ಒಟ್ಟು 2131 ಕಡೆಗಳಲ್ಲಿ , 113 ದಾಸರು , 1427 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾ‌ಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗ ಭಾಗವತ ಜನಪ್ರಿಯ ಪ ಮಧ್ವಮತಪಾರಾವಾರ | ಶುದ್ಧಪೂರ್ಣ ಸುಧಾಕರ ಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ 1 ಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ 2 ತುಂಗಾಭದ್ರಾ ಸುತೀರದಿ |ಶೃಂಗಾರ ಸದ್ವøಂದಾವನದಿ ಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ 3 ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ | ಪರಮೋದಾರ ಪರಿಮಳಾರ್ಯ | ತರಳನೆಂದು ಕರುಣಿಸಯ್ಯ 4 ಶಾಮಸುಂದರ ಭಕ್ತಾಗ್ರಣಿ | ಭೂಮಿಯೊಳು ನಿನಗಾರಣೆ | ಕಾಮಿತಾರ್ಥ ಚಿಂತಾಮಣಿ | ಸ್ವಾಮಿ ಶ್ರೀ ವ್ಯಾಸ ಸನೌನಿ 5
--------------
ಶಾಮಸುಂದರ ವಿಠಲ
ರಾಘವೇಂದ್ರ ತೀರ್ಥರು ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ ದ್ಗುರುವರ ರಾ‌ಘವೇಂದ್ರ ಚರಣ ಕಮಲಯುಗ ಮೊರೆಹೊಕ್ಕವರ ಮನದ ಹರಕೆಯ ನಿರುತ ಈವೆ ನೀ ಕಾವೆ ಪ ರಾಘವೇಂದ್ರ ಗುರುವೆ ನೀ ಗತಿ ಎಂದನು ರಾಗದಿಂದಲಿ ಭಜಿಪ ಭಾಗವತರ ದುರಿತೌಘಗಳಳಿದು ಚ ನ್ನಾಗಿ ಸಂತೈಸುವೆ ನೀ ಸನ್ಮೌನಿ 1 ಸುಧೀಂದ್ರ ಯತಿಕರ ಪದುಮ ಸಂಭವ ಮಧು ವದ ಪಾದಾಂಬುಜ ಮಧುಪಾ ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2 ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನಮಂತ್ರ ಸದನನಿಲಯ ಜಿತ ಮದನ ಶ್ರೀ ಜಗನ್ನಾಥ ವಿಠಲದೂತ 3
--------------
ಜಗನ್ನಾಥದಾಸರು
ರಾಘವೇಂದ್ರ ಸ್ವಾಮಿಗಳು ಅಂತರಂಗದಿ ಹರುಷವಾಂತೆವೈ ಗುರುವೆ ಪ ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು | ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ || ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ | ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1 ಧಾರುಣೀಸುರರೆಲ್ಲ ಧೀರಯತಿವರ ನಿನಗೆ | ಚಾರುವಿಭವದಿ ಕವಚ ಧಾರಣೆಯ ಗೈಸೆ || ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ | ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2 ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು| ಮಂದಹಾಸದಲವರ ಸೇವೆಯನು ಕೊಂಡೆ || ಇಂದು ಬೃಂದಾವನದಿ ನಿಂದು ದರ್ಶನವಿತ್ತೆ | ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3 ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ | ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ || ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ | ಎಡರುಗಳ ಪರಿಹರಿಸೊ ಗುರುರಾಘವೇಂದ್ರ4 ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ | ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ || ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ | ಕರುಣದಲಿ ತೋರೀಗ ಶ್ರೀಶಕೇಶವನ5
--------------
ಶ್ರೀಶ ಕೇಶವದಾಸರು
ರಾಜೀವದಳನೇತ್ರ ರಾಮಚಂದ್ರನೆ ಶುಭ- ನಾಮಧೇಯನೆ ನಿನಗಾನಮಿಸುವೆನು ಪ ರಾಮರಾಕ್ಷಸಕುಲ ಭಯಂಕರ ರಾಮದಶರಥ ಪುತ್ರನೆ ವರ ಸಾಮಗಾನ ವಿಲೋಲ ಶ್ರೀವರ ರಾಮ ಭರತ ಶತ್ರುಘ್ನ ಪಾಲಕ ಅ.ಪ ಸುರರೆಲ್ಲ ನೆರೆದು ಋಷಿವರರೆಲ್ಲ ಒಂದಾಗಿ ವರ ಕ್ಷೀರಾಂಬುಧಿಯ ಸಾರುತ ವೇಗದಿ ಪರಮಾತ್ಮ ನಿನ ಕಂಡು ಪರಿಪರಿ ಸ್ಮರಿಸುತ ನೆರೆದರು ದೇವ ಗಂಧರ್ವ ನಾರದರೆಲ್ಲ ಗರುಡ ಗಮನನೆ ಉರಗಶಯನನೆ ಪರಮ ಪುರುಷನೆ ಪುಣ್ಯಚರಿತನೆ ತ್ವರದಿ ಎಮ್ಮಯ ಮೊರೆಯ ಕೇಳೆಂದು ಭರದಿ ಪ್ರಾರ್ಥನೆ ಮಾಡುತಿಹರು 1 ಖೂಳ ದೈತ್ಯರು ನಮ್ಮ ಬಾಳಗೊಡರೊ ದೇವ ಭಾಳ ವ್ಯಾಕುಲರಾಗಿ ದು:ಖಿಪೆವು ಕೇಳಿ ತಡಮಾಡದೆ ಪಾಲಿಸಿ ಸಲಹಯ್ಯ ಶ್ರೀಲೋಲ ಶ್ರೀವರ ಶ್ರೀವತ್ಸಲಾಂಛನ ಶ್ರೀಶ ಶ್ರೀ ಭೂದೇವಿ ರಮಣನೆ ಮಾತುಳಾಂತಕ ಮದನಜನಕನೆ ವಾಸುದೇವನೆ ಭಜಿಪ ಭಕ್ತರ ಸೋಸಿನಲಿ ರಕ್ಷಿಸುತ ಪೊರೆಯುವೆ 2 ಭಕ್ತವತ್ಸಲ ಸ್ವಾಮಿ ಭಕ್ತರ ಸುರಧೇನು ಯುಕ್ತ ಮಾತುಗಳಾಡಿ ಸಂತಯಿಸಿ ಸತ್ಯ ಸಂಕಲ್ಪನು ಮತ್ತವರನು ಕಳುಹಿ ಸತ್ಯಸಂಧನ ದಶರಥನುದರದಿ ಪುಟ್ಟಿ ಮತ್ತೆ ವಿಶ್ವಾಮಿತ್ರ ಬರಲು ಅರ್ಥಿಯಲಿ ಯಾಗವನೆ ನಡೆಸಲು ಸುತ್ತಿ ಬರುವ ಸುರರನೆ ಸದೆದು ಮತ್ತೆ ಯಾಗ ನಿರ್ವಿಘ್ನ ಮಾಡಿದ 3 ಸೀತಾಸ್ವಯಂವರಕ್ಕಾಗಿ ಬರುತಿರಲಾಗವರು ಗೌತಮ ಸತಿಯ ಶಾಪಹರಿಸಿ ಪಾತಕಿ ತಾಟಕಿಯನು ಕೊಂದು ಹರುಷದಿ ನಿ- ರ್ಭೀತನಾಗಿ ಮಿಥಿಲಾಪುರಕೆ ಸೇರಲು ಬಂದು ಆತ ಲಕ್ಷ್ಮಣನೊಡನೆ ಶಿವಧನು ನೀತಿಯಿಂದೆತ್ತುತಲಿ ಸೀತೆಯು ಪ್ರೀತಿಯಲಿ ವನಮಾಲೆ ಹಾಕಲು ಆಕೆಯ ಕೈಪಿಡಿದ ರಾಮನೆ 4 ರಾಮಲಕ್ಷ್ಮಣ ಭರತ ಶತ್ರುಘ್ನರಿಗೆ ಲಗ್ನ ನೇಮದಿಂದಲಿ ಮಾಡಿ ಕಳುಹಲಾಗ ಸಾಮಜವರ ಅಯೋಧ್ಯಾಪುರದಿ ಭಕ್ತ- ಸ್ತೋಮವನೆರಹಿ ರಾಜ್ಯಾಭಿಷೇಕವ ನಡಸೆ ಆ ಮಹಾಮುನಿ ಸ್ತೋಮ ಸುರಗಣ ರಾಮನಿಗೆ ಪಟ್ಟವೆನುತ ಹರುಷಿಸೆ ಆ ಮಹಾಕೈಕೆ ವರವ ಬೇಡುತ ರಾಮನಿಗೆ ವನವಾಸವೆನಲು 5 ವನವನ ಚರಿಸುತ ಘನರಕ್ಕಸರ ಕೊಂದು ವನಜಾಕ್ಷಿ ಮಾಯಾಮೃಗವೆ ಬೇಡಲು ವನಮೃಗ ಬೆನ್ನಟ್ಟಿ ತರುವೆನೆನುತ ಪೋಗಿ ಬಣಗು ರಾವಣ ಸೀತಾಹರಣವ ಮಾಡಲು ಕುರುಹು ಕಾಣದೆ ಸೀತೆಯ ವನವನದಿ ಚರಿಸುವ ಸಮಯದಲಿ ಕಪಿ ವರರ ಸೈನ್ಯವ ಕಳುಹಿ ಮುದ್ರಿಕೆ ಇತ್ತು ಜನಕ ಜಾತೆಯ ನೋಡಿ ಬರಲು 6 ಕಡಲ ಕಟ್ಟುತ ಸೈನ್ಯ ನಡಿಸಿ ಯುದ್ಧವ ಮಾಡೆ ಬಿಡದೆ ರಾವಣ ಸಹಿತೆಲ್ಲರನು ಕೊಂದು ಕಡು ಭಕ್ತನಿಗೆ ಲಂಕಾಪುರದಲಿ ಪಟ್ಟವ ಕಟ್ಟಿ ಮಡದಿ ಸಹಿತ ಪುಷ್ಪಕವನೇರಿ ಬರುತಿರೆ ಸಡಗರದಿ ಹನುಮಂತ ಭರತಗೆ ಒಡೆಯ ಬರುತಿಹನೆಂದು ಪೇಳಲು ಕಡುಹರುಷದಿ ಅಯೋಧ್ಯೆಯನಾಳಿದ ಕಡಲೊಡೆಯ ಕಮಲನಾಭ ವಿಠ್ಠಲನೆ 7 ಬಂದ ಶ್ರೀರಾಮಚಂದ್ರ ಭಾಗವತರ ಕೂಡಿಇಂದಿರೆ ಜಾನಕಿ ಸೌಮಿತ್ರಿ ಸಹಿತದಿ
--------------
ನಿಡಗುರುಕಿ ಜೀವೂಬಾಯಿ
ರಾಮಚಂದ್ರನೇ ರಘುಕುಲೋತ್ತಮನೇ ಕಾಮಿತ ಫಲದಾಯಕನೇ ಏಳೈ ಬೇಗನೇ ಪ ಜಾನಕಿ ದೇವಿಯು ಪನ್ನೀರ ತುಂಬಿದ ಚಿನ್ನದ ಕಲಶವನು ಧರಿಸಿ ಹರಿ ನಿನ್ನಯ ಸನ್ನಿಧಿಯಲ್ಲೇ ನಿಂತಿಹಳು ಇನ್ನಾದರು ಮುಖವನು ತೊಳೆಯಲೇಳೊ ಅ.ಪ. ದುಷ್ಟ ರಾವಣನ ಕುಟ್ಟಿ ಕೆಡಹಿದ ಸೃಷ್ಟೀಶನೇ ಏಳೋ ಕಷ್ಟಾಗಿರುವುದು ಯುದ್ಧದಿ ನಿನಗೆ ದಯಾಳೋ ಪಟ್ಟವನೇರಲು ಇಟ್ಟಿಹುದು ಮುಹೂರ್ತವ ಇಂದಿನ ದಿನದೊಳು ಕೆಂಪಾಯಿತು ಮೂಡಲೊಳು ಅಷ್ಟೈಶ್ವರ್ಯದಿ ಪಟ್ಟಕ ಸಿಂಗರಿಸಿಟ್ಟು ವಶಿಷ್ಠಾದಿಗಳು ವಿಶಿಷ್ಟರು ನೋಡುತ ಕುಳಿತಿಹರೋ 1
