ಒಟ್ಟು 147 ಕಡೆಗಳಲ್ಲಿ , 40 ದಾಸರು , 139 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಾಚಾರ್ಯರು ಮಧ್ವಮುನಿರಾಯ ಭಕ್ತೋದ್ಧಾರನೆ ಪ ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ ತಾಮಸರ ಮುರಿದು ಚೂ ಡಾಮಣಿಯ ಸ್ವಾಮಿಗಿತ್ತೆ 1 ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್- ನಾಮವ ಹೊಂದಿಸಿ ಕೃಷ್ಣನ ಪ್ರೇಮಕೆ ನೀ ಪಾತ್ರನಾದೆ 2 ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ ಅಪ್ಪ ಗುರುರಾಮ ವಿಠಲನ ತಪ್ಪಾದೆ ಪೂಜಿಸುತಿರ್ಪ 3
--------------
ಗುರುರಾಮವಿಠಲ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮುದ್ದು ಮೋಹನ ರಾಯಾ | ಸುಜನರಉದ್ಧರಿಸಿದ್ಯೊ ಜೀಯಾ | ಪ ಶ್ರದ್ಧಾಳುತನದಲಿ | ಬದ್ಧ ದೀಕ್ಷಿತನೆಮಧ್ವಮತವು ಎನೆ | ದುಗ್ಧಾಬ್ದಿ ಚಂದಿರ ಅ.ಪ. ಚಿಪ್ಪಗಿರಿ ಸುಕ್ಷೇತ್ರಾ | ದೊಳಗೆಅಪ್ಪ ಶ್ರೀ ವರರಿಂದಾ |ಗೊಪ್ಪ ಸದುಪ ದೇಶ | ಅಪ್ಪುತದಾಸನೆನೆಪ್ಪು ಕೊಡುತ ತಿ | ಮ್ಮಪ್ಪನೊಳಗೆಮನ 1 ತೀರ್ಥಕ್ಷೇತ್ರ ಚರಿಸೆ | ದೇಹವುಸಾರ್ಥಕಾಯಿತು ಎನಿಸೀ |ಯಾತ್ರೆ ಮಾಡಿದೆ ಸ | ತ್ಪಾತ್ರರ ಸೇರುತಗಾತ್ರ ಗೈಸಿದೆ ಪಾವಿ | ತ್ರ್ಯ ಬಾಹ್ಯಾಂತರ 2 ಗುರುಗೋವಿಂದ ವಿಠಲನೇ | ಪರತತ್ವಸರ್ವೋತ್ತಮನವನೇ |ಒರೆಯುತ ಸುಜನರ | ಪರಿಪಾಲಿಸಿದಿಯೊವರಬಳ್ಳಾಪುರದಲಿ | ವಿಠಲನ ಸನಿಯ 3
--------------
ಗುರುಗೋವಿಂದವಿಠಲರು
ಮೂಕನಾಗೋ ಮನವೆ ನಿನಗೆ ಯಾಕೀ ಲೋಕ ಗೊಡವೆ ಪ ಮೂಕನಾಗಿ ಬಹುಜೋಕೆಯಿಂದ ನಡಿ ಏಕಾಂತ ಗುಟ್ಟೀ ಲೋಕರಿಗರುಹುದೆ ಅ.ಪ ಹೇಳಿದರೇನಾದೋ ನೀ ಬಲು ಕೇಳಿದರೇನಾದೊ ಹೇಳಿಕೆ ಕೇಳಿಕೆ ಗಾಳಿಯ ಮೊಟ್ಟ್ಯೆಂದು ನೀಲಶಾಮನ ಮನದಾಲಯದೊಳಗಿಟ್ಟು 1 ಅವನಿ ಗೊಡವೆ ಯಾಕೋ ಹರಿಯೆಂದು ಭವಭಯವನು ಕಳಕೋ ದಿವನಿಶಿ ನಿಜದನುಭವದೊಳಗಾಡುತ ಭವಗೆಲುವಿನ ಸುದ್ದಿ ಭವಿಗಳಿಗುಸುರದೆ 2 ಪಾದ ಪಿಡಿಯೋ ಮುಂದಿನ್ನು ಹುಟ್ಟು ಸಾವು ಗೆಲಿಯೊ ದುಷ್ಟಮತಿಗಳ ಗೋಷ್ಠಿಗೆ ಹೋಗದೆ ಬಿಟ್ಟಗಲದೆ ನಿಜಪಿಡಿದು ನೀತಿ 3 ಮತ್ರ್ಯಜನರ ಇದಿರು ನೀ ಬಲು ಗುಪ್ತದಿಂದಿರು ಚದುರ ಸತ್ಯತಿಳಿದು ಹರಿ ಸರ್ವೋತ್ತಮನಂಘ್ರಿ ಚಿತ್ತದಿ ನಿಲ್ಲಿಸಿ ಅತ್ಯಾನಂದಗೂಡಿ 4 ನಂಬಿಗಿಲ್ಲದಲ್ಲಿ ಸುಬೋಧ ಡಂಬವೆನಿಪುದಲ್ಲಿ ಜಂಬವಡಿಯದೆ ಕುಂಭಿನಿಯೊಳು ನೀ ನಂಬಿ ಶ್ರೀರಾಮನ ಗುಂಭದಿಂ ಭಜಿಸುತ 5
--------------
ರಾಮದಾಸರು
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ. ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ. ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ 1 ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ 2 ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ 3
--------------
ವಾದಿರಾಜ
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು
ಯಾಚಕ ಜನ್ಮಾ ಯಾಕೆ ಬರೆದನೊ ಬ್ರಹ್ಮಾ ನಾಚಿಕೆಯಾಗಿ ನಷ್ಟಾಗುವಂತೆ ಸ್ವಧರ್ಮಾ ಪ ಒಡಲಾಶೆಗಾಗಿ ಹೊಲೆಯನ ಹೊಗಳಬೇಕು ಕಡುಲೋಭಿಯಾದ ಅರಸನೋಲಗವೆ ಸಾಕು ಬಡತನವೆಂದು ಪರರ ಸೇರುವದೆ ಸಾಕು ಒಡಲು ಪರಾಕು 1 ತ್ಯಾಗದಿ ಕರ್ಣಾ ಭೋಗದಿ ದೇವೇಂಧ್ರನೆಂದು ಕೊಂಡಾಡಲು ಪೋಗಿ ಬಾ ನಾಳೆ ಎಂದು ಎನುತ ಪೇಳಲಾಗಿ ಬೈದಾಡುತ ಬಂದು ಬಳಲುತಿರಲಾಗ ಚಿತ್ತಕ್ಕೆ ತಂದು 2 ಪರ್ವತವನ್ನು ಕಂಡು ಕೈತಿಕ್ಕಿ ಕೋರಿದೆ ಬರಿದೆ ಇಂಥಾ ಗರ್ವದಿಂದುಕ್ಕಿ ಏರಿದೆ ಗುರುವಿಮಲಾನಂದ ಸರ್ವೋತ್ತಮನ ನೆನೆಯ ಬಾರದೇ 3
--------------
ಭಟಕಳ ಅಪ್ಪಯ್ಯ
ಯಾತರವ ನಾನೈಯ ಇಂದಿರೇಶ ಪ ಹೋತನ ಕೊರಳೊಳಗೆ ಮೊಲೆಯಿರ್ಪ ತೆರದಲಿ ಅ.ಪ ಗ್ರಾಸಕ್ಕಲ್ಲದೆ ನಾನು ದೇಶ ದೇಶಕೆ ಪೋಗಿ ವಾಸಪಗೆ ಸಮರೆಂದು ದೋಶಿಗಳ ಪೊಗಳೀ ಕಾಸುಗಳಿಸಲು ದಾಸ ವೇಷ ಹಾಕಿದ ಶೂರ ಏಸು ಜನ್ಮವು ಕಳಿಯೆ ನಾಶವಾಗದೊ ಆಶೆ 1 ನೇಮ ನಿಷ್ಠೆಗಳಾಟ ಪರರಿಗೋಸುಗ ಹೂಡಿ ಕೋಮಲಾಂಗಿಯರ ಮನ ಮೆಚ್ಚಿಸುತ ಜಗದೊಳಗೆ ಹೇಮದಾಶೆಗೆ ಸೂಳೆ ಪ್ರೇಮವನ್ನು ತೋರ್ಪಂತೆ ನಾಮಸವಿಯುಣ್ಣದೆಲೆ ಗಾಯನವ ಮಾಡುವೆನು 2 ವ್ಯಾಸಕೂಟದಿ ಬೇರೆ ದಾಸಕೂಟವು ಎಂಬ ದೋಷವಾದವ ಮಾಡಿ ವ್ಯಾಸದಾಸರ ದ್ರೋಹ ಗ್ರಾಸವಾದೆನು ನಾನು ಶಾಸ್ತ್ರವಾಹುದೆ ಬೇರೆ ಭಾಷೆ ಬೇರೆಯು ಆಗೆ ಶ್ರೀಶ ಹರಿಸೋ ಇದನು 3 ಮಾನವರ ಬಹುಮಾನ ಸಾನುರಾಗದಿ ಬಯಸಿ ನಾನು ಮೋದಿಸುವೆ ಹೀನ ಮತಗಳ ಹುಳುಕು ಪ್ರಾಣಪತಿಮತ ಮೇಲ್ಮೆಗಾನಮಾಡೆನು ದೃಢದಿ ಸ್ವಾನುಸಂಧಾನ ವಹೀನ ಜ್ಞಾನಿಯೊ ನಾನು4 ಖ್ಯಾತಿ ಜೀವನಕಾಗಿ ಶಾಸ್ತ್ರವೋದಿದ ಮೂಢ ನೀತಿ ಪೇಳುವೆ ಜನಕೆ ನೀತಿತೆರನಾನಡಿಯೆ ನಿತ್ಯ ನೇಮವುಯನಗೆ ಈತರದ ಹರಿದಾಸ ಮಾತರಿಶ್ವಗೆ ದೂರ 5 ದಾನ ಧರ್ಮಗಳಿಲ್ಲ ಮೌನ ಜಪ ತಪವಿಲ್ಲ ಹೀನಗುಣ ಬಿಡಲಿಲ್ಲ ನಾನುಯೆಂಬುವೆನಲ್ಲ ಸೊಲ್ಲು ಏನು ಬಿಡೆದಿಹೆನಲ್ಲ ನಿನ್ನ ನಂಬಿಹೆನಲ್ಲ ನೀನು ಬಿಡೆ ಮದ್ದಿಲ್ಲ6 ಇಂತುಟಾದರು ಮೆರೆವೆ ಹಂತ ನಿನ್ನಯ ಕೃಪೆಯೊ ಯೆಂತು ಪೇಳಲಿ ಜೀಯ ಸಂತ ಜಯಮುನಿ ವಾಯುವಂತರದಿ ನಲಿವಂಥ “ಶ್ರೀ ಕೃಷ್ಣವಿಠಲ”ನೆ ನಿನ್ನಂಥ ದೊರೆಯಿಲ್ಲ ಸರ್ವೋತ್ತಮನೆ ಶರಣೈಯ7
--------------
ಕೃಷ್ಣವಿಠಲದಾಸರು
ಯಾವ ಹೆಸರಿನಿಂದೆ ಕರೆದರೇನುಪಾವನಾತ್ಮನೆ ಬರನೆಸ್ವಾ ಸರ್ವೋತ್ತಮನುಪ ಸಾವಿರ ಹೆಸರುಳ್ಳ ಅವನಿಗೆ ಹೆಸರಿಂದೇನುದೇವನೊಬ್ಬನೆ ಜಗಕೆ ಎಂಬ ನುಡಿ ಸುಳ್ಳೇನುಭಾವಭಕುತಿಗಳಿಂದ ಕರೆದೊಡನೆ ಬರುವನುಠಾವು ಕಾಲಗಳಿಲ್ಲಿ ಆತನಿಗೆ ಬಹಳೇನು 1 ಅಲ್ಲಾ ಎಂದರೆ ಬರುವ ಶಿವನೇ ಎಂದರೂ ಬರುವಾಗೊಲ್ಲ ಕೃಷ್ಣನೆ ಬಾರ ಎಂದರಾತನೆ ಬರುವಅಲ್ಲಿ ಇವ ಇಲ್ಲಿ ಅವ ಎಂದು ಬಡಿದಾಡಿದರೆಖುಲ್ಲರೆಂದರೇನು ಬಲ್ಲವರು ಮರುಳಾ 2 ವಿಧವಿಧ ನುಡಿಗಳಲಿ ಬೇರೆ ಶಬುದಗಳಿರಲುಅದು ಪರಾರ್ಥವೆ ಬೇರೆ ತಾನಾಗುವದೇನುಹದಿನಾರು ಪಥಗಳನೆ ಹಿಡಿದೊಂದು ಹೋದೊಡನೆ ಅದರಿಂದಲಾ ಊರು ಸೇರಿಸುವುದಿಲ್ಲವೇನು 3 ಹೃದಯದಲಿ ನಿಜವಾದ ಭಕುತಿಯನು ಬೇಡುವನುಇದನರಿತು ಪ್ರತಿದಿನದಿ ಭಜಿಸುವರು ಮುನಿಜನರುಗದುಗಿನಲಿ ವಾಸಿಸುವ ಶ್ರೀ ವೀರನಾರಾಯಣನುಮುದದಿಂದ ಸಲಹುವನು ಸಂದೇಹವೇನು 4
--------------
ವೀರನಾರಾಯಣ
ರಕ್ಷಿಸೋಯನ್ನ ರಕ್ಷಿಸೋ ರಕ್ಷಿಸೋ ಬೇಗ ಉಪೇಕ್ಷಿಸದಲೆ ಜಲ ಜಾಕ್ಷ ಯನ್ನ ಮೊರೆ ಪಕ್ಷಿವಾಹನ ದೊರೆ ಪ ವಾರಿಧಿ ಮತ್ಸ್ಯಾವತಾರದಿ ಧರಿಸಿ ಪೊಕ್ಕು ಘೋರದೈತ್ಯನ ಕೊಂದು ಇನ್ನು ಚಾರು ಚರಿತ ವಿಸ್ತಾರ ಶೃತಿಗಳನು ವಾರಿಜಾಸನಗಿತ್ತ ವರದ ಜಗನ್ನಾಥ 1 ವರಕೂರ್ಮನಾಗಿ ಮಂದರಗಿರಿ ಪೊತ್ತು ನಿರ್ಜರರಿಗೆ ಸುಧೆಯನುಣಿಸಿ ಹರುಷದಲಿ ಕರುಣಿಸೋಯಂದರೆ ಕಠಿಣತ್ವ ವಹಿಸುವರೇ ಪರಮ ಪುರುಷ ನೀನು ಭಜಕರ ಕಾಮಧೇನು 2 ಧರೆಯ ಕದ್ದು ಒಯ್ದವನ ಕೋಪದಿ ಘನತರ ಕೋರೆಯಲಿ ಸೆಳದೆ ದನುಜಹರ ವರಾಹನಾದ ಶ್ರೀ ವತ್ಸಲಾಂಛನ ದೇವ ಶರಣಜನ ಮಂದಾರ ಶರನಿಧಿ ಗಂಭೀರ 3 ಗರುಡಗಮನ ಶ್ರೀ ಹರಿ ಸರ್ವೋತ್ತಮನೆಂಬ ತರುಳನ ತಂದೆಯ ತಾಮಸದಿ ಪರಿಪರಿಹಿಂಸೆಯ ಪಡಿಸುತಿರಲು ನರಹರಿ ರೂಪತೋರಿ ಪ್ರಹ್ಲಾದಗೊಲಿದ ಧೊರೆ 4 ಬಲಿಯದಾನವು ಬೇಡಿ ಬ್ರಹ್ಮಾಂಡ ಭಾಂಡವು ಅಳೆದು ಮೂರು ಪಾದದೊಳಗೆ ಮಾಡಿ ತುಳಿದವನ ಪಾತಾಳಕಿಳಿಯಲು ವಾಮನ ಬಲಭೇದಿ ಸನ್ನತ ಪಾಲಿಸೋ ಪ್ರಖ್ಯಾತ 5 ಪರಶುರಾಮ ಬಾಹು ಬಲದಿ ಸಕಲ ರಾಜರನೆಲ್ಲ ಗೆದ್ದು ಸುಸ್ಥಿರ ಮೂರ್ತಿ ಧುರದಿಂದ ಭೂಮಿ ಭೂಸುರರಿಗೇ ಧಾರೆಯ ನೆರೆದ ಶ್ರೀಮದನಂತ ನಿರತದಿ ಭಗವಂತ 6 ಅನಿಮಿಷರೊಡೆಯ ಶರಣು ಶರಣೆನುತ ರಾವಣನನು ಜನು ವಿಭೀಷಣನು ಬರಲು ಘನದಿ ಪಂಕ್ತಿ ಕಂಧರನ ಜಯಿಸಿ ಲಂ- ಇನಕುಲ ಪಾವನ 7 ಬಲದು:ಶಾಸನ ಸೀರಿಸೆಳಿಯೇ ದ್ರೌಪದಿ ಮನದಲಿ ಕಾಮಿತಾರ್ಥ ಫಲದಾಯಕ ಮಾನವ ರಕ್ಷಿಸೆಂದು ಸ್ತುತಿಸಲು ಪೊರೆದೆ ಹಲಧರಾನುಜ ಮುದದಿ 8 ಅಂಗಜ ಪಿತ ತ್ರಿಪುರಾಂಗನೆಯರ ವ್ರತ ಭಂಗಮಾಡಿದೆ ಹಿಂಗದಲೇ ಮಂಗಳಮಹಿಮ ಕೃಪಾಂಗ ಗಂಗೆಯನು ಪಾದ 9 ಚಲುವ ಕುದುರೆಯನೇರಿ ಕಲ್ಕಿಕಯ್ಯೊಳು ಖಂಡೆಯ ಪಿಡಿದು ಝಳಪಿಸುತ ಕಲುಷಾತ್ಮರೆಲ್ಲರ ಖಂಡಿಸಿ ಧರ್ಮವು ಪರಿಪಾಲನೆಮಾಳ್ಪ ಶ್ರೀ ಭೂದುರ್ಗಾಧಿಪಾ 10 ಪಾವನಚರಿತ ಕೃಪಾವನ ರಾಶಿ ಶ್ರೀ ದೇವಕೀಸುತ `ಹೆನ್ನೆಪುರೀಶ’ ದೀನ ದೇವೋತ್ತಮ ದೀನ ಬಾಂಧವ ವೃಂದಾವನ ನಿಲಯಾನಂದ ಸುಂದರಕಾಯಾ 11
--------------
ಹೆನ್ನೆರಂಗದಾಸರು
ರಾಮಚಂದ್ರ ಹರಿ ವಿಠಲ | ನೀನಿವನ ಸಲಹೋ ಪ ಕರ ಪಿಡಿದು | ಕಾಮಿತವನಿತ್ತುಅ.ಪ. ಕರ ಪಿಡಿಯಯ್ಯ | ಪ್ರಹ್ಲಾದ ವರದಾಮರುತ ಮತ ದೀಕ್ಷೆಯಲಿ | ದೃಢವಾದ ಮತಿಯಿತ್ತುವರಗಳನೆ ನೀಡುವುದು | ಮರುತಾಂತರಾತ್ಮಾ 1 ತಾರತಮ್ಯವ ತಿಳಿಸೊ | ಪಂಚ ಭೇಧವ ತಿಳಿಸೋಕಾರ್ಯ ಕಾರಣ ನೀನೇ | ಬೇಡುವೆನು ನಿನ್ನಾಹರಿಯು ಸರ್ವೋತ್ತಮನು | ಮರುತ ಜೀವೋತ್ತಮನುನಿರುತ ನೀ ಸುಜ್ಞಾನ | ಅರಿವನೀಯುತ ಸ್ವಾಮೀ2 ನಾನು ನನ್ನದು ಎಂಬ | ಸಂಸ್ಕಾರವನೆ ಕಳೆದುನೀನು ನೀನೇ ಎಂಬ | ಉಪಾಯ ಒಲಿಸೇಕಾಣಿಸೋ ಹೃದ್ಗುಹದಿ | ಗಾನಲೋಲನೆ ದೇವಕೊನೇರಿ ವಾಸ ಹರಿ | ಪ್ರಾರ್ಥಿಸುವೆ ನಿನ್ನಾ 3 ಪತಿ ಅದ್ವೈತ ಸಿರಿ ಜಾನಕೀ ಪತಿಯೇ 4 ಕರ | ಪಿಡಿದು ಉದ್ಧರಿಸುತಲಿಪೊರೆಯೊ ಗುರು ಗೋವಿಂದ | ವಿಠಲ ಕಾರುಣ್ಯ 5
--------------
ಗುರುಗೋವಿಂದವಿಠಲರು
ಲೋಕ ನಾಯಕ ಲಕ್ಷ್ಮೀಲೋಲನಾ ಸ್ಮರಣೆ ಬಿಟ್ಟೂ ಪ ವಿದಿ ಮುನ್ನೆ ಬರದಿಷ್ಟಾ ಯಡಿಯಾತಪ್ಪಾದು ತುದಿಮೊದಲಿಂದಾ ಮಾಡಿದ ದೋಷವೆಲ್ಲಾ ಬೆದರಿಸಿದರೆ ಅದು ಬಿಡಲು ಬಲ್ಲುದೆ ಕೇಳೂ ಪಾದ ಭಜನಿಯ ಬಿಟ್ಟು 1 ನಾನಾಪರಿಯ ಮನಸೂ ನಟಿಸುವದಲ್ಲಾದೆ ಏನು ಎಲ್ಲವೂ ವ್ಯರ್ಥಾ ವೇದನೆ ನಿಂದೆ ನೀನು ಮಾಡಿದಾ ಫಲ ನಿನಗುಣಿ ಸದೆ ಬಿಡದೂ ಮಾನವಾಧೀಶನಂಘ್ರಿ ಧ್ಯಾನವೆಂಬುದು ಬಿಟ್ಟು 2 ಸಕಲಕೆ ಕರ್ತನಾಗಿ ಸರ್ವೋತ್ತಮನಿರಲು ಭಕುತಿ ಭಾವನೆಯಿಂದ ಭಜಿಸಾದೆ ನಿ ವಿಕಟಯೋಚನೆಯಿಂದ ಏನುಫಲವು ಇಲ್ಲಾ ನಿಕರ `ಹೊನ್ನೆಯ ವಿಠ್ಠಲನ ' ನಾಮೋಪಾಸನೆ ಬಿಟ್ಟು 3
--------------
ಹೆನ್ನೆರಂಗದಾಸರು
ಲೌಕಿಕ ಸಂದರ್ಭದ ಹಾಡು ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ ಪ ಏಳು ಬಿಲ್ಲಿಯ ಕೊಡಲಿಕ್ಕೆ ಬಂದ ಖೂಳನಿವನು ಈ ಮನೆಯೊಳಗೆ ತಾಳಲಾರದೆ ಬೀಸಾಟಿ ಬಂದೆನು ಶ್ರೀಲತಾಂಗಿಯ ರಮಣ ಗೋವಿಂದಾ 1 ಗುಂಡಪ್ಪನು ಯಾಗುಂಡಪ್ಪನು ರುಬು ಗುಂಡಪ್ಪನು ನಾನಿವನರಿಯೆ ಮಂಡರಂತೆ ದಿನಗಳಿವುತಲಿ ನಮ ಕಂಡು ಮಾನ್ಯ ಮಾಡದೆ ಹೋದನು 2 ಹರಿಸರ್ವೋತ್ತಮನೆಂದು ಝಾಂUಟಿ ಬಾರಿಪ ದಾಸರು ನಾವ್ ಹೌದು ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ- ಡುರಂಗನ ದಾಸನೆಂದು ತಿಳಿಯದಲೆ 3
--------------
ಕದರುಂಡಲಗೀಶರು
ವರಾಹ ಹರಿ ವಿಠಲ | ಕಾಪಾಡೊ ಇವನಾ ಪ ನಿರುತ ತವನಾಮ ಸ್ಮøತಿ | ಕರುಣಿಸುತ ಕಾಯೋಅ.ಪ. ತಾರಕವು ತವನಾಮ | ಸ್ಮರಣೆ ಮಾತ್ರದಿ ಎಂದುಒರಲುತಿದೆ ವೇದಗಳು | ಕರಿವರದ ಹರಿಯೇತರುಳ ಸಾಧ್ವೀ ಯುವಕ | ಮೊರೆಯಿಡುವನಂಕಿತಕೆಒರೆದಿಹೆನು ಅದರಿಂದ | ಕರೆದು ಕೈ ಪಿಡಿಯೋ 1 ಕಾಮವರದನೆ ದೇವ | ಕಾಮಿತಾರ್ಥಗಳಿತ್ತುನೇಮದಿಂ ಪೊರೆಯುವುದು | ಕಾಮಪಿತ ಹರಿಯೇ |ನೇಮ ನಿಷ್ಠೆಯಲಿಂದ | ಧೀಮಂತ ಪದಕೆರಗಿಸೌಮನಸ್ಯದಿ ಸೇವೆ | ಸಲ್ಲಿಸುವನಯ್ಯಾ 2 ಹರಿಯೆ ಸರ್ವೋತ್ತಮನು | ಸಿರಿವಾಯು ಮೊದಲಾದಸುರರೆಲ್ಲ ಕಿಂಕರೆಂಬ ಮತಿಯ ಕೊಟ್ಟುವರಜ್ಞಾನ ಭಕುತಿಯನೆ ಕರುಣಿಸುತ ಪೊರೆಯಯ್ಯಾವರದ ಗುರು ಗೋವಿಂದ ವಿಠಲ ಶ್ರೀ ಹರಿಯೇ 3
--------------
ಗುರುಗೋವಿಂದವಿಠಲರು