ಒಟ್ಟು 19041 ಕಡೆಗಳಲ್ಲಿ , 136 ದಾಸರು , 7982 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ ಬೃಂದಾವನಪತಿ ದಯದಿಂದಲೆನಗೆ ಅ ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು1 ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು 2 ಚಕೋರ ಜನ್ಮವನು3 ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು 4 ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು5 ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು 6 ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ7
--------------
ವ್ಯಾಸರಾಯರು
ಎಂದಿಗಾದರೂ ನಾನು ಮರೆಯೆ ಗುರುವಿನತಂದು ಪೂಜಿಸು ತ್ರಿನಯನ ಪ್ರಾಣದೊಡೆಯನ ಪ ಅಂಬು ಹೂಡಿದ |ತಾಮಸದ ಗುಣಗಳನು ಕಡೆಗೆ ಮಾಡಿದರಾಮ ರಾಮ ಎಂಬ ಬೀಜ ಮಂತ್ರ ನೀಡಿದ 1 ಕಾಣ ಬಂತು ಜಗವು ಎನಗೆ ರಾಮರೂಪವುತಾನು ತಾನೆ ಉದಯವಾಯ್ತು ಜ್ಞಾನದೀಪವು |ಏನು ಪೇಳಲಿ ಕರಗಿ ಹೋಯ್ತು ಮನದ ತಾಪವುಸ್ವಾನುಭಾವದಲಿ ನಾಸ್ತಿ ಪುಣ್ಯಪಾಪವು 2 ಎರಡು ಪಕ್ಷ ಮೀರಿಹ ಗುಣಾತೀತನಪರಬ್ರಹ್ಮ ಪರಂ ಜ್ಯೋತಿ ಸದೋದಿತನ |ಕರುಣಸಿಂಧು ತಂದ ಜ್ಞಾನಬೋಧ ತಾತನಹರುಷ ಪೂರ್ಣವಾಗಿ ಸುಖವ ಕೊಡುವ ದಾತನ 3
--------------
ಜ್ಞಾನಬೋದಕರು
ಎಂದಿಗೆ ಕಾಂಬುವೆ ಇಂದಿರೇಶನೆ ನಿನ್ನ ಪಾದ ಕೃಪೆಯ ಪ ಒಂದರಲವ ನಿಂದು ಒಂದೇ ಮನದಿ ನಿನ್ನ ಮಂದ ಭಾಗ್ಯನು ನಾನು ಅ.ಪ ಎನ್ನ ಮನಸಿನ ಚೇಷ್ಟೆ ವರ್ಣಿಸಲಳವಲ್ಲ ಕ್ಷಣಕೊಂದು ಪರಿಯಪ್ಪುದು ಘನದೃಢ ಹರಿಪಾದ ನೆನೆಯುವುದು ನಿಮಿಷದಿ ಎಣಿಯಿಲ್ಲದೈಶ್ವರ್ಯವನು ಭೋಗಿಸುವುದು 1 ಗಳಿಗೆಯೊಳ್ದಶಲಕ್ಷ ಸುಲಭದಿಂ ಗಳಿಸರ್ಥ ಬಲವಾಗಿ ನಿಲಯದಿಟ್ಟು ಲಲನೆಯೊಳೊಡಗೂಡಿ ಬಲುಸೌಖ್ಯ ಬಡುಕೊಂಡು