ಒಟ್ಟು 1912 ಕಡೆಗಳಲ್ಲಿ , 106 ದಾಸರು , 1402 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಲೆ ಬಂದಿಹುದೇ ತಂಗೀಯನ ವ್ವಾಲೆ ಬಂದಿಹುದೆ ಪ. ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ ವಾಲೆ ಅ.ಪ. ಅಂಬುರುಹೋದ್ಭವ ಅಖಿಲ ಸುರಾ ರಂಬರದಲಿ ಸ್ತುತಿಸೆ ಶಂಬರಾಸುರ ಸಂಹರನೈಯ್ಯನ ಹಡಗು ಅಂದು ಮಾರುತನಿಲ್ಲದೆ ಗೋಪಿ ಚಂದನಸಹಿತನಿಲ್ಲೇ ಮಧ್ಯದಿಂದಲೀ ಅಂದದಿ ಮುನಿಗಳ ನಿಂದು ಸ್ತುತಿಸುತಾ ನಂದದಿಂದಾನಂದಕಂದನ ಮುಂದೆ ಕರೆಯೆ ಮುನಿ ದಂದುಗ ಹರಿಸುತ ಬಂದೆನೆಂದು ಇಂಥಾ 1 ಬಂದೆನೆಂದು ತೋರನೆ ಹರಿ ನಿಂದಿರುವನೆ ಬದಿಲಿ ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ ಬಂದ ಭಕ್ತರ ಸೇವಿಸೆಂದು ಬರೆದಿಹ ಬಂಧು ನಾನೆಂದು ತಿಳಿ ಎಂದು ಹೇಳುವತೆರ ಬರಹವ ಇಂದಿರೇಶ ತಾ ಬಂದು ನಿಂದು ಕೈ ಪಿಡಿದ ವಾಲೆ 2 ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ ಶುಭ ಪತ್ರವ ದಾಸಳಾದ ಎನ್ನ ಮನದಾಸೆ ಪೂರೈಸುವ ವಾಲೆ ವಾಸುದೇವನ 3
--------------
ಸರಸ್ವತಿ ಬಾಯಿ
ವಾಸಿಷ್ಠ ಕೃಷ್ಣ ವಿಠಲ | ನೀ ಸಲಹೊ ಇವನಾ ಪ ಮೇಶ ಮಧ್ವೇಶ ನಿನ್ನಡಿಯ | ದಾಸ್ಯವನುಆಶಿಸುವ ಭಕ್ತಗೆ ಪ | ರಾಶರಾತ್ಮಜ ಒಲಿದೂ ಅ.ಪ. ವೇದವ್ಯಾಸನೆ ನಿನ್ನ ಆದರದಿ ಧಾನಿಸುತಮೋದದಲಿ ಶ್ರುತತತ್ವ | ಪಾದಾರ್ಪಣೆನ್ನೇ |ನೀದಯದಿ ಮರೆಯಾಗಿ | ತೋರ್ದೆ ಗುರು ಬಿಂಬವನುವೇದಾಂತ ವೇದ್ಯ ಹರಿ | ಹೃದಯ ಗಹ್ವರದೀ 1 ಕ್ಲೇಶಗಳ ದಹಿಸಿ ಸ | ರ್ವೇಶ ಸದ್ಭೋದಗಳಲೇಸಾಗಿ ಅರುಹುತಲಿ | ಶ್ರೀತ ಕೈ ಪಿಡಿಯೋ |ತೋಷ ಕ್ಲೇಶಂಗಳು ರ | ಮೇಶ ನಿನ್ನಿಂದೆಂಬಭಾಸುರದ ಜ್ಞಾನ ಪ್ರ | ಕಾಶ ಕೊಡು ಇವಗೆ 2 ಮೋದ ಅದ್ವೈತ ಪಾದ ನಂಬಿಹನೋ 3 ಪರಿ ಲೀಲೆಗಳ ತೋರಿ ಇವನಲ್ಲೀಪರಿಹರಿಸೊ ಭವಬಂಧ | ಮರುತಾಂತರಾತ್ಮಕನೆಎರಗಿ ತವ ಪದದಲ್ಲಿ | ಮೊರೆಯ ಬಿದ್ದವಗೇ 4 ಸಾವಧಾನದಿ ಧ್ಯಾನ | ಭಾವ ವೃದ್ಧಿಯಗೈಸಿದೇವ ತವ ರೂಪವನು | ಆವ ಹೃದ್ಗುಹಡೀಓವಿ ಕಾಂಬುವ ಹದನ | ನೀವೊಲಿದು ಪಾಲಿಪುದುಗೋವುಗಳ ಪಾಲ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಾಸುದೇವ ಶ್ರೀ ಗೋವಿಂದ ವರದ ಶ್ರೀ ಗೋವಿಂದ 1 ಪಾಲಕ ಗೋವಿಂದ ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ 2 ಮಾಧವ ಗೋವಿಂದ ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ 3 ಭೂಮಂಡಲನಾಯಕ ಗೋವಿಂದ ಕರದಂಡದಳಾಕ್ಷ ಶ್ರೀ ಗೋವಿಂದ 4 ನಮೋ ನಮೋ ಗೋವಿಂದ ಮತಂಗವರದ ಶ್ರೀ ಗೋವಿಂದ 5 ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ 6 ಶ್ರೀ ಭಾರ್ಗವರಾಮ ಶ್ರೀ ಗೋವಿಂದ ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ 7 ನೂತನ ಲೀಲ ಶ್ರೀ ಗೋವಿಂದ ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ 8 ಕರುಣಾಲಯದೇವ ಶ್ರೀ ಗೋವಿಂದ ಕುಚೇಲವರದ ಶ್ರೀ ಗೋವಿಂದ 9 ಬುದ್ಧಾಕೃತಿಧರ ಗೋವಿಂದ ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ 10 ಸುರರಾಜಾಧಿರಾಜ ಶ್ರೀ ಗೋವಿಂದ ಪ್ರೌಢ ಶ್ರೀ ಗೋವಿಂದ 11 ಶ್ರೀ ಕಪ್ಪುಗೊರಳಪ್ರಿಯ ಗೋವಿಂದ ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ 12 ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ ಲಕ್ಷ್ಮೀನಾರಾಯಣ ಹರಿ ಗೋವಿಂದ 13
--------------
ತುಪಾಕಿ ವೆಂಕಟರಮಣಾಚಾರ್ಯ
ವಾಸುದೇವ ಶ್ರೀ ಗೋವಿಂದ ವರದ ಶ್ರೀ ಗೋವಿಂದ 1 ಪಾಲಕ ಗೋವಿಂದ ಸಾಗರಗೃಹ ಶರಣಾಗತವಾಂಛಿತ ಭಾಗವತಪ್ರಿಯ ಗೋವಿಂದ 2 ಮಾಧವ ಗೋವಿಂದ ಪ್ರೇರಣ ಕರ್ತುವಿಚಾರಣ ಭಕ್ತೋದ್ಧಾರಣ ಶ್ರೀಹರಿ ಗೋವಿಂದ3 ಭೂಮಂಡಲನಾಯಕ ಗೋವಿಂದ ಕರದಂಡದಳಾಕ್ಷ ಶ್ರೀ ಗೋವಿಂದ4 ನಮೋ ನಮೋ ಗೋವಿಂದ ಮತಂಗವರದ ಶ್ರೀ ಗೋವಿಂದ 5 ಶಕ್ರಾರ್ಚಿತ ವಟುವಾಕೃತಿಧರ ಕರಚಕ್ರಾಂಕಿತ ಹರಿ ಗೋವಿಂದ ಅಕ್ರೂರವರದ ಅಖಿಳಪ್ರದ ತ್ರಿವಿಕ್ರಮರಾಯ ಶ್ರೀ ಗೋವಿಂದ 6 ಉಗ್ರಕುಠಾರ ನೃಪಾಗ್ರಣಿವಿಪಿ£ ಶ್ರೀ ಭಾರ್ಗವರಾಮ ಶ್ರೀ ಗೋವಿಂದ ಅಗ್ರಗಣ್ಯ ಶುಭವಿಗ್ರಹ ನೃಪಕುಲವರ್ಗವಿದಾರಣ ಗೋವಿಂದ7 ನೂತನ ಲೀಲ ಶ್ರೀ ಗೋವಿಂದ ವಾತಜವರದ ಸಾಕೇತಾಧಿಕ ನಿರ್ಭೀತ ಶ್ರೀ ರಾಮ ಗೋವಿಂದ 8 ಕರುಣಾಲಯದೇವ ಶ್ರೀ ಗೋವಿಂದ ಕುಚೇಲವರದ ಶ್ರೀ ಗೋವಿಂದ9 ಬುದ್ಧಾಕೃತಿಧರ ಗೋವಿಂದ ಶುದ್ಧಾತ್ಮಕ ಭವವೈದ್ಯ ವಿಬುಧಾರಾದ್ಯಚರಣ ಶ್ರೀ ಗೋವಿಂದ 10 ಸುರರಾಜಾಧಿರಾಜ ಶ್ರೀ ಗೋವಿಂದ ಪ್ರೌಢ ಶ್ರೀ ಗೋವಿಂದ11 ಶ್ರೀ ಕಪ್ಪುಗೊರಳಪ್ರಿಯ ಗೋವಿಂದ ಸರ್ಪಾಚಲದಿಂದೊಪ್ಪಿಲ್ಲಿಯೆ ನೆಲಸಿಪ್ಪ ತಿಮ್ಮಪ್ಪ ಶ್ರೀ ಗೋವಿಂದ 12 ತಾನೆ ಭಕ್ತರ ಸನ್ಮಾನದಿ ಸಲಹಲು ತಾನೆತಂದ ಶ್ರೀ ಗೋವಿಂದ ಲಕ್ಷ್ಮೀನಾರಾಯಣ ಹರಿ ಗೋವಿಂದ13
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಸುದೇವ ವಾರಿಜಾಕ್ಷನಾ ಸ್ತುತಿಸು ಮನದಿ ಪ ಸಾಸಿರನಾಮದೊಡೆಯ ಸಕಲಲೋಕಕರ್ತನಾದ ಸುಜನ ಪೋಷಕ ಭಕ್ತವಿಲಾಸ ಅ.ಪ ಪಂಕಜೋದರ ಪರಮ ಪಾವನ ಸರ್ವಜಗವ ಬಿಂಕದಿಂದ ಪೊರೆವ ದೇವನಾ ಶಂಕೆಯಿಲ್ಲದ ದನುಜ ಮರ್ದನನಾದ ತನ್ನ ಕಿಂಕರರÀನು ಬಿಡದೆ ಕಾಯುವಾ ವೆಂಕಟಾದ್ರಿ----ದ ವೇಣುನಾದದಲಿ ಬುಧವಂದ್ಯ ಶಂಕರಾದಿ ದೇವ ದೇವ ಶರಧಿಶಯನ ಶಾಶ್ವತನಾದ 1 -----ಶ್ವ ರೂಪನಾ ಎಂದು ಎಂದಾನಂದ ದಿಂದ ಅನುದಿನ ಚಂದದಿಂದ ---ಸನಾ |----ಭವ ಬಂಧಕವನೆ ಪರಿಹರಿಸುವನಾ ಕಂದ ಕೂಗಲು ಕಂಭದಿಂದಾ ಬಂದ ನಾರಸಿಂಹನ ಮೂರ್ತಿ 2 ----------ಮಹಾನುಭಾವ ಕಂಡ ಮುನಿಗಳಂತರ್ಭಾವನಾ ಕುಂಡಲೀಶÀ ಭೂಷಣ ಪ್ರೀಯನಾಕರ ಘನಾ ಕೋದಂಡಧರ ಶ್ರೀರಾಮನಾದನಾ ಪುಂಡಲೀಕ ವರದಹರಿ-----ತನಾದ ವೇದವೇದ್ಯ ಅಂಡಜನ--------ಹರಿ 'ಹೊನ್ನಯ್ಯ ವಿಠ್ಠಲ’ ನಾದ 3
--------------
ಹೆನ್ನೆರಂಗದಾಸರು
