ಒಟ್ಟು 1456 ಕಡೆಗಳಲ್ಲಿ , 90 ದಾಸರು , 1190 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ವಾಮಿ ಯಾತಕೆನ್ನೊಳುಪೇಕ್ಷೆ ಮಾಡುವಿ ದೀನನಾಥ ಸುಮ್ಮನೆ ನಿಂತು ನೋಡುವಿ ಪ. ನಡೆವನ ಕಣ್ಣ ಕಟ್ಟಿ ಕೆಡಹುವುದುಚಿತವೆ ಒಡೆಯ ನಿನ್ನಡಿಗಳ ಪೊಗಳುವ ಪಾಡಿ ನುಡಿವ ಕಾರ್ಯಕೆ ಬಾಡಿ ಬಳಲುತ ನಾ ನಿತ್ಯ ನೋಡುತ ಬಡವನ ಬಿಡದಿರು ಕಡಲಶಯನ ನಿಜ ಮಡದಿ ಸಹಿತನಾಗಿ ಶ್ರೀಶನೆ ಕೃಪೆ ಕಂಜಕರ ಶ್ರೀನಿವಾಸನೆ1 ಭಾವಜ ಪಿತ ನಿನ್ನ ಸೇವೆ ಮಾಳ್ಪರಿಗೆಂದು ನೋವ ನೀಡದೆ ಕಾವ ಬಿರುದನು ಭವ ಸಾರÀ ನೀ ಮರೆವುದು ನೀತಿಯೆ ಎನ್ನ ನೀ ವಿಧ ಮಾಳ್ಪುದು ಖ್ಯಾತಿಯೆ ಪಾವನ ಚರಿತ ಪುರಾಣ ಪುರುಷ ಮಹ ದೇವ ನೀ ಕರಪಿಡಿದೆನ್ನನು ಕರು- ಣಾವಲಂಬನವಿತ್ತು ಪೊರೆವುದು 2 ದುರುಳ ಭಾವನೆಯಿಂದ ಸರಿದು ಹೋಗುವ ಪಂಚ ಕರಣಕೆ ನೀನರಸನಲ್ಲವೆ ಭಕ್ತಾ- ಭರಣಕೆ ನಿನ್ನೊಳಿರಿಸು ಮಾರ್ಗವನಂತ:- ಕರಣಕೆ ತರಿದು ಪಾಪಗಳನು- ದ್ಧರಿಸೆನ್ನ ವೆಂಕಟಗಿರಿವರ ದೀನಾರ್ತಿ ಚಕ್ರಧರ ಸಕಲಾನಂದ ಕಾರಣ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹನುಮನ ಬಲಗೊಂಬೆ ಹರುಷದಲೆನಮ್ಮ ತನುಮನ ಧನ ಈತಗೊಪ್ಪಿಸುತಲೆ ಪ. ರಾಣಿಗೆ ಮುದ್ರೆಯನಿಟ್ಟ ಜಾಣನೆನುತಲೆಮುಖ್ಯ ಪ್ರಾಣ ಮುಯ್ಯಾ ಗೆಲೆಸೋ ಈ ಕ್ಷಣ ಎನುತಲೆ 1 ಕೋತಿಯ ಸ್ವರೂಪನಾದ ಈತನೆನುತಲೆ ದೈತ್ಯ ಜಾತಿಯ ಸಂಹರಿಸಿ ಬಂದ ಖ್ಯಾತನೆನುತಲೆ2 ಸೀತೆಯ ಮನೆಗೆ ತಂದ ಮಹಾತ್ಮನೆನುತಲೆಈತಗೆ ಜೋಡ್ಯಾರು ಮುಂದೆ ಖ್ಯಾತನೆನುತಲೆ 3 ಕೃಷ್ಣನ ಸೇವೆಗೆ ಅತಿ ನಿಷ್ಠ ನೆನುತಲೆದುಷ್ಟ ಕೌರವರ ಕೊಂದ ಶ್ರೇಷ್ಠ ನೆನುತಲೆ 4 ಶ್ರೀಶ ರಾಮೇಶಗೆ ಮುಖ್ಯದಾಸನೆನುತಲೆ ವಾಸವಾದ ಬದರಿಯಲಿ ಮಧ್ವೇಶನೆನುತಲೆ5
--------------
ಗಲಗಲಿಅವ್ವನವರು
ಹನುಮವಂದಿತ ವಿಠಲ | ಅಣುಗನನ ಪೊರೆಯೋಮಣಿದು ಪ್ರಾರ್ಥಿಪೆನಯ್ಯ | ಪಿಡಿ ಇವನ ಕೈಯ ಪ ಯೇಸೋ ಜನ್ಮದ ಪುಣ್ಯ | ರಾಶಿವದಗುತ ನಿನ್ನದಾಸತ್ವ ಪ್ರಾರ್ಥಿಸುವ | ಯೆನ್ನೊಳಗೆ ಹರಿಯೇ |ಕೇಶವನೆ ಸ್ವಪ್ನದೊಳು | ಸೂಸಿಸೂಚಿಸಿದ ಉಪ-ದೇಶವಿತ್ತಿಹೆ ಇವಗೆ | ಶ್ರೀಶಉದ್ಧರಿಸೋ 1 ತೀರ್ಥಕ್ಷೆತ್ರವ ಚರಿಸಿ | ಗಾತ್ರಪಾವಿತ್ರತೆಲಿಅರ್ಥನಾಗಿಹ ಭಕ್ತ | ಪ್ರಾರ್ಥನೆಯ ಸಲಿಸೇ |ಕೀರ್ತಿಸಿಹೆ ರಾಮತವ | ಮೂರ್ತಿಜಪಿಸಲು ನಿತ್ಯಗೋತ್ರಾರಿಸುಪ್ರಿಯ | ಸೂತ್ರಾಂತರಾತ್ಮಾ 2 ಶ್ರವಣಸಾಧನವಿತ್ತು | ಭವವನದಿ ಉದ್ಧರಿಸುಪವನ ಮೂರಲಿ ನಿನ್ನ | ಪಾವನಸ್ಮøತಿಯಾ |ಹವಣಿಸುತ ತ್ರೈತಾಪ | ಬವಣೆಗಳ ಕಳೆಯೊತ್ರೈಭುವನಗಳ ಒಡೆಯ ಮಾಧವನೆ ಭಿನ್ನವಿಪೇ 3 ಸುಪ್ತಿಜಾಗರತ್ರಯಾ | ವಸ್ಥೆಗಳ ಪ್ರೇರಕನೆಉತ್ತಮನು ಸಾಧನದಿ | ಯುಕ್ತನೆನಿಸಿವನಾ |ಕರ್ತೃಕರ್ಮವುಕರಣ | ಎತ್ತನೋಡಿದರುತವಾವ್ಯಾಪ್ತಿಯನೂ ತಿಳಿಸೂ | ಸರ್ವೋತ್ತಮನೆ ಹರಿಯೇ 4 ಶರ್ವಾದಿ ದಿನಿ ಜೇಡ್ಯ | ನಿರ್ವಿಕಾರನೆ ದೇವಗುರ್ವಂತರಾತ್ಮಗುರು | ಗೋವಿಂದ ವಿಠಲಾ |ಸರ್ವಜ್ಞ ನೀನಿರಲು | ಪೇಳ್ವುದೇನಿಹುದಿನ್ನುದುರ್ವಿಜೀವಿಯ ಕಾವ ಹವಣೆನಿನದಲ್ಲೇ 5
--------------
ಗುರುಗೋವಿಂದವಿಠಲರು
ಹಮ್ಮನಳಿದು ನಮ್ಮ ಮತವ- ನೆಮ್ಮ ಜಯಮುನೀಂದ್ರ ಕೃತಿಯ ರಮ್ಯರಸವ ಸವಿದು ಸವಿದು ನಿಮ್ಮ ದುರ್ಮತಗಳನೆ ಬಿಡಿರೊ ಪ. ಸುಖಮುನಿ ಚತುರ್ಮುಖರು ಕುಮತ ನಿಕರವ ನೋಡಿ ಮನಕೆ ತಂದು ಪಾದ ತೊಳೆಯಲು ಭಕುತಿಭರದಿ ಗಿರೀಶಮುಖ್ಯ ಸುರರು ಶಿರದ ಮೇಲೆ ಲಕುಮಿ ಆತ್ಮಕರಾಗಿ ಧರಿಸಿ ಸುಖಿಸಿದ ಕಥೆ ಸ್ಮøತಿಯೊಳಿರಲು 1 ಯೋಗಿ ಜಯಮುನೀಂದ್ರ ಕೃಪಾ- ಸಾಗರನಾಗಿ ಧರೆಗೆ ಬಂದು ಈ ಗುರುಕೃತಿಗಂಗೆಯ ಬೇಗ ತಾನು ತುತಿಸಿ ಮೈಯ ಯಾಗಗೊಳಿಸಿ ಸಹಸ್ರ ಮುಖದಿ ಭಾಗವತರೆಂಬ ಬುಧರಿಗಿತ್ತ ಭಾಗ್ಯವ ನೀವೆಲ್ಲ ನೋಡಿರೊ 2 ಶ್ರುತಿಮಯವಾದ ಬಹಳ ಬಲು ಯು ಕುತಿಯನೆ ಅಳವಡಿಸಿ ಸು- ಮಂದರ ಹೂಡಿ ಮಥಿಸಿ ಮಧ್ವಮತಾಬ್ಧಿಯ ಯತಿಶಿರೋಮಣಿ ಜಯಮುನಿ ಶ್ರೀ- ಪತಿ ಹಯವದನ್ನ ಬಲದಿ ಶ್ರುತಿಯಮೃತವ ರಚಿಸಿದ ನಮ್ಮ ಕ್ಷಿತಿಸುರರೆ ಕುಡಿದು ನೋಡಿರೋ3
--------------
ವಾದಿರಾಜ
ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು1 ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2 ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ ಎಂದು ಕೂಗೆ || ನಾವು ತಾವು ಎಂದು ಎಲ್ಲರು ಸುಮ್ಮನಿರೆ | ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3 ಹÀಯಮುಖನು ವೇದಗಳು ಕದ್ದೌಯೆ ಸಕಲರು | ಭಯಬಿದ್ದು ನಿತ್ರಾಣರಾಗಿರಲು || ಜಯದೇವಿ ರಮಣನು ವೇದವನು ತಂದು ಜಗ | ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4 ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ | ಮದಡ ಮನುಜರೆಲ್ಲ ನೆಲೆಗಾಣದೆ || ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ | ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
--------------
ವಿಜಯದಾಸ
ಹರಿ ವಲಿಯಾ ನಮ್ಮ ಹರಿವಲಿಯಾ ಪ ಮರುತನ ಪೊಂದದ ಅಸುರರಿಗೆಂದಿಗು ಅ.ಪ. ಹರಿಕಥೆ ಕೇಳದೆ ಹರಟೆಗಳಾಡುತ ಸಿರಿಮದ ವಿಷಯದಿ ಮೆರೆಯುವ ನರರಿಗೆ 1 ಮಾನಿನಿ ಮನೆಯಭಿಮಾನವ ತೊರೆಯದೆ ಜ್ಞಾನವ ಘಳಿಸದ ಶ್ವಾನನಿಗೆಂದಿಗು 2 ತಾನುಡಿ ವಂದದಿ ತಾನೇ ನಡೆಯದ ಜ್ಞಾನಿಯ ತೆರದಿಹ ಹೀನನಿ ಗೆಂದಿಗು 3 ನಾನೇ ಕರ್ತನು ನಾನೇ ಭೋಕ್ತನು ನಾನೇ ಯೆಂಬೀ ದನುಜರಿಗೆಂದಿಗು 4 ದೋಷವಿವರ್ಜಿತ ಶ್ರೀಶನೆದೊರೆ ಸರಿ ದಾಸನು ನಾನಿಹೆ ಪೋಷಿಸುಯೆನ್ನದೆ 5 ಗುರುಗಳ ಪಿಡಿಯದೆ ಹರಿಯಡಿ ಬೀಳದೆ ತರಿಯದವಿದ್ಯೆಯ ಅರಿಯದೆ ವಿದ್ಯೆಯ 6 ವೇದವ ನೊಡದೆ ಸಾಧುಗಳ್ಪಡಿಯದೆ 7 ನನ್ನದು ನಿನ್ನದು ನಿನ್ನದೆ ಸಕಲವು ನೀನೇ ಧನಗತಿ ನನಗೈಯನ್ನದೆ 8 ಸಿರಿಕೃಷ್ಣವಿಠಲನೆ ವರಪುರುಷೋತ್ತಮ ಉರುತರ ಭಕ್ತಿಲಿ ಪೊರೆಯನ್ನದೆ 9
--------------
ಕೃಷ್ಣವಿಠಲದಾಸರು
ಹರಿ ಹರಿ ಕೃಷ್ಣ ಗೋವಿಂದ ಪ ಮಾಧವ ಗೋವಿಂದ ಅ.ಪ ಕೇಶವ ನಾರಾಯಣ ಗೋವಿಂದ ವಾಸುದೇವ ಶ್ರೀ ಗೋವಿಂದ ಶ್ರೀಶ ಜನಾದರ್Àನ ಗೋವಿಂದ | ಹರಿ ದಾಸ ಜನಾವನ ಗೋವಿಂದ1 ವಾಮನ ದಾಮೋದರ ಗೋವಿಂದ ಕಾಮಿಕದಾಯಕ ಗೋವಿಂದ ರಾಮ ರಘೂತ್ತಮ ಗೋವಿಂದ | ಗುಣ ಧಾಮ ದಯಾನಿಧೇ ಗೋವಿಂದ 2 ಶ್ರೀಧರ ಭೂಧರ ಗೋವಿಂದ ಆದಿಮೂಲ ಶ್ರೀ ಗೋವಿಂದ ವೇದ ವೇದ್ಯ ಹರಿ ಗೋವಿಂದ | ನಿಜ ಪಾದ ಭಜಕಪ್ರಿಯ ಗೋವಿಂದ 3 ಪದ್ಮದಳಾಂಬಕ ಗೋವಿಂದ ಪದ್ಮನಾಭ ಶ್ರೀ ಗೋವಿಂದ ಪದ್ಮಿನಿ ಅರಸನೆ ಗೋವಿಂದ | ಕರ ಪದ್ಮದಿ ಪಿಡಿ ಎನ್ನ ಗೋವಿಂದ4 ಕರಿಗಿರೀಶ ನರಹರಿ ಗೋವಿಂದ ಪರತರ ಮುರಹರ ಗೋವಿಂದ ಗರುಡಗಮನ ಶ್ರೀ ಗೋವಿಂದ | ಹರಿ ಹರಿ ಹರಿ ಹರಿ ಹರಿ ಗೋವಿಂದ 5
--------------
ವರಾವಾಣಿರಾಮರಾಯದಾಸರು
ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು ಅರಿ ಜೀವೋಪಿ ಕರ್ತನೆಂಬ ವಿರೋಧ ಪ ಸಿರಿ ಅರಸ ತತ್ವೇಶರ ಕೈಯೊಳು ಚರಿಪಾಧೀನ ಜೀವನಲ್ಲವೆ ಪರಮ ನಿಷ್ಕ್ರಿಯ ನಾ ಹೀನ ಮನವೆ ಅ.