ಒಟ್ಟು 1726 ಕಡೆಗಳಲ್ಲಿ , 94 ದಾಸರು , 1321 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಾಮರಾಮನೇ ಸಾರ್ವಭೌಮ ಪರಮಪುರುಷೋತ್ತಮಾನಂತ ಮಹಿಮ ಧ್ರುವ ಹರ ಹೃದಯ ವಿಶ್ರಾಮ ಸುರಜನರಿಗೆ ಪ್ರೇಮ ಕರುಣ ಸಾಗರ ಸಕಲಾತ್ಮರಾಮ 1 ಸಾರ ಸ್ವಹಿತ ನಾಮ ಖರದೂಷಣಾರಿ ಪೂರಿತ ಕಾಮ 2 ವರದಯದಿ ನಿಸ್ಸೀಮ ಹೊರೆವ ಶರಣರ ನೇಮ ತರಳ ಮಹಿಪತಿ ಸ್ವಾಮಿ ಘನಮಹಿಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಲಕ್ಷ್ಮೀನಾರಾಯಣ ಸ್ತುತಿ ಗುಣಪೂರ್ಣಾಚ್ಯುತೋ ವಿಷ್ಣುಃ ಅಪ್ರಾಕೃತರೂಪವಾನ್ ಅನ್ನದಾತಾ, ಧನದಾತಾ ಆಯುಷಾÀ್ಯರೋಗ್ಯದೋ ಹರಿಃ ಚಕ್ಷುದಾತಾ ಜ್ಞಾನದಾತಾ ದೇಹಿ ತ್ವಮಿ ಭಕ್ತಿ ಸದಾ ಮದಾದರ್ಭಿಹಿಃ ಸರ್ವತ್ರ ತ್ವಮೇವ ಜ್ವಲತಿ ಸದಾ ತ್ವತ್ಕøಪಯಾ ಏವ ಪಶ್ಯಾಮಿ ಭೋ ವಾಮನ ಭಾಮನಾ ಮದ್‍ಹೃಸ್ಥ ಹರಿಣಾವೇ ಕ್ರಿಯಾದರ್ಶನ ಚಿಂತನಂ ವಾಯು ಯಜ್ಞಸ್ಯ ಪಾದಸ್ತೇಃ ಮನ್ಮನತಿಚ್ಛಾಮೀಚ ವಾಯುಯಜೇ ಸದಾತೀಕ್ಷು ಯಜ್ಞನಾಮಾ ಶ್ರೀಯಃ ಪತಿಃ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ಸದಾ ವಂದೇ ಮಮಸ್ವಾಮಿಃ
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀಲೋಲನಲ್ಲೆ ಭಾಮೆ ಅವಲೋಲನಲ್ಲೆ ಭಾಮೆ ಪ ಲೋಲನೊ ಬಾಲನೊ ಗೋಪಾಲನೊ ನಾನರಿಯೆ ಅ.ಪ. ಇಂದು ತಮನ ಕೊಂದು ವೇದವ ತಂದವನಲ್ಲೆ ಭಾಮೆ ಅವತಂದವನಲ್ಲೆ ಭಾಮೆ ತಂದವನೊ ಬಂದವನೊ ಅದರಂದವನು ನಾನರಿಯೆ 1 ಅರ್ಥಿಯಿಂದಲಿ ಗಿರಿಯ ಬೆನ್ನಿಲಿ ಪೊತ್ತವನಲ್ಲೆ ಭಾಮೆ ಅವ ಪೊತ್ತನಲ್ಲೆ ಭಾಮೆ ಪೊತ್ತವನೊ ತೆತ್ತವನೊ ಅದರರ್ಥವನು ನಾನರಿಯೆ 2 ವರಾಹ ಸ್ವಾಮಿಯಲ್ಲೆ ಭಾಮೆ ಅವ ಸ್ವಾಮಿಯಲ್ಲೆ ಭಾಮೆ ಸ್ವಾಮಿಯೊ ಪ್ರೇಮಿಯೊ ಬಹು ಕಾಮಿಯೊ ನಾನರಿಯೆ3 ತರಳ ಪ್ರಹ್ಲಾದನಿಗೊಲಿದ ನರಹರಿಯಲ್ಲೆ ಭಾಮೆ ಅವ ನರಹರಿಯಲ್ಲೆ ಭಾಮೆ ನರಹರಿಯೊ ಸಿರಿದೊರೆಯೊ ಆ ಉರವಣಿಗೆಯ ನಾನರಿಯೆ4 ನೆಲನ ಈರಡಿ ಮಾಡಿ ಅಳೆದ ಚೆಲುವನಲ್ಲೆ ಭಾಮೆ ಅವ ಚೆಲುವನಲ್ಲೆ ಭಾಮೆ ಚೆಲುವನೊ ಮಲೆವನೊ ಅಂಡಲೆವನೊ ನಾನರಿಯೆ 5 ಕೊಡಲಿ ಮಸೆದು ರಾಯರನೆಲ್ಲ ಕೆಡಹಿದನಲ್ಲೆ ಭಾಮೆ ಅವ ಕೆಡಹಿದನಲ್ಲೆ ಭಾಮೆ ಕೆಡಹಿದನೊ ಮಡುಹಿದನೊ ಆ ತೊಡರವನು ನಾನರಿಯೆ 6 ಸೀತಾ ಚೋರನ ಕೊಂದ ರಘುನಾಥನಲ್ಲೆ ಭಾಮೆ ಅವ ನಾಥನಲ್ಲೆ ಭಾಮೆ ನಾಥನೊ ಖ್ಯಾತನೊ ಆ ಮಾತನು ನಾನರಿಯೇ 7 ಮಾವನ ಕೊಲಲು ಮಧುರೆಗೆ ಪೋದ ದೇವನಲ್ಲೆ ಭಾಮೆ ಅವ ದೇವನಲ್ಲೆ ಭಾಮೆ ದೇವನೊ ಭಾವನೋ ಗೋ ಕಾವನೊ ನಾನರಿಯೆ8 ತ್ರಿಪುರಾಂಗನೆಯರ ವ್ರತವನಳಿದ ಚಪಳನಲ್ಲೆ ಭಾಮೆ ಅವ ಚಪಳನಲ್ಲೆ ಭಾಮೆ ಚಪಳನೊ ವಿಪುಳನೊ ಆ ವಿಪರೀತವ ನಾನರಿಯೆ 9 ಓಜೆಯಿಂದ ತೇಜಿಯನೇರಿದ ರಾಜನಲ್ಲೆ ಭಾಮೆ ಅವ ರಾಜನಲ್ಲೆ ಭಾಮೆ ರಾಜನೊ ಭೋಜನೊ ಆ ಸೋಜಿಗವ ನಾನರಿಯೆ 10 ಸೃಷ್ಟಿಗೆ ಕರ್ತನು ವಿಜಯವಿಠ್ಠಲನಲ್ಲೆ ಭಾಮೆ ಅವ ವಿಠ್ಠಲನಲ್ಲೆ ಭಾಮೆ ವಿಠ್ಠಲನಾದರೆ ಇಷ್ಟೊಂದ್ಯಾತಕೆ ದಟ್ಟಡಿಗಳಿಗೊಂದಿಸುವೆ 11
--------------
ವಿಜಯದಾಸ
ಶ್ರೀವೆಂಕಟೇಶಾ ಶ್ರಿತಜನಪೋಷಾ ಪ ದೇವ ದೇವ ಮಹದೇವ ವಿನುತಸುಜ | ನಾವನ ಶ್ರೀ ಭೂದೇವಿಯರರಸನೆ ಅ.ಪ ಅಂಬರರಾಜನಳಿಯನೆ ತ್ರಿಭುವನ ಕು | ಟುಂಬಿ ನಿನ್ನ ನೆರೆ ನಂಬಿದೆನಯ್ಯ 1 ಸ್ವಾಮಿ ಪುಷ್ಕರಣಿ ತಟದಿ ನೆಲಸಿ ಸುರ | ಓಲಗ ಕೈಗೊಂಬ 2 ಉರಗಗಿರಿನಿಲಯ ಗುರುರಾಮವಿಠಲ 3
--------------
ಗುರುರಾಮವಿಠಲ
ಶ್ರೀಶ ಕೇಶವ ವಿಠಲ ಸಲಹೊ ಇವನಾ ಪ ದೋಷದೂರನೆ ದೇವ | ರಾಶಿಪಾಪಂಗಳನುನಾಶಗೊಳಿಸುತ್ತ ನಿರ್ದೊಷನ್ನ ಗೈಯ್ಯೋ ಅ.ಪ. ಮೋದತೀರ್ಥರ ಮತದಿ | ಮೋದವನೆ ಪಡುತಿಪ್ಪಸಾಧುಜೀವಿಯು ನಿನ್ನ | ಪಾದಾಬ್ಜ ನಮಿಪವೇದೋದಿತವು ಎನ್ನೆ | ಬೋಧಗಳ ತಿಳಿಸುತ್ತಸಾಧನದಲ್ಲಿರಿಸಿವನ | ಕಾದುಕೋ ಹರಿಯೇ 1 ಮೂರ್ತಿ ಉಪ-ದೇಶಿಸಿಹೆನೋ ಸ್ವಾಮಿ | ಶ್ರೀಶ ನರಹರಿಯೇ 2 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾಯೋ | ಶರ್ವವಂದ್ಯನಿರ್ವಿಘ್ನತೆಯಲಿವಗೆ | ಸರ್ವಶಾಸ್ತ್ರಾರ್ಥಗಳಸರ್ವಸಾರವ ತಿಳಿಸೊ | ಸರ್ವಾಂತರಾತ್ಮ 3 ನಿತ್ಯ ಮಂಗಳನೇ 4 ಆವ ಸಂಸೃತಿಯೆಂಬ | ದಾವಾಗ್ನಿ ಪರಿಹರಿಸೆಶ್ರೀವರನೆ ನಿನ್ನ ಸ್ಮøತಿ | ಸರ್ವಕಾಲದಲಿದೇವ ಹಯ ಮುಖ ಗುರು | ಗೋವಿಂದ ವಿಠ್ಠಲನೆಈವುದೆನೆ ಬಿನ್ನಪವ | ಮಾವಿನುತ ಸಲಿಸೋ 5
--------------
ಗುರುಗೋವಿಂದವಿಠಲರು
ಶ್ರೀಶ ಶ್ರೀನಿವಾಸ ಎನ್ನ ಧ್ಯಾಸದಿ ನೀ ವಾಸಿಸೈ ಪ ಹಸನ ಮಾಡೆನ್ನ ಮಸಣ ಮತಿಯ ಪುಸಿಯು ಎನಿಸದ ಅಸಮ ನಿಮ್ಮ ಎಸೆವ ಪಾದಕುಸುಮ ಎನ್ನ ರಸನೆ ಮೇಲ್ಪ್ರಕಾಶಿಸಿ 1 ಭೃತ್ಯನ ಸಚ್ಚಿತ್ತವೆಂಬ ತಖ್ತ ತೃಪ್ತಿಯಿಂದ್ಹತ್ತಿ ನಿಮ್ಮ ಸತ್ಯಚರಿತ ಉತ್ತರಿಸಭವ ಭಕ್ತ ಪ್ರಾಣದಾಪ್ತ ಬಂಧೋ 2 ಭೂಮಿತ್ರಯದ ಪ್ರೇಮನಿಲಯ ಸೀಮೆಯಿಲ್ಲದ ನಾಮಮಹಿಮ ಸ್ವಾಮಿ ನಿಮ್ಮ ಪ್ರೇಮದಾಸರ ಕ್ಷೇಮನಿಧಿ ಶ್ರೀರಾಮ ಪ್ರಭೋ 3
--------------
ರಾಮದಾಸರು
ಶ್ರೀಶೈಲದೊಳಗಿಪ್ಪ ಸ್ವಾಮಿ ಪುಷ್ಕರಣಿ ಇತಿ ಹಾಸವ ದಿಲೀಪನೃಪ ಬೆಸಗೊಳಲು ಕೇಳಿ ದು ಕೇಳಿ ಸಂತೋಷಿಸುವುದು ಪ ಮುನಿಕುಲೋತ್ತಮ ನೆನಿಸಿ ದುರ್ವಾಸಋಷಿ ದಿಲೀ ಪನ ಸದನವೈದಿರಲು ಕೇಳಿ ಸಂತೋಷದಲಿ ಮುಗಿದು ವಿಜ್ಞಾಪಿಸಿದನು ಋಷಿಗೆ ಅನಿಮಿಷೇಶಾ ವೆಂಕಟನ ನಾಮಧೇಯ ಕುಂ ಭಿಣಿ ಯೊಳಿಪ್ಪಾಖ್ಯಾನ ತೀರ್ಥಗಳ ವೈಭವಗ ದುರ್ವಾಸ ಪೇಳೊದಗಿದಿ 1 ಕೇಳು ರಾಜೇಂದ್ರ ವೆಂಕಟ ಪರ್ವತನು ಮೇರು ಶೈಲಾತ್ಮಜನು ವಾಯು ಶೇಷರ ಸುಸಂವಾದ ಸ್ವರ್ಣ ಮುಖರೀ ತೀರದಿ ಬೀಳಲ್ಕೆ ನೊಂದು ಪ್ರಾರ್ಥಿಸಿದ ಶೇಷನು ಎನ್ನ ಮ್ಯಾಲೆ ಮಲಗಿಪ್ಪ ತೆರದಂತೆ ದಯದಿಂ ನೀನೆ ಶೇಷಾದ್ರಿಯೆನಿಸುತಿಹುದು 2 ಈ ನಗೋತ್ತಮದಾದಿ ಮಧ್ಯಾವಸಾನ ಪ್ರ ಸೂನು ಫಲ ಸಂಯುಕ್ತ ಸಾನುಗಳ ಸುರುಚಿಕೋ ಪುಷ್ಕರಣಿ ತೀರ್ಥದ ತಟದಲಿ ಶ್ರೀನಿವಾಸನು ಬಂದು ನಿಂತ ಕಾರಣವೆನಗೆ ನೀನರುಪುವುದು ಯೆಂದು ಬೆಸಗೊಳಲು ದುರ್ವಾಸ ನೃಪಗೆ ಹರುಷೋದ್ರೇಕದಿ 3 ತೀರ್ಥೋತ್ತಮತ್ವ ಸಾಪೇಕ್ಷಿಯಿಂದಲಿ ಬ್ರಹ್ಮ ಪತ್ನಿ ಪೂರ್ವದಲಿ ಬ್ರಹ್ಮಾವರ್ತ ದೇಶದೊಳ ಪುಲಸ್ತಾಖ್ಯ ಮುನಿಪ ತತ್ತೀರದಲಿ ತಪವಗೈವೆನೆಂದೆನುತ ಬರೆ ಪುತ್ರನೆಂದರಿದು ಮನ್ನಿಸದಿರಲು ಕೋಪದಲಿ ನಿಷ್ಫಲವಯೈದಲೆಂದು ನುಡಿದ 4 ನದ್ಯೋತ್ತಮತ್ವ ಜಾಹ್ನವಿಗಿರಲಿ ಗುಣಗಳಿಂ ಸ್ವರ್ಧುನಿಯು ನೀಚಳಾದರೆಯು ಸರಿ ಲೋಕ ಪ್ರ ಪಾದ ಪ್ರಸಾದದಿಂದ ವಾಗ್ದೇವಿ ನುಡಿಗಳು ಭ ವದ್ವಂಶರೆಲ್ಲ ರಾಕ್ಷಸರಾಗಿ ಬಹಳ ವಿ ಪದಕೆರಗಿ ಬಿನ್ನೈಸಿದ 5 ಅನಭಿಜ್ಞ ಲೋಕೋಪಕಾರ ತಪವೆಂದರಿಯ ದನುಚಿತೋಕ್ತಿಗಳನಾಡಿದೆ ಮಯಾಕೃತದೋಷ ಮುನಿವರನು ಸಂಪ್ರಾರ್ಥಿಸೆ ಪುನರಪಿ ವಿಶಾಪವಿತ್ತಳು ಪ್ರಸನ್ಮುಖಳಾಗಿ ಜನಿಸಲೀ ಭವದ ಪ್ರಾಂತಕ್ಕೆವರ ವಿಭೀ ಭಗವದ್ಧ್ಯಾನಪರಳಾದಳು 6 ತೀರ್ಥೋತ್ತಮತ್ವ ಸಾಪೇಕ್ಷಯಿಂ ವಾಗ್ದೇವಿ ಮತ್ತು ತಪದಿ ಪ್ರೀತಿಗೊಳಿಸಲ್ಕೆ ದೇವದೇ ಬಿನ್ನೈಸಿದಳು ವಾಂಛಿತವನು ವ್ಯರ್ಥವಾಯಿತು ತಪವು ಬಹ್ಮ ಶಾಪದಲಿ ತೀ ರ್ಥೋತ್ತಮತ್ವವು ಕರುಣಿಸೆಂದು ಕೇಳ್ದುದಕೆ ಪ್ರ ಇನಿತೆಂದು ಕಾರುಣ್ಯಸಿಂಧು 7 ನದಿಯರೂಪಕೆ ಬ್ರಹ್ಮಶಾಪ ನಿನಗಾಯಿತ ಲ್ಲದೆ ಸರೋವರಕೆ ಬ್ಯಾರಿಲ್ಲ ಪುಷ್ಕರಣಿಗಳೊ ಸ್ವಾಮಿ ಪುಷ್ಕರಣಿ ಎನಿಸಿ ವಿಧಿಪತ್ನಿ ಶೇಷನೋದ್ದೇಶ ತ್ವತ್ ಸನ್ನಿಧಾ ನದಿ ವಾಸವಾಹೆ ಸಂದೇಹವಿಲ್ಲಿದಕೆ ಸ ಸಜ್ಜನರಿಗಖಿಳಾರ್ಥವೀವೆನೆಂದ 8 ಮೂರುವರೆ ಕೋಟಿ ತೀರ್ಥಗಳು ಭುವನತ್ರಯದೊ ಳಾರಾಧಿಸಿದರೆಯೆನ್ನ ಸ್ವಸ್ವ ಪಾಪೌಘ ಪರಿ ಧನುರ್ಮಾಸ ಸಿತಪಕ್ಷದ ಈರಾರುದಿನದಲರುಣೋದಯಕೆ ತೀರ್ಥ ಪರಿ ವಾರನೈದಿರಿ ಶುದ್ಧರಾಗುವಿರಿಯೆಂದು ತ ಪ್ರೇಷ್ಯತ್ವ ವಾಣಿಗಿತ್ತ 9 ವಾಣಿದೇವಿಯು ತೀರ್ಥರೂಪಳಾಗಲು ಕೃಷ್ಣ ವೇಣಿಸಮ ಬಕುಳ ಮಾಲಿಕೆ ತೀರ್ಥ ಭೂಮಾಭಿ ಹರಿಗೆ ನೈವೇದ್ಯರಚಿಸಿ ಪಾನೀಯ ಧೀ ಭೋಗ ಪತ್ನಿ ಪೂರ್ವದಿ ಸನ್ನಿ ಧಾನದಲ್ಲಿಪ್ಪೆನೆಂದೆನುತ ಪ್ರಾರ್ಥಿಸೆ ಶೇಷ ತಾನಿತ್ತ ಕಮಲಾಕಾಂತನು 10 ಸ್ವಾಮಿ ಪುಷ್ಕರಣಿ ನವತೀರ್ಥಮಾನಿಗಳಿಗೆ ಸು ಧಾಮವೆನಿಸುವಳು ತತ್ತನ್ನಾಮಗಳು ಪೇಳ್ವೆ ಅಗ್ನಿಯನು ಋಣವಿಮೋಚನಿ ಈ ಮಹಾ ವಾಯು ತೀರ್ಥಗಳ ಸುಸ್ನಾನಲ ಕ್ಷ್ಮೀ ಮನೋಹರನ ದರುಶನ ತತ್ವ್ರಸಾದಾತ್ರ ಅಲ್ಪಾಧಿಕಾರಿಗಳಿಗೆ 11 ಕವಿಭಿರೀಡಿತ ಪೂಜ್ಯನೆನಿಸುವನು ಪದ್ಮಸಂ ಭವನು ಪೂಜಕನೆನಿಪ ನೈವೇದ್ಯಕರ್ತೃ ಭಾ ಶರ್ವಶಕ್ರಾರ್ಕ ಮುಖ್ಯ ದಿವಿಜಗಣವಿಹರೆಂದು ಚಿಂತಿಸದೆ ಮರೆದು ಮಾ ನವರೆ ವರ್ತಿಪರೆಂದು ತಿಳಿವವನು ಘೋರ ರೌರವ ಧರಾತಳದೊಳೆಂದ 12 ಮೇರುನಂದನ ವೈಕುಂಠಾದ್ರಿಶತಯೋಜನದ ಮೇರೆಯೊಳು ಪುಣ್ಯತೀರ್ಥಗಳಿಪ್ಪವಲ್ಲೆಲ್ಲ ಮುಖ್ಯಾಮುಖ್ಯ ಭೇದದಿಂದ ನೂರೆಂಟು ತೀರ್ಥಗಳು ಮುಖ್ಯವೆನಿಸುವುವಿದರೊ ಳಾರುತ್ತಮೋತ್ತಮವುಗಳ ನಾಮ ಪೇಳ್ವೆನು ಕು ತುಂಬರ ಆಕಾಶಗಂಗ 13 ವಸುರುದ್ರ ಕಾಣ್ವಗ್ನಿ ಮನ್ವಿಂದ್ರಯಮ ಸೋಮ ಬಿಸರುಹ ಪ್ರೀಯ ನವಪ್ರಜ ಆಶ್ವಿನಿಗಳು ಶುಕ ಜಗಜ್ಜಾಡ್ಯಹರ ಬಾರ್ಹಸ್ವತಿ ದಶಪ್ರಚೇತಸ ಗರುಡ ಶೇಷವಾಸುಕಿಯು ಹೈ ಬ್ಬಸುರ ನಾರದ ವೈಶ್ವದೇವ ಸ್ವಾಹಾಸ್ವಧಾ ಹಸ್ತಿ ನಾರಾಯಣಾದಿ ಪಂಚ 14 ಶಿವರೂಪಿ ದೂರ್ವಾಸ ಪೇಳ್ದನಿನಿತೆಂದು ಜಾ ಹ್ನವಿಯೊಳಬ್ದ ಸ್ನಾನಫಲ ಧನುರ್ಮಾಸದೊಳು ವಾಗ್ದೇವಿ ಶುಕ್ಲಪಕ್ಷ ದ್ವಾದಶಿ ದಿವಸದಿ ಶುಚಿರ್ಭೂತನಾಗಿ ಸಂತೋಷದಲಿ ವಿವರಾಗ್ರಜೋದಯದಿ ಸ್ನಾನವನು ಮಾಡೆ ಐ ಶಿಷ್ಯನೆಂದರಿದು ದಯದಿ 15 ನಾರದ ಮುನೀಂದ್ರನುಪದೇಶದಿಂ ದಕ್ಷನ ಕು ಮಾರಕರು ಸಾಹಸ್ರ ತಮ್ಮ ತಮ್ಮಾಶ್ರಮದ ದಾಕ್ಷಣ್ಯವೆನಿಸುತಿಹ್ಯದು ಭೈರವಾಷ್ಟ ತೀರ್ಥ ಸಿದ್ಧಿಪ್ರದಾಯಕ ಕು ಮಾರಧಾರಿಕ ಪಶ್ಚಿಮದಲಿಹವು ಎಂಟಧಿಕ ತೀರ್ಥಾದ್ರಿಯೆನಿಸುತಿಹುದು 16 ತಾ ತಿಳಿ ಪುದಿತಿಹಾಸ ಶೌನಕಾದ್ಯರಿಗೆ ವರ ಪುಷ್ಕರಣಿಮಹಿಮೆ ಪ್ರೀತಿಯಿಂದಲಿ ತಿಳಿದು ಪಠಿಸುವವರಿಗೆ ಜಗ ನ್ನಾಥ ವಿಠಲ ಮನೋವಾಂಛಿತಗಳಿತ್ತು ಪುರು ಹೂತ ಲೋಕದಲಿ ಸುಖಬಡಿಸಿ ಪ್ರಾಂತಕೆ ತನ್ನ ಪುರವನೈದಿಪ ಕೃಪಾಳು17
--------------
ಜಗನ್ನಾಥದಾಸರು
ಶ್ರೀಹರಿ ಪ್ರಿಯ ವಿಠಲ | ಸಲಹ ಬೇಕಿವನಾ ಪ ಸ್ನೇಹ ಸದ್ಭಕ್ತರಲಿ | ಸಾಹಸದಿ ಕೊಡಿಸಿ ಅ.ಪ. ಪಾಪಾಟವಿಗೆ ಪವಿಯು | ಶ್ರೀಪತಿಯ ನಾಮವನುಲೇಪಿಸುವುದೋ ಸ್ವಾಮಿ | ಗೋಪಾಲ ಮೂರ್ತೇವ್ಯಾಪಕನು ನೀನಾಗಿ | ಪ್ರಾಪಕಾಭಿಷ್ಟಗಳಪಾವನಕೆ ಮನ ಮಾಡಿ | ಎರ್ಷಿಸೋ ಹರಿಯೇ 1 ಸೃಷ್ಟಾದಿಕರ್ತನೇ | ಕೃಷ್ಣ ಮೂರುತಿ ದೇವಕಷ್ಟಗಳ ಪರಿಹರಿಸಿ | ಕಾಪಾಡೊ ಹರಿಯೆಇಷ್ಟಮೂರುತಿ ದೇವ | ಸುಷ್ಠು ಭಜನೆಯ ನೀಡಿಹೃಷ್ಟನ್ನ ಮಾಡಿವನ | ಜಿಷ್ಣು ಸಖ ಹರಿಯೆ 2 ಪಂಚಭೇದ ಜ್ಞಾನ | ಸಂಚಿಂತನೆಯ ಕೊಟ್ಟುವಾಂಚಿತಾರ್ಥದನಾಗೊ | ಪಂಚ ಪಾಂಚಾತ್ಮಕಾಂಚನವು ಲೋಪ್ಠವು | ಸಮವೆಂಬ ಮತಿಯಿತ್ತುಅಂಚೆ ವಹ ಸದ್ವಂದ್ಯ | ಮಿಂಚಿ ನಂದದಿ ಪೊಳೆದು 3 ಭವ ಬಂಧದಲಿ ಸಿಲ್ಕಿ | ಬಲು ನೊಂದಿಹನು ಅಯ್ಯಭವರೋಗ ವೈದ್ಯನೇ | ಕೈ ಪಿಡಿದು ಕಾಯೋ ಅವನಿಯೊಳು ಶ್ರೀ ಹರಿಯೆ ಪ್ರಿಯನಾಗಿ ಮೆರೆಯಲಿಂ-ದಿವನ ಸ್ವಪದಿ ಪೇಳ್ದೆ | ಗುರು ಮೂರ್ತಿಯಾಗೀ 4 ಸುಪ್ತೀಶ ಪೇಳ್ದಪರಿ | ಇತ್ತಿಹೆನೊ ಅಂಕಿತವಆಪ್ತ ನೀನಿದ್ದವಗೆ | ದಾಸ್ಯ ಸದ್ಧರ್ಮಪ್ರಾಪ್ತಿ ಗೈಸುತ ಭವವ | ಉತ್ತರಿಸ ಬೇಕೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಶ್ರೀಹರಿ ಸ್ಮರಣೆಯ ಮಾಡೋ ಸ್ವಾಮಿ || ಶ್ರೀ ಹರಿ |ಕುಹಕರ ಸಂಗಕೆ ಬ್ಯಾಡೋ ಪ್ರಾಣಿ ಪ ಉರಿಹಸ್ತ ವರಕೊಟ್ಟು ಹರನು ಬಳಲಿದಾಗತ್ಪರದಿಂದವನ ಪೊರೆದ ಸುರನ ಸಂಹರಿಸಿದ1 ದಿತಿಜರ ಬಾಧೆಗೆ ಶತಮಖ ಪ್ರಾರ್ಥಿಸಲಮೃತವ ಕರದು ಅಹಿತರನು ವಂಚಿಸಿದ 2 ತರಳ ಪ್ರಹ್ಲಾದ ಕರ್ಬುರ ದೈತನ ಬಾಧಿಗೆ ಹರಿಯೆಂದೊರಲವನ ಪೊರೆದು ದೈತ್ಯನ ತರಿದ3 ಪರಮೇಷ್ಟಿ ಜನಕನಲ್ಲಿಅಷ್ಟೆ ಕರ್ತೃತ್ವವಿರಲು ಇಷ್ಟ್ಯಾಕ ಬಳಲುವಿ 4 ಗುರು ಮಧ್ವಾಂತರ್ಗತ ಗುರು ಪ್ರಾಣೇಶ ವಿಠಲ ವಿಠಲಾಸುರ ಮುಖ್ಯರಳಿದು ತನ್ನ ಶರಣ ಜನರ ಪೊರೆದಾ 5
--------------
ಗುರುಪ್ರಾಣೇಶವಿಠಲರು
ಶ್ರೀಹರಿಗೆ ಪ್ರಥಮಾಂಗ ಮಧ್ವಮೂರ್ತಿ ಪ ದೇಹ ಚತುರದಿ ಇದ್ದು ಜಗವ ಸಲಹುವೆ ದೊರೆಯೆ ಅ.ಪ. ಅಮೃತರೂಪನೆ ಹರಿಯ ಅಮೃತಮಯ ಭಕ್ತಿಯೊಳು ರಮೆ ಸಹಿತ ರಾಜಿಪನ ಅಚ್ಛಿನ್ನ ಅರ್ಚಕನೆ ಸಮರರಿಯೆ ನಿನಗಿನ್ನು ಅಜನುಳಿದು ಜೀವರೊಳು 1 ನಿನ್ನ ನಾಮಸ್ಮರಣೆ ನಿಸ್ವಾರ್ಥಿಯ ಕಥನ ನಿನ್ನ ವೈಭವ ಧ್ಯಾನ ಅಮೃತಪಾನ ನಿನ್ನ ಗುಣ ಕ್ರಿಯ ರೂಪ ನೆನೆನೆನೆದು ಸುಖಿಸುವನು ಧನ್ಯ ಸುರಕುಲದವನು ಜೀವನ್ಮುಕ್ತನವನಿಯೊಳು 2 ನಿನ್ನಲ್ಲಿ ಹರಿ ಇದ್ದು ಜಗವ ನಡೆಸುವ ತಾನು ನಿನ್ನಲ್ಲಿ ಶ್ರೀಹರಿಯ ಒಲುಮೆ ಅಮಿತ ನಿನ್ನ ಕರವಶ ಮುಕ್ತಿ ಮಾಡಿಹನು ಯದುಪತಿಯು ನಿನ್ನ ದಾಸರೆ ಹರಿಯ ಪುರವಾಸಿಗಳು ಸ್ವಾಮಿ3 ಜ್ಞಾನ ಬಲ ಭಕ್ತಿ ವೈರಾಗ್ಯ ಲಾಘವ ಶಕ್ತಿ ಧ್ಯಾನ ವಿದ್ಯಾ ಬುದ್ಧಿ ಕುಶಲ ತೇಜ ಪೂರ್ಣಪ್ರಾಜ್ಞತೆ ಸಿರಿಯ ಮಾಧುರ್ಯ ಶುಭವಾಕು ಪೂರ್ಣಧೈರ್ಯವು ಕಾರ್ಯ ಪೂರ್ಣ ನಿನ್ನಲಿ ಅಭಯ 4 ವಾಣಿ ಭಾರತಿ ನಿನ್ನ ವೈಭವವ ನೆನೆನೆನೆದು ಧೇನಿಸುತ ಆನಂದಮಗ್ನರಾಗಿ ಕಾಣದಲೆ ಕೊನೆ ಮೊದಲು ತತ್ವದ ಕಮಲದಲಿ ಜೇನಾಗಿ ಕ್ರೀಡಿಪರೊ ಮೈಮರೆದು ಸುಖ ಸುರಿದು 5 ಶಿವ ಶೇಷ ದ್ವಿಜ ರಾಜ ಸುರರಾಜ ಮೊದಲಾದ ಕಮಲ ರಜವ ಲವ ಬಿಡದೆ ಪೊತ್ತಿಹರೊ ಆನಂದ ಶರಧಿಯಲಿ 6 ಅಮಿತ ವೈಭವ ಗಾತ್ರ ಕಾಳಕೂಟವನುಂಡು ಮೆರೆದ ಮಹಿಮ ಶ್ರೀಲೋಲ ನಿನ್ನಲ್ಲಿ ಆನಂದ ಲೀಲೆಗಳ ಕೊಲಾಹಲದಿ ಮಾಳ್ಪ ಕಾರುಣ್ಯರೂಪದಲಿ 7 ರೇಣು ತೃಣ ಕಾಷ್ಟ ಬಹಿರಂತರದಲ್ಲಿ ಘನ ಮಹತ್ತು ಅಣು ಜೀವ ಚಿದ್ದೇಹದಲ್ಲಿ ಅನವರತ ಅಲ್ಲಿಪ್ಪ ಸರ್ವಮಂಗಳ ಹರಿಯ ಗುಣನಿಕರಗತ ಚಿತ್ರ ಜಗದಸುವೆ ನಿರ್ದೋಷ 8 ರಾಮದೂತನೆ ಹನುಮ ಹರಿ ಧೌತ್ಯಯನಗೀಯೊ ಬಂಟ ಸತತ ಹರಣ ವೃಕೋದರ ವೀರ ಶ್ರೀ ಮನೋಹರನÀಲ್ಲಿ ದಾಸ್ಯ ದೀಕ್ಷೆಯ ದೇಹಿ 9 ಪನ್ನಗ ರುದ್ರ ಸುರಗಣವು ಮೊದಲಾದ ಚರಾಚರ ಭ್ರೂ ಚಲನ ಮಾತ್ರದಿಂದ ಖರೆ ಸೃಷ್ಟಿ ಸ್ಥಿತಿ ಮುಕ್ತಿಯೈದುವರೊ ಘನ ಮಹಿಮ ವರ ವೇದ ಪ್ರತಿಪಾದ್ಯ 10 ಪರಮಮಂಗಳ ಜಯೇಶವಿಠಲನಂಘ್ರಿ ಸರಸಿಜವ ಬಿಡದ ಮಧುಪರಾಜ ಶರಣರಿಗೆ ಸುಜ್ಞಾನ ಶರಧಿಯನು ಪೊಂದಿಸಿದೆ ಕರುಣನಿಧಿ ಆನಂದಮುನಿ ನಿನ್ನ ಕೃಪೆ ಮುಕ್ತಿ 11
--------------
ಜಯೇಶವಿಠಲ
ಶ್ರೀಹರಿಸ್ತುತಿ ಅಪ್ಪವೆಂಕೋಬನ ನೇತ್ರದಲಿ ನೋಡಿ ಪವಿತ್ರಳಾದೆನೋ ಇಂದಿಗೆ ತಪ್ಪುಗಳೆಲ್ಲ ನಿನಗರ್ಪಿಸುವೆ ನಾನೀಗ ಒಪ್ಪಿಕೋಬೇಕೋ ತಿಮ್ಮಪ್ಪ ಕರುಣಾನಿಧಿಯೆ ಹೆದÀರದೆ ಭೃಗುಋಷಿಯು ಒದೆಯೆ ಪಾದಗಳಿಂದ ಎದೆಯ ಮೇಲಿರುವ ಲಕ್ಷ್ಮಿ ಕದನಮಾಡುತವೆ ಕೊಲ್ಲಾಪುರಕೆ ನಡೆತರಲು ಒದಗಿ ವೈಕುಂಠ ಬಿಟ್ಟು ಯದುನಾಥ ಯಾರಿಲ್ಲದಂತೆ ಗುಡ್ಡವ ಸೇರೆ ಇದು ನಿನಗೆ ಸದನಾಯಿತೊ ದೇವ 1 ಹುತ್ತಿನೊಳಗಡಗಿ ನೀ ಗುಪ್ತದಿಂದಿರುತಿರಲು ಉತ್ತಮ ಗೋವು ಬಂದು ನಿತ್ಯದಲ್ಲಿ ಕ್ಷೀರವನು ಕರೆಯೆ ಗೋವಳನಿಂದೆ ನೆತ್ತಿಯನೊಡೆದುಕೊಂಡು ಸಿಟ್ಟಿನಿಂದಲಿ ಚೋಳರಾಯಗೆ ಶಾಪವನು ಕೊಟ್ಟು ಕಿರೀಟವನು ಇಟ್ಟು ಮೆರೆಯುವ ದೇವ 2 ಮಾಯಾರಮಣನೆ ನಿನ್ನ ಗಾಯದೌಷಧಕ್ಹೋಗಿ ಭೂರಮಣನ್ವರಾಹನಿಂದ ನೂರುಪಾದ ಭೂಮಿಕೊಟ್ಟರೆ ಸಾಕೆಂದು- ಪಾಯದಿಂದದನ್ವ್ಯಾಪಿಸಿ ತಾಯಿ ಬಕುಳಾದೇವಿಯಿಂದ ಪೂ ಜೆಯಗೊಂಬೊ ಶ್ರೀಯರಸು ನಿನಗೆ ಸರಿಯೆ ದೇವ 3 ನಾಟಕಧಾರಿ ಕಿರಾತರೂಪವ ಧರಿಸಿ ಬೇಟೆಗೆನುತಲಿ ಪೋಗಲು ತೋಟದಲಿ ಚೆಲ್ವೆ ಪದ್ಮಾವತಿಯ ಕಡೆಗಣ್ಣ ನೋಟದಲಿ ಮನಸೋಲಿಸಿ ಬೂಟಕತನದಿ ಜಗಳಾಟವನ್ನೆ ಮಾಡಿ ಪಾಟುಬಟ್ಟು ಕಲ್ಲಲೇಟುತಿಂದೆಯೋ ದೇವ 4 ಗದಗದನೆ ನಡುಗುತಲಿ ಕುದುರೆಯನು ಕಳಕೊಂಡು ಪದ್ಮಾವತಿ ವಾರ್ತೆಯನ್ನು ಬಳಿಯ ಲಿದ್ದ ಬಕುಳಮಾಲಿಕೆಗೆ ಬೋಧಿಸಿ ಕಳಿ ಸಿದಾಕಾಶನಲ್ಲಿ ಚದುರಮಾತಿನ ಚಪಲ ಕೊರವಂಜಿ ನೀನಾಗಿ ಕಣಿಯ ಹೇಳಲು ಎಲ್ಲಿ ಕಲಿತೆಯೊ ಮಹದೇವ5 ಬಂಧುಬಳಗವ ಕೂಡಿ ಭಾರಿ ಸಾಲವ ಮಾಡಿ ಕರ ವೀರದಿಂದೆ ಅಂಡಲೆದು ಕರೆಸಿ ಕಾಣುತಲಿ ಲಕ್ಷ್ಮಿಯನಪ್ಪಿ ಕೊಂಡು ಪರಮ್ಹರುಷದಿಂದ ಮಂದಗಮನೆಯೆ ನಿನ್ನ ಮಾತುಲಾಲಿಸಿ ಮಾಡಿ ಕೊಂಡೆ ಪದ್ಮಾವತಿಯ ಅಂದೆಯೊ ಎಲೆ ದೇವ 6 ಆಕಾಶರಾಜ ಅನೇಕ ಹರುಷದಿ ಮಾಡೆ ತಾ ಕನ್ಯಾದಾನವನ್ನು ಹಾಕಿದ ರತ್ನಮಾಣಿಕ್ಯದ ಕಿರೀಟವನು ಬೇಕಾದಾಭರಣ ಭಾಗ್ಯ ಸಾಕಾಗದೇನೊ ಬಡವರ ಕಾಡಿ ಬೇಡುವುದು ಶ್ರೀಕಾಂತ ನಿನಗೆ ಸರಿಯೆ ದೇವ 7 ಹೇಮಗೋಪುರದಿ ವಿಮಾನ ಶ್ರೀನಿವಾಸ ದೇವರನು ನೋಡಿ ನಮಿಸಿ ಕಾಮಿಸಿ ಕಂಡೆ ಹೊನ್ನ್ಹೊಸ್ತಿಲು ಗರುಡ ಗಂಬದ ಸುತ್ತ ಪ್ರಾಕಾರವೊ ಸ್ವಾಮಿಪುಷ್ಕರಣಿಯಲಿ ಸ್ನಾನ ಪಾನವ ಮಾಡಿ ನೋಡಿದೆನು ನಿನ್ನ ಭಕುತರ ದೇವ 8 ಪÀನ್ನಗಾದ್ರಿ ವೆಂಕಟನ್ನ ರಥ ಶೃಂಗಾರ ವರ್ಣಿಸಲಳವೆ ನಮಗೆ ಕಣ್ಣಾರೆಕಂಡೆ ಗರುಡೋತ್ಸವದಲಂಕಾರ ಇನ್ನೆಲ್ಲು ಕಾಣೆ ಜಗದಿ ಎನ್ನ ಕಿವಿಗಾನಂದವೊ ದೇವ 9 ಪಾದದಲ್ಲೊಪ್ಪೋ ಪಾಗಡ ರುಳಿ ಕಿರುಗೆಜ್ಜೆ ಮೇಲಲೆವೊ ಪೀತಾಂಬರ ಮಾಲೆ ಶ್ರೀವತ್ಸದ್ಹಾರ ಮೇಲಾದ ಸರಿಗೆ ಸರ ಪದಕವೊ ಕಮಲ- ದಳಾಯತಾಕ್ಷನ ನೋಡಿದೆ ದೇವ 10 ಕರಗಳಲ್ಲಿಟ್ಟು ಕಂಕಣ ಕಡಗ ಭುಜಕೀರ್ತಿ ವರ ಶಂಖ ಚಕ್ರಧಾರಿ ಗಿರಿಯ ಭೂವೈಕುಂಠವೆಂದು ತೋರುತ ನಿಂತ ಶಿರದಿ ಕಿರೀಟ ಧರಿಸಿ ಬಿಳಿಯ ತ್ರಿನಾಮ ಭೀಮೇಶಕೃಷ್ಣನ ಮುಖದಿ ಹೊಳೆವ ಮೂರ್ತಿಯ ನೋಡಿ ಹೇ ದೇವ11
--------------
ಹರಪನಹಳ್ಳಿಭೀಮವ್ವ
ಶ್ರುತಿಯ ಶಿರಗಳನೀಗ ಸೂಚಿಪೆ ಸ್ವಾಮಿವಿತತವಾಗಿಹ ವಿಶ್ವಕ್ಕೊಡೆಯ ನೀ ಗ್ರಹಿಸು ಪಆದಿ ಮಧ್ಯಾಂತಗಳಿಲ್ಲದನಾದಿಯಾದಾ ನಿರ್ಗುಣಬ್ರಹ್ಮ ನಿಜರೂಪವೆಂದುಸಾಧಿಸಿ ಬೋಧಿಸಿ ಸರ್ವೋಪಾಧಿಯನುಭೇದಿಸಿ ಬಿಡುತಿಹ ಬಹು ಸಿದ್ಧವಾದ 1ಮಾಯೆಯ ರೂಪದಿ ಮಾಡಿ ವಿಶ್ವವನುಆಯದಿಂದಾಧಾರವಾಗಿಯೂ ತಾನುನೋಯದೆ ನೋಡುತ್ತ ನಿಂದ ಸಾಕ್ಷಿಕನುಈಯಂಡದೊಳು ಪೂರ್ಣನಾಗಿಹನೆಂಬ 2ಹರಹುತ ಲೋಕವ ಹೊಂದಿಸು ತಿಂತುಇರುವನು ನಿತ್ಯದಲೀ ದೇವನೆಂದುಅರುಹುತಲಿದೆ ಶ್ರುತಿಶಿರವಿದು ಕೇಳುತಿರುಪತಿ ವೆಂಕಟಗಿರಿನಾಥ ಕೃಷ್ಣ 3ಓಂ ಶುಕವಾಗಮೃತಾಬ್ಧೀಂದವೇ ನಮಃ
--------------
ತಿಮ್ಮಪ್ಪದಾಸರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ | ಸಂಗ ವಿಡಿಯಂಗದೊಳಗ | ಮಂಗಳುತ್ಸಾಹ ದೋರುವರಾ ಪ ಹರಿಪದ ಪರಾಗ ನುಂಡು | ಹರುಷವೇರಿ ಭವಶರಧಿಗೆ | ಹರಿಯ ಭಕುತಿ ಸೇತುಗಟ್ಟಿ | ತೋರಿಸಿ ಜನರ ತಾರಿಸುವರ 1 ವೇದ ಶಾಸ್ತ್ರಸಾರವಾದ | ಬೋಧ ಸುಧೆಯ ವೆರದು ಮರದು | ಹಾದಿದೋರಿ ಮನಕ ಗತಿಯ | ಸಾಧನವನು ಬೀರುವರ 2 ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ | ಭಾವದಿಂದ ಮಹಿಪತಿ ಸ್ವಾಮಿಯಾ | ಸಾವಧಾನದಿಂದಲಿ ಜಗತೀ | ವಲಯದೊಳರಹಿಸುವರು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ. ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1 ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2 ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3 ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4 ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5 ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6 ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
--------------
ಗೋಪಾಲದಾಸರು