ವಾಸುದೇವನ ಪುರಕೆ ತೆರಳಿದಾರು |ಶ್ರೀಶನಾ ಪ್ರಿಯ ಗುರು ಪ್ರಾಣೇಶ ದಾಸಾರ್ಯ ಪ ಮೂರ್ತಿ ಧ್ಯಾನಮಾಡೀ ತತ್ವ |ಮಾನಿಗಳೊಳೊಂಮ್ಮಿಂದೊಮ್ಮೆ ಆನಂದದಿಂದಲೀ 1 ಹರಿಯೆ ಸರ್ವೋತ್ತಮಾ ತದ್ರಾಣಿ ಶಿರಿಬೊಮ್ಮ |ಮರುತ ದೇವರೆ ಗುರುವು, ತಾರತಮ್ಯ ||ವರಪಂಚಭೇದ ಜ್ಞಾನವನರಿತು ಮನದಿ ಹರಿ |ಪುರದೊಳಿಹ ಪರಮ ಭಕ್ತರ ಕಾಣಬೇಕೆನುತ 2 ಮೋಕ್ಷರೌದ್ರೀ ಅಬ್ಧಮಾಘದರ್ಶಾ ಪೂರ್ವಭಾದ್ಧರಾ |ನಕ್ಷತ್ರ ಸೋಮವಾರದಿದ್ದವ ದ್ವಿತಿಯ ಯಾಮದೀ |ಲಕ್ಷಿ ಇಟ್ಟೂ ಲಯದ ಚಿಂತನೆಯ ಗೈಯುತಲಿ |ಪಕ್ಷಿವಾಹನ ಶ್ರೀಶಪ್ರಾಣೇಶ ವಿಠಲೆನುತ 3
--------------
ಶ್ರೀಶಪ್ರಾಣೇಶವಿಠಲರು
ವಾಸುದೇವನನಾ ಶ್ರೈಸದಿಹ ಉಪಾಸನ್ಯಾತಕೆ ಧ್ಯಾಸ ಬಲಿಯದಿಹ ಮಿಗಿಲಭ್ಯಾಸವ್ಯಾತಕೆ ಧ್ರುವ ಹೃದಯ ಶುದ್ಧವಾಗದೆ ಉದಯಸ್ನಾನವ್ಯಾತಕೆ ಬದಿಯಲೀಹ್ಯ ವಸ್ತುಗಾಣದ ಜ್ಞಾನವ್ಯಾತಕೆ ಉದರ ಕುದಿಯು ಶಾಂತ ಹೊಂದದ ಸಾಧನ್ಯಾತಕೆ ಬುಧರ ಸೇವೆಗೊದಗದೀಹ ಸ್ವಧನವ್ಯಾತಕೆ 1 ಭಾವ ನೆಲಿಯುಗೊಳ್ಳ ದೀಹ್ಯ ಭಕುತಿದ್ಯಾತಕೆ ಕಾವನಯ್ಯನ ಕಾಣದೀಹ್ಯ ಯುಕತದ್ಯಾತಕೆ ದೇವದೇವನ ಸೇವೆಗಲ್ಲದ ಶಕುತ್ಯದ್ಯಾತಕೆ ಹ್ಯಾವ ಹೆಮ್ಮೆ ಅಳಿಯದೀಹ್ಯ ವಿರುಕಿತ್ಯಾತಕೆ 2 ತತ್ವ ತಿಳಿಯದಿಹದೀ ವಿದ್ವತ್ವವ್ಯಾತಕೆ ಸತ್ವಗುಣದ ಲಾಚರಿಸದಿಹ್ಯ ಕವಿತ್ಯವ್ಯಾತಕೆ ಚಿತ್ತಶುದ್ಧವಾಗದಿಹ ಮಹತ್ವವ್ಯಾತಕೆ ವಿತ್ತ ಆಶೆಯು ಅಳಿಯದಿಹ ಸಿದ್ಧತ್ವವ್ಯಾತಕೆ 3 ನೀತಿಮಾರ್ಗವರಿಯದೀ ಹ ರೀತ್ಯದ್ಯಾತಕೆ ಮಾತುಮಿತಿಗಳಿಲ್ಲದವನು ಧಾತುವ್ಯಾತಕೆ ಅಮೃತ ಊಟವ್ಯಾತಕೆ ಜ್ಯೋತಿ ತನ್ನೊಳರಿಯದಲೆ ಉತ್ತಮದ್ಯಾತಕೆ 4 ನಿತ್ಯ ಶ್ರವಣವ್ಯಾತಕೆ ನೆನವು ನೆಲೆಯಾಗೊಳ್ಳದಿಹ ಮನನವ್ಯಾತಕೆ ತನುವಿನಲ್ಲಿ ಘನವು ಕಾಣದನುಭವ್ಯಾತಕೆ ದೀನಮಹಿಪತಿಸ್ವಾಮಿಗಾಣದ ಜನಮವ್ಯಾತಕೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವಯನ್ನ ಸಲಹೋ ವಾರಿಜಾಸನ ಈಶವಾಸವಾರ್ಚಿತ ಚರಣ ವನಜೋದರ ಭಾಸುರಾಂಗ ಕೋಟಿ ಪ್ರಭಾಕರ ಪ್ರಕಾಶ ಮಂದಹಾಸ ಕಮಲಾಚಲನಿವಾಸ ಶ್ರೀ ಜಗದೀಶ ಪ ತಾಪಸೋತ್ತಮ ಸತಿಗೆ ಕೋಪದಿಂದ ಪಾಷಾಣರೂಪವಾಗಿ ಬಿಟ್ಡೆನುತ ಶಾಪಕೊಡಲು ಕೋಪನಾಮಣಿ ಬಲು ಪ್ರಲಾಪಿಸುತ ಮನದಿ ನಿಷ್ಪಾಪರರ ನುಡಿಯಂತೆ ಧರಿಯಲಿಬಿದ್ದಿರಲು ಪಾದ ಸ್ಪರ್ಶಿಸಲಾಕ್ಷಣ ಸೀತಾಪತಿಯ ಸೇವೆಯಿಂದ ಸುಂದರಿಯಾದಳು ತ್ವರದಿ 1 ಪಾಪಗಳು ಮಾಡಿದವನಂತ್ಯ ಕಾಲದಲಿ ಸುತನ ನಾರಗೆಂದು ಕರಿಯೇ ಗತಿ ತೋರಿದಿ ಹಿತದ ಲಾಮರಾಮರೆಂಬ ನಿನ್ನ ಹರುಷದಲಿ ಪೊರೆದೆ ಕ್ಷಿತಿ ನಾಥ ಹರಿ ಮಹೋನ್ನತ ಚರಿತನೆ ಪತಿತ ಪಾವನ ಬಿರುದು ಪರಮಾತ್ಮ ನಿನಗಿರಲು ಸ್ತುತಿಸುವೆನು ಗೋವಿಂದ ಶುಭಕರ ಶ್ರೀ ಮುಕುಂದ 2 ಶರಧಿ ಗಂಭೀರ ಹಾಟಕಾಂಬರ ಶೋಭಿತ ಪುರುಷೋತ್ತಮಾನಂತ ಮುರವೈರಿ ಮುರಲೀರವ ವಿನೋದ ಗರುಡಗಮನ `ವರ ಹೆನ್ನೆಪುರನಿಲಯ' ಪರಮಪಾವನ ನೃಹರೆ ಉರಗೇಂದ್ರಶಯನ ಮಂದರಧರ ಕೃಪಾಂಬುಧೆ3
--------------
ಹೆನ್ನೆರಂಗದಾಸರು
ವಿಘ್ನೇಶ ಪ್ರಿಯ ವಿಠಲ | ಸದ್ಗುಣಾರ್ಣವನೇ ಪ ದುರಿತ | ಉದ್ಧರಿಸೊ ಇವನಾ ಅ.ಪ. ಮೂಲ ಕಾರಣ ಜಗಕೆ | ಪಾಲಾಬ್ಧಿಶಯ ನಿನ್ನ ಲೀಲೆಗಳ ತೋರುತ್ತ | ಸಲಹೊ ಇವನಾಕೀಲಾಲ ಜಾಸನುತ | ಮಾಲೋಲ ಶ್ರೀ ಹರಿಯೆವ್ಯಾಳ್ಯ ವ್ಯಾಳ್ಯಕೆ ಪಾಪ | ಜಾಲಗಳ ಹರಿಸೋ 1 ಆಪ್ತ ಸತಿಸುತರಲ್ಲಿ | ವ್ಯಾಪ್ತ ನಿಹ ಹರಿಯೆಂದುಸೂಕ್ತೋಪಚಾರಗಳ | ಪ್ರಾಪ್ತಿಗೈಸುತಲೀ |ಮೌಕ್ತಿಕೋ | ಪಾಯವೇ | ದೋಕ್ತಸಮನಿಸುತಕೀರ್ತಿಕೊಡಿಸಿವಗೆ ಶ್ರೀ | ಕಾಂತ ಮೂರುತಿಯೇ2 ಪಾಂಚ ಭೌತಿಕ ದೇಹ | ಪಂಚತ್ವ ಪಡೆವುದನೆಸಂಚಿಂತನೆಯ ಕೊಟ್ಟು | ಪಂಚ ಪಂಚಾತ್ಮಾಮುಂಚೆ ತಿಳಿಸಿವಗೆ ಸ | ತ್ಪಂಚ ಭೇದ ಜ್ಞಾನವಾಂಛಿತಾರ್ಥದನಾಗೊ | ಅಂಚೆವಹಪಿತನೇ 3 ನಂದ ಮುನಿ ಮತದ ಮಕ | ರಂದ ಉಣಿಸುತ ಇವಗೆಸಂದೇಹ ಕಳೆದು ಆ | ನಂದಗಳ ನೀಯೋಇಂದಿರಾರಾಧ್ಯ ಪದ | ಮಂದಾಕಿನೀ ಜನಕಕಂದನನು ಕಾಪಾಡು | ಯೆಂದು ಪ್ರಾರ್ಥಿಸುವೇ 4 ಕಾಲ | ಯಾವ ಸಮಯದಲಿರಲಿದೇವತವ ಸಂಸ್ಮರಣೆ | ಭಾವದಲಿ ಮಾಳ್ವಾಭಾವ ಪಾಲಿಸುತಿವಗೆ | ನೀವೊಲಿಯ ಬೇಕೆಂದುದೇವ ಪ್ರಾರ್ಥಿಪೆ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವಿಘ್ನೇಶಾ - ಪಾಲಿಸೊ - ಎನ್ನ - ವಿಘ್ನೇಶಾ ಪ ವಿಘ್ನೇಶ ಪಾಲಿಸೊ ಯೆನ್ನಾ | ದೋಷಭಗ್ನವ ಗೈಸಯ್ಯ ಮುನ್ನಾ | ಆಹಲಗ್ನವಾಗಲಿ ಯೆನ್ನ ಮನ ಆದೀಂದ್ರಿಯಗಳುಯಜ್ಞೇಶ ಶ್ರೀಹರಿ ಪದದ್ವಯ ವನಜದಿ ಅ.ಪ. ಶಿರಿವ್ಯಾಸ ಹೃದ್ಗತ ಅರ್ಥಾ | ನೆರೆಅರಿತು ಲಿಖೀಸಿದೆ ಗ್ರಂಥಾ | ನೋಡುಕರುಣಾಳು ಹರಿಕೃಪಾ ಪಾತ್ರಾ | ಬಾಗಿಶರಣೆಂಬೆ ತಿಳಿಸ್ಯದರರ್ಥಾ | ಅಹತಾರಕಾಂತಕನನುಜ | ವೀರ ವೈಷ್ಣವ ನಿನ್ನಪರಮಾನುಗ್ರಹವನ್ನ | ಕರುಣಿಸಿ ಕಾಯೆನ್ನ 1 ಚಾರುದೇಷ್ಣನ ನಾಮದಲ್ಲೀ | ಅವತಾರ ಮಾಡಿದೆ ರುಕ್ಮಿಣೀಲಿ | ಸಿರಿಅರಸನಾಜ್ಞೆಯ ಪೊತ್ತು ಅಲ್ಲೀ | ದೈತ್ಯದುರುಳರ ತರಿದ್ಯೋಧುರದಲ್ಲೀ | ಅಹಧರೆಯ ಭಾರವ ನಿಳುಹಿ | ಮೆರೆದಂಥ ಗುರುವರಪರಮ ಕಾರುಣ್ಯದಿ | ಹರಿಸೆನ್ನ ಭವತಾಪ 2 ಶೇಷಶತ ದೇವೋತ್ತಮಾ | ಬಾಪುಶ್ರೀಶನ ನಾಭಿಯೆ ಧಾಮಾ | ವಿಶ್ವೋಪಾಸಕ ಖೇಶ ನಿಸ್ಸೀಮಾ | ಪ್ರಾಣಾವೇಶಯುತನೆ ಗುಣಧಾಮಾ | ಅಹಮೂಷಕ ವರವಾಹ ಭೇಶ ಗರ್ವಹರಶ್ರೀಶನ್ನ ಹೃದಯಾವ | ಕಾಶದಲಿ ತೋರೊ 3 ಪರಿ | ಶುದ್ಧ ಭಕ್ತಿಯನಿತ್ತು 8 ಸಿರಿ ರಮಣನಾ | ಗುರು ಗೋವಿಂದ ವಿಠಲಾಭಿಧನ್ನಾ | ನಿಲ್ಲಿಸಿಅವಿರತವನ ಧ್ಯಾನವನ್ನಾ | ಆಹಗೈವಂಥ ಸೌಭಾಗ್ಯ | ಪಾಲಿಸೊ ವಿಘ್ನೇಶಶ್ರೀವರನಂಘ್ರಿ ಸರೋಜ | ಭೃಂಗನೆ ಕರುಣೀ 5
--------------
ಗುರುಗೋವಿಂದವಿಠಲರು
ವಿಜಯ ದಾಸರ ಭಜಿಸಿರೋ | ಸುಜನರೆಲ್ಲ ನೀವೂ ಪ ವಿಜಯ ದಾಸರ ಭಜಿಸೇ | ಕುಜನ ಮರ್ದನ ನಮ್ಮವಿಜಯ ವಿಠಲ ತಾನೇ | ನಿಜವ ತೋರುವ ಮನದೀ ಅ.ಪ. ಮುನ್ನ ಸುರಲೀಲಾ ನೆನಿಸಿ ತಾ |ಜನಿಸಿದ ತ್ರೇತಾಯುಗದಿ |ವನಧಿಜೆ ರಮಣ ಶ್ರೀ | ಹನುವ ಸೇವಿತನಾದಶ್ರೀನಿವಾಸನ ಚರಣ | ವನಜವ ಸೇವಿಸಿದಾ 1 ಸಕಲ ಸದ್ಗುಣ ಆಕರಾ |ನಿಖಿಲ ಲೋಕದ ಧಾರಕಾ |ಪಾಕಶಾಸನ ಪೂಜ್ಯ | ಗೋಕುಲರೊಡೆಯನನಿಕಂಪಾನೆನಿಸಿ ಜನಿಸಿ | ಕೃಷ್ಣನ್ನ ಪೂಜಿಸಿದ 2 ಸುರ ಪುರ ಮುನಿ ನಾರದಾ |ವರಕಲಿಯಲ್ಲಿ ಜನಿಸೇ |ತುರುಕರುವಾಗಿ ಅವರಾ | ಚರಣವ ಸೇವಿಸಿದಮರಳಿ ಅವರ ಪುತ್ರಾ | ಗುರುಮಧ್ವಪತಿ ಭೃಗುವಾ 3 ಪದಪಂಚ ಲಕ್ಷ ಗ್ರಂಥಕೇ |ಪಾದವೇ ನ್ಯೂನವಿರಲೂ | ಪದಪದ್ಯ ಸುಳ್ಹಾದಿಯಲಿ |ಪಾದ ಪೂರ್ತಿಯ ಮಾಡೆಮೋದದಲುದಿಸಿದಾ | ಬುಧನು ದಾಸಪ್ಪ ನೆನಿಸೀ 4 ಪರಮ ಕಾರುಣ್ಯ ಗುರುವೇ |ಕರವ ಪಿಡೀರಿ ಎನ್ನಾ |ಮರುತಾಂತಾರಾತ್ಮಾ ಗುರು | ಗೋವಿಂದ ವಿಠ್ಠಲನಚರಣವ ತೋರಿಸೀ | ಕರುಣದಿ ಪೋಷಿಸಿ5
--------------
ಗುರುಗೋವಿಂದವಿಠಲರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು
ವಿಜಯರಾಯ | ಗುರು | ವಿಜಯರಾಯ ಪ ವಿಜಯರಾಯ | ಗುರು | ವಿಜಯರಾಯ ಅ.ಪ. ಎರಡನೆ ಯುಗದೊಳು | ವಿ | ಸುರಲೀಲ ಕಪಿಯಾದ್ನೊ |ವಿ|ಹರಿಕಾರ್ಯಕನುವಾಗಿ | ವಿ | ಹರಿಕರುಣ ಪಾತ್ರನೆ | ವಿ | 1 ಭಂಜನ ಪಾದ | ವಿ | ಸುಕಮಲವ ಸೇವಿಸೆ | ವಿ |ಪ್ರಕಟಿ ಯಾದವರಲ್ಲಿ | ವಿ | ನಿಕಂಪಾನೆನಿಸೀದೆ | ವಿ | 2 ಪುರಂದರ ದಾಸರೋಳ್ ತುರುಕರು ನೀನಾಗಿ | ವಿ | ಹರಿಚರಿತೆ ಕೇಳಿದೆ | ವಿ |3 ಪರ ವಿದ್ಯಾರ್ಜಿಸಿದ್ಯೊ | ವಿ | 4| ಗುರು ವಾಜ್ಞದಿ ಮತ್ತೆ | ವಿ | ತಿರಿಪಾದ ಪೂರೈಸೆ ವಿ |ವರ ಭೂಸುರನಾಗಿ | ವಿ | ಹರಿಚರಿತೆ ಪೇಳಿದೆ | ವಿ | 5 ವತ್ಸರ ಮಾಸ | ವಿ |ಎರಡು ಐದನೆ ದಿನ | ವಿ | ಗುರುವಾರ ಪ್ರಹರದಿ | ವಿ | 6 ವರಯೋಗ ಮಾರ್ಗದಿ | ವಿ | ಗುರು ಗೋವಿಂದ ವಿಠಲನ | ವಿ |ಚರಣಾಬ್ಜ ಸೇರುತ | ವಿ | ಮೆರೆವೆ ಭಕ್ತರ ಮನದಿ | ವಿ |7
--------------
ಗುರುಗೋವಿಂದವಿಠಲರು
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ ವನಚರ ನಗಧರ ಅವನಿಯ ಉದ್ಧಾರ ಕಾನನ ವೇಗದಿ ಭು- ವನ ದಾನದ ನೆವನನು ಮಾಡಿ ಗಂಗೆಯ ಹ - ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1 ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ ಬಾಲೆಯರ ಬಾಲರ ಬಿಡದೆ ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ ಸುಲಲಿತಾ ಭಾರ್ಗವ ವಿಜಯವಿಠ್ಠಲ2 ಶತಮಖರಿಪು ಲೋಕಪಿತನೊರವಿನಿಂದಲಿ ಖತಿ ಸಕಲರಿಗೆ ನೀವು ತರಿದಿರಲು ಪತಿತಪಾವನ ರಾಮ ಅತಿ ವೇಗ ದನುಜನ ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3 ಬಕಮುಖ ದನುಜರ ಹಕ್ಕಲಗೊಳಿಸಿ ಬಲು ಯುಕುತಿಯಿಂದಲಿ ಭಕುತರ ಪೊರದೆ ವಿಕಸಿತ ಕಮಲನಯನ ಕಂಜನಾಭನೆ ಸಕಲ ಸುರರ ಪಾಲ ವಿಜಯವಿಠ್ಠಲಾ 4 ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ ರುಕ್ಮಿಣಿ ಪತಿಯಾದಾ ಚಕ್ರಪಾಣಿ ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5 ಘನವಾದ ವಿಶ್ವರೂಪವ ತೋರಿದೆ ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ ವನಜ ಸಂಭವನಯ್ಯ ವಿಜಯವಿಠ್ಠಲಾ 6 ವನಿತೆಯರ ವ್ರತ ಭಂಗವ ಮಾಡಿ ದಾನವರ ಮೋಹಿಸಿದೆಯೊ ಪವನನೊಡಿಯಾ ಉನುಮತ ಜನ ಕುಲ ಸನುಮತ ಶಾಸ್ತ್ರವ ವ- ದನದಲಿ ಮೆದ್ದಿಯೊ ವಿಜಯವಿಠ್ಠಲಾ 7 ರಜೋತಮ ಗುಣವನು ಭುಂಜಿಸುತ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ ಸುಜನಪಾಲ ನೀನು ವದಗಿ ವಾಜಿಯನೇರಿ ಭಜನಗೈಸಿದ ವೇಗ ವಿಜಯವಿಠ್ಠಲಾ 8 ಗೋಕುಲದಲಿ ಅನೇಕ ಲೀಲೆಯ ತೋರಿ ಬೇಕಾದ ವರ ಪುಂಡರೀಕಗಿತ್ತೆ ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
--------------
ವಿಜಯದಾಸ
ವಿಠ್ಠಲ ವಿಮಲಶೀಲ ಬಾಲಗೋಪಾಲ ದಿಟ್ಟ ಮೂರುತಿ ಶ್ರೀಲೋಲ ಪ ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ ಯದುವಂಶೋದ್ಭವ ಕೇಶವ ಹೇ ಏಕಮೇವ ಮಧುವೈರಿ ಮಹಾವೈಭವ ಸದಮರಾನಂದ ಸ್ವಭಾವ ಮತ್ಕುಲ ದೈವ ಇನ ಬಾಂಧವ ವಿಧಿನದಿಪಿತ ನಾರದ ಮುನಿ ಸನ್ನುತ ವೈರಿ ಸದಮಲಗಾತುರ ಪದೆ ಪದೆಗೆ ಸಂಪದವಿಯ ಬಯಸುವ ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ1 ನಿತ್ಯ ಪ್ರಭಾವ ಪತಿತಪಾವನ ಸುರ ಜೀವ ಅತಿಶಯ ಲೀಲಾಮಾನವ ನರಕಂಠೀರವ ಚ್ಯುತಿ ಪೂರಾನಾದಿ ಗುರುಗೋವ ರತಿಪತಿಪಿತ ಶತಕ್ರತು ಸುತ ಸಾರಥಿ ಪಥ ಹಿತವಾಗಿ ತೋರೊ ಮಾ- ರುತ ಮತ ಶ್ರಿತಜನ ಚತುರರ ಸತತ ಸಂ - ದಿತಿಸುತ ಮಥನ 2 ಶರಣು ಶರಣು ಸರ್ವೇಶ ಇಟ್ಟಿಗೆವಾಸ ದುರುಳರ ಸಂಗ ವಿನಾಶ ಪರಮ ಪುರುಷ ವಿಲಾಸ ನಿರವಕಾಶ ವರಪ್ರದ ಪೂರ್ಣಪ್ರಕಾಶ ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ 3
--------------
ವಿಜಯದಾಸ