ಒಟ್ಟು 1750 ಕಡೆಗಳಲ್ಲಿ , 112 ದಾಸರು , 1417 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಶ್ರೀ ರಾಘವೇಂದ್ರತೀರ್ಥರು ಆನೆಂತು ತುತಿಪೆ ನಿನ್ನ - ಮಂಚಾಲಿ ರನ್ನ ಪ ಆನೆಂತು ತುತಿಪೆ ನಾ - ಮಾನಮೇಯದಿನಿಪುಣಗಾನ ವಿಶಾರದ - ಶ್ರೀನಿವಾಸನ ದೂತ ಅ.ಪ. ಕೃತಯುಗದಲಿ ನೀನು | ದಿತಿಜ ವಂಶದಿ ಬಂದುವಿತತ ವಿಶ್ವಾಧಾರ | ಕೃತಿಪತಿಯ ತುತಿಸಿ ಮುಕುತಿ ಪಥಕೆ ಸತ್ತರ ತಮ ಪಂಚಭೇದಮತಿಯೆ ಸಾರ್ಥಕವೆಂದು | ಹಿತದಿಂದ ಸಾಧಿಸೆಮತಿಭ್ರಾಂತನಾದಂಥ | ದಿತಿಜ ಗುರುವು ತಾನುಖತಿಯಿಂದ ನೋಡುತ್ತಲೀ || ಬಾಲಕರೆಲ್ಲಹತಭಾಗ್ಯರೆನ್ನುತ್ತಲೀ | ನೃಪಗೆ ಪೇಳೆಖತಿ ನಿನ್ನೋಳ್ ತೋರುತ್ತಲೀ | ದಂಡಿಸೆ ನಿನ್ನಪಿತಗೆ ಬುದ್ಧಿಯ ಪೇಳ್ದ | ಅತುಳ ಪರಾಕ್ರಮೀ 1 ಕಡು ವೇಗದಲಿ ಬಂದ | ಶಂಡ ಮರ್ಕನ ಕಳುಹಿಒಡ ಹುಟ್ಟಿದವನನ | ದಾಡೆದಂತಗಳಿಂದಬಿಡದೆ ಶೀಳಿದ ಹರಿಯ | ದೃಢದಿ ಪೂಜಿಪೆ ನೀನುಬಿಡು ಬಿಡು ಈ ಮತಿ | ಮೃಡನೆ ನಮ್ಮಯ ದೇವಪುಡುಕಿ ಆ ಹರಿಯನ್ನೆ | ಖಡುಗದಿಂದಲಿ ಅವನಕಡಿದು ಹಾಕುವೆನೆನ್ನುತ್ತ || ಕರೆದು ನಿನ್ನಕಡು ಭಾಗ್ಯ ಕೋ ಎನ್ನುತ್ತ | ಪೇಳಲು ನೀನುಮಿಡುಕದೆ ಬೇಡೆನ್ನುತ್ತ | ಬುದ್ದಿಯ ಮಾತದೃಢದಿ ಪಿತಗೆ ಪೇಳ್ದೆ | ಬಿಡೆನು ಹರಿಯ ಎನ್ನುತ್ತ 2 ಸಹೋದರಿ | ವರಲಕ್ಷ್ಮಿ ಮಾತೆಯಸ್ಮರಿಸಿ ಜೀವಿಸೆ ಅವನೂ || ರಕ್ಕಸ ನೋಡಿಭರದಿ ಖಡ್ಗವ ಸೆಳೆದೂ | ತೋರೊ ಕಂಬದಿಹರಿಯ ಎಂದು ಒದೆದೂ | ನಿಲ್ಲಲು ಪಿತಗೆನರಹರಿ ರೂಪವ ತೋರ್ದೆ | ಕ್ರೂರನ ಜರಿದೂ 3 ದಿಟ್ಟ ತರಳನ ಸಲಹೆ | ಗಟ್ಟಿ ಕಂಬದಿ ಬರೆಛಟ ಛಟ ಶಬ್ದಾ | ಜಾಂಡ ಕಟಹ ಬಿಚ್ಚೆಕಠಿಣ ಖಳನ ಪಿಡಿದು | ಜಠರವ ಭೇದಿಸಿಹಠದಿ ಕರುಳಿನ ಮಾಲೆ | ಕಂಠದಿ ಧರಿಸುತ್ತತೃಟಿಯು ಬಿಡದೆ ತನ್ನ | ಹಠದಿ ಭಜಿಪನಿನ್ನಸ್ಫುಟದಿ ಕರದೋಳತ್ತಿದ || ಮುದ್ದಿಸಿ ಬಲುದಿಟ ಭಟ ಎನೆ ಎನಿಸೀದ | ಮಗನ ಮಾತುದಿಟವ ಜಗಕೆ ತೋರಿದ | ವೆಂಕಟನ್ನಪಟುತರ ವ್ಯಾಪ್ತಿಯ | ಮಹಿಮೆ ಸ್ಫುಟದಿ ತೋರ್ದ 4 ದಶಶಿರ | ದೂತ ಹನುಮನ್ನವ್ಯಥೆಯ ಪಡಿಸೆ ಪೋಗಲೂ || ಖತಿಯಲಿ ಲಂಕೆಹುತವಹನಿಗೆ ಈಯಲೂ | ವಾತನ ನೀಪ್ರೀತಿಯಲ್ಲಾಶ್ರಯಿಸಲೂ | ಲಂಕೆಯ ಪುರನೀತಿಯಿಂದಲಿ ಆಳ್ದ | ಖ್ಯಾತ ದೂತನೆನಿಸಲೂ 5 ಪಾದ ಭಜಿಸಿದಿ 6 ಶೇಷಾವೇಶದಿ ಪುಟ್ಟಿ | ವ್ಯಾಸ ತೀರ್ಥರಾಗಿಮೀಸಲಾದ ಮತ | ದಾಶಯಗಳನೆಲ್ಲಸೂಸಿ ಪೇಳುತ್ತಲಿ | ಶೇಷಾಚಲದಿ ಶ್ರೀನಿವಾಸನ ದ್ವಾದಶ | ವರ್ಷ ಸೇವಿಸಿ ನೃಪತೀಶನ ಕುಹುಯೋಗ | ಲೇಸಾಗಿ ಕಳೆಯುತಆಶುಗತಿಯ ತತ್ವ ಮತವ || ಸ್ಥಾಪಿಸಿ ಬಲುಮೀಸಲು ತರ್ಕತಾಂಡವ | ನ್ಯಾಯಾಮೃತಭೂಸುರರ್ಗಿತ್ತು ನಾಯಕರ | ಪುರಂದರದಾಸರಾಯರ ಮಾಡ್ದ | ದಾಸ ಪಂಥೋದ್ಧಾರ 7 ವಿಹಂಗ ವಾಹನ ಶ್ರೇಷ್ಠನೂ || ಎಂದೆನಿಸುತ್ತತುಂಗ ತೀರದಲಿ ನೀನೂ | ರಾಮರ ಪಾದಭೃಂಗನೆಂದೆನಿಸಿ ಇನ್ನೂ | ವ್ಯಾಖ್ಯಾನದಿಶೃಂಗರಿಸಿದೆ ನಿನ್ನ | ಬಿಂಬ ಮೂರುತಿಯನ್ನೂ 8 ಮಾಸ ಭವ ವನಧಿಯತರಣೋಪಾಯವ ತೋರುತ್ತ | ಪವನಾಂತಸ್ಥಗುರುಗೋವಿಂದ ವಿಠಲನೆಂಬಾತ | ಗುಣ ಪೂರ್ಣಸರ್ವೋತ್ತಮನೆನ್ನುತ್ತ | ಕೀರ್ತಿಪೆ ನೀನು ನಿರುತ9
--------------
ಗುರುಗೋವಿಂದವಿಠಲರು
ಶ್ರೀ ಶ್ರೀನಿವಾಸ ಕಲ್ಯಾಣ ಲಾವಣಿ ಮಾಧವ ಪ ಮುದಮೋದ ಘನ ಸುಖ ಭಕ್ತರಿಗೀಯಲು ಅ.ಪ. ದೇವ ದೇವೇಶನು ಯಾರೆಂತೆಂದು ಕೋವಿದ ಭೃಗುಮುನಿ ಹುಡುಕುತ ಬಂದು ಪಾರ್ವತಿ ಪತಿಹರ ವಿಧಿಗಳ ಜರಿದು ಧಾವಿಸಿ ಹರಿಯೆಡೆ ಬರ್ಪುದ ಕಂಡು ಭಾವಜ ಪಿತರತಿ ಸೋಗನು ಹಾಕೆ ದೇವನ ಮಾಯೆಯು ಮುಸುಕಲು ಮುನಿಗೆ ಈ ವಿಧ ಸಲ್ಲದು ಹರಿಗೆಂತೆಂದು ಪಾವನ ನೆದೆಯನು ವದ್ದನು ದುಡುಕಿ1 ಮಾಧವ ಚರಣವ ತೊಳೆದು ಹರಿಸುತ ದುಗುಡವ ಭಕ್ತನಿಗಂದು ಕರದಿಂ ದೊತ್ತುತ ಚರಣದ ಕಣ್ಣು ತರಿಯಲು ಹೆಚ್ಚಿನ ಸಾಧನೆ ಮುನಿಗೆ ಹರುಷದಿ ತೆರಳಿದ ಋಷಿವರ ತಾನು ಅರಿಯುತ ಕಾಂತನ ಮನವಂ ಸಿರಿಯು ಸರಸರ ಕೋಪವ ನಟಿಸುತ ತಾನು ಬಿರುಸಿನ ನುಡಿಗಳ ಆಡಿದಳಂದು 2 ಏನಿದು ಮುನಿ ವಿಪರೀತವು ಥರವೆ ನಾನಿಹ ಸ್ಥಳವನು ವದೆಯುವದೆಂದು ಮಾನಿನಿ ಗೌರವ ಕಾಯದೆ ಕ್ಷಮಿಸಿಹೆ ನಾನಿಹೆ ಬರಿಸತಿ ಭಕ್ತರೆ ಹೆಚ್ಚು ಕಾನನ ಸೇರುವೆ ನನಗೇಕೀ ಮನೆ ಮಾನವು ಹೊಯಿತು ಯನ್ನಲು ಸತಿಯು ಮೌನವ ಧರಿಸಲು ಗಂಡನು ನಗುತ ದೀನರ ಪೊರೆಯಲು ಬಂದಳು ಭುವಿಗೆ 3 ಗಂಡನ ಬಿಡುವಳೆ ಲಕ್ಷ್ಮೀದೇವಿ ಪುಂಡರ ಮಾತಿದು ನಂಬಿಲುಬೇಡಿ ಗಂಡನ ಮನತೆರ ನಟಿಸಿದಳಷ್ಟೆ ಗಂಡನು ಹಾಗೆಯೆ ತೊರೆಯುತ ಧಾಮ ಕುಂಡಿಲಿ ಗಿಳಿಯುತ ಅಲೆಯುತ ಹೊರಟ ಕಂಡಲ ಗಿರಿಯೆಡೆ ನಡೆತಾತಂದ ಕಂಡನು ಹುತ್ತವ ಒಂದೆಡೆ ತಾನು ಕುಂಡಲಿಗೊಡೆಯನು ನೆಲಸಿದನಲ್ಲಿ 4 ಪಾವನ ಗಿರಿಯದು ಕೇಳಿರಿ ಎಲ್ಲ ದೇವನ ಖಗಮೃಗ ಬಳ್ಳಿಗಳಾಗಿ ದೇವ ಸಮೂಹವು ಸೇವಿಪರಲ್ಲಿ ಕೋವಿದ ಋಷಿಗಳು ಧ್ಯಾನಿಪರೈಯ ಭಾವಸು ಭಕ್ತಿಲಿ ನೋಡಲು ಗಿರಿಯ ಜೀವರ ಪಾಪಗಲೆಲ್ಲಾ ನಾಶ ನೋವನು ಕಾಣರು ಹರಿಕೃಪೆ ಮುಂದೆ ದೇವನು ಇರೆ ಇದೆ ಭೂವೈಕುಂಠ 5 ಕೃತಯುಗದಲ್ಲಿದು ವೃಷಭಾಚಲವು ಗತಿಸಿದ ರಕ್ಕಸ ಹರಿಯಿಂತೆಂದು ಸುತನಂ ಪಡೆಯಲು ಅಂಜಿಲಿದೇವಿ ಅತಿ ತಪಗೈದಳು ತ್ರೇತೆಯಲೆಂದು ಉತ್ತಮ ನೆಂಬುವ ಗರ್ವವ ನೀಗಿ ಸ್ತುತಿಸಿದ ಶ್ವಾಸನ ಶೇಷನು ಎಂದು ಇತ್ತರು ಮೂರಲಿ ಶೇಷನ ನಾಮ 6 ವೆಂಕಟ ಗಿರಿಯಿದು ಕಲಿಯುಗದಲ್ಲಿ ಸಂಕಟ ನೀಗಿದ ಮಾಧವನಿಲ್ಲಿ ಸಂಕಟ ನೀಡುವ ಪಾಪಗಳನ್ನು ಶಂಕರ ಹರಿತಾ ಕಡಿಯುವನೆಂದು ವೆಂಕಟ ನೆನಿಸುತ ಮೆರೆಯುವ ನಿಲ್ಲಿ ಶಂಕೆಯ ಮಾಡದೆ ಶರಣೆಂದಲ್ಲಿ ಪಂಕಜ ನೇತ್ರನು ಪೊರೆಯುವನಿಲ್ಲಿ ಮಂಕುಗಳಾಗದೆ ಭಜಿಸಿರಿ ಬೇಗ 7 ಇಂದಿರೆ ಕೆರಳೆ ತಂದೆಯು ತೊರೆದನೆ ನಿಜ ವೈಕುಂಠ ಪೊಂದಿಹ ಹುತ್ತವ ಏನಿದು ಛಂದ ಕಂದನು ನಾನಿಹೆಎನ್ನುತ ಬೊಮ್ಮ ತಂದೆಗೆ ಕ್ಷೀರವ ಕರೆಯಲುನಿತ್ಯ ಛಂದದ ಗೋತನು ಧರಿಸುತ ಶಿವನ ಕಂದನ ಗೈಯುತ ಮಾತೆಯ ಸಹಿತ ಬಂದನು ಚೋಳನ ಅರಮನೆಯೆಡೆಗೆ 8 ಕೊಳ್ಳಲು ರಾಣಿಯು ಸೇರುತ ಗೋಷ್ಠಿ ನಲ್ಲಗೆ ಪ್ರತಿದಿನ ಕ್ಷೀರವ ಸುರಿಸೆ ಇಲ್ಲವೆ ಆಗಲು ರಾಣಿಗೆ ಹಾಲು ಗೊಲ್ಲನ ಶಿಕ್ಷಿಸಿ ಬೈಯಲು ಬಹಳ ಗೊಲ್ಲನು ಪತ್ತೆಯ ಹಚ್ಚುತ ಚರ್ಯೆ ಕೊಲ್ಲಲು ಗೋವನು ಕೊಡಲಿಯನೆತ್ತೆ ಬಲ್ಲಿದ ತಡೆಯಲು ಶಿರವನು ಒಡ್ಡೆ ನಿಲ್ಲದೆ ಗಗನದಿ ಚಿಮ್ಮಿತು ರಕ್ತ 9 ನೋಡುತ ಮಡಿಯಲು ಗೊಲ್ಲನು ಅಲ್ಲೆ ಓಡುತ ಗೋಗಣ ಹಟ್ಟಿಯ ಸೇರೆ ಜಾಡನು ಪಿಡಿಯುತ ಚೋಳನು ಬರಲು ಕೇಡಿಗ ನೃಪನೆ ಪಿಚಾಚಿಯು ಆಗೆನೆ ಬೇಡಲು ಕ್ಷಮೆಯನು ಬಹುಪರಿಹರಿಯ ನೀಡಿವಿಶಾಪವ ವೆಂಕಟ ಕರುಣಿ ಆಡಲು ತೊಡಗಿದ ಈ ವಿಧ ಮುಂದೆ 10 ಆದುದು ಆಯಿತು ಚೋಳನೆ ಕೇಳು ಭುಂಜಿಸು ಕರ್ಮ ಪದ್ಮಾವತಿ ಯೆಂಬಾಕೆಯ ಮುಂದೆ ಮೋದದಿ ಮುದುವೆಯ ನಾಗುವೆ ಆಗ ಭೂಧವ ಮಾವನು ನೀಡುತ ಮಕುಟ ಕವಿ ವಾರ ನಾಧರಿಸುವಾಗಿಲ್ಲದೆ ಬಾಧೆ ಪೊಂದುವಿ ಕಲಿಕೊನೆ ಪೂರ್ವಾವಸ್ಥೆ 11 ಪೇಳತ ಲೀಪರಿ ಚೋಳಗೆ ದೇವ ಲೀಲೆಯ ತೊರಲು ಘಾಯವ ಪಿಡಿದು ಕೇಳಲು ಔಷಧ ಗುರುವನು ಸ್ಮರಿಸಿ ಆಲಸ್ಯಗೈಯದೆ ಬಂದವ ನುಡಿಯೆ ಮೂಲಿಕೆ ಹುಡುಕುತ ಗಿರಿಯಲಿ ಅಲೆಯೆ ಶೈಲದ ಸ್ವಾಮಿ ವರಾಹನು ಸಿಗುತ ಕೇಳಲು ವೆಂಕಟ ಕಥೆ ವಿಸ್ತಾರ ಪೇಳಲು ತಬ್ಬಿದ ಕ್ರೋಡನ ಚತುರ 12 ಏನಿದು ಬಹು ವಿಪರೀತವು ಪೇಳಿ ಸತಿ ಬಿಟ್ಟಲೆಯುವುದೆಂತು ಪೂರ್ಣಾನಂದಗೆ ಗೊಲ್ಲನ ಪೆಟ್ಟೆ ಚಿನ್ಮಯ ನೆತ್ತರು ಚಿಮ್ಮುವದುಂಟೆ ಕ್ಷುಧೆ ತೃಷೆ ದೂರಗೆ ಹಾಲು ಅನ್ಯರು ವೈದ್ಯರೆ ಧನ್ವಂತ್ರೀಗೆ ಕಾಣನೆ ಔಷಧಿ ಪೂರ್ಣಪ್ರಜ್ಞ ತಾನಿರೆ ವೆಂಕಟ ತಿಳಿಯನೆ ಕ್ರೋಡ 13 ಲೀಲೆ ಇದೆಲ್ಲವು ಕೊಡುವದವಗೆ ಬೀಳಿಸಿ ಮೋಹದಿ ಕುಜನರ ತರಿವ ಪಾಲಿಪ ಸುಜನರ ಬೀರುತ ಜ್ಞಾನ ಲೀಲಾಮಯನವ ಸರಿಯೆಂತೆನ್ನಿ ಕೇಳಲು ಕ್ರೋಡನ ವಾಸಿಸೆ ಜಾಗ ಕೇಳುವರಾರೈ ನೀನಿರೆ ಯನ್ನ ಬೀಳುವರೆಲ್ಲರು ನಿನ್ನಡಿಭರದಿ ಧಾಳಿಯೆ ನನ್ನಯ ಪ್ರಭುತನವೆಂದ 14 ಮುಂದೆಯೆ ನೀನಿರು ನಾಹಿಂದಿರುವೆ ಬಂದವರೆಲ್ಲರು ನಿನಗೊಂದಿಸುತ ವಂದಿಸಲೆನ್ನದು ವಲಿಯುವೆನಾಗ ಮುಂದಿಹ ನಿನಗೇ ಮೊದಲಲಿ ಪೂಜೆ ಛಂದದಿ ಶಾಸನ ಹೀಗೇ ಬರದು ಮಂದಿರ ಕೆಡೆ ಕೊಡು ಎನ್ನಲು ನಗುತ ನಂದದಿ ನೀಡುತ ಹಾಗೆಯೆ ಎಲ್ಲ ಕಂದನ ಸೇವಿಸೆ ಬಕುಳೆಯ ಕೊಟ್ಟ 15 ತಗ್ಗಿರೆ ಸಾಧನ ವೆಗ್ಗಳಗೈವ ವೆಗ್ಗಳ ಸಾಧನೆ ತಗ್ಗಿಪ ದೈವ ಹಗ್ಗವು ಸರಿಇವ ನಿಚ್ಚೆಯು ಕೇಳಿ ಅಗ್ಗದ ಪ್ರಭುವರ ಇವತಾನಲ್ಲ ತಗ್ಗಿಸಿ ವಿಷಯ ಬಗ್ಗಿಸಿ ಮನವನು ಹಿಗ್ಗುತ ಭಜಿಸಲು ಚರಣ ಸರೋಜವ ತಗ್ಗದ ಸೌಖ್ಯವ ನೀಡುತ ಕಾವ ಮುಗ್ಗದೆ ಭವದಲಿ ಭಜಿಸಿರಿ ಬೇಗ 16 ಬಕುಳೆ ಯಶೋದೆಯು ಪೂರ್ವದಿ ಕೇಳಿ ರುಕ್ಮಿಣಿ ಮುದುವೆಯ ನೋಡದಲಾಕೆ ಉಕ್ಕಿದ ಮೋಹದಿ ಬಯಸಲು ನೋಡೆ ಭಕ್ತಳ ಬಯಕೆಯ ಸಿದ್ಧಿಸೆ ದೇವ ಬಕುಳೆಯ ಜನ್ಮದಿ ನಿಂದಿಹಳೆಂದು ಅಕ್ಕರೆಯಿಂದಲಿ ತಾ ಕರತಂದು ಚೊಕ್ಕಸುಕಂದನ ತೆರದಲಿ ನಿಂದ ಭಕ್ತಿಲಿ ಸೇವೆಯ ಗೈದಳು ಬಕುಳೆ 17 ನಾರಾಯಣ ಪುರ ನಾಮದ ನಗರಕೆ ದೊರೆಯೆನಿಸಿದ್ದನು ಆಕಾಶರಾಯ ಕೊರಗುತ ಬಹುದಿನ ಸುತರಿಲ್ಲೆಂದು ಧರಣಿಯ ಶೋಧಿಸೆ ಯಾಗಕ್ಕೆಂದು ದೊರಕಲು ಕಮಲವು ದೊಡ್ಡದು ಒಂದು ತೆರೆಯುತ ನೋಡಲು ಶಿಶು ತಾನೊಂದು ಬೀರುತ ಕಾಂತಿಯ ಕಾಣಿಸಲಂದು ದೊರಕಿತು ಕನ್ಯಾಮಣಿಯೆಂತೆಂದು 18 ಅರಮನೆ ಗಾ ಶಿಶು ಹರುಷದಿ ತಂದು ಸರಸಿಜಮುಖಿ ಪದ್ಮಾವತಿಯೆಂದು ಕರೆಯುತ ರಾಣಿಯು ಸಾಕುತ ಬಂದು ವರುಷಗಳುರುಳಲು ಕಾಲದಿ ಕನ್ಯೆ ಸಿರಿತೆರ ಲಕ್ಷಣ ಗಣದಿಂ ಬೆಳೆಯೆ ವರಿಸಲು ಈಕೆಯ ನರರಿಂದಾಗದು ಹರಿಯೇ ಸರಿವರವೆನ್ನುತ ಮನದಿ ಅರಸುತ ವರನಂ ಬಳಲಿದ ಧೊರೆಯು 19 ವೇದವತೀ ಈಕೆಯು ತ್ರೇತೆಯಲೆನ್ನಿ ಮಾಧವ ಮನತೆರ ತೆರಳುವ ಸೀತೆ ಮೋದದಿ ಸೇರಲ್ ಗಿರಿ ಕೈಲಾಸ ಖÉೀದಗಳುಣ್ಣುತ ಲಂಕೆಯಲಿದ್ದು ಸಾಧಿಸಿ ಖಳರವಿನಾಶವನಲ್ಲಿ ಮೇದಿನಿ ಸುತೆಯಳ ಸೇವಿಸಿ ಬಹಳ ಮೋದದಲಾಗಲಿಯಂದಳು ಸೀತೆ 20 ಶಕ್ರನು ಶಿಖಿಸಹ ಇದ್ದಹಾಗೆ ಲೋಕಕೆ ತೋರಲು ಸೀತೆಯ ರಾಮ ಚೊಕ್ಕ ಪರೀಕ್ಷೆಯ ನಡಿಸಲು ಶಿಖಿಯಲಿ ತಕ್ಕಣ ಬಂದರು ಸೀತೆಯರಿಬ್ಬರು ಅಕ್ಕರೆಯಿಂದಲಿ ನುಡಿಯುತ ಕಥೆಯು ಸಕ್ಕದಿ ನಿಂತಿಹ ಈಕೆಯ ನೀನು ಈಕ್ಷಿಸಿ ಪಿಡಿಕೈಯೆನ್ನಲು ಸೀತೆ ರಕ್ಕಸ ವೈರಿಯು ಮಡದಿಗೆ ನುಡಿದ 21 ಒಂದೇ ಬಾಣವು ಒಂದೇ ವಚನವು ಒಂದೇ ನಡತೆಯು ಒಬ್ಬಳುಮಡದಿ ಇಂದೆನಗೆಂಬುದು ತಿಳಿಯದೆ ನಿನಗೆ ಛಂದದಿ ಕಲಿಯಲಿ ನಡಿಸುವೆ ಬಯಕೆ ಇಂದ್ರನು ಅಗ್ನಿಯ ಪುಟ್ಟಲಿ ವಡಲಲಿ ಇಂದಿನ ಯುಗದಲಿಯನ್ನಲು ರಾಮ ವಂದಿಸಿ ನಡೆದರು ಎಲ್ಲರು ಆಗ ಹಿಂದಿನ ವರತೆರ ಬಂದಿಹಳೀಗ 22 ಭೂಸುರ ಪೊಟ್ಟಿಲಿ ಪುಟ್ಟುತ ಹಿಂದೆ ಶ್ರೀಶನ ಮಡದಿಯ ತಪದಿಂ ಮೆಚ್ಚಿಸಿ ಭಾಷೆಯ ಪಡದಿರೆ ಸವತಿಯ ಪಟ್ಟಕೆ ಘಾಸಿಯ ನೀಡುತ ರಾವಣ ಬಂದು ಆಶಿಸಿ ಸಂಗವ ದುಡುಕುತ ನುಡಿಯೆ ರೋಷದಿ ಶಾಪವ ನೀಡಿದಳೀಕೆ ನಾಶಕೆ ಕಾರಣಳಾಗುವೆ ನಾನೆ ಭ್ರಷ್ಟನೆಯೆನ್ನುತ ಶಿಖಿ ಸೇರಿದಳು 23 ಲಕ್ಷ್ಮೀ ವಿಭೂತಿಯೆ ಇವಳೆಂತೆನ್ನಿ ಲಕ್ಷಣ ನಿಭಿಡಿತಳಾಗಿಹ ಕನ್ಯೆ ಕುಕ್ಷಿಯು ತೆಳ್ಳಗೆ ಸಿಂಹಸುಮಧ್ಯಮೆ ಪಂಕಜ ನೇತ್ರೆಯು ಪಂಕಜವದನೆಯು ಪಂಕಜ ಗಂಧಿ ಭುಜಂಗ ಸುವೇಣಿ ಶಂಕರ ನಗೆನುಡಿ ಗುರುಲಾವಣ್ಯ ಶಂಖ ಸುಪದ್ಮಾರೇಖೆಗಳಿಂದ ಲಂಕೃತ ಅಂಗೈ ಪಾದಗಳ್ಹಾಗೆ 24 ಕಾಮನ ಬಿಲ್ಲನು ಹಳಿಯುವ ಹುಬ್ಬು ಸೋಮನ ಮೀರಿಪ ಯುಗಯುಗ ಕಾಂತಿ ಸಾಮಜಗಮನೆ ರಂಭೋರುಗಳು ಕೋಮಲ ಚಂಪಕ ನಾಶಿಕ ತುಟಿಗಳು ಕಾಮದ ಪೀವರ ಕುಚಯುಗಹಾಗೆ ಸು ನೇಮದಿ ಬೆಳದಿಹ ಪಲ್ಗಳ ರಾಜಿ ವಾಮನಿತಂಬಜಘನದ್ವಯವ ಭಾಮೆ ಸಫಾಲದಿ ಮೆರೆದಳು ತಾನು 25 ಈಕೆಯು ಕಮಲೆಯ ತೆರೆದಿಂ ಬೆಳೆದು ಸಾಕಲು ಕರೆದಳು ಕನಕಸುವೃಷ್ಟಿ ಕಾಕನು ಕಾಣದೆ ರಾಜನು ಮೆರೆದ ನಾಕವೆ ಎನಿಸಿತು ರಾಜನಮನೆಯು ಜೋಕೆಯಲೊಂದಿನ ಸಖಿಯರ ಕೂಡಿ ಈಕ್ಷಿಸೆ ಪುರವುದ್ಯಾನವ ಕುವರಿ ಸೌಖ್ಯದಿ ತೆರಳುತೆಯಿರುತಿರುವಲ್ಲಿ ನಾಕದ ನಾರದ ವದಗಿದನಲ್ಲಿ 26 ಹರಿಕಾರ್ಯಾಂಗನು ಬಂದನು ಎನ್ನುತ ಗುರು ಸತ್ಕಾರಂಗಳಗೈದು-ಆ ತುರ ತೋರಲು ತಿಳಿಯೆ ಭವಿಷ್ಯ ಕರಗಳ ನೋಡುತ ತೂಗುತ ತಲೆಯು ಸಿರಿತೆರ ಲಕ್ಷಣ ಕಾಣುವೆನಮ್ಮ ಹರಿಯೇ ಸರಿ ವರಿಸಲ್ ನಿನ್ನ ಅರಸುತ ಬರುವನು ತಾನೆ ನಿನ್ನ ಬರಿ ಮಾತಲ್ಲವು ನೋಡೆಂತೆಂದ 27 ಪರಿ ಹೊರಡಲ್ ಮುನಿಯು ಲಾಲಿಸಿ ª
--------------
ಕೃಷ್ಣವಿಠಲದಾಸರು
ಶ್ರೀ ಶ್ರೀನಿವಾಸ-ಶ್ರೀ ಭೂವಿಲಾಸ-ಶ್ರೀತಜನಪೋಷ -ಪಾಹಿಸುವೇಷ ಪ ಅಚ್ಯುತಮಾನ ಮದಚ್ಯುತವಿ ಪಚ್ಚಿನ್ಮನೋರಥ ನಿಚ್ವಿತ ಪಾಹಿ 1 ದುರಂತವಿಕ್ರಮ ದನುಜಾಂತಕ ಪಾಹಿ 2 ಗೋವಿಂದ ನತಸುಮ ನೋವೃಂದ ದಳಿತ ತಮೋವೃಂದ ಪೋಷಿತ ಗೋಬೃಂದ ಪಾಹಿ 3 ಕೊಶಮಾಂಪಾಹಿ 4 ಸುರವಾರಮಾಂಪಾಹಿ 5 ಸದನ ಗೋವಿಂದಮಾಂಪಾಹಿ6 ವಿಷ್ಣೋಸುಜನವರ್ಧಿಷ್ಣೋಸಂತೋಷಿತಜಿಷ್ಣು ಸುರಜೀಷ್ಣೋಮಾಂಪಾಹಿ 7 ನುತ ಬುಧಜನಪಾಹಿ 8 ಆಕ್ರಮನುಪಿತ ನಿಜಕ್ರಮ ಜಿತವಿಶ್ವಶಕ್ರಸಹಜ ತ್ರಿವಿಕ್ರಮ ಪಾಹಿ 9 ಸುರಕಾಮನ ಮುನಿಜನಪ್ರೇಮಮಾಂಪಾಹಿ 10 ಕೌಸ್ತುಭಕಂದರ ಪಾಹಿ 11 ಗೋಚರರಾಕೆಂದು ಪಾಹಿ 12 ಪದಪದ್ಮಮಾಂಪಾಹಿಂ 13 ಜಿತಕಾಮಮಾಂಪಾಹಿ 14 ದೊಷರಹಿತಗುಣ ಭೂಷಣ ನತಜನಪೋಷ- ಸಂತೋಷಿತ ಶೇಷಮಾಂಪಾಹಿ 15 ವಾಸುಕಿ ಶಯನ ವಿಕಾಶ ಕಮಲನಯ- ನಾಸುರದಮನ ಶರಾಸನ ಪಾಹಿ 16 ಪರಿತುಷ್ಟಮಾಂಪಾಹಿ 17 ವಿಹರಣ ಸಕಲ ಗುಣಾಭರಣಮಾಂಪಾಹಿ 18