ಗಳಿಗೆಯೊಳ್ ದೇಶಾಂತರಕೆಳಸುವುದಭವ 2 ಅರಿಗಳಂ ಬಂಧಿಸಿ ಸೆರೆಯೊಳಿಟ್ಟರಲವದಿ ಶಿರವರಿಪೆನೆನುತಿಹ್ಯದು ಪರಮ ವೈರಾಗ್ಯದಿಂ ಚರಿಸುವುದರಲವದಿ ಪರಲೋಕ ಸಾಧನದಿರುತಿಹ್ಯದಕಟ3 ದೃಢದಿ ನಡೆವುದು ನಿಮಿಷ ಪೊಡವಿಜನಕೆ ಸತ್ಯ ನುಡಿಯು ಬೋಧಿಸುತಿಹ್ಯದು ದೃಢತರಬಲದಿ ತಾ ಕಡುಗಲಿಯೆನಿಸೊಂದೇ ಕೊಡೆಯಿಂದಲಾಳುವುದು ಪೊಡವಿಯಂ ಸಕಲ 4 ಕಾಮಿಸುತೀಪರಿ ಕಾಮಕೊಳಪಡಿಸೆನ್ನ ಪಾಮರನೆನಿಸುವುದು ಸ್ವಾಮಿ ಶ್ರೀರಾಮ ಎನ್ನ ಪಾಮರಮನಸಿನ ಕಾಮಿತವಳುಕಿಸಿ ಪ್ರೇಮದಿಂ ಸಲಹಯ್ಯ 5
--------------
ರಾಮದಾಸರು
ಎಂದಿಗೆ ದಯಬಾಹುದೋ ರಾಮಾ ಎಂದಿಗೆ ದಯಬಾಹುದೊ ಎನ್ನಯ ಮೇಲೆ ಮಂದರಧರ ಗೋವಿಂದ ಮುಕುಂದ ಪ ಪಾದ ಸ್ಮರಿಸುತಲಿರುವನ ಕಷ್ಟವ ಕಳೆದು ಮನೋಭಿಷ್ಟವ ತೀರಿಸು 1 ಕಂತುಜನಕ ಶ್ರೀಕಾಂತಾ ಭಕ್ತನ ಚಿಂತಿಯ ಬಿಡಿಸಿ ಸಂತತ ಪಾಲಿಸಲು 2 ವರಹೆನ್ನೆಪುರ ನರಹರಿ ನಿನ್ನಯ ಮೊರೆ ಹೊಕ್ಕವನ ಪೊರೆಯಲಿ ಹರುಷದಲಿ 3
--------------
ಹೆನ್ನೆರಂಗದಾಸರು
ಎಂದಿಗೆ ದೊರಕುವನು ಶ್ರೀಗುರುವನ ಗೆಂದಗೆ ದೊರಕುವನು ಪ ಮಂದಮತಿಯ ಕಡೆಗ್ಹೊಂದಿಸಿ ಸಚ್ಚಿದಾ ನಂದ ಬ್ರಹ್ಮನ ಕೃಪೆಯಿಂದ ಪಾಲಿಸಿದಾತಾ ಅ.ಪ. ಕರುಣದಿ ಕರದು ತನ್ನಾ ತೊಡೆಯ ಮೇಲ್ಕು ಳ್ಳಿರಿಸಿ ಶರಧಿಯೊಳೀಡಾಡಿ ಈಶ್ವರನ ತೋರಿದ ಗುರು ಎಂದಿಗೆ 1 ತನ್ನ ತಾ ತಿಳಿವವೊಲು ತತ್ವನಸಾರ ವನ್ನು ಸಾಧುಗಳಿಂದಲಿ ಚೆನ್ನಾಗಿ ಅರಿತುಕೊಳ್ಳೆಂದು ಅಮೃತಪಾನವನ್ನು ಮಾಡಿಸಿದ ಪ್ರಸನ್ನವದನ ಗುರು ಎಂದಿಗೆ 2 ಹುಟ್ಟಿಸಾಯದಂದದಿ ವಾಕ್ಯದ ಮದ್ದು ಕೊಟ್ಟು ಜೀವನ್ಮುಕ್ತಿಯ ಪಟ್ಟವ ಗಟ್ಟಿ ಫಣಿಗೆ ಮಂಗಲಾಕ್ಷತೆ ಇಟ್ಟ ವಿಮಲಾನಂದ ಬಟ್ಟೆದೋರಿದ ಗುರು 3
--------------
ಭಟಕಳ ಅಪ್ಪಯ್ಯ
ಎಂದಿಗೆ ಪಾಲಿಪೆ ಎನ್ನ ಗೋ- ಪ ವಿಂದ ಮುಕುಂದ ಆ- ನಂದ ಮೂರುತಿಅ.ಪ ಚರಣಸೇವೆಯ ಕೊಡಿಸಿ ಪರಮಭಕ್ತರೊಳಿರಿಸಿ ದುರಿತರಾಸಿಗಳ ಪರಿಹರಿಸಿ 1 ತಾರದೆ ಸಂತೋಷದಿ ಮಾರಜನಕ ನಿನ್ನ ಧೇನಿಸುವಂತ 2 ಗುರುರಾಮವಿಠ್ಠಲ ನಿನ್ನ ಹೊರತು ಅನ್ಯರಿಲ್ಲ ಸಿರಿನಲ್ಲ 3
