ಒಟ್ಟು 1559 ಕಡೆಗಳಲ್ಲಿ , 113 ದಾಸರು , 1275 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆ ಅಂಜಬ್ಯಾಡ ಅಂಜಬ್ಯಾಡೆಲೋ ಜೀವ ಭವ ಭಂಜನ ಹರಿ ಶರಣರ ಕಾವಾ ಪ ಮಾತ ಹೇಳುವೆ ನಿನಗೊಂದ ಪರರಜ್ಯೋತಿ ಕಾಣುವತನಕೀ ಬಂಧ ಭೂತ ಭೇತಾಳಗಳಿಂದ ನಿನಗೆ ಭೀತಿ ಪುಟ್ಟಲಿಲ್ಲೋ ಮತಿಮಂದ 1 ಛೇದ ಭೇದಗಳು ನಿನಗೆಲ್ಲಿ ನೀ ಅ- ನಾದಿ ನಿತ್ಯವೆಂಬುದ ಬಲ್ಲಿ ವೇದ ಬಾಹ್ಯರಾಗದೆ ಇಲ್ಲಿ ಹರಿ ಪಾದ ಇನ್ಯಾಕೆ ಪೂಜಿಸಲೊಲ್ಲಿ 2 ನೀನು ನಿನ್ನದು ಅಲ್ಲವೋ ನೋಡಾ ದೇಹ ನಾನು ನನ್ನದೆಂಬರೋ ಮೂಢಾ ಮಾನಹಾನಿ ಮಾಡಿಕೊಳಬೇಡ ಬಿಡು ಸಾನುಬಂಧಿಗಳ ಸ್ನೇಹವ ಗಾಢ 3 ಅಹಿತಾದಿ ವಿಭೂತಿಯ ನೋಡೋ ಸೋಹಂ ಎಂಬರೆ ವಿಘಾತಿಯ ನೇಹವ ಪಡೆವರೆ ಗೀತೆಯ ಕೇಳಿ ಮೋಹವ ಕಳಕೋ ವಿಜಾತಿಯ 4 ಮಧ್ವವಲ್ಲಭ ಮಾಡಿದ ಗ್ರಂಥ ದೊಳಗದ್ವೈತತ್ರಯ ತಿಳಿದಂಥ ವಿದ್ವಾಂಸರು ಚರಿಸುವ ಪಂಥವನ್ನು ಸದ್ಭಕ್ತಿಲಿ ಸಾಧಿಸು ಭ್ರಾಂತ 5 ಜಾಗರ ಸ್ವಪ್ನ ಸುಷುಪ್ತಿಗಳೊಳು ವರ ಭೋಗಿಶಯನನ ರೂಪಗಳೇಳು ಭಾಗವತ ಬಲ್ಲವರ ಕೇಳು ಬೃಹ- ದ್ಯಾಗವ ಹರಿಗರ್ಪಿಸಿ ಬಾಳು 6 ಪಂಚಾತುಮ ಸಿಲುಕವ ಷಟ್ ಪಂಚ ಪಂಚಿಕೆಗಳ ಕರ್ಮವ ಮೀಟಿ ಪಂಚಿಕೆ ತಿಳಿದುಕೊಂಡರೆ ನಿಷ್ಪ್ರ ಪಂಚನಾಗಿ ನೀ ಕಡೆದಾಟಿ7 ಜ್ಞಾನೇಚ್ಛಾ ಕ್ರಿಯಾ ಶಕ್ತಿಗಳೆಂಬ ಈ ಮ- ಹಾನುಭಾವದಿ ನಿನ್ನ ಬಿಂಬ ತಾನೇ ಸರ್ವತ್ರದಲಿ ಕಾಂಬ ಇದ- ಕೇನು ಸಂದೇಹವಿಲ್ಲವೋ ಶುಂಭ 8 ತಾಪತ್ರಯಂಗಳು ನಿನಗೆಲ್ಲಿ ಪುಣ್ಯ ಪಾಪಕ್ಕೆ ಲೇಪನಾಗೋಕೆ ಹೊಲ್ಲ ಪ್ರಾಪಕ ಸ್ಥಾಪಕ ಹರಿಯೆಲ್ಲ ಜಗ ದ್ವ್ಯಾಪಕನೆಂದರಿತರೆ ಕೊಲ್ಲ 9 ಡಿಂಭದೊಳಗೆ ಚೇತನವಿಟ್ಟು ಜಗ- ದಂಬಾರಮಣ ಮಾಡಿದ ಕಟ್ಟು ಉಂಬುಡುವ ಕ್ರಿಯೆಗಳನಷ್ಟು ನಿನ್ನ ಬಿಂಬನಾಧೀನನಾದರೆ ಇಷ್ಟ 10 ಲಕ್ಕುಮಿ ಅವನ ಪಟ್ಟದ ರಾಣಿ ದೇ- ವರ್ಕಳು ಪರಿಚಾರಕ ಶ್ರೇಣಿ ವಕ್ಕಲು ನಾವೆಲ್ಲರು ಪ್ರಾಣಿ ದಶ- ದಿಕ್ಕುನಾಳುವ ನಮ್ಮ ದೊರೆಯ ನೀ 11 ಮತ್ರ್ಯಲೋಕದ ಸಂಪದ ಪೊಳ್ಳು ಜಗ ಮಿಥ್ಯಮತವೆಂದಿಗು ಜೊಳ್ಳು ಶ್ರುತ್ಯನ್ನರ್ಥ ಪೇಳ್ವದೇ ಸುಳ್ಳು ನೀ ಭೃತ್ಯನು ಕರ್ತನಾಗದಿರೆಲೋ ಕೇಳು12 ಮಾಧವನಲಿ ತನುಮನ ಮೆಚ್ಚು ಕ್ರೋಧರೂಪದ ಕಲಿಮಲ ಕೊಚ್ಚು ಮೋದತೀರ್ಥರ ವಚನವ ಮೆಚ್ಚು ವಾದಿ ಮತಕ್ಕೆ ಬೆಂಕಿಯ ಹಚ್ಚು 13 ಸವಿವುಳ್ಳರೆ ಕೇಳೆನ್ನಯ ಸೊಲ್ಲ ನಮ್ಮ ಪವನನಯ್ಯನ ಪ್ರೇರಣೆಯಿಲ್ಲ ಎವೆಯಿಕ್ಕಲರಿಯದೀ ಜಗವೆಲ್ಲ ಎಂದು ಶಿವ ತನ್ನ ಸತಿಗೆ ಹೇಳಿದನಲ್ಲ 14 ಧ್ರುವ ಬಲ್ಯಾದಿ ರಾಯರ ನೋಡು ನಿನ್ನ ಅವಗುಣಗಳನೆಲ್ಲಾ ಈಡ್ಯಾಡೋ ಅವಶ್ಯವಾಗಿ ಕರ್ಮವ ಮಾಡೋ ಮಾ- ಧವ ನಿನ್ನವನೆಂದು ನಲಿದಾಡೋ 15 ನಿಂದಾ ಸ್ತುತಿಗಳ ತಾಳಿಕೋ ಬಲು ಸಂದೇಹ ಬಂದಲ್ಲಿ ಕೇಳಿಕೋ ಬಂದವರಿಂದಲಿ ಬಾಳಿಕೋ ಗೋ- ವಿಂದ ನಿನ್ನವನೆಂದು ಹೇಳಿಕೋ 16 ತತ್ವವಿಚಾರವ ಮಾಡಿಕೋ ನಿನ್ನ ಭಕ್ತಿಯ ಆಳವ ಅಳಿದುಕೋ ಮಾಯಾ ಮೋಹ ಕಳೆದುಕೋ ನಿನ್ನ ಹತ್ತಿರ ಹರಿಯಿರುವ ನೋಡಿಕೋ 17 ಹಿಂಡು ದೈವಗಳಿಂದ್ಹಿರಿಯನೀತ ತನ್ನ ತೊಂಡನೆಂದದವರಿಗೆ ತಾ ಸೋತಾ ದಂಡಿಸಿ ದಯಮಾಡುವ ದಾತಾ ಭೂ- ಮಂಡಲದೊಳಗೆಲ್ಲ ಪ್ರಣ್ಯತಾ 18 ನಾಡ ಖೋಡಿ ದೈವಗಳಂತೆ ತನ್ನ ಬೇಡಲು ತಾ ಬೇಡಿಕೊಳನಂತೆ ನೀಡುವ ನಿಖಿಳಾರ್ಥವದಂತೆ ನಿಜ ನೋಡಿಕೋ ನಿನಗ್ಯಾತರ ಚಿಂತೆ 19 ಏನು ಕೊಟ್ಟರೆ ಕೈಚಾಚುವ ತನ್ನಾ- ಧೀನವೆಂದರೆ ನಸುನಾಚುವಾ ದಾನವ ಕೊಡಲೂರಿ ಗೀಚುವ ತನ್ನಲಿ ತಾನೇವೇ ಮನದೊಳು ಸೂಚುವ20 ಕರಕರದಲ್ಲಿ ತಾ ಬರುವಾನು ಮರತುಬಿಟ್ಟವರ ತಾ ಮರೆಯಾನು ನಿಜ ಶರಣರ ಕಾದುಕೊಂಡಿರುವಾನು ತನ್ನ ಸರಿಯಂದವರ ಹಲ್ಲು ಮುರಿದಾನು 21 ಆರು ಮುನಿದು ಮಾಡುವದೇನು ಪ್ರೇರ್ಯ ಪ್ರೇರಕರೊಳಗಿದ್ದು ಹರಿ ತಾನು ಓರಂತೆ ಕಾರ್ಯವ ನಡೆಸೋನು ಮುಖ್ಯ ಕಾರಣ ಶ್ರೀಹರಿ ಅಲ್ಲವೇನೋ 22 ಹಲವು ಹಂಬಲಿಸಲ್ಯಾತಕೆ ಹುಚ್ಚಾ ವಿದ್ಯಾ ಕುಲಶೀಲಧನದಿಂದ ಹರಿ ಮೆಚ್ಚಾ ಕಲಿಯುಗದೊಳಗಾರ್ಯರ ಪೆಚ್ಚಾ ತಿಳಿ ಸುಲಭೋಪಾಯಾದಿಗಳ ನಿಚ್ಯಾ 23 ದುರ್ಜನರೊಳು ದೈನ್ಯ ಬಡದಿರು ಸಾಧು ಸಜ್ಜನರೊಳು ವೈರ ತೊಡದಿರು ಅರ್ಜುನಸಖನಂಘ್ರಿ ಬಿಡದಿರು ನಿ- ರ್ಲಜ್ಜನಾಗಿ ಬಾಯ್ಬಿಡದಿರು 24 ಭಯರೂಪದಿ ಒಳಹೊರಗಿದ್ದು ನಿ- ರ್ಭಯ ನಾಮಕನು ಧೈರ್ಯವನೆ ಗೆದ್ದು ಭಯದೋರುವನೆಂಬುದೆ ಮದ್ದು ಮಹಾ ಭಯಕೃದ್ಭಯಹಾರಿಯನೆ ಪೊಂದು 25 ಪರಸತಿಯರ ಸಂಗವ ಬಿಡು ಹರಿ ಸರ್ವೋತ್ತಮನೆಂದು ಕೊಂಡಾಡು ಪರಮಾತ್ಮನ ಧ್ಯಾನವ ಮಾಡು ನರ ಹರಿದಾಸರಂಗಳ ಒಡಗೂಡು 26 ಸೃಷ್ಟಿಗೊಡೆಯ ಶ್ರೀದವಿಠಲ ವಿಷ್ಟಾವಿಷ್ಟನಾಗಿದ್ದೆಲ್ಲ ಇಷ್ಟಾನಿಷ್ಟವ ಕೊಡಬಲ್ಲ ಮನ- ಮುಟ್ಟಿದವರ ಬೆಂಬಿಡನಲ್ಲಾ 27
--------------
ಶ್ರೀದವಿಠಲರು
ಆತ್ಮನಿವೇದನೆ ನೆಂತು ಪೂಜಿಸಿದೆನೈ ನೀರಜಾಕ್ಷ ಪ ಕಂತುಪಿತ ಎನ್ನ ನೀ ಕಾಯ್ವೆಯೆಂತೊ ಕಮಲಾಕ್ಷ ಅ.ಪ ಗಂಗೆಯುದಕದಿ ಮಿಂದು ಸಿಂಗರದ ಮಡಿಯುಟ್ಟು ಮಂಗಳದ ನಾಮ ಮುದ್ರೆಗಳ ಧರಿಸೀ ಅಂಗಕರಣಗಳ ಶೋಧಿಸಿ ನ್ಯಾಸ ಮಂತ್ರದಿಂ ದಂತ ರಂಗದಿ ಬಿಂಬಮೂರ್ತಿಯ ಚಿಂತಿಸಿದೆನೇ1 ನಿರ್ಮಲೋದಕದಿಂದ ಅಭಿಷೇಚನವ ಗೈದು ನಿರ್ಮಾಲ್ಯ ತೀರ್ಥವನು ಸೇವಿಸಿದೆನೇ ಮರ್ಮವರಿತಾದಿಮೂರ್ತಿಯೆ ನಿನ್ನ ಬಿಂಬವನು ನಿರ್ಮಲಾಂತಃಕರಣ ಪೀಠದಲಿ ನಿಲಿಸಿದೆನೇ 2 ಶುಭ್ರವಸ್ತ್ರಗಳ ಪರಿಮಳ ಗಂಧ ಪುಷ್ಪಗಳ ನಘ್ರ್ಯ ತುಳಸಿಗಳನರ್ಪಿಸಿ ನಲಿದೆನೇ ಅರ್ಭಕನು ನಾ ಕನಕರತ್ನಾಭರಣಗಳನು ಅಬ್ಧಿ ತನಯಳರಮಣ ನಿನಗೆ ಅರ್ಪಿಸಿದೆನೇ 3 ಧೂಪದೀಪಗಳಿಂದ ವಾದ್ಯ ವೈಭವದಿಂದ ರಾತ್ಮನೆಂದರಿತು ನೈವೇದ್ಯವರ್ಪಿಸಿದೆನೇ 4 ವಿವಿಧ ಖಾದ್ಯಗಳಲ್ಲಿ ವಿವಿಧ ರಸ ರೂಪದಲಿ ವಿವಿಧ ಸಾನ್ನಿಧ್ಯಗಳ ಧ್ಯಾನಿಸಿದೆನೇ ಭವರೋಗಪೀಡಿತನು ನಾ ನಿನ್ನ ಹವಣರಿತು ಸುವಿಹಿತ ವಿಧಿಯಂತೆ ಪೂಜಿಸುವ ಪರಿಯೆಂತೋ5 ಸರ್ವಶಕ್ತನು ನೀನು ಸರ್ವಜ್ಞಪತಿ ನೀನು ಸರ್ವದಾ ತೃಪ್ತನೋ ನಿಗಮವೇದ್ಯಾ ಸರ್ವಭೂತಾಂತರ್ಗತನು ನಿನಗೆ ಉಣಬಡಿಸೆ ಗರ್ವಿಶಠನಜ್ಞತಮನೆನಗೆ ವಶವೇ 6 ವೇದಶಾಸ್ತ್ರಗಳ ಗಂಧವನರಿಯೆ ಹರಿಯೆ ನಿನ ಸಾದರದಿ ನಮಿಪೆ ಪೊರೆ ರಘುರಾಮವಿಠಲ 7
--------------
ರಘುರಾಮವಿಠಲದಾಸರು
ಆತ್ಮನಿವೇದನೆ ಮತ್ತು ಲೋಕನೀತಿ ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ ಜನರೊಳಗೆ ನಾನೋರ್ವ ಮನಜಾಧಮ ಪ ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ ಖೂನವಿಲ್ಲದೆ ಜ್ಞಾನ ಹೀನನಾಗಿ ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು ಶ್ವಾನನಂದದಿ ದಿನವ ನಾ ನೂಕಿದವನಯ್ಯ 1 ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು 2 ನೇಮಪೂರ್ವಕ ಒಂದು ಯಾಮವಾದರು ಮನದಿ ಶಾಮಸುಂದರ ಧ್ಯಾನ ಮಾಡದೆ ಕಾಮಾರಿ ಷಡ್ವೈರಿ ಸ್ತೋಮಕ್ಕೆ ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು3
--------------
ಶಾಮಸುಂದರ ವಿಠಲ
ಆತ್ಮಶೋಧನೆ ಎಲ್ಲರಲ್ಲಿಹ ಲಕ್ಷ್ಮೀನಲ್ಲ ಪೊರೆಯೊ ನಿಲ್ಲದಿಹ ಮನವ ನಿನ್ನಲ್ಲೆ ಇರಿಸೋ ಪ ಇಲ್ಲಿ ಯಾರಿಲ್ಲೆಂದು ಮೆಲ್ಲನೆ ಪರಸತಿಯ ಕಳ್ಳತನದಲಿ ಕೂಡಿ ಸುಳ್ಳು ಹೇಳಿ ಎಲ್ಲ ಕಡಿ ದಿಗ್ದೇವ ತತ್ವೇಶರಲ್ಲಿರುವ ಪುಲ್ಲನಾಭನೆ ನಿನ್ನ ವ್ಯಾಪಾರವರಿಯೆ 1 ಅರುಣನುದಯದಲೆದ್ದು ಪರರ ವಂಚನೆಗಾಗಿ ಅರಿಯದೆ ದ್ರವರೂಪ ಮನರೂಪ ಮೊದಲಾದ್ದು ಅರಿಷಟ್ಕರಿಂದ ಪರರೊಡವಿಯನು ಬಯಸುವೆನು 2 ಅಂಗಡಿಯ ತೆರದಿ ನಾನ್ಹಿಂಡುಗೊಂಬೆಗಳ್ಹೂಡಿ ಅಂಗ ಚಲಿಸದೆ ಮೂಗು ಹಿಂಡುತಲೆ ಕುಳಿತು ಅಂಗಜ ಜನಕ ಶ್ರೀ ನರಹರಿಯ ಧ್ಯಾನಿಸದೆ ಭಂಗಕೆ ಗುರಿಮಾಳ್ವ ಮಣ್ಣು ಚಿಂತೆಪೆನೊ 3
--------------
ಪ್ರದ್ಯುಮ್ನತೀರ್ಥರು
ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ ಮೇಲುನಭದಿ ಮೆರೆವಾ ನೋಡೋ 1 ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ 2 ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ 3
--------------
ಶಾಮಸುಂದರ ವಿಠಲ
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಆನಂದಕರಮಾದ ಇಂದಿರಾರ್ಯ ತವ ಧ್ಯಾನಾನಂದೆನಗೆ ದಯಪಾಲಿಸು ಪ ನೊಂದೆ ಭವದೊಳು ಬಿದ್ದು ಮಂದನಾಗಿ ತಿಳಿಯದೆ ಅಂದಮಾದ ತವ ಮಹಿಮೆಯ ದೇವ ಅ.ಪ ಕಾಣುವ ಜಗವೆಲ್ಲ ಏನೆಂಬ ನಿಜತವನು ನಾನರಿಯದೊರಲುತಿಹೆನು ನಾನಿಲ್ಲದಮೊದಲು ಏನಿತ್ತು ಎಂಬುದನು ನಾನೆಂತು ತಿಳಿಯುವೆನು ನಾನು ಯಾರೆಂಬ ನಿಜ ಖೂನವರಿಯದೆ ಬಲು ಹೀನತೆಗೆ ಬಂದಿದ್ದೆನು ನೀನೆ ಸ್ವತಂತ್ರಖಿಲ ದೀನಗರಿವಿಕೆ ನೀಡಿ ಜ್ಞಾನದಿಂ ಪೊರೆ ದಯದಿ ಜವದಿ 1 ಎಲ್ಲಿರ್ದೆಮೊದಲು ನಾನೆಲ್ಲಿಂದ ಬಂದೆ ಮ ತ್ತೆಲ್ಲಿಗೆ ಪೋಗುವೆನು ಎಲ್ಲಿರುವೆ ಈಗ ನಾನೆಲ್ಲಿಂದ ನುಡಿಯುವೆನು ಎಲ್ಲಿಗೆ ಕೊಡುವೆನು ಎಲ್ಲನಿಂದಿದರೊಳಗೆ ಇಲ್ಲದ್ದು ಕಲ್ಪಿಸಿ ಎಲ್ಲಿಂದ ಕಾಂಬುವೆನು ಎಲ್ಲಿಟ್ಟಿರುವಿದರ ಸಲ್ಲಲಿತ ಸೂತ್ರವನು ಪುಲ್ಲನಾಭ ದಯಪಾಲಿಸು ತಿಳಿಸು 2 ಆರೊಂದುಗೇಣಿನಾಪಾರ ಸೂತ್ರದಗೊಂಬೆ ಆರಿಂದಲಾಗಿಹ್ಯದು