--------------
ಸರಗೂರು ವೆಂಕಟವರದಾರ್ಯರು
ಶ್ರೀ ಸತ್ಯಬೋಧರು ಭೀಕರ ರೂಪವ ತೋರುವ ಯತಿವರನ್ಯಾರೆ ಪೇಳಮ್ಮಯ್ಯ ಪ. ನಾಕಲೋಕಪತಿ ಪಿತನ ಬಲದಿ ಯಮಪಾಶ ಗೆದ್ದ ಸತ್ಯಬೋಧಕಾಣಮ್ಮ ಅ.ಪ. ಹರಿ ಆಚಾರ್ಯರ ಉದರದಿ ಜನಿಸಿದನ್ಯಾರೇ ಪೇಳಮ್ಮಯ್ಯಮಾರನ ಪೋಲುವ ರೂಪದಿಂದ್ಹೊಳಿಯುವ-ನ್ಯಾರೇ ಪೇಳಮ್ಮಯ್ಯಗುರುಮುಖದಿಮಂದಧ್ಯಯನ ಮಾಡುತಮನಮೋಹಗೊಳಿಪ ಬಾಲಕನಾರಮ್ಮ1 ಸುಂದರರೂಪನ ಸತಿಯನಾಮ ಕಳವರಿಸಿ-ನ್ಯಾರೆ ಪೇಳಮ್ಮಯ್ಯಮುದದಿಂದಲಿ ಸತ್ಪುತ್ರರ ಪಡೆದಿಹನ್ಯಾರೆ ಪೇಳಮ್ಮಯ್ಯಮಿಂದಸಂಸಾರದಿ ಇಂದಿರೇಶನ ಭಜಿಸುವಶ್ರೀರಾಮಾರ್ಯ ಕಾಣಮ್ಮ2 ಸತ್ಯಪ್ರೇಮರ ಪ್ರೀತಿಗೆ ಪಾತ್ರನುದಾರೆ ಪೇಳಮ್ಮಯ್ಯತಂತ್ರಿಣಿ ತಲದಲಿ ಆಶ್ರಯಗೊಂಡವನ್ಯಾರೆ ಪೇಳಮ್ಮಯ್ಯಮತ್ತೆ ಜಗದೊಳಿಹ ಮಿಥ್ಯವಾದಿಗಳೆಂಬಾಮತ್ತಗಜಗಳಂಕುಶನಿವನಮ್ಮಾ 3 ಶ್ರವಣಾಖ್ಯಪುರದಿ ಮಾಡಿಹನ್ಯಾರೆ ಪೇಳಮ್ಮಯ್ಯಶೇಷರೂಪದ ದುಷ್ಟದೈತ್ಯನ ಸುಟ್ಟವನ್ಯಾರೆ ಪೇಳಮ್ಮಯ್ಯಶೇಷಗತಿಯ ಮನ ಭೂಸುರ ವೃಂದಕೆನಿಶಿಯಲಿ ರವಿಯನು ತೋರಿದನಮ್ಮ 4 ತಪದ ಪ್ರಭಾವದಿ ಗಂಗೆಯನೊಲಿಸಿಹನ್ಯಾರೆ ಪೇಳಮ್ಮಯ್ಯಗೋಪಿಯ ಮಗನನು ತೀರ್ಥದ ದಡದಲಿ ನಿಲಿಸಿಹನ್ಯಾರೆ ಪೇಳಮ್ಮಯ್ಯಗೋಪರೊಡೆಯ ತಂದೆವರದವಿಠಲನನ್ನುಸತತ ಭಜಿಸುವ ಯತಿವರನೆ 5
--------------
ಸಿರಿಗುರುತಂದೆವರದವಿಠಲರು
ಶ್ರೀಕರ ಅಷ್ಟಾಕ್ಷರ ಮಂತ್ರ ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ ಉತ್ತಮೋತ್ತಮಗುತ್ತ ಮೋತ್ತ ಮೋದೀತ ಚೇತನಾಚೇತನರಿಗುತ್ತಮಾಶ್ರಯನು ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1 ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ ಕ ಎಂದರಾನಂದಶತ ಸುಖಾಂತಸ್ಥ ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2 ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ ನಿಖಿಳ ಐಶ್ವರ್ಯವೀವೆ 3 ಕಂಬು ಅರಿ ಶಂಖನಿಧಿ ಪದ್ಮನಿಧಿ ದಿವ್ಯ ಹಸ್ತಗಳಲಿ ಶೋಭಿತವಾಗುಂಟು ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4 ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ ಇನಗಮಿತದೀಪ್ತ ಆಭರಣ ಜ್ವಲಿಸುತಿವೆ ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಕರಮಾಗಿಹ ಗೋಕುಲದಲಿ ಕರು ಣಾಕರ ಕೃಷ್ಣನು ನೆಲೆಸಿರಲು ಸಿರಿ ತಾ [ಕರೆಯುವ] ಹರ್ಷದೊಳು 1 ಲಾವಣ್ಯಕೆ ಮೋಹಿಸಿ ಮನದಿ ಭಾವಜನಸ್ತ್ರದ ಬಾಧೆಯಿಂದ ಪತಿ ಭಾವದಿ ನೋಡುತ ಭರದಿ 2 ಕಾಮಿಸಿ ಕಾಡಲು ಕಾಕುತ್ಸ್ಥನು ಬಲ ರಾಮ ಸಹಜನವತಾರದಲಿ ಕಾಮಿತವಹದೆನೆ ಕಾಮಿನಿ ರಾಧಾ ನಾಮದಿ ಜನಿಸಿರೆ ಗೋಕುಲದಿ 3 ಒಂದಾನೊಂದಿನನಂದಾದಿಗಳಾ ನಂದಾನ್ವಿತಮತಿವೃತ್ತಿಯಲಿ ಒಂದಾಗಿ ಧರಾವೃಂದಾರಕರನು ವಿಂದಾರಾಧಿಪ ಭಕ್ತಿಯಲಿ 4 ನಂದನದಂತಿಹ ವನದೆಡೆಗೆ ಬಂಧುಗಳೊಂದಿಗೆ ಬಂಡಿಯನೇರಿ ಮು ಕುಂದನ ಧ್ಯಾನಿಸುತಡಿಗಡಿಗೆ 5 ಅಲ್ಲಿಗೆ ಭೂಸುರರೆಲ್ಲ ಬರಲು ಮಿತಿ ಯಿಲ್ಲದೆ ಗೋಧನ ದಾನದಲಿ ಬಲ್ಲಿದ ಭೋಜನದಲ್ಲಿ ದಣಿಸಿ ಸುಖ ದಲ್ಲಿರುತಿರಲಾ ಸಮಯದಲಿ 6 ಅಸ್ತಮಹೀಧರ ಮಸ್ತಕವನು ಸುಜ ನಸ್ತುತ ದಿನಕರನೈದಿರಲು ನಿಸ್ತುಲಮದಿ ಸಮಸ್ತರ ದೃಷ್ಟಿಗಳ ಸ್ತಗೊಳಿಸೆ ಜನ ಭಯಗೊಳಲು7 ನೆಂದು ರಾಧೆಯ ತಾ ನೋಡಿ ಎಂದರೆ ಬಂದಳು ನಗೆಗೂಡಿ 8 ಕಂದ ಬಾರೋ ಗೋವಿಂದ ಬಾ ಯದು ನಂದನ ಬಾ ಕಮಲಾಸನನ ನಂದವ ತೋರುವೆ ಶಶಿವದನಾ 9 ನೋಡಿಸುವೆನು ನೀನೊಲಿದುದನು ಬೇಡ ನಿನ್ನನೆ ಕೂಡಿಹೆನು 10 ರಾಧೆಯ ನುಡಿಗಳನಾದರಿಸುತ ಮಧು ಸೂದನ ತನ್ನಯ ಮನದೊಳಗೆ ಮೋದಚರಿತ್ರನು ಕಾಮಿನಿಗೆ 11 ಮುತ್ತನಿತ್ತು ಬಲು ಮುದ್ದಿಸಿ ಬಾಲಕ ನೆತ್ತಿಕೊಂಡು ಬಲು ಸಡಗರದಿ ನರ್ಥಿಗೆ ಸೊಕ್ಕುವ ಕಾತರದಿ 12 ಕರುಣನಾದೊಡೀಗಲೆ ಬೆರೆದು ಹರುಷದಿ ಬರುತಿರ್ದಳು ನಲಿದು 13
--------------
ವೆಂಕಟವರದಾರ್ಯರು
ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀಕೇಶವ ನಾಮವ ಭಜಿಸುವವರಿಗೆ ಪ ಬೇಕಾದವರೀ ವ್ರತವನಾಚರಿಸೆ ಆ ಕಾಲಾಂತಗೆ ಅಗಣಿತವಾಗಿಹುದು1 ಭಕ್ತನು ರುಕ್ಮಾಂಗದ ಮಹರಾಯನೂ ಮುಕ್ತಿಗೆ ಮಾಡಿದ ಶುಭಕರದಿನವಿದು 2 ಸುಜನರ ಗೋಷ್ಠಿಯೊಳ್ ರಾತ್ರಿಯೊಳಾ ಭುಜಗ ಶಯನನಂ ಭಜಿಸಲ್ಕೂಡಿದ 3 ಕಲಿಯೋಳು ಕಾಣುವ ಅಸ್ಮದ್ದೇಶಿಕ ರೊಲುಮೆಯ ತುಳಶೀ ರಾಮನು ತೋರಿದ 4
--------------
ಚನ್ನಪಟ್ಟಣದ ಅಹೋಬಲದಾಸರು
ಶ್ರೀಗುರುಪ್ರಾಣೇಶದಾಸರಾಯರ ಸ್ತೋತ್ರ ತರುಳನ ಪರಿಪಾಲಿಸು ಜೀಯಾ ಪ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ ಭವಜನಿ ತಾಪದಾದಿ ಸಂ - ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ 1 ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ - ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ- ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ ಅತಿ ದುಷ್ಕøತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ ನಿಮ್ಮನಾ ತುತಿಪೆನೆ ಮತಿಮಂದ2 ಮತಗಳಹಳಿದು ಪ್ರೇಮದಿಂದ ಪೊರೆದು ಪಾತಕಿ ಪಾಮರನೆನ್ನಗೆ ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ- ಪ್ರೇಮದಿ ಕೊಡು ಮುದದಿ 3
--------------
ವರದೇಶವಿಠಲ
ಶ್ರೀಜಗನ್ನಾಥದಾಸರಾಯರಸ್ತೋತ್ರ ದಾಸಾರ್ಯರ ಚರಣ ಕಮಲಕಾನಮಿಪೆ ಶಿರಬಾಗಿ ಬಿನ್ನೈಪೆ ಏಸು ಜನ್ಮದ ದುಷ್ಕøತ ಪರಿಹರಿಪೆ ಕರುಣವನು ಪಡೆದು ಭೂಸುರಜನ್ಮವ ಸಾರ್ಥಕಗೊಳಿಪೆ ಕೃತಕೃತ್ಯನೆಂದೆನಿಪೆ ದೋಷರಾಶಿಗಳ ನಾಶಗೈಸಿ ವಿ ಶೇಷ ಮಹಿಮದಿಂಭೂಷಿತ ಜಗನ್ನಾಥ ಪ ಗಾಂಗೇಯ ವಸನಸಂಜಾತ ಪ್ರಲ್ಹಾದನಭ್ರಾತ ಮತಿಮಾನಸಹ್ಲಾದ ಸುನಾಮಕನೀತ ನರಹರಿಸಂಪ್ರೀತ ದ್ವಿತಿಯ ಶಲ್ಯಾಖ್ಯನೃಪತಿ ವಿಖ್ಯಾತ ಪುರಂದರ ಸುತನೆನಿಸಿದ ದಸ ದ್ಯತಿ ವಾದೇಶ್ವರನ್ಹಿತದಲಿ ವಲಿಸಿದ 1 ನರಸಂಬಂಧಿತ ಪ್ರಾಂತದ ಕ್ಷೇತ್ರದಲಿ ಬÁ್ಯಗವಟದ ಕರಣಿಕ ಜನಿಸಿದ ಬಾಲಾರ್ಕನು ವರದೇಂದ್ರ ಗುರುವರ್ಯರ ಕರುಣದಲಿ ಶಾಸ್ತ್ರಾಖ್ಯಾಗಸದಿ ವರವಸಂತ ಋತತÀರುಣಿ ಕಿರಣದೊಲ್ ಪರಮತಗಳ ಧಿ:ಕರಿಸಿ ಮೆರೆಯುತಿಹ 2 ಮೂರು ಭಾಷಾತ್ಮಕ ವಿದ್ಯಾಧ್ಯಾತ್ಮ ಸಂಪಾದಿಸಲೋಸುಗ ಮಾರಾರಿನಾಮಕದಾಮಹಾತ್ಮರಡಿಯುಗಳನು ಸೇವಿಸಿ ಮೂರು ರೂಪಾತ್ಮಕನ ವಿಙÁ್ಞನಾತ್ಮ ಅಂಶಗಳನು ತೋರಿಪ ಮೂರು ಮೂರು ಮೂರು ಮೂರು ಮೂರು ವಂದುಸಾರವ ಗೃಹಿಸಿದ ಸೂರಿವರಾಗ್ರÀಣಿ 3 ವರದೇಶ ಶಾಸ್ತ್ರಾತ್ಮಕಪಯದಿಂದ ಸಂಪೂರಿತವಾದ ಮರುತಮತ ತತ್ವತರಂಗಗಳಿಂದ ಸಂಶೋಭಿಸುತಿಹ ಶ್ರೀ ಭೂಸುರರನು ಪಾಲಿಪ ಹರಿಯಭಕುತಿಸುರಮಣಿ ತರುವನೀವಪಯ ಶರಧಿಯನಿಪ ಹರಿ 4 ಸೂರ್ಯ ಸದ್ಭುಕುತರೆನಿಸುವ ಶರಣಜನ ಹೃತ್ಸಂತಾಪಹಭಾರ್ಯ ಕಾಮಕ್ರೋಧಾದಿ ಅರಿಷಡ್ವರ್ಗವ ಭರ್ಜಿಪಹರಿ ಶೌರ್ಯ ಸತ್ಕವಿಕುಲವರ್ಯ ವರದೇಶ ವಿಠಲನ ಚರಣಸೇವಕರ ಸುರತರುವಿನ ತೆರಪೊರೆಯುಂತ ಮೆರೆಯುವ 5
--------------
ವರದೇಶವಿಠಲ
ಶ್ರೀನಾಥ ಸಲಹೊ ಸತತ ನಿನ್ನ ಪದ ಧ್ಯಾನಾನಂದವಿತ್ತು ಪ ತಂದೆ ನಿನ್ನನುಗ್ರಹದಿ | ಜಗದೊಳಗೆ ಬಂದೆ ಭೂಸುರ ಜನ್ಮದಿ ಪೊಂದಿ ತ್ವತ್ವದ ಭಜಿಸದೆ ಭವದೊಳಗೆ ಬೆಂದು ಬೆಂಡಾದೆನು ನಾ1 ಪಗೆಯಾರುಖಳರು ಎನ್ನ | ಪಾಶದಲಿ ಬಿಗಿದು ಬಂಧಿನಿ ಎಳೆಯುತ || ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ ಹಗರಣವ ಮಾಡುತಿಹರೋ 2 ಪರಸ್ವತಿಯರ ರೂಪನೋಡಿ | ಮರಳಾಗಿ ಬೆರೆತವಳ ಕ್ರೀಡಿಸುತಲಿ ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ ನರಕಕ್ಕೆ ಗುರಿಯಾದೆನೋ 3 ಧನದಾಪೇಕ್ಷೆಯಿಂದ | ಧನಿಕರ ಮನೆಗ್ಹೋಗಿ ಲಜ್ಜೆ ತ್ಯಜಿಸಿ ಘನದಾತರೆಂದವರನು | ಬಲು ತುತಿಸಿ ದಿನಗಳೆದೆ ಶುನಕನಂತೆ 4 ಹರಿನಿನ್ನವಾಸರದಿ | ಉಪವಾಸ ಇರುಳು ಜಾಗರವ ಜರಿದು ಬರಿದೆ ಕಾಲವ ಕಳೆದೆನೋ ರವಿಸುತಗೆ | ಅರುಹಲು ಬಾಯಿಲ್ಲವೋ 5 ಪವಮಾನ ಕೃತಸುಶಾಸ್ತ್ರ | ಪ್ರವಚನವ ಕಿವಿಗೊಟ್ಟು ಕೇಳಲಿಲ್ಲ ಅವನಿ ದ್ವಿಜರ ಪಾದವ ಸೇವಿಸದೆ ಭಾರ ನಾನಾದೆನೊ 6 ಬಾಯೆಂದು ಕೂಗಿ ಕರೆವೆ | ಸರ್ವೇಶ ಓಯೆಂದು ಬೇಗ ಬಾರೋ || ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ ತೋಯಜಧ್ಯಾನವನಿತ್ತು 7 ಶಿಲೆಯಾದ ಸಲಹಿದ ತೆರದಿಲಿ ತುಳಿದು ಸಲಹಿದ ತೆರದಲಿ ಇಳಿಸುರನ ಮಹತ್ಪಾಪ ಕಳೆದವಗೆ ಸಲೆಮುಕ್ತಿ ಸಲಿಸಿದಂತೆ 8 ಇಂದಿನಾರಭ್ಯವಾಗಿ | ಎನ್ನಿಂದ ನಿಂದ್ಯಕರ್ಮವ ನಡೆಸದೆ ಮಂದರೋದ್ಮರನೆ ನಿನ್ನ |ಸದ್ಭಕ್ತ ವೃಂದದೊಳು ಕೂಡಿಸಯ್ಯ 9 ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ ಕೃಪಣವತ್ಸಲ ಕಾಣೆ ಕೃಪೆಯಿಂದ ಕರಪಿಡಿಯೊ ಕರಿವರದ ಕೌಸ್ತುಭ ಕೃಷ್ಣ 10 ನಿನ್ನ ನಾಮದ ಭೂಸುರ ಕುಲಹೀನ ಕನ್ಯೆಯಳ ಸಂಗ ಮಾಡಿ ನಿನ್ನ ಪರ್ವತ ಮೆಟ್ಟಿಲು ಅವಗೊಲಿದು ನಿನ್ನಾಪ್ತನೆನಿಸಿದಂತೆ 11 ನಿನ್ನೊಲುಮೆ ಪಾತ್ರರಾದ ಗುರು ಜಗನ್ನಾಥಾಖ್ಯ ದಾಸಾರ್ಯರ ಸನ್ನಿಧಾನದಲಿ ಇಪ್ಪ | ಇವನೆಂದು ಮನ್ನಿಸೊ ಮಹಮಹಿನೆ 12 ದುರಿತ ರಾಶಿ | ಪೇಳಲ್ಕೆ ಭೂಮಿಧರಗಳವಲ್ಲವೋ ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ ಶಾಮಸುಂದರ ದಯಾಳು 13
--------------
ಶಾಮಸುಂದರ ವಿಠಲ
