ಒಟ್ಟು 25998 ಕಡೆಗಳಲ್ಲಿ , 137 ದಾಸರು , 9262 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧನವೇಕೆ ಸಾಧನವೇಕೆಸದ್ಗುರುನಾಥ ಸನಿಹದಿ ಇರಲಿಕೆಪಯಮನಿಯಮಾಸನ ಎಂಬಿವು ಯಾಕೆಕಮಲಾಸನವನು ಬಲಿಯಲದೇಕೆಶ್ರಮದಲಿ ವಾಯುವ ಬಿಗಿಯಲದೇಕೆಭ್ರಮಿತದಿ ಬ್ರಹ್ಮನ ಕಾಣುವುದೇಕೆ1ಮಿತ ಆಹಾರವ ಮಾಡಲದೇಕೆಅತಿ ವೈರಾಗ್ಯವು ದೇಹಕೆ ಯಾಕೆಸತತವು ಕಾಡನು ಸೇರುವುದೇಕೆಮತಿ ತಿಳಿಯದೆ ತಿರುಗಾಡುವುದೇಕೆ2ಶರಧಿಯು ತಾನಿರೆ ಒರತೆಯದೇಕೆತರಣಿಯೆ ತಾನಿರೆ ದೀಪವದೇಕೆಗುರುಚಿದಾನಂದನಿರೆ ಯೋಗಗಳೇಕೆಗುರುಕೃಪೆ ದೊರೆತರೆ ಭಯ ತಾನೇಕೆ3
--------------
ಚಿದಾನಂದ ಅವಧೂತರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು
ಸಾಂಬಶ್ರೀವಾಹನ ಕುಂಟೋಜೀಶಾ |ಸುಂದರ ಬಸವೇಶಾಪxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಜಗದೊಳಗಿಹ ಜನರಘನಾಶ |ಸುಗಮದಿ ಕಡಿವನು ಭವದಪಾಶ|ಅಗಣಿತಶಿವಗಣರೊಳು ಮೆರೆವಅವಿನಾಶ1ಗಳಬೆನ್ನವನಿತ್ತು ಪರೇಶ |ಮಾಳ ಹೊಲಗಳ ನಡಿಸುವನೀಶ |ತಿಳಿ ಮನದೊಳು ಬೆಳಗುವ ಜ್ಯೋತಿ ಪ್ರಕಾಶ2ಧರಣಿಗಧಿಕವಾದ ಕೈಲಾಸ |ಪೊರೆವುತ ಕುಂಟೋಜ ನಿವಾಸಾ |ಸ್ಥಿರವಾಗಲು ಶಂಕರಗಾಯಿತು ಉಲ್ಹಾಸ3ಸುಂದರ ಬಸವೇಶ ||
--------------
ಜಕ್ಕಪ್ಪಯ್ಯನವರು
ಸಾಯಬೇಕೊಂದು ದಿನ ಎಲೆ ಮನ ಪ.ಮಾಯಾಮಮತೆಯ ಜಾಯಾದಿಗಳ ಸ-ಹಾಯವಿದ್ಧರೀ ಕಾಯವ ತೊರೆದು 1ಎಷ್ಟು ಬದುಕಿದು ಗಟ್ಟ್ಯಾಗಿದ್ದರೂಪಟ್ಟವಾಳಿದರು ಬಿಟ್ಟೆಲ್ಲವನು 2ಕರ್ತಲಕ್ಷ್ಮೀನಾರಾಯಣನಪಾದಭಕ್ತಿಸಾಧನೆಯೊಳ್ ನಿತ್ಯನಾಗಿರು 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಾಯುಧ ಚತುರ್ವಿಂಶತಿ ವಿಷ್ಣುರೂಪ ಸ್ತೋತ್ರ46ಬಲದ ಅಜಾನುಕರ ಮೊದಲು ಪ್ರದಕ್ಷಿಣದಿಸಲಿಲಜಾದಿಧರರಮಾಪತೇ ನಮಸ್ತೇ ಪಅರವಿಂದ -ಶಂಖ ಸುದರ್ಶನ ಕೌಮೋದಕೀಧರನಮೋ ಕೇಶವ ಶ್ರೀಶ ಬ್ರಹ್ಮೇಶ 1ದರಾಂಬುಜಗದಾಚಕ್ರಧರಶ್ರೀಶ ನಮೋನಾರಾಯಣ ದೋಷದೂರಗುಣಪೂರ್ಣ 2ಕೌಮೋದಕೀಚಕ್ರದರಕಮಲಹಸ್ತನೇನಮೋಮಾಧವಲಕ್ಷ್ಮೀರಮಣ ಮಾಂಪಾಹಿ3ಚಕ್ರ ಕೌಮೋದಕೀ ಪ್ರಫುಲ್ಲ ಅರವಿಂದಶಂಖ ಧರ ಗೋವಿಂದ ನಮೋ ವೇದವೇದ್ಯ 4ಗದಾಸರೋರುಹಶಂಖಚಕ್ರಧರವಿಷ್ಣೋಮೋದಮಯ ಸರ್ವತ್ರ ಬಹಿರಂತವ್ರ್ಯಾಪ್ತ 5ಸಹಸ್ರಾರ ಶಂಖಾಬ್ಜ ಗದಾಧರ ನಮಸ್ತೇಪಾಹಿಮಧುಸೂಧನ ಮಹಾರ್ಹ ಹಯಶೀರ್ಷ6ಅಂಬುಜಗದಾಚಕ್ರ ಶಂಖೀ ತ್ರಿವಿಕ್ರಮನೆಪುಷ್ಪಜಾರ್ಚಿತ ತ್ರಿಪದ ನಮೋ ವಿಶ್ವರೂಪ 7ಶಂಖಾರಿ ಕೌಮೋದಕೀ ಪದ್ಮ ಹಸ್ತನೇಮಂಗಳ ಸುಸೌಂದರ್ಯ ವಾಮನ ನಮಸ್ತೇ 8ಇಂದೀವರಾರಿಗದಾಶಂಖೀ ನಮಸ್ತೇಶ್ರೀಧರ ಸದಾ ನಮೋ ಶ್ರೀವತ್ಸಪಾಹಿ9ಗದಾ ಚಕ್ರ ಪದ್ಮಧರಾಹಸ್ತಹೃಷಿಕೇಶಇಂದ್ರಿಯ ನಿಯಾಮಕ ದೇವದೇವೇಶ 10ಶಂಖಾಬ್ಜರಿಗದಾಧರಪದ್ಮನಾಭಅಕಳಂಕ ಮಹಿಮ ಜಗಜ್ಜನ್ಮಾದಿಕರ್ತ 11ಕಮಲಧರ ಕೌಮೋದಕೀ ಚಕ್ರೀ ಈಶದಾಮೋದರ ದೇವ ಸುಜ್ಞಾನದಾತ 12ಕೌಮೋದಕೀ ಶಂಖ ಅಬ್ಜಾರಿಪಾಣಿನ್ಮಮ ಪಾಪಹರ ಸಂಕರ್ಷಣ ಜಯೇಶ 13ಗದಾಶಂಖ ಚಕ್ರಾಬ್ಜಹಸ್ತ ಮಾಯೇಶಸದಾ ನಮೋ ಳಾಳುಕ ಡರಿವಾಸುದೇವ14ರಥಾಂಗಕಂಬುಗದಾ ಕಮಲಧರ ಪ್ರದ್ಯುಮ್ನಕೃತಿದೇವಿರಮಣ ನಮೋ ಭಾಸ್ವ ಮದ್ ಹೃದಯೇ 15ರಥಾಂಗಗದಾಕಂಬುಕಮಲಹಸ್ತನಮೋಶಾಂತೀಶ ಅನಿರುದ್ಧ ಶರಣು ಮಾಂಪಾಹಿ16ಅರಿಕಮಲಶಂಖ ಗದಾಧರ ಪುರುಷೋತ್ತಮಕ್ಷರಾ ಕ್ಷರೋತ್ತಮ ಪೂರುಷ ಸ್ವತಂತ್ರ ನಮೋಪಾಹಿ17ಪದ್ಮ ಗದಾ ಶಂಖಾರಿಧರಅಧೋಕ್ಷಜನಮೋಮೋದಮಯ ಕಪಿಲ ಭಾಮನ ಡರಕವಿಶ್ವ18ಚಕ್ರಾಬ್ಜ ಗದಾ ಶಂಖ ಭಕ್ತ ರಕ್ಷಕ ನಮೋಸದಾನಂದ ಚಿನ್ಮಯಅನಘಅವಿಕಾರಿ19ಅಬ್ಜಾರಿ ಶಂಖ ಗದಾಧರ ಜನಾರ್ಧನ ನಮೋಅಜಿತಅಜಸಂಸಾರ ಬಂಧ ಹರ ಸುಖದಾ20ದರಗದಾಅರಿಅಬ್ಜಧರ ಉಪೇಂದ್ರ ನಮೋಇಂದ್ರಾನುಜನೇ ಬ್ರಹ್ಮ ರುದ್ರಾದಿ ವಂದ್ಯ 21ದರಸುದರ್ಶನಕಮಲಕೌಮೋದಕೀ ಪಿಡಿದಹರಿಶ್ರೀಯಃಪತಿಅಭಯವರದನೇ ಶರಣು22ಶಂಖ ಕೌಮೋದಕೀ ಅಬ್ಜಾರಿಧರ ಕೃಷ್ಣಸುಖಜ್ಞಾನ ಚೇಷ್ಟಾರೂಪನಮೋ ಶ್ರೀಶ23ಮಧ್ವ ಹೃದ್ವನಜಸ್ಥ ಚತುರ್ವಿಂಶತಿರೂಪಉದ್ದಾಮ ಪರಮಾರ್ತಹರಿಶ್ರೀಶ ಶರಣು24ಮತ್ಸ್ಯಕೂರ್ಮಕ್ರೋಡನರಸಿಂಹವಟುರೇಣು-ಕಾತ್ಮಜ ಶ್ರೀರಾಮ ಕೃಷ್ಣ ಶಿಶು ಕಲ್ಕಿ 25ಆನಂದಚಿನ್ಮಯ ಅನಂತ ರೂಪನೇ ನಮೋವನಜಭವಪಿತ ಶ್ರೀ ಪ್ರಸನ್ನ ಶ್ರೀನಿವಾಸನೇ ನಮೋ 26
--------------
ಪ್ರಸನ್ನ ಶ್ರೀನಿವಾಸದಾಸರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು
ಸಾರ್ಥಕವು ಸಾರ್ಥಕವು ಸಾರ್ಥಕವುದೇಹಕ್ಕೆಗತಿಕಂಡರೆಪಸಂಸಾರತೃಷೆಎಂದರಿದರೆಸಂಸಾರಕೆ ಹತ್ತದಿದ್ದರೆಅಂಶವಿದು ಜಗ ಬ್ರಹ್ಮವೆಂದರೆಸಂಶಯ ಮೂಲವನೆ ಕಳೆದರೆ1ತನುವಿನ ಅಭಿಮಾನ ಬಿಟ್ಟರೇಮನದ ಧಾವಾಂತ ನೀಗಿದರೆಘನದುರ್ಗುಣಗಳಕುಡಿಚೂಡಿದರೆಕನಕವು ನರಕವು ಸರಿಯೆಂದಾದರೆ2ಗುರುಪಾದಕ್ಕೆ ಮೊರೆ ಹೊಕ್ಕರೆಗುರುವಿಂದ ತನ್ನನು ತಿಳಿದರೆಗುರುವಾಗಿಯೇ ತನ್ನನು ಕಂಡರೆಗುರುಚಿದಾನಂದನಾಗಿಯೆ ನಿಂತರೆ3
--------------
ಚಿದಾನಂದ ಅವಧೂತರು
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ |ಭಕ್ತವತ್ಸಲ ದೇವನು ಪಮಕ್ಕಳ ಚೆಂಡಿಕೆ ಮರದ ಕೊನೆಗೆಕಟ್ಟಿ|ಗಕ್ಕನೆ ಕೃಷ್ಣ ಚೆಪ್ಪಾಳಿಕ್ಕಿದನಮ್ಮ ಅ.ಪಹೆಣ್ಣು ಮಕ್ಕಳು ಬಚ್ಚಲೊಳಗೆಣ್ಣೆ ಮಂಡೆಯೊಳು |ಬಣ್ಣವಸ್ತ್ರವ ಬಿಚ್ಚಿ ಬರಿಮೈಯಲಿರುತಿರೆ ||ಕಣ್ಣಿಗೆ ಬಿಸಿನೀರ ಚೆಲ್ಲಿ ಸೀರೆಯನೊಯ್ದು |ಉನ್ನತವಾದ ವೃಕ್ಷವನೇರಿದನೆ ರಂಗ 1ಪಟ್ಟೆಮಂಚದ ಮೇಲೆ ಪತಿಯಂತೆ ಕುಳಿತಿರುವ |ಎಷ್ಟು ಸ್ವಾತಂತ್ರ್ಯವೆಗೋಪಿ||ಉಟ್ಟ ಸೀರೆಯನೆಳೆದು ಬಟ್ಟಕುಚವ ಪಿಡಿದು |ಅಷ್ಟು ಮಂದಿಗಳೊಳಗೆ ಗಟ್ಟಿ ಅಪ್ಪಿಕೊಂಡನೆ 2ಸಡಗರದಿಂದ ಗೋವಳಿತಿಯರೊಡಗೂಡಿ |ನುಡಿಸುತ ಕೊಳಲನು ಪುರದೊಳಗೆ ||ಕಡೆವ ಮಡದಿಯರ ಕೈ ಪಿಡಿದಾಡುವ |ಒಡೆಯನೆ ನಮ್ಮ ಶ್ರೀಪುರಂದರವಿಠಲ 3
--------------
ಪುರಂದರದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು
ಸಿಕ್ಕಿದೆ ಬಾರೆಲೆ ಹೇ ಕಳ್ಳಾ ನಿನ್ನಚೊಕ್ಕ ಸಹಸಾ ಜರಿವವಳಲ್ಲಭಕುತೀಲೆ ಕಟ್ಟುವೆ ಈರಡಿಯ ನಡೆಅಕ್ಕ ಗೋಪಮ್ಮನಿದ್ದೆಡೆಯ ಪ.ಮುನ್ನಿನಪರಾಧಗಳ ತಾಳ್ದೆ ನಾನಿನ್ನ ದಿಟ್ಟತನ ಬಲವರಿದೆಚಿನ್ನನೆನಬಹುದೇನೊ ನಿನಗೆ ದಿಟ್ಟಗಣ್ಣವ್ಹರಿದೆಮ್ಮಯ ಮೊಲೆಗೆಉನ್ನತ ಗೋಡೆಗೆ ನಿಚ್ಚಣಿಕೆಯಿಕ್ಕದೆ ಪಾರಿದೆಘನ್ನ ಪಾಲು ಮೊಸರ ಗೋಪರೊಡನೆ ಸವಿದೆಉನ್ನತ ಮಹಿಮೆಯೆತ್ತ ಘನ್ನಜಾರತನಯೆತ್ತಬೆನ್ನ ಬಡಿಯುತ ನಗೆ ಬಿಡದಿಹ ಕಳ್ಳಾ 1ಹರಿಮಧ್ಯದಬಲೆಯರೆಳೆದೆ ಪಂಚಶರನ ಭರಕೆ ಮತಿಗಳೆದೆಹರವಿ ತುಪ್ಪಾದರೆ ನೆಗೆದೆ ಈಗಕರೆದರೆ ಬರಲೊಲ್ಲೆ ನಗದೆಚೋರತನವೇಕೆ ಗಂಭೀರತನವೇಕೆಪರಿಪರಿಹಲವಂಗವೇಕೆ ವರಕರುಣೇಕೆಸಿರಿಕಾಂತನಹದೆತ್ತ ದುರುಳತನಗಳೆತ್ತಕ್ರೂರಮುಖಕಂಜಿದಡೆ ಬಿರುದು ಪೋಯಿತಲಾ 2ತೊಂಡಮಕ್ಕಳ ಬಲವ ನೋಡಿದೆ ಬಲುಪುಂಡನಂತೆ ಕದನವನಾಡಿದೆಭಂಡತನದಲೊಬ್ಬನ ಬಡಿದೆ ದೊಡ್ಡಗಂಡಸಿನಂದದಿ ಮೇಲೋಡಿದೆಗಂಡನುಳ್ಳ ಬಾಲೆಯರ ಸದನಕೆ ಗಮಿಸಿ ಪ್ರಚಂಡತನದಿ ಮಿಂಡವೆಣ್ಣುಗಳ ಪಿಡಿದೆತಂಡ ತಂಡದೊಳು ಮುದ್ದುಕೊಡಲೀಸದಿರರು ಬೊಮ್ಮಾಂಡ ಪತಿಯಾದರಿದು ಸಲುವುದೆ ಕಳ್ಳಾ 3ಉತ್ತಮ ಮರ ನೆರಳ ನೋಡಿದೆ ಮರಹತ್ತುತಲೆ ಚಂಡನೀಡಾಡಿದೆಸುತ್ತಲಿಹ ಗೋವರ ಬೇಡಿದೆ ಅವರೆತ್ತಿ ಕೊಡದಿರೆ ಹಗೆವಿಡಿದೆಮತ್ತಮಾವನ್ನೊತ್ತಿ ಮುದುಮುತ್ತನ ಕೈವಿಡಿದೆಕತ್ತಲೆ ಹಕ್ಕಿಯ ಮಾಡಿ ದಿತಿಜರನರಿದೆಎತ್ತಣ ವೈಕುಂಠ ನಿನಗೆತ್ತಣನಂತಾಸನವೊಭಕ್ತರ ಕಾಯ್ದೆ ಆವಪಟ್ಟಲಿಹೆ ಕಳ್ಳಾ 4ಪೊಂದೊಡಿಗೆ ತೊಡದೆ ನಡುವಿರುಳೆ ಬರೆಕುಂದದೆ ವ್ರತಗೆಟ್ಟ ತರಳೆಛಂದವೇನೊ ನಿನಗೀವಾಜರೆಲೆ ಗೋವಿಂದೆರಡು ಕೈಕಟ್ಟಿ ತೋರಲೆಒಂದೊಂದುಸುರಲಿ ನಿನ್ನ ಗುಣಮಾಣಿಕದಖಣಿಅಂಧರಿಗರಿವುದೆ ಪ್ರಸನ್ವೆಂಕಟೇಶಮಂದರಘ ರಂಧ್ರಾವಳಿ ಪೊಂದಿಸಿ ನೋಡಲಾಗದುಇಂದಿರೆಯರಸನೆ ದಾಸವೃಂದವನು ಪೊರೆಯೊ 5
--------------
ಪ್ರಸನ್ನವೆಂಕಟದಾಸರು
ಸಿಕ್ಕಿದೆಯೋ ಎಲೆ ಜೀವ-ನಿನ್ನ-ಕುಕ್ಕಿ ಕೊಲ್ಲದೆ ಬಿಡರು ಪಸೊಕ್ಕಿದ ಹೆಣ್ಣಿಗೆ ನೀ ಮರುಳಾದೆ |ಉಕ್ಕಿನ ಕಂಬಕೆ ನೀ ಗುರಿಯಾದೆ ಅ.ಪಹಾಳೂರ ಕೋಳಕೆ-ಕಾಲು ಚಾಚಿದ ಹಾಗೆ |ಮೂಳ ಸಂಸಾರಕೆ ನೀ ಗುರಿಯಾಗಿ ||ತೇಲುತ ಮುಳುಗುತ ಇಲ್ಲಿಗೆ ಬಂದೆ 1ಸತಿ-ಸುತರೆಂಬುವರೆ - ಹಿತರೆಂದು ನಂಬಿದೆಯೊ |ಯತಿಗಳ ತಿಥಿಗಳು ಬಂದರೆ ಮನೆಗೆ-||ಗತಿಯಿಲ್ಲವೆಂದು ಖತಿಗೊಂಡೆಯಲ್ಲೊ 2ಶುನಕನಂದದಿ ನೀನು ಮನೆಮನೆಯನು ತಿರುಗಿ |ಘನಘನವಾದ ಕೂಳನೆ ತಿಂದು ||ತನುವ ತಗ್ಗಿಸಿ ಇಲ್ಲಿಗೆ ಬಂದೆ 3ಕಂಡವರ ಒಡವೆಯ-ಖಂಡುಗ ಧನವನು |ಮಿಂಡೆಯರ ಒಡವೆಯ ಭಂಡತನದಲಿ ||ಕಂಡುಕಾಣದೆ ನೀ ತಿಂದೆಯಲ್ಲೊ 4ಗೋಪಾಲಕೃಷ್ಣಯ್ಯ-ತಾಪತ್ರಯವ ಕಳೆವ |ಆಪತ್ತೆಲ್ಲ ಪರಿಹಾರ ಮಾಡುವ ||ಶ್ರೀಪತಿ ಪುರಂದರವಿಠಲನ ನೆನೆಯದೆ 5
--------------
ಪುರಂದರದಾಸರು
ಸಿದ್ಧಿ ಗಣವರ ಬುದ್ಧಿ ನೀಡೆನ್ನನುದ್ಧಾರಮಾಡು ಬೇಗನೆಬದ್ಧಗುಣಗಳ ತಿದ್ದಿ ಎನಗೆ ಶುದ್ಧಮತಿ ನೀಡು ಬೇಗನೆ ಪವಿಮಲಮನ ಸನಮಿತ ತವಪಾದಕಮಲ ಭಜಿಸುವೆನಭನೆವಿಮಲವಿದ್ಯವ ಕ್ರಮದಿಂ ಪಾಲಿಸು ಹಿಮಜೆಸುತ ಕರಿವರದನೆ 1ಸೋಮಶೇಖರ ಪ್ರೇಮದ ಸುಕುಮಾರ ಸುಮನಸಚಂದ್ರನೆಕಾಮಿತಜನ ಶಾಮಪೂರಿತ ಕೋಮಲಗುಣಸಾಂದ್ರನೆ 2ಕೋಮಲಾಂಗನೆ ಕರ್ಣಕುಂಡಲ ಹೇಮಕಂಕಣಧಾರನೆತಾಮಸದಿ ಗಹಗಹಿಸಿದಾ ಮಹ ಸೋಮನಿಗೆ ಶಾಪವಿತ್ತನೆ 3ಪಾರಬುಧ್ಧಿಲಿ ಸಾರವಿದ್ಯದಧಿಕಾರ ಕುಶಲದಿ ಪಡೆದನೆಗೌರಿಶಂಕರರ್ವಾದ ನಿವಾರಿಸಿದ ಮಹಚದುರನೆ 4ತ್ರಿಕ್ಷೆಯರೊಡಗೂಡಿಭುವನರಥಮಾಡಿಮಣಿಯದ್ಹೋಗ್ವುದು ಕಂಡನೆಘನಕೋಪಾಗ್ರಾದಿ ರಥವನಿಲ್ಲಿಸಿ ತ್ರಿಣಯರಿಂ ಪೂಜೆಗೊಂಡನೆ5ವಿಘ್ನನಾಯಕ ಪ್ರಾಜÕಮೂರುತಿ ಸೂಜÕ ಜನರಾರಾಧನೆಸಂಜೆÕದ್ಹೊಗಳುರ್ವಿಘ್ನ ಛೇದಿಸಿಪ್ರಾಜÕಪದವೀವ ಪ್ರೌಢನೆ6ವರುಷಕೊಂದುಮಾಸಧರೆಯೊಳಿಳಿಯುತಪರಮಪೂಜೆಯ ಕೈಕೊಂಬನೆನರರ ದುರ್ಮತಿ ತರಿದು ಸುಗತಿಯ ನಿರುತಪಥದೋರ್ವ ಧುರೀಣನೆ 7ತಂದೆ ನಿನ್ನನು ಹೊಂದಿ ಭಜಿಪರ ಮಂದಮತಿನಿವಾರನೆಬಂದ ದುರ್ಭವದಂದುಗಂಗಳ ಚಂದದಿಂ ಪರಿಹಾರನೆ 8ಶರಣು ಶರಣು ಶರಣು ಗಣವರ ಶರಣುಕರುಣಾಭರಣನೆಸಿರಿಯರಾಮನ ಚರಿತಪೊಗಳುವ ಪರಮಮತಿದೇ ಗಣಾರ್ಯನೆ 9
--------------
ರಾಮದಾಸರು
ಸಿರಿಅರಸಂಗೆ ನಮೋಗುರುಮಧ್ವವರಿಯ ವರಸ್ತುತಿ ಪ್ರಿಯ ಪ.ನಿಗಮಾಗಮಾಗಣಿತ ಸುವಿದಿತ ಸುಗುಣ ವಿಹಗಗಮನಘರಿಪು ಉರಗಶಯನ 1ಅಜನುತ ರಾಜರವಿ ವಿಜಿತ ಪ್ರತೇಜಕುಜರಜನೀಚರಹನನಮೂಜಗಜೀವನ2ತನ್ನ ವಂದಿಪರನ್ನು ಹೊರೆವನ್ಯಭಯವನ್ನೋಡಿಪಎನ್ನಯ್ಯ ಪ್ರಸನ್ನವೆಂಕಟನಾಥ ದಾತಾರ 3
--------------
ಪ್ರಸನ್ನವೆಂಕಟದಾಸರು
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿಬಿಸಜದ್ವಯವ | ನೇ ಭಜಿಸಲು ಜ್ಞಾನ- ||ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ 1ಮಾಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀಕಕುಲಾತಿಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕುದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ 2ದಾತಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆಭಾಸ್ಕರಕಾಂತೆ ||ಭೂತಳದೊಳಗೆ ಅ | ನಾಥರಿಗೆವರಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತಪೂಜಿತೆ ರಮೆ | ಪಾತು ಪ್ರತಿಕ್ಷಣದಿ 3
--------------
ಪ್ರಾಣೇಶದಾಸರು
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು