅಗ್ನಿಮಯ ಪ್ರಳಯಾಗ್ನಿಲೋಚನಅಗ್ನಿಕಾರ್ಯಜ್ಞಾಗ್ನಿ ಪೂಜಿತ ಅಗ್ನಿ ಹೋತ್ರಯುತಾಅಗ್ನಿ ರುಧನ್ನಾಗ್ನಿಕೋಪನಅಗ್ನಿಸ್ಥಾಪಕ ಅಗ್ನಿವ್ಯಾಪಕಅಗ್ನಿವರ್ಧಕ ಅಗ್ನಿದೀಪಕ ಅಗ್ನಿವರ್ಣ ನಮೋ 60ವಾತಜನಕನೆ ವಾತಸಮಭ್ರಮವಾತಪಾಗ್ರಜ ನಾಸಿಕಜಲಯವಾತಸಮ ಕ್ವಾಶಾಂಕ ವಾತಭ್ರಾತೃ ಹಿತಕರಣಾವಾತಸಖಗತ ವಾತಭವನುತವಾತಸುತನುತ ವಾತರಶನ ಸುವಾತಸಮ ಹರಿಗಮನಸೂತ್ರಸುವಾತಜನಕ ನಮೋ61ಅಂಬರ್ವಾನರಜಾರ್ಚಿತ ನಗಾಂಬರಾಂಬರ ಕ್ರೀಡಾಂಬರಾಳಕಸಂಭಜಿತ ಸ್ವಾಂಬರಭರಿತಪದ ಅಂಬರೇಣುಕಹನ್ಅಂಬರಗ ವಂಶೇಂದ್ರ ಗೋವಧ್ವಾಂಬರಾಪಹರಾಂಬರಾಂಬರಅಂಬರಗ ಹಯಗಾಂಬರಪ ಪಾಂಬರ ಸುನಾಭಿ ನಮೋ 62ಶಬ್ದಬೋಧಕ ಶಬ್ದಕಾರಕಶಬ್ದಘರ್ಘರ ಶಬ್ದಹುಂಕರಶಬ್ದಪಾರಗ ಶಬ್ದ ವೀರಗಭೀರ ಶಬ್ದಾಂಕಾಶಬ್ದಶೋಧಕ ಶಬ್ದದೂಷಕಶಬ್ದಸ್ಥಾಪಕ ಶಬ್ದವಿಸ್ತøತಶಬ್ದ ಬ್ರಹ್ಮಜೆÕೀಶ ಶಬ್ದಾತೀತ ಶಬ್ದ ನಮೋ 63ವೃಷಭಗೇಷ್ಟ ಮಿಥುನ ಕುಜಾರ್ದಕವಿಷಮಕರ್ಕಶಮೃತ್ಯು ಕರಿಹರಿವಿಷರದನ ಕನ್ಯಾಪತಿಸಖ ವೃಶ್ಚಿಕಾಭಾಂಗಾವಿಷಪಧನುಹರಮಕರಕುಂಡಲವಿಷಕುಂಭ ಸ್ತನಪಾನ ತತ್ಪರವಿಷಯಸುಖಮಾಯ ಮೀನ ಮೇಷಾರೂಢಸೇವ್ಯನಮೋ64ಅಶ್ವರೂಪ ಮಹಾಭರಣಿಸಖವಿಶ್ವಕೃತ್ತಿಕಾಯಂಗಿ ವರರೋಹಿಣೇಶ್ವರೋದ್ಭವ ಮೃಗಮದಾಂಕಾರಿದ್ರವಿಣ ಹರಣಾನಿಸ್ವಜನ ಪುನರ್ವಸುದ ಗುರುಗಣಹೀಶ್ವರಾಸನ ಪಿತೃಚಯಾರ್ಚಿತಸ್ವ ಸ್ವಭಾಗ್ಯ ಸುಪೂರ್ಣ ಅಮೃತೋತ್ತರ ಸುಹಸ್ತ ನಮೋ 65ಚಿತ್ರರಥ ಸ್ವಾತಿಶಯದೂರ ಮರುತ್ತವೇಶಾನುರಾಧಕೋದ್ಧರಗೋತ್ರಿ ಸುಖಕರ ಮೂಲರಾಕ್ಷಸವಂದ್ಯ ಜಲರೂಪಶತ್ರು ಶ್ರವಣರಹಿತ ಧನಿಷ್ಠ ನಕ್ಷತ್ರ ಶತಪತಿ ಕುಲಜ ಮಧ್ಯ ಪೂರ್ವೊತ್ರ ಭದ್ರಪದೇಶ ರೇವತಿ ರಮಣಾವರಜ ನಮೋ 66ಕತರಕರ್ಚಿತ ಕಿತವಹರ ಸತ್ಯವ್ರತಪ ಕ್ರೀಡಾಪರಕುಧರಕೂಜಿತನಿಗಮಕೇಡ್ಯ ಕೋಟರಮುಖ ಕೌಶಲ ಜವಗಮಾಶ್ರುತಿಹರಹರ ಕಂಠರೇಖಾಂಕಿತ ಕಶ್ಯಪಸುತ ಕರುಣಭಾಷಕಶತಸುಖೋದ್ಧರ ಸಿತತರೋದರ ಶಫರಿರೂಪ ನಮೋ 67ಕಮಠಕಾಲಯ ಕಿಲ್ಬಿಷೋದರವಿಮಲ ಕೀಲಾಲೇಷ್ಟ ಕುಲಗಿರಿಭ್ರಮಣಕರ ಕುಪರ ಕರ್ಮೇತರ ಕೇಶ್ವರೇಷ್ಟಕರಅಮಿತ ಕೈತವಾನಿಷ್ಟ ಕೋಮಲವಿಮಲಜಠರಕಠಿಣವಪುಃ ಕೌರ್ಮ ಮಹತ್ಸ್ಮøತಿಪ್ರಿಯ ಕಂಠಲಂಬ ಕಚ್ಛಪಾತ್ಮ ನಮೋ 68ಕನಸಭವ ಕಾಪುರುಷಮಥನಕಿಟಿನಟ ಕೀರ್ತಿತಯಜÕ ಕುಶಮಯತನೋ ಶ್ರೀ ಕುಧವ ಕೆಗಕ್ರೋಡ ಕೈಶೋರ ಕುಜವರದಘನಸಮಸ್ವನಕೋಲಘರ್ಘರಮನುಸನಕನುತ ಕೌತುಕಾಟಣಕನಕಗಿರಿಚರ ಕಂಜಭವನುತ ಕಷ್ಟಹರಣ ನಮೋ 69ಮಧ್ವವಲ್ಲಭ ಮಧ್ವತೀರ್ಥಗಮಧ್ವಮತಪರ ಮಧ್ವಪತೆ ಮುನಿಮಧ್ವರಮಣ ಶ್ರೀಮಧ್ವಯತಿನುತ ಮಧ್ವಪುಷ್ಕರಪಾಮಧ್ವಪೋಷಕ ಮಧ್ವಭಾಷಕಮಧ್ವತೋಷಕ ಮಧ್ವರಿಪುಹರಮಧ್ವಕಾಮದ ಮಧ್ವಹೃದ್ಗುಹ ಮಧ್ವವಿಭವ ನಮೋ 70ಪ್ರಸನ್ನವದನ ಪ್ರಸನ್ನಲೋಚನಪ್ರಸನ್ನಭವನ ಪ್ರಸನ್ನಭಾಷಣಪ್ರಸನ್ನಕಾರ್ಯ ಪ್ರಸನ್ನಗುಣನಿಧೆ ಪ್ರಸನ್ನತರ ಮೂರ್ತೆಪ್ರಸನ್ನಪುರುಷ ಪ್ರಸನ್ನ ಸೋಂಕಿತಪ್ರಸನ್ನಕಥನ ಪ್ರಸನ್ನಭೂಷಣಪ್ರಸನ್ನಚರಿತ ಪ್ರಸನ್ನವೆಂಕಟ ಪ್ರಸನ್ನಕೃಷ್ಣ ನಮೋ 71
--------------
ಪ್ರಸನ್ನವೆಂಕಟದಾಸರು