ಒಟ್ಟು 834 ಕಡೆಗಳಲ್ಲಿ , 89 ದಾಸರು , 697 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು | ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ ಕರುಣಾನಂದವ ಪಡೆದು | ತರಣೋಪಾಯವನರಿದು | ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು | ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು 1 ಭವ ಕಾನನವನೆ ತೊರೆವಾ | ನಿತ್ಯ ತಾನಾರೆಂಬುದು ನರಿವಾ | ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ | ಸಾನುರಾಗದಲಿಂದ ತಾನುಂಬ ಶರಣರು 2 ಹರಿಯಲ್ಲರೊಳಗರಿದು | ಶರೀರ ಭಾವನೆ ಮರೆದು | ಹರುಷದ ಗುಡಿಗಟ್ಟಿಬರುವ | ನಯನೋದಕದಿ | ಗುರುಮಹಿಪತಿಸ್ವಾಮಿ ಚರಣದ ಶರಣರು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಷ್ಟು ದಿನ ಇಂಥ ಸುಖ ಕಾಣಲಿಲ್ಲಕೃಷ್ಣ ಈ ದಿನ ನೋಡಿ ತುಷ್ಟನಾದೆನೊ ದೇವಾ ಪ ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲತೋಟದೊಳು ರವಿಸುತನ ಕೂಟದೊಳು ಗೋಪಿಯರಆಟಕದ ಕೊಳಲೂದೊ ನೋಟ ಸ್ಮರಣೆಗೆ ತರುವೆ 1 ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊಧೇನುಪಾಲನ ನೋಟಕಾಶ್ಚರ್ಯವೊನಾನು ಒಲ್ಲೆನು ಸೀದಾ ಆಣೆ ಮಾಡುವೆನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ 2 ಇಂದು ಬಾಯೊಳಗಿಟ್ಟುಮಂದಹಾಸವ ಮಾಡುತಿಂದಿರೇಶಕಂದರ್ಪಸಮರೂಪದಿಂದ ನೋಡುವೆನೀಗಸಿಂಧುನೊಳು ಮುಳುಗಿದೆನು ನಂದಬಾಲಕನೆ 3
--------------
ಇಂದಿರೇಶರು
ಈತÀನೀಗ ವಿಜಯ ವಿಠ್ಠಲಾ ಯಾತನೆಯನು ಕಳೆದು ಪೊರೆವಾ ಪ ಕರೆದರೊಂದೆ ನುಡಿಗೆ ಬಂದು ಕರುಣದಿಂದ ಮುಂದೆ ನಿಂದು ಕರವ ಪಿಡಿದು ಅಂದು ಅಭಯ ಕರವ ಪಾಲಿಸಿದ ದಯಾಸಿಂಧು ಪರಿಪರಿಯಿಂದಲಿ ಹಿಂದು ಮುಂದು ದುರಿತದಿಂದ ನೊಂದು ಬಂದು ಮೊರೆ ವಿಚಾರಿಸಿ ಸಾಕಿದನಿಂದು 1 ಅಚ್ಯುತಾನಂತನೆಂಬ ನಾಮಾ ಅಚ್ಚು ಸುಧೆಯೆನಗೆ ನೇಮಾ ನಿಚ್ಚ ಉಣಲಿಕಿತ್ತ ಪ್ರೇಮಾ ಚಚ್ಚಲದಲಿ ಪೂರ್ಣಕಾಮಾ ಹೆಚ್ಚಿ ಬಪ್ಪ ಮದದಾ ಸ್ತೋಮಾ ನುಚ್ಚು ಮಾಡಿ ಬಿಡುವ ಭೀಮಾ ಸುಚ್ಚರಿತ ಸಾರ್ವಭೌಮಾ2 ಮೊದಲೆ ಗುರು ಪುರಂದರದಾಸರಾ ಹೃದಯದೊಳಗೆ ನಿಂದಾ ಶೃಂಗಾರಾ ಉದಧಿಯೋ ಇದು ಬಣ್ಣಿಸಿಬಲ್ಲ್ಲಿರಾ ತ್ರಿದಶರೊಳಗೆ ಕಾಣೆ ಜ್ಞಾನರ ಸದಮಲಾನಂದ ಪೂರ್ಣ ಇಂದಿರಾ ಸದನಾ ಪ್ರತಾಪಗುಣ ಪಾರಾವಾರಾ ಪದೋಪದಿಗೆ ಎನ್ನಯ ಮನೋಹರಾ3
--------------
ವಿಜಯದಾಸ
ಈತನೀಗ ಕೃಷ್ಣನಾಥನು ಶ್ರೀನಾಥನು ಶ್ರೀನಾಥನಮ್ಮಾ ಧ್ರುವ ನಂದಕುಮಾರನೀತ ನಂದಮಹಿಮನೀತ ಕಂದರ್ಪಜನಕನೀತ ಸುಂದರವದನನೀತ 1 ಇಂದಿರೇಶನು ಈತ ವಂದಿತ ತ್ರೈಲೋಕ್ಯನಾಥ ಚಂದವಾಗಿ ಸುಳಿದ ಬಾಲ ಮುಕುಂದನೀತ 2 ಗಿರಿಯ ಬೆರಳಲೆತ್ತಿದಾತ ಕರಿಯ ಸೆರೆಯ ಬಿಡಿಸಿದಾತ ಮೊರೆಯ ಕೇಳಿ ದ್ರೌಪದಿಯ ಕರುಣಿಸಿದಾತ 3 ಅಸುವ ಪೂತನಿ ಹೀರಿದಾತ ಕಂಸನ ಮಡುಹಿದಾತ ವಂಶ ಕೌರವರ ತಾನು ಸಂಹರಿಸಿದಾತ 4 ಬಾಲಕನಹುದೀತ ಮೂಲೋಕ ಪಾಲಕ ನೀತ ಸಲಹುತಿಹ ಮಹಿಪತಿ ಮೂಲಾಗ್ರಜನೀತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಈತನೀಗ ಭಾರತೀಶನು ತನ್ನ ಪ್ರೀತಿಸುವರ | ಮನದ ಮಾತು ಸಲಿಸಿ ಮುಕುತಿ ಈವ ಪ ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ | ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ || ಮುರಿದು ಧರೆಗೆ ವರಿಸಿದಾತಾ ಅಪ ಧುರದೊಳಕ್ಷನ ಹರಣವಳಿದು | ಗುರುವರ್ಹತ್ತುಶಿರನ ಜರಿದು || ನಗರ ಉರುಪಿ ಮರಳಿ | ಹರಿಯ ಚರಣಕ್ಕೆರಗಿದಾತಾ 1 ಕುರುನಿಕರ ಕರುಬಿ ಬೊ-| ಬ್ಬಿರಿದು ನಿಂದುರವಣಿಸಿ ಎದುರಾ-|| ದರಿಗಳ ಶಿರ ತರಿದು ತಳೋ-| ದರಿಯ ಹರುಷಬಡಿಸಿದಾತಾ2 ಕರಿಯ ತೆರದಿ ದುಷ್ಟ ಸಂಕರನು | ತಿರುಗಲವನ ಮುರಿದು ಮತ್ತೆ || ಮರುತಮತದ ಬಿರುದನೆತ್ತಿ - |ಪರನೆ ವಿಜಯವಿಠ್ಠಲನೆಂದಾ 3
--------------
ವಿಜಯದಾಸ
ಈತನೀಗ ವಾತಜಾತನು ತನ್ನ ಪ ತÁತಗಾಗಿ ದನುಜಕುಲವಘಾತಿಸಿದ ವನೌಕಸಾರ್ಯಅ.ಪ. ಅಂಬುಧಿಯ ಲಂಘಿಸಿ ಭರದಿಲಂಬ ಶಿಖರದಲ್ಲಿ ಧುಮುಕಿಸಂಭ್ರಮದಿಂದ ಲಂಕೆಗೆ ಪೋಗಿಅಂಬುಜಾಕ್ಷಿಯನರಸಿದಾತ1 ಧರಣಿಸುತೆಯ ಚರಣಕೆರಗಿಕರುಣಿ ರಾಮನುಂಗುರವಿತ್ತುಕರದಿ ದಾನವರನು ಸವರಿಶರಧಿಯನುತ್ತರಿಸಿದಾತ 2 ಕಡಲ ತಡಿಯೊಳಿರ್ದ ಕಪಿಗ-ಳೊಡನೆ ರಾಮನಂಘ್ರಿಗೆರಗಿಮಡದಿ ಚೂಡಾರತುನವಿತ್ತುಕಡು ಕೃತಾರ್ಥನೆನಿಸಿಕೊಂಡ 3 ದುರುಳ ಕೌರವನನುಜನುರವಕರದಿ ಸೀಳಿ ರಕ್ತವ ಸುರಿದುನರಸಿಂಹನಿಗೆ ಅರ್ಪಿಸಿದಧರೆಗೆ ಭೀಮನೆನಿಸಿದಾತ 4 ಇಳೆಯೊಳಿದ್ದ ಮಧ್ಯಗೇಹನಕುಲದಿ ಜನಿಸಿ ಶುದ್ಧವಾದನಳಿನನಾಭನ ಒಲುಮೆಯಿಂದಮಲಿನರನ್ನು ಅಳಿದ ಧೀರ 5 ಇಪ್ಪತೊಂದು ಕುಮತಗಳನುಒಪ್ಪದಿಂದ ಗೆಲಿದು ಭಕ್ತಕಲ್ಪವೃಕ್ಷನೆನಿಸಿ ಮೆರೆದಸರ್ಪಶಯನನ ನಿಜವ ತೋರ್ದ6 ಧರಣಿ ಮಂಡಲದೊಳಗೆ ಭೂಮಿಸುರರ ಗಣಕೆ ಶಾಸ್ತ್ರಾಮೃತವಎರೆದು ಕೃಷ್ಣನ ಇರವ ತೋರಿವರ ಬದರಿಯೊಳ್ ನಿಂದ ಧೀರ7
--------------
ವ್ಯಾಸರಾಯರು
ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು ಪ ಈತನೀಗ ವಾಸುದೇವನೀ ಸಮಸ್ತ ಲೋಕದೊಡೆಯ ದೂತಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ಅ ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನನುಜೆಯಾಳಿದವನ ಶಿರವ ಕತ್ತರಿಸುತ - ತನ್ನಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ1 ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿಶರಗಳನ್ನು ತೀಡುತಿಪ್ಪನ ಯೋಚಿಸಿಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನಶಿರವನ್ನು ಛೇದಿಸಿದ ದೇವ ಕಾಣಿರೊ 2 ವೈರಿ ತೊಡೆಯ ಛೇದಿಸೆಂದು ಬೋಧಿಸಿಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-ತ್ಕøಷ್ಟ ಮಹಿಮನಾದ ದೇವ ಕಾಣಿರೊ 3 ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗವೀರ ನರನತ್ತ ಬಪ್ಪುದನ್ನು ಈಕ್ಷಿಸಿ ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದಭಾರಕರ್ತನಾದ ದೇವನೀತ ಕಾಣಿರೊ4 ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತಸಾಮಜವನೇರಿ ಬಹನ ಶಕ್ತಿಯನೀಕ್ಷಿಸಿಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-ಭೌಮ ಬಾಡದಾದಿಕೇಶವನ್ನ ನೋಡಿರೊ 5
--------------
ಕನಕದಾಸ
ಈತನೀಗಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದ ಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ. ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆ ಕೊಟ್ಟು ಶರ್ಮಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿ ತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವರಾಜ್ಯಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನಪೆತ್ತ ಚೆಲುವ ನಮಲಗಂಗೆಯಿತ್ತು ನಲಿವ ವಾಸುದೇವ 2 ಉರಗಶಯನ ಗರುಡಗಮನ ಪರಮಪದವನುಳಿದುಶೇಷ ಗಿರಿಯೊಳಿರ್ದುಬಂದ ವ್ಯಾಘ್ರಗಿರಿಯ ಶಿಖರಕೆ ಭರದಿ ನಿತ್ಯಮುಕ್ತರೊಡನೆ ಕರದಿ ಶಂಖಚಕ್ರಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದವಿಠಲ 3
--------------
ಸರಗೂರು ವೆಂಕಟವರದಾರ್ಯರು
ಈತನೀತನೆ ರಮಾನಿವಾಸನು ಕೇಳಿ ಜನರು ಈತನೀಗ ಚಿದ್ವಿಲಾಸನು ಪ ಈತನೀಗ ಸರ್ವಭೂತ ಜಾತಚೇತನರ್ಗೆ ಸೌಖ್ಯ ದಾತವೇದಶಾಸ್ತ್ರ ವಿಖ್ಯಾತ ಲೋಕೈಕನಾಥ ಅ.ಪ ಬ್ರಹ್ಮರೂಪನಿಂದ ಜಗವ ನಿರ್ಮಿಸುತ್ತತಾನೆ ಸರ್ವ ಕರ್ಮಫಲಗಳನ್ನೆಕೊಟ್ಟು ಶಮನಪಡಿಸುವ ಚರ್ಮವಸ್ತ್ರವುಟ್ಟು ರೌದ್ರ ಕರ್ಮಿಯಾಗಿ ಕಡೆಗೆ ಕಾಲ ಧರ್ಮವನ್ನು ತೋರಿ ಜಲದೊಳೊಮ್ಮೆ ಮಲಗಿತೇಲುತಿರುವ 1 ರಮೆಯನಾಳ್ವ ಭಾಗ್ಯವಂತ ಕ್ಷಮೆಯನಾಳ್ವ ರಾಜ್ಯ ಕರ್ತ ಕಮಲಭವನ ಪಡೆದ ಹಿರಿಯನಮರರೊಡೆಯ ಸುಮಶರನ ಪೆತ್ತ ಚೆಲುವನಮಲ ಗಂಗೆಯಿತ್ತು ನಲಿವ ನಮರ ವೈರಿಗಳನು ಕೊಲುವ ಕಮಲನಾಭ ವಾಸುದೇವ2 ಉರಗಶಯನ ಗರುಡಗಮನ ಪರಮಪದನುಳದು ಶೇಷ ಗಿರಿಯೊಳಿರ್ದು ಬಂದ ವ್ಯಾಘ್ರಗಿರಿಯ ಶಿಖರಕೆ ಭರದಿನಿತ್ಯಮುಕ್ತರೊಡನೆ ಕರದಿ ಶಂಕ ಚಕ್ರ ಪಿಡಿದು ಕರುಣದಿಂದ ಚರಣ ಸೇವಕರನು ಪೊರೆವ ವರದ ವಿಠಲ 3
--------------
ವೆಂಕಟವರದಾರ್ಯರು
ಈಸಲು ಬಿಡು ನನ್ನ ಹರಿ ಘನ್ನ ಪ ಮೀಸಲು ಭಕುತಿಯ ರಸಜಲ ನಿಧಿಯಲಿ ಅ.ಪ. ಏನು ತಿಳಿಯದವನಾಗಿ ನೀಗುಟ್ವುಜ್ಞಾನದ ಸಿಂಗಡಿ ಸಂಗಡ ಕೊಟ್ಟುಧ್ಯಾನದ ಪಾಶದ ಬಿಗಿಲಿಯಲಿ ಕಟ್ಟುಶ್ರೀನಿವಾಸನೇ ನೀ ದಯವಿಟ್ಟು 1 ಭವಸಾಗರವನು ದಾಟಿಸಬಲ್ಲನಾವಿಕ ನೀನಿಲ್ಲದೆ ಯಾರಿಲ್ಲಹವಣಿಸಿ ನಿನ್ನನೆ ನಂಬಿಹೆನಲ್ಲತವಕದಿ ಮನ್ನಿಸಿ ದೀನನ ಸೊಲ್ಲ 2 ಬಿನ್ನಪ ನನ್ನನು ದಯದಿಂದಾಲಿಸುಸನ್ನುತ ಗದುಗಿನ ವೀರನಾರಾಯಣಎನ್ನೊಳು ನೀ ದಯಪಾಲಿಸು 3
--------------
ವೀರನಾರಾಯಣ
ಉಡುಪಿನ ರಂಗ ಕಲ್ಲುಕಂಬದಿಂದೊಡೆದ ನರಸಿಂಹಬಿಡದೆಮ್ಮ ಸಲಹೊ ಕೈವಿಡಿ ಇನ್ನೇಕೆ ತಡವೊ ಪ. ಕರೆಯದೇ ಮುನ್ನ ಬಂದೆ ಖಳನಿದಿರಲಿ ನಿಂದೆಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ1 ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧುಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ 2 ಹಯವದನನಾಗಿ ಹರಿ ನೀ ದೈತ್ಯರ ನೀಗಿನಯದಿ ವೇದವ ತಂದೆ ನಳಿನನಾಭನೇನೆಂಬೆ3
--------------
ವಾದಿರಾಜ
ಉದಯಾದ್ರೀಶ ವಿಠಲ ಮುದವನಿತ್ತವನೀಗೆಉದ್ಧರಿಸ ಬೇಕೆಂದು ಪ್ರಾಥಿಸುವೆ ಹರಿಯೇ ಪ ಸದಯ ನೀನಿರೆದೇವ ಸಂಸ್ಕøತಿಯ ಶೃಂಖಲೆಗೆಬೆದರಿಕಿಲ್ಲವೊ ಇವಗೆ ನರಹರಿಯೆ ಸ್ವಾಮಿಅ.ಪ. ಸ್ವಾಪದಲಿ ನಭದಲ್ಲಿ ರೂಪವನೆ ತೋರಿದ ಯೊಪಯೋನಿಧಿಯಾಗಿ ಮೆರೆವೆ ವೆಂಕಟೇಶ |ಆಪಯೋಜಾಸನ ವಿಷಾದ್ಯರಿಗೆ ನಿಲುಕದಅಪಾರ ತವಮಹಿಮೆ ನಾ ಪೇಳಲೊಶವೇ 1 ಸಾರನಿಸ್ಸಾರವೆನೆ ಜಗದೊಳಗೆ ನೀನೊಬ್ಬಸಾರತಮನೆಂದೆಂಬ ಪಾರಮಾರ್ಥಿಕವ |ತಾರತಮ್ಯ ಜ್ಞಾನ ಮೂರೆರಡು ಭೇಧಗಳಸಾರವನೆ ತಿಳಿಸಿ ಸಂಸಾರ ನಿಧಿ ದಾಟಿಸೋ 2 ಗರ್ವರಹಿತನು ಇವಗೆ ಕವನ ಶಕ್ತಿಯನಿತ್ತುಸರ್ವತ್ರ ಸರ್ವದಾ ಸರ್ವಕಾರ್ಯಗಳಲ್ಲಿಸರ್ವೇಶ ತವನಾಮ ಸ್ಮøತಿಯನ್ನೆ ಕರುಣಿಸುತದರ್ವಿ ಜೀವನಕಾಯೊ ಸರ್ವಾಂತರಾತ್ಮಾ 3 ಶ್ರೀದ ಶ್ರೀ ವೆಂಕಟನ ನೋಡಿದೆ ಎಂಬಂಥಮೋದದಾಯಕ ಪದವು ಉದಯ ವಿಠಲಾಂಕಿತವಾದಿರಾಜರ ಶಿಷ್ಯ ಪಾಡಿ ಪೂರೈಸುತಿರೆನೀದಯದಿ ತವರೂಪ ತೋರ್ದುದನು ಮರೆ ಮಾಡಿದೆ4 ಪಾವಮಾನಿಯ ಪ್ರೀಯ ಭಾವುಕರ ಪರಿಪಾಲಗೋವತ್ಸ ಧ್ವನಿ ಕೇಳಿ ಧಾವಿಸೀ ಬರುವಂತೆತೀವ್ರುಪಾಸನೆ ಇತ್ತು ಇವನ ಹೃತ್ಕಂಜದಲಿದೇವ ಗುರು ಗೋವಿಂದ ವಿಠಲ ತವರೂಪ ತೋರೊ5
--------------
ಗುರುಗೋವಿಂದವಿಠಲರು
ಉರುಟಣೆ ಹಾಡು ಪದ್ಮಾವತಿ ನಿಂತು ಮುದ್ದು ಪದ್ಮನಾಭನಿಗೆ ಪದ್ಧತಿಯಲಿ ಉರುಟಾಣಿಯನು ಮಾಡಿದಳೊ ಪ. ಪದ್ಮಾಕ್ಷ ನಿನ್ನಯ ಪಾದಪದ್ಮವನೆ ತೋರೀಗ ಪದ್ಮರೇಖೆಯ ಪಾದಕರಿಶಿಣವ ಹಚ್ಚುವೆನು ಪದ್ಮ ಸಂಭವನ ಪಿತ ವೆಂಕಟೇಶ ಶ್ರೀಶ ಅ.ಪ. ಪಣೆ ತೋರು ವರ ಕುಂಕುಮದ ತಿಲಕ ತಿದ್ದುವೇನು ಕೃಷ್ಣ ಕೊರಳ ತೋರೆಲೊ ದೇವ ಶ್ರೀ ವತ್ಸದಾಮೇಲೆ ಮೆರೆವ ತೆರ ಹಾರಹಾಕುವೆನೀಗ ಶ್ರೀಶಾ ಸುರವಂದ್ಯನೆ ದೇವ ಶ್ರೀನಿವಾಸ 1 ವೇದಾಭಿಮಾನಿಯೆ ವೇದದಿಂದಮುತ್ರವನು ಆದರದಿ ಭಕ್ತರಿಗೆ ಕೊಟ್ಟಿ ಕರಕೆ ಮೋದದಿಂದ ಗಂಧವನು ಹಚ್ಚುವೆನು ಎಲೊ ದೇವ ಸಾಧಿಸಿ ಭೂಮಿಯ ತಂದ ವರಹ ಕಂಠವ ತೋರೋ ಆದರದಿ ಹಚ್ಚುವೆನು ದೇವ ದೇವ 2 ಕಂದನಾ ನುಡಿಕೇಳಿ ಕಂಬದಿಂ ಬಂದವನೆ ಅಂದದಿಂ ಬ್ರಹ್ಮಚಾರಿಯಾಗಿ ಮೆರೆವ ದೇವ ಸುಂದರ ಪರಶುರಾಮ ಅಂದದ ದಶರಥಸುತನೆ ಮಂದರೋದ್ಧರ ಕೃಷ್ಣ ಸುಂದರ ಬೌದ್ಧ ಕಲ್ಕಿ ನಿನ್ನ ಮಂದಗಮನೆಯ ವೀಳ್ಯ ಸ್ವೀಕರಿಸೊ ಶ್ರೀ ಶ್ರೀನಿವಾಸಾ 3
--------------
ಸರಸ್ವತಿ ಬಾಯಿ
ಋಣವ ಮಾಡಿದ ಪತಿತನು ನಾನು ಸ್ಮøತಿಧನವ ಪಾಲಿಸು ಸೀತಾರಾಮ ನೀನು ಪ'ರಿಯರ ಮಾತನು 'ಂದುಗಳೆದು ಮುಂದೆಬರುವ ದುಃಖಗಳ ಬಗೆಗೊಳದೆದುರುದುಂಬಿತನದಿಂದ ದುಷ್ಟಸಂಗತಿಗೈದುಪರರ ಮೆಚ್ಚಿಸಿ ಬಾಳ್ವ ಪೌರುಷ್ಯವನು ನೀಗಿ 1ಹೆಮ್ಮೆಯ ಬಲು'ಷ ಹೆಡತಲೆಗೇರಿರೆಸುಮ್ಮಾನಬಡುತತಿಸುಖ'ದೆಂದುಉಮ್ಮಳಿಪರ ಠಕ್ಕಿಗುಬ್ಬಿ ುೀ ಪರಮಾತಿಗೊಮ್ಮೆಯು ಮನಗೊಡದೊರಟುಮಾರ್ಗವ ಸಾರಿ 2ಕಾಶಿಯೊಳ್ಮರಣವ ಕಾ'ುಸಿದರೆಯುಸನ್ಯಾಸವ ಮಾಡ್ದರು ಸನ್ಮುಕ್ತಿಯುತಾ ಸೋಕದು ಋಣತಗು'ದ್ದವನನೆನ್ನು'ೀ ಸೊಲ್ಲ 'ರಿಯರು ಸಾರಿದರೆಯು 'ುೀರಿ 3ಗೋವ ಕೊಂದವನಿಗೆ ಗಂಗೆಯ ಹಳಿದಗೆಭಾವೆ ಭೂಸುರರನು ಬಡಿದವಗೆಯಾವದು ಗತಿಯದು ನಿಷ್ಕøತಿ ಋಣಿಗಿಲ್ಲೆಂದುಭಾವಜ್ಞರರು'ದ ಭಯವನು ಗಣಿಸದೆ4ಬಡ್ಡಿಯ ಹೆಚ್ಚಿಸಿ ಬಹು ಧನವನು ತಂದುಕಡ್ಡಿಗೆ ಸರಿಮಾಡಿಕೊಟ್ಟವರಾಅಡ್ಡಿಯ ತೋರಿಸುತ ಸುಲಭ ಮುಳುಗಿಸಿದುಡ್ಡು ದುಗ್ಗಾಣಿಯ ತಿರಿದುಂಬ ರೀತಿಗೆ 5ಋಣಕರ್ತೃ ಪಿತೃಶತ್ರು ಧನಕರ್ತೃ ಪಿತೃ ಸಖಯೆನುವ ಗ್ರಂಥಾರ್ಥಗಳನು ಕೇಳಿಯೂಗಣಿಸದೆ ಸತಿ ಸುತರ್ಕೊರಗಿದರೆಯು ಕೆಟ್ಟುತೃಣಕಿಂತ ಕಡೆಯಾಗಿ ತಬ್ಬಿಬ್ಬನಾಡುತ್ತ6ಸಾಲವ ಕೊಟ್ಟವ ಸಾರಿ ಸಾರಿಗೆಕೇಳಿದರವನಿಗೆ ಕದ್ದೋಡುತಾಬೇಳುವೆ ಮರಣವ ಬಾಯಲಾಡುತ ಬುದ್ಧಿಜಾಳಾಗುವಂದದಿ ಜಡಿದು ಹೆದರಿಸುತ 7
--------------
ತಿಮ್ಮಪ್ಪದಾಸರು