ಒಟ್ಟು 139 ಕಡೆಗಳಲ್ಲಿ , 49 ದಾಸರು , 130 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೈಹೋಳು ನೀ ಬಂದು ಮೈಯ ಮರಿಯ ಬ್ಯಾಡವೋ ಮಹಿಮಾನಂದನಂಘ್ರಿಯ ಬಿಡಬ್ಯಾಡವೋ ಧ್ರುವ ಮಾಯಾ ಮೋಹದೊಳು ಸಿಲ್ಕಿ ದೇಹ್ಯ ಭ್ರಮೆಯಗೊಂಡು ಕಾಯ ಸೌಖ್ಯಕೆ ಬಾಯಿದೆರಿಯಬ್ಯಾಡವೋ 1 ಹೊನ್ನು ಹೆಣ್ಣು ಮಣ್ಣಿಗಾಗಿ ಬಣ್ಣ ಪರಿಯಲಿನ್ನು ಕಣ್ಣು ಗೆಟ್ಟು ಕರುಡನಂತೆ ದಣಿಯಬ್ಯಾಡವೋ 2 ನಾನು ನೀನು ಎಂಬ ಭಾವ ಮಹಿಪತಿಗಳೆದು ಭಾನುಕೋಟಿತೇಜನಂಘ್ರಿ ಬೆರೆದು ಮನಕೂಡವೂ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಯಾಕೆ ನಿರ್ದಯ ಮಾಡಿದೆ ರಂಗಯ್ಯ ನೀನ್ಯಾಕೆ ನಿರ್ದಯ ಮಾಡಿದೆ ಪ ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ ದುಷ್ಟ ಇಂದ್ರಿಯ ಬಿಡದೆನ್ನ 1 ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ ಪಂಚಬಾಣನ ಪಿತ ಪರಮಪುರುಷ ರಂಗ ಅ ಕಿಂಚನಾದೆ ನಿನ್ನಂಘ್ರಿಯ ಸೇರಿಸು 2 ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ ವಿಷ ತಿರುಗೆಸೋ ಶ್ರೀಹರಿ 3 ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4 ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು ನಿಮಿಷವಾದರು ಮಾಡಲೀಸದು 5 ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6 ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ ಇಂದು ಈ ಸಂಸಾರ ಬಂಧನದೊಳಗೆ ನಾ ಒಂದು ನಿಮಿಷ ಜೀವಿಸಲಾರೆನು ರಂಗ 7 ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ ಬಂದು ಕಾಯ್ದ ಗೋವಿಂದ 8 ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9 ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ ಬೇಗ ಮುಕ್ತಿಪಥವ ಪಾಲಿಸುವಳು 10 ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11
--------------
ಯದುಗಿರಿಯಮ್ಮ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ ಉಪೇಂದ್ರ ಭಗವಂತ ಪಟುರೂಪ ಧರಿಸಿ ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ 1 ಕಮಲವನು ತೊಳಿಯಲಾವೇಗದಿಂದ ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ2 ಧ್ರುವಲೋಕಕಿಳಿದು ಅಮರಾಲಯವ ಸಾರಿದೆ ತವಕದಿಂದಲಿ ಧುಮುಕಿ ಚತುರಭಾಗವಾದೆ ಭವ ಪರಿಹರಿಸಿ ಭಾಗೀರಥಿ ಎನಿಸಿದೆ 3 ಭವದೊರೆ ಭಗೀರಥಗೆ ಒಲಿದು ಬರುತ ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ4 ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ ಕುಲಕೋಟಿ ಉದ್ಧಾರ ನಿಃಸಂದೇಹಾ ಮಜ್ಜನ ಪೊಳೆವ ವೈಕುಂಠಪುರ ಅವನ ಹೃದಯದಲಿ5 ಕುಲಪ್ರವಹವಾಗಿದ್ದ ಜೀವರ ಪುಣ್ಯವನು ಹೇಳಿ ಕೇಳುವವನಾರು ಮೂಲೋಕದಿ ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು 6 ದೇಶದೇಶದಲಿಂದ ಬಂದ ಸುಜನರ ಪಾಪ ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ 7
--------------
ವಿಜಯದಾಸ
ಲಕ್ಷ್ಮೀ ದೇವಿ ಇಂದಿರೆ ನಾ ನಿನ್ನ ವಂದಿಸಿ ಬೇಡುವೆ ಬಂದು ನೀ ಪಾಲಿಸೇ ಚಂದಿರವದನೆ ಪ ಸಿಂಧು ಕುಮಾರಿಯೆ ಎಂದಿಗೂ ನಿನ್ನ ಪದ ದ್ವಂದ್ವವ ಸೇವಿಪೆನೆಂದು ನಾ ಬೇಡುವೆ ಅ.ಪ ದೇವಿ ನಿನ್ನಂಘ್ರಿಯ ಸೇವಿಸಿ ಪದ್ಮಭವ ಭಾವಿ ಫಣೇಶ ಸುರಾಧಿಪರೆಲ್ಲರು ಈ ವಿಧವಾದನುಭಾವವ ಪೊಂದಿರಲು ಈ ವಿಷಯಕೆ ಶ್ರುತಿ ಸಾವಿರವಿರುವುದೆ 1 ಪನ್ನಗವೇಣಿಯೆ ನಿನ್ನನೆ ನಂಬಿರಲು ಸಣ್ಣ ಮನುಜರ ವರ್ಣಿಪುದೇಕೆಲೆ ಎನ್ನಪರಾಧವ ಮನ್ನಿಸಿ ಕೃಪೆಯನು ಎನ್ನೊಳು ತೋರಲು ಧನ್ಯ ನಾನಾಗುವೆ 2 ತಾಮರಸಾಕ್ಷಿಯೆ ನಾಮಗಿರೀಶ ಶ್ರೀ ಸ್ವಾಮಿ ನೃಸಿಂಹನ ಕಾಮಿನೀಮಣಿಯೇ ಕೋಮಲಗಾತ್ರಯೆ ಶ್ರೀ ಮಹಾಲಕ್ಷ್ಮಿ ಎನ್ನ ಸಹೋದರಿ 3
--------------
ವಿದ್ಯಾರತ್ನಾಕರತೀರ್ಥರು
ಲೋಕನೀತಿ ಏನು ಮಾಡಿದರೇನು ಹಾನಿಯಾಗದು ಪಾಪ ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1 ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ ಅಪರೂಪ ಹರಿನಾಮ ಜಪ ಮಾಡದನಕ 2 ದಾನಧರ್ಮಗಳಿಂದ ಧನ್ಯನಾದೆನು ಎನಲು ಹಾನಿಯಾಗೋದು ಆಯು ಪ್ರತಿ ನಿಮಿಷದಿ ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3 ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು ವಾಸುದೇವನೆ ಜಗತ್ಪ್ರೇರಕನು ಎಂದು ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ- ರ್ವೇಶ ನಿನ್ನಧೀನವೆಂದರಿವ ತನಕ4 ಗಾತ್ರ ಶೋಷಣೆಯಾಕೆ ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
--------------
ನಿಡಗುರುಕಿ ಜೀವೂಬಾಯಿ
ವಂದಿಪೆ ತವ ಪಾದಕೆ ಭವದ ಬಂಧನ ಕಳೆವುದಕೆಪ ಹಿಂದೆ ಮುಂದೆ ಎಂದೆಂದಿಗು ಎನ್ನಯ ಕುಂದುಗಳೆಣಿಸದೆ ಕರುಣಿಪುದೆನ್ನುತ ಅ.ಪ ಅಪರಾಧಿಯು ಎಂದು ತಿಳಿದರು ಗುಪಿತದಿ ಸಲಹುವದು ಅಪಮೃತ್ಯುವು ಪರಿಹಾರಕೆ ನಿಮ್ಮಯ ಉಪದೇಶದ ಮಂತ್ರವೆ ಪರಮೌಷಧಿ 1 ಕಾಯಕ್ಲೇಶದಿಂದ ಮನಸಿನ ಹೇಯ ವ್ಯಥೆಗಳಿಂದ ಕಾಯಜ ಪಿತನಂಘ್ರಿಯ ಸೇವಿಸದಲೆ ಆಯಾಸದಿ ಮನ ಕಳವಳಗೊಳುತಿದೆ 2 ಆರು ಮಂದಿ ಇಹರು ಮಾಯಾ ಪಾಶಾದಿ ಬಂಧಕ ಪಡಿಸುತ ಹಾಯಲೀಸರೊ ಹರಿ ಅಂಘ್ರಿಗಳಲಿ 3 ಆರಿಗುಸುರಲೇನು ಮಾಡಿದ ಕಾಂiÀರ್iವು ಮುಂದಿನ್ನೂ ಆನಂದಮಯ ವಿಠ್ಠಲದಾಸರ ಕೂಡಿ ಆದರುಸುವುದಿನ್ನೂ ಮುನ್ನೂ4 ಕಮಲನಾಭ ವಿಠ್ಠಲನೊಲುಮೆಯು ಸುಲಭದಿ ಪಡೆವುದಕೆ ಅನುದಿನ ಪ್ರಾರ್ಥಿಸುತ5
--------------
ನಿಡಗುರುಕಿ ಜೀವೂಬಾಯಿ
ವಾದೀಂದ್ರ ಗುರುರಾಜ ನಿನ್ನ ಪಾದವ ತೋರಿಸಯ್ಯಾ ವಾದೀಂದ್ರ ಗುರು ನಿನ್ನ ಪಾದವ ನಂಬಿದೆ ಮೋದವÀ ಕೊಡುವುದು ಮದಗಳೋಡಿಸಿ ಪ ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯ ಪಾಪರಾಶಿಯ ಸುಟ್ಟು ದ್ರೌಪದೀವರದನ ಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ 1 ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರ ಶೀಲಾದಿ ಗುಣವಿತ್ತು ಶ್ರೀ ಲೋಲನಂಘ್ರಿಯ ಮಲಿನ ಮನವ ಕಳದು ಪೊಳೆಯುವಂತೆ ಮಾಡೋ2 ನಿತ್ಯ ಭಂಗಗಳೋಡಿಸುವಿ ಶೃಂಗಾರ ತುಳಸಿಯ ಮಂಗಳ್ಹಾರವ ಧರಿಸಿ ತುಂಗಮಹಿಮ ನರಸಿಂಗ ಮೂರುತಿ ತೋರೊ 3
--------------
ಪ್ರದ್ಯುಮ್ನತೀರ್ಥರು
ವಾರಿಜಗಣ ನಿಲಯೇ ಕಮನೀಯೆ ತಾಯೇ ಕಾಯೇ ನರಹರಿ ಜಾಯೇ ಪ ಸಾರಸಭವಮುಖ ಸುರ ಮಹನೀಯೆ ಚಾರುವದನೆ ಜಾಂಬೂನದ ಛಾಯೆ ಅ.ಪ ನಿನ್ನ ಕಟಾಕ್ಷ ಮಹಾಸುರಧೇನು ನಿನ್ನ ಮನವು ಚಿಂತಾಮಣಿಯು ನಿನ್ನಯ ಕರಗಳು ಸುರತರುವೆನಗೆ ಇಂದಿರೆ 1 ಹೃನ್ಮಂದಿರದಲಿ ಜ್ಞಾನವನು ಮನ್ಮಂದಿರದಲಿ ಭಾಗ್ಯವನು ಅಮ್ಮ ಬೆಳಸೆ ಕಮಲೆ ಸುವಿಮಲೆ ಇಂದಿರೆ 2 ಈಶನಂಘ್ರಿಯಲಿ ಭಕ್ತಿಯನು ಹರಿ ದಾಸದಾಸ್ಯದಲಿ ಶಕ್ತಿಯನು ಮೋಸಕೆ ಸಿಗದ ವಿರಕ್ತಿಯನು ಕರುಣದಲಿ ನೀಡೆ ಪ್ರಸನ್ನೆ3
--------------
ವಿದ್ಯಾಪ್ರಸನ್ನತೀರ್ಥರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು
ವಿಜಯವಿಠಲರಾಯಾ | ನಂಘ್ರಿಯುಗ ಭಜಿಸುವ ವಿಜಯರಾಯನೆ ಜೀಯ ರಜದೂರ ತವಪದ ಭಜಕ ನಾನೆನಿಸಯ್ಯ ಋಜುರಾಜ ಪ್ರೀಯ ಕುಜನ ಸಂಗದಿ ಬೆರೆದು ಮನಹರಿ ಭಜನೆಗೊದಗದು ಎಷ್ಟು ಬೇಡಲು ದ್ವಿಜವರೇಣ್ಯನೆ ಎಮ್ಮ ಬಾಂಧವ ಸೃಜಿಸು ಶ್ರೀಧರನೊಲಿಮೆ ಶಕ್ತಿಯ 1 ಸೂನು ಎನಿಸಿದೆ ನಾನು ಕುಲಸ್ವಾಮಿ ಕೃಷ್ಣನ ಧ್ಯಾನ ಪಾಲಿಸು ಇನ್ನು ದಾನಿ ಸುರಧೇನು ಜ್ಞಾನ ಭಕ್ತಿ ಧ್ಯಾನಯೋಗದಿ ವೇಣುಗೋಪಾಲನ್ನ ಹೃದಯ ಪ್ರ ಧಾನ ನಾಡಿಯ ಮಧ್ಯ ಕುಣಿಸುವ ತ್ರಾಣ ತರಿಸು ತೀವ್ರ ಮಹಿಮನೆ 2 ಲೋಕನಾಥನ ಪ್ರೇಮ | ಭೋಗಿಸುವ ಯೋಗಿಯೆ ಸಾಕು ಸದ್ಗುಣಧಾಮ ಬಾಗಿದಿನೊ ನಿನ್ನ ಅಂಘ್ರಿಗೆ | ಶೋಕ ಸಲ್ಲದೊ ನೇಮ ಸ್ವೀಕರಿಸು ಎಮ್ಮ ಏಕ ಭಕ್ತಿಯ ಭಾಗ್ಯ ಪಾಲಿಸು ಶ್ರೀ ಕಳತ್ರನ ಸಂಗಮತ್ತನೆ ಅ- ನೇಕ ಭಕ್ತಗ್ಹರಿಯ ತೋರಿದೆ ನಾಕ ತರು ಕರುಣಾಳು ಗುರುವರ 3 ದಾಸ ವರ್ಗದ ದೊರೆಯೆ | ಲಜ್ಜೆಯಾಗುತಿದೆನ್ನ ದೋಷರಾಶಿಗಳೊರಿಯೆ ಹಸಗೆಟ್ಟು ಬಗೆ ಬಿನ್ನೈಸಲಾಗದೊ ಖರಿಯೆ ಬ್ಯಾಸರದ ಪೊರಿಯೆ ಕಾಸು ಬಾಳದ ಎನ್ನಕರಗಳ ಶ್ರೀಶ ಪಿಡಿವನು ಲೇಸು ಕರುಣದಿ ವಾಸುದೇವಗೆ ದಾಸ ಜನರೊಳು ಸೂಸಿ ಸುರಿವುದು ಸ್ನೇಹ ಸಂತತ 4 ದಾತರೊಳು ಸರಿದಾರೊ | ಹರಿದಾಸವರ್ಯನೆ ಆತುಮಪ್ರದ ತೋರೋ ನಿನ್ನಂಥ ದಾತರ ನಾ ತಿಳಿಯ ದಯ ಬೀರೊ ಆರ್ತಿಯನು ಹೀರೋ ಖ್ಯಾತ ನಿನ್ನಯ ಮಾತು ಒಮ್ಮೆಗು ಮಾತರಿಶ್ವನನಾಥ ಮೀರನು ಆತುರದಿ ನಿನ್ನಂಘ್ರಿಗೆರಗುವೆ ಭೂತ ಪಾಲಿಸು ಹರಿಯ ಒಲುಮೆಗೆ 5 ಸುರತರು ಚಿಂತಾಮಣಿಗಳಂದದಿ ಮಹ ವರಗಳೀವ ಶ್ರೀಮಂತ ಭಾರತೀಶನ ಶ್ರೀ ಚರಣ ಬಿಡದಿಹ ಸ್ವಾಂತ ಪರಮ ನಿಶ್ಚಿಂತ ಚರಣ ಕಮಲದಿ ಮೊರೆಯನಿಟ್ಟನ ಕರದ ಶಿಶುಗಳಂತೆ ಪಾಲಿಸಿ ಮರುತ ಮಂದಿರ ಜಯೇಶವಿಠಲನ ಭರದಿ ತೋರಿದ ಕರುಣ ಸಾಗರ 6
--------------
ಜಯೇಶವಿಠಲ
ವೈಭವ ನೋಡಿರೈ ಪ ಗುರುವರೇಣ್ಯ ಸತ್ಯ ಪ್ರಮೋದ ತೀರ್ಥರು ಸಂಭ್ರಮದಲಿ ಮೆರೆದು ಬರುವ ವೈಭವ ನೋಡಿರೈ 1 ಪರಮಹಂಸ ಪರಿವ್ರಾಜಕಾದಿ ಸ ದ್ಬಿರುದುಗಳಿಂದಲಿ ಕರೆಸಿಕೊಳ್ಳುವ 2 ಅಂದಣದಲಿ ನಲುವಿಂದ ಪರಾಶರ ಕಂದನ ನಿರಿಶ್ಯಾನಂದ ಬಡುವ 3 ಸುಂದರ ರಾಜಮಹೇಂದ್ರ ಪುರದಿ ಜನ ಸಂದಹಿಯೋಳ್ಬುಧ ವೃಂದ ಬರುವ 4 ಮೋದತೀರ್ಥ ಸುಮತೋದಧಿ ಚಂದ್ರ ಪ್ರ ಮೋದ ತೀರ್ಥರಿವರೆಂದು ನುಡಿವ 5 ಮೇದಿನಿ ಸುರಕೃತ ವೇದ ಘೋಷಣ ಸು- ನಾದ ಭರಿತ ಬಹುವಾದ್ಯ ನಿನದ 6 ಪರವಶದಲಿ ತನುಮರೆದು ಕುಣಿವ7 ಕಂಡೆನು ಪರಮತ ಖಂಡನದಿ ಸುಧೆಯ ಮಂಡನೋತ್ಸವದಿ ಕಂಡುಬರುವ 8 ಚಲುವ ಗುರು ಚರಣ ಜಲಜಕೆ ನಮಿಸುತ ಲಲನೆಯರಾರುತಿ ಬೆಳಗುತಿರುವ 9 ನೇಮದಿ ಎಡಬಲ ಭೂಮಿಸುರರು ಕೈ ಚಾಮರ ಬೀಸುತ ಸಾಮ ಪಠಣ10 ಭಯವ ಪುಟ್ಟಿಸಿ ಹೃದಯದಿ ಮಾಯ್ಗಳ ಜಯ ಘೋಷದಿ ನಿರ್ಭಯದಿ ಬರುವ 11 ಕಾಣೆನು ಸತ್ಯಜ್ಞಾನ ತೀರ್ಥರ ಸ- ಮಾನ ಗುರುಗಳೆಂದಾನಮಿಸುವ 12 ಪಾವನತರ ಗೋದಾವರಿ ಸ್ನಾನದಿ ಶ್ರೀವರನಂಘ್ರಿಯ ಶೇವಿಸುವರ 13 ವಿದ್ವಜ್ಜನನುತ ಮಧ್ವಮುನಿಯ ಮತ ವೃದ್ಧಿಕಾರಿಣಿ ಪ್ರಸಿದ್ಧ ಸಭೆಯ 14 ಸಿರಿ ಕಾರ್ಪರ ನರಸಿಂಹನೆ ಪರನೆಂದರುಹುತ ಮೆರೆವ ಸಭೆಯ 15
--------------
ಕಾರ್ಪರ ನರಹರಿದಾಸರು
ವ್ಯರ್ಥವಾದೆನಲ್ಲ ನರಜನ್ಮದಿ ಜನಿಸಿ ನಾವ್ಯರ್ಥವಾದೆನಲ್ಲ ಪುರುಷೋತ್ತಮಾಚ್ಯುತ ನಂಘ್ರಿಯ ನೆನೆಯದೆ ಪ ಕೂಳಿನ ಬಲದಿಂದ ಬೆಳೆದಿಹ ಕಾಯದ ಮದದಿಂದ ಸಡಗರದಲಿ ದಿನಗಳೆದು 1 ಪರಗತಿಯನು ಕೊಡುವ ಮುರಾರಿಯ ಭಜಿಸದೆ 2 ಪುಣ್ಯ ಕ್ಷೇತ್ರಗಳ ನಾಮೆಟ್ಟಿದೆ ಮೀಯದೆ ತೀರ್ಥಗಳ ಪುರುಷರಸಂಗವ ಮಾಡದೆ 3 ಹರಿಶರಣರ ನಾ ನೋಡಿ ಎರಗದೆ ತುಚ್ಛತನವನೇ ಮಾಡಿ ಪೊಂದದೆ ಶ್ರೀಹರಿಯನರ್ಚಿಸದೆ 4 ಒಂದಿನ ಸುಖವಿಲ್ಲ ಕಾಲವು ಸಂದು ಹೋಯಿತಲ್ಲ ಕೋಣೆ ಇಂದಿರರಮಣ ಮುಕುಂದಮುರಾರೇ 5
--------------
ಕವಿ ಪರಮದೇವದಾಸರು
ವ್ಯಾಸರಾಯರ ಚರಣವನೆ ಸೇವಿಸಿ ಪ ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ. ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು 1 ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ 2 ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು 3 ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ 4 ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ 5 ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ 6 ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ 7 ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ 8 ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು 9
--------------
ಗುರುಗೋವಿಂದವಿಠಲರು
ಶಂಭೋ ಚಂದ್ರಶೇಖರ ಪ ವಂದಿಪೆ ನಿನ್ನಂಘ್ರಿಯುಗಳವ ಅ.ಪ ಭಜಿಸುವೆ ನಾನ ನಿನ್ನ ಶಂಕರ ಶಂಭೊ 1 ಶೈಲಸುತಾ ಚಿತ್ತಚೋರನೆ ಶೂಲಧರಾಘ ವಿದೂರನೆ 2 ಕರುಣಿಸೆನ್ನ ಸುಚರಿತ್ರನೆ ಶಂಭೊ 3
--------------
ಗುರುರಾಮವಿಠಲ
ಶ್ರೀ ಜಗನ್ನಾಥದಾಸ ನಮಿಪೆ ಗುರುರಾಜ ಸಾತ್ವಿಕವಪುಷ ಪ ಈ ಜಗದೊಳು ನಿಮಗೆಣೆಗಾಣೆ ಸತತ ನಿ - ವ್ರ್ಯಾಜದಿ ಹರಿಯ ಗುಣೋಪಾಸನೆ ಮಾಳ್ಪ ಅ.ಪ. ಹರಿದಾಸ ಕುಲವರ್ಯರೆನಿಸಿ ಕಲ್ಪತರುವಂದದಿ ಚರ್ಯ ಚರಿಸುತ ಧರೆಯೊಳು ಮೆರೆವ ಮಹಾತ್ಮರ ಚರಣೇಂದ್ರೀವರಯುಗ್ಮ ದರುಶನ ಮಾಳ್ಪರ ದುರಿತರಾಶಿಗಳಿರಗೊಡದೆ ನೆರೆ ಪರಮಮುಕ್ತಿಯ ದಾರಿ ತೋರುತ ಸಿರಿಸಹಿತ ಹರಿ ತೋರುವಂದದಿ ಕರುಣ ಮಾಳ್ಪ ಸುಗಣಮಹೋದಧಿ 1 ರವಿಯು ಸಂಚರಿಸುವಂತೆ ಭೂವಲಯದಿ ಕವಿಶ್ರೇಷ್ಠ ಚರಿಸಿದೆಯೋ ಅವಿರುದ್ಧ ತ್ರಯಿಜ್ಞಾನ ಪ್ರವಹಂಗದಲಿ ಭುವನೈಕ ವೇದವದ್ಯನ ಶ್ರವಣಭಕುತಿಯಿಂದ ದಿವಸ ದಿವಸದಿ ಪ್ರೀತಿ ಬಡಿಸುತ ಧ್ರುವವರನಂಘ್ರಿಗಳಿಗರ್ಪಿಸಿ ಭುವನ ಪಾವನ ಮಾಡಲೋಸುಗ ಅವನಿ ತಳದಿ ವಿಹರಿಸುತಿಹ ಗುರು 2 ಅಹೋ ರಾತ್ರಿ ಕ್ಷಣ ಬಿಡದೆ ಸನ್ಮನ ಹೃ - ದ್ಗುಹಾಧೀಶನನು ಬಿಡದೆ ಅನುದಿನ ಸ್ಮರಿಸುತ ಸಹನದಿ ಶಮದಮಯತು ನಿಯಮಗಳನ್ನು ವಹಿಸಿ ಶ್ರೀದವಿಠಲನಂಘ್ರಿಯ ಮಹಿಮೆ ತೋರುತ ಪೂಜಿಸುತ ಬಲು ಮಹಿತಪೂರ್ಣಾನಂದತೀರ್ಥರ ವಿಹಿತ ಶಾಸ್ತ್ರಗಳರಿತು ಬೋಧಿಪ 3
--------------
ಶ್ರೀದವಿಠಲರು