ಸೋರುತಿಹ್ಯ ಒಂಬತ್ತು ದ್ವಾರಹಚ್ಚಲು ಇದರ ಕಾರಣವೇನಿಹ್ಯದು ತೋರುವುವು ಇದರೊಳಗೆ ಮೂರುವಿಧಮಾಗಿ ಆರಸಾಕ್ಷದಕ್ಕಿಹ್ಯದು ತೋರದೇನೇನಿದರ ತಾರತಮ್ಯಜ್ಞಾನ ಸುವಿ ಚಾರ ಎನಗೊಲಿದು ತಿಳುಹು ಸಲಹು 3 ಕಾಲು ಕಯ್ಯಿಗಳಾಡಿ ಬೀಳುವೇಳುವ ಮೂಲ ಕೀಲಿಯೆಲ್ಲಿರುತಿಹ್ಯದು ಜ್ಯಾಲದಂದದಿ ಹರಕು ಚೀಲದೊಳು ತುಂಬಿರುವ ಗಾಳ್ಯೆಂತುನಿಂತಿಹ್ಯದು ಕಾಲಮಹಿಮ ನೀ ಗೈದ ಮೇಲುಯಂತ್ರದಿ ಇಂದ್ರ ಜಾಲವೇ ತುಂಬಿಹ್ಯದು ಕಾಲಚಕ್ರನ ಮಹ ದಾಳಿಯನು ಗೆಲಿಸಿ ತವ ಲೀಲೆಯೊಳೆನ್ನಾಡಿಸು ಪಾಲಿಸು 4 ಬಂಧರೂಪಕಮಾದ ದಂದುಗದ ಭವವು ದಾ ರಿಂದಲುತ್ಪತ್ತಿ ಯಾಯ್ತು ಸತಿ ಸುತರು ಬಂಧಬಳಗ ಎ ಲ್ಲಿಂದ ಬಂದಿವಗೆ ಜೊತೆಗೂಡಿತು ಒಂದಕ್ಕೊಂದರ ಸಂಬಂಧವೇ ಇಲ್ಲಿವಗೆ ಬಂಧ ಮತ್ತೆಲ್ಲೊದಗಿತು ನಿಂದುನೋಡಲು ಸಕಲ ತಂದೆ ಶ್ರೀರಾಮ ನಿನ್ನಿಂದ ಕಂಡು ನಿನ್ನೊಳೈಕ್ಯ ಮಾಯ ಖರೆಯ 5
--------------
ರಾಮದಾಸರು
ಆನಂದಮಯನಾದೆ ನಾನು ದಿವ್ಯ ಜ್ಞಾನಾಮೃತವನುಂಡು ಪೇಳಲಿನ್ನೇನು ಪ ಶರೀರ ಭ್ರಾಂತಿಗಳನೆಲ್ಲ ಕಳೆದು ಕರ್ಮ ದುರಿತ ಸಂಸಾರ ಆಶಾಪಾಶವಳಿದು ನರನೊಳಗೆ ನರನಾಗಿ ಸುಳಿದು ಸರ್ವ ಪರಿಪೂರ್ಣ ಭರಿತ ತಾನೆಂಬುದು ತಿಳಿದು 1 ಗುರುಕಟಾಕ್ಷದ ನೆಲೆ ನೋಡಿ ತಿರುಗಿ ಬರುವ ಹೋಗುವ ಭ್ರಮೆಗಳನೀಡಾಡಿ ಶರಣರ ಸ್ತೋಮದಿ ಕೂಡಿ ಭವ ಶರಧಿಯ ದಾಟಿ ಹಂಸಾತ್ಮಕನೊಳಾಡಿ ಆನಂದ 2 ಗುರುಚರಣಗಳ ಧ್ಯಾನಿಸುತಾ ಒಡನೆ ಎರಕವಾದಂತೆ ಬೇರೂರಿತು ಚಿತ್ತಾ ವರವಿಮಲಾನಂದ ಗುರುದತ್ತಾತ್ತೇಯನ ಕರುಣಾಸಮುದ್ರದೊಳ್ಬೆರೆದು ನಲಿವುತ್ತಾ ಆನಂದ 3
--------------
ಭಟಕಳ ಅಪ್ಪಯ್ಯ
ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ 1 ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ 2 ಮಧ್ವಮತವ ಉದ್ಧರಿಸ್ಯಾನೇ ವೆಂಕಟ ವಿಠಲನೆಂಬಾನೆ 3
--------------
ರಾಧಾಬಾಯಿ
ಆರಗೊಡವೆ ನಮಗಿನ್ಯಾಕೊ ಹರಿ ಅ ಪಾರ ಮಹಿಮನ ದಯವೊಂದೆ ಸಾಕೊ ಪ ಮಾರಿಗೀರಾಗಲಿ ದೂರಿ ಸಕಲರೆನ್ನ ಸಾರಸಾಕ್ಷನ ಬಲವೊಂದೆ ಬೇಕೊ ಅ.ಪ ಜಗಜನ ಕಂಡಂತೆ ಬೊಗಳಲಿ ಬೊಗಳಿ ಬೊಗಳಿ ನಮ್ಮ ಶಪ್ಪರಿಯಲಿ ನಿಗಮಾಗಮನುತ ಜಗಜೀವೇಶನ ಸೊಗಸಿನ ಕೃಪೆಯೊಂದೆ ನಮಗಿರಲಿ 1 ದುರುಳ ಕೃತ್ತಿಮನೆಂದು ಜರಿಯಲಿ ಜರಿಜರಿದು ಮರೆದ್ಹೋಗಲಿ ಚರಣದಂತಿ ಪರಮ ಪಾವನಂಘ್ರಿ ಕರುಣಾಮೃತವೊಂದೆ ನಮಗಿರಲಿ 2 ಕ್ಷೇಮ ತುಸು ಕಾಣದಳಿದ್ಹೋಗಲಿ ಕಾಮಜನಕ ನಮ್ಮ ಸ್ವಾಮಿ ಶ್ರೀರಾಮನ ನಾಮಧ್ಯಾನವೊಂದೇ ನಮಗಿರಲಿ 3
--------------
ರಾಮದಾಸರು
ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ಪ ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ 1 ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ 2 ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ 3 ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ 4 ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ ಕೃಷ್ಣನ ನೀಲಕಂಠನ ಸಹಿತ ಕುಳಿತ್ವಿಶಾಲನೇತ್ರೆ ಪಾರ್ವತಿಗೆ5
--------------
ಹರಪನಹಳ್ಳಿಭೀಮವ್ವ
ಆವ ಬಗೆಯಲಾದರು ಕರುಣದಿ ದೇವ ಕೃಪೆದೋರೋ ಪ. ಭಾವ ಭಕುತಿಯಲಿ ತೋಯಜಾಕ್ಷನೆ ನಿನ್ನ ಕಾವ ಕರುಣಿಯೆಂದು ಭಾವಿಸಿ ಕರೆವೆನು ಅ.ಪ. ವಿಪ್ರರಾಗಮವಾದರೂ ಸರಿ ಕ್ಷಿಪ್ರದೊಳವನ ಸಂಗದಿ ಅಪ್ಪಾ ನೀ ನೆರೆಯುವ ಸಪ್ಪಳಾ ತೋರುತ ಬಪ್ಪೆ ಎಂದೆನೆವೆನು ಅಪ್ಪ ತಿಮ್ಮಪ್ಪನೇ 1 ಮಕ್ಕಳೊಳಗಾದರೊ ನಿನ್ನಯ ಆಟ ಪಕ್ಕನೆ ತೋರೋ ದೇವನೆ ಚಿಕ್ಕ ಕೃಷ್ಣನೆ ನಿನ್ನ ರೂಪವ ನೆನೆಯುತ ಪರಿ 2 ಮನೆಗೆಲಸದೊಳು ನಿನ್ನಯ ಧ್ಯಾನ ತನು ಮನ ನೆನೆಯುತಲಿ ದಿನದಿನದಲಿ ಸುಖ ದುಃಖದೊಳು ಮನಸಿಜಪಿತ ನಿನ್ನ ನೆನಸುವ ಪರಿಯಲಿ 3 ಹಿರಿಯರಾಗಮವಾಗಲು ನಾನವರೊಳು ಕಿರಿಯಳಂದದಿ ಇರುವ ಪರಿ ಮನವನಿತ್ತೂ ಪೊರೆ ಕರುಣಾಳು ಕರಣ ಶುದ್ಧಳಾ ಮಾಡಿ ಕರೆ ನಿನ್ನ ಬಳಿಗೆ 4 ಕನಸಲಾದರೂ ನಿನ್ನ ಮನಸಿಜಪಿತನೆ ಮನನ ಮಾಡುತ ನೆನೆಯುವ ಘನಕೃಪೆಯಿತ್ತು ಎನ್ನ ಜನುಮ ಸಾರ್ಥಕಗೊಳೆ ಈತನು ನಿನಗರ್ಪಿಸಿಹೆ ದಿನಮಣಿ ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ಪ. ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನಅ.ಪ. ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ 1 ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ 2 ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊಜ್ಞಾನಿಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ 3
--------------
ವಾದಿರಾಜ
ಆವದಾದರು ಏನು ಲಿಂಗವಾದರು ಆಯ್ತು | ಆವ ಕುಲವದು ಏನು ಜ್ಞಾನಿ ಕರ್ಮವು ಹೋಯ್ತು ಪ ಆವ ಅನ್ನವು ಏನು ಉಣಲ್ಹಸಿವು ಹೋಯಿತು | ಆವ ಮುದ್ರೆಯು ಏನು ಧ್ಯಾನಾನಂದವ ತೋರಿತು 1 ಆವ ವಸ್ತ್ರವು ಏನು ಶೀತ ಬಾಧೆ ನೀಗಿತು | ಆವ ಅಗ್ನಿ ಏನು ದಿವ್ಯ ಕಾಂತಿ ಬೆಳಗಿತು 2 ಪಾದ ಸೋಂಕಲಾಯಿತು | ಮುಂದೆ ಭವಕೆ ಬಾರದಂತೆ ಹೊಂದಿಕೊಂಡು ಹೋಯಿತು 3
--------------
ಭಾವತರಕರು
ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