ಪ ಜಲಾಗ್ನಿ ಸ್ತಂಭ ಜಪ ಕಲಿತ ಮಾತ್ರಕೆ ಪ್ರಾಣಿ ನಿಲಬಹುದೆ ಅನಲ ಜ್ವಾಲೆಯೊಳು ಮ್ಯಾಲೆ ಸುಖದಾಸೆಯಿಂದ ಹಲವು ಕರ್ಮಾಚರಿಸಿ ಗೆಲಬಹುದೆ ನಿಲಯ ಹರಿಕರ್ತನೆಂದ ನುಡಿಗೆ 1 ಬಿಡಿಬಾಯ ಮಾತಿಗೆ ಪೊಡವಿಪ ಒಪ್ಪುವುದಾದರೆ ಪಡುವದ್ಯಾಕೆ ತದ್ಧಿತಪಃ ಪ್ರಮಾಣ ಬಿಡುವುಧ್ಯಾಗೆ ಶ್ರುತಿ ಸ್ಮøತಿ ಹರಿ ಆಜ್ಞೆ ಕಾಯ ಏಕವಾಗೋ ತನಕ 2 ಜ್ಞಾನೇಚ್ಛಾಕ್ರಿಯ ಶಕ್ತಿ ಮಿನುಗುವ ಜೀವಕ್ಕೆ ನಿತ್ಯ ಸ್ವಭಾವದಲ್ಲೆ ಜ್ಞಾನಿಗೆ ಕೊಡುವ ಯಥೇಷ್ಟಾಚರಣೆ ಏನೇನು ಕೂಡದು ಶ್ರವಣಾಧಿಕಾರಿಗೆ 3 ನಾನು ನನ್ನದು ಎಂಬ ಜ್ಞಾನ ಅನುಗಾಲ ಇರಲಾಗಿ ನೀನು ನಿನ್ನದು ಎಂಬ ವಂಚನೆಯಲ್ಲವೆ ಹೀನ ಬಿಡದು ಇದರಿಂದ ಅನುಮಾನ ಮಾಡಸಲ್ಲ ತನ್ನ ಕ್ರಿಯ ಅನ್ಯಕ್ರಿಯದಂತಾಗೋತನಕ ಮನವೆ 4 ಜ್ಞಾತಾಜ್ಞಾತ ಕರ್ಮದೊಳು ಜ್ಞಾತಾನುಷ್ಠಾನ ವಿಶೇಷ ಪೀತನಾಹ ಶ್ರೀಶ ತಾನು ಕರ್ಮ ನಿಷ್ಪಲವಲ್ಲವು ಜ್ಞಾತ ವಿಜಯ ರಾಮಚಂದ್ರವಿಠಲ 5
--------------
ವಿಜಯ ರಾಮಚಂದ್ರವಿಠಲ
ಹರಿನಾಮ ಜಪಕಿನ್ನು ಸರಿಯಾದುದಿಲ್ಲ ಸರಸಿಜಾಸನಿದರ ಸಾರವನು ಬಲ್ಲ ಪ. ಬಡವಾಗ್ನಿ ಸುತ್ತಿದರು ಕೊಡುವದನುಪಮ ತಂಪ ನಡುನೀರೊಳಗೆ ಮುಳುಗಲುಡುಪವಹದು ಕಡುಭಯದ ಕಾಡಲ್ಲಿ ಮಿಡುಕುತಿಹ ಸಮಯದಲಿ ಒಡೆಯನನು ನೆನೆದವನ ಕಡೆಹಾಯಿಸುವ ನಮ್ಮ 1 ಘೋರ ರಿಪು ರಾಜಾಗ್ನಿ ಘೋರಾಹಿ ಪಕ್ಷಿ ಮೃಗ ಮಾರಿ ಮೊದಲಾದಭಯಕಾರಿಗಳನು ದೂರ ಓಡಿಸಿ ದಡವ ಸೇರೆ ಸಲಹುವ ನಮ್ಮ ಕಾರುಣ್ಯ ನಿಧಿಯನ್ನು ಸಾರಿಸಾರಿಗೆ ನೆನೆವ 2 ಆವ ಕಾಲಕು ಸುಖವನೀವ ಶೇಷ ಗಿರೀಶ ಶ್ರೀವರನ ಸರ್ವತ್ರ ಸ್ಮರಿಸಿರೆಂದು ದೇವಋಷಿಯೆಂದುದನು ದಿಟವೆನುತ ನಂಬುವರ ಕಾವನನುಭವ ಸಿದ್ಧ ಕಮಲಾಕ್ಷ ಗತಿಯೆಂಬ 3
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಪಾದ ತೀರ್ಥವನು ಕರದಿ ಪಿಡಿದವರೆಲ್ಲ ತಿರುನಾಮದವರೆನಲು ನಂಬಬಹುದೇ ಪ ಪರವಾಸುದೇವನನು ಮರೆತು ಸತಿಸುತರ ವರಾಭರಣವೇ ಹಿರಿದೆಂಬ ನರರಿಲ್ಲವೇ ಅ.ಪ ಹರಿನಿವೇದನಕಾಗಿ ಕರದಿ ಫಲಪುಷ್ಪಗಳ ತರುವವರು ದಕ್ಷಿಣೆಯ ಇರಿಸಿಹರೋ ಎಂದು ಪರಿಪರಿಯ ದೃಷ್ಟಿಯಲಿ ಪರಿಕಿಸುತ ಅಲ್ಲವೆಂ ದರಿತಾಗ ಕೋಪ ನಿಷ್ಠುರ ಗೈಯುವರು 1 ಈಶಾಯನಮಃ ಓಂ ಶ್ರೀಶಾಯ ನಮಃ ಪ ರೇಶಾಯ ನಮಃ ಎಂಬುದಕೆ ಬದಲು ಆಶೋತ್ತರವನಾಂತು ಕ್ಲೇಶಪೂರಿತರಾಗಿ ನಾಶವಾಗಲಿ ಕುಡದಜನರೆಂಬರಕಟಾ 2 ಮಾನವೋತ್ತಮ ಮಾತ್ರ ತಿರುನಾಮಧಾರಿ ಜ್ಞಾನಿ ಇಂಥವನಿಂದ ತೀರ್ಥವನು ಪಡೆದವರು ಶ್ರೀನಾಥ ಮಾಂಗಿರಿಯ ಭಕ್ತರೆನಿಸುವರು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಮನದಂಬೇ ಪರಮ ಕದಂಬೇ ಸುರಪನುತೆ ಮಾಂಗಿರೀಶ ಸೌರಭೇ ಪ ಸಿರಿಮಧುರಭಾಷಿಣೆ ಶ್ರೀಮಣಿ ಸರಸಿಜನೇತ್ರರಮಣೀ ಸುವಾಣಿ ವರ ಭೋಗೀಶವೇಣಿ ಸದ್ಗುಣಿ ಸುರುಚಿರ ಸುಮಪಾಣಿ ಭಾಮಿನಿ 1 ವನಜಭವ ಪೂಜಿತೇ ವಂದಿತೇ ಮನಸಿಜಮಾತೆ ಮಹಿತೇ ವಿನೀತೇ ವೈನತೇಯಾದಿ ಸಂತಾನಕೆ ಜನಗಣನುತೆ | ರಂಗ ಮೋಹಿತೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹರಿಯೆ ಮೂಜಗದ ದೊರೆಯೆ ನಿನಗಿದು ಸರಿಯೆ ಪ. ಹರಿಯೆ ಮೂಜಗದ ದೊರೆಯೆ ನಿನ್ನನೆ ಮರೆಯಪೊಕ್ಕವರಲ್ಲಿ ಈ ಪರಿ ಬರಿಯ ಪಂಥದಿ ಮರುಗದಿರ್ಪುದು ಸರಿಯೆ ನಿನಗದು ಸರಸವಲ್ಲದುಅ.ಪ. ಉಕ್ಕಿನ ಕಂಬದಿಂದ ಉದಿಸಿ ಬಂದು ರಕ್ಕಸನುರವ ಸೀಳಿ ಕರುಳನು ಬಗೆದು ಉಕ್ಕುವ ಕೋಪದಿಂದ ರಕುತವು ಸುರಿಯೆ ಭಕ್ತ ಪ್ರಹ್ಲಾದನಾದರದಿ ಕಾಯ್ದು ಭಕ್ತ ವತ್ಸಲನೆನಿಸಲಹುದು ಶಕ್ತಿಹೀನತೆಯಿಂದ ಮರೆಹೊಕ್ಕ ಎನ್ನನು [ಕಾಯು]ವುದು 1 ಒಪ್ಪಿಡಿಯವಲಕ್ಕಿಯ ಒಪ್ಪಿಸಿನಿಂದ ವಿಪ್ರನ ನಲವಿಂದ ನೋಡುತಲಂತು ವಿಪುಲಸಂಪದವನ್ನು ಕರುಣಿಸಿದಂಥ ಅಪ್ರತಿಮ ಸಾಹಸಿಯೆನುತೆ ನಿನ್ನೊಳು ತಪಿಸಿ ಬೇಡುವ ಎನ್ನೊಳೀಪರಿ ಒಪ್ಪದೊಪ್ಪದೆನ್ನಪ್ಪ ಕೇಳಿದು ಸರಿಯೇ ಶ್ರೀನರಹರಿಯೇ 2 ಮಾನಿತÀಧ್ರುವ ಬಾಲನಂ ಮನ್ನಿಸಿ ಪೊರೆದೆ ಮಾನಿನಿ ಪಾಂಚಾಲಿಯ ಮಾನದಿ ಕಾಯ್ದೆ ಸಾನುರಾಗದಿಂ ಗಜನಂ ಉದ್ಧರಿಸಿದೆ ಕ್ಷೋಣಿಯೊಳಗತಿ ದೀನರಾದರ ಸಾನುರಾಗದಿ ಪೊರೆವ ಶ್ರೀಧರ ದಾನವಾಂತಕ ಶೇಷಗಿರೀಶನೆ ಸೂನುವೆಂಬಭಿಮಾನ ನಿನಗಿರೆ [ಮಾಣದೆನ್ನನು ಕಾಯೊ] ಹರಿಯೇ ಶ್ರೀನರಹರಿಯೇ3
--------------
ನಂಜನಗೂಡು ತಿರುಮಲಾಂಬಾ
ಹರಿಯೆ ಸಿರಿದೊರೆಯೆ ಅರಿಯೆ ನಿನ್ಹೊರತನ್ಯರ ಪ ಮೊರೆ ಹೊಕ್ಕಿರುವರ ದುರಿತಗಳ ಕಳೆವ ಅ.ಪ ಸೂರ್ಯ ಪ್ರಕಾಶ ಕುಮುದಾಪ್ತಮಿತ ಭಾಸ ನಾಟಕಾಧಾರ ಶ್ರೀಶ ಹಾಟಕ ಗರ್ಭತಾತ ಅಖಿಲ ಸದ್ಗುಣೋಪೇತ 1 ಮರಳಿ ಮರಳಿ ಜನನ ಮರಣಗಳೈದುತ ನರಕ ಸ್ವರ್ಗ ಭೂಲೋಕ ತಿರುಗಿ ಬಳಲುವವೋ 2 ಹಟದಿ ದುರ್ಮತಿಗಳಾರ್ಭಟಿಸುತಜ್ಞಾನದಿ ಮಟ ಮಾಯದಿ ಚರಿಸಿ ಘಟಿಪುದೇ ಗುರುರಾಮವಿಠಲ ನಿನ್ನಯ ಕರುಣ 3
--------------
ಗುರುರಾಮವಿಠಲ
ಹರಿಹರಿ ಹರಿಯೆನ್ನಿ ಮಂದರಧರನೆ ಗತಿಯೆನ್ನಿ ದೀನ ದಯಾಕರನು ದಿವಿಭುವಿ ಪ. ಮಾನ ಭರಾಕರನು ನೀನೆಂದೊರವರನು ದುರಿತ- ಹೀನರ ಮಾಡುವನು 1 ತರಳನ ಮೊರೆ ಕೇಳಿ ವರ ನರ ಹರಿಯ ರೂಪವ ತಾಳಿ ದುರುಳ ಹಿರಣ್ಯಕನಾ ಕರುಳನು ಕೊರಳೊಳು ಧರಿಸಿದನಾ 2 ಗಜರಾಜನ ಕಾಯ್ದಾ ಬಾಣನ ಭುಂಜ ಪುಂಜವ ಕೊಯ್ದಾ ಗಜಪುರವರಗೊಲಿದಾ ಚರಣಾಂ- ಬುಜವೀವುತ ನಲಿದಾ 3 ನೆನೆದಲ್ಲಿಗೆ ಬರುವಾ ನಂಬಿದ ಜನರ ಸಂಗಡವಿರುವಾ ಅನುಗಾಲವು ಪೊರೆವಾ ಮನಸಿಜ ಜನನಿಯನಪ್ಪಿರುವಾ 4 ದಾಸರ ಸಲಹುವದು ಶೇಷ ಗಿ- ರೀಶನ ಮಹಾ ಬಿರುದು ದೋಷಗಳನು ತರಿದು ಈರೆರ- ಡಾಸೆ ಪೂರಿಪ ನೆರೆದೂ 5
--------------
ತುಪಾಕಿ ವೆಂಕಟರಮಣಾಚಾರ್ಯ