ಒಟ್ಟು 269 ಕಡೆಗಳಲ್ಲಿ , 62 ದಾಸರು , 261 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೋಲ ಕೋಲೆನ್ನ ಕೋಲಕೋಲ ಕೋಲೆನ್ನ ಕೋಲಕೋಲಾಹಲವ ಮಾಡಿ ಬಾಲೆಯರು ಪಾರ್ಥಗೆ ಕೋಲ ಪ ಕಟ್ಟಿ ಜಾನ್ಹವಿಯಲ್ಲಿ ಬಿಟ್ಟು ಬದುಕಲು ಭೀಮ ಥಟ್ಟನೆ ಮಗ್ಗಲ ಹಚ್ಚಿ ಬಿಟ್ಟಿತು ಸರ್ಪಪ್ರಾಣ1 ಕುಸುಮದಂಥವಳಿಗೆ ಸವಳ ಪುರುಷನು ವಿಷದ ಲಡ್ಡಿಗೆ ತಿಂದು ಭಸ್ಮ ಮಾಡಿದ ಭೀಮ2 ಲಜ್ಜೆ ಬಿಟ್ಟು ಅರ್ಜುನ ಖೋಜಾನೆಂದೆನಿಸಿಕೊಂಡಿವಜ್ರ್ಯವಾಯಿತು ಮಾನ ನಿರ್ಜರೋತ್ತಮ ನಕ್ಕ3 ಹೆಣ್ಣಲ್ಲ ಗಂಡಲ್ಲ ಬಣ್ಣ ವಿಷ್ಟ್ಯಾಕೊ ನಿನಗೆ ಸಣ್ಣದಿ ನೆನೆದು ಕೀರ್ತಿ ಅಣ್ಣ ಬಲರಾಮನಕ್ಕನು 4 ಶೂರತನ ವೆಲ್ಲ ನೀಗಿ ಸೀರೆಯನುಟ್ಟುಕೊಂಡಿಬಾರದೆ ನಾಚಿ ನಿಂತೆಶೌರಿ ರಾಮೇಶನಕ್ಕನು ಕೋಲ5
--------------
ಗಲಗಲಿಅವ್ವನವರು
ಗಣೇಶಸ್ತುತಿ ಗಣಪತಿ ಎನದೋಷ ಬಿಡಿಸುವುದೊ ಶ್ರೀ- ಶಾನತಿ ದಾಸಾ ವೆಂಕಟೇಶವಿಠಲನಾ ಪ ದ್ವಿಪತುಂಡ ಅಪರಾಧ ಎಣಿಸಾದಿರೋ ಪಾಪಾ ಚತುರೀಪಾ ಗಂಗಾಪಾ ಸಜ್ಜನರ 1 ಇಭಮುಖ ಅಭಯವನೀಯುವುದೋ ಕಾಯಾಚಿತ ಮಾಯಮಾಡಯ್ಯ ಪಾಮರಸ 2 ವರಜೇಶಾ ಶಿರಿಮೊಗ ತೋರುವದೊ ಜಿರಹಾಕೃತ ಸ್ನೇಹಾ ನರಸಿಂಹವಿಠ್ಠಲನಾ 3
--------------
ನರಸಿಂಹವಿಠಲರು
ಗರ್ವವು ಸುಜನವ್ರಾತದಲಿ ಸರ್ವವು ನನಗೆ ನಮ್ಮಪ್ಪಗಿಹಲಿ ಪ ಕಾಸುಕಾಸಿನಿಂದ ಹಣ ಹೊನ್ನಹುದು ದೇಶ ದೇಶದಿಂದ ರಾಜ್ಯವಾಗುವದು 1 ಕ್ಲೇಶ ಕ್ಲೇಶದಿಂದ ಹಾಸನಾಗುವುದು ದಾಸದಾಸರಿಂದ ಮುಕ್ತಿಮಾರ್ಗಹುದು2 ಸಾರಾಸಾರದಿಂದ ತತ್ವವಾಗುವದು ಧೀರ ನರಸಿಂಹವಿಠಲನರಿಯುವದು 3
--------------
ನರಸಿಂಹವಿಠಲರು
ಗಾಯಿತ್ರಿ ಹಿರಿಮೆ ಹತ್ತು ರೂಪದ ಗಾಯಿತ್ರಿ ನಿನಗೆ ರಂಗದ ತಾನ ಹತ್ತು ರೂಪಗಳಲ್ಲಿ ಕುಣಿಯುತಿಹೆ ನೀನು ಹತ್ತು ಸಲವಾದರೂ ಗಾಯಿತ್ರಿ ಜಪಿಸದಿರೆ ನಿನ್ನಲ್ಲಿ ಭೂಸುರತೆ ಉಳಿಯುವದೆಂತು? 89 ತನ್ನಾಮದರ್ಥವೇ ವ್ಯಾಪ್ತಿರೂಪದ ಮೀನು ಅಮೃತಸವನದಕತದಿ ಕೂರ್ಮನಿಹೆ ನೀನು ಭೂವರಾಹನು ನೀನು ವರೇಣ್ಯನಾಮಕನು ಶತ್ರುಭರ್ಜನದಿಂದ ಭರ್ಗನಾಗಿರುವೆ 90 ಪ್ರಾಣವನು ಮೇಲೆತ್ತಿ ಅಪಾನವನು ಕೆಳಗಿರಿಸಿ ಮಧ್ಯದಲಿ ವಾಮನನು ದೇವ ನೀನಿರುವೆ&ಚಿmಠಿ;ಟಿ, bsಠಿ;91 ಮಹಿಯ ಭಾರವ ತೆಗೆದ ಪರಶುರಾಮನು ನೀನು ಪ್ರಾಣನ ಪ್ರೀತಿಕರ ರಾಮ ನೀನಿರುವೆ 92 ಕಲಿಯುಗದ ದೇವನೇ ಜ್ಞಾನರೂಪದ ಕೃಷ್ಣ ಬುದ್ಧ ನೀನಿರುವೆ ಧರ್ಮ ಪ್ರಸಾರಣಕೆ ಹಯವನ್ನು ಚೋದಿಸುವ ಕಲ್ಕಿನಾಮಕ ನೀನು ತಿಳಿದು ಜಪ ಮಾಡು 93 ಗಾಯನದಿ ರಕ್ಷಿಸುವೆ ಗಾಯಿತ್ರಿಯೇ ನಮಗೆ ಬ್ರಾಹ್ಮತೇಜವನುಳಿಸಿ ರಕ್ಷಿಪುದು ನಮ್ಮ ಗಾಧಿಪುತ್ರನು ತಾನು ಕ್ಷತ್ರಿಯನದಾದರೂ ಬ್ರಹ್ಮರ್ಷಿಯಾಗಿ ಬಾಳಿದನು ನಿಜವೈ 94 ಸಿರಿವರನೆ ನೀನು ಭಾಸ್ಕರನ ಮಂಡಲದಲ್ಲಿ ಕಮಲದಾಸನದಲ್ಲಿ ಶೋಭಿಸುತಲಿರುವೆ ಚಕ್ರ ಶಂಖ ಮಕರಕುಂಡಲಾದಿಗಳಿಂದ ಲೆನ್ನ ಹೃದಯಕೈತಂದು ನೆಲೆನಿಲ್ಲು 95 ನಿನ್ನ ಸೌವರ್ಣ ತೇಜದ ಬೆಳಕಿನಿಂದೆನ್ನ ಆತ್ಮದ ಜ್ಯೋತಿಯನು ಬೆಳಗಿಸುತ ನೀನು ನಿನ್ನನ್ನೆ ಹಂಬಲಿಪ ಭವಬಂಧ ತಪ್ಪಿಸುವ ನಿನ್ನ ಬಳಿಬರುವ ದಾರಿಯನು ತೋರಿಸೆಲಾ 96 ಗಾಯಿತ್ರಿಯ ಜ್ಯೋತಿ ನಂದದಂತಿರಲು ನಾನಷ್ಟಾಕ್ಷರಿಯ ಮಂತ್ರ ಜಪಿಸುವೆನು ನಾನು ವಿದ್ಯುತ್ತಿನದು ರಕ್ಷೆ ನಾರಾಯಣನ ಮಂತ್ರ ಅದರಿಂದ ರಕ್ಷಣೆಯ ಮಾಡುವೆನು ನಾನು 97 ಆತ್ಮರಕ್ಷಕನು ಹರಿ ದೇಹರಕ್ಷಕನು ಹರ ಹರನ ದೇಹವು ಪ್ರಕೃತಿಪಂಚಕದಿ ರಚಿತ ಆತ್ಮದಲ್ಲಿರುವಹಂಕೃತಿಗೊಡೆಯ ಹರ ಹರಿಹರರೇ ದೇಹಾತ್ಮ ರಕ್ಷಣೆಯ ಮಾಡಿ98 ವಿದ್ಯುತ್ತು ಬಿಳಿ ಕಪ್ಪು ಕೆಂಪು ನೀಲಿಗಳೆಂಬ ಐದು ಮುಖ ಹರನಿಗಿಹುದದರಿಂದ ನಾನು ಪಂಚಾಕ್ಷರಿಯ ಮಾಡಿ ಹರನನ್ನು ಧ್ಯಾನಿಸುವೆ ಧರ್ಮಾಯತನದ ದೇಹ ರಕ್ಷಣೆಯ ಮಾಳ್ಪೆ 99 ವೈರಿ ಮನದಲ್ಲೆ ಹುಟ್ಟಿದವ ಮನದೊಡೆಯ ರುದ್ರನನ್ನೇ ಹೊಡೆಯಲೆಂದು ಐದು ಬಯಕೆಗಳೆಂಬ ಬಾಣದಿಂ ಹೊಡೆಯುತಿರೆ ಕಾಮದಹನವ ಹೊಂದಿ ಬೂದಿಯಾದನವ 100 ಆ ಕಾಮನೇ ಮತ್ತೆ ಅಂಗಹೀನನದಾಗಿ ರುದ್ರನನ್ನರ್ಧನಾರೀಶ್ವರನ ಮಾಡಿ ಮನವನ್ನು ಕೆಡಿಸುತಲಿ ಮಾನವರೆಲ್ಲರನು ದುಃಖದಾ ಮಡುವಿನಲಿ ಕೆಡಹುವನು ನಿಜದಿ 101 ದೇಹಸೃಷ್ಟಿಗೆ ಮೂಲ ಮಣ್ಣು ತೇಜವು ನೀರು ಈ ಮೂರು ಮೂರುವಿಧವಾಗಿ ಪರಿಣಮಿಸಿ ಪಾಲನೆಯು ನಡೆಯುವದು ದೇವರಿಂದಲೇ ಇದನು ಉಪನಿಷತಿನಾಧಾರದಿಂದ ಪೇಳುವೆನು 102 ಭಕ್ಷ್ಯಭೋಜ್ಯವು ಲೇಹ್ಯ ಪೇಯವೆಂಬೀ ನಾಲ್ಕು ಪ್ರಾಣದಾಹುತಿಯನ್ನು ನಾವು ಕೊಡುತಿಹೆವು ಅದರಿಂದ ಪಾಕವನು ಮಾಡುತ್ತ ದೇವನವ ಸಪ್ತಧಾತುಗಳನ್ನು ಮಾಡಿ ರಕ್ಷಿಸುವ 103 ತೇಜವದು ವಾಗ್ರೂಪ ತಾಳುವದು ಮತ್ತದುವೆ ಅಸ್ಥಿಮಜ್ಜಗಳಾಗುವವು ನಿಜವ ಪೇಳ್ವೆ ವೈದ್ಯಕೀಯಪರೀಕ್ಷೆಗೊಳಗಾಗಿ ತಿಳಿವೆ ನೀನ್ ಶ್ರುತಿತತ್ವವೆಂದೆಂದು ಸಾರುತಿಹುದಿದನೆ 104 ಮಣ್ಣಿನನ್ನವೆ ಮೊದಲು ಮನವಾಗಿ ಮತ್ತದುವೆ ಮಾಂಸ ರೂಪವ ತಾಳಿ ಮಲವದಾಗುವುದು ನೀರೆ ಮುಖ್ಯ ಪ್ರಾಣ ಮತ್ತೆ ಶೋಣಿತವಾಗಿ ಮೂತ್ರರೂಪವ ತಾಳಿ ಹೊರಗೆ ಹೋಗುವುದು 105 ಸ್ವೇದಜೋದ್ಭಿಜ್ಜ ಮತ್ತಂಡಜ ಜರಾಯುಜಂಗಳು ಎಂಬ ನಾಲ್ಕು ವಿಧ ಜೀವಜಂತುಗಳು ನಾರಾಯಣನು ತಾನು ಜಲವಾಸಿಯಾಗುತಲಿ ಜೀವಜಂತುಗಳನ್ನು ಸೃಷ್ಟಿ ಮಾಡುವನು 106 ನಿನ್ನ ಗುಣದೋಷಗಳ ಪರರೆಂಬ ದರ್ಪಣದಿ ನೋಡಿದರೆ ತೋರುವವು ನಿನ್ನವೇ ತಿಳಿಯೈ ಪರರಲ್ಲಿ ಕಾಣುತಿಹ ದೋಷಗಳನು ತೊರೆಯುತ್ತ ಗುಣಗಳನು ಎಣಿಸುವವ ಲೋಕಮಾನ್ಯ 107 ಊಧ್ರ್ವಮೂಲದ ದೇವನೂಧ್ರ್ವದ ಹಿಮಾಲಯದೊ ಳುತ್ತುಂಗ ನಾರಾಯಣಪರ್ವತದಲಿ ತಾರಕನು ರಾಮನಂತೆಲ್ಲ ನರರನು ತನ್ನ ಬಳಿಗೆ ಕರೆದೊಯ್ಯಲ್ಕೆ ಮೇಲೆ ನಿಂತಿರುವ 108 ಮಧ್ವಗುರುಹೃದಯಭಾಸ್ಕರನು ನಾರಾಯಣನು ಬದರಿಯೊಳಿಹ ನೆಲೆಗೆ ಕರೆಯಿಸುತಲೆಮ್ಮನ್ನು ಸೇವೆಯನು ಕೈಕೊಂಡು ಭಾವಗತನಾಗಿದ್ದು ಪ್ರೇರಿಸಿದನೀಕೃತಿಗೆ ಪ್ರಕೃತಿ ಪರಮಾತ್ಮ&ಚಿmಠಿ;ಟಿbs, ಠಿ; 109 ಆತ್ಮದಲಿ ಒಳಗಿದ್ದು ಅಂತರಾತ್ಮನು ನೀನು ಆತ್ಮದ ಬಹಿರ್ಗತನು ಪರಮಾತ್ಮ ನೀನು ದೇಹದಿಂ ಹೊರಗಿದ್ದು ಕಾಲಾತ್ಮಕನು ನೀನು ನೀನಿಲ್ಲದಿಹ ದೇಶಕಾಲವೆಲ್ಲಿಹುದು? 110 ಮೂರು ನಾಮಗಳಿಹವು ಶ್ರೀನಿವಾಸನೆ ನಿನಗೆ ಅವುಗಳನು ನೆನೆದರೇ ಪಾಪ ಪರಿಹಾರ ಅಚ್ಯುತಾನಂತಗೋವಿಂದನೆನ್ನುವ ನಾಮ ಕೃತದೋಷ ಪರಿಹಾರಕಾಗಿ ಜಪಮಾಳ್ಪೆ 111 ಮಧುರಾಖ್ಯನಾಮವನು ಹಿಂದು ಮುಂದಾಗಿಸುತ ಮಧ್ಯದಕ್ಷರವನ್ನು ಕೈಯಲ್ಲಿಯಿರಿಸು ನಾಮಜಪ ಮಾಡದಿರೆ ಅವನ ಮುಖಕೆಸೆದು ನೀ ನನವರತ ಜಪಮಾಡಿ ಸಿದ್ಧಿಪಡೆ ಮನುಜಾ 112 ಅಣುವಿಂದ ಅಣುವಾಗಿ ಮಹದಿಂದ ಮಹತ್ತಾಗಿ ನಿನ್ನ ದರುಶನವು ಜನರಾರಿಗೂ ಇಲ್ಲ ಮಧ್ಯಕಾಲದಿ ಮಾತ್ರ ದರುಶನವು ವಸ್ತುವಿಗೆ ಅವತಾರ ರೂಪಗಳೆ ಪೂಜಾರ್ಹವಿಹವು 113 ಎಲ್ಲರೂ ಶ್ರೀಹರಿಯ ನೆಲೆಯೆಂದು ನೀನರಿತು ಮಮತೆಯಿಂ ನೋಡುತಲಿ ಸುಖವನನುಭವಿಸು ಹೊಲೆಯನಾದರು ನಿನ್ನ ನಂಬಿ ಮರೆಹೊಕ್ಕಿದರೆ ಕೈಬಿಡದೆ ನೀನವನ ರಕ್ಷಿಸಲೆ ಮನುಜಾ 114 ಹಲವಾರು ಜಾತಿಗಳು ಹಲವಾರು ಮತಗಳಿಹ ವವುಗಳಿಗೆ ಮೂಲಮತ ವೇದಮತವೊಂದೆ ಬೈಬಲ್ ಖುರಾನ್ ಮೊದಲಾದ ಪೆಸರಿಂದದುವೆ ಲೋಕದಲ್ಲೆಲ್ಲು ಪಸರಿಸುತಲಿಹವು 115 ಭವಬಂಧನವ ಕಳೆದು ತನ್ನ ಬಳಿಗೊಯ್ಯುವವ ನೀನಲ್ಲದಿನ್ನಾರು ಹರಿಯೆ ಶ್ರೀರಾಮ ಸಾಂತಾನಿಕದ ಲೋಕಕೊಟ್ಟು ರಕ್ಷಿಸಿದ ಹರಿ ತಾರಕನು ನೀನಿರುವೆ ನೀನೆ ಗತಿ ದೊರೆಯೆನಗೆ 116 ಪರಶುರಾಮನ ರೂಪದಿಂದ ನೀಂ ತಪಗೈದ ಪಾಜಕ ಕ್ಷೇತ್ರದಲಿ ಭಕುತನವತರಿಸೆ ಜ್ಞಾನರೂಪದಿ ನೀನು ಅವನ ಹೃದಯವ ಹೊಕ್ಕು ಮಧ್ವಮತವನು ಜಗದಿ ದೇವ ಪಸರಿಸಿದೆ 117 ಮಿನುಗು ಹುಳಗಳ ಸೃಜಿಸಿ ಬೆಳಕನದರಲ್ಲಿರಿಸಿ ಕಗ್ಗತ್ತಲೆಯ ಕಾಡುಗಳಲಿ ರಕ್ಷಿಸುವೆಯೊ ಅಂತೆಯೇ ನಮ್ಮ ದೇಹದೊಳಗಿದ್ದು ನೀನ್ ಪ್ರತಿಬಿಂಬ ಜೀವವನು ರಕ್ಷಿಸುವೆ ದೇವಾ 118 ಪರಶುರಾಮನು ರಾಮ ಪರಶುರಾಮನು ಕೃಷ್ಣ ನರನು ನಾರಾಯಣನು ವ್ಯಾಸ ಮೊದಲಾಗಿ ಒಂದಾಗಿ ಬೇರೆಯಾಗಿಯೆ ರೂಪ ತಾಳುತ್ತ ಭಕ್ತರಕ್ಷಕನಾಗಿ ದುಷ್ಟವಂಚಕನು 119 ಇಂದ್ರಿಯಂಗಳ ಹೊರಮುಖವಾಗಿ ಸೃಷ್ಟಿಸಿದೆ ಹೃದಯಗುಹೆಯಲ್ಲಿರುವೆ ಕಾಣುವುದದೆಂತು? ಮನದಬಾಗಿಲ ತೆರೆದು ಅಂತರ್ಮುಖದಿ ನೋಡೆ ಪ್ರತ್ಯಗಾತ್ಮನು ನೀನು ಕಾಣುವದು ನಿಜವು 120 ಕುರುಡನಾಗಿಹೆ ನಾನು ಕುರುಡು ಇಂದ್ರಿಯಂಗಳಿಂ ತೋರುಬೆರಳಿಂದ ತೋರಿಸಲು ಬಯಸಿದೆನು ನನಗೆ ಅಂಜನಹಾಕಿ ತೋರು ನಿನ್ನ ಜ್ಯೋತಿ ವಿಶ್ವತಶ್ಚಕ್ಷು ಪರಮಾತ್ಮ ಶರಣೆಂಬೆ 121 ಕೋಟಿ ಗೋದಾನಕ್ಕೂ ಮಿಗಿಲಾಗಿ ಪುಣ್ಯಕರ ನಿನ್ನ ನಾಮದ ಜಪವು ತಾರಕನು ನೀನು ತಿಳಿದ ಗುಣಸಾಗರದ ಹನಿಗಳನು ಹೆಕ್ಕಿ ನಾನ್ ನುತಿಸಿದೆನು ನಿನ್ನನ್ನು ಮುಕ್ತಿದಾಯಕನೆ 122 ಸುಗುಣೇಂದ್ರ ಮೊದಲಾದ ಯತಿವರರ ಪೂಜೆಯಿಂ ಜ್ಞಾನರೂಪದ ನೀನು ಸಂತಸವ ತಾಳಿ ಜ್ಞಾನಭಂಡಾರಿ ಯತಿವರರಿಗೆಲ್ಲರ್ಗೆ ಜ್ಞಾನಾಮೃತವ ಕೊಟ್ಟು ರಕ್ಷಿಸುವೆ ಹರಿಯೇ 123 ಭವದಿ ಬಂಧಿಸಿಯೆನ್ನ ಭಾವಗತನಾಗಿದ್ದು ದುಷ್ಕರ್ಮ ಮಾಡಿಸುತ ಫಲ ಕೊಡುವದೇಕೆ? ಎನ್ನ ಕೈಯಿಂದೆತ್ತಿ ಬಳಿಗೆ ಕರೆದೊಯ್ಯು 124 ಉಚ್ಛ್ವಾಸ ನಿಶ್ವಾಸ ರೂಪದಿಂದೊಳಹೊಕ್ಕು ಆತ್ಮ ಸಂದರ್ಶನವ ಮಾಡುತ್ತ ವಾಯು ಇಪ್ಪತ್ತಒಂದುಸಾಸಿರ ಮತ್ತೆ ಆರ್ನೂರು ಹಂಸಮಂತ್ರದ ಜಪವ ಮಾಡುವನು ದಿನಕೆ 125 ಪರಶುರಾಮನು ರಾಜರೆಲ್ಲರನು ಸಂಹರಿಸಿ ಭೂಮಿಯನು ನಕ್ಷತ್ರಮಂಡಲವ ಮಾಡಿ ವಿಶ್ವಜಿತ್‍ಯಾಗದಲಿ ಕಶ್ಯಪರಿಗೀಯಲದ ಕಾಶ್ಯಪಿಯ ನಾಮವನು ಭೂಮಿ ಪಡೆಯಿತಲಾ 126 ಕಶ್ಯಪರ ತಪದಿಂದ ರಾಜರಿಲ್ಲದ ಭೂಮಿ ಭಾರದಿಂ ಕೆಳಗಿಳಿಯೆ ಊರುವಿಂದೆತ್ತಿ ಅವಳ ಮೊರೆ ಕೇಳಿ ರಾಜವಂಶವನ್ನುದ್ಧರಿಸೆ ಉರ್ವಿನಾಮವ ಪಡೆಯಿತು ಭೂಮಿ ನಿಜವು 127 ವ್ಯಾಸಪುತ್ರನದಾಗಿ ವ್ಯಾಸಪಿತ ನಾನಾಗಿ ವ್ಯಾಸಭವನದ ಒಳಗೆ ಭದ್ರನಾಗಿದ್ದೆ ಈ ಭವನದಿಂದೆನ್ನ ನಿನ್ನ ಭವನಕೆ ಒಯ್ಯು ಅಮೃತಲೋಕದಿ ನಿನ್ನ ಸೇ, ವೆ ಗೈಯ್ಯುವೆನು 128 ರಾಧಿಕಾರಮಣನೆ ಮಧುರಾಪುರಾಧಿಪತಿ ದಾನವಾಂತಕ ಕೃಷ್ಣ ಸತ್ಯಸ್ವರೂಪ ವಿಶ್ವಜ್ಞ ಪೂಜಿತನೆ ರಕ್ಷಿಸೆನ್ನನು ಹರಿಯೇ ಚಿತ್ತದಲಿ ನೆಲೆನಿಲ್ಲು ತಂದೆ ಕಾಪಾಡು 129 ಇಂದ್ರಾಣಿ ತಪಗೈದ ತಾನದಲಿ ಚ್ಯವನಮುನಿ ವೇದಾದ್ರಿ ಎಂಬಲ್ಲಿ ತಪಗೈಯುತ್ತಿದ್ದ ಸ್ವರ್ಣವರ್ಣವನ್ನಿತ್ತು ಕಣ್ಣಿತ್ತ ಸ್ವರ್ಣನದಿ ಹರಿಯುತಿಹುದಿಲ್ಲಿಯೇ ಈಗಲೂ ನಿಜವು 130 ಪ್ರಕೃತಿ ಪ್ರಕೃತಿಯ ಭೇದ ಪ್ರಕೃತಿ ಜೀವದ ಭೇದ ಜೀವ ಜೀವಗಳ ಭೇದ ಮೂರನೇಯದು ಜೀವೇಶ ಭೇದವದು ಪ್ರಕೃತೀಶ ಭೇದವೆಂ ದಿಹವು ಪ್ರಪಂಚದಲಿ ಪಂಚಭೇದಗಳು 131
--------------
ನಿಡಂಬೂರು ರಾಮದಾಸ
ಘನತರ ದೂರದೊಳು ಸಮಮತದೊಳು ವನಜನಾಭನತಿ ಮನಸಿಜಾನ್ವಿತನಾದ ವನಿತೆ ನೀ ದಾರೆಂದಾ ನಿನ್ನೊಳು ಮನಸೋತೆ ಕೇಳೆಂದಾ ಪ ಮತ್ಸ್ಯಗಂಗಳಲಿ ಸ್ವಚ್ಛ ಜಲವು ಯಾಕೆ ಮತ್ಸ್ಯಾವತಾರದ ಉತ್ಸವ ತೋರುವಿ ವನಿತೆ ನೀ ಬಾರೆಂದಾ 1 ಕೂರ್ಮ ಕಠೋರದ ಹೆರಳು ಭಂಗಾರವು ಕೂರ್ಮಾವತಾರದ ಮರ್ಮವ ತೋರುವಿ2 ಸರಸ ಮೌಕ್ತಿಕದ ಮುರವು ನಾಸದೊಳು ವರಹವತಾರದ ಕುರುಹು ತೋರುವಿ 3 ಹರಿಯ ಹಿಡಿಯ ತಂತಿ ಭರದಿ ಬಳುಕುತೆ ನರಸಿಂಹರೂಪದೆ ಸ್ಮರಣೆ ತೋರುವಿ 4 ವಾಮನ ಬಾಲೆ ನೀ ಸಾಮಜೆ ಗಮನೆ ವಾಮನ ರೂಪದ ಸೀಮಾ ತೋರುವಿ 5 ತಾಮಸಗಿಡಗಳ ಕಾಮಿಸಿ ತವಿಸುವಿ ರಾಮನ ಕಾಲದ ನೇಮವ ತೋರುವಿ 6 ಸ್ಮರಶರದಂದದಿ ಕರದಿ ಕೇತಕಿ ಪುಷ್ಪ ಪರಶುರಾಮನ ಅರುಹ ತೋರುವಿ 7 ಎದೆಯೊಳಚಲಸ್ತನ ಮುದದಿ ಧರಿಸಿರುವೆ ಮಾಧವ ತಾರದ ಸದವು ತೋರುವಿ 8 ಅಂಗಜ ಬಾಣದಿಂದಂಗದ ಪರವಿಲ್ಲ ಮಂಗಲ ಬೌದ್ಧನ ರಂಗವ ತೋರುವಿ 9 ಮನಸಿಜಾಶ್ವವೇರಿ ವನಿತೆ ಕಂಗೊಳಿಸುವಿ ಪರಿ ವನಪು ತೋರುವಿ 10 ಕುರುಹು ಅರಿದೆ ನಿನ್ನ ಬೆರದು ಸುಖಿಪರನ್ನೆ ನರಸಿಂಹವಿಠಲನರಸಿ ಬಂದಿರುವೇ 11
--------------
ನರಸಿಂಹವಿಠಲರು
ಘೋರವಾರಾ ದುಃಖ ಪಾರಾವಾರಾವಿಲ್ಲ ಸಾಧುತಾ ಸಂಸಾರ ಪ ನೀರ ಪೊಕ್ಕು ಬಾರಾ ಬೆನ್ನಿನಲಿ ಧರಾ ಧಾರಿ ನರಹರಿ ಎನಿಸೆ ಅಸಾರ ಸಂಸಾರ ಧಿಕ್ಕಾರವೆಂಬೇನೇ ಸುರಾರಿ ವೃಂದದ ಸಂಹಾರ ಕಾರಣ 1 ದಾನಾ ಬೇಡಿ ಮಾತಾ ಹಾನಿ ಮಾಡಿ ಸೀತಾ ಮಾನಿ ಮಾನಿನಿಯುಳಿಸೆ ಭೂನಾಥ ಶ್ರೀಯುತ ಭವದಾತನೆಂಬೆನೆ ದಾನವರಾಂತಕ ದೀನರಪಾಲಕ 2 ಅರಿವೆಗ¼ಲ್ಲ್ಲಾ ಹರಿಯೇರಬಲ್ಲ ನರಸಿಂಹವಿಠಲೆನಿಸಿ ಅರಿವಲ್ಲ ಭವಗುಲ್ಲ ತಾಳಲ್ಲಿ ಎಂದೇನೆ ಅರಿಭವಮಾರಕ ಸುರಲೋಕದರ್ಶಕ ಸಾಧುತಾ ಸಂಸಾರ 3
--------------
ನರಸಿಂಹವಿಠಲರು
ಚಿಕ್ಕ ತಿರುಪತಿವಾಸ - ಶ್ರೀ ವೆಂಕಟೇಶ ಪ ಅಕ್ಕರದಿ ನೀನೆನ್ನ - ತಕ್ಕೈಸಬೇಕೋ ಅ.ಪ. ಚಕ್ರಧರ ದೇವಾಚೊಕ್ಕ ಮೂರುತಿ ಅಜನ | ಪೊಕ್ಕಳಾದಲಿ ಪಡೆದುಲಕ್ಕುಮಿಗೆ ಮೀರ್ದ ಪೊಂ | ಬಕ್ಕಿ ಧೇರನ ಕಾಯೋ 1 ಸಪ್ತ ಪ್ರಕಾರದಲಿ | ಆಪ್ತ ನೀ ನೆಲಿಸಿದ್ದುಗುಪ್ತ ಮಹಿಮನೆ ಜಗಕೆ | ವ್ಯಕ್ತನಾಗದಲೇ |ಕ್ಲುಪ್ತಿಯಿಂದದಿ ಹವಿ | ಭೋಕ್ತø ಯಜ್ಞನಿವೊಲಿದುವ್ಯಕ್ತನಾದೆಯೊ ಜಡದಿ | ಅವ್ಯಕ್ತ ಮೂರ್ತೇ 2 ಮೂರ್ತಿ | ಪ್ರತಿರಹಿತ ದೇವಾ 3 ವರಾಹ | ಸ್ವಾಮಿ ಪುಷ್ಕರಿಣ್ಯಾದಿಆ ಮಹಾ ತೀರ್ಥಗಳ | ವಿಮಾನ ಸ್ಥಿತನಾ |ಈ ಮನೋರೂಪದಲಿ | ನೇಮಾನು ಸಂಧಾನಕಾಮಿಸುವೆ ಶ್ರೀರಮಣ | ಭೂಮಿಗ್ವಲ್ಲಭನೇ 4 ಸರ್ವಜಗ ಸೃಜಿಸುವನೆ | ಸರ್ವವನು ಲಯಿಸುವನೆಸರ್ವಕುತ್ತಮನೆನಿಪೆ | ಶರ್ವವಂದ್ಯಾಸರ್ವ ಪ್ರೇರಕ ನೀನೆ | ಸರ್ವ ಚೇಷ್ಟಕ ನೀನೆಸರ್ವ ಸುಂದರ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಚಿಂತಿಪೆನೊಂದೊಂದು ನಾನಿಂತು ಬೇಡುವೆನು ಪ ನರಜನ್ಮಕೆ ಬರುವುದು ತಾ ದುರ್ಲಭವು ವರಕುಲ ದುರ್ಮಿಳವು ದೊರೆವುದೆ ಭಾಗ್ಯವು ಧರೆಯೊಳು ಬಂದೀ ಗುರುಕುಲದೊಳು ಪುಟ್ಟಿ ಗುರುವರಪೂಜ್ಯ ಪರಾತ್ಮನ ಪೂಜಿಪೆ 1 ನಿಜರೂಪ ತೋರಿದಿ ಪ್ರಲ್ಹಾದನಿಗೆ ಗಜವರನೆನಹೀಗೆ ವಿಜಯನ ರಾಣಿಗೆ ದ್ರುಪದಾತ್ಮಜೆಗೆ ಭಜಕರ ನಿಚಯಕ್ಕೆ ಕುಜಪ್ರದ ಮೂರ್ತಿಗೆ ಅಜರಾಮರಿಗೆ ನಿಜಪದ ತೋರೆಂದು ಭಜಿಸಿ ಬೇಡುವೆನು 2 ಗಂಗೋದಕದೊಳು ಮೀಯಲು ಪಾವನವು ಮಂಗಲ ತುಲನೇಯು ಸಿಂಗಾರದೊಳಧಿಕಾಚ್ಯುತ ಭೂಷಣೆಯು ನಿನ್ನಾದೇ ವರವು ಬಂಧುರದೇಹವ ತಾಳಿದೆನಗೆ ನೀ ಸಂಗಸುಖವನೀಯೋ ನರಸಿಂಹವಿಠಲ3
--------------
ನರಸಿಂಹವಿಠಲರು
ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ 1 ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ ಬಡಿಗಂಟು ಸುದ್ದಿ ನೂರಾರು ಹೇಳಿ ಅವರ ಹಿರಿಯ ಮಗನಂತೆ ಉದರವ ಪೊರೆವೆ ಮನವೆ 2 ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ ಚಿತ್ತದೊಲ್ಲಭನ ಸಂಗಡದಿ ನಲಿದು ಮತ್ತೆ ಉಪರತಿಗೆ ಪರಪುರುಷನ ಬಯಸುವ ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ 3 ಪಗಡೆ ಚದುರಂಗ ಕವಡೆಯನಾಡÀ ಕರೆದರೆ ನಿಗುರುವುವು ಕರ್ಣಗಳು ಮೊಚ್ಚೆಯಂತೆ ಜಗದೀಶನ ದಿನದಿ ಜಾಗರಕೆ ಕರೆದರೆ ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ 4 ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ 5 ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ ಉಳ್ಳಿಪÀರೆ ಸುಲಿದರೆ ಹುರುಳಿಲ್ಲ ಮನವೆ 6 ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು ಸಂದೇಹವಿಲ್ಲವಿದು ಶಾಸ್ತ್ರಸಿದ್ಧ ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ 7
--------------
ವಿಜಯದಾಸ
ಜಯ ಭಾಗೀರಥಿದೇವಿ ಜಯ ಜಾನ್ಹವಿ | ಭವ ಭಯನಿವಾರಿಣಿ ಸುಖಕಾರಣಿ ಪ ಪಟು ತ್ರಿವಿಕ್ರಮನ ಉಂಗುಟ ಸೋಂಕಲಾರ್ಭಟದಿ | ಸ್ಫುಟಿತ ಬ್ರಹ್ಮಾಂಡ ನಿಜಕಟಹದಲ್ಲುದಿಸಿ | ನೆಟನೆ ಪದುಮಜಪಾತ್ರ ತಟಕೆೃದು ತೀರ್ಥೆನಿಸಿ | ನಿಟಲಲೋಚನ ನಘನಜಟೆಗೆ ಬಂದು 1 ಕೆಲವು ಕಾಲಕೆ ಹಿಮಾಚಲದಿಂದ ಭಗೀರಥಗೆ | ಒಲಿದು ಕಾಶೀ ಪ್ರಯಾಗದಲಿ ಬಂದು | ಸಲೆಜಗವ ತಾರಿಸುತಲಿ ಮುಖ ಸಹಸ್ರದಿಂ | ಫಣಿ ನಿಲಯಕಿಳಿದೇ2 ಸ್ಮರಣೆಯಿಂದಘಹರಿಪೆ ದರುಶನದಿ ಗತಿಯೀವೆ | ನೆರೆ ಸ್ನಾನದಾ ಫಲವನರಿವರಾರು | ಗುರುಮಹೀಪತಿಜನುದ್ಧರಿಸು ಕರುಣದಲಿ | ಸಾಗರಪ್ರೀತೆ ಖ್ಯಾತೆ ಲೋಕಮಾತೆ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ- ಕಮಲವನು ತೊಳೆಯಲಾವೇಗದಿಂದ ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ1 ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ ಭುವನದೊಳಗೀರೈದು ನೂರು ಯೋಜನದಗಲ ತವಕದಿಂದಲಿ ಧುಮುಕಿ ಚತುರ ಭಾಗವಾದೆ 2 ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ ಭವದೊರೆ ಭಗೀರಥಗೆ ವಲಿದು ಬರುತ ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ 3 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಪಾವನವು ಸಂದೇಹವಿಲ್ಲ ಮಜ್ಜನ ಪಾನ ಮಾಡಿದಗೆ ಪೊಳೆಗೆ ವೈಕುಂಠಪುರ ಅವನ ಹೃದಯದಲಿ 4 ದೇಶದೇಶಗಳಿಂದ ಬಂದ ಸುಜನರ ಪಾಪ ನಾಶನವ ಮಾಳ್ಪ ನೀ ನಿಷ್ಕಾಮದಿ ಮಾಧವ ವಿಜಯವಿಠ್ಠಲನ ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ 5
--------------
ವಿಜಯದಾಸ
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ ಸ್ವೀಕರಿಸಬೇಕು ಕ್ಷಣದಿ ಪ ನಾಕಾರು ವಿಧಗಳಲಿ ನೀಪೇಳಿದುದನೆಲ್ಲ ಏಕಮನದಲಿ ಮಾಡಿದೆ ಕೃಷ್ಣ ಅ.ಪ ಬಾಲತನದಲಿ ಬಹಳ ಲೋಲನಾಗಿರು ಎಂದು ಪೇಳಲಿಲ್ಲವೆ ಯೋಚಿಸು ಕೀಳುಜೀವನದಲ್ಲಿ ಕಾಲವನು ಕಳೆ ಎಂದು ಪೇಳಿದುದ ನೀ ಮರೆತೆಯಾ ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ ಪೇಳಿದುದ ಮಾಡಿರುವೆನೊ 1 ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ ಪಾಪ ಪುಣ್ಯಕೆ ಕಾರಣ ಈ ಪರಿಯ ನಿನ್ನ ಸಂಕಲ್ಪವನು ಮೀರಲು ತಾಪಸೋತ್ತಮರಿಗಳವೆ ಆಪತ್ತು ಸಂಪತ್ತು ನಿನ್ನಧೀನಗಳೆಂದು ತಾಪತ್ರಯವ ಸಹಿಸಿದೆ 2 ಇಂದಿರಾಪತಿ ನಿನ್ನ ಒಂದೊಂದು ದಿನದಲಾ ನಂದ ಪೂಜೆಗೈಯಲು ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ ಇಂದು ಮಾಡುವರ್ಯಾರು ಸಂದೇಹವಿಲ್ಲವೆನಗೆ 3 ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ ಸಂತಸದಿ ಮುಳುಗಿರುವೆನೊ ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ ಶಾಂತಿಯನು ದಯಮಾಡೆಲೊ ಸಂತತ ನೀನು ಎನ್ನಂತರಂಗದಲಿರಲು ಕಂತೆಯಂದದಿ ಕಾಂಬೆನೊ ಜಗವ 4 ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು ಯಾರ ಭಯವೆನಗಿಲ್ಲವೊ ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು ಮೀರಿ ನಡೆಯುವುದಿಲ್ಲವೊ ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ ಯಾರಿರುವರೊ ಜಗದಲಿ ನಿನ್ಹೊರತು 5
--------------
ವಿದ್ಯಾಪ್ರಸನ್ನತೀರ್ಥರು
ತತ್ವವ ಬೋಧಿಸಿದಾ ಶ್ರೀ ಗುರುರಾಯಾ ತತ್ವವ ಬೋಧಿಸಿದಾ ತತ್ವವ ಬೋಧಿಸಿ ತತ್ವ ಕರುಣಿಸಿ ಉತ್ತಮ ಜೀವಿಸಿ ಉತ್ತಮ ಗತಿಯೆಂದು ತತ್ವವ ಬೋಧಿಸಿದಾ ಪ ಹಿಂದೆಯಾದರು ಸರಿ ಇಂದಾದರೂ ಸರಿ ಗೋ- ಸಂದೇಹವಿಲ್ಲದೆ ಮುಂದೆ ಆನಂದಾತ್ಮಾ ಎಂದು ತಂದೆಯೇ ಮುಕುತಿಗೆ ಸಾಧನವೆಂದು 1 ಕನಸು ಮನಸಿನಲಿ ಅನುಗಾಲ ಧ್ಯಾನದಿಂದಲಿ ಘನಹರಿಯ ನೆನೆಯುತಲಿ ಮನಕಾನಂದವನೀವನವನಿದಿರಲಿ ಅನುಮಾನವಿನಿತು ಬಾರಲಾಗದೆನುತಲಿ 2 ನರಸಿಂಹವಿಠಲನ ಶರಣರ ಸಂಗವು ಹರಿವಾಯು ಕರುಣಕೆ ಕಾರಣವು ಮರೆಯದೆ ಹರಿನಾಮ ಸ್ಮರಣೆಯ ಮಾಡಲು ಹರಿಯೇ ಒಲಿದು ಕರಪಿಡಿವನು ಎಂದು 3
--------------
ನರಸಿಂಹವಿಠಲರು
ತಪ್ಪಲಿಲ್ಲ ನೀನು ಬಂದೂ ತಪ್ಪಲಿಲ್ಲ ನಿನಗೆ ನೈವಿದ್ಯವಿಡಲಿಕ್ಕೆ ತಪ್ಪಲಿಲ್ಲ ಪ ತಪ್ಪದೆ ನೀನಿತ್ತುದನ್ನೆ ಒಪ್ಪಿಸುವೆನು 1 ಹೊಳೆಯ ನೀರು ಹೊಳೆಗರ್ಪಿಸವಂದದಿ ಒಲಿದೆನಗಿತ್ತುದೆ ಸಲಿಸುವೆ ನಿನಗೆ 2 ಅಣುರೇಣು ತೃಣಕಾಷ್ಠ ವ್ಯಾಪ್ತನು ನೀನು ನಿನಗಲ್ಲದರಿಯೆ ಅನ್ಯರಿಗುಂಟೆ ಅರ್ಪಣ3 ನೀನಿತ್ತುದಲ್ಲೆ ಶ್ರೀಹರಿ ಹಣ ಹೊನ್ನು ಏನೆನ್ನ ಗೌರವ ನಿನ್ನದು ನಿನಗೆ 4 ಅಲ್ಪವರ್ಪಿಸೆ ನೀನಲ್ಪನೀವಿ[?] ಕಲ್ಪತರುವಿನೊಲು ನರಸಿಂಹವಿಠ್ಠಲಾ 5
--------------
ನರಸಿಂಹವಿಠಲರು
ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ಪ ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ಅ.ಪ ತಂದೆ ತಾಯಿಯು ನೀನೇ ಬಂಧು ಬಳಗ ನೀನೆ ಸಂದೇಹವಿಲ್ಲವೋ ಕಂದನೆಂದೆನ್ನದಂಥ1 ಒಂದೂ ತಿಳಿಯದಂಥ ಮಂದಮತಿಯು ನಾನು ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ 2 ಸಂದೇಹ ಕಳೆದಿನ್ನ ಬಂಧವಾಗಹ ಅಘ ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ 3 ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ ಕರುಣಸಾಗರ ನಿನ್ನ ಕರುಣ ಪಡೆಯದಂಥÀ 4 ಶಾಂತ ಶ್ರೀ ನರಹರಿ ಪಂಥಾದಿಚರಿಸದೇ ಭವ ಕಾಂತಾರ ದಾಟಿಸದಂಥ 5
--------------
ಪ್ರದ್ಯುಮ್ನತೀರ್ಥರು