ಒಟ್ಟು 89 ಕಡೆಗಳಲ್ಲಿ , 37 ದಾಸರು , 87 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ಸೇರಿದೆ ಮಹಾಲಿಂಗ ಎನ-ಗಿನ್ಯಾರುಗತಿಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗಪ.ನಿನ್ನಂತೆ ಕೊಡುವ ಉದಾರ ತ್ರಿಭು-ವನ್ನದೊಳಿಲ್ಲದಕ್ಯಾವ ವಿಚಾರಮುನ್ನ ಮಾರ್ಕಾಂಡೇಯ ಮುನಿಯ ಭಯವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1ಸರ್ವಾಪರಾಧವ ಕ್ಷಮಿಸು ಮಹಾ-ಗರ್ವಿತರಾಶ್ರಯಕ್ಕೊಲ್ಲದು ಮನಸುಶರ್ವರೀಶಭೂಷ ನಿನ್ನ ಹೊರ-ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2ಅಂತರಂಗದ ದಯದಿಂದ ಯುದ್ಧ-ಮಂ ತೊಡಗಿದೆ ಪಾರ್ಥನೊಳತಿಚಂದಪಂಥದ ನೆಲೆಯನ್ನು ತಿಳಿದು ಸರ್ವ-ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದುದೊಡ್ಡದು ನಿನ್ನ ಬಿರುದು 3ಸಿದ್ಧಿಸು ಸರ್ವಸಂಕಲ್ಪ ಅಡ್ಡ-ಬಿದ್ದು ಬೇಡುವೆ ನಿನಗ್ಯಾವದನಲ್ಪಬುದ್ಧಿಯ ನಿರ್ಮಲಮಾಡು ನಿನ್ನಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು 4ಅಂಜಿಕೆ ಬಿಡಿಸಯ್ಯ ಹರನೆ ಪಾ-ವಂಜಾಖ್ಯವರಸುಕ್ಷೇತ್ರಮಂದಿರನೆಸಂಜೀವನ ತ್ರಿಯಂಬಕನೆ ನವ-ಕಂಜಾಕ್ಷ ಲಕ್ಷುಮಿನಾರಾಯಣಸಖನೆಸಲಹೊ ಪಂಚಮುಖನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಫಾಲಲೋಚನೆ ನನ್ನ ಪಾಲಿಸೆಂದಿಗು ಎನ್ನಪಾಹಿಪಾರ್ವತಿ ರಮಣ ಪಾವನಚರಣಪಾಪನಾತ್ಮಕ ಘನ್ನ ಪಾಪ ನಿವಾರಣಪಾಹಿಪನ್ನಗಭೂಷಣ ಪಂಚಾನನ ಪಅಂಬುಜೋದ್ಭವನು ತಾ ಅಮರಪೂಜಿತ ವಂದ್ಯಅಮಿತ ಮಂಗಲ ರೂಪನೆ ಆಶ್ರಿತದಾತಅಂಬರಕೇಶಿ ಚಿದಂಬರವಾಸನೆಅಗಣಿತಗುಣಮಹಿಮಅಂಗಜಭಂಗ 1ನಿಗಮಗೋಚರ ನೀನೆ ನೀಲಕಂಧರನೀನೆನಿರತನಂಬಿದೆ ನಿನ್ನನ್ನೆ ನಿಶ್ಚಲನೆನಿತ್ಯಾನಂದನು ನೀನೆನಿತ್ಯತೃಪ್ತನುನೀನೆನಿತ್ಯನಿರ್ಮಲ ರೂಪನೆ 2ತ್ರಿಪುರಸಂಹಾರನೆತ್ರಿಜಗಸಂಚಾರನೆತ್ರಿಯಂಬಕನೆ ಶಿವನೆ ತ್ರಿನೇತ್ರನೆತ್ರಿಮೂರ್ತಿಗಳ ಖ್ಯಾತ ತ್ರಿಶೂಲಧಾರನೆತ್ರಿಗುಣಾತ್ಮಕ ಗೋವಿಂದನಾ ದಾಸನವಂದ್ಯ3
--------------
ಗೋವಿಂದದಾಸ
ಬಣ್ಣಿಸಲಳವೆ ನಿನ್ನ |ಪನ್ನಗಶಯನಪ್ರಪನ್ನವತ್ಸಲ ರಂಗ ಪಮಧು ಕೈಟಭಾಂತಕನೆ ಮಧುರಾಪತಿ ಜಿತನೆ |ಮಧುಸಖಜನಕನೆ ಮಧುಮಾಂಶ್ರಿಯಾಂಬಕನೇ1ಋಷಿ ಪತ್ನಿಯರ ಮೋಹಕ, ಋಷಿ ಪತ್ನಿಯತಾರಕ|ಋಷಿ ಪತ್ನಿಯ ನಾಶಕ ಋಷಿ ಪತ್ನೀ ಬಾಲಕ 2ಪದುಮ ಸಂಭವನಯ್ಯ ಪದುಮೇಶಕವಿಗೇಯ |ಪದುಮಾವರದಜೀಯಪದುಮಜಾಂಡದೊಡೆಯ3ಭಾನುಕೋಟಿ ಪ್ರಕಾಶ ಭಾನುಲೋಚನಾಧೀಶ |ಭಾನುಪ ಸುತ ಪೋಷ ಭಾನುಪಾಣಿ ನಿರ್ದೋಷ 4ಹರಿಪ್ರಾಣೇಶ ವಿಠಲಯ್ಯಹರಿಶಯನ ಮತ್ಪ್ರಿಯ |ಹರಿಯಾಸ್ಯ ನರದೇಹ ಹರಿಸುವುದಘ ತ್ವರಿಯಾ 5
--------------
ಪ್ರಾಣೇಶದಾಸರು
ಬಾಣವದನ ಸಲಹೋ - ನಾ ನಮಿಸುವೆ |ಬಾಣವರದ ನಿನಗೆ | ಹರ ಹರ ಪಕುಧ್ರೇಡ್ಜ ಮುಖ ಕಂದ-ರವಿಅಘ|ಅದ್ರಿಸಮೂಹ ಋಷಿಜಾ | ಹರಹರ ||ನಿದ್ರರಹಿತ ವಿಧಿಜಾ ಸತತ ಅ- |ಭದ್ರ ಭಕ್ತರಿಗೆ ಕುಜ 1ಗಜಋಷಿ ಅಂಬಕನೆಪಶುಪತಿ|ತ್ರಿಜಗದಿ ಪೂಜಿತನೆ | ಹರಹರ ||ಅಜಿನಾಂಬರ ಧರನೇ ಕರುಣಿಸೊ |ವಿಜಯೇಕ್ಷಣ ಶಿವನೆ | ಹರಹರ 2ಕಾಮಾದಿ ಮುಖ ಜನಕ ಧೂರ್ಜಟ |ಭೂಮಿಜವೈರಿಸಖಾ | ಹರಹರ ||ಸಾಮಜರಿಪುಧನಿಕ ಮಿತ್ರನೆ |ಕಾಮಿತ ಫಲದಾಯಕ | ಹರಹರ 3ಧರಣಿಜೆ ರಮಣ ನಾಮಾ ಸರ್ವದಾ |ಸ್ಮರಿಸುವೆನತಪ್ರೇಮಾ || ಹರಹರ ||ಗರಳನಾಶನ ಭೀಮವಿಕ್ರಮ|ಸರೋಜ ಧ್ವಜ ವಿರಾಮ | ಹರಹರ 4ಘನನಿಭ ಪ್ರಾಣೇಶ ವಿಠ್ಠಲ |ನನುಗನೆನಿಪುದನಿಶ | ಹರಹರ ||ಘನಮಹಿಮನೆ ಈಶಕುಧರ| ಸ-ದನನಾಕಜಪೋಷ | ಹರಹರ 5
--------------
ಪ್ರಾಣೇಶದಾಸರು
ಬೇಸರದೆಂದೂ ಸದಾಶಿವನೆನ್ನಿಕಾಶಿಯ ಪ್ರಭು ವಿಶ್ವೇಶ್ವರನೆನ್ನಿ ಪ.ನಂದಿವಾಹನ ಆನಂದನು ಎನ್ನಿಸುಂದರ ಗಣಪನ ತಂದೆಯು ಎನ್ನಿ 1ನಂಬೆ ಭವಾಂಬುಧಿ ಅಂಬಿಗನೆನ್ನಿಅಂಬಿಕೆಯರಸು ತ್ರಯಂಬಕನೆನ್ನಿ 2ಕರ್ಪರಭಾಂಡಕಂದರ್ಪಹರೆನ್ನಿಸರ್ಪಭೂಷಣ ಸುಖದರ್ಪಣನೆನ್ನಿ 3ಬೇಡಿದ ಭಾಗ್ಯವೀಡಾಡುವನೆನ್ನಿಬೇಡನ ಭಕುತಿಗೆ ಕೂಡಿದನೆನ್ನಿ 4ಶಂಭು ಗಜದ ಚರ್ಮಾಂಬರನೆನ್ನಿಸಾಂಬಸುಗುಣ ಕರುಣಾಂಬುಧಿಯೆನ್ನಿ5ಎಂದಿಗೂ ಭಾವಿಕ ಮಂದಿರನೆನ್ನಿಇಂದುಶೇಖರ ನೀಲಕಂಧರನೆನ್ನಿ 6ದುರ್ದನುಜಾಂಧಕ ಮರ್ದಕನೆನ್ನಿ ಕಪರ್ದಿ ಕೃಪಾಲತೆವರ್ಧಕನೆನ್ನಿ 7ಶರಣು ಸುರಾರ್ಚಿತ ಚರಣನೆ ಎನ್ನಿಶರಣಾಗತರಾಭರಣನು ಎನ್ನಿ 8ತ್ರಿಪುರಾಂತಕ ನಿಷ್ಕಪಟನು ಎನ್ನಿಅಪಮೃತ್ಯುಹರ ಖಳರಪಹರನೆನ್ನಿ 9ದಕ್ಷಯಜÕವೀಕ್ಷಕನೆನ್ನಿಪಕ್ಷಿಗಮನ ಭಟರಕ್ಷಕನೆನ್ನಿ 10ಈಪರಿನೆನೆದರೆ ಪಾಪದೂರೆನ್ನಿಶ್ರೀ ಪ್ರಸನ್ವೆಂಕಟಗತಿ ಪ್ರೀತೆನ್ನಿ 11
--------------
ಪ್ರಸನ್ನವೆಂಕಟದಾಸರು
ಭಕ್ತವತ್ಸಲನಹುದೊ ವೆಂಕಟರೇಯಭಕ್ತವತ್ಸಲನಹುದೊ ಪ.ಕರಿಯ ಮೊರೆಯನರಿದು ಸಿರಿಯಜರಿದುಗರುಡನ ಕರೆಯದೆ ಭರದೊಳರಿಯಿಂದರಿ ಬಾಯ ಮುರಿಗೆಯ ಹರಿದ್ಯೆಂದುನಾರದಾದ್ಯರು ನಿನ್ನ ಬಿರುದು ಸಾರುವರೊ 1ಅಂಬುಜಾಂಬಕನಂಬಿದೆನೆಂಬೆ ದಯಾಂಬುಧಿಹರಿನಿನ್ನಿಂಬುದೋರೆ ನಲವಿಲಂಬಲದಿ ಕಂಬದಿ ಬಿಂಬಿಸಿ ಡಂಬನಡಿಂಬವ ಬಿಗಿದೆ ಪೀತಾಂಬರಧರನೆ 2ಚಿನ್ನ ತನ್ನ ತಾತನ್ನ ಜರಿದವನನ್ನವನುಣ್ಣದೆ ನಿನ್ನ ಬಣ್ಣಿಸಲವನುನ್ನತ ಭಕುತಿಗೆ ಮನ್ನಿಸಿ ಪೊರೆದೆ ಪ್ರಸನ್ನವೆಂಕಟರನ್ನ ಮೋಹನ್ನ 3
--------------
ಪ್ರಸನ್ನವೆಂಕಟದಾಸರು
ರÀಕ್ಷಿಸು ರಕ್ಷಿಸು ದೇವವಿಶ್ವಕುಕ್ಷನೆ ಭಕ್ತ ಸಂಜೀವಪಕ್ಷಿಗಮನ ಕಾಯೊದಾತಭೃತ್ಯಪಕ್ಷನೆ ಶ್ರೀ ಪ್ರಾಣನಾಥ ಪ.ಜಾರಿದ ಶ್ರ್ರುತಿಯ ತಂದವನೆ ಉದಾರಿವಿಕ್ರಮತಮಹರನೆವಾರಿಧಿಯೊಳುದಿಸಿದನೆ ಮಂದರಗಿರಿಯನೆತ್ತಿದನೆ1ರಂಭೆಗೆ ತತ್ವ ಹೇಳಿದನೆ ಹೇಮಾಂಬಕನ ಚುಚ್ಚಿದವನೆಕಂಬವ ಸೀಳಿ ನಿಂದವನೆ ಆದಂಭೋಳಿವೈರಿಬಾಲಪನೆ2ಪದ್ಮಜಾಂಡವನೊಡೆದವನೆಬಲಿಸದ್ಮವ ಬಿಡದೆ ಕಾಯ್ದವನೆಛದ್ಮಿ ಪಾರ್ಥಿವರ ಸಂಹರನೆಕರಪದ್ಮದಿ ಪರಶು ಪಿಡಿದವನÉ 3ಅಡವಿ ಪ್ರಾಣಿಗಳನಾಳುವನೆ ಹತ್ತುಹೆಡಕಿನವನ ತಲೆಕಡಿದವನೆಮಡದಿಗೆ ಗಿಡವನಿತ್ತವನೆ ಭೀಮಮಡದಿಯ ಲಜ್ಜೆ ಕಾಯ್ದವನೆ 4ಮಿಥ್ಯದಹೊಲಬುಹೇಳಿದನೆಖಳದೈತ್ಯರ ವಶವ ಮಾಡಿದನೆಮತ್ತಕಲಿವಪುಹರನೆ ನನ್ನಕರ್ತಪ್ರಸನ್ವೆಂಕಟ ನೀನೆ5
--------------
ಪ್ರಸನ್ನವೆಂಕಟದಾಸರು
ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿನವೀನ ಜನನ ಮೃತ್ಯು ಭಯವೆಲ್ಲಿ ಪ.ಕುಶತಲ್ಪ ತಂತ್ರಸಾರಾರ್ಚನೆಯೆತ್ತಖಳಪ್ರಸರದ ಗೊಂದಣದಾರಿಯೆತ್ತಹೊಸಮಲ್ಲಿಗೆಯ ಹಾರ ಸುರಭ್ಯೆತ್ತ ಮಲಕಶ್ಮಲರತ ಗ್ರಾಮಸೂಕರೆತ್ತ 1ಚಕ್ರಪಾಣಿ ಒಲುಮೆ ವಿರತರಿಗುಂಟುಕರ್ತವಿಕ್ರಮವಾದಶೀಲಗೆ ಮತ್ತ್ಯೆಲ್ಲುಂಟುತಕ್ರಭಿನ್ನ್ವಾದರೆ ಹಾಲ ಹೋಲಲಿಲ್ಲ ಭಕ್ತಿವಕ್ರನೆಂದೆಂದಿಗೆ ಭಾಗವತನಲ್ಲ 2ಡಂಬರ ಶ್ರದ್ಧೆಗೆಹರಿಮೆಚ್ಚಲಿಲ್ಲ ಸಲೆಡೊಂಬ ರಾಷ್ಟ್ರ ತಿರುಗೆ ಭೂ ಪ್ರದಕ್ಷಿಣೆಯಲ್ಲಅಂಬುಜಾಕ್ಷನನ್ನು ನಂಬದವ ಕ್ಷುಲ್ಲ ಗತಅಂಬಕನ ನೋಟ ಬದಿಯ ಧನದಲಿಲ್ಲ 3ಇಂದಿರೇಶಮಹಿಮೆ ಮತಿಮಂದಗೇನು ದೀಪಹೊಂದಟ್ಟೆ ಭೋಜನಸುಖ ಶ್ವಾನಗೇನುಎಂದೂ ಸಾಧುಸಂಗಸೌಖ್ಯ ಕುಹಕಗಿಲ್ಲ ಕೆಚ್ಚಲೊಂದಿದ ಉಣ್ಣೆಗೆ ಕ್ಷೀರಸ್ವಾದವಿಲ್ಲ 4ಪೂರ್ವಕೃತಪುಣ್ಯ ಒದಗದೆಂದಿಗಿಲ್ಲ ಯತಿಸರ್ವಜÕರಾಯನ ಮತ ಸುಲಭವಲ್ಲಉರ್ವಿಯೊಳು ಸಮೀರಮತಸ್ಥರಕಾವತಂದೆಸರ್ವೇಶ ಪ್ರಸನ್ನವೆಂಕಟಾಧಿದೇವ 5
--------------
ಪ್ರಸನ್ನವೆಂಕಟದಾಸರು
ಲಕ್ಷ್ಮೀದೇವಿ151ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆಅಂಬುಜಾಯತಾಂಬಕನ ಇಂಬಲಿಹ ಬೊಂಬೆ ಪ.ಕಾವನಯ್ಯನ ಭಟರ ಕಾವೆ ವರವೀವೆದೇವಾದಿ ದೇವರ್ಕಳಿಗೆ ಕುಲದ ದೇವೆ ವಿ?ಭಾವಕರ ಜೀವೆ ಚಿದ್ಭವನೈದಿಸುವೆಸೇವಕರಾವೆ ಕಾಯಿ ಎನುವೆ ಧನ್ಯ ಎನುವೆ 1ಮಾಯಾಗುಣಮಯ ಅಂಬಾ ತರುವ ಹೊಂದಿರುವೆತಾಯಂದಿರಖಿಳಾರ್ಥ ತಾಯಿ ನೀನೀವೆಬಾಯೆನ್ನ ತಾಯೆನ್ನಲಾಯಾಸ ಬಿಡಿಸುವೆ ಎನ್ನಯ ಪ್ರಿಯಳೆ ಪೀಯೂಷನುಣಿಸುವೆ 2ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮಸುಮ್ಮನಸರ ಮನೋರಮ್ಮೆ ಶ್ರೀರಮ್ಮೆನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮನಮ್ಮಯ ಪ್ರಸನ್ನವೆಂಕಟನ ಮೆಚ್ಚಿನಮ್ಮ 3
--------------
ಪ್ರಸನ್ನವೆಂಕಟದಾಸರು
ಶರಣುಹರಿಆನತ ಜನಾಶ್ರಯದುರಿತಕರಿಕಂಠೀರವಶರಣುಸಿರಿಭೂವರಾಹದೇವನೆಶರಣು ವರಯಜ್ಞಾತ್ಮಕ ಪ.ಅನಿಮಿಷರುಸನಕಾದಿಮುನಿಗಳುಅನುದಿನದಿ ಸ್ತುತಿಗೈಯಲುದನುಜಹೇಮಾಂಬಕನ ಕೃತ್ಯಕವನಿ ಬಳಲಿ ಮೊರೆಯಿಡುತಿರೆಘನಕೃಪಾಂಬುಧಿ ಕ್ಷೀರವಾರಿಧಿಮನೆಯಲರಿದತಿ ವೇಗದಿವನಜಭವ ನಾಸಾಪುಟದಿ ನೀಜನಿಸಿದಗಣಿತ ಮಹಿಮನೆ 1ಲೀಲೆಯಿಂದಣುವಾಗಿ ಅಮರರಜಾಲಕಚ್ಚರಿಯಾಗಲುಮೇಲೆ ಗಿರಿಯಂತಾದೆ ಹರಿಯೆ ತಮಾಲ ವರ್ಣಾಂಕಿತ ಮುಖಬಾಲಚಂದ್ರಸಮಾನ ಕೋಡನೆ ವಿಶಾಲ ವಿಮಲ ಚರಿತ್ರನೆಬಾಲ ಸುಬ್ರಹ್ಮಣ್ಯ ದ್ವಿಜವರಶೀಲಪಾಲಿತ ಚರಣನೆ 2ವ್ಯಗ್ರ ಪ್ರಳಯಾಂಬುಗಿಳಿದುಘನಘರ್ಘರರ್ಘರ ಧ್ವನಿಗಳಿಂಶೀಘ್ರ ವೈರಿಯ ಸದೆದು ಕೋಡಾಗ್ರದಲಿಮಹಿನೆಗಹಿದೆಸ್ವರ್ಗಜನರಿಂದಮಿತ ಸ್ತುತಿಯನವಗ್ರಹಿಸಿ ವರಕರುಣದಿಉಗ್ರತೇಜ ಪ್ರಸನ್ವೆಂಕಟಗಗ್ರನಿಲಯ ನಮೊ ಹರೆ 3
--------------
ಪ್ರಸನ್ನವೆಂಕಟದಾಸರು
ಶ್ರೀ ಚಂದ್ರ ಸ್ತೋತ್ರ89ವಾಮನಹಯಾಸ್ಯಶ್ರೀಹಂಸ ಧನ್ವಂತರಿರಮಾಪತಿಗೆ ಪ್ರಿಯ ಸೋಮರಾಜನೇ ನಮಸ್ತೇ ಪಸಹಸ್ರಶೀರ್ಷ ಪುರುಷನ ನಾಭಿ ವನರುಹಜಾತಬ್ರಹ್ಮದೇವನ ಸುತನು ಬಹುಗುಣಿ ಅತ್ರಿಬ್ರಹ್ಮಿಷ್ಠ ಈ ಋಷಿಯ ನೇತ್ರಜನುಸೋಮನೀಬ್ರಹ್ಮಣೌಷಧಿ ಉಡುಗಣಕೆ ಪತಿಯಾದಿ 1ಪದ್ಮಜನ ನಿಯಮನದಿ ಹೊಂದಿದಿ ಈ ಅಧಿಕಾರಸುಧಾಮೂರ್ತಿಯೇ ಸುಧಾsಶನ ಸುಧಾಗಾತ್ರದಧಿಶಂಖ ತುಷಾರಾಭ ಆಹ್ಲಾದ ಕೃಣ್ಣಮೋಚಂದ್ರದೇವನೇ ಕ್ಷೀರೋದಾರ್ಣವ ಸನ್ನಿಭನೇ 2ತ್ರಿಭುವನಗಳ ಜೈಸಿ ರಾಜಸೂಯ ಯಜÕಗೈದಿತ್ರ್ಯಂಬಕನ ಮುಕುಟ ಭೂಷಣ ರೋಹಿಣೀಶಅಂಬುಜೋದ್ಭವಪಿತ ಪ್ರಸನ್ನ ಶ್ರೀನಿವಾಸ ಹೃತ್ಅಂಬರದಿಪೊಳೆವೆ ಸುಜ್ಞಾನ ಭಕ್ತಿ ಎನಗೀಯೋ 3 ಪ
--------------
ಪ್ರಸನ್ನ ಶ್ರೀನಿವಾಸದಾಸರು
ಹಣ್ಣು ಕೊಂಬುವ ಬನ್ನಿರಿ ಹರಿದಾಸರುಹಣ್ಣು ಕೊಂಬುವ ಬನ್ನಿರಿ ಪ.ಚೆನ್ನ ಬಾಲಕೃಷ್ಣನೆಂಬಕನ್ನೆಗೊನೆಬಾಳೆಹಣ್ಣು ಅಪಸುತ್ತೇಳು ಲೋಕದಿಸುರರು ಬಿತ್ತಿದ ಹಣ್ಣುಭಕ್ತರ ಬಾಯೊಳು ನೆನೆವ ಹಣ್ಣುಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆನಿತ್ಯಮಾಧವನೆಂಬ ಅಚ್ಚಮಾವಿನ ಹಣ್ಣು1ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣುನಿಜಮುನಿಗಳಿಗೆ ತೋರಿಸಿದ ಹಣ್ಣುತ್ರಿಜಗವಂದಿತ ಪಾಲ್ಗಡಲೊಡೆಯನೆ ಹಣ್ಣುಸುಜನಭಕ್ತರೆಲ್ಲಕೊಳ್ಳಬನ್ನಿರಿ ಹಣ್ಣು2ತುರವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣುಕರೆದರೆ ಕಂಬದೊಳು ಓಯೆಂಬ ಹಣ್ಣುಮರುಗುವ ಧೃವನಿಗೆ ಪಟ್ಟಗಟ್ಟಿದ ಹಣ್ಣು
--------------
ಪುರಂದರದಾಸರು