--------------
ಗುರುರಾಮವಿಠಲ
ಎಂದಿಗೆ ಶ್ರೀಹರಿಯಾ ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ ಕುಲನೆನಿಸಿ ಮಾರ್ಗದಲಿ ಕುಲನೆಲೆ ತಿಳಿದು ಕಾಣುತಹೋಗುವ ನೆನೆಗಳ್ಳರ ಕೂಡೆ ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ ಚಂಚಲ ನತಿ------ದು ಭಲ ಭಲ ಎನಿಸಿಕೊ ಬೇಗನೆ ಪರಮ ಭಕ್ತರ ಒಳಗೆಂದೂ 1 ಸರಸರ ಮಾರ್ಗದ ಸರಳಿಯ ತಿಳಿದಾ ಶರಣರ ನೆಲೆಗಾಣೊ ನೆರೆಹೊರೆಲಿರುವರ ಕರಕರಿಗಳುಯೆಂಬ ಕಲ್ಮಿಷ-----ಕಾಣೊ ಹರಿಗುರು ಕರುಣಾದಿ ಅಂತರಂಗದಿ ಅರಿತಿರುವರ ಕೂಡೋ ಪರಿ ಪರಿಯಲಿ ಆ ಭಂಡಾರದ ಗುರುಭಾರವು ನೀನೋಡೊ 2 ಮನಘನ ಕಾಂತಿಯ ಮಹಿಮೆಯ ತಿಳಿದಾ ಮರ್ಮಜ್ಞರ ಬೆರಿಯೊ ದಿನ ದಿನ ಸಂಭ್ರಮವನು ಅಘಸರಿಸಿ ದೃಢಭವವು ಪಿಡಿಯೊ ತನುವನು------ದ್ರಿಸಿ ತಾರಕ ಜಪಿಸಿ ಧನ್ಯನಾಗೊ ಇನ್ನೂ ದೀನಜನ ರಕ್ಷಕ ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3
--------------
ಹೆನ್ನೆರಂಗದಾಸರು
ಎಂದಿಗೆನಗೆ ಬುದ್ಧಿ ಬಂದಿತೋ ಹರಿಯೆ ಇಂದೀವರಾಕ್ಷ ನೀನೆ ಗತಿ ದೊರೆಯೆ ಪ. ಕಣ್ಣಿದಿರಲಿ ಕಂಡು ಕಾಲಗತಿಗಳನ್ನು ತನ್ನ ಸಂಸ್ಥಿತಿ ಮುಂದೆಂತಾಹುದನು ಚೆನ್ನಾಗಿ ಗ್ರಹಿಸದೆ ಚಪಲ ಚಿತ್ತದಿ ಗೃಹ ಸನ್ಮಹದಲಿ ಮನವನಿಟ್ಟು ಬಳಲುವೆ 1 ಸಾಗದ ಕಾರ್ಯವ ಸುಲಭವೆಂದೆಣಿಸಿದ- ರಾಗದು ಹಗಲಿರಳೊರಳಿದರು ನಾಗಶಯನ ನೀನು ನಿರ್ಣಯಿಸಿದ ರೀತಿ ಯಾಗುವದೆಂಬುದನರಿಯದೆ ಮರುಳಾದೆ 2 ಇಂತಾದ ಮ್ಯಾಲೆ ಶ್ರೀಕಾಂತ ನೀ ದೊರಕುವ- ದೆಂತು ಸಂಘಟ್ಟಿಪದೋ ನಾನರಿಯೆ ಕಂತುಜನಕ ವೆಂಕಟೇಶನೆ ಮಾನಸ ಭ್ರಾಂತಿಯ ಬಿಡಿಸು ನಿಶ್ಚಿಂತೆಯಿಂದಿರಿಸ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದು ಕಾಂಬುವೆ ನಿನ್ನ ಚರಣ ನಾರಾಯಣತಂದು ತೋರಯ್ಯ ನಾ ಬಂದೆನು ಶರಣ ಪ ನಿತ್ಯ ಒತ್ತುವ ಚರಣತೋರ ಗಂಗೆಗೆ ಜನ್ಮ ಕೊಟ್ಟಂಥ ಚರಣಮೂರು ಲೋಕವ ಹಿಡಿದ ಚರಣನಾರಿ ಅಹಲ್ಯೆಯ ಪೊರೆದ ಚರಣ 1 ಪ್ರ್ರಳಯ ಕಾಲದಿ ನೆಕ್ಕುತಿಹ ಚಿಕ್ಕ ಚರಣಇಳೆಗೆ ಸುಯೋಧನನಿಳಿಸಿದ ಚರಣಎಳೆಯ ಧ್ರುವ ತಾ ಕಂಡ ಚರಣತುಳಸಿ ವನದಲಿ ಕುಣಿದ ಚರಣಸುಳಿದು ಭಕ್ತರ ಪೊರೆವ ಚರಣ 2 ಅಖಿಲಾಂಡದ ಸೃಷ್ಟಿ ಸ್ಥಿತಿ ಲಯ ಕಾರಣಭಕುತರು ಕರೆಯಲೋಡುವ ದಿವ್ಯ ಚರಣಶಕಟ ದೈತ್ಯನ ಒದೆದ ಚರಣಯುಕುತಿ ಶಕುತಿಗೆ ಬರದ ಚರಣಯುಕುತಿ ಪಥವನು ತೋರ್ಪ ಚರಣಪ್ರಖರ ಗದುಗಿನ ವೀರನಾರಾಯಣ 3
--------------
ವೀರನಾರಾಯಣ
ಎಂದು ಕಾಂಬುವೆ ಮಾಧವತೀರ್ಥರ ಸುಂದರ ಮಂದಿರ ಪ ಚಾರುಚಿತ್ರ ಕಲಶಕನ್ನಡಿ ಆರೊಂದು ನೆಲೆಗೋಪುರವ ಸವಿ ಸ್ತಾರಮಾಗಿ ತೋರುವ ಮಹಾ ದ್ವಾರದಮುಂದೆ ಬಿದ್ದು ನಮಿಸಿ 1 ತೊಲೆತುಂಡು ಕಂಭ ಬೋದುಗೆ ಶಿಲೆಯಿಂದ ನಿರ್ಮಿತವಾಗಿ ಹೊಳೆವ ಮಂಟಪ ರಂಗು ಮಧ್ಯ ದೊಳಗೆಚೆಲುವ ವೃಂದಾವನವ 2 ಮೂಲ ಪ್ರತಿಮೆ ಸಾಲು ಸಾಲು ವಿ ಮೂಲಪೀಠದ ಪವಿತ್ರಶಾಲೆ ಕಾಲತ್ರಯದಿ ವೇದಘೋಷ 3 ಧಾತ್ರಿಜನರು ಬಂದು ಕೂಡಿ ಯಾತ್ರೆಗೈದು ಜನುಮ ನಿತ್ಯ ಸಾರ್ಥಮಾಡಿಕೊಂಡು ಸತತ ಅರ್ಥಿಯಿಂದ ಪೋಪ ಸಮಯ 4 ಧರೆಯೊಳಧಿಕ ಬುದ್ಧಿನ್ನಿಪುರದಿ ಮೆರೆವ ಶ್ರೀಗುರು ಮಾಧವೇಂದ್ರ ವರಮಂದಿರದಮಿತ ವೈಭವ ಕರುಣಿ ಶ್ರೀರಾಮ ನಿಂತು ನಡೆಸುವ 5
--------------
ರಾಮದಾಸರು
ಎಂದು ಕಾಂಬೆನು ನಂದ ಗೋಪನ | ಕಂದ ಶ್ರೀ ಗೋವಿಂದನ ಮಂದರಾಚಲಧರ ಶ್ರೀಯದುಕುಲ | ಚಂದ್ರಗುಣಸಾಂದ್ರ ವಿಜಯಸೂತನ ವಿಶ್ವಪಾಲನ | ಭುಜಗವರ ಪರಿಯಂಕನ ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರಗಮನನ 1 ನವನೀತ ಚೋರನ ಬಾಲಕೃಷ್ಣ ಗೋಪಾಲನ ಶೈಲ ಬೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ2 ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ ಶ್ರೀಮದಾನಂದ ಮುನಿಕರಾರ್ಚಿತ ಶಾಮಸುಂದರ ವಿಠಲನ 3
--------------
ಶಾಮಸುಂದರ ವಿಠಲ
ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಎಂದು ಕಾಂಬೆನೆ ಯದುವರನಾ| ತಂದು ಲೋಲಿಸೆ ಸಖಿಜಿತ ರೂಪಸ್ಮರನಾ ಪ ಶಿರಿದೇವಿ ಪ್ರೀಯನ ಶರಣಾಶ್ರಯನಾ| ಭವ ಭವ ಮುಖರೊಡೆಯನಾ 1 ವಿಮಲೆ ಚರಣನಾ ಕಮಲೇಕ್ಷಣನಾ| ದುರಿತ ಕುಲದೀನೋದ್ಧರನಾ 2 ಹೇಮಾಂಬರನಾ ಶಾಮಸುಂದರನಾ| ಕಾಮಿತಾರ್ಥವ ನೀವ ಕರುಣಾ ಸಾಗರನಾ 3 ತಂದೆ ಮಹಿಪತಿಯಾ ನಂದನ ಸಾರಥಿಯಾ| ಹೊಂದಿದವ ಕಾಂಬಾನಂದ ಮೂರಿತಿಯಾ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಂದು ಕಾಂಬೆನೊ ನಿನ್ನ ಹೇ ಶ್ರೀನಿವಾಸಾ ಪ ನಗೆಮೊಗದ ನತಜನ ಬಂಧು ಬಾಬಾರೆನ್ನ ಬಿ - ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ ಮುಂದೆ ಗತಿ ಏನಯ್ಯ ಮುಕುತರ ಹಿಂದುಳಿದವನಲ್ಲದಲೆ ತನು ಸಂ - ಬಂಧಿಗಳ ವಶನಾಗಿ ದುರ್ವಿಷ - ಯಾಂಧಕಾರದಿ ಮುಳುಗಿದೆನೊ ನಾ ಅ.ಪ. ಹಲವು ಜನ್ಮದ ನೋವಾ ನಾ ಹೇಳಿಕೊಳಲೇನೆಲವೊ ದೇವರ ದೇವಾ ನೀ - ನಲ್ಲದಲೆ ಭೂವಲಯದೊಳಿಗಿನ್ನಾವಾ ನಂಬಿದರ ಕಾವ ಸುಲಭರೊಳಗತಿ ಸುಲಭನೆಂಬುವ ಅಲವಬೋಧಮತಾನುಗರು ಎನ - ಗೊಲಿದು ಪೇಳಲು ಕೇಳಿ ನಿಶ್ಚಂ - ಚಲದಿ ನಿನ್ನನೆ ಧೇನಿಸುವೆ ನಾ ಕಲುಷ ಸಂಸ್ಕಾರಗಳ ವಶದಿಂ ಹೊಲಬುಗಾಣದೆ ಹರುಷಗುಂದುವೆ ಹೊಲೆ ಮನದ ಹರಿದಾಟ ತಪ್ಪಿಸಿ ನೆಲೆಗೆ ನಿಲ್ಲಿಸದಿರ್ದ ಬಳಿಕಿನ್ನೆಂದು 1 ಭಾರತೀಪತಿಪ್ರೀಯಾ ಎಂದೆಂದು ಭಕುತರ ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ - ವಾರಿಧಿಯೆ ಪಿಡಿ ಕೈಯ್ಯಾ ಫಣಿರಾಜಶಯ್ಯಾ ತಾರಕನು ನೀನೆಂದು ತಿಳಿಯದ ಕಾರಣದಿ ಸುಖ ದುಃಖಮಯ ಸಂ - ಸಾರ ದುಸ್ತರ ಶರಧಿಯೊಳು ನಾ ಪಾರಗಾಣದೆ ಪರಿದು ಪೋಪೆನೊ ದೂರನೋಳ್ಪದು ಧರ್ಮವಲ್ಲವೊ ದ್ವಾರಕಾಪುರನಿಲಯ ಪರಮೋ - ದಾರ ತನುವೆಂದೆನ್ನ ಪಾಲಿಗೆ ಬಾರದಲ್ಲದೆ ಭವವಿಮೋಚನ 2 ವಿಕಸನಾರ್ಚಿತಪಾದ ವಿಶ್ವೇಶ ಜನ್ಮಾ - ದ್ಯಖಿಲ ಕಾರಣನಾದ ನಿರ್ದೋಷ ಸತ್ಯಾ - ಸುಖಗುಣಾರ್ಣವ ಶ್ರೀದವಿಠಲಪ್ರಸೀದ ಸಕಲ ಕ್ರಿಯ ಯೋಗಗಳು ತನು ಬಂ- ಧಕವು ನಿನಗೊಪ್ಪಿಸದಿರಲು ಎನೆ ನಿಖಿಳ ಜೀವರ ಭಿನ್ನ ನಿನ್ನಯ ಯುಕುತಿಗೆ ನಮೊ ಎಂಬೆನಲ್ಲದೆ ಯುಕುತ ಯುಕ್ತಿಗಳೊಂದರಿಯದ - ರ್ಭಕನ ಬಿನ್ನಪ ಸಲಿಸಿ ನವವಿಧ ಭಕುತಿ ಭಾಗ್ಯವ ಕೊಟ್ಟು ತವ ಸೇ - ವಕರ ಸೇವಕನೆನಿಸದಿರ್ದೊಡೆ 3
--------------
ಶ್ರೀದವಿಠಲರು
ಎಂದು ಕಾಂಬೆನೊ ರಾಘವೇಂದ್ರ ಗುರುಗಳನಾ | ಕಾಯ ಆನಂದ ನಿಧಿಯ ಪ ತಾಯಿಯಂದದಿ ನಮ್ಮ ಕಾಯುವ ಧಣಿಯಾ ನ್ಯಾಯ ಸದ್ಗುಣ ಪೂರ್ಣ ಮಾಯಿ ಜಗ ಹರಿಯಾ 1 ಮಾಯಾ ರಮಣನ ನಾಮ ಗಾಯನ ಪರನ ದಾಯಾದಿ ಕುಲವೈರಿ ಶ್ರೇಯ ಬಲಯುತನಾ2 ನರರೂಪ ಧರಿಸಿ ವಾನರÀ ಭಕ್ತವರನಾ ನರಶೌರಿ ಪ್ರೀಯ ದೀನರ ಕಾಯುತಿಹರಾ 3 ಜನರನ ಪೊರೆವನೆಂದೆನುತ ಭೂಮಿಯಲಿ ಜನಿಸಿದ ತನ್ನವನ್ನ ವನುತಿ ಸಹಿತದಲಿ 4 ದುರಿತ ವರೆಕೆ ತಾಮುರುತನಾಗಿಪ್ಪ ಗುರುವೆಂಬ ಸಿರಿಗೆ ಇವ ನಿರಂತರದಿ ಸುರಪಾ 5 ಭಕ್ತರ ಬಯಕೆ ಪೂರೈಪಾ ಸುರತರುವೇ ಶಕ್ತ ವಿರಕ್ತ ಹರಿಭಕ್ತ ಮದ್ಗುರುವೆ 6 ಭುವನದಿಂ ದಾಟಿಸೆ ನೌಕವಾಗಿಹಿನಾ ನವ ಭಕುತಿಯನೀವ ಕುವಿಕುಲ ವರನಾ 7 ಇವನೇ ಗತಿಯೆನೆ ಜ್ಞಾನ ತವಕದಿ ಕೊಡುವಾ 8 ನಿಂದಿಪ ಜನರಲ್ಲಿ ಪೊಂದಿಪ ಪ್ರೇಮ ವಂದಿಪ ಜನರಿಗೆ ಸತತ ಶ್ರೀ ರಾಮ 9 ಶ್ರೀನಿವಾಸ ಪುತ್ರ ಪರಮ ಪವಿತ್ರಾ ಜ್ಞಾನಿ ಜನರ ಮಿತ್ರ ವಿಹಿತ ಚರಿತ್ರಾ 10 ನಷ್ಟ ತುಷ್ಟಿಗೆ ಅಂಜಾ ದುಷ್ಟ ಶೇರಾ ಕಷ್ಟ ಕಳೆಯುವ ನಮ್ಮ ಕೃಷ್ಣ ಪಾರಿಜಾತ 11 ಪೊಳಲುರಿ ಸಖನಾ ಘನಪೊಳಿಯುವ ಪಾದಯುಗವಾ ಘಳಿಗಿ ಬಿಡದಲೆ ನೋಡುತ ನಲಿಯುತಿರುವಾ 12 ಅರಿದು ಈತನೇಯನ್ನ ಗುರುವೆಂಬಗೆ ರುದ್ರಾ ಧುರದೊಳು ಭೀಮ ಗುರುವಿಗತಾ ದಾರಿದ್ರ್ಯಾ 13 ಅನಿಮಿತ್ತ ಬಂಧು ಬ್ರಾಹ್ಮಣ ವಂಶಜಾ ಭವ ತ್ರಾತಾ 14 ತಪ್ಪು ನೋಡದಲೆ ಕಾಯುತಿಪ್ಪ ನಮ್ಮಪ್ಪ ಸರ್ಪ ತಲ್ಪನ ಧ್ಯಾನದಿಪ್ಪ ನಿಪ್ಪ 15 ಅರುಣಾಭಿ ಚರಣ ತಲೆಬೆರಳು ಪಂಕ್ತಿಗಳಾ ಸರಸಿಜ ಪೋಲ್ವ ಮೃದುತರ ಪಾದಯುಗಳಾ 16 ವಲಿದ ಭಕ್ತರಿಗಿಷ್ಟ ಸಲಿಸುವ ಪಾದ17 ಸಕಲ ರೋಗವ ಕಳೆವ ಅಕಳಂಕ ಪಾದ ಪಾದ 18 ಹರಿಯಂತೆ ಹರನೊಲ್ ಸಾಸಿರ ನಯನನಂತೆ ಶಿರಿಯಂತೆ ತೋರ್ಪ ಭಾಸ್ಕರ ನರನಂತೆ 19 ಸುಳಿರೋಮಗಳುಳ್ಳ ಚಲುವ ಜಾನುಗಳಾ ಎಳೆಬಾಳೆ ತೆರ ಊರು ಹೊಳೆವ ಸುಚೈಲ 20 ತಟಿತ ಸನ್ನಿಭವಾದ ಕಟಿಗಿಪ್ಪ ಸೂತ್ರ ನಟ ಶೇವಸಿವಲಿ ತಾನು ಪುಟಿಯು ಉದರಾ 21 ಎದೆಯಲಿಪ್ಪುದÀು ನಮ್ಮ ಪರಮೇಶನ ಮನೆಯೊ ವದಗಿ ಭಕ್ತರಿಗೆ ಕರುಣದಿ ಕಾಯ್ವ ಖಣಿಯೂ 22 ಹುತವಾಹನನಂತೆ ಭಾರತೀಕಾಂತನಂತೆ ಚತುರಾಶ್ಯ ಈ ಕ್ಷಿತಿಯಂತೆ ಇಹನಂತೆ23 ಹಸುವಿನಂದದಲಿ ಪಾಗಸನೊಳಿಹನ ವಸುಧಿಯೊಳಿಂತಿದೊಮ್ಮೆ ಪಸುಯನಿಸಿದನಾ 24 ಭೂಧರತನಂತೆ ವಸುಧರನಂತೆ ಭೂಧರನಂತೆ ಸೋದರನಂತೆ 25 ಚರ್ಚಿತ ಸುಂದರ ರೂಪ ಕಂಬು ಲೋಕ ಕಂಧರಾಯುತನ 26 ಕರೆದು ಭಕ್ತರಿಗಿಷ್ಟಗರಿಯುವ ಚೆಲ್ವಾ ವರ ರೇಖೆಯುತ ಶಿರಕರದಾ ವೈಭವನಾ 27 ಮಂಗಳದಾಯಕ ಅಂಗೈಯಿಯುಗಳಾ ಭಂಗಾರ ದುಂಗಾರ ಇಟ್ಟಿಪ ಬೆರಳು 28 ಕೆಂದುಟಿ ಮೊದನಾಗಿ ಇಂದಿಪ್ಪ ವದನಾ ಪೊಂದಿದ ದಂತಗಳಿಂದ ಸ್ವಾರಚನಾ29 ಹಸನಾದ ದೊಕರದಂತೆಸೆವ ಗಲ್ಲಗಳಾ ಬಿಸಜದಂತೆ ರಾಜಿಸುವ ನೇತ್ರಗಳಾ 30 ನಾಸಿಕದಲಿಪ್ಪ ಮೀಸಿ ದ್ವಂದ್ವಗಳಾ ದೇಶಾದಿ ಪಾಲ್ಮೂರು ವಾಸಿ ಕರ್ಣಗಳಾ 31 ಗಿಳಿಗೆ ವಾಚ್ಯಾಪದೊಳ ಹೊಳೆವಾ ಪುಚ್ಛಗಳಾ ತಿಲಕಾ ಮುದ್ರೆ ಪುಂಡ್ರಗಳುವುಳ್ಳ ಫಾಲಾ 32 ಹರಿಪಾದ ಜಲವನ್ನು ಧರಿಸಿದ ಶಿರವಾ ಶಿರಿಗೋವಿಂದ ವಿಠಲನ್ನಡಿಗೆಯರಗುವಾ ಶಿರವಾ33
--------------
ಅಸ್ಕಿಹಾಳ ಗೋವಿಂದ