ಶ್ರೀನಿವಾಸ ನಿನ್ನ ಪಾದಧ್ಯಾನವ ಪಾಲಿಸಿ ಎನ್ನ ಮಾನಸಾನಂದಿಸೋ ಶತಭಾನುತೇಜನೆ ಪ ಸಾನುರಾಗದಿಂದ ನಿನ್ನ ಧ್ಯಾನಿಪಜನರ ಭವ ಕಾನನಾದಹನ ಚಿತ್ರಭಾನು ದನುಜಾರಿಹರಿ ಅ.ಪ ಇಂದಿರಾರಮಣ ನಿನ್ನ ಸುಂದರ ಚರಣಕೆ ನಾಂ ವಂದನೆಯ ಮಾಡುವೆನಯ್ಯಾ ಇಂದುವದನಾ ಇಂದುಧರ ನುತ ಮುಚುಕುಂದವರದನೆ ಗುಣ ಬಂಧುರಾ ಶ್ರೀ ಪುಲಿಗಿರಿ ಮಂದಿರ ಮಂದರಧರ1 ಇಷ್ಟುದಿನ ನಿನ್ನ ಮನಮುಟ್ಟಿ ಭಜಿಸದೆ ಬಲು ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟ ಫಲದಾಯಕ ತ್ರಿವಿಷ್ಣಪಾದಿಪಾನುಬವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಲೋಕಪತಿ ಪಿನಾಕೆಯನ್ನು ವೃಕನೆಂಬ ಭೀಕರಾಸುರನು ಉರಿಹಸ್ತ ಬೇಡಲು ಆಕಪಾಲಿಯಿತ್ತು ಅವಿವೇಕದಿಂದ ಲೋಡುತಿರೆ ಲೋಕ ಮೋಹಿನಿಯ ರೂಪ ಸ್ವೀಕರಿಸಿ ಶಿವನಕಾಯ್ದೆ3 ಆಡಿಸೋ ನಿನ್ನವರೊಳು ಪಾಡಿಸೋ ನಿನ್ನಯ ಕೀರ್ತಿ ಮೂರ್ತಿ ಬೇಡಿಸದಿರು ಆಡಿಸದೆ ಭವವೆಂಬ ಕಾಡಿನೋಳ್ಕಟಾಕ್ಷದಿಂದ ನೋಡಿ ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ವಾಸುಕಿಶಯನ ಪೀತವಸನ ದಿವ್ಯಭೂಷಣ ವಿ ಭೂಷಿತ ಲಲಿತಶುಭ ವೇಷವಿಪುಲ ಭಾಸಮಾನ ವ್ಯಾಘ್ರಶೈಲಾವಾಸ ಶ್ರೀನಿವಾಸ ಭಕ್ತ ಪೋಷಣ ದುರಿತಗಣ ಶೋಷಣ ಶ್ರೀ ವರದವಿಠಲ5
--------------
ವೆಂಕಟವರದಾರ್ಯರು
ಶ್ರೀನಿವಾಸ-ಶ್ರೀನಿವಾಸ-ದೀನರಕ್ಷಕ ದಾನಿ ನೀನೆಂದು ನಂಬಿದೆ ಪ ಜ್ಞಾನಗಮ್ಯನೆ ವಾಙ್ಮನೋಮಯ ಮಾನಿ ಮಾನಸರಾಜಹಂಸ ಅ.ಪ ಲೋಕಭರಿತ ಶ್ರೀಕಳತ್ರ-ತ್ರಿಕಕುದ್ಧಾಮದಧಿನಾಥ ಶ್ರೀಕಮಲಭವಾದಿವಂದಿತ ಮುಕುತಾಮುಕುತಜನ ಸಂಸೇವಿತ ಅಖಿಳಾಗಮಕೆ ಅತೀತ-ಶ್ರೀಕರಪಲ್ಲವಪೂಜಿತ ಅಖಿಳಾಜಾಂಡದಿ ವ್ಯಾಪ್ತ-ಭಕುತರಗತಿಯಪ್ರದಾತ1 ನಿಗಮವಿತ್ತೆ ನಗವಪೊತ್ತೆ ಬಗೆದು ಬೇರ ನರ- ಮೃಗಾಂಗನೇ ತ್ಯಾಗಿಯೊಳು ಪೋಗಿ ನೃಪರ ನೀಗಿಸಿ ವನವನವಾ ಚರಿಸಿದೆ ಬಗೆಬಗೆ ಆಟದಿ ಬಾಲ್ಯದಿ ಹಗೆಗಳ ಮಡುಹಿದೆ ಕಾರ್ಯದಿ ಆಗಮಕರ್ಥಮೋಹಿಸಿ-ಜಗದೊಳುತುರಗವನೇರ್ದೆ 2 ಅಂತರಾತ್ಮಪರಮಾತ್ಮ ಅನಂತಾನಂತರೂಪಾತ್ಮ ಪ್ರಾಂತಕಾಣದೇ ನಿರಂತರದಿ ನಿಂತು ಸಿರಿ ನಿತ್ಯಮುಕ್ತಳಾದಳೋ ಕಂತುಪಿತ ಎನ್ನಂತರದಿ ನಿಂತಿಹೆ ನಿರಂತರದಿ ಕಾಂತ ಶ್ರೀ ವೆಂಕಟೇಶನೆ-ಅಂತರ್ಬಹಿರದಿ ನಿಂತಿಹ ಪ್ರಭೊ 3 ಅಪ್ರಮೇಯ ಸ್ವಪ್ರಕಾಶ ಅಪ್ರಾಕೃತಗುಣಗಣಾರ್ಣವ ಸ್ವಪ್ರಯೋಜನರಹಿತ ಸತತ ತ್ವತ್ಪ್ರಸಾದದಿಂದ ಜಗವು ಕ್ಷಿಪ್ರದಿ ನೃಪಸಂಸ್ತುತಿಸೆ ವಿಪ್ರನಮನ ಸಂತೈಸಿದೆ ಅಪ್ರತಿಹತಮಹಿಮನು ಸುಪ್ರೀತನು ಜನರ್ಗೆ 4 ಪರಮ ಪುರುಷ ಪೂರ್ಣಾನಂದ ಪರಮಕರುಣಶರಧಿಯೆ ಉರಗಾದ್ರಿವಾಸ ವಿಠ್ಠಲ ಕರಾವಲಂಬನವಿತ್ತು ಸಲಹೆಲೋ ಪರಿಪರಿ ಎನ್ನಪರಾಧ ನೋಳ್ಪರೆ ಭೋ ಜಗದೊಡೆಯ ಕರುಣವು ತೋರದೆ ನೀನಿರೆ ನರಪಶು ನಾನೆಂತು ಬಾಳ್ವೆನೋ5
--------------
ಉರಗಾದ್ರಿವಾಸವಿಠಲದಾಸರು
ಶ್ರೀಭೂತರಾಜರು (ಭಾವೀರುದ್ರರು) ಅಲಘು ಮಹಿಮ ಭಾವೀ | ತ್ರಿನಯನಾಮಲಿನ ಮನವ ಕಳೆಯೋ ಪ ಅಲಘು ಮಹಿಮ ಭಾವೀ ಮರುತಜಲಜ ಪಾದಕ್ಕಳಿಯೆ ಮುಖ್ಯ ಅ.ಪ. ಅಧರ ಕುಸುಮ ಬಂಧೂಕ ಭಾಸ 1 ಚಾಪ ಶರವು ಕರದಿಅದುಭುತಾತ್ಮ ನಾರಾಯಣನವಿಧಿತ ಮಹಿಮನಾಗಿ ನಮಿಪ 2 ಕರ್ಣ ಭೂತ ಮುಖ್ಯಗಣಗಳಿಂದ ಕೂಡಿ ಭೂತಗಣಧೀಶನಾಗಿ ನಾರಾಯಣನ ನಾಮ ಧರಿಸಿ ಮೆರೆವ 3 ಕರ ತ್ರಿಶೂಲಿಮಣಿವೆ ಹರಿಯ ಭಕ್ತ ಮೌಳಿ4 ಸ್ವಾಪ ಮುನ್ನ ಮುಂದೆ ಕುಳಿತುಉಪಾಂಸ್ವನೇಕ ಉಚ್ಚರೀಸಿಗೋಪತಿ ಗುರು ಗೋವಿಂದ ವಿಠಲಸುಪಾದ ಭಜಿಸೆ ಪೋದೆತ್ವರ್ಯ 5
--------------
ಗುರುಗೋವಿಂದವಿಠಲರು
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು