ಒಟ್ಟು 1937 ಕಡೆಗಳಲ್ಲಿ , 104 ದಾಸರು , 1449 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೇದವೇದ್ಯರೂಪ ವಿಶ್ವವ್ಯಾಪಕನೇ (ರಾಮ) ನಾದರೂಪಪ್ರೀತ ವಿಶ್ವರಕ್ಷಕನೇ ರಾಮ ಪ ಆದಿಮಧ್ಯರಹಿತದೇವ ನಾದರಂಜಿತನೇ ರಾಮ | ಮಾಧವಾ ಮಧುಸೂದನ ಹರೇ ಮಧುರಭಾಷಿತನೇ ರಾಮ ಅ.ಪ ಕಮಲಸದನ ಕಮಲಶೋಭಿತ ಕಮಲಜಾಪ್ರಿಯನೇ ಕಮಲಸಂಭವಾದಿ ನಮಿತ ಕಮಲಾರಾಧಿಕನೇರಾಮ 1 ಸನ್ನುತ ಭೃಂಗಕುಂತಳ ಮಾಂಗಿರೀಶ ರಂಗನಾಥನೇ ರಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವೈಕುಂಠಗಿರಿಯವಾಸನ ಮಹಿಮೆ ಸ್ಮರಿಸು ಜೋಕೆಯಿಂದಲಿ ಪೊರೆವ ಶ್ರೀಹರಿಯ ಭಜಿಸು ಪ. ಭಕ್ತ ರಕ್ಷಕ ಹರಿಯು ಭಾಗ್ಯೋದಯದ ಸಿರಿಯು ಮುಕ್ತಿದಾಯಕ ದೇವ ಮುನಿವರದ ಕಾವ ಮುಕ್ತಿಯೋಗ್ಯರ ಸಂಗ ಮುದದಿಂದ ನೀಡೆಂದು ಭಕ್ತಿಯಿಂದಲಿ ಭಜಿಸೆ ಬಂದು ಪೊರೆಯುವನು 1 ಭಾರ ಬೆನ್ನೊಳು ವಹಿಸಿ ಕೋರೆ ಹಲ್ಲನು ತೆರೆದು ಕಂಭದಲಿ ಬಂದ ಮೂರಡಿಯ ಭೂ ಬೇಡಿ ಕ್ಷತ್ರಿಯ ಕುಲವನೆ ಸವರಿ ವೀರ ರಾವಣನಸುವ ಹೀರಿದ ಹರಿಯು 2 ಶ್ರೇಷ್ಠ ಯದುಕುಲದಲ್ಲಿ ಪುಟ್ಟಿ ಬತ್ತಲೆ ಕಲಿಯ ಕುಟ್ಟಿ ಜಗ ರಕ್ಷಿಸಿದ ಸೃಷ್ಟಿಕರ್ತ ದಿಟ್ಟ ಮೂರುತಿ ಸತತ ಕಾಯ್ವ ಶ್ರೀ ಗೋಪಾಲ- ಕೃಷ್ಣವಿಠಲ ಶ್ರೀನಿವಾಸ ಜಗದೊಡೆಯ 3
--------------
ಅಂಬಾಬಾಯಿ
ವೈಕುಂಠನಾಯಕನೂ ಈ ಮಹಾತ್ಮನು ವೈಕುಂಠನಾಯಕನು ಪ. ಪಾಕಶಾಸನತ, ನಾಕಪಾಲಕ ಸರ್ವಲೋಕನಾಯಕ ಭಕ್ತರಕ್ಷಕ ಶ್ರೀಕಳತ್ರ ಸುಪವಿತ್ರನೀತನು ಅ.ಪ. ವೆಂಕಟಗಿರಿಯಿಂದ ಅಂಕನಶೆಟ್ಟಿಪುರಕೆ ಬಿಂಕದಿಂದೈತಂದ ಕಾಂಕ್ಷಿತಾರ್ಥವನೀವನು ಭಕ್ತರಮನಶಂಕೆಯ ಕಳೆಯುವನು ಕಂಕಣಕರ ಬದ್ಧನಾಗಿಹ ಪಂಕಜಾಸನ ಜನಕ ಲಕ್ಷ್ಮೀಕಾಂತ ಸರ್ವಾಂತರ್ಯಾಮಿಯಾಗಿಹ 1 ಬಂದವರೆಲ್ಲ ತಾವು ಬಂದಂತೆ ಮನನೊಂದು ಹಿಂದಿರುಗಿ ಪೋಗುವರೆಂಬ ಮಾತಿಲ್ಲ ಬಂದು ಬಂದವರಿಗೆಲ್ಲ ಬೇಡಿದುದಿತ್ತಾನಂದ ದಿಂದವರೀಯುವ ಕಾಣಿಕೆಗಳ ಚೆಂದದಿಂ ಸುರೇಂದ್ರ ವಂದ್ಯ ಕರೀಂದ್ರಪೂಜಿತ ನಂದ ಕಂದ ಮುಚುಕುಂದ ವರದನು 2 ಅಂಗವಿಹೀನರಿಗಂಗವ ಸರಿಗೈದು ಇಂಗದ ಭೋಗಭಾಗ್ಯಂಗಳ ನೀವನು ಕಂಗೆಟ್ಟಿಹರಕಾಯ್ವನು - ಬೇಡುತ್ತಿಹ ಬಂಜೆಗೆ ಮಕ್ಕಳನು ನೀಡುವನು ತನ್ನ ನಂಬಿದವರ ಕೈಬಿಡನು ಸತ್ಯಾತ್ಮನು ಮಂಗಳಾಂಗ ಯದುಪುಂಗವ ಸದಯಾಪಾಂಗ ಶ್ರೀ ರಂಗ ತುಂಗವಿಕ್ರಮ ಶೇಷಗಿರಿವರ 3
--------------
ನಂಜನಗೂಡು ತಿರುಮಲಾಂಬಾ
ವೈಕುಂಠವಾಸಿ ನಾರಾಯಣಗೆ ನೀಲಕಂಠ ವಿಶ್ವೇಶ್ವರಗೆ ಭಾಳಲೋಚನ ಭವಹಾರಕಗೆ ಮಂಗಲಂ ಜಯ ಮಂಗಲಂ ಪ ವಾಸುಕಿ ಫಣಿವರ ಭೂಷಿತಗೆ ಶೇಷ ಪರೀಯಂಕ ವಾಸನಿಗೆ ಮಂಗಲಂ ಜಯ ಮಂಗಲಂ 1 ಗಿರಿವರ ಬಿರುಳಲಿ ನೆಗಹಿದಗೆ ತರಳೆಗಂಗಾ ಜಲಧಾರನಿಗೆ ಮಂಗಲಂ ಜಯ ಮಂಗಲಂ 2 ಗಜರಾಜನ ಕಾಯ್ದ ಗೋವಿಂದಗೆ ಅಜಪಿತನಾದ ನಾರಾಯಣಗೆ ಮಂಗಲಂ ಜಯ ಮಂಗಲಂ 3 ಶಂಖಚಕ್ರಧರ ಶಂಕರ ಪ್ರಿಯಗೆ ಪಂಕಜಾಂಬಕ ವಿಷ್ಣು ವಲ್ಲಭಗೆ ರಂಗರಕ್ಷಕ ಮಹಾಬಲೇಶ್ವರಗೆ ಮಂಗಲಂ ಜಯ ಮಂಗಲಂ 4
--------------
ಶಾಂತಿಬಾಯಿ
ವೈದೇಹೀರಮಣನೆ ನಮೋ ನಮೋ ಪ. ವಿಶ್ವ ಭದ್ರಾದ್ರೀಶ ಲೀಲಾಮಾನುಷ ಅ.ಪ ಜಯ ರಾಮಚಂದ್ರ ಕೌಶೇಯ ಪೀತವಾಸಶೋಭಿತ 1 ದುಷ್ಟದಾನವಾಂತಕ ನಮೋ ನಮೋ ಶಿಷ್ಟರಕ್ಷಕ, ದೃಷ್ಟಿಸೆನ್ನ ಸೃಷ್ಟಿಕರ್ತನೆ ಇಷ್ಟಾರ್ಥಗಳ ನೀ ಕೊಟ್ಟು ರಕ್ಷಿಸೈ 2 ಶ್ರೀಶೈಲವರದನೇ ನಮೋ ನಮೋ ಶೇಷಶಯನ ಕ್ಲೇಶನಾಶನ ಭೇಷಜಾನನ ಶ್ರೀಶ ಸರ್ವೇಶ ನಿತ್ಯನಿರಂಕುಶ 3
--------------
ನಂಜನಗೂಡು ತಿರುಮಲಾಂಬಾ
ಶಂಕರಾ ಪೊರೆಯಯ್ಯ ನಾ ನಿನ್ನ ಕಿಂಕರ ಪ ಪಂಕಜಾಸನಕುವರ ಮನದ ಶಂಕ ನಾಶಗೈಸಿ ಶೇಷಪ ರ್ಯಂಕಶಯನನ ಪಾದ ಪಂಕಜದೇಕ ಭಕುತಿಯನಿತ್ತು ಸಲಹಯ್ಯಅ.ಪ ನಿಟಿಲನಯನ ಧೂರ್ಜಟಿಯೆ ಸೋಮಧರಾ ಜಟಾಜೂಟನೆ ಕಠಿಣವೆನ್ನಯ ಕುಟಿಲಮತಿಯ ಜಟಿಲಕಳೆದು ನಿಷ್ಕುಟಿಲ ಮನದೊಳು ವಿಠಲಮೂರ್ತಿಯ ಧೇನಿಸಲು ಹೃ ತ್ತಟದಿ ದಿಟಮನ ಕೊಟ್ಟು ರಕ್ಷಿಸಯ್ಯ 1 ಘೋರ ದುರಿತಾಪಹಾರ ತ್ರಿಪುರಹರ ಕರುಣಾಸಮುದ್ರನೆ ನಿರುತ ಶ್ರೀಹರಿಚಾರುಚರಣಸ್ಮರಣೆ ಕರುಣಿಸಿ ಪೊರೆಯೋ ಗುರುವರ ಸುರನದೀಧರ ಪಾರ್ವತೀವರ ಕರಿಗೊರಳ ಕೈಲಾಸಮಂದಿರ2 ಸರ್ಪಭೂಷಣ ಶೂಲಿ ಡಮರುಧರ ಕಂದರ್ಪಹರ ಶಿವ ಸರ್ಪಗಿರಿ ಶ್ರಿ ವೆಂಕಟೇಶಗೆ ಸರ್ವಭಕ್ತಿ ಸಮರ್ಪಿಸಯ್ಯ ಆಪತ್ತುಹರ ಸಂಪತ್ತುಕರ ಶಾರ್ವರೀಕರಧರ ಶುಭಕರ 3 ಶಂಬರಾಂತಕವೈರಿ ಭಸಿತಧರ ಬೆಂಬಿಡದೆ ಸಲಹೊ ಶಂಭು ಶಚಿಪತಿಬಿಂಬ ಗುರುವರ ಸಾಂಬ ಪೊಂಬಸುರಕುವರ ತ್ರ್ಯಂಬಕಾ ತ್ರಿಪುರಾಂತಕ ಶುಕ 4 ಗಿರೀಶ ಸುರವರ ರುಂಡಮಾಲಾಧರ ಕರಿಚರ್ಮಾಂಬರ ನಿರುತ ಹೃದಯಸದನದೊಳನ ವರತ ಉರಗಾದ್ರಿವಾಸ ವಿಠಲನ ಚರಣಸರಸಿಜಮಧುಪ- ನೀ ಸುಖ ಸವಿದು ಸೇವಿಪ ವೈಷ್ಣವಾಗ್ರಣಿ5
--------------
ಉರಗಾದ್ರಿವಾಸವಿಠಲದಾಸರು
ಶತ್ರುಗಳ ಬೇಗ ಜಯಿಸು ಪ. ಶಿಶುವಾದ ಪ್ರಲ್ಹಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ ನಿನ್ನ ತೋರೆಂದು ಹಾಟಕ ಬಂದ ದೈತ್ಯನ ದೇಹದಿಂದ ದೀನ ಬಂಧು ಗೋವಿಂದ 1 ಶತ್ರುಸಂಚಯ ಪಚನ ವಿಭಾವನ ದಾನವಕೂಟ ಮಥನ ಲೋಕಪಾವನ ದಯಕರ ಪಕ್ಷಿಗಮನ ಗೆಲ್ವ ಶಕ್ತಿಕೊಡುವರೆ ಬಲ್ಲನ 2 ಈ ಭೂಮಿಗತವೈರಿಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿ ಲಾಲಿಪರಿಲ್ಲ ಆದರು ಭಯವಿಲ್ಲ ಸೂತ ರಕ್ಷಿಸು ಜಗನ್ನಾಥ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶರಜ ಪಾಹಿಮಾಂ ಪ ಚಿನ್ಮಯ ಪಾಹಿಮಾಂ ಅ.ಪ ಉಮಾ ಕುಮಾರ ಶೋಕ ಮೋಹಾ-ನೀಕದೂರ ಪಾಹಿಮಾಂ - ಜಗದೇಕ ವೀರ ತ್ರಿಲೋಕ ಪೂಜಿತ ಶ್ರೀಕುಮಾರ ಪಾಹಿಮಾಂ 1 ವಿಶ್ವ ಷಟ್‍ಶಿರ ಪಾಹಿಮಾಂ2 ದಾಸ ರಕ್ಷಕ ಪಾಹಿಮಾಂ 3
--------------
ಬೆಳ್ಳೆ ದಾಸಪ್ಪಯ್ಯ
ಶರಣ ರಕ್ಷಕನಹುದೊ ಸಿರಿಯಲೋಲನೆ ಪೂರ್ಣ ಧ್ರುವ ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದ ನೇತ್ರ ಸುರಮುನಿ ಸ್ತೋತ್ರ ಹರಿ ನಿನ್ನ ಚರಿತ್ರ ಪರಮ ಪವಿತ್ರ 1 ವಿದುರ ವಂದಿತ ದೇವ ಬುಧಜನ ಪ್ರಾಣಜೀವ ಯದುಕುಲೋದ್ಭವ ನೀನೆ ಶ್ರೀಮಾಧವ ಸದಾ ಸದ್ಗೈಸುವ ಆದಿ ಕೇಶವ 2 ಅನಂದ ಘನಲೋಲ ನೀನೆ ಸರ್ವಕಾಲ ಅನಾಥರನುಕೂಲ ಶರಣಾಗತ ವತ್ಸಲ ದೀನ ಮಹಿಪತಿ ಸ್ವಾಮಿ ನೀನೆ ಕೃಪಾಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣ ರಕ್ಷಕನಹುದೋ ಶ್ರೀ ಹರಿಯೆ ಶರಣರಕ್ಷಕನೆ ಧ್ರುವ ನಕ್ರ ಗಜೇಂದ್ರಗೆ ವಕ್ರಾಗಿ ತ್ರಿ ವಿಕ್ರಮನೆಂದಂದು ಮೊರೆ ಇಡಲು ಚಕ್ರದಿಂದಲಿ ನೀ ವಕ್ರನೆ ಹರಿಸಿ ಅಕ್ರದಲೊದಗಿ ಕಾಯ್ದವ ನೀನಹುದೊ 1 ತರಳ ಪ್ರಹ್ಲಾದನು ಮೊರೆ ಇಡುವದು ಕೇಳಿ ಭರದಿಂದ ಸ್ಥಂಭದಲುದ್ಭವಿಸಿ ದುರುಳದೈತ್ಯನ ಕರುಳೊನಮಾಲೆಯನ್ನು ಮಾಡಿ ಕರುಣಿಸಿ ಭಕ್ತ ಗೊಲಿದವ ನೀನಹುದೊ 2 ಸೆರಗಪಿಡಿದು ಸೀರೆ ಸೆಳೆವ ಸಮಯದಲಿ ಹರಿಯೆಂದು ದ್ರೌಪದಿ ಮೊರೆ ಇಡಲು ತ್ವರದಿಂದೊದಗಿ ಬಂದು ಪೂರಿಸಿ ವಸ್ತ್ರವ ಧರೆಯೊಳು ಲಜ್ಜೆಗಾಯ್ದವ ನೀನಹುದೊ 3 ಮಂಡಿಸಿರಲು ಕೌರವ ಅರಗಿನ ಮನೆ ಪಾಂಡವರದರೊಳು ಸಿಲ್ಕಿರಲು ಕಂಡು ನೀ ಅದರೊಳು ವಿವರವ ತೋರಿ ಪೊರವಂಡಿಸಿದ ಪ್ರಚಂಡ ನೀನಹುದೊ 4 ಎಸೇಸು ಭಕುತರ ಅವರಸಕ್ಕೊದಗುತ ಲೇಸಾಗಿ ಕಾಯ್ದವ ನೀನಹುದೊ ದಾಸ ಮಹಿಪತಿ ಮನದವಸರಕ್ಕೊದಗುತ ಭಾಸುತಲಿಹ್ಯ ಭಾಸ್ಕರ ಕೋಟಿ ತೇಜ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶರಣಾಗತ ರಕ್ಷಕ ಕರುಣಾಂಬುಧೆ ಪರಿಪಾಲಿಸುವ ಮೊರೆ ಪಂಕಜಾಕ್ಷ ಪೊರೆವುದು ಲೇಸು ನಿರಾಕರಿಸದೆ ಹರಿ ನಿನ್ನ ಚರಣಕಮಲವನು ಸ್ಮರಿಸುತಲಿರುವೆನು ಪ ನಂದನಂದನ ಮುನಿವೃಂದ ವಂದಿತ ರಾಕೇಂದುವದನ ಗೋ ವಿಂದ ಕೃಷ್ಣಾ ಮಂದರಧರ ಮುಚುಕುಂದವರದ ಸಂ- ಕುಂದರದನ ಶ್ರೀ ಮುಕುಂದ ಶೌರಿ ಬಂಧನ ಮೋಚನ ಆಪದ್ಭಾಂಧವ ಶೌರೇ 1 ವೇಣುಗೋಪಾಲ ಪುರಾಣಪುರುಷ ಸುಮ- ಬಾಣಜನಕ ಸಾಮಗಾನ ಲೋಲ ಮಾಧವ ಚತು- ವಿನುತ ವiಹಾನುಭಾವ ಶ್ರೀನಿ- ವಾಸಾಚ್ಯುತಾಶ್ರೀತ ಕಲ್ಪತರು ಚಕ್ರಪಾಣಿ ಪದ್ಮೋದರ ಘೋರರೂಪ ಭಂಜನ ದೇವಾದಿದೇವ ವಿಷ್ವಕ್ಸೇನ ಜನಾರ್ದನ ಶ್ರೀ ವತ್ಸಲಾಂಛನ 2 ಹರಿಸರ್ವೋತ್ತಮ ಮರುತಾಂತರ್ಗತ ಪರಮಾತ್ಮ ಗರುಡವಾಹನ ಶುಭಕರಚರಿತ ಮುರಸೂದನಾನಂತ ಮುಕ್ತಿದಾಯಕ ಜಗದ್ಭರಿತ ಕೇಶವ ಕೌಸ್ತುಭಾಲಂಕೃತ ವರದ ಅಹೋಬಲ ಗಿರಿವಾಸ ವಸುಧೇಶ ಭಾಸುರ ಕೀರ್ತಿಸಾಂದ್ರ 3
--------------
ಹೆನ್ನೆರಂಗದಾಸರು
ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ ಶರಣಾಗತ ಜನ ವರ ರಕ್ಷಾಮಣಿಯೆಂಬ ಬಿರುದಿನಿಂದಲಿ ಮೆರೆವ ಕರುಣಾ ಭರಣ ಕಾಮಿತ ವರಪ್ರದಾಯಕ ಅ.ಪ. ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ ಅನಿಮಿತ್ತ ಬಂಧುವೆಂದು ನಿನ್ನಯ ಪಾದ ವನಜಗಳನು ನಾವಿಂದು ನಂಬಿಹೆವಿನ್ನು ವನಜನಾಭನೇ ನೀ ಬಂದು ಕಾಯಬೇಕೆಂದು ತನುಮನಂಗಳ ನಿನಗೆ ಒಪ್ಪಿಸಿ ಅನುನಯದಿ ಶಿರ ಮಣಿದು ಬೇಡುವೆ ಅನಘ ಅನುಪಮ ಗುಣಗಣಾಂಬುಧಿ ಅನಿಮಿಷೋತ್ತಮ ಅಪ್ರಮೇಯನೆ 1 ಕಾಮಜನಕ ಪೂರ್ಣಕಾಮ ಆಶ್ರಿತ ಜನ ಕಾಮಧೇನುವೆ ಕೋಟಿ ಕಾಮಲಾವಣ್ಯನೆ ಶ್ರೀ ಮನೋಹರ ಗಂಭೀರ ಸುರುಚಿರ ಘನ ಸನ್ನುತ ಮಹಿಮ ಸಾಮಜನರ ಉದ್ಧಾರ ಭಕ್ತ ಮಂದಾರ ಸಾಮಗಾನ ಪ್ರೇಮ ಜಗದಭಿ ರಾಮ ರಾಕ್ಷಸ ಭೀಮ ಮಂಗಳ ನಾಮ ಸುರಮುನಿ ಸ್ತೋಮ ಸನ್ನುತ ಸ್ವಾಮಿದೇವ ಲಲಾಮ ನಮೊ ನಮೊ 2 ಮಾಧವ ಅರ ವಿಂದಲೋಚನ ಪೂರ್ಣಾನಂದ ಸ್ವರೂಪನೆ ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ ವೆಂದು ನಿನ್ನನು ಬಿಡದೆ ಕರಿಗಿರೀಶನೆ ತಂದೆ ಯೆಮ್ಮಯ ಕುಂದುಗಳ ನೀ ನೊಂದನೆಣಿಸದೆ ಬಂದು ಸಲಹುವು ಇಂದು ಕರುಣಾ ಸಿಂಧು ನತಜನ ಬಂಧು ನರಹರಿ3
--------------
ವರಾವಾಣಿರಾಮರಾಯದಾಸರು
ಶರಣಾಗತ ರಕ್ಷಿಸಿ ಸ್ವಾಮಿ ಪೊರೆವುದು ಎನ್ನನು ಹರಿಯೇ ಶರಣಾಗತನೊಳು ನಿರ್ದಯ ಸರಿಯೇ ಕರುಣಾಕರ ಗುಣನಿಧಿಯೇ ಪ ಅಪರಾಧಗಳನು ಕ್ಷಮಿಸಿ ಸ್ವಾಮಿ ಕಾಪಾಡೋ ಮಾಧವನೇ ಅಪಾರಪರ ಮಹಿಮನೇ ಪುರಾಣ ಪುರುಷೋತ್ತಮನೇ 1 ಸಂಕಟಪರಿಹಾರಕನೇ ನಮ್ಮ ವೆಂಕಟ ವಿಠಲನೆ 2 ಸೃಷ್ಟಿಕರ್ತನು ನೀನೆ ಸ್ವಾಮಿ ಅಷ್ಟೈಶ್ವರ್ಯವೂ ನೀನೆ ಶಿಷ್ಟರ ಪಾಲಿಪ ನೀನೆ ದುಷ್ಟರ ಸಂಹಾರಕನೇ 3 ವೇದ ಪುರಾಣವು ನೀನೆ ಮೇಧಿನಿಗಧಿಪತಿ ನೀನೆ ಮಾಧವ ಮಧುಸೂದನನೇ ಆದಿ ಮೂರುತಿ ನೀನೆ 4 ಹನುಮೇಶ ವಿಠಲನೇ ಸ್ವಾಮಿ ಜನನಿ ಜನಕನು ನೀನೆ ಜ್ಞಾನ ಪ್ರದಾಯಕ ನೀನೆ ಘನ ಮುಕ್ತಿಗೊಡೆಯನು ನೀನೆ 5
--------------
ಹನುಮೇಶವಿಠಲ
ಶರಣಾಗತರಕ್ಷಕ ಬೇಗದಿ ಬಂದು ಮನಮಂದಿರದಿ ನಿಲ್ಲೋ ಪ ಈ ಕರೆಕರೆ ಸಂಸಾರಶರಧಿಯೊಳು ನಿಂದೆ ಹರಿಯೆ ನಿಲ್ಲೊಂದರಘಳಿಗೆಯಾದರೂ ಮನದಿಅ.ಪ ತೋಯಜಾಂಬಕ ನಿನ್ನ ನಾನೆಂದಿಗೆ ಕಾಯದೊಳು ಕಾಂಬೆನೊ ಮಾಯಾರಮಣನೆ ನೀ ಮಾಯವ ಹರಿಸಯ್ಯ ಆಯಾಸಗೊಳಿಸದೆ ಕಾಯುವುದೀಗಲೆ 1 ನಾನಾಯೋನಿಗಳಲ್ಲಿ ನಾ ಬರಲಂಜೆನೋ ಶ್ವಾನಸೂಕರ ಜನ್ಮದಿ ನೀನಿಟ್ಟರಾದರು ಶ್ರೀನಿಧಿಯೆ ನಿನ್ನಯ ಸ್ಮ- ರಣೆ ಒಂದಿದ್ದರೆ ನಾ ಧನ್ಯ ಧನ್ಯನೋ2 ಲೋಕಾಲೋಕೋದ್ಧಾರನೆ ನಿನ್ನಾಜ್ಞೆಯಿಂ ನಾಕೇಶ ಮೊದಲಾದ ಪಿ- ನಾಕಿ ಪ್ರಮುಖರು ಅನೇಕ ಕಾರ್ಯವೆಸಗಿ ಶೋಕಪಡಿಸುವರಯ್ಯ 3 ದುರ್ಗಾಶ್ರೀರಮಣ ಎನ್ನ ಸಂಸೃತಿಯೆಲ್ಲ ದುರ್ಗಮವಾಗಿಹುದೊ ಸ್ವರ್ಗ ಅಪ- ವರ್ಗಪ್ರದನೆ ಎನ್ನಯ ಭವ- ದುರ್ಗಕಡಿದು ಸನ್ಮಾರ್ಗ ಕರುಣಿಸೊ 4 ಸ್ವಾಮಿತೀರ್ಥದಿವಾಸ ಶ್ರೀಜಗದೀಶ ಸ್ವಾಮಿ ಶ್ರೀ ವೆಂಕಟೇಶ ಪಾಮರನಾದೆನ್ನ ತಾಮಸ ಹರಿಸಿ ಹೃತ್ಕಮಲದಲಿ ನಿಲ್ಲೊ ಕಮಲಾಪತಿಯೆ ದೇವ 5
--------------
ಉರಗಾದ್ರಿವಾಸವಿಠಲದಾಸರು
ಶರಣು ಭಾರತಿರಮಣ ಶಮಲವರ್ಜೀತ ಚರಣ ಕೆರಗಿ ಬೇಡುವೆ ವರವ ಪಿಡಿಯೆನ್ನ ಕರವಾ ಪ ಇಪ್ಪತ್ತೊಂದು ಸಾವಿರದಾರುನೂರು ಜಪ ತಪ್ಪದೆಲೆ ಸಕಲ ಜೀವರೊಳು ಜಪಿಸಿ ಮುಪ್ಪಿಲ್ಲದ ಜನ ಪದವಿಯನೈದಿ ಭಜಕರಿಗೆ ಸುಪ್ತಿ ಸ್ವಪ್ನವ ಬಿಡಿಸಿ ಮುಕ್ತರನು ಮಾಳ್ಪೆ 1 ಪವಮಾನರಾಯಾ ನೀ ಸಲಹದಿರೆ ಪಾಲಿಸುವ ದಿವಿಜರಿನ್ನುಂಟೇನೋ ಲೋಕದೊಳಗೆ ಯವನರಿಂದಲಿ ಬಂದ ಭಯವ ಪರಿಹರಿಸಿ ನಿ ನ್ನವರ ಸಂತೈಸು ಸರ್ವಕಾಲದಲೀ 2 ಲೋಗರಿಗೆ ಬೇಡಿದಿಷ್ಟಾರ್ಥಗಳ ಕೊಟ್ಟು ಚ ನ್ನಾಗಿ ಸಂತೈಪೆನೆಂದನು ದಿನದಲೀ ಭೋಗಪುರದಲಿ ಬಂದು ನೆಲೆಸಿದೆಯ ನೀ ಪರಮ ಭಾಗವತ ತಿಲಕ ಪಾಲಕ ವೀತಶೋಕ 3 ಭಾನುನಂದನಗೆ ನೀ ಒಲಿದ ಮಾತ್ರದಲಿ ರಘು ಸೂನು ಸಂರಕ್ಷಿಸಿದ ಸುರಪತನಯಾ ವಾನÀರೋತ್ತಮ ವಾಲಿಯನು ಸದೆದ ನಿನ್ನ ದಯ ಕಮಲ ಸಂಭವನ ಪದಕೆ ಯೋಗ್ಯ 4 ಶುಚಿನಾಮಕನೆ ಎನಗೆ ಹರಿಕಥಾ ಶ್ರವಣದಲಿ ರುಚಿಪುಟ್ಟುವಂತೆ ಮಾಡುನುಗಾಲದೀ ಮುಚುಕುಂದ ವರದ ಜಗನ್ನಾಥವಿಠಲನ ಗುಣ ರಚನೆಗೈವ ಸಮರ್ಥ ನೀನೇ ಸುಕೃತಾರ್ಥ 5
--------------
ಜಗನ್ನಾಥದಾಸರು