ಒಟ್ಟು 80 ಕಡೆಗಳಲ್ಲಿ , 34 ದಾಸರು , 79 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಟ್ಟು ಚಟ್ಟೆಂದು ನಗುವಯ್ಯನಿನ್ನ ತಿಳಿಯಯ್ಯಮುಟ್ಟು ಚಟ್ಟೆಂಬುದು ನಗುವಯ್ಯಮುಟ್ಟಿದು ಆದುದು ನಿನ್ನಿಂದಲೆಮುಟ್ಟಿಗೆ ಸಾಕ್ಷಿಯು ನೀಪರವಸ್ತುಪತಿಂಗಳು ತಿಂಗಳು ರಕ್ತಕಲಕು ಘಟ್ಟಾಗಿ ಬಲಿತುಇಂಗಾ ಇಂಗಡದ ವಯವ ಜಿಗಿತುಅಂಗಾಯಿತು ತೆರದಅಂಗವ ಮುಟ್ಟಿರಿ ಮುಟ್ಟಿರಿ ಎಂದುಮಂಗನ ತೆರದಲಿ ಕುಣಿವುದು ಮುಟ್ಟು1ಮೃಗಜಲದಂತೆಮಾಯೆಮುಟ್ಟುಆದುದು ಯಥೇಷ್ಟಬಗೆಬಗೆ ರೂಪಳವಟ್ಟುತೋರಿದವದುರಿಟ್ಟುನಗಸಾಗರನದಿ ನರಸುರ ಕ್ರಿಮಿಪಶುನಗಧರಹರವಿಧಿ ಲೋಕವೆ ಮುಟ್ಟು2ಮುಟ್ಟು ಭಟ್ಟರು ಹೇಳುವಂತಿಲ್ಲಬೆಳಗಿದುದು ಎಲ್ಲಅಷ್ಟಾಗಿ ಕಳೆಥಳಿಥಳಿಪುದೆಲ್ಲತನ್ನರಿದವ ಬಲ್ಲಶಿಷ್ಟ ಚಿದಾನಂದ ನೀನೆಂದು ಕಾಣಲುಮುಟ್ಟಿಗೆ ಜಾಗವಿಲ್ಲ ನೀಚರ ವಸ್ತು ನಿಜ ಬ್ರಹ್ಮ3
--------------
ಚಿದಾನಂದ ಅವಧೂತರು
ಮುದ್ದು ಪಾಂಡವರನ್ನ ಗೆದ್ದು ಕೈಚಪ್ಪರಿಸಿಗತ್ತಿಲೆಕಾಳಿ ರುಕ್ಮಿಣಿ ಹೊಯಿಸಿದಳು ಪ.ಅಚ್ಯುತಪಾಂಡವರಿಗೆ ಹುಚ್ಚು ಹಿಡಿಸಿದನೆಂದುಉತ್ಸಾಹದಿಂದಭೇರಿಹೊಯ್ಸಿದಳು1ಮಡದಿ ದ್ರೌಪತಿ ಭದ್ರಾ ಅಡಗಿದರು ಅಂಜಿ ನಮಗೆಎಂದು ಬೆಡಗಿನಡಂಕಿರುಕ್ಮಿಣಿ ಹೊಯ್ಸಿದಳು2ಕಾಂತೆ ದ್ರೌಪತಿ ಭದ್ರಾ ಭ್ರಾಂತರಾದರೆಂದುಕಾಂತೆಯರು ಕೈ ಹೊಯ್ದು ನಿಂತಾರೆಲ್ಲ 3ಪುಟ್ಟಸುಭದ್ರೆಯು ಧಿಟ್ಟ ದ್ರೌಪತಾದೇವಿಬಿಟ್ಟಟ್ಟೆರುಆಣಿಎಂದು ಘಟ್ಟನುಡಿದು4ಧಿಟ್ಟೆರಿಬ್ಬರಗರವು ಕುಟ್ಟಿ ಚೂರ್ಣವ ಮಾಡಿಬಿಟ್ಟರು ಆಣಿಯ ಎಂದು ಸ್ಪಷ್ಟ ನುಡಿದರು 5ತಪ್ಪು ಸತ್ಯಭಾಮೆ ತಪ್ಪು ತಪ್ಪುರುಕ್ಮಿಣಿ ದೇವಿತಪ್ಪುತಪ್ಪು ತಪ್ಪು ಎಂದು ಕೈಯ ಒಪ್ಪಾಗಿ ಮುಗಿದರು 6ತಂದೆ ರಾಮೇಶನ ಮುಂದೆ ರುಕ್ಮಿಣಿದೇವಿವಂದಿಸಿ ದೇವಿಯರೆಲ್ಲ ನುಡಿದರು 7
--------------
ಗಲಗಲಿಅವ್ವನವರು
ರಾಮನ ನೋಡಿರೈ ರಘುಕುಲಸೋಮನ ಪಾಡಿರೈ ಪ.ಜೀಮೂತಶ್ಯಾಮಲಕಾಯ ಜನಕಜಾಮಾತಸೀತಾಕಾಂತಅ.ಪ.ಕೋಟಿದಿವಾಕರನಿಭ ಮಕುಟದ ಮಸ್ತಕದ ಮುದ್ದಿನ ಮುಖದನೀಟಹ ಪಣೆಯಲಿಮೃಗಮದಪುಂಡ್ರತಿಲಕದ ನೀಲಾಳಕದಮಾಟಕ ಮದನನ ಬಿಲ್ಲ ಹಳಿವ ಹುಬ್ಬುಗಳ ಇತ್ತಂಡಗಳನೋಟದಿ ದಯಾರಸ ಸೂಸುವ ಕಮಲದಳಗಳ ಸಮನಯನಗಳ 1ಎಸೆವ ಸುನಾಸಿಕ ಜ್ವಲಿತಕುಂಡಲಸ್ಮಿತವದನ ಶಶಿಸಮರದನಹೊಸ ತುಲಸಿಯ ಮಂಜರಿ ವನಮಾಲಾಧರನ ಸತ್ಕಂಧರನಮಿಸುನಿಯವೈಜಯಂತಿತ್ರಿಸರವು ದಿವ್ಯಪದಕಗಳ ಝಳ ಝಳಪುಗಳಲಸತ್ ಶ್ರೀವತ್ಸ ವಕ್ಷದಿ ಕುಂಕುಮ ಚಂದನದ ಗುಣಗಣಘನದ 2ಮರಕತಸ್ತಂಭಗಳಿಗೆ ಪೋಲ್ವೆಡೆಬಾಹುಗಳ ಅಂಗದಯುಗಳಕರವಲಯಾಂಗುಲಿಮುದ್ರಿಕೆ ಧೃತಕೋದಂಡ ದಂಡಕದಂಡಸಿರಿಜಠರತ್ರಿವಳಿಗಂಭೀರನಾಭ ನಿರ್ಜರನಾಭವರಪಿಂಗಳ ಕೌಶೇಯಾಂಬರಕಟಿಸೂತ್ರಶ್ರೀ ಬ್ರಹ್ಮಸೂತ್ರ3ಬಟ್ಟದೊಡೆಜಾನುಘಟ್ಟಿದಂತೋಪಮ ಜಂಘ ಸಂವೃತ ಜಂಘಾಕುಟಿಲ ನೀ ರಾಕ್ಷಸದಲ್ಲಣ ಪೆಂಡೆಯದ ಚೆಲುವಾ ಜನಜನಿಗೊಲಿವಕಠಿಣತರ ಪದತಳದೆಡೆ ಧ್ವಜಾಂಕುಶಾಂಬುಜ ಹೃತ್ಕಲುಷಾನಿಟಿಲನಯನ ವಿಧಿಸುರ ಋಷಿವಂದಿತಚರಣನೂಪುರಾಭರಣ4ಸುಖಮುನಿ ಮುಖ್ಯಮುನಿ ಪೂಜಿತ ವಿಗ್ರಹ ವಾರಾಪಾರವಿಹಾರನಿಖಿಲ ಗುಣಾರ್ಣವ ನಿತ್ಯದಯಾರ್ಣವ ರಾಜ ರಾಜಾಧಿರಾಜಸಕಲ ಸಂಯಮಿಕುಲಮೌಳಿರತುನ ಸತ್ಯಪೂರ್ಣ
--------------
ಪ್ರಸನ್ನವೆಂಕಟದಾಸರು
ಲಹರಿಕೊಂಡಿತು ಜ್ಞಾನ ಲಹರಿಕೊಂಡಿತುಮಿಹಿರಕೋಟಿ ಚಿದಾನಂದ ಮಿಹಿರಲೋಕ ಸೇರಲಾಗಿಪನಿತ್ಯಗುರುವ ಧ್ಯಾನ ಮಾಡೆ ನಿಗಮಧರೆಗೆ ಕೈಗೆ ಕೂಡೆನಿತ್ಯಆನಂದ ತುಳುಕಾಡುವ ನಿಜಬೋಧವೆಡೆಯಾಡೆ1ಪ್ರಣವನಾದಗೀತೆ ಪಾಡೆ ಪಾಡುಪಂಥ ಸರಿದು ಆಡೆಎಣಿಸಿ ಬಾರದ ದುಃಖ ಕೇಡೆ ಏಕವೆಂಬು ಘಟ್ಟಿಮಾಡೆ2ಚಿದಾನಂದ ಗುರುವ ನೋಡೆ ಚಿತ್ತ ಮುಳುಗಿ ಮುಳುಗಿ ಆಡೆಪದಸರೋಜವನ್ನು ಕೂಡೆ ಪರಿಣಾಮವ ದೋವಿಯಾಡೆ3
--------------
ಚಿದಾನಂದ ಅವಧೂತರು