ಒಟ್ಟು 32858 ಕಡೆಗಳಲ್ಲಿ , 139 ದಾಸರು , 10357 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗೋಕುಲ ಕೃಷ್ಣ ಗೋಪಿಸ್ತ್ರೀಯರ ಕೂಡೆ ||ಲೋಕ ಮೋಹನ ಲೀಲೆ ತೋರಿದನಲ್ಲಿ ||ಆ ಕನ್ಯೆಯರಿಗೆಲ್ಲ ಬೇಕಾದರೂಪ ತೋರಿ ||ಸಾಕಾರಿಯಾಗಿರೆ ಬಳಿಕೊಂದು ದಿವಸ 1ಸೀರೆ ಕುಪ್ಪಸ ತೊಟ್ಟು | ಹಾರ ಕಡಗವಿಟ್ಟು |ನಾರಿಯೊಬ್ಬಳುಕ್ಷೀರಮಾರುತ್ತ ಬರಲೂ ||ಕೇರಿ ಕೇರಿಗಳಲ್ಲಿ ಚರಿಸುತ್ತಲಿರೆ ಕಂಡು |ವಾರಿಜಾಕ್ಷನು ನಡೆತಂದು ತಾ ನಗುತ್ತ 2ನೀಲಕುಂತಳೆ ಗುಣಶೀಲೆ ಚಂದಿರಮುಖಿ |ಹಾಲ ಸುಂಕವ ಕೊಟ್ಟು ಪೋ | ಗವ್ವ ಚದುರೆ ||ಕೇಳಿಮಾನಿನಿಕ್ರೋಧ ತಾಳಿ ಕೃಷ್ಣನ ಕೂಡೆ |ಹಾಲ ಸುಂಕದ ಕಟ್ಟೆ ಯಾವುದಯ್ಯ ನಿನಗೆ 3ಎಂದು ನಿಂದಿಸಿ ಹಿಂದೆ ತಿರುಗಿ ಪೋಗಲು | ಕಂಡು |ನಂದಕಂದನು ತಾ | ಸೆರಗ ಪಿಡಿದು ತಾ ನಿಲಿಸೆ ||ಚಂದಿರಮುಖಿ ತಾನು ಸೆಣಸಿ ಕೃಷ್ಣನೊಳ್ ಸೋತುಕಂದಿ ಕುಂದುತ ಕೈಯ ಮುಗಿದು ಪೇಳಿದಳು 4ತಂದೆ ಸೆರಗ ಬಿಡು ಕಂದ ಸೆರಗ ಬಿಡು |ಇಂದೆನ್ನ ಗುರುವರ್ಯ | ಸೆರಗ ಬಿಡಯ್ಯ ||ತಂದೆಯು ನಾನಲ್ಲ | ಕಂದನಾನಲ್ಲವೊ | ನಿನ್ನ |ತಂದೆಗಳಿಯನೆಂದು ಭಾವಿಸೆ ತರುಣಿ 5ಮಾವ ಸೆರಗ ಬಿಡು |ಭಾವಸೆರಗ ಬಿಡು |ಸೇವಕಿ ನಿನಗೆ ನಾ ಸೆರಗ ಬಿಡಯ್ಯ ||ಮಾವನಲ್ಲವೊ | ಕೇಳೆ ಭಾವನಲ್ಲವೊ | ನಿನ್ನ ||ಮಾವನ ಮಗನು ನಾ ಕಾಣೆಂದ ಕೃಷ್ಣಾ 6ವಿಧ ವಿಧದಲಿ ಮಾತನಾಡುತಾ ಕೃಷ್ಣ |ಮದನತಾಪವ ಹೆಚ್ಚಿಸಿದನು ಮಾನಿನಿಗೆ |ಪದುಮಾಕ್ಷಿ ಭ್ರಮೆಗೊಂಡುಮದನತಾಪದಿ ನೊಂದು |ಮದನತಾತನನಪ್ಪಿ | ಮುದ್ದಿಸೆ ಕಂಡು 7ತಾಳು ತಾಳೆಲೆ ಸಖಿ ತಾಯಿ ತಂಗಿಗೆ ಸಮ |ಕೇಳು ಜಗದಿ ಪರದಾರಾಂಶ ಜನಕೆ ||ಲೋಲಲೋಚನ ಎನ್ನ ಗೋಳು ಗುಡಿಸದೀಗ |ಆಳು ನಿನ್ನಯ ಜನನಿಗೆ ಸೊಸೆ ಎಂದು ದಯದಿ 8ಇಂತೆಂದು ಕೃಷ್ಣನ ಎದೆಗೆ ಕುಚವನಿತ್ತು |ಸಂತೋಷದಿಂದಲಪ್ಪೀ ಸ್ಮರಿಸುತ್ತಲಿರಲುಕಂತುಜನಕೆ ಗೋವಿಂದಗೆ ದಾಸರೋಳೆಂತು |ಕೃಪೆಯೋ | ನಾರಿಗೊಲಿದಿಷ್ಟ ಸಲಿಸೆ ಗೋಕುಲ 9
ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
ಗೋಕುಲದೊಳಗಿರಲಾರೆವಮ್ಮ-ಗೋಪಮ್ಮ ಕೇಳೆ |ಗೋಕುಲದೊಳಗಿರಲಾರೆವಮ್ಮ ಪಸಾಕು ಸಾಕು ನಮಗೇಕೆ ರಚ್ಚೆಗಳು |ಆ ಕೃಷ್ಣನಪರಿನೀ ಕೇಳಮ್ಮಅ.ಪಹಾಲು-ಮೊಸರು ಕದ್ದರೆ ಕಳಲಿ-ಗೋಪಮ್ಮ ಕೇಳೆ |ಮೇಲಿಟ್ಟ ಬೆಣ್ಣೆ ಮೆದ್ದರೆ ಮೆಲಲಿ-ಗೋಪಮ್ಮ ಕೇಳೀ ||ರೇಳು ಭುವನದೊಳಾಡುತಲಿರಲಿ |ಆಲದೆಲೆಯ ನಮ್ಮಾಲಯವನೆ ಪೊಕ್ಕು-|ಬಾಲೆಯರೆಲ್ಲರ ಬತ್ತಲೆ ಮಾಡಿ ||ಶಾಲೆಗಳೆಲ್ಲ ಮೇಲಕೆ ಹಾರಿಸಿ |ಆಲಂಗಿಸಿಕೊಂಡು ಬರುವನಮ್ಮ 1ತಾನಾಗಿ ಮನೆಗೆ ಬಂದರೆ ಬರಲಿ-ಬಾಹೊ ವೇಳೆಯಲಿ |ಅಣುಗರ ಕೂಡಿಕೊಂಡು ಬರಲಿ-ಕರೆತಂದರೆ ತರಲಿ |ಅನುಬಂಧನಾಗಿ ಇದ್ದರೆ ಇರಲಿ ||ಅನುವು ಕಂಡುಕೊಂಡಾವೇಳೆಯಲಿ |ಉಣಬಿಟ್ಟಾಕಳ ಕರುಗಳನುಣಿಸಿ ||ಮನೆಯವರೆಲ್ಲರನೆಬ್ಬಿಸಿ ತಾನೇ |ಮನೆಯೆಲ್ಲವ ಸೂರಾಡಿದನಮ್ಮ 2ಬಾರಿಬಾರಿಗೆ ಮುನಿದ ಕಳ್ಳ-ಪತಿಯಂತೆ ತಾನು |ನೂರಾರು ಹೆಣ್ಣ ಕೂಡಿದನಲ್ಲ-ಗೋಪಮ್ಮ ಕೇಳೆ |ಯಾರ ಮುಂದೆ ಹೇಳಲಿ ಸೊಲ್ಲ? ||ಓರಗೆಯಲಿ ಸಂಸಾರ ಮಾಡುವ |ನಾರಿಯರೆಲ್ಲರ ರಂಬಿಸಿಕರೆದು ವಿ-|ಕಾರ ಮಾಡದಂತೆ ಪುರಂದರವಿಠಲಗೆ |ಸಾರಿಸಾರಿ ನೀ ಬುದ್ಧಿ ಹೇಳಮ್ಮ 3
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||ಪಿಕಾಸ್ತ್ರೀಯರುತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲುತಂತುಮಾತ್ರಾ ||ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |ಧ್ವಾಂತಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ 1ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದುಕಕ್ಕಸಬಡುತ |ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ 2ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ 3ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||ಹೇಳುವ ಮಾತನುಕೇಳಿಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |ಜಾಲಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ 4ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||ಸುರರುನಭದಿ ನೆರೆದು ಪೂಮಳೆ |ಗರೆಯೆದುಂದುಭಿಮೊರೆಯೆ ಸುಖವ |ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರನುಡಿಸುವ ಸ್ವರಗೇಳಿ 5
ಗೋಪಾಲ ಶ್ರೀಕೃಷ್ಣ ಮೂರುತಿ ನೀನೇಕಾಪಾಡೆನ್ನನುಜಿಷ್ಣುಸಾರಥಿ ಪತಾಪತ್ರಯದೊಳ್ ನೊಂದೆ ತಪಗೈಯ್ಯಲರಿಯೆನು ನೀಕೃಪೆಯೊಳನುದಿನರೂಪತೋರಿಸು ದೇವಾ ಅ.ಪದೇವಕಿಯುದರದಿ ಜನಿಸಿಗೋಪಿದೇವಿಗೆ ತನಯನೆಂದೆನಿಸಿಜೀವ ಘಾತಕೆ ಬಂದ ಪೂತನಿಯಸು ಹೀರಿಗೋವುಗಳನು ಮೇಸಿದೆ 1ದೈತ್ಯರ ಕೊಂದು ಗೋವರ್ಧನವೆತ್ತಿದೇಕಾಮದಿ ಬಂದ ಬಾಲಕಿಯರನು ಕೂಡಿದೇಹಾವಿನ ಹೆಡೆಯ ಮೇಲೆ ನಲಿದು ಬಿಲ್ ಹಬ್ಬದಿಮಾವ ಕಂಸನ ಮುರಿದು ಕರುಣದಿತಾಯಿ ತಂದೆಯ ಸೆರೆಯ ಬಿಡಿಸಿದೆ 2ಶರಧಿಮಧ್ಯದಿ ಮನೆಮಾಡಿದೇಅಲ್ಲಿಭರದಿಂದಷ್ಟಮ ಸ್ತ್ರೀಯರಲಿ ಕೂಡಿದೇನರಮುರಶಾದ್ಯರ ಮುರಿದು ಷೋಡಶ ಸಹಸ್ರತರುಣಿಯರೊಡಗೂಡಿದೇ ಪಾರಿಜಾತತರುವ ನೀನೊಲಿದು ತಂದೆ ಪಾಂಡವರೊಳುಭರಿತ ಕೃಪೆಯ ತೋರಿದೆಧುರದಿಮಾಗಧಚೈದ್ಯ ಧರಣಿಪಾಲರ ಗೆಲ್ದುತರುಣಿ ದ್ರೌಪದಿಗ್ವರವ ಪಾಲಿಸಿನರಗೆ ಸಾರಥಿಯಾದೆ ಶ್ರೀಹರೀ 3ಸಂಧಾನವೆಸಗಿ ಪಾಂಡವರಕರ-ದಿಂದ ಕೊಲ್ಲಿಸಿದೆ ಕೌರವರಚಂದ ಧರ್ಮರಾಯಗೆ ಪಟ್ಟ ಕಟ್ಟಿಸೀನಿಂದಶ್ವಮೇಧಗೈಸಿ ನೀ ಸುರಗಣವೃಂದ ಸಂತಸ ಬಡಿಸಿ ಯಾದವಕುಲ ಮುಗಿಲದಿಂದಲಿಸುಂದರಾಂಗವ ಬಿಟ್ಟು ಕ್ಷೀರಸಿಂಧುವಿಗೈದೆಚಂದದಲಿ ಗೋವಿಂದದಾಸನೆಬಂದು ಮಂಗಲ ಮುಖವ ತೋರಿಸೋ 4
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
ಗೋಪಿಹೇಳೆ ರಂಗಗೆ ಬುದ್ಧಿ ಪಗೋಪಿಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯಸೆರಗುಪಿಡಿವರೇನೇ ||ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ 1ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ |ಗೋಪಿ||ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿಮಾನಕೊಂಬನೆ | ಗೋಪಿ 2ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ |ಗೋಪಿ||ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ 3ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು |ಗೋಪಿ||ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವಮಾರಕಾಣೆವೇ | ಗೋಪಿ 4ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ |ಗೋಪಿ||ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ 5ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ |ಗೋಪಿ||ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವಗಂಡಕರೆಕರೆಮಾಡುವ ಪರಿಪರಿ | ಗೋಪಿ 6ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ |ಗೋಪಿ||ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ 7
ಗೋವರ್ಧನಗಿರಿಯ ನೆಗಹಿಬಂದು - ನೀನಿಲ್ಲಿಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ? ಪಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ? 1ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು |ಅಸುಗುಂದಿ ಮಲಗಿದೆಯೊ- ಶ್ರೀರಂಗ 2ಕಡಹದ ಮರದಿಂದ ಧುಮುಕಿ ಕಾಳಿಂಗನ |ಹೆಡೆಯ ತುಳಿದು ಕಾಲ್ನೊಂದು ಮಲಗಿದೆಯೊ? 3ಬಾಲ ಬ್ರಹ್ಮಣನಾಗಿ ಬಲಿಯ ದಾನವ ಬೇಡಿ |ನೆಲನನಳೆದು ಕಾಲುನೊಂದು ಮಲಗಿದೆಯೊ? 4ಶ್ರೀಶ ಶ್ರೀರಂಗರಾಜಪರಮಪಾವನ |ಶೇಷಶಯನ ಶ್ರೀಪುರಂದರ ವಿಠಲ 5
ಗೋವಿಂದ ನಮೋ ಗೋವಿಂದ ನಮೋ ಗೋವಿಂದ - ನಾರಾಯಣ |ಗೋವರ್ಧನ ಗಿರಿಯೆತ್ತಿದ ಗೋವಿಂದ - ನಮ್ಮ ರಕ್ಷಿಸೊ ಪ.ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ |ಕರ್ತು ಯಮನವರೆಳೆದು ಒಯ್ಯಲು ಅರ್ಥ- ಪುತ್ರರು ಕಾಯ್ವರೆ 1ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು |ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ 2ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು |ಬಿಡದೆ ಯಮನವರೆಳದು ಒಯ್ಯಲು ಎಡವಿಬಿದ್ದಿತು ನಾಲಗೆ 3ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು |ಪ್ರಾಣ ಹೋಗಲು ಮುಟ್ಟಲಂಜುವಳುಜಾಣೆ ಕರೆದರೆ ಬಾರಳು 4ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು |ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು 5ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು |ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು 6ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ |ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ 7
ಗೋವಿಂದ ನಮೋ ಗೋವಿಂದಹರಿಗೋವಿಂದಂ ನಮೋ ಗೋವಿಂದ ಪಗೋವಿಂದಂ ನಮೋ ಗೋವಿಂದೆಂದೊಡೆಬಂದ ಜರಾಮರಣ್ಹರಿದುಪೋಪುದು ಅ.ಪಶರಧಿಮುಳುಗಿದ ಗೋವಿಂದಂ ನಮೋಶರಧಿಈಸಿದ ಗೋವಿಂದಕರಿಕೆಯನು ಮೆದ್ದ ಗೋವಿಂದಂ ನಮೋನರಮೃಗಾಕಾರ ಗೋವಿಂದಪರಶು ಧರಿಸಿದ ಗೋವಿಂದಂ ನಮೋಧರೆಯ ಬೇಡಿದ ಗೋವಿಂದಶರಧಿಹೂಳಿದ ಗಿರಿಯನೆತ್ತಿದಪುರವ ಭಂಗಿಸಿದ ತುರಗವೇರಿದ 1ಸಿಂಧುಕಲಕಿದ ಗೋವಿಂದಂ ನಮೋಸಿಂಧುಮಂದಿರ ಗೋವಿಂದಮಂದರೋದ್ಧಾರ ಗೋವಿಂದಂ ನಮೋಇಂದಿರೆಯ ಪ್ರಿಯ ಗೋವಿಂದಬಂದ ಭುವನಕೆ ಗೋವಿಂದಂ ನಮೋನಿಂದ ಗಿರಿಯಲಿ ಗೋವಿಂದಬಂದ ಭಕುತರ ಬಂಧ ಕಳೆದಾನಂದ ನೀಡುತ ಚೆಂದದಾಳುವ 2ದನುಜಸಂಹರ ಗೋವಿಂದಂ ನಮೋಚಿನುಮಯಾತ್ಮಕ ಗೋವಿಂದಮ(ನುಮುನಿಯಾ) ನಂದಗೋವಿಂದಂ ನಮೋಚಿನುಮಯಾತ್ಮಕ ಗೋವಿಂದವಿನಮಿತಾಗಮ ಗೋವಿಂದಂ ನಮೋಜನಕಜೆಯವರಗೋವಿಂದವನಜಸಂಭವವಿನುತ ವಿಶ್ವೇಶಜನಕ ಜಾಹ್ನವೀಸುಜನಶುಭಕರ3ನೀಲಶ್ಯಾಮಹರಿಗೋವಿಂದಂ ನಮೋಲೋಲಗಾನ ಸಿರಿಗೋವಿಂದಕಾಲಕುಜ(ನ) ಕುಲ ಗೋವಿಂದಂ ನಮೋಪಾಲಮೂಲೋಕ ಗೋವಿಂದಮಾಲಕೌಸ್ತುಭ ಗೋವಿಂದಂ ನಮೋಮೇಲುಆಲಯಗೋವಿಂದಕಾಳಿಮದ್ರ್ನ ಕಾಲಭಯಹರಲೀಲಸಮ ವಿಶಾಲಮಹಿಮ 4ಸತ್ಯ ಸಂಕಲ್ಪ ಗೋವಿಂದಂ ನಮೋಸತ್ಯಸನ್ನುತಗೋವಿಂದಭಕ್ತವತ್ಸಲ ಗೋವಿಂದಂ ನಮೋನಿತ್ಯನಿರ್ಮಲ ಗೋವಿಂದಚಿತ್ತಜನಪಿತ ಗೋವಿಂದಂ ನಮೋಮೃತ್ಯು ಸಂಹರ ಗೋವಿಂದಭಕ್ತಜನರಾಪತ್ತು ಪರಿಹರಮುಕ್ತಿದಾಯಕಕರ್ತುಶ್ರೀರಾಮ5
ಗೌರೀವರಶಿವ ನಮೋ ನಮೋ | ಶಿವ |ಗೌರೀವರ ಶಿವ ನಮೋ ನಮೋ |ಈಶಪರಾತ್ಪರದೋಷನಿವಾರ |ಕಾಶೀಪುರವರವಾಸ ವಿಶ್ವೇಶ್ವರ 1ಕರಿಚರ್ಮಾಂಬರ ಕರುಣಾಕರ |ಸ್ಮರಿಸಲು ಸರ್ವರದುರಿತನಿವಾರ 2ಭಸ್ಮಾಲೇಪನ ಶಶಿಶೇಖರವೃಷಭವಾಹನ ಸ್ಮಶಾನ ಸಂಚಾರ 3ಸುರ ಗಂಗಾಧರ | ನರರುಂಡಮಾಲಾ |ಕರದಿ ತ್ರಿಶೂಲವು ಉರಗಕುಂಡಲ 4ಜಟಾಮಕುಟ ನೀಲಕಂಠೇಶ್ವರಾ |ಅಡವಿಯೊಳ್ಕೈರಾತನಟನ ಶಂಕರ 5ಷಣ್ಮುಖ ಭೈರವ ಭೃಂಗಿ ಪ್ರಮಥ |ಗಣನಾಥ ವೀರಭದ್ರ | ನಂದಿವಂ ದಿತ 6ಮಂದರಧರಗೋವಿಂದನ ಸಖನೆ |ವಂದಿಪೆದಾಸನ ಪಾಲಿಸು ಶಿವನೆ 7
ಘಟಿಕಾಚಲದಿ ನಿಂತ-ಶ್ರೀ ಹನುಮಂತ ಪಘಟಿಕಾಚಲದಿ ನಿಂತ-ಪಟು ಹನುಮಂತ ತನ್ನಪಠನೆಯ ಮಾಡಲುತ್ಕಟದಿ ಪೊರೆವೆನೆಂದು ಅ.ಪಚತುರ ಯುಗದಿ ತಾನು-ಮುಖ್ಯ ಪ್ರಾಣ- ಚತುರ ಮುಖನಯ್ಯನ |ಚತುರಮೂರ್ತಿಗಳನು ಚತುರತನದಿ ಭಜಿಸಿ |ಚತುರ್ಮುಖವಾಣಿ ಜಗಕೆ ಚತುರ್ವಿಧ ಫಲವ ಕೊಡುತ 1ಸರಸಿಜಭವಗೋಸುಗ- ಕರ್ಮಠ ದೂಮವರಚಕ್ರತೀರ್ಥಸರ |ಮೆರೆವ ಛಲದಿನಿತ್ಯನರಹರಿಗೆದುರಾಗಿಸ್ಥಿರ ಯೋಗಾಸನದಲಿ ಕರೆದು ವರಗಳ ಕೊಡುತ 2ಶಂಖಚಕ್ರವ ಧರಿಸಿ-ಭಕ್ತರ ಮನಃ-ಪಂಕವ ಪರಿಹರಿಸಿ |ಪಂಕಜನಾಭಶ್ರೀ ಪುರಂದರವಿಠಲನ |ಬಿಂಕದ ಸೇವಕ ಸಂಕಟ ಕಳೆಯುತ 3
ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲಪಮಹಾಮಾಯಾಮಾಯಾಅವ್ಯಾಕೃತಿ |ಆಹಿರಣ್ಯಗರ್ಭವಿರಾಟಲ್ಲ1ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿಉನ್ಮನಿಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||
ಚಂಚಲಾಕ್ಷಿ ಕೇಳ್ ಪಂಚಬಾಣನ |ಮಿಂಚಿನಂಥ ಶರ ತಾಳಲಾರೆ ನಾನು |ಕಂಚುಕಿಯನು ನಿನಗೊಂಚಿಸದೀವೆನು |ಕೊಂಚ ಮುಖ ತೋರಿನ್ನು ಚಂಚಲಾಕ್ಷಿ 1ಜಾಣೆ ನಿನ್ನನು ಕಾಣೆದೆನ್ನಯ |ಪ್ರಾಣನಿಲ್ಲದೇನೇ ||ತ್ರಾಣಗುಂದಿತು ಪ್ರಾಣನಾಯಕಿ |ಕಾಣೆ ನಿನ್ನ ಗಂಡನಾಣೆ || 2ಪಟ್ಟೆ ಸೀರೆಯನ್ನುಟ್ಟುಕೊಳ್ಳೆ ನಿನ್ನ |ತೊಟ್ಟಿಕೊಳ್ವೆ ಬಾರೆ ||ಗಟ್ಟಿಗೆ ನಿನ್ನಯ ಗುಟ್ಟನರಿತೆನು |ಗಟ್ಟಿ ಬಳೆಯ ಕೊಡುವೆ ನೀರೆ 3ಮಂದಗಾಮಿನಿ ಸುಂದರಾಂಗಿಯೆ |ಬಂದು ಎನ್ನ ಕೂಡೆ ||ಚಂದದಿಂದ ಗೋವಿಂದನೊಡನೇ ಬೇ |ಗೊಂದು ಮಾತನಾಡೇ ||ಹ|| 4
ಚಂಚಲಿಸದಿರು ನೀನು ಚತುರನಾಗುವಂಚಿಸದೆ ಸಕಲವೊಪ್ಪಿಸು ಹರಿಗೆ ಮನವೆ ಪ.ಆರು ನಿನ್ನವರೆಂಬೆ ಅವರಗಲಿದರು ಕಡೆಗೆಭೂರಿಸಂಚಿತ ಸಂಪದೆರವಾಯಿತುಜಾರುತಿವೆ ಕ್ಷಣಲವಗಳೀಗಾಗೆ ತಿಳಿಯದುನಾರಸಿಂಹನ ನಂಬು ನಿಷ್ಠೆಯಲಿ ಮನವೆ 1ಅಲ್ಪಸುಖಕಾಗಿ ನೀ ಅನೇಕ ಸುಖ ಮರೆವರೆಕಲ್ಪಕಲ್ಪಕೆ ನಿರಯವುಣಲಿಬಹುದೆಅಲ್ಪರುಪದೇಶದಲಿ ಭ್ರಾಂತನಾಗದೆಶೇಷತಲ್ಪನ್ನ ಮರೆಹೋಗು ತಡೆಯದಲೆ ಮನವೆ 2ನಿನ್ನಿಂದಭವಬಂಧನವು ಮೋಚನವುನೋಡುನಿನ್ನಿಂದ ಪ್ರಸನ್ವೆಂಕಟೇಶನೊಲುಮೆಇನ್ನೆನ್ನ ದಣಿಸದಿರು ಇದರಿಂದ ಮೀರಿದರೆಘನ್ನಗುರು ಮಧ್ವೇಶನಾಣೆ ನಿನಗೆ 3