ಗೋಪಾಲ ದಾಸರಾಯ ನಿನ್ನಯ ಪಾದ
ನಾ ಪೊಂದಿದೆನೊ ನಿಶ್ಚಯ ಪ
ಈ ಪೀಡಿಸುವ ತ್ರಯತಾಪಗಳೋಡಿಸಿ
ಕೈ ಪಿಡಿದೆÀನ್ನ ಕಾಪಾಡಿದ ಗುರುರಾಯ ಅ.ಪ.
ಘೋರ ವ್ಯಾಧಿಯನೆ ನೋಡಿ | ವಿಜಯರಾಯ
ಭೂರಿ ಕರುಣವ ಮಾಡಿ
ತೋರಿದರಿವರೆ ಉದ್ಧಾರಕರೆಂದಂದಿ
ಪಾದ ಸಾರಿದೆ ಸಲಹೆಂದು ||
ಸೂರಿಜನ ಸಂಪ್ರೀಯ ಸುಗುಣೋದಾರ
ದುರುಳನ ದೋಷ ನಿಚಯವ
ದೂರಗೈಸಿ ದಯಾಂಬುನಿಧೆ ನಿ
ವಾರಿಸದೆ ಕರಪಿಡಿದು ಕರುಣದಿ
ಅಪ ಮೃತ್ಯುಯವನು ತಂದೆ ಎನ್ನೊಳಗಿದ್ದ 1
ಅಪರಾಧಗಳ ಮರೆದೆ
ಚಪಲ ಚಿತ್ತನಿಗೊಲಿದು ವಿಪುಲ ಮತಿಯನಿತ್ತು
ನಿಪುಣನೆಂದೆನಿಸಿದೆ ತಪಸಿಗಳಿಂದಲಿ
ಕೃಪಣ ವತ್ಸಲ ನಿನ್ನ ಕರುಣೆಗೆ
ಉಪಮೆಗಾಣೆನೊ ಸಂತತವು ಕಾ
ಶ್ಯಪಿಯೊಳಗೆ ಬುಧರಿಂದ ಜಗದಾ
ಧಿಪನ ಕಿಂಕರನೆನಿಸಿ ಮೆರೆಯುವ 2
ಎನ್ನ ಪಾಲಿಸಿದಂದದಿ ಸಕಲ ಪ್ರ
ಪನ್ನರ ಸಲಹೊ ಮೋದಿ
ಅನ್ಯರಿಗೀಪರಿ ಬಿನ್ನಪ ಗೈಯೆ ಜ
ಗನ್ನಾಥ ವಿಠಲನ ಸನ್ನುತಿಸುವ ಧೀರ ||
ನಿನ್ನ ನಂಬಿದ ಜನರಿಗೆಲ್ಲಿಯ
ಬನ್ನವೋ ಭಕ್ತಾನು ಕಂಪಿಶ
ರಣ್ಯ ಬಂದೆನೊ ಈ ಸಮಯದಿಅ
ಹರ್ನಿಶಿ ಧ್ಯಾನಿಸುವೆ ನಿನ್ನನು 3