ಒಟ್ಟು 1436 ಕಡೆಗಳಲ್ಲಿ , 102 ದಾಸರು , 1074 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಂಸವಾಹನಪಿತನೆ _ ಹಂಸಾ ಢಿಭಿಕವೈರಿ ಶೌರಿ _ ಬಾ ಬಾ ಬಾ ಪ ಸಾಸಿರನಾಮದೊಡೆಯ ವಾಸವವಿನುತನೆ ಲೇಸಾಗಿಸ್ತುತಿಸುವೆ _ಬಾ ಬಾ ಬಾ ಅ ವೇದಾವಕದ್ದಂಥ ಉದ್ದಂಡ ದೈತ್ಯನ ಮರ್ಧಿಸಿ ವೇದವ ತಂದು ವೇಧನ ಸಲಹಿದ ಮತ್ಸ್ಯ ಬಾ ಬಾ ಬಾ 1 ಸಿಂಧು ವಿನೊಳಗಿದ್ದ ಮಂದರಗಿರಿಯನ್ನು ಬಂದು ಬೆನ್ನಿಲಿಪೊತ್ತು ತಂದು ಪೀಯೂಷವ ಚಂದದಿ ಸಲಹಿದ ಕೂರ್ಮಸ್ವರೂಪನೆ _ ಬಾ ಬಾ ಬಾ 2 ಕನಕನೇತ್ರನ ಕೊಂದು ಕಾಂತೆಯಹಿಡಿದೆತ್ತಿ ಕನಕಗರ್ಭನಿಗೊಲಿದ ಕಾರುಣ್ಯನಿಧಿಚಂದ್ರ ಕ್ರೋಢ ಯಜ್ಞ ಸ್ವರೂಪನೆ _ ಬಾ ಬಾ ಬಾ 3 ತರುಳನಮೊರೆಕೇಳಿ ದುರುಳನ ಕರುಳನೆ ಬಗೆದು ಕೊರಳೊಳು ಕರುಳ ಧರಿಸಿ ಸುರರನ್ನು ಪೊರೆದಂಥ ಸರ್ವವ್ಯಾಪಿ ಕರುಣಿಯೆ ಮೂರ್ತಿ _ ಬಾ ಬಾ ಬಾ 4 ಅನುಜನ ಪೊರೆಯಲು ತನುವನು ಮರೆಸಿಕೊಂಡು ದಾನವನು ಬೇಡುತ ಬಲಿ ಯನು ತುಳಿದು ಪೊರೆದ ಘನ್ನ ಮಹಿಮ ವಟು ವಾ ಮನ ರೂಪಿಯೆ _ ಬಾ ಬಾ ಬಾ 5 ಕೊಡಲಿಯ ಪಿಡಿಯುತ ಒಡೆಯರ ತರಿದು ಕಡಿದು ಮಾತೆಯ ಪಿತ ನುಡಿಯನು ಸಲಿಸಿದ ಚಂಡವಿಕ್ರಮ ಮಹಿಮ ಭಾರ್ಗವ ಮೂರುತಿ _ ಬಾ ಬಾ ಬಾ 6 ಕಾಂತೆಯನೆಪದಿಂದ ಕದನವ ಹೂಡಿಕೊಂಡು ಅಂತಕಸದನಕೆ ಅರಿಗಳ ತಳ್ಳುತ ಶಾಂತತೆ ಬೀರಿಪೊರೆದ ದಶರಥ ರಾಮನೆ _ ಬಾ ಬಾ ಬಾ 7 ಚೋರತನದಿ ಬಲು ಬೆಣ್ಣೆಯ ಮೆಲ್ಲುತ ಜಾರತನದಿ ಋಷಿ ಸ್ತ್ರೀಯರಿಗೊಲಿದಂಥ ಮಾರಜನಕ ಶ್ರೀ ರುಕ್ಮಿಣಿ ಕೃಷ್ಣ _ ಬಾ ಬಾ ಬಾ 8 ವೇದಗೋಚರ ವಿಶ್ವ ವೇದ ಬಾಹ್ಯರಿಗೆಲ್ಲ ವೇದ ವಿರುದ್ಧವಾದ ವಾದಗಳ ತೋರಿ ನಿಂದು ಬೆತ್ತಲೆ ಮೆರದ ಬೌದ್ಧ ಸ್ವರೂಪನೆ _ ಬಾ ಬಾ ಬಾ 9 ಕಲಿಬಾಧೆ ಹೆಚ್ಚಾಗೆ ಕಲಿಯುಗ ಕೊನೆಯಲ್ಲಿ ಮಲಿನಾರ ಮರ್ಧಿಸಿ ಉಳಿಸಲು ಧರ್ಮವ ಚಲುವ ರಾಹುತನಾದ ಕಲ್ಕಿ ಸ್ವರೂಪನೆ _ ಬಾ ಬಾ ಬಾ 10 ಸತ್ಯಸಂಕಲ್ಪನೆ ನಿತ್ಯಸ್ವರೂಪನೆ ಉತ್ತಮನೀನೆಂದು ಒತ್ತೊತ್ತಿ ಪೊಗಳುವೆ ಭೃತ್ಯನು ನಿನ್ನವನು ಕಣ್ಣೆತ್ತಿ ನೋಡುತ _ ಬಾ ಬಾ ಬಾ11 ಏಕರೂಪನೆ ನಿನ್ನನೇಕ ರೂಪಂಗಳ ಸಾಕಲ್ಯದಿಂದಲಿ ಶ್ರೀಕಾಂತೆ ಅರಿಯಳು ಕಾಕುಮತಿಯು ನಾನು ಎಂತು ವರ್ಣಿಸಲಯ್ಯ _ ಬಾ ಬಾ ಬಾ12 ಪೂರ್ಣಸ್ವರೂಪನೆ _ ಪೂರ್ಣ ಗುಣಾಬ್ಧಿಯೆ ಪೂರ್ಣನಂದಾನೆ ಪೂರ್ಣ ಸ್ವತಂತ್ರನೆ ಪೂರ್ಣಬೋಧರ ಪೂರ್ಣ ಕರುಣಾವ ಬೀರಿಸು _ ಬಾ ಬಾ ಬಾ 13 ಮಾತುಮಾತಿಗೆ ನಿನ್ನ ನಾಮದಸ್ಮರಣೆಯ ನಿತ್ತು ಪಾಲಿಸು ಎನ್ನ ಮೃತ್ಯೋಪಮೃತ್ಯುವೆ ದೇವ ಭಕ್ತಿಭಾಗ್ಯವನಿತ್ತು ಮನ್ನಿಸಿ ಸಲಹುತ _ ಬಾ ಬಾ ಬಾ 14 ದೋಷದೂರನೆ ನಿನ್ನ ದಾಸನುನಾನಯ್ಯ ವಾಸವ ಜಯಮುನಿ ವಾತನೊಳ್ವಾಸಿಪ ಈಶ ಸಿರಿಕೃಷ್ಣ ವಿಠಲರಾಯನೆ ಬೇಗ ಬಾ ಬಾ ಬಾ 15
--------------
ಕೃಷ್ಣವಿಠಲದಾಸರು
ಹಸಿದು ನಾ ಬಳಲಲೇಕೋ ಈಸಮಯದಲ್ಲಿ ಬಿಸಿಯೂಟ ಮಾಡುವೆನು ಪ ಹಸನಾದ ಶೇಷಶಯನ ನಾಮದಡುಗೆಯು ವಸುಮತೀಧವ ನಾಮರಸಾಯನವಿರೆ ಅ.ಪ ಹರಿ ಹರಿ ಪರಮಾನ್ನವು ದುರಿತಾರಿ ಶೌರಿ ಕರಿಗಡುಬು ಗರುಗೊಬ್ಬಟ್ಟು ನರಸಿಂಹ ವಾಮನ ಅಂಬೊಡೆ ಹೂರಿಗೆಗಳು ಕರಿವರದ ರವೆಯುಂಡೆ ಸಜ್ಜಿಗೆಯಿರಲು 1 ದುಷ್ಟಮರ್ದನನೆನ್ನುವ ಇಷ್ಟವಾದ ಹುಳಿಸಾರು ಮೊಸರುಗಳು ವಾಸುದೇವ ಸಣ್ಣಕ್ಕಿಯನ್ನವು ಮಾಧವ ಬೆಣ್ಣೆಕಾಯ್ಸಿದ ತುಪ್ಪವಿದೆ 2 ನಾರಾಯಣನೆನ್ನುವ ಸಾರವಾದ ಹುಳಿಯನ್ನ ಮೊಸರನ್ನವು ಸಾರಸಾಕ್ಷ ಶ್ರೀಶ ಕ್ಷೀರ ಸಕ್ಕರೆಯಿದ್ದು ಮಾರಜನಕನೆಂಬ ಹಪ್ಳಳುಪ್ಪಿನಕಾಯಿರೆ3 ಪರಿಪರಿಯನ್ನಗಳು ಸರಿಯಾಗಿ ಭಕ್ಷ್ಯ ಕರಿದೆಡೆ ಮಾಡಿರಲು ಅರಿತು ಸವಿಯನೋಡಿ ಮರೆಯದೆ ಭುಂಜಿಸಿ ನಿರುತ ನಿಜಾನಂದ ಪಡೆಯದೆ ಬರಿದೆ 4 ಗೋಪಾಲನೆಂದೆಂಬೊ ಸೀಪಿನ ಎಳನೀರು ಸೀ ಪಾನಕವಿಹುವು ತಾಪತ್ರಯಹರ ಹೆಜ್ಜಾಜಿಕೇಶವ ಆಪದುದ್ಧಾರಕನೆಂಬಮೃತವುಣದೆ 5
--------------
ಶಾಮಶರ್ಮರು
ಹೃದಯಾಧಿವಾಸಾ ಚಿನ್ಮಂiÀi ಪಾವನ ಅವನೆ ದೇವಾಧಿದೇವ ಮೂರು ಕಾಲದ ಸಾಕ್ಷಿ ಪರಮಾತ್ಮನೇ ಅವನೇ ಜಗದಾಧಿವಾಸ ಪ ಆಕಾರದೊರ ಏಕಾಂತಪೂರ ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ ಮನೋವಾಣಿಗೆದೂರ ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ ಹೃದಯಾಧಿವಾಸ 1 ಮನವೆಲ್ಲ ಉಡುಗಿ ಅನಿಸಿಕೆಯಡಗಿ ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ ತಾನೇ ತಾನಾಗಿರ್ದ ಚಿನ್ಮಾತ್ರನೆ ಅವನೆ ಆನಂದರೂಪ ಹೃದಯಾಧಿವಾಸ 2 ಅವನೇ ನಾನೆಂದು ತಿಳಿ ಈಗ ನಿಂದು ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ ಇವನೇ ಗುರುಶಂಕರೇಶ ಹೃದಯಾಧಿವಾಸ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಹೊಂದಬೇಕು ನಿಜನೋಡಿ ತಂದೆ ಗುರುನಾಥ ಬೋಧ ಧ್ರುವ ಪರಧನ ಪರಸತಿಯರ ಬಿಟ್ಟರೆ ಸಾಕು ಹೇಸಿ ತೋರುವುದು ತನ್ನೊಳು ಪ್ರತ್ಯಕ್ಷ ವಾರಣಾಸಿ ಸುರಿಮಳೆಗರೆವುದು ಹೆಜ್ಜೆಜ್ಜಿಗೆ ಪುಣ್ಯದ ರಾಶಿ ಅರಿತು ಏಕರಸವಾಗಿ ಸದ್ಗುರು ಸ್ಮರಿಸಿ 1 ಜನ್ಮಕೆ ಬಂದ ಮ್ಯಾಲೆ ಪುಣ್ಯಪಥ ಸಾಧಿಸಿ ಸನ್ಮತ ಸುಖಸಾರದೊಳು ಮನಭೇದಿಸಿ ಉನ್ಮನವಾಗಿ ಜೀವನ ಸದ್ಗತಿಗೈದಿಸಿ ಜನ್ಮಕೆ ಬೀಳುವ ಭವಬಂಧನ ಛೇದಿಸಿ 2 ಸಾಯಾಸದಿಂದ ಸಾಧಿಸಬೇಕು ಸಾಧುಸಂಗ ಗುಹ್ಯಗುರುತ ನೋಡಲಿಬೇಕು ಅಂತರಂಗ ಬಾಹ್ಯಾಂತ್ರದೋರುತಿದೆ ಸದ್ಗುರು ಪ್ರಾಣಲಿಂಗ ಭವ ಭಂಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊಲೆಯರಿಲ್ಲದ ಊರೊಳು ಇರಬಾರದು ಪ ಹೊಲೆಯರು ಬೆಳೆದರೆ ಉಣಲುಂಟು ಉಡಲುಂಟು ಅ.ಪ. ಶುಭ ಶೋಭನ ಉಂಟುಹೊಲೆಯರ ನಿಂದಕನು ನಿರ್ಭಾಗ್ಯನುಹೊಲೆಯರಿಗೆ ಉಣಲಿಕ್ಕಿದವನ ಫಲಕ್ಕೆನೆಲೆಗಾಣೆ ನೆಲೆಗಾಣೆ ಧರೆಯೊಳಗೆ ನಾನು 1 ಹೊಲೆಯರು ಮುನಿದರೆ ನೆಲೆಯಿಲ್ಲ ನಿಭ ಇಲ್ಲಹೊಲೆಯರು ಒಲಿದರೆ ಕಷ್ಟವಿಲ್ಲಹೊಲೆಯರೇ ನಮ್ಮ ಸಲಹಲಿ ಸಾಕಲಿ ಎಂದುಫಲ್ಗುಣನ ಸಾರಥಿಯ ಪ್ರಾರ್ಥಿಸಿಕೊಳ್ವರು 2 ಹೊಲೆಯರಿಂದಲಿ ಸಕಲ ದೇವತೆಗಳ ಪೂಜೆಹೊಲೆಯರಿಂದಲಿ ಸಕಲ ಬಂಧು ಬಳಗಹೊಲೆಯರಿಗೆ ಸ್ವಾಮಿ ಮೋಹನ್ನ ವಿಠ್ಠಲಧೊರಿಯೆ ಪಾಂಡವರ ಪ್ರಿಯನೆಂದೆನ್ನು 3
