ಒಟ್ಟು 1976 ಕಡೆಗಳಲ್ಲಿ , 112 ದಾಸರು , 1583 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿ ಎತ್ತಿರೆಲ್ಲ ಮಹಾತ್ಮರೆಲ್ಲಮಂಗಳಾರತಿ ಎತ್ತಿರೆಲ್ಲಸಂಗಾತೀತ ಚಿದಾನಂದಾವಧೂತಾಂಗ ಶ್ರೀಬಗಳಾಮುಖಿ ದೇವಿಗೆ ಪ ಕರದೊಳು ಚೂಡೆ ಕಂಕಣವಿಟ್ಟುಕೊರಳೊಳು ಸರಿಗೆಯ ಧರಿಸಿಶಿರದಿ ರತ್ನದ ಕಿರೀಟವಿಟ್ಟು ಸರ್ವಾಭರಣವಧರಿಸಿ ದುರುಳರ ದುಷ್ಟರ ಛೇಧಿಸಿ ಭ-ಕ್ತರ ಪಾಲಿಪ ಬಗಳಾಮುಖಿಗೆ 1 ನಿತ್ಯ ನಿರ್ಗುಣ ನಿರಾಮಯಗೆ ನಿಂದಕವಿದಾರಣೆಗೆಭಕ್ತ ವತ್ಸಲೆ ಭುವನೇಶ್ವರಿ ಮಾತೆಗೆಭಕ್ತಾಧಾರೆಗೆ ಪ್ರತ್ಯಗಾತ್ಮೆಗೆ ಪರಬ್ರಹ್ಮ ರೂಪಿಣಿಭಕ್ತ ಪ್ರಾಣಿಗೆ ಬಗಳಾಮುಖಿಗೆ 2 ಅದ್ವಯ ಆಗಮಗೋಚರಗೆ ಅಚಲಾನಂದಳಿಗೆ ಶುದ್ಧಸಂವಿಜ್ಯೋತಿರ್ಮಯಳಿಗೆಸರ್ವಸಾಕ್ಷಿಗೆ ಸದ್ಗುರು ಚಿದಾನಂದಾವಧೂತಗೆ ಸಿದ್ಧಪರ್ವತವಾಸಿ ಬಗಳಾಮುಖಿಗೆ 3
--------------
ಚಿದಾನಂದ ಅವಧೂತರು
ಮಂಗಳಾರತಿ ಎತ್ತುವೆ ಮಾರಮಣಗೆ ಪ ಅಂಗಜ ಜನಕ ಶುಭಾಂಗ ಶ್ರೀರಂಗಗೆ ಅ.ಪ ವೈರಾಜ್ಯ ಸ್ಯಾರಾಜ್ಯ ಮಹ ಪರಮೇಷ್ಠಿ ರಾಜ್ಯ ಸಾರ್ವಭೌಮ ನೀನೆಂದು 1 ವೇದೋಕ್ತ ಮಂತ್ರ ಪುಷ್ಪಾಂಜಲಿಯಿಂದ ನಿನ್ನಯ ಪಾದಕ್ಕೆರಗಿ ಪುನಃ ಪ್ರಾರ್ಥನೆಗೆಯ್ಯುತ 2 ಪಾಪಿಗಳೊಳಗತಿ ಪಾಪಿಯು ನಾನೆನ್ನ ತಾಪತ್ರಯವ ಬಿಡಿಸಿ ಕಾಪಾಡು ನೀನೆಂದು 3 ಪದಜಾನುಕರಗಳಿಂ ಉದರ ಹೃದಯದಿ ಶಿ- ರದಿ ದೃಷ್ಟ್ಯಮನಸವಚನಸಾಷ್ಟಾಂಗದಿಂ ಮಣಿದು 4 ಕಂದರ್ಪ ಕೋಟಿ ಲಾವಣ್ಯ ಸರ್ಪಶಯನ ನಮ್ಮಪ್ಪಾ ತಿಮ್ಮಪ್ಪನೆಂದು 5 ವಾಹನ ವಸ್ತೂಗಳರ್ಪಿಸಿ ಸರ್ವೋತ್ತಮ ನೀನೆಂದ್ಹೊಗಳಿ 6 ಅಪರಾಧವೆಮ್ಮಿಂದಲಾಗುವುದೆಲ್ಲ ಕ್ಷಮಿಸು ಕಪಟನಾಟಕ ಸೂತ್ರಧಾರೀ ಗುರುರಾಮವಿಠಲ 7
--------------
ಗುರುರಾಮವಿಠಲ
ಮಂಗಳಾರತಿ ನಮ್ಮ ರಂಗನಾಥನಿಗೆ ಜಂಗಮಾರ್ಚಿತಪಾದ ಕಲುಷವಿಭಂಗರಂಗನಿಗೆ ಪ ಜಾಜಿಯ ಪುಷ್ಪಂಗಳಂ ದಿವ್ಯ ಸ ಭಾಜ ಭಜಂತ್ರಿಗಳಿಂ ಮೂಜಗದೊಯನೆ ಮುಕ್ತಿಕೃಪಾಕರ ಶ್ರೀಜಯವೆನ್ನುತಲಿ 1 ವಾರುಧಿ ಶಯನನಿಗೆ ದಿವ್ಯ ಸು ಚಾರುಸನಯನಗೆ ನಮ್ಮ ನಾರಿಯರೆಲ್ಲರು ನಮಿಸುವ ಲಕ್ಷ್ಮೀ ನಾರಾಯಣನಿಗೆ 2 ರಾಧಾರುಕ್ಮಿಣಿ ಜಯಪತಿಗೆ ಸಂತೆ ಸರಗೂರೊಳಗಿಹ ನಮ್ಮಯ ಶ್ರೀ ಗುರು ತುಳಸೀರಾಮನಿಗೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಮಂಗಳಾರತಿ ಮಾಡಿ ಮಂಗಳ ಮಹಿಮಾನಂಗಜನಕ ಹರಿ ತುಂಗವಿಕ್ರಮಗೆ ಮಂಗಳಾರತಿಯ ಧ್ರುವ ಅಗಣಿತಗುಣ ಅಗಮ್ಯಗೋಚರ ಸುಗಮದಲಾಡುವ ನಿಗಮೋದ್ಧಾರಗೆ 1 ಬಗೆದು ಬೆನ್ನಿಲಿ ಭಾರವ ನೆಗೆದಿಹ ನೋಡಿ ಭಗತವತ್ಸಲ ಸ್ವಾಮಿ ನಗಧರಗೆ 2 ಜಗತಿಯ ಕದ್ದೊಯ್ದ ಸುರನ ಸೀಳಿದ ಜಗದೋತ್ತಮನಾದ ಜಗದೋದ್ಧಾರಗೆ 3 ದುರುಳದೈತ್ಯನ ಬೆರಳುಗುರಿಲಿ ಸೀಳಿದ ತರಳ ಪ್ರಹ್ಲಾದಗೊಲಿದ ನರಹರಿಗೆ 4 ಬಲಿಯ ದಾನವ ಬೇಡಿ ನೆಲೆಗೆ ಅಳೆದುಕೊಂಡು ಬಲಿಯ ಬಾಗಿಲ ಕಾಯ್ದ ಶ್ರೀನಿಧಿಗೆ 5 ಪರಶುಪಿಡಿದು ಕ್ಷತ್ರಿಯರ ಸಂಹರಿಸಿದ ಪರಮಪುರುಷನಾಗಿಹ ತಪೋನಿಧಿಗೆ 6 ದೇವತಿಗಳ ಸೆರೆಯ ಬಿಡಿಸಿದ ದೇವನು ಪಾವನಮೂರುತಿ ಅಹಲ್ಯೋದ್ದಾರಗೆ 7 iÀುದುಕುಲತಿಲಕ ವಿದುರವಂದಿತನಾದ ಬುಧಜನಪಾಲ ಮದನಮೋಹನಗೆ 8 ಸುಳಿದು ತ್ರಿಪುರದಲಿ ಹಳಿದು ನಾರೆರ ವ್ರತ ಹೊಳೆವದೋರಿದ ಚಲುವಿಲಿ ಮಹಾಮುನಿಗೆ 9 ಮುದ್ದು ತೇಜಯನೇರಿ ತಿದ್ದಿ ರಾವುತನಾದ ಮಧ್ವಾಂತ್ರದ ಮಹಿಪತಿ ಪ್ರಾಣಪತಿಗೆ 10
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಗುವಿನ ಮರುಳಿದು ಬಿಡದಲ್ಲ - ಈ ಪ ಜಗದೊಳು ಪಂಡಿತರಿದ ಬಿಡಿಸಿ ಅ ನೀರನು ಕಂಡರೆ ಮುಳುಗುತಿದೆ - ತನ್ನಮೋರೆಯ ತೋರದೆ ಆಡುತಿದೆಧಾರಿಣಿ ಹಲ್ಲಲಿ ಎಳೆಯುತಿದೆ - ದೊಡ್ಡಭೈರವಾಕಾರದಿ ಕೂಗುತಿದೆ 1 ಪೊಡವಿಯ ಕೊಟ್ಟಗೆ ಅಳೆಯುತಿದೆ - ತನ್ನಕೊಡಲಿಯೊಳು ಭೂಪರ ಕಡಿಯುತಿದೆಅಡವಿ ಕೋತಿಗಳ ಕೂಡುತಿದೆ - ಚೆಲ್ವಮಡದಿಯರನು ಹಿಡಿದೆಳೆಯುತಿದೆ 2 ಉಟ್ಟಿದ್ದ ವಸ್ತ್ರವ ಬಿಸುಡುತಿದೆ - ತನ್ನದಿಟ್ಟ ತೇಜಿಯನೇರಿ ನಲಿಯುತಿದೆಸೃಷ್ಟಿಯೊಳು ಭೂಸುರರ ಪೊರೆದ ಜಗಜಟ್ಟಿಯಾದಿಕೇಶವ ರಾಯನಂತೆ 3
--------------
ಕನಕದಾಸ
ಮಡಿಮಡಿಯೆಂದು ಹಾರ್ಯಾಡಿ ಸುಳ್ಳೆ ಮಡಿಯಬೇಡಿರೋ ಭವದುರಳ್ಯಾಡಿ ಪ ಜಡಮತಿ ಕಡಿದು ಬಿಡಲಾಸೆ ತೊಡೆದು ನಡಿರೋ ಸನ್ಮಾರ್ಗದದು ನಿಜಮಡಿ ಅ.ಪ ಬದ್ಧಗುಣದೊಳಿರೆ ಅದು ಶುದ್ಧಮಡಿ ಕದ್ದು ತಿನ್ನುವ ಕ್ಷುದ್ರಬುದ್ಧಿ ನೀಗಿ ಪರಿ ಶುದ್ಧರಾಗಲದು ನಿರ್ಧಾರ ಮಾಡಿ1 ಕ್ಲೇಶಕಳೆವುದದು ಲೇಸುಮಾಡಿ ದು ರ್ವಾಸನಳಿಯೆ ಅದು ಮೀಸಲು ಮಡಿ ಮೋಸಮರವೆ ನೀಗಿ ಈಶನ ನಾಮವ ಧ್ಯಾಸದಿರಲು ಅನುಮೇಷ ಮಡಿ 2 ಬಿಟ್ಟದ್ದು ಉಟ್ಟರದು ಯಾವ ಮಡಿ ಉಟ್ಟು ಮುಟ್ಟೆಂಬುದಿದಾವಮಡಿ ಕೆಟ್ಟ ಪದ್ಧತಿಗಳ ಬಿಟ್ಟು ಸದಾಚಾರ ನಿಷ್ಠಪರರಾಗಲದು ಶಿಷ್ಟಮಡಿ 3 ಅರಿವುಗೂಡುವುದೆ ಸ್ಥಿರಮಡಿ ಬಹ ಜರ ಮರಣಳಿವುದೆ ಪರಮಮಡಿ ದುರಿತ ಗೆಲಿದು ಹರಿಶರಣರೊಳಾಡ್ವುದು ತಿರುಗಿ ಮುಟ್ಟಿಲ್ಲದ ಪರಮಮಡಿ 4 ಮಡಿಯಾದಮೇಲೆ ಮೈಲಿಗೆಲ್ಲಿ ಖೋಡಿ ಜ್ಞಾನ ವಿಡಿದುನೋಡು ನಿಜ ಹುಡುಕ್ಯಾಡಿ ಮಡಿಮುಟ್ಟಿಲ್ಲದ ನಮ್ಮೊಡೆಯ ಶ್ರೀರಾಮ ನಡಿ ದೃಢದಿ ನಂಬಲಿದೇ ಮೂಲಮಡಿ 5
--------------
ರಾಮದಾಸರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಮಂದರಧರ ಗೋವಿಂದ ಜಯ ನಂದನ ಕಂದ ಬಾಲಕುಲದಾಸಾನಂದ ಪ ಬೃಂದಾವನ ಗೋಪೀಜನ ವೃಂದ ಸುಂದರ ಮುರಳೀ ಗೀತಾನಂದ ಅ.ಪ ಶ್ರೀವತ್ಸಾಂಕಿತ ಪಾವನಚರಣ ದೇವ ದೇವಾನತ ದೇವಕಿತರುಣ ಭಾವ ಸಂಭವಪಿತ ರಾಧಾರಮಣ ಭಾವುಕ ಸೇವಿತ ಕರುಣಾಭರಣ1 ಮಂಗಳನಾಮಾ ಯದುಕುಲಸೋಮಾ ಸಂಗರಭೀಮ ಜಗದಭಿರಾಮ ಭೃಂಗಕುಂತಳ ಮಾಲಿಂಗನಿಸ್ಸೀಮ ರಂಗರಥಾಂಗ ಮಾಂಗಿರಿವರಧಾಮ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಂದರೋದ್ಧಾರಾನಂದನ ಕಂದ ಬಾ ಬೇಗಾ ನಿನ್ನ ಸುಂದರಾನನಾನಂದದಿ ನೋಳ್ಪೆ ಬಾ ಬೇಗಾ ಪ. ಮದನ ಮೋಹನ ಚದುರ ಶ್ರೀ ಕೃಷ್ಣ ಬಾ ಬೇಗ ಸುದತಿಯೇರ ಮುದವಿಹಾರ ಮದಸೂದನ ಕೃಷ್ಣ ಅ.ಪ. ಕಸ್ತೂರಿತಿಲಕ ಶಿಸ್ತಲಿ ಪೊಳೆಯೆ ಬಾ ಬೇಗಾ, ನಿನ ಮಸ್ತಕದರಳೆಲೆ ಶಿಸ್ತನು ನೋಳ್ವೆ ಬಾ ಬೇಗಾ ಹಸ್ತದಿ ಕಡಗ ಕಂಕಣ ಶೋಭಾ ಬಾ ಬೇಗಾ ಶಿಸ್ತಿನಿಂದ ಕೊಳಲನೂದೆ ಹಸ್ತಿವರದನೆ 1 ಕೊರಳೊಳು ತುಲಸಿಮಾಲಾ ಶೋಭಾ ಬಾ ಬೇಗಾ ನಿನ ಮುಂಗುರುಳು ಕೂದಲೊಳು ಮೆರೆವ ಕಿರೀಟ ಬಾ ಬೇಗಾ ವೈಜಯಂತಿ ಮಾಲಾ ಶೋಭಾ ಬಾ ಬೇಗಾ ಸರಿಯಾರೊ ಜಗದಿ ನಿನಗೆ ವರ ಶ್ರೀ ಶ್ರೀನಿವಾಸ2
--------------
ಸರಸ್ವತಿ ಬಾಯಿ
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಮಂದಾರ ತರುವೇ | ನಾ ಬೇಡುವೇ | ಮಂದಾರ ತರುವೇ ಪ ಇಂದು ಮೌಳಿನುತ | ಸಂದರುಶನ ತವ ಅ.ಪ. ಸಾರಥಿ ಪದ ಬಿಸಜಯುಗಳದಿ ನಿಜಗತಿಯ ಕೊಡುತ ನಡೆಸು ಸುಪಥದಿ 1 ದಶರಥ ಹರಿ ವಚೋನಯ | ಅಸುಪತಿಪರಿಕೃಷ್ಣ ವಚೋನಯಯಶದಿ ಮೆರೆದು ಮುಂಬರುವ ಅಸುಪತಿ ವಸುದೆಜೆರಮಣನ ಯಶವ ನುಡಿಸು ಯತಿ 2 ಭವ ತಾರಕ ನಿರುತಿಹೆ ಮುದಮುನಿ ಮತೋದ್ಧಾರಕ 3
--------------
ಗುರುಗೋವಿಂದವಿಠಲರು
ಮಂದಾಸಲ ರಗಳೆ ರಾಮ ಪದಾಂಬುಜ ಭೃಂಗಗೆ ಜಯ ಜಯ ತಾಮಸ ಕುರುಕುಲ ಧ್ವಂಸಕ ಜಯ ಜಯ ಶ್ರೀ ಮತ್ಪೂರ್ಣ ಪ್ರಜ್ಞಗೆ ಜಯ ಜಯ 1 ವಾಸುದೇವ ಸುನಾಮಕ ಜಯ ಜಯ ದೋಷ ಜ್ಞಾನ ವಿನಾಶಕ ಜಯ ಜಯ ಸೂರ್ಯ ವ್ಯಾಸ ಸುಭೋಧೆಯ ದರ್ಪಣ ಜಯ ಜಯ 2 ಶುಭಗುಣಲಕ್ಷಣ ಶೋಭಿತ ಜಯ ಜಯ ಭವ ಮೋಚಕ ಜಯ ಜಯ ಇಭವರದಾಜ್ಞಾಧಾರಕ ಜಯ ಜಯ ವಿಭುಧ ಸುಖಾಂಬುಧಿ ಸೋಮನೆ ಜಯ ಜಯ3 ನಿತ್ಯ ಸದಾಗಮ ಕೋಶಗೆ ಜಯ ಜಯ ಸತ್ಯವತೀಸುತ ಪ್ರೀಯಗೆ ಜಯ ಜಯ ಸತ್ಯಾಖ್ಯಾತ ಸುಮಿತ್ರಗೆ ಜಯ ಜಯ ಸುರತರು ಜಯ ಜಯ 4 ಅಚ್ಚುತ ಪ್ರೇಕ್ಷರ ಶಿಷ್ಯಗೆ ಜಯ ಜಯ ಸ್ವಚ್ಚಗುಣಾರ್ಣವ ಋಜುಪತಿ ಜಯ ಜಯ ಕೆಚ್ಚೆದೆ ವೀರಾಗ್ರೇಸಗೆ ಜಯ ಜಯ ಪಾವಕ ಜಯ ಜಯ 5 ಶೃತಿತತಿ ವಿಮಲ ಸುಭೋದಕ ಜಯ ಜಯ ರತಿಪತಿ ಪಿತವರ ದೂತಗೆ ಜಯ ಜಯ ಕ್ಷಿತಿಧರ ದ್ವಿಜಶಿವವಂದಿತ ಜಯ ಜಯ 6 “ಶ್ರೀ ಕೃಷ್ಣವಿಠಲ” ಸದಾರತ ಜಯ ಜಯ ಲೋಕ ಹಿತಪ್ರದ ನಿಜಗುಣ ಜಯ ಜಯ ಶ್ರೀಕರ ಶುಭಕರ ಜಯಕರ ಜಯ ಜಯ ಆಕಮಲಾಸುತ ರಯೀಪತಿ ಜಯ ಜಯ 7
--------------
ಕೃಷ್ಣವಿಠಲದಾಸರು
ಮಧ್ವಮತವ ಪೊಂದಿ ಭಜಿಸಿರೊ | ಉದ್ಧಾರವಾಗಲು ಮಧ್ವಮತವ ಪೊಂದಿ ಭಜಿಸಿರೊ ಪ ಮಧ್ವಮತವ ಪೊಂದಿ ಭಜಿಸಿ ಶುದ್ಧ ಜ್ಞಾನ ಭಕುತಿಗಳಿಸಿ ಗೆದ್ದು ಈ ಭವಾಬ್ಧಿಯನ್ನು ಪದ್ಮನಾಭನ ಪಾದವ ತೋರೆ ಅ.ಪ. ನಾನೆ ವಾಸುದೇವನೆಂದು ಹೀನ ಪೌಂಡ್ರಕನು ತಾನು ಏನು ಗತಿಯ ಕಂಡನೆಂದು ಜ್ಞಾನದಿಂದ ತಿಳಿದು ಮುನ್ನ 1 ಹರಿಯೆ ಸರ್ವೋತ್ತಮನು | ವಿಶ್ವ ವಿರುವುದಯ್ಯ ಸತ್ಯವಾಗಿ ತಾರತಮ್ಯ ಪಂಚಭೇದ ಸ್ಥಿರವೆಂದು ಸಾರಿಪೇಳ್ವ 2 ಭಕುತಿಯಿಂದ ಸೇವಿಪ ಜನಕೆ ಮುಕುತಿಯಲ್ಲಿ ನೈಜ ಸುಖವ ಲಕುಮಿಕಾಂತನು ಪಾಲಿಪನೆಂದು ಯುಕುತವಾಗಿ ಪ್ರಕಟಿಸಿದಂತ 3
--------------
ಲಕ್ಷ್ಮೀನಾರಯಣರಾಯರು
ಮಧ್ವಾಚಾರ್ಯರು ಮಧ್ವಮುನಿರಾಯ ಭಕ್ತೋದ್ಧಾರನೆ ಪ ಶುದ್ಧಮೂರ್ತಿಯಾದ ಕೃಷ್ಣ ದ್ವೈಪಾಯನರ ಶಿಷ್ಯ ಅ.ಪ ತಾಮಸರ ಮುರಿದು ಚೂ ಡಾಮಣಿಯ ಸ್ವಾಮಿಗಿತ್ತೆ 1 ಭೂಮಿ ಆಶೆಯುಳ್ಳ ದುರ್ಯೋಧನಾದ್ಯರ ನಿರ್- ನಾಮವ ಹೊಂದಿಸಿ ಕೃಷ್ಣನ ಪ್ರೇಮಕೆ ನೀ ಪಾತ್ರನಾದೆ 2 ಇಪ್ಪತ್ತೊಂದು ಭಾಷ್ಯಗಳಾ ಖಂಡಿಸೀ ಸರ್ಪಶಯನ ಸರ್ವೋತ್ತಮನೆಂದು ಸಾರಿಸಿ ಅಪ್ಪ ಗುರುರಾಮ ವಿಠಲನ ತಪ್ಪಾದೆ ಪೂಜಿಸುತಿರ್ಪ 3
--------------
ಗುರುರಾಮವಿಠಲ