--------------
ಹನುಮೇಶವಿಠಲ
ರಾಮಲಿಂಗ ಶಿವಶಂಕರ ಪಾರ್ವತಿರಮಣಾ ನಿನಗೆ ನಮೊ ನಮೊ ಪರಾಮನಾಮ ಪ್ರಿಯ ರಾಮೇಶ್ವರ ತವಚರಣಕಮಲಕೆ ನಮೊ ನಮೊ ಅ.ಪಗಜಚರ್ಮಾಂಬರ ಭುಜಗಭೂಷಣತ್ರಿಜಗ ವಂದ್ಯತೇ ನಮೊ ನಮೊಭಜಕಾಮರ ಕುಜ ಕುಜನಭಂಜನಾ'ಜಯಸಾರಥಿಸಖ ನಮೊ ನಮೊ 1ನೀಲಕಂಠ ತ್ರಿಶೂಲ ಡಮರು ಧರಫಾಲನಯನತೇ ನಮೋ ನಮೋಪ್ರಳಯಕರ್ತ ಕೈಲಾಸವಾಸ ಶ್ರೀಶೈಲಾಧಿಪತೆ ನಮೋ ನಮೋ 2ಕಾಶಿ 'ಶ್ವೇಶ್ವರ ಕೇದಾರೇಶ್ವರಮಹಾಬಲೇಶ್ವರ ನಮೋ ನಮೋದ್ವಾದಶ ಜೋತಿರ್ಲಿಂಗಾಂತರ್ಗತಉಮಾಮಹೇಶ್ವರ ನಮೋ ನಮೋ 3ಕೃಷ್ಣವೇಣಿ ತಟ ಚಿಕ್ಕಗಲಗಲಿವಾಸರಾಮೇಶ್ವರ ನಮೋ ನಮೋಮೃತ್ಯುಂಜಯ ಭೂಪತಿ'ಠಲಪ್ರಿಯಚಂದ್ರಮೌಳಿ ತೇ ನಮೋ ನಮೋ 4ಪಾರ್ವತಿ ದೇ'
--------------
ಭೂಪತಿ ವಿಠಲರು
ರಾಮಾ ನಿನ್ನ್ಹ್ಹೊರತನ್ಯರ ಕಾಣೆ ಪೊರೆ ನೀನೆನ್ನಾಣೇ ಶ್ರೀರಾಮಾ ಪ ಕಾಮಾಂತಕ ತನ್ನ ಭಾಮೆಗೊರೆದ ಶ್ರೀ ರಾಮತಾರಕಮಂತ್ರವೆ ಗತಿ ಲೋಕಕೆ ರಾಮಾಅ.ಪ ಮತಿವಂತ ದಶರಥ ಕೌಸಲ್ಯೆಯರ ಸುತನಾಗ್ಯವತರಿಸಿ ಅತಿ ಬಾಲ್ಯದಿ ಮುನಿಯೊಡನಡವಿಗೆ ನಡೆದು ಕಡು ದುರುಳೆಯಸದೆದು ಮತಿಹೀನ ರಕ್ಕಸರುಪಟಳವಳಿದು ಮುನಿಪತಿ ಮಖ ಬೆಳೆದು ಪತಿಸುತಸಖಹಿತ ಜನಪತಿ ಜೀವಿತ ಪಥದಾದರ್ಶವ ಜಗತಿಗೆ ತೋರಿದೆ1 ಮುನಿಗೌತಮಸತಿ ತಾ ಶಿಲೆಯಂತಿರಲು ಪದರಜದಿಂದುದ್ಧರಿಸಿ ಜಾಹ್ನವಿ ಚರಿತೆಯ ಕೇಳುತ ನಲಿದು ಅನುಜಾತನ ಬೆರೆದು ಜನನಾಥನ ಜನಕನ ಮಿಥಿಲೆಗೆ ನಡೆದು ಹರಧನುವನುಪಡೆದು ಅನುಪಮವೆನಿಪದ ನಡುವೊಳೆ ಖಂಡಿಸಿ ಜನಕಸುತೆಯ ಕರಕಮಲವ ಪಿಡಿದೆ 2 ಪರಶುಹಸ್ತರು ಮಾರ್ಗದಿ ಎದುರಾಗಿ ಅಂಜಿಸೆ ಬೆರಗಾಗಿ ಕರದಲ್ಲಾಟಿಕೆಯೊಲು ಧನುವದಗ್ರಹಿಸಿ ಕ್ಷಣದಲ್ಲುಪಹರಿಸಿ ಜನಕೆ ಹಿರಿಯರಿಗೆ ದಶರಥನಿಗೆ ಸುರನರರೆಲ್ಲರು ಪರಮಾನಂದದೊ ಳಿರುತಿರೆ ವಸಿದೆ ಸುದತಿಯೊಡನೆ ರಘುರಾಮ3 ಹಿಂದೆ ನಾ ಬಹುಜನ್ಮಗಳಲಿ ಬಂದು ನೊಂದೆನು ಈ ಭವದಿ ನಿನ್ನಲಿ ಬಂದು ನಿಂದೆ ಗತಿಯೆಂದು ಸಂದೇಹವಿಲ್ಲ ನೀನೇ ಗುಣಸಿಂಧು ಜಗಕಾಪದ್ಬಂಧು ತಂದೆ ನೀನಿಂದೆನ್ನ ಬಂಧನ ಬಿಡಿಸದೆ ಕೊಂದೆಯಾದರೆ ಕುಂದದು ನಿನಗಪಯಶ 4 ಆನಂದಮಯ ನೀನಾನಂದದಲ್ಲಿದ್ದೆ ಆಶ್ಚರ್ಯವದೇಳು ಆನಂದವನಂದು ಕುಂದದಲಿತ್ತೆ ಜಗಕತಿಶಯವೇಳು ಸಾನಂದದೊಳಿದ್ದರು ತವಸನ್ನಿಧಿಬಲದಿ ಅತಿಶಯಮತ್ತೇಳು ನ್ಹೊಂದಿಸಿ ಪೊರೆ ರಘುರಾಮವಿಠಲ 5
