ಒಟ್ಟು 1868 ಕಡೆಗಳಲ್ಲಿ , 112 ದಾಸರು , 1531 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ದೇವ-ದೇವತೆಗಳ ಸ್ತುತಿ ದೇವಿ ನೀಕರುಣಿಸಮ್ಮಾ|| ಮನದಲಿ ಭಜಿಸುವೆ ತಾಯಿ ಪ ವಾರಿಜಮುಖಿ ನಿನ್ನ ವಂದಿಸುವೆ ನಾನು ದಾರಿದ್ರ್ಯ ಪರಿಹರಿಸಿ ದಯಮಾಡಿ ಸಲಹಮ್ಮಾ 1 ಸಾಗರನ ಸುತೆ ಸಕಲ ಲೋಕ ಮಾತೆ ನಾಗಶಯನ ನುರದಲಿ ನಲಿದಾಡುವಿ 2 ಮದಗಜಗಾಮಿನಿ ಮಹಿಮಾ ಪ್ರಕಾಶಿನಿ ಪದುಮನಾಭನ ಪಟ್ಟಿದ ರಾಣಿ 3 ಚಂದಿರಮುಖಿ ಚಲುವಕಾಂತೆ ಸೀತೇ ಇಂದ್ರಾದಿಗಳಿಗೊಲಿದಿಷ್ಟಾರ್ಥ ವೀಯುವಿ 4 ಅರವಿಂದಾಲಯರನ್ನೆ ಆನಂದ ಪರಿಪೂರ್ಣೆ 'ವರ ಹೆನ್ನೆ ವಿಠಲನ’ ರಮಾ ನಮ್ಮಮ್ಮಾ ಕಾಯಮ್ಮಾ 5
--------------
ಹೆನ್ನೆರಂಗದಾಸರು
3. ನವಗ್ರಹ ಸಕಲಗ್ರಹಬಲವು ನೀನೆ ಶ್ರೀನಿವಾಸ ಸುಖದಾಯಕನೇ ಅಖಿಲೇಶ್ವರ ಪ ಆರ್ತರ ಸಲಹುವ ಮಾರ್ತಂಡ ಬಲವು ಕೀರ್ತಿಯನೀಯುವ ಚಂದ್ರನ ಬಲವು ಪಾರ್ಥಿವರಗೈವ ಭೂ ಪುತ್ರ ಬಲವು 1 ವಿದ್ಯಾದಾಯಕನಾದ ಬುಧನ ಬಲ ಅದ್ಭುತ ಭಯಹರ ಶ್ರೀಗುರುವೊಲವು ಶುದ್ಧ ಸತ್ವದ ಶುಕ್ರನ ನಲಿವು 2 ಅನವರತವು ಶುಭದಾಯಕ ಶನಿಫಲ ಅನಿಷ್ಟಹಾರಕ ರಾಹುಕೇತು ಬಲ ಅನುದಿನ ಧ್ಯಾನಿಪೆ ಜಾಜೀಕೇಶವ 3
--------------
ಶಾಮಶರ್ಮರು
3. ನೀತಿಬೋಧೆ ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ. ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1 ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2 ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3 ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4 ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5
--------------
ಶ್ರೀಪಾದರಾಜರು
3ಜಯಮಂಗಳಂ ನಿತ್ಯ ಶುಭಮಂಗಳಂ ಪ ಅಂಜನೆಯ ಕುವರಂಗೆ ಭಿಂಜನನ ಪುತ್ರಂಗೆಪಂಜುಗದಿರನ ನುಂಗೆ ಅಂಜದಲೆ ಜಿಗಿದಂಗೆಕಂಜಾಕ್ಷ ಶ್ರೀರಾಮ ದೂತಂಗೆ ಹನುಮಂಗೆಸಂಜೀವಿನಿಗೆ ಮುಖ್ಯ ಪ್ರಾಣ ದೇವಂಗೆ 1 ಕಾನನದಿ ರಾಮನಿಗೆ ತಾನಾದ ಭೃತ್ಯಂಗೆದಾನವನ ಲಂಕೆಯನು ಸೂರೆಗೊಂಡವಗೆಜಾನಕಿಯ ಸುದ್ದಿಯನು ತಂದುರುಹಿದಾತಂಗೆವಾನರ ಪ್ರಮುಖನಿಗೆ ಧೀರ ಮಾರುತಿಗೆ 2 ದುಷ್ಟರನು ಶಿಕ್ಷಿಸುತ ಕಷ್ಟಗಳ ಪರಿಹರಿಸಿತುಷ್ಟಿಕೊಡುವಾತನಿಗೆಸೃಷ್ಟಿಯಲಿ ಸಕಲ ಜನ ಪೂಜ್ಯನಿಗೆ ಮಹಿಮನಿಗೆಶ್ರೇಷ್ಠ ಗದುಗಿನ ವೀರನಾರಾಯಣನ ಪ್ರೀಯಂಗೆ 3
--------------
ವೀರನಾರಾಯಣ
4. ವೆಂಕಟವರದಾರ್ಯರ ಹಿಂದಿಮಿಶ್ರಿತ ಕೃತಿ ಶ್ರೀನಿವಾಸ ಪದ ಧ್ಯಾನಕರೋರೆ ಸಾನುರಾಗಯುತ ಮಾನಸ ಮೇರೆ ಪ ಮದಪರಿಪೂರಿತ ಹೃದಯ ಸುನೋರೆ ಸದಯ ಹೃದಯ ಪರಿಪದಮಿಳನಾರೆ 1 ಕಾಮಕ್ರೋಧ ಉಪರಾಮ ಕರೋರೆ ರಾಮಾನಾಮ ಜಪಕಾಮು ಕರೋರೆ 2 ದೇಹಗೇಹಧನ ಮೋಹನಲೇರೆ ಶ್ರೀಹರಿಚರಣ ಕಾಂಹಿ ಚಲೇರೆ 3 ಪುತ್ರ ಮಿತ್ರ ಬಹು ಶತ್ರು ಕು ಮಾರೆ ವೃತ್ರ ವೈರೀಸುತ ಮಿತ್ರನಗಾರೆ 4 ಭಂಗ ಜನ ಸಂಗ ನ ಕರೋರೆ ಮಂಗಳಾಂಗ ನರಸಿಂಹ ಭಜೋರೆ 5 ಸೂಕ್ಷ್ಮಬುದ್ಧಿ ನಿರಪೇಕ್ಷ ಭಲಾರೆ ಮೋಕ್ಷದಾತ ಕಮಲಾಕ್ಷಕು ಲಾರೆ 6 ದಾಸ ಲೋಕ ಸಹವಾಸ ಕರೋರೆ ವಾಸುದೇವ ನಿಜದಾಸಕು ಹೋರೆ 7 ಶ್ರೀಪುಲಿಗಿರಿವರ ಭೂಪ ಮುರಾರೆ ಶ್ರೀಪತಿಘನ ಚಿದ್ರೂಪಕ ಹೋರೆ8 ಪರಮಪುರುಷ ನರಹರಿ ಕರುಣೀರೆ ವರದವಿಠಲ ಕರಿವರ ಧಣೀರೆ 9
--------------
ವೆಂಕಟವರದಾರ್ಯರು
5. ವಿಶಿಷ್ಟ ಗೀತೆಗಳು ಭ್ರಮರಗೀತೆ 92 ಭೃಂಗಾ ನಿನ್ನಟ್ಟಿದನೇ ಶ್ರೀರಂಗ ಮಧುರೆಲಿ ನಿಂದುಅಂಗಜಲುಬ್ಧಕ ಪೂಗೋಲಂಗಳ ತಡೆಯನಿಕ್ಕಿಅಂಗನೇರೆಂಬೋ ಹುಲ್ಲೆ ಮೃಗಂಗಳಿಗೆ ಗುರಿಯೆಚ್ಚುಹಿಂಗಿಸುತೈಧಾನೆ ಅಸುವ ಹೇ ಕಿತವಾ ಪ ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯಚನ್ನಿಗರರಸ ಕುಶಲೋನ್ನತಿಯೊಳಹನೇನೋಚಿಣ್ಣತನ ಮೊದಲಾಗವನ್ನ ಕಿತವ ಬಲ್ಲೆವೋಗನ್ನಗಾರ ಚಿತ್ತ ಚೋರನ್ನ ಶ್ರೀ ಹರಿಯಾಮನ್ನಣೆಗೆ ಮೆಚ್ಚಿ ತನುವನ್ನೊಪ್ಪಿಸಿದ ಮುಗುದೆವೆಣ್ಣುಗಳ ವಿರಹಾಬ್ಧಿಯನ್ನೆ ದಾಟಿಸುವೆನೆಂದುತನ್ನ ನೇಹವೆಂಬೋ ನಾವೆಯನ್ನೇರಿಸಿ ಮೋಸದಿನಡುನೀರೊಳು ತೊರೆದ್ಹೋದನೆ ಹೇ ಕಿತವಾ 1 ತಮ್ಮ ನಂದಗೋಪ ಯಶೋದಮ್ಮನ ಕಂಡುಬಾರೆಂದುರಮ್ಮ್ಮೆಯ ರಮಣ ನಿನ್ನನೊಮ್ಮೆ ಕಳುಹಿದನೈಸೆಹಮ್ಮುಗೆಟ್ಟಾರಮ್ಮಣೇರಿಂದುಮ್ಮಳಿಸುವೆವೊ ವೃಥಾನಮ್ಮ ಹಂಬಲಿನ್ನೇನವಗೆ ಶ್ರೀ ಹರಿಗೆಹೊಮ್ಮೇಲಟ್ಟದಲಂಚೆಯಗಮ್ಮನೇರ ಕುಚದ ಕುಂ-ಕುಮ್ಮ ಕಸ್ತೂರಿಯ ಕರದಿಮ್ಮನದಿ ಸಿಲುಕಿದಂಗೆಕಮ್ಮಗೋಲನ ಬಾಣಂಗಳುಮ್ಮಳಿ ನೋಯಿಸುತಿವೆಸುಮ್ಮನೆ ಬಾಹೋದು ಸುಲಭವೆ ಹೇ ಕಿತವಾ2 ಮಧುವೈರಿ ಮೇದಿನಿ ನಿಟ್ಟಿಸಲಾಗಮೃದುವಾಕ್ಯದೊಳೆಮ್ಮಪ್ಪಿ ಅಧರಾಮೃತ ಭೋಜನಕ್ಕೊದಗುವ ಸತತ ಸನ್ನದ್ಧ ನಮ್ಮನಗಲಿ ಕಲ್ಲೆದೆಯಾದನೆಂತೋ ಕೃಪಾಳು ಹೇ ಕಿತವಾ 3 ಮಜ್ಜನ ಸಾಯುಜ್ಯ ಸುಖವತ್ತಲಿಪ್ಪುದೂ ಶ್ರೀ ಹರಿಯಅಬ್ಜಭವ ಮುನಿಜನ ಪೂಜ್ಯನಗಲಿದ ಮ್ಯಾಲೆನಿರ್ಜೀವಿಗಳಾಗಿ ಕಣ್ಣ ಕಜ್ಜಲ ಕಲಕಿಕೊಂಡುಲಜ್ಜೆಗೆಟ್ಟು ತನುಲತೆ ಜರ್ಝರಿತದಿ ಜೀವಿಸೆವಜ್ಜರೆದೆಯಲ್ಲವೆ ನಮ್ಮದು ಹೇ ಕಿತವಾ 4 ಕೌಸ್ತುಭ ವೈಜಯಂತಿ ಮಾಲೆಶ್ರೀ ತುಲಸಿ ಘಮಘಮಿಸುತ್ತಲಿಹ ವನಮಾಲೆರತುನ ಕಂಕಣ ಭುಜಕೀರ್ತಿಯಿಂದೊಪ್ಪುವ ಪುರುಷೋತ್ತಮನ್ನ ಬಣ್ಣಿಪರುಂಟೇ ಹೇ ಕಿತವಾ 5 ಉತ್ಪಲ ಶ್ಯಾಮಲ ಮುದವೆತ್ತ ಬಾವನ್ನವದೀಡಿಅತ್ಯಮಲ ಪೊನ್ನಂಬರ ಸುತ್ತಿದಮತ್ತಾ ನೂಪುರ ಝಣತ್ಕಾರದಿ ಮಿಂಚಿಯೆಮ್ಮಚಿತ್ತಶಿಖಿಗೆ ಪೀಯೂಷಸಿಕ್ತ ಮೇಘದಂತೆ ಒಪ್ಪುವ ಶ್ರೀಹರಿಯಹೆತ್ತ ತಾಯಿ ಆಪ್ತ ಬಂಧು ಗೋತ್ರ ಗತಿ ನೀನೆ ನಮ್ಮ ಚಿತ್ತವೆಂದು ನಂಬಿ ತನ್ನ ಹತ್ತಿಲಿ ಸಾರಿದವರಒತ್ತಿ ತಾಂ ರಥವನೇರಿ ಸತ್ವರ ಬರುವೆನೆಂದುಮತ್ತಕ್ರೂರನೊಡನೈದಿದ ಹೇ ಕಿತವಾ 6 ಲಕ್ಷುಮಿರಮಣನವ ಸೂಕ್ಷುಮ ಗೊಲ್ಲತೇರಾವುಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವುಮೋಕ್ಷದರಸನು ಅವ ಗೋಕ್ಷೀರದಿ ತೃಪ್ತರಾವುಲಕ್ಷಿಸುವದೆಂತೋ ಎಮ್ಮನು ಶ್ರೀ ಹರಿಯುರಕ್ಷಿಸಲುದಿಸಿ ಜನರಕ್ಷಣೆಗೆ ಪಾಲÉ್ಬಣ್ಣೆಯಭಕ್ಷಿಸಿ ನಿರುತ ನಮ್ಮ ಅಕ್ಷಿಗೆ ಹಬ್ಬವನುಣಿಸಿಈ ಕ್ಷೋಣಿ ಚರಾಚರ ದೀಕ್ಷಿಗೆ ನರರ ಸಾಮ್ಯವಕ್ಷ(ಮ)ಣರಾದೆವೊ ಮೂರ್ಖರೋ ಹೇ ಕಿತವಾ 7 ಸಿರಿ ಮಂದರೋದ್ಧರನಂಘ್ರಿಯಪೊಂದುವ ಭಾಗ್ಯಕ್ಕೆಣೆ ಉಂಟೆ ಶ್ರೀಹರಿಯಅಂದೆಮ್ಮೊಳು ರಾಸಕ್ರೀಡೆಯಿಂದ ಬಂದಪರಾಧವ-ನೊಂದನೆಣಿಸದೆ ಸಲಹೆಂದು ಬಿನ್ನೈಸಿ ಸಾಷ್ಟಾಂಗದಿಂದವಂದಿಪೆವೋ ಭಕ್ತ ಬಂಧುವಿಗೆ ನಮ್ಮ ಹೃದಯ ಮಂದಿರದೊಳೆಂದೆಂದಿರೆಂದು ಹೇ ಕಿತವಾ 8 ಹೆಂಗಳೇರೊಂದಾಗಿ ಅಂತರಂಗದರಸನಾಡಿದಮಂಗಳಚರಿತೆಯನ್ನು ಸಂಗೀತದಿಂ ಪೊಗಳುತ್ತಕಂಗಳಶ್ರುಗಳೆವುತ್ತ ಇಂಗಿತಜ್ಞ ದೇವ-ನಂಗಸಂಗದ ಸುಖವ ನೆನೆದು ಶ್ರೀಹರಿಯಮಂಗಳ ವೇದಸ್ತೇಯಾರಿ ಶೃಂಗಾರ ಕೂರವ ನಮ್ಮಪೊಂಗಣ್ಣನ ಸೀಳ್ದ ನರಸಿಂಗ ವಟು ಭಾರ್ಗವನೆಅಂಗದ ಪಾರ್ಥ ಕಂಬುತುರಂಗಪ ರಂಗವಿಠಲತುಂಗ ಮಹಿಮ ನಮೋ ಎಂಬೆವೋ ಹೇ ಕಿತವಾ 9
--------------
ಶ್ರೀಪಾದರಾಜರು
6. ಶಾಮಶರ್ಮರ ಕೇಶವನಾಮ ರಸಾಯನ ಶ್ರೀಕೇಶವ ಸುರಸೇವ್ಯ ನಮೋ ಶ್ರೀಕರ ಜಾಜೀಶ ನಮೋ ಪ ನಾರಾಯಣಶ್ರೀನಾಥ ನಮೋ ನಾರದಾದಿಮುನಿವಂದ್ಯ ನಮೋ 1 ಮಾಧವ ಮಂಗಳನಾಮ ನಮೋ ಭೂದೇವಿ ಭಯನಾಶನಮೋ 2 ಭೋಗಿಶಯನ ಗೋವಿಂದ ನಮೋ ಭಾಗವತಪ್ರಿಯ ಭೋಗ ನಮೋ 3 ಜಗ ಪರಿಪಾಲಕ ವಿಷ್ಣುನಮೋ ಖಗವಾಹನ ಗುಣಪೂರ್ಣ ನಮೋ 4 ಮಧುಸೂದನ ಮತ್ರ್ಪಾಣ ನಮೋ ವಿಧಿಶಿವ ಋಷಿಗಣ ಸ್ತುತ್ಶನಮೋ 5 ವಾಮನ ಮೂರುತಿ ಸ್ವಾಮಿನಮೋ ಭೀಮಾನುಜಪ್ರಿಯ ನಿಗಮನಮೋ 6 ತ್ರಿವಿಕ್ರಮಶ್ರೀವಕ್ಷನಮೋ ಪವಿತ್ರ ಫಲದ ಶ್ಯಾಮ ನಮೋ 7 ಶ್ರೀಧರ ದೇವಾನುತ ನಮೋ ಆಧಾರಮೂರುತಿ ಅಮಿತನಮೋ 8 ಹೃಷಿಕೇಶ ಹೃದ್ವಾಸಿ ನಮೋ ಪಶುಪತಿ ಪಾವನ ಪುಣ್ಯನಮೋ 9 ಪದ್ಮನಾಭ ಪರಮಾತ್ಮನಮೋ ಶುದ್ಧ ಸತ್ವರುಚಿರೂಪನಮೊ 10 ದಾಮೋದರ ದೈತ್ಯಾರಿನಮೋ ಕಾಮಜನಕ ಕರಿವರದ ನಮೋ 11 ಸಂಕರ್ಷಣ ಶೇಷಾಂಶ ನಮೋ ಶಂಖ ಚಕ್ರಗದಾಪಾಣಿ ನಮೋ 12 ವಾಸುದೇವ ವೈಕುಂಠನಮೋ ಭೂಸುರ ಪೂಜಿತ ಪಾದನಮೋ 13 ಪರಮಪುರುಷ ಪ್ರದ್ಯುಮ್ನ ನಮೋ ಶರಣಾಗತ ಜನ ತೋಷ ನಮೋ14 ಅಖಿಲೇಶಾನಿರುದ್ಧ ನಮೋ ಸುಖದಾತಾ ಪರಬ್ರಹ್ಮನಮೋ 15 ಪುರುಷೋತ್ತಮ ಪದ್ಮಾಕ್ಷ ನಮೋ ಸರಸಿಜಭವಪಿತ ಸತ್ಯ ನಮೋ 16 ಅಧೊಕ್ಷಜನತ ರಕ್ಷನಮೋ ಅದ್ಭುತ ಮಹಿಮಾಧಿಕ್ಯ ನಮೋ 17 ಶ್ರೀಲಕ್ಷ್ಮೀನರಸಿಂಹ ನಮೋ ಬಾಲಕ ಭಕ್ತ ಪ್ರೀತ ನಮೋ 18 ಅಚ್ಯುತ ಸಚ್ಚಾರಿತ್ರ ನಮೋ ನಿಶ್ಚಲ ನಿರ್ಮಲ ಚಿತ್ತ ನಮೋ 19 ಜನಾರ್ಧನ ಜಗದೀಶ ನಮೋ ದಿನೇಶಕೋಟಿ ಪ್ರಕಾಶನಮೋ 20 ಉಪೇಂದ್ರ ವಿಶ್ವವ್ಯಾಪ್ತನಮೋ ಉಪಮಾರಹಿತ ಉದಾರಿನಮೋ 21 ಶ್ರೀಹರಿಸಕಲ ಸ್ವರೂಪನಮೋ ಸಾಹಸರಹಿತ ಸುಕಾರ್ಯ ನಮೋ 22 ಶ್ರೀಕೃಷ್ಣ ಪರಂಧಾಮ ನಮೋ ಸಾಕಾರ ಮೋಕ್ಷ ಪ್ರದಾತ ನಮೋ 23 ಜಯಮಂಗಳಂ ಶ್ರೀರಂಗನಮೋ ಜಯಮಂಗಳಂ ಭವಭಂಗನಮೋ 24
--------------
ಶಾಮಶರ್ಮರು
Àಥವನೇರಿ ಬರುವ ರಂಗನಾಥನ ನೋಡಿ ಪ ಅತಿಶಯವಾದಂಥ ಪರಗತಿಯನು ಪಡೆಯಿರೊ ಅ.ಪ. ಹಸ್ತಿಗಳು ಚಾಮರ ಹಾಕುತಲಿರೆ ಸ್ವಸ್ತಿವಾಚನಗಳನು ದ್ವಿಜರು ಪೇಳುತಲಿರೆ ಸ್ವಸ್ತಿಲಿ ವಿವಿಧ ವಾದ್ಯತತಿ ಸೂಳೈಸುತಲಿರೆ ಮಸ್ತಕಾಂಜಲಿಪುಟದಿ ಹರಿದಾಸರು ಪೊಗಳುತಿರೆ 1 ಸಾಲು ಪಂಜಿನ ದೀವಟಿಗೆಗಳು ಮೆರೆಯೆ ನಾಲ್ಕು ದಿಕ್ಕಲಿ ಜನರು ನಿಂತು ನೋಡುತ ನಲಿಯೆ ಲೀಲೆಯ ತೋರುತ ಶ್ರೀ ಭೂದೇವಿಯರಿಂದ ಲೋಲುಪ ತಾನಾಗಿ ಬಹು ಸಂಭ್ರಮದಿಂದ 2 ನಭದೊಳು ಸಕಲ ದಿವಿಜರೊಡಗೂಡಿ ತಾ ನಭುಜಭವನು ನಿಂತು ನೋಡಿ ಹಿಗ್ಗುತಿರೆ ಇಭರಾಜವರದ ಶ್ರೀ ರಂಗೇಶವಿಠಲನು ತ್ರಿಭುವನ ಪಾವನ ಮಾಡಿ ಸೊಬಗು ತೋರುತ 3
--------------
ರಂಗೇಶವಿಠಲದಾಸರು
ಅಂಕಿತನಾಮ ಪದಗಳು ಅಚ್ಯುತಾನಂತವಿಠಲ | ಸಲಹ ಬೇಕಿವನಾ ಪ ಸ್ವಚ್ಛಶಪಥದಿ ಹರಿಯ | ನಾಮ ನಂಬಿಹನಾ ಅ.ಪ. ಜೀವಕಾರಣವೆನೆ | ಆವನ ವಿದ್ಯಾಪಟಲಓವಿಕಡಿಯಲು ಸಾಧ್ಯ | ನಾಮ ಸಾಧನದೀಈ ವಿಧದ ಸಂಪ್ರಜ್ಞೆ | ಭಾವ ಉಳ್ಳವನೀತತೀವರದಿ ಕೈಪಿಡಿದು | ಕಾಯೋ ಕೃಪ ಸಾಂದ್ರ 1 ಗುರು ಭಕ್ತಿಯುಳ್ಳವನು | ಸುಜ್ಞಾನಕಾಂಕ್ಷಿತನುಇರುವನೀತನು ಎಂದು | ವರ ಸು ಉಪದೇಶಹರಿಯ ನಾನಿತ್ತಿಹೆನು | ಸ್ವಪ್ನ ಸೂಚೀಯಂತೆಕರುಣದಿಂ ನಿಜತೋರೊ | ಮರುತಂತಾರಾತ್ಮ 2 ಹರಿ ನಾಮ ವೆಂಬಂಥ | ವಜ್ರಾಂಗಿ ತೊಡಿಸಿವಗೆದುರಿತರಾಶಿಗಳಳಿದು | ಪೊರೆಯ ಬೇಕಿವನಾಸುರು ಭೂರಹವು ಆಗಿ | ಪರಿಪರಿಯ ವರಗಳನುಗೆರೆಯುತ್ತ ಹರ್ಷವನೆ | ಸುರಿಸೊ ಶ್ರೀಹರಿಯೇ 3 ಸತ್ಸಂಗವನೆ ಕೊಟ್ಟು | ದುಸ್ಸಂಗವನೆ ಕಳೆಯೊಮತ್ಸಕೇತನ ಜನಕ | ಸಚ್ಚಿದಾನಂದಾತ್ಮಾವತ್ಸಾರಿ ಕೃಷ್ಣ ಗೋ | ವತ್ಸ ದನಿಗಾವು ಬಹುಉತ್ಸವದಿ ಬರುವಂತೆ | ನೀನೆ ಪೊರೆ ಇವನಾ4 ಭಾವಜ್ಞ ನೀನಿರುವೆ | ಪೇಳ್ವದೇನಿಹುದೆನಗೆದೇವ ದೇವೇಶನೆ | ಹರಿ ಸಾರ್ವಭೌಮಗೋವರ್ಧನೊದ್ಧಾರನೆ | ಗೋವಿಂದ ಪತಿಯೆ ಗುರುಗೋವಿಂದ ವಿಠಲ ಮದ್ | ಭಿನ್ನಪವ ಸಲಿಸೊ 5
--------------
ಗುರುಗೋವಿಂದವಿಠಲರು
ಅಕ್ಷಯವಾಗುವುದು ನಿಮಗೆ ಪ ಕುಕ್ಷಿಯೊಳೆಲ್ಲವ ಪೊಂದಿರುವಾತನ ಕುಕ್ಷಿಗೆ ಹಿತಕರ ಭಿಕ್ಷೆಯೆಂದೆನ್ನುತ ಅ.ಪ ಹೊಟ್ಟಿಗೆ ಇಲ್ಲದೆ ಬಂದಿಲ್ಲ ಕೊಟ್ಟರೆ ಪುಟ್ಟದ ಕಟ್ಟನು ತರುವೆವು ಅಷ್ಟು ಪಾಪಗಳ ಮಾಡಲು ಕೃಷ್ಣ ದಯೆಯ ತಂಬಿಟ್ಟನು ಕೊಡುವೆವು 1 ಶ್ರಾವಣ ಮಾಸದ ಶನಿವಾರ ಯಾವನು ಕೊಡುವನೊ ಮನಸಾರ ಜೀವನ ಕ್ಲೇಶದ ಪರಿಹಾರ ಭಾವದಿ ಪೊಂದುವ ಸುಖಸಾರ 2 ಮೋಸವಿಲ್ಲದವು ದಾಸ ಪ್ರಸನ್ನ ತೋಷಣ ವೈಭವ ಶ್ರೀಶನೆ ಬಲ್ಲನು ಸಾಸಿರ ಸಾಸಿರ ನಾಣ್ಯದ ಕಾರ್ಯವ ವೀಸಕೆ ಮಾಡುವ ದಾಸರ ಗುಂಪಿದು3
--------------
ವಿದ್ಯಾಪ್ರಸನ್ನತೀರ್ಥರು
ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದು ಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ ಜ್ಞಾನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿ ಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಸಾರ ಗುಹ್ಯ ಜ್ಞಾನಿ ಸಂಗದ ಗೋಷ್ಟಿಜ್ಞಾನಿಗೇ ಪರಿಪಾಟಿಜ್ಞಾನಿಯೆಂದರೆ ಕೋಟಿ ಕೋಟಿ ಪುಣ್ಯ ಜ್ಞಾನಕ್ಕೆ ಸರಿಯಿಲ್ಲಜ್ಞಾನಿಯಾದವ ಬಲ್ಲಜ್ಞಾನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟು ಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಕೊಂಡ ಹೊತ್ತರು ಆತ್ಮಜ್ಞಾನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿ ಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡು ದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ ಜ್ಞಾನ ಸ್ಥಾ(ಸ್ಥ)ಳವ ಶುದ್ಧ ಮಾಡು ಸ್ಥಿರವಾದ ಮನಸಿನ ಸೂತ್ರವಿಡಿದು ಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿ ಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರ ಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆ ಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತ ದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನು ಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿ ವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾ ಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟು ವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ತಿಮಿರ ನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ ಜ್ಞಾನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪ ಪರಮ ಸಾಧು ಹರಹರಾ 31 ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ನರಸಿಂಹ
ಅಘಟಿತ ಘಟನಾತ್ಮ ಶಕ್ತಿಯ ನಂಬಿದ ರಘುಕುಲವೇನಿರದು ಮಗುವನು ಮಾತೆ ಮಮತೆಯಿಂದ ಪೊರೆವಂತೆ ನಗುತ ರಕ್ಷಿಪ ಬಿರಿದು ಪ. ಶಕ್ರನ ಸಲಹ ಬೇಕೆಂದು ವಾಮನವಾಗಿ ಶುಕ್ರ ಶಿಷ್ಯನ ಯಜ್ಞದಿ ವಕ್ರಮತಿಯ ದಾನವರನೆಲ್ಲ ಸದೆದ ತ್ರಿವಿಕ್ರಮಾಹ್ವಯನೀವನು ಚಕ್ರ ಶಂಕ ಖಡ್ಗ ಗದೆಯ ಧರಿಸಿ ರಿಪು ಚಕ್ರ ಕತ್ತರಿಸುವನು 1 ಪಂಚಪಂಚದ ಮೇಲಿನ್ನೆರಡು ವರುಷ ವನ ಸಂಚರಿಸಿದ ಬಳಿಕ ಪಂಚ ಪಾಂಡವರಿಗೆ ಪಂಚಗ್ರಾಮವನೀವ ಹಂಚಿಕೆ ಸರಿಯೆನುತ ಪಂಚಪಾತಕಿ ಕೌರವೇಂದ್ರನ ಸಭೆಯಲಿ ಪಂಚಾಯಿತನಾಗುತ ವಂಚಿಸಿ ಭಾವಿ ವಿರಿಂಚಗೆ ಸಕಲ ಪ್ರಪಂಚಾಧಿಪತ್ಯವಿತ್ತ 2 ಅನುಗಾಲ ನಿಜಪಾದ ವನಜವೆ ಗತಿಯೆಂಬ ಜನರ ಮನೋರಥವ ಮನಸಿಜಪಿತ ತಾನೆ ನೆನೆಸಿಕೊಂಡಿವುದಕನುಮಾನಿಸನು ಸತತ ಸನಕಾದಿ ವಂದ್ಯ ಶೇಷಾದ್ರಿ ಶಿಖರವಾಸ ಮನೆಗಧಿಪತಿಯೆನುತ ಮನ ವಚನಗಳಿಂದ ಮಾಧವಗರ್ಪಿಸಲನುಕೂಲಿಸುವ ನಗುತ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1 ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2 ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3
--------------
ಕನಕದಾಸ
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು