ಒಟ್ಟು 1533 ಕಡೆಗಳಲ್ಲಿ , 106 ದಾಸರು , 1047 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಮಾಡಲಿ ಶ್ರೀಹರಿ- ಇಂಥ |ಮಾನವಜನ್ಮ ನಚ್ಚಿಸಬಹುದೆ? ಪಮಾತನಾಡದೆ ಮೌನದೊಳಿದ್ದರೆ-ಮೂಕ-|ನೀತನೆಂದು ಧಿಕ್ಕರಿಸುವರು ||ಚಾತುರ್ಯದಿಂದಲಿ ಮಾತುಗಳಾಡಲು |ಈತನು ಬಲು ಬಾಯ್ಬಡಿಕನೆಂಬುವರಯ್ಯ 1ಮಡಿ ನೇಮ ಜಪ-ತಪಂಗಳ ಮಾಡುತಿದ್ದರೆ |ಬಡಿವಾರದವನೆಂದಾಡುವರು ||ಮಡಿ ನೇಮ ಜಪ-ತಪಂಗಳ ಮಾಡದಿದ್ದರೆ |ನಡತೆ ಹೀನನೆಂದು ಬಲು ನಿಂದಿಸುವರಯ್ಯ 2ಗಟ್ಟಿಯಾಗಿ ಒಪ್ಪತ್ತಿನೂಟದೊಳಿದ್ದರೆ |ನಿಷ್ಟೆಯೇನು ಸುಟ್ಟಿತೆಂಬರು |ಗಟ್ಟಿಯಾಗಿ ಎರಡು ಮೂರು ಬಾರಿಯುಂಡರೆ |ಹೊಟ್ಟೆ ಬಾಕನೆಂದು ತೆಗಳಾಡುವರಯ್ಯ 3ಒಲಪಿನೊಳ್ಚೆನ್ನಿಗತನವನು ಮಾಡಲು |ಬಲು ಹೆಮ್ಮೆಗಾರನೆಂದಾಡುವರು ||ಸುಲಭತನದಿ ತಾ ನಿಗರ್ವಿಯಾಗಿದ್ದರೆ |ಕಲಿಯುಗದಲಿ ಮಂದಮತಿಯೆಂಬುವರಯ್ಯ 4ನರಜನ್ಮದೊಳಗಿನ್ನು ಮುಂದೆ ಪುಟ್ಟಿಸಬೇಡ |ಮೊರೆ ಹೊಕ್ಕೆ ಮತ್ಸ್ಯಾವತಾರ ನಿನ್ನ ||ಧರೆಯೊಳಗಿಹ ಪರಿಯಂತರ ಸಲಹೆನ್ನ |ಕರುಣವಾರಿಧಿ ಶ್ರೀಪುರಂದರವಿಠಲ5
--------------
ಪುರಂದರದಾಸರು
ಏನು ಧನ್ಯಳೊ ಗಿರಿಜೆ ಎಂಥ ಮಾನ್ಯಳೋ ಪಸ್ಥಾಣುವಮೂರ್ತಿಪಾದಸೇವೆತಾನೆನಿರತಮಾಡುತಿಹಳೊ ಅ.ಪಭೂತಗಣದ ಯೂಥವಿರಲುಸೂತಗಣನಾಥಾದ್ಯರಿರಲುಭೂತಪತಿಯಚರಣತೊಳೆದುತೀರ್ಥಕೊಡುತ ಬರುವಳ್ ಸಭೆಗೆ 1ನಾರದರು ದಿಕ್ಪಾಲರಿರಲುವಾರಿಜಾಸನ ವಿಷ್ಣುವಿರಲುಮಾರಹರನಿಗಾರತಿ ಎತ್ತಿತಾನೆ ಸಭೆಗೆ ತೋರಿಸುವಳು 2ವಸುಗಳ್ ಸಪ್ತ ಋಷಿಗಳಿರಲುಅಸುರ ಶಿಕ್ಷರು ನುತಿಸುತಿರಲುಪಶುಪತಿಯ ಲೇಪಿಸಿದ ಭಸ್ಮಗೋವಿಂದಾದ್ಯರಿಗೆ ಪ್ರಸಾದ ಕೊಡುವಳ್ 3
--------------
ಗೋವಿಂದದಾಸ
ಒಗತನದೊಳು ಸುಖವಿಲ್ಲ ಒಲ್ಲೆಂದರೆ ನೀ ಬಿಡೆಯಲ್ಲಜಗದೊಳುಹಗರಣಮಿಗಿಲಾಯಿತು ಪನ್ನಂಗನಗನಗರ ನಿವಾಸಮೂರು ಬಣ್ಣಿಗೆಯ ಮನೆಗೆ ಮೂರೆರಡು ಭೂತಗಳುಐದುಮಂದಿ ಭಾವನವರು ಐದುಮೈದುನರು ಕೂಡಿಆರಾರು ಎರಡುಸಾವಿರ ದಾರಿಲಿ ಹೋಗಿ ಬರುವರುಒಬ್ಬ ಬೆಳಕು ಮಾಡುವ ಮತ್ತೊಬ್ಬ ಕತ್ತಲೆಗೈಸುವಆರುಹತ್ತರ ಮೂಲದಿ ಆರುಮಂದಿ ಬಿಡದೆ ಎನ್ನಹಡೆದ ತಾಯಿ ಮಾಯದಿ ಹಿಡಿದು ಬದುಕು ಮಾಡಿಸುವಳುಅತ್ತೆ ಅತ್ತಿಗೆಯು ಎನ್ನ ಸುತ್ತಮುತ್ತ ಕಾದುಕಟ್ಟಿಮನೆಯೊಳು ನಾಳಿನ ಗ್ರಾಸಕ್ಕನುಮಾನ ಸಂದೇಹವಿಲ್ಲನಿನ್ನ ಹೊಂದಿ ಇಷ್ಟು ಬವಣೆಯನ್ನು ಬಡಲೀ ಜನರು
--------------
ಗೋಪಾಲದಾಸರು
ಒಂದೇ ಕೂಗಳತೆ | ಕೈಲಾಸಕ್ಕೆ |ಒಂದೇ ಕೂಗಳತೆ ಪಬಾಲ ಮಾರ್ಕಾಂಡೇಯ ಕಾಲಪಾಶದಿ ಸಿಕ್ಕಿ |ಗೋಳಿಟ್ಟು ಸ್ತುತಿಸಲಾ ನೀಲಕಂಧರನಾ ||ಶೂಲಪಾಣಿಯು ಕಲ್ಲ ಲಿಂಗದಿ ಮೈದೋರಿ |ಕಾಲನ ಮುರಿದೆತ್ತಿ | ಬಾಲನ ಸಲಹಿz À 1ಶಿವನ ಅರ್ಧ ಪ್ರಹರದಿ ಒಲಿಸಿಕೊಳ್ಳುವೆನೆಂದು |ಪವನಾತ್ಮಜನು ಗದೆಯನಂಬರಕ್ಕೆಸೆದು ||ಭುವನದಿ ಸ್ತುತಿಸುತ್ತ ಶಿರಒಡ್ಡಿನಿಂದಿರೆ |ತವಕದಿಂದೈತಂದು ಶಿವನು ಭೀಮನ ಕಾಯ್ದ 2ಚರರನಟ್ಟಿದನೇ ರತ್ನಾಂಗದ ಶಿವನಿಗೆ |ಕರೆಯ ಪೋದನೇ | ಕನ್ಯನೆಂಬ ಚಂಡಾಲ ||ಬರದೋಲೆ ಕಳುಹಿಸಿ ಕೊಟ್ಟಾಳೆ ನರ್ಮದೆ |ಸ್ಮರಿಸಿದಾಕ್ಷಣ ಗೋವಿಂದನಸಖಬರುವರೇ 3
--------------
ಗೋವಿಂದದಾಸ
ಒಳಿತು ಈಶಕುನ ಫಲವಿಂದು ನಮಗೆ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಲಜನಾಭನ ಸಂಗ ದೊರಕುವುದೆ ರಮಣಿ ಪ.ವಾಮಗರುಡನನೋಡು ವಾಯಸದ ಬಲವನ್ನುಕೋಮಲಾಂಗಿಯರೈದು ಪೂರ್ಣಕುಂಭ ||ಸಾಮಾನ್ಯವೇಗೌಳಿ ಬಲಕಾಗಿ ನುಡಿಯುತಿದೆಪ್ರೇಮದಲಿ ಮಧುರ ವಚನವ ಕೇಳು ರಮಣಿ 1ಮೊಳಗುತಿವೆಭೇರಿದುಂದುಭಿ ಘಂಟೆ ವಾದ್ಯಗಳುಫಲ ಪುಷ್ಪ ದಧಿಗಳಿದಿರಾಗುತಿದೆಕೊ ||ಚೆಲುವ ಭಾರದ್ವಾಜ ಪಕ್ಷಿ ಬಲವಾಗುತಿದೆಬಲುಹಂಗಎಡವಾಗುತಿದೆನೋಡುಕೆಳದಿ2ನೋಡು ದ್ವಯ ಬ್ರಾಹ್ಮಣರು ಇದಿರಾಗಿ ಬರುವುದನುಕೂಡಿದುವು ಮನದ ಸಂಕಲ್ಪವೆಲ್ಲ ||ಬೇಡಿದ ವರಗಳೀವ ಪುರಂದರವಿಠಲನನೋಡಿ ಸಂತೋಷದಲಿ ನೆನೆವೆನೆಲೆ ರಮಣಿ 3
--------------
ಪುರಂದರದಾಸರು
ಔತುಕೊಂಡಿ ಯಾಕೊ ನರಹರಿಪ್ರಾರ್ಥನೆಯನ್ನು ಕೇಳೊ ಸ್ವಾಮಿ ಪವೇದ ತಂದುಭಾರಪೊತ್ತುಕೋರೆ ತೋರಿ ಕರುಳ ಬಗೆದುಬೇಡಿ ಭೂಮಿ ದೂಡಿನೃಪರಸಾಗರವ ಬಂಧಿಸಿದ ಭಯವೋ 1ಕದ್ದು ಬೆಣ್ಣೆ ಕಳ್ಳನೆನಿಸಿವದ್ದು ತ್ರಿಪುರಾಸುರರ ಸದೆದುಹದ್ದನೇರುವುದನೆ ಬಿಟ್ಟುಹಯವನೇರಿದ ಭಯವೋ ಸ್ವಾಮಿ 2ತರಳಗೊಲಿದು ಬರಲು ನಿನ್ನಇರಿಸಿ ಸ್ನಾನಕೆನುತ ಪೋಗಿತ್ವರದಿ ಬಂದು ನೋಡಲು ಅದ್ಭುತದಿ ಬೆಳೆದ ಭಯವೋ ದೇವ 3ನಿಲುಕದಿರಲು ನಿನ್ನವದನಯುವಕ ನೋಡಿ ಮೊರೆಯನಿಡಲುತವಕಿಸುವಿ ಬಾಲಕನೆ ನಿನ್ನಸಮಕೆ ಎನ್ನ ಮಾಡಿಕೊ ಎಂದು 4ಸಿರದಿ ಕರವನಿಡುತ ತನ್ನಸಮಕೆ ಬರುವ ತೆರದಿ ನಿನ್ನಸಿರವ ಪಿಡಿದು ಬಿತ್ತಿ ಸ್ತುತಿಸೆಕುಳಿತೆ ಕೂಡಲಿಯ ತೀರದಲಿ 5ಭಕ್ತರೆಲ್ಲ ನೆರೆದು ನಿನ್ನಭಕ್ತಿಪಾಶದಿಂದ ಬಿಗಿದುಇಚ್ಛೆ ಬಂದ ತೆರದಿ ಕುಣಿಸೆಮೆಚ್ಚಿಅವರಪೊರೆವೆÀ ದೇವ6ಬಂದ ಜನರು ಛಂದದಿಂದತುಂಗಭದ್ರೆ ಸಂಗಮದಲಿಮಿಂದು ನಿನ್ನ ವಂದಿಸುವರೊತಂದೆ ಕಮಲನಾಭವಿಠ್ಠಲ 7
--------------
ನಿಡಗುರುಕಿ ಜೀವೂಬಾಯಿ
ಕುಸುಮನಾಭನ ಮಡದಿಯರುಹೆಸರ್ಹೇಳ ಅರ್ಥಿಲಿಹಸುಳೆಯರು ಹಾಡಿ ಪಾಡಿಕುಶಲದಿಕೋಲಹೊಯ್ದುಪ.ಬಂದು ರುಕ್ಮಿಣಿ ಭಾವೆಗೆವಂದಿಸಿ ಭದ್ರೆ ದ್ರೌಪತಿಮಂದಾರಮಲ್ಲಿಗೆ ಸಂಪಿಗೆಚಂದದಿಸೂರ್ಯಾಡಿ1ಕೃಷ್ಣನರಸಿಯರು ಇಬ್ಬರುಬುಕ್ಕಿಟ್ಟುಸೂರ್ಯಾಡಿಗಟ್ಟಿ ಕಂಕಣದ ಕರದಲೆಮುಟ್ಟಿ ಆಲಂಗಿಸುತ 2ಹರದಿರುಕ್ಮಿಣಿ ಕೈಯಮರಿಯದಲೆ ಹಿಡಿದು ದ್ರೌಪತಿದೊರೆಯರ ಹೆಸರ್ಹೇಳಿಮುಂದಕೆ ಬರಬೇಕೆಂದರು 3ಸತ್ಯಭಾಮೆಯ ಕೈಯಅರ್ಥಿಲೆ ಹಿಡಿದು ದ್ರೌಪತಿಮತ್ತೆ ಪತಿಗಳ ಹೆಸರುವಿಸ್ತರಿಸೆಂದರು 4ವಾರಿಜಾಕ್ಷನಹೆಸರುನಾರಿಯರಿಬ್ಬರು ಹೇಳಿಶ್ರೀ ರಾಮೇಶನ ಮಡದಿಯರುಏರಿದರು ಆಸನವ 5
--------------
ಗಲಗಲಿಅವ್ವನವರು
ಕೂಗದೆ ಉಸುರಿಕ್ಕದೆ- ನೀವು |ಬೇಗನೆ ಬನ್ನಿ ರಂಗ ಮನೆಯ ಪೊಕ್ಕ ಪಹೆಜ್ಜೆಗಳಿವೆಕೋ ಮನೆಯಲಿ-ಕಾಲ |ಗೆಜ್ಜೆಯ ದನಿ ಕೇಳಬರುತಲಿದೆ ||ನಿರ್ಜರಪತಿ ತನ್ನ ಮನಸಿಗೆ ಬಂದಂತೆ |ಮಜ್ಜಿಗೆ ಓಕುಳಿ ಆಡಿಹನಕ್ಕ 1ಸೂರಿನ ಕೆಳಗೆ ಕುಳ್ಳಿರಿಸಿ-ತನ್ನ |ಓರಗೆ ಮಕ್ಕಳುಗಳ ನಿಲ್ಲಿಸಿ ||ಕೇರಿಕೇರಿಯಿಂದ ಗೋಡೆ ಧುಮುಕಿ ಪೋಗಿ |ಸೂರೆಗೊಳ್ಳುತಾನೆ ಸುಮ್ಮಗೆ ಬನ್ನಿ 2ಹಾಲು ಚೆಲ್ಲಿ ಹಳ್ಳ ಹರಿದಿಹವೆ-ಮೊಸರ |ಮೇಲಿನ ಕೆನೆಗಳು ಬಳಿದಿಹವೆ ||ಬಾಲಚೋರ ಶ್ರೀ ಪುರಂದರವಿಠಲನು |ಚಾಲುವರಿದರಿನ್ನು ಬಿಡಬಾರದಕ್ಕ 3
--------------
ಪುರಂದರದಾಸರು
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು
ಕೇಶವ ನಾರಾಯಣಮಾಧವ -ಹರಿ |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಸುದೇವಎನಬಾರದೆ ?ಪ.ಕೇಶವನ ನಾಮವನುಏಸುಬಾರಿ ನೆನೆದರೂ |ದೋಷಪರಿಹವಪ್ಪುದು - ಏ ಜಿಹ್ವೆ ಅಪಜಲಜನಾಭನ ನಾಮವು - ಈ ಜಗ - |ದೊಳು ಜನಭಯಹರಣ ||ಸುಲಭವೇದ್ಯನೆನಲೇಕೆ ಸುಖಕೆ ಸಾಧನವಿದು |ಬಲಿಯೆಂಬ ಭಕ್ತನು ಬಗೆದು ರಸವನುಂಡು ಹೇಜಿಹ್ವೆ1ಹೇಮಕಶ್ಯಪ ಸಂಹಾರ - ಭಕ್ತರು ನಿನ್ನ |ನಾಮವ ಸವಿದುಂಬರು ||ವಾಮನ ವಾಮನನೆಂದು ವಂದಿಸಿದವರಿಗೆ |ಶ್ರೀಮದನಂತ ಪುರಂದರವಿಠಲನುಕಾಮಿತ ಫಲವೀವನು - ಹೇಜಿಹ್ವೆ3
--------------
ಪುರಂದರದಾಸರು
ಕೊಬ್ಬಿನಲಿರಬೇಡವೊ - ಏ ನಮ್ಮ ನನುಜಾಕೊಬ್ಬಿನಲಿರಬೇಡವೊ ಪ.ಸಿರಿಬಂದ ಕಾಲಕೆ ಸಿರಿಮದವೆಂಬರುಬಿರಿದು ಬಿರಿದು ಮೇಲಕೆ ಮಾಳ್ಪರುಸಿರಿಹೋದ ಮರುರಿನ ಬಡತನ ಬಂದರೆಹುರುಕು - ಕಜ್ಜಿಯ ತುರಿಸಿ ತಿರುಗುವರಯ್ಯಾ 1ಒಡವೆ ವಸ್ತುವನಿಟ್ಟುಬಡಿವಾರ ಮಾಳ್ಪರುನಡೆಯಲಾರನೆಂದು ಬಳುಕುವರುಸಿಡಿಲು ಎರಗಿದಂತೆ ಬಡತನ ಬಂದರೆಕೊಡವ ಹೊತ್ತನಾರ ತರುವರಯ್ಯ 2ವ್ಯಾಪಾರ ಬಂದಾಗ ವ್ಯಾಪಾರ ಮಾಳ್ಪರುಶಾಪಿಸಿಕೊಂಡರು ಬಡವರ ಕೈಲಿಶ್ರೀಪತಿ ಪುರಂದರವಿಠಲರು ಮುನಿದರೆಭೊಪಾರದೊಳಗೆಲ್ಲ ತಿರಿದು ತಿಂಬರಯ್ಯ 3
--------------
ಪುರಂದರದಾಸರು
ಗುರುಸಾಕಿದ ಗೂಳಿ ಭರದಿಂದ ಬರುತಿದೆ | ಸರಿಸಿಹೋಗಲಿ ಬೇಡಿ ದುರ್ಜನರೇ || ಸರಿಸಿ ಹೋದರೆನಿಮ್ಮ ಬರು ಹೋಗುವ ಹಾದಿ |ತೆರ್ರನೆ ನಿಲ್ಲಿಸುವದು ತಿಳಿದು ನೋಡಿಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಆರು ಕೋಣಗಳನ್ನುಅರಿದುಮುಂದಡಿ ಮಾಡಿ | ಆರೆರ-ಡಾನೆಯ ಅವಚಿಕೊಂಡು | ಕೋರೆತ್ತಿಕೊಂಡು ತಾ ಕೋಪದಿಬರುವಾಗ | ಮೂರು ಮನಿಯ ದಾಟಿ ಮುಂಡಾಯಿತೊ1ಇಬ್ಬರನೊಗೆದು ಒಬ್ಬನ ಕೂಡಾ ಪೋದೀತು |ಅಬ್ಬರಿಸುತಲಾದ ಆನಂದದಿ | ಕಬ್ಬು ಬಿಟ್ಟು ಕಬ್ಬಿಣವಮೆದ್ದು ದಿಬ್ಬಿ ಗೂಡದಲಿಂದಲುಬ್ಬುತದೆ2ಮೋರೆತ್ತಿಕೊಂಡು ಮುಂದಾಡು ಮುಂದಾಡುವ ಸರ್ಪಗೆ |ಮುದ್ದು ಇಕ್ಕುತ ಬಂದು ನಿಲ್ಲುವದು | ಆರು ನೆಲೆಯೆತ್ತಿನೀರು ಕುಡಿದು ಗೊತ್ತು ಸೇರಿತಲ್ಲಿ ಪುರಿವಾಸನಲ್ಲಿ3
--------------
ಜಕ್ಕಪ್ಪಯ್ಯನವರು
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
--------------
ಪುರಂದರದಾಸರು
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
--------------
ಪ್ರಾಣೇಶದಾಸರು
ಚತುರ್ದಶಿಯ ದಿನ(ಹನುಮಂತನನ್ನು ಕುರಿತು)ರಂಭೆ : ಇವನ್ಯಾರೆ ದೂರದಿ ಬರುವವ ಇವನ್ಯಾರೆ ಪ.ಇವನ್ಯಾರೆ ಮಹಾಶಿವನಂದದಿ ಮಾ-ಧವನ ಪೆಗಲೊಳಾಂತು ತವಕದಿ ಬರುವವ 1ದಾಡೆದಂತಮಸಗೀಡಿರುವದು ಮಹಾಕೋಡಗದಂತೆ ಸಗಾಢದಿ ಬರುವವ 2ಕಡಲೊಡೆಯನು ಮೃದುವಡಿಯಡರಿಸಿ ಬಿಡದಡಿಗಡಿಗಾಶ್ರೀತರೊಡಗೂಡಿ ಬರುವವ 3ಊರ್ವಶಿ : ನಾರಿ ಕೇಳೆಲೆಗೆ ವೈಯಾರಿ ನೀ ಮುದದಿನಾರಾಯಣನಿಗೀತ ಬಂಟನಾದಾದರಿದಿವೀರ ರಾಮವತಾರದಿ ಹಿಂದೆ ಹರಿಯಚಾರಕನಾಗಿ ಸೇವೆಯ ಗೈದ ಪರಿಯಕ್ರೂರ ದಶಾಸ್ಯನ ಗಾರುಗೆಡಿಸಿನೃಪವೀರನ ಪೆಗಲಿನೊಳೇರಿಸಿ ದೈತ್ಯರಭೂರಿವಧೆಗೆ ತಾ ಸಾರಥಿಯಾದವಕಾರುಣೀಕ ಮಹಾವೀರ್ಹನುಮಂತ 1ಆಮೇಲೆ ವೀರಾವೇಶದಿ ವಾರಿಧಿಯನುರಾಮನಪ್ಪಣೆಯಿಂದ ದಾಟಿದನಿವನುಭೂಮಿಜೆಗುಂಗುರ ಕೊಟ್ಟ ನಂತರದಿಕಾಮುಕರನು ಸದೆಬಡಿದನಾ ಕ್ಷಣದಿಹೇಮಖಚಿತ ಲಂಕಾಮಹಾನಗರವಹೋಮವ ಗೈದು ಸುತ್ರಾಮಾರಿಗಳ ನಿ-ರ್ನಾಮಿಸಿ ಸೀತೆಗೆ ತಾ ಮಣಿಯುತ ಚೂ-ಡಾಮಣಿ ತಂದ ಮಹಾಮಹಿಮನು ಇವ 2ವಾರಿಮುಖಿ ನೀ ಕೇಳಿದರಿಂದ ಬಂದವೀರ ಹನುಮಂತನನೇರಿ ಗೋವಿಂದಸ್ವಾರಿಗೆ ಪೊರಟ ಚಾತುರ್ದಶಿ ದಿವಸಆರತಿಯನು ಕೈಕೊಳ್ಳುವ ಶ್ರೀನಿವಾಸಭೇರಿಮೃದಂಗ ಮಹಾರವದಿಂದ ಸ-ರೋರುಹನಾಭ ಮುರಾರಿ ಶರಣರುದ್ಧಾರಣಗೈಯುವ ಕಾರಣದಿಂದ ಪಾ-ದಾರವಿಂದಗಳ ತೋರಿಸಿ ಕೊಡುವ 3ಬಳಿಕ ಪಲ್ಲಂಕಿ ಏರಿದ ಕಾಣೆ ನಾರಿನಲವಿಂದ ವೇದಘೋಷವ ಕೇಳ್ವಶೌರಿಜಲಜಭವಾದಿ ನಿರ್ಜರರಿಗಸಾಧ್ಯಸುಲಭನಾದನು ಭಕ್ತಜನಕಿದುಚೋದ್ಯಸುಲಲಿತ ಮಂಟಪದೊಳೊ ನೆಲಸುತ ನಿ-ಶ್ಚಲಿತಾನಂದ ಮಂಗಲದ ಮಹೋತ್ಸವಗಳನೆಲ್ಲವ ಕೈಕೊಳುತಲಿ ಭಕ್ತರಸಲಹುವ ನಿರುತದಿ ಮಲಯಜಗಂಧಿನಿ 4ಶ್ರೀಕಾಂತ ಬಳಿಕ ಭಕ್ತರ ಒಡಗೂಡಿಏಕಾಂತ ಸೇವೆಯಗೊಂಡ ಕೃಪೆಮಾಡಿಸಾಕಾರವಾಗಿ ತೋರುವ ಕಾಣೆ ನಮಗೆಬೇಕಾದ ಇಷ್ಟವ ಕೊಡುವ ಭಕ್ತರಿಗೆಶ್ರೀಕರ ನಾರಾಯಣ ಶ್ರೀನಿವಾಸ ಕೃ-ಪಾಕರ ವಿಬುಧಾನೇಕಾರ್ಚಿತ ರ-ತ್ನಾಕರಶಯನ ಸುಖಾಕರ ಕೋಟಿ ವಿ-ಚಾರಕ ಭಾಸತ್ರಿಲೋಕಾಧಿಪನಿವ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