--------------
ಮೋಹನದಾಸರು
ಹೋದ್ಯಾ ಶೇಷಗಿರಿದಾಸ ಸುಲಭ ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಪ ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ ತಿಳಿಸಿದೆನು ತತ್ವಗಳು ನಿರುತ ಬಿಡದೆ ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ- ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ 1 ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲಿ ಎನ್ನಮ್ಯಾಲೆ ಇನ್ನು ಮಾಡಲಿಲ್ಲ ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ 2 ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು | ಅಕಟಕಟ ಭೂಮಿಯೊಳು ಬದುಕುವದೂ | ಸಿರಿ ವಿಜಯವಿಠ್ಠಲ ನಿನ್ನ ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು 3
--------------
ವಿಜಯದಾಸ
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
(ಮೂಲ್ಕಿಯ ನರಸಿಂಹದೇವರು)ನಂಬಿದೆ ನಿನ್ನ ಇಂಬಿದೆಯೆಂದುಅಂಬುಜಾಯತಾಂಬಕ ತ್ರ್ಯಂಬಕಸನ್ನುತಪ.ಕಂಬದಿಂದ ಕಾಣಿಸಿದಗಂಭೀರಗುಣಾಂಭೋನಿಧಿ ಡಿಂಬೋದ್ಧರ ನರಮೃಗವರ ಅ.ಪ.ಭಾನುಕೋಟಿಭಾಸ್ಕರಪವ-ಮಾನನಯ್ಯ ಪ್ರಾಣದಸುತ್ರಾಣಸುಗುಣದೀನಜನಸಂತಾನ ಮಾನದಆನಂದ ಗುಣಾನಂತ ವಿತಾನಾಬ್ಧಿಶಯಹರಿ1ಎಷ್ಟೊ ಪಾಪಿ ಕನಿಷ್ಠನೆಂದುಬಿಟ್ಟರೇನು ಬಿರುದು ಹಿರಿದು ಬರುವುದುಸೃಷ್ಟಿಕರ್ತರಿಷ್ಟಹರ್ತಮುಷ್ಟಿಕಭಿದ ತುಷ್ಟಿಪ್ರದ ವಿಠಲ ಕೈಗೊಟ್ಟುಳುಹು 2ಚಿತ್ತಸಾಕ್ಷಿ ಚಿನುಮಯಾತ್ಮಸತ್ಯರೂಪ ಸದಯೋದಯ ಸದುಪಾಶ್ರಯದೈತ್ಯಭಂಜನ ಸತ್ಯರಂಜನಕ್ಷೇತ್ರಜÕ ಪವಿತ್ರಕಥಾಸ್ತೋತ್ರಾರ್ಹ ಶ್ರೀವತ್ಸಾಂಕಿತ 3ಮೂಲಿಕಾಪುರ ಮೌಳಿರುತುನನೀಲೇಂದೀವರಶ್ಯಾಮಲ ಕಲಿಮಲಭೀಷಣಕಾಲಕಾಲ ವಿಶಾಲ ಭುಜಬಲಮೂಲೇಶಮುನೀಂದ್ರಾರ್ಚಿತ ಶ್ರೀಲಕ್ಷುಮಿನಾರಾಯಣ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
130-1ದ್ವಿತೀಯ ಕೀರ್ತನೆಶ್ರೀ ಹರಿಪಾದಾಬ್ಜರತ ಶ್ರೀ ವಿಷ್ಣು ತೀರ್ಥವನ-ರುಹಅಂಘ್ರಿಯುಗ್ಮದಲಿ ಶರಣಾದೆ ಸತತಪಮಹಾಕರುಣಿಯು ಪರಮಹಂಸ ಕುಲತಿಲಕರುಅಹರ್ನಿಶಿಒದಗುವರು ಶರಣು ಸುಜನರಿಗೆಅ ಪದ್ವಿತೀಯಾಶ್ರಮವನ್ನು ಯುಕ್ತ ಕಾಲದಿ ಕೊಂಡುಸದ್ಧರ್ಮ ಆಚರಿಸಿ ಗೃಹಕೃತ್ಯದಲ್ಲಿಇದ್ದರು ಜಯತೀರ್ಥ ಆಚಾರ್ಯ ಆದರುಸದಾ ಹರಿಯಲ್ಲೇ ಧಾವಿಸಿತು ಮನಸ್ಸು 1ಕ್ಷೀರಫೇಣವೊಲ್ ತೂಲಿಕ ಹಂಸ ತಲ್ಪವುಶುಭ್ರ ಕನ್ನಡಿ ಚಿತ್ರಾಲಂಕಾರಗಳುಕೊರತೆ ಏನೂ ಇಲ್ಲ ಐಹಿಕ ಸಂಪತ್ತಿಗೆಸ್ಪುರದ್ರೂಪಿಣಿಸತಿಸುಶೀಲೆ ಸುಗುಣೆ2ಪ್ರಾರಬ್ಧ ಕರ್ಮನಿಮಿತ್ತ ಶ್ರೀಹರಿಯೇವೆಪರಿಪರಿಭೋಗಗಳ ಒದಗಿಸಿದ್ದೆಲ್ಲಹರಿಗೆ ಅರ್ಪಿಸುತ ಅನುಭವಿಸುತಿರಲಾಗಹೊರಗಿಂದ ಓರ್ವನು ಹಾಡಿದನು ನುಡಿಯ 3ಮಂಚಬಾರದು ಮಡದಿಬಾರಳು ಕುಂಚುಕನ್ನಡಿ ಬಾರದುಸಂಚಿತಾರ್ಥವು ಮತ್ತೆ ಬಾರದು ಮುಂಚೆ ಮಾಡಿರಿ ಧರ್ಮವಕಂಚಿನ ಗಂಟೆ ಧ್ವನಿ ಅಂದದಿ ಈ ನುಡಿಕೇಳಿಮಂಚದಿಂದಿಳಿದರು ಕುಳಿತರು ಚಿಂತೆಯಲಿ 4ಅಕಳಂಕ ಗುಣನಿಧಿ ನಾರಾಯಣ ಮಾಯೇಶಸಂಕರುಷಣ ಪ್ರದ್ಯುಮ್ನ ಅನಿರುದ್ಧಶ್ರೀಕರಾರ್ಚಿತ ಪಂಚರೂಪನ ಪ್ರೇರಣೆಯೆಂದುಮಾಕಳತ್ರನ ಸ್ಮರಿಸಿ ಹೊರಟರು ಹೊರಗೆ 5ಲೌಕಿಕ ವಿಷಯ ವಿಜೃಂಭಣಾಡಂಬರವಲೆಕ್ಕಿಸದೆ ವೈರಾಗ್ಯ ಮನಪಕ್ವದಿಭಕುತಿ ಉನ್ನಾಹದಿ ಅವಧೂತಚರ್ಯದಿಶ್ರೀಕರ ನಾರಾಯಣನ ಸೇವಿಸಿದರು 6ತೀರ್ಥಕ್ಷೇತ್ರಾಟನ ಮಾಡಲಿಕೆ ಹೊರಟರುಹಾದಿಯಲಿ ಸರ್ಪವು ಅಡ್ಡ ಬರಲುವೇದ್ಯವಾಯಿತು ಜಯತೀರ್ಥ ಮುನಿಗಳು ತಾವೇಬಂದು ತಡೆದರು ಸರ್ಪರೂಪದಲಿಯೆಂದು 7ಈ ಪುಣ್ಯ ಶ್ಲೋಕರು ಜಯತೀರ್ಥವಿಪ್ರಸರ್ಪರೂಪಶೇಷದೇವರ ಜಯಮುನಿಗಳಅಭಿಪ್ರಾಯವನ್ನರಿತು ಶಾಸ್ತ್ರಪ್ರವಚನಶಿಷ್ಯೋಪದೇಶದಿ ಹರಿಯ ಸೇವಿಸಿದರು 8ಮಲಾಪಹಾರಿಣಿ ತೀರಸ್ಥ ಮುನವಳ್ಳಿಶೀಲತಮ ಅಡವಿ ಪ್ರದೇಶ ಗ್ರಾಮದಲಿಕುಳಿತು ಶಿಷ್ಯರಿಗೆ ಸುಧಾದಿಗಳ ಪೇಳಿದರುಪೊಗಳ ಬಲ್ಲೆನೆ ಇವರ ಮಹಿಮೆಸಾಕಲ್ಯ9ಸುಮಧ್ವವಿಜಯ ಪಾರಾಯಣ ಮಾಡುತ್ತಕಲ್ಮಷ ಕಿಲುಬು ಹತ್ತಿದ ಪಾತ್ರೆಯನ್ನಕಲ್ಮಷ ಕಿಲಬನ್ನ ತ್ವರಿತದಿ ನೀಗಿಸಿಹೇಮಮಯ ಮಾಡಿದರು ಜನರು ಕಂಡಿಹರು 10ಹನ್ನೆರಡುಬಾರಿಸುಧಾದಿಗಳ ಪ್ರವಚನ ಮಾಡಿವಿನಯ ಸಂಪನ್ನಶ್ರದ್ಧಾಳು ಶಿಷ್ಯರಿಗೆಹನ್ನೆರಡಾವರ್ತಿ ಸುಧಾ ತತ್ವ ಪ್ರಕಾಶಿಕ ಪೇಳಿಘನಮಹಿಮ ಟಿಪ್ಪಣಿ ಮಾಡಿಹರು ಎರಡಕ್ಕೂ11ಭುಜಗಶಾಯಿ ಕ್ಷೀರಾಬ್ಧಿವಾಸನ ಪ್ರೀತಿಗೂಸುಜನಅಧಿಕಾರಿಗಳ ಉದ್ಧಾರಕ್ಕುರಚಿಸಿ ಗ್ರಂಥಗಳನ್ನ ಕೃತಕೃತ್ಯ ಮನದಲ್ಲಿರಾಜರಾಜೇಶ್ವರಿ ಶ್ರೀ ಹರಿಗರ್ಪಿಸಿದರು 12ಸತ್ಯಸಂಧಾರ್ಯರ ಹಸ್ತಪದ್ಮೋತ್ಪನ್ನಸತ್ಯವರ ತೀರ್ಥರ ಕರಕಂಜದಿಂದಜಯತೀರ್ಥಾಚಾರ್ಯರು ಕೊಂಡರು ತುರ್ಯಾಶ್ರಮತೋಯಜಾಕ್ಷಶ್ರೀ ವಿಷ್ಣುತೀರ್ಥ ನಾಮದಲಿ13ಬೃಹತಿಸಹಸ್ರಪ್ರಿಯ ಮಹಿದಾಸ ಜಗದೀಶಬ್ರಹ್ಮಪಿತ ಭಕ್ತಪಾಲಕ ಪರಮಹಂಸಮಹಿಶಿರಿಕಾಂತ `ಶ್ರೀ ಪ್ರಸನ್ನ ಶ್ರೀನಿವಾಸ'ನಮಹಾಭಕ್ತ ಶ್ರೀ ವಿಷ್ಣು ತೀರ್ಥಾರ್ಯಶರಣು 14 ಪ
--------------
ಪ್ರಸನ್ನ ಶ್ರೀನಿವಾಸದಾಸರು
212ತುಂಗೆ ಮಂಗಳತರಂಗೆ-ಹರಿಸರ್ವಾಂಗೇ |ಜಯಜಯ ಜಯತು ತುಂಗೆ ಪಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದ |ಸಾಧಿಸಿ ರಸಾತಳದಲ್ಲಿರಿಸೆ ||ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ |ಆದಿವರಾಹನ ದಾಡೆಯಲಿ ಬಂದೆ ದೇವಿ 1ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ |ಮಳಲುಮಿಟ್ಟೆಗಳೆಲ್ಲ ಮುನಿಮಯವು ||ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ |ನಳಿನನಾಳವು ಸರ್ವ ವಿಷ್ಣುಮಯ 2ಇದೆ ವೃಂಧಾವನ, ಇದೆಕ್ಷೀರಾಂಬುಧಿ|ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ||ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ,ಅಧಿಕವೆಂದೆನಿಸಿದೆ ದೇವಿ ತುಂಗೆ 3ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ |ಪರಮಪವಿತ್ರ ಪಾವನ ಚರಿತ್ರೆಯು ನಿನ್ನ ||ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ |ಪರಮಸಾಯುಜ್ಯದ ಫಲವೀವ ದೇವಿ4ಪರಮಭಕ್ತ ಪ್ರಹ್ಲಾದಗೊಲಿದು ಬಂದ |ಪರಮನರಸಿಂಹಕ್ಚೇತ್ರವೆಂದೆನಿಸಿ ಮೆರೆದೆ ||ಧರೆಯೊಳಧಿಕವಾದ ಕೂಡಲಿ ಪುರದಲಿ |ವರದಪುರಂದರವಿಠಲನಿರಲು ಬಂದೆ5
--------------
ಪುರಂದರದಾಸರು
3 ಆತ್ಮ ನಿವೇದನೆ190ಅಂಜಿಕ್ಯಾಕೆನಗಂಜಿಕೆಕಂಜನಾಭಶ್ರೀನಿವಾಸನ ದಯವಿರಲುಪ.ಅಶನವಸನವನ್ನು ಕುಳಿತಲ್ಲೆ ನಡೆಸುವನಿಶಿದಿನ ನೀಚರಾಧೀನ ಮಾಡದೆಹಸನಾಗಿ ತನ್ನಂಘ್ರಿ ನೆರಳೊಳು ಬಚ್ಚಿಟ್ಟುಕುಶಲದಿ ಸಾಕುವ ದೊರೆಯ ನಂಬಿದ ಬಳಿಕ 1ಹುಲ್ಲು ಕಚ್ಚಿ ಕಲ್ಲು ಹೊತ್ತು ಧನವನುಳ್ಳಕ್ಷುಲ್ಲ ಜೀವರನೆಲ್ಲ ಕಾಯುವ ಶಕ್ತಿಎಲ್ಲ ವ್ಯವಹಾರವ ಮಾಡುವ ಬಲ ನನಗಿಲ್ಲೆಂದು ಆಯಾಸಬಡಲೀಸದವನಿರೆ 2ಆವಾವ ಕಾಲದಿ ಆವಾವ ದೇಶದಿಸೇವೆಗೆ ನಾ ತಪ್ಪೆ ಕೃಪೆ ತಪ್ಪಿಸಭಾವಿಕರೊಡೆಯ ಪ್ರಸನ್ವೆಂಕಟಾದ್ರೀಶಸಾವು ಕಳೆದು ಜೀವಕಾಶ್ರಯನಾಗಿರೆ 3
--------------
ಪ್ರಸನ್ನವೆಂಕಟದಾಸರು
ಅಂಜುವೆನದಕೆ ಕೃಷ್ಣ ಅಭಯವ ಕೋರಿದಕೆ ಪ.ನೀನಿತ್ತ ಮತಿಯಿಂದ ನಿನ್ನ ಹೊಗಳುತಿರೆಹೀನ ಮಾನವರೊಂದೊಂದೂಣೆಯ ನುಡಿವರು 1ಬಾಣವನೆಸೆದು ಬಿಲ್ಲನಡಗಿಸುವಂತೆಆ ನಿಂದಕರು ನಿಂದಿಶಾಣೆಗೆ ನಿಲುವರು 2ಮಾಧವನಾನೇನು ಓದಿದವನಲ್ಲ ಶ್ರೀಪಾದವೆ ಗತಿಯೆಂಬೆ ಬಾಧಿಸುತೈದಾರೆ 3ಅಪರಿಮಿತಪರಾಧಿ ಕಪಟಿ ನಾನಾಗಿಹೆಅಪರೋಕ್ಷಿಯೆಂದೆಂಬ ಕುಪಿತ ಖಳರ ನೋಡಿ 4ಹಿತಶತ್ರುಗಳ ಸಂಗತಿ ಸಾಕು ಪ್ರಸನ್ವೆಂಕಟಪತಿನಿನ್ನ ಭಕ್ತರ ಸಂಗ ಕೊಡು ಕಾಣೊ5
--------------
ಪ್ರಸನ್ನವೆಂಕಟದಾಸರು
ಆರು ಬಾರರು ಸಂಗಡಲೊಬ್ಬರು |ನಾರಾಯಣನ ದಿವ್ಯನಾಮ ಒಂದಲ್ಲದೆ ಪಹೊತ್ತು ನವಮಾಸಪರಿಯಂತಗರ್ಭದಲಿ |ಅತ್ಯಂತ ನೋವು ಬೇನೆಗಳ ತಿಂದು ||ತುತ್ತು ಬುತ್ತಿಯ ಕೊಟ್ಟು ಸಲಹಿದ ತಾಯಿಯು |ಅತ್ತು ಕಳುಹುವಳಲ್ಲದೆ ಸಂಗಡ ಬಾಹಳೆ 1ನೆರೆದಿದ್ದ ಪುರಜನ ವಿಪ್ರರಗ್ನಿಯ ಸಾಕ್ಷಿ |ಕರವಿಡಿದು ಕೈಧಾರೆ ಎರಸಿಕೊಂಡ ||ತರುಣಿ ತನ್ನಯ ಗಂಡನನು ಮುಟ್ಟಲಮ್ಮದೆ |ನೆರೆಏನುಗತಿತನಗೆ ಹೇಳಲಮ್ಮಳಲ್ಲದೆ2ಮನೆ-ಮಕ್ಕಳಿವರೆನ್ನ ತನುವು ಒಡವೆ ಎರಡು |ಘನವಾಗಿ ನಂಬಿರೆ ನನ್ನವೆಂದು |ಅನುಮಾನವೇತಕೆ ಜೀವ ಹೋದಬಳಿಕ |ಘನಹೊತ್ತು ಮನೆಯಲಿ ಇರಿಸಿಕೊಳ್ಳರೊ ದೇವ 3ಆತ್ಮ ಬಳಲಿದಾಗ ಬಂಧುಗಳು ಬಂದು |ಹೊತ್ತು ಹೊರಗೆ ಹಾಕು ಎಂತೆಂಬರು ||ಹೊತ್ತುಕೊಂಡು ಹೋಗಿ ಅಗ್ನಿಯಲ್ಲಿ ಬಿಸುಟು |ಮತ್ತೆ ಬೆನ್ನನು ತಿರುಗದಲೆ ಬಾಹೋರಲ್ಲದೆ 4ಹರಣಹೋಗದ ಮುನ್ನ ಹರಿಯ ಸೇವೆ ಮಾಡಿ |ಪರಲೋಕಸಾಯುಜ್ಯಪಡೆದುಕೊಂಡು |ಕರುಣಿ ಕೃಪಾಳು ಶ್ರೀ ಪುರಂದರವಿಠಲನ |ನೆರೆನಂಬಿ ಭಜಿಸಿ ನೀ ಸುಖಿಯಾಗೊ ಮನುಜಾ 5
--------------
ಪುರಂದರದಾಸರು
ಆರು ಹಿತವರು ಮನವೆ ಮೂರು ಮಂದಿಗಳೊಳಗೆನಾರಿಯೋ ಧಾರಿಣೀಯೊಧನದಬಲು ಸಿರಿಯೊ ?ಪ.ಅನ್ಯರಲಿ ಜನಿಸಿರ್ದ ಅಂಗನೆಯ ಕರೆತಂದುತನ್ನ ಮನೆಯಲ್ಲಿ ಯಜಮಾನಿಯೆನಿಸಿಭಿನ್ನವಿಲ್ಲದೆ ಅರ್ಧ ದೇಹವೆನಿಸುವ ಸತಿಯುಕಣ್ಣಿನಲಿ ನೋಡಲಂಜುವಳು ಕಾಲನೊಯ್ವಾಗ 1ಮುನ್ನ ಶತಕೋಟಿ ರಾಯರುಗಳಾಳಿದ ನೆಲನತನ್ನದೆಂದು ಶಿಲೆಯ ಶಾಸನವ ಬರೆಸಿಬಿನ್ನಾಣದಿ ಮನೆಗಟ್ಟಿ ಕೋಟೆ - ಕೊತ್ತಳಿವಿಕ್ಕಿಚೆನ್ನಿಗನೆ ಅಸುವಳಿಯ ಊರ ಹೊರಗಿಕ್ಕುವರು 2ಉದ್ಯೋಗ - ವ್ಯವಹಾರ ನೃಪಸೇವೆ ಮೊದಲಾಗಿಕ್ಷುದ್ರತನ ಕಳವು ಪರದ್ರೋಹದಿಂದಬುದ್ಧಿಯಿಂದಲಿ ಧನವ ಗಳಿಸಿಕ್ಕಿ ಅಸುವಳಿಯಸದ್ಯದಲಿ ಆರುಂಬವರು ಹೇಳು ಮನುಜಾ 3ಶೋಕಗೈದಳುವವರುಸತಿ - ಸುತರು ಭಾಂದವರುಜೋಕೆ ತಪ್ಪಿದ ಬಳಿಕ ಅರ್ಥವ್ಯರ್ಥಲೋಕದಲಿ ಸ್ಥಿರವಾದ ಕೀರ್ತಿ ಅಪಕೀರ್ತಿಗಳುಸಾಕಾರವಾಗಿ ಸಂಗಡ ಬಾಹುವಲ್ಲದೇ ? 4ಅಸ್ಥಿರದ ದೇಹವನು ನೆಚ್ಚಿ ನೀ ಕೆಡಬೇಡಸ್ವಸ್ಥದಲಿ ನೆನೆಕಾಣೊ ಪರಮಾತ್ಮನಚಿತ್ತಶುದ್ದಿಯಲಿ ಶ್ರೀ ಪುರಂದರವಿಠಲನಭಕ್ತಿಯಿಂದಲಿ ನೆನೆದು ಮುಕ್ತಿಪಡೆ ಮನವೆ 5
--------------
ಪುರಂದರದಾಸರು