--------------
ರಘುರಾಮವಿಠಲದಾಸರು
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ರುಕುಮಾಯಿ ಮನೋಹರಾ ಪ ಮೃಕಂಡು ಸುತ ಪ್ರಿಯಾಖಂಡ ತೇಜ ಅ.ಪ ಇಷ್ಟಭಕುತ ಪ್ರೀತಿಯಿಂದ ನಿನಗೆ ಕೊಟ್ಟ ಇಟ್ಟಿಗೆ ಮೇಲೆ ನೆಲಸಿರುವ ದೇವ 1 ಮರೆತಾದರು ಸಂಸ್ಮರಿಸುವಜನರಘ ಪರಿಹರಿಸುವೆನೆಂಬ ಬಿರುದು ಕಟ್ಟ್ಟಿಹ 2 ದೇವ ಗುರುರಾಮ ವಿಠಲನೆಲಸಿದೆ 3
--------------
ಗುರುರಾಮವಿಠಲ
ರುದ್ರಕುಮಾರನ ಚರಣಕ್ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸು - ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ಧವಾಗಿ ಕೊಡು ಮತಿಯ 1 ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?) ಕಾಲದಿ ಕಮಲಾಕ್ಷಿಯನು ಆಲಯದೊಳಗಿಟ್ಟಾದರದಿಂದ ಪೂಜಿಸೆ ಬೇಡಿದಭೀಷ್ಟ ನೀಡುವಳು 2 ಇರುತಿರಲೊಂದು ಪಟ್ಟಣದಲ್ಲಿ ರಾಜನು ತನಯರಿಲ್ಲದ ಕಾರಣವು ವಿವಹದುತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳಾತನಾಯುಧವ 3 ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ ತಟ್ಟನೆ ದಾಟಿ ನಡೆದನು 4 ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು ನೀನೀಗ ದಾಟಿ ಪೋಗುವರೆ ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು ತಾಳಿದ ಪರಮ ಹರುಷವನು 5 ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ- ನಿದ್ದ ವಾರ್ತೆಗಳ ಹೇಳಿದಳು ಮುತ್ತಿಲು ತುಂಬ್ಹೊನ್ನು ಕೊಡುವೆ 6 ಹುಡುಕುತ ಬಂದಳು ಕಡೆಯ ಬಜಾರಕ್ಕೆ ಬಡವ ಬ್ರಾಹ್ಮಣನ ಮಂದಿರದಿ ಮಡದಿಗೆ ಮೂರು ತಿಂಗಳು ಗರ್ಭವಾಗಿದೆ ಕÀಡೆಹಾಯ್ಸಲೆನ್ನ ಕರೆಸೆಂದ್ಲು 7 ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು ಏಳು ತಿಂಗಳು ಹೂವ ಮುಡಿಸಿ ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ ಬಂತಾಗ ನವಮಾಸಗಳು 8 ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ ಕಟ್ಟಿ ಕಣ್ಣುಗಳ ನಿಚ್ಚಣಿಕೆ ಹತ್ತಿ ಇಳಿದು ಹಡೆದಳ ಗಂಡುಕುಮಾರನ ಎತ್ತಿಕೊಂಡೊಯ್ದಳಾಕ್ಷಣವೆ 9 ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ ಸೊಲ್ಲು ಕೇಳುತಲೆ ತಲ್ಲಣಿಸಿ ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ- ದಲ್ಲಿ ನೇಮವ ನಡೆಸಿದಳು 10 ಜಾತಕ ಬರೆಸಿ ಸಕ್ಕರೆ ಸಗಟದಿಂದ್ಹಂಚಿ ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ ಇಟ್ಟು ಭೋಜನವ ಮಾಡಿಸಿದ 11 ನಾಮಕರಣ ಜಾವಳ ಜುಟ್ಟು ಉಪÀನಯನ ಪ್ರೇಮದಿಂದ್ವಿದ್ಯವ ಕಲಿಸಿ ಸೋಮನಂದದಿ ಹೊರಗ್ಹೊರಟು ತ- ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12 ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ ಕಟ್ಟಿದ ಗೋವು ಕಾಣದಲೆ ವತ್ಸದ ಕಾಲು ತುಳಿಯಲಾಗ ಅದು ಬಾಯಿ ಬಿಟ್ಟೊದರಿತು ಭಯದಿಂದ 13 ಅಮ್ಮ ನೀ ಬಾರೆ ತಮ್ಮಮ್ಮನರಿಯದವ ನಮ್ಮನು ಬಲ್ಲನೆ ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು ತಮ್ಮಿ ್ಹರಿಯರನು ಕೇಳಿದನು 14 ಮಂದಾಕಿನಿಯ ಸ್ನಾನವ ಮಾಡಿ ಬಂದರೆ ಸಂದೇಹ ಪರಿಹಾರವಾಗುವುದು ಹಾ- ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ ಗಂಗಾಯಾತ್ರೆಗೆ ತೆರಳಿದನು 15 ನಡೆದು ಬಂದನು ನಡುಮಾರ್ಗದಿ ಪಟ್ಟಣ ಹಡೆದ ಮನೆಯ ಬಾಗಿಲಲ್ಲಿ ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ ನುಡಿದು ಪವಡಿಸಿದ ತಾನಲ್ಲಿ 16 ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ ಒಳಗಿಂದ ಬಂದಳು ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17 ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ ಬದಿಯಲ್ಲಿ ಬದುಕಿದ್ದ ಶಿಶುವು ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ ಅಧಿಕ ಸಂತೋಷವಾಗಿ ಹೊರಟು 18 ಭಾಗೀರಥಿಯ ಸ್ನಾನವಮಾಡಿ ತಾನು ಪ್ರ- ಯಾಗಕೆ ನಡೆತರಲು ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ- ನಾಗ ಕಂಡನು ಚತುರ್ಹಸ್ತ 19 ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ- ಕುಲದಿಂದ ಕೇಳಿದನು ಸಾಕಿದವರು ಹಡೆದವರುಂಟು ನಿನಗೆಂದ್ವಿ- ವೇಕಬುದ್ಧಿ ಅವರು ಹೇಳಿದರು 20 ಗೊತ್ತಿಲೆ ಬಂದನು ಪಟ್ಟಣದೊಳಗೊಂಡು ಹೆತ್ತರಂದಿನದ (?) ಮಂದಿರದಿ ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ ಮತ್ತಾಗ ಬಂದಳು ಶೆಟವಿ 21 ಚೊಚ್ಚಿಲ ಮಗನ ದಾಟಲು ನಿನ್ನ ಶಿರವು ಬಿಚ್ಚಿ ಸಾಸ್ರೊ ್ಹೀಳಾಗೋದೆನಲು ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ ಮಿತ್ರ್ಯಾದ ಪಾಪಿ ಎಂದೆನುತ 22 ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು ಪುತ್ರರು ಉಳುದÀರಂತಿಹರು
--------------
ಹರಪನಹಳ್ಳಿಭೀಮವ್ವ
ರುದ್ರದೇವರು ಕರುಣ ಬಾರದೇ ನಿನಗೆ ಅಕಟಕಟಪಾರ್ವತೀ ಧೊರೆಯೇ ಕಾಳಿಯ ಮರಿಯೇ ಪ ತರುಳನಾ ತರುಳಿಯ ಭವದೊಳಗೆ ಬಲು ದಿವಸ ಬಹು ವ್ಯಾಧಿಯಲಿ ನೊಂದು ಬಾಯ್ತೆರದು ಮೊರೆಯಿಡುವುದಕಂಡು 1 ಸಾರ ಚರಣಕ್ಕೆ ಬಿದ್ದಿಹನೆಂದು ಉದಾಸಿಸದೆ ಸಲಹೋ ಕರುಣೀ 2 ಏಸೇಸು ಜನುಮದೊಳು ದಾಸ ನಾನಿನಗಯ್ಯ ಈಶ ನೀನೆಂದು ಮರೆಪೊಕ್ಕೆ ಜೀಯ್ಯಾ 3 ಅಭಯ ನೀನಿತ್ತು ಭಯ ಪಾಲಿಸದಿರೆ ಗತಿ ಯಾರೋ ಎನಗೆ ಇಂದ್ರಾದ್ಯಮರ ಗಣಗಳಿಗೆ ದಾತನೆನಿಪ ಗುರು-ತಂದೆವರದಗೋಪಾಲವಿಠಲನ ದೂತಾ 4
--------------
ಗುರುತಂದೆವರದಗೋಪಾಲವಿಠಲರು
ರುದ್ರದೇವರು ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-ಧವನ ತೋರಿಸಯ್ಯ ಗುರುಕುಲೋತ್ತುಂಗಪ. ಅರ್ಚಿಸಿದವರಿಗಭೀಷ್ಟವ ಕೊಡುವಹೆಚ್ಚಿನ ಅಘಗಳ ಬೇಗನೆ ತರಿವದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-ಮ್ಮಚ್ಚುತಗಲ್ಲದ ಅಸುರರ ಬಡಿವ 1 ಮಾರನ ಗೆದ್ದ ಮನೋಹರಮೂರ್ತಿಸಾರ ಸಜ್ಜನರಿಗೆ ಸುರ ಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ 2 ಚೆನ್ನ ಪ್ರಸನ್ನ ಶ್ರೀ ಹಯವದನನ್ನಅನುದಿನ ನೆನೆವಂತೆ ಮಾಡೊ ನೀ ಎನ್ನಅನ್ಯರನರಿಯೆನೊ ಗುರುವೆಂಬೆ ನಿನ್ನಇನ್ನಾದರು ಹರಿಯ ತೋರೊ ಮುಕ್ಕಣ್ಣ 3
--------------
ವಾದಿರಾಜ
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಲಕ್ಷುಮಿ ನಾರಾಯಣ ಸಂರಕ್ಷಿಸು ಎನ್ನನು ಬೇಗ ಪ. ಪಕ್ಷ್ಮ(?)ಗಳಕ್ಷಿಗಳನು ಕಾವಂದದೊಳಕ್ಷಯ ನಿಧಿಯ ಸ- ಮಕ್ಷದಿ ತೋರುತ ಅ.ಪ. ಅರ್ಭಕನಾ ಮೋರೆ ಕೇಳಿ ಕರ್ಬುರ ಚರ್ಮನ ಸೀಳಿ ಗರ್ಭೀತ ಕರುಳ ಮಹಾರ್ಭಟದಿಂ ತೆಗದುರ್ಬಿಗೆ ಬೀರಿದ ನಿರ್ಭಯಕಾರಿ 1 ಮಣಿಗರ್ಭ ಮೂರ್ತಿಗೆ ನೀ ಎಣೆಯಾಗಿಲ್ಲಿಗೆ ಬಂದು ಕುಣಿಯಲು ನಿಧಿ ಸಂದಣಿಗೊಳದಿರೆ ಲಕ್ಷಣಕೆ ಕೊರತೆಯಂ- ದೆಣಿಸರೆ ಸುಜನರು 2 ಶಕ್ರ ಚತುಷ್ಕರ ಸಿರಿಯು ಚಕ್ರಗದಾಬ್ಜರ ಪರಿಯು ವಕ್ರ ಮತಿಯ ರಿಪುಚಕ್ರವ ತರಿವ ಪರಾಕ್ರಮ ಕರುಣೋ- ಪಕ್ರಮ ತೋರುತ 3 ಅಂಬುಜನಾಭನೆ ನಿನ್ನ ನಂಬಿದ ಭಾವನೆಯೆನ್ನ ತುಂಬಿದ ಜಗದೊಳಗಿಂಬುಗೊಂಡಿಹ ನಿನಗೆಂಬುದೇನು ಪೀ- ತಾಂಬರ ಧಾರಿ4 ಎರಡೊಂದು ಋಣಬಂಧ ಪರಿಹರಿಸೊ ಗೋವಿಂದ ಸುರತರು ಕರುಣಾರಸವಿರಿಸು ಶೇಷಗಿರಿ- ವರ ತ್ವರೆಯಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಲಕ್ಷ್ಮಿ ನರಹರಿ ವಿಠಲ | ರಕ್ಷಿಸೋ ಇವಳ ಪ ತ್ರ್ಯಕ್ಷ ಬಿಂಬನೆ ಸ್ವಾಮಿ | ಪಕ್ಷಿವಹ ಕರುಣಾಕಟಾಕ್ಷ ದಿಂದೇಕ್ಷಿಸುತ | ಕಾಪಾಡೊ ಹರಿಯೇ ಅ.ಪ. ಅಕ್ಷಿ ಮೂರುಳ್ಳ ನಿಟಿ | ಲಾಕ್ಷನೈ ರೂಪದಲಿಅಕ್ಷಿ ಗೋಚರನಾಗಿ | ಸ್ವಚ್ಛ ತೈಜನನೇದೀಕ್ಷೆ ದಾಸತ್ವದಲಿ | ಲಕ್ಷ್ಯವಿಟ್ಟಿಹಳ ಉ-ಪೇಕ್ಷಿಸದೆ ದಯತೋರ್ದೆ | ಲಕ್ಷ್ಮಿ ನರಸಿಂಹಾ 1 ಮನ್ಯು ಸೂಕ್ತದಿಂ ಬ | ಹ್ಪನ್ನ ಭೊಕ್ತøವಿನಿಂದಚೆನ್ನಾಗಿ ಸೇವಿತನೆ | ಅನ್ನಂತ ಮಹಿಮಾಬಿನ್ನವಿಪೆ ನಿನಗೆ ಕಾ | ರುಣ್ಯ ಮೂರುತಿ ಹರಿಯೆಕನ್ಯೆಗಭಯದನೆ ಆ | ಪನ್ನ ಪರಿಪಾಲಾ 2 ಲೌಕಿಕದಿ ಬಹುಪರಿಯ | ಸೌಖ್ಯಗಳ ನೀನಿತ್ತುಪ್ರಾಕ್ಕು ಕರ್ಮವ ಕಳೆದು | ಕಾಪಾಡೊ ಹರಿಯೇ |ಚೊಕ್ಕ ಭಕ್ತಿ ಜ್ಞಾನ | ಅಕ್ಕರದಿ ತವಪದದಿಉಕ್ಕುವ ಪರಿಮಾಡು | ರಕ್ಕಸಾಂತಕನೇ 3 ನೀಚೋಚ್ಚ ತರತಮವು | ಪಂಚ ಬೇದವನರುಹಿಸಂಚಿತವ ದಹಿಸೂವ | ಹಂಚಿಕೆಯನಿತ್ತೂಅಂಚೆವಹಪಿತನೆ ಹೃ | ತ್ಪಂಕಜದಿ ನಿನಕಾಂಬಸಂಚಿಂತನೆಯ ನೀಯೊ | ಪಂಚ ಪ್ರಾಣಾತ್ಮಾ 4 ಪಾವಮಾನಿಯ ಪ್ರೀಯ | ಸಾರ್ವಕಾಲದಿ ನಿನ್ನಪಾವನ ಸ್ಮøತಿಯಿತ್ತು | ಭಾವದಲಿ ತೋರೋ |ನೀವೊಲಿಯುತಿವಳಿನ್ನ | ಕಾವುದೆನೆ ಬಿನ್ನೈಪೆಗೋವಿದಾಂಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು