ಒಟ್ಟು 1158 ಕಡೆಗಳಲ್ಲಿ , 109 ದಾಸರು , 978 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಟ್ಟಿ ಹುಟ್ಟಿ ಹೊಂದಲಾರೆನಯ್ಯ ಕೃಷ್ಣನೆ ುೀಕಷ್ಟವನ್ನು ಬಿಡಿಸಿ ಕಾಯಬೇಕು ಕೃಷ್ಣನೆ ಪಇಷ್ಟು ದಿವಸ ನಿನ್ನನರಿಯದಿದ್ದೆ ಕೃಷ್ಣನೆ ನೀನುದ್ಟೃುಟ್ಟು ಹುಟ್ಟದಂತೆ ಮಾಡು ಕೃಷ್ಣನೆಅ.ಪಗರ್ಭದೊಳು ನವಮಾಸ ಸಿಕ್ಕಿ ಕೃಷ್ಣನೆ ನೊಂದೆನರ್ಭಕತ್ವದಲ್ಲಿ ಮುಗ್ಧನಾದೆ ಕೃಷ್ಣನೆನಿರ್ಬಂಧವಾುತು ವಿದ್ಯದಲ್ಲಿ ಕೃಷ್ಣನೆ ಮತ್ತೆನಿರ್ಭರದ ಪ್ರಾಯದಲ್ಲಿ ಬೆರೆತೆ ಕೃಷ್ಣನೆ 1ಮದಗಳೆಂಟರಿಂದ ಮೈಯ ಮರೆತೆ ಕೃಷ್ಣನೆ ಬೇಗಹುದುಗಿ ಕ್ಲೇಶವೈದರಲ್ಲಿ ಬಿದ್ದೆ ಕೃಷ್ಣನೆವೊದಗಿ ಪಾಶವೆಂಟರಿಂದ ಬಿಗಿದೆ ಕೃಷ್ಣನೆ ಹಮ್ಮುಇದಕೆ ಮೂಲವಾುತು ಕರ್ಮದಿಂದ ಕೃಷ್ಣನೆ 2ಅರಿಗಳರುವರಿಂದ ಕೊರಗುತಿಹೆನು ಕೃಷ್ಣನೆ ಮುಂದನರಿಯದವರ ಸಂಗವನ್ನು ಮಾಡಿ ಕೃಷ್ಣನೆಉರುಳಿಬಿದ್ದೆ ವಿಷಯಕೂಪದಲ್ಲಿ ಕೃಷ್ಣನೆ ುದನುಪರಿವ ಶಕ್ತಿಯನ್ನು ಕಾಣೆನಯ್ಯ ಕೃಷ್ಣನೆ 3ಮಾಯಾಕಾರ್ಯ ದೇಹವೆನ್ನದೆಂದು ಕೃಷ್ಣನೆ ಅದುಹೇಯವೆಂದು ಕಾಣದಾದೆನಯ್ಯ ಕೃಷ್ಣನೆ ನೋಯದಂತೆ ಪೋಷಣೆಯ ಮಾಡಿ ಕೃಷ್ಣನೆ ುೀಗ ನೋಯಲಾಗಿ ಭಯವು ಜನಿಸಿತಯ್ಯ ಕೃಷ್ಣನೆ 4ಹರಿವ ನದಿಯ ನಡುವೆ ಪರ್ಣ ಸಿಕ್ಕಿ ಕೃಷ್ಣನೆ ಸುಳಿಯಬೆರಸಿ ತಡಿಯ ತಾನು ಸೇರದಂತೆ ಕೃಷ್ಣನೆಕುರುಡ ಕೂಪವರಿಯದುರುಳುವಂತೆ ಕೃಷ್ಣನೆ ಕಾಲಶರಧಿಯಲ್ಲಿ ಮುಳುಗಿ ನೆಲೆಯ ಕಾಣೆ ಕೃಷ್ಣನೆ 5ಇರುಹೆ ಕಡೆಯು ಬ್ರಹ್ಮನಾದಿಯಾಗಿ ಕೃಷ್ಣನೆ ಲೋಕಮರುಳುಗೊಂಡು ಮಾಯೆುಂದ ಮರುಗಿ ಕೃಷ್ಣನೆ ಕೊರಗುತಿದೆ; ಮಾಯೆಯನ್ನು ದಾಟಿ ಕೃಷ್ಣನೆ ಬೇಗಪರಮನೊಳು ಬೆರೆಸಿ ಕೊರಗ ಬಿಡಿಸು ಕೃಷ್ಣನೆ 6ರಜ್ಜು ಸರ್ಪನಾಗಿ ತೋರಿ ಬೆದರೆ ಕೃಷ್ಣನೆ ಅದರಬೆಜ್ಜರವ ಪರಿವ ಮಂತ್ರವುಂಟೆ ಕೃಷ್ಣನೆರಜ್ಜುವೆಂದು ತಿಳಿವುದೊಂದೆ ಮಂತ್ರ ಕೃಷ್ಣನೆ ಹಾಗೆರಜ್ಜು ಸ್ಥಾನ ನಿನ್ನ ನಿಜವ ತೋರು ಕೃಷ್ಣನೆ 7ಕರ್ಮವೆ ಜನ್ಮಕ್ಕೆ ಹೇತುವೆನಲು ಕೃಷ್ಣನೆ ಅಂದುಬ್ರಹ್ಮವತ್ಸಪಾಲರಪಹರಿಸೆ ಕೃಷ್ಣನೆಕರ್ಮವಿತ್ತೆ ಬದುಲ ನಿರ್ಮಿಸಲು ಕೃಷ್ಣನೆ ಹಾಗೆಕರ್ಮವೆನ್ನದೀಗಲೆನ್ನ ಸಲಹು ಕೃಷ್ಣನೆ 8ದುರಿತ ದುಃಖದಿಂದ ನೋವ ಜನರ ಕೃಷ್ಣನೆ ಅವರದುರಿತಗಳ ನೂಕಿ ನಿನ್ನೊಳಿರಿಸು ಕೃಷ್ಣನೆತಿರುಪತೀಶ ದೇವ ವೆಂಕಟೇಶ ಕೃಷ್ಣನೆ ಮಾಯಾತೆರೆಯ ತೆಗೆದು ನಿನ್ನ ನಿಜವ ತೋರು ಕೃಷ್ಣನೆ 9ಓಂ ಸತ್ಯಸಂಕಲ್ಪಾಯ ನಮಃ
--------------
ತಿಮ್ಮಪ್ಪದಾಸರು
ಹೃತ್ಪದ್ಮದೊಳಿದ್ದು ಹೃತ್ತಾಪಗಳ ಕಳೆಯೊ ಜೀ- ವತ್ಪಿತಾಮಹ ಜನಕನೇಪ ಮೃತ್ಪಿಂಡದಂತೆನ್ನ ಉತ್ಪತ್ತಿಗೆ ಕ- ಣ್ಣೆತ್ತಿ ನೋಡಲರಿಯಾ ಜೀಯಾ ಅ.ಪ ನಿತ್ಯ ನಿತ್ಯ ಜಗವೆಲ್ಲವು ನಿತ್ಯವು ನಿತ್ಯತ್ವವೆಲ್ಲ ಸರಿಯೇ ಏನಿದ್ದರೇನು ಅನಾದಿಕರ್ಮದ ಬವಣೆ ಬೆನ್ನಟ್ಟಿ ಬರುತಿರ್ಪುದ- ಜ್ಞಾನಾಂಧಕಾರದಿಂ ಧ್ಯಾನವನು ತಿಳಿಯದೇ ಕಾನನದೊಳಿಪ್ಪೆನೋ ಜ್ಞಾನಗಮ್ಯನೆಂದು ಸಾರುತಿದೆ ಶ್ರುತಿ ಶಾಸ್ತ್ರ ಜ್ಞಾನಗುರು ದೊರೆತಿಲ್ಲವೋ ಸಾನುರಾಗದಿ ನೀನೆ ಸಾಧನಕೆ ಕರುಣಿಸಿ ಧ್ಯಾನದಲಿ ಮನಸು ನಿಲಿಸೋ ಉಳಿಸೋ 1 ಬಂಧ ಮೋಕ್ಷಕೆ ಎಲ್ಲ ಮನವೆ ಕಾರಣವೆಂದು ಎಂದೆಂದಿಗು ಪೇಳುತಿಹರು ಸಿಂಧುಶಯನನೆ ಭವಬಂಧಮೋಚಕನೆಂದು ವಂದಿಸಿ ಪೊಗಳುವರೊ ಮಂದರೊದ್ಧರ ನಿನ್ನ ಮಂದಮತಿಯಿಂದಲಿ ವಂದಿಸಲು ನಾನರಿಯೆನೊ ಕಂದರ್ಪಜನಕ ನೀ ಮಂದಭಾಗ್ಯನ ಮನವ ನೋಯಿಸದೆ ನಿನ್ನ ಪದದಲ್ಲಿರಿಸೊ ಅಂದೆ ಎನ್ನಯ ಭವಬಂಧನಾಶವಾಗುವು- ದೊಂದೆ ನಿನ್ನನು ಬೇಡುವೆನೊ ಜೀಯ 2 ಜೀವರೆಲ್ಲರು ಗುಣತ್ರಯಾವರಣದಿಂದ ಕರ್ಮ- ಪ್ರವಹದೊಳಿಪ್ಪರೊ ಕವಿಸಿ ಮೋಹವ ನೀನು ಭವಕೆ ಕಾರಣವಹುದು ದೇವೇಶ ನಿನ್ನಾಟವೋ ಶ್ರವಣದಿಂದಲಿ ಭವಬಂಧಮೋಚಕನೆಂದು ತವ ಬಿರುದು ಸಾರುತಿದೇಕೋ ಭಾವ ಬಲ್ಲವರಾರೋ ಕಾವ ಕರುಣಿ ನೀನೆ ಭಾವಜನ ಪಿತನು ಅದೇ ಭವಪಾಶ ಬಿಡಿಸೆ ನಾ ಭಕುತಿಪಾಶದಿಂದ ಪಾದ ಬಿಗಿವೆನಯ್ಯ ಜೀಯ 3 ಸ್ವಾತಂತ್ರ್ಯವೆಲ್ಲಿಹುದು ಸ್ವಾಮಿತ್ವವೆಲ್ಲಿಹುದು ಅ- ಸ್ವತಂತ್ರನಾಗಿಪ್ಪೆನೊ ಕಾತುರದಿ ನಾ ಮಾಳ್ಪ ಕ್ರಿಯೆಗಳೆಲ್ಲವು ಎನ್ನ ಸ್ವಾತಂತ್ರ್ಯವೆಂದ್ಹೇಳುವೆ ನೀ ತಂತ್ರಿಯಾಗಿದ್ದೆನ್ನ ನಡೆಸುವುದನರಿಯೆ ಕು- ತಂತ್ರವನು ನಾ ಮಾಡುವೆ ಸ್ವಾ- ತಂತ್ರನು ನೀನು ಸೂತ್ರನಾಮಕ ದೇವ ಮಂತ್ರಿಯಾಗೀದೇವ ಯಂತ್ರ ನಡೆಸುವ ಎಂತಾದರಡಿಗಡಿಗೆ ಅತಂತ್ರನಾಗಿಹೆ ನಾನೇ ಭ್ರಾಂತಿಪರಿಹರಿಸಿ ಕಾಯೊ ಶೌರೇ 4 ಭಕ್ತಿ ಇಲ್ಲದೆ ನಿನ್ನ ಭಕ್ತನಾಗುವುದೆಂತೋ ಭುಕ್ತಮಾತ್ರನು ನಾನು ಮುಕ್ತರೊಡೆಯ ನೀನು ಯುಕ್ತಿತೋರಿಸು ಎನಗೆ ಭಕ್ತಾಪರಾಧಸಹಿಷ್ಣು ಶಕ್ತ ನೀನಹುದೊ ವೇದೋಕ್ತ ಮಹಿಮಾತೀತ ಸಕ್ತವಾಗಲಿ ನಿನ್ನ ಪದದಿ ಮನಸು ವ್ಯಕ್ತನಲ್ಲವೊ ಸರ್ವ ಸಾರಭೋಕ್ತನು ನೀನು ಭಕ್ತವತ್ಸಲ ಪುರುಷಸೂಕ್ತಮೇಯ ಅಪ್ರಮೇಯ ಯುಕ್ತಿಮಾತಲ್ಲಿದು ಭಕ್ತಿಪೂರ್ವಕ ನಿನ್ನ ಭಕ್ತ ಶ್ರೇಷ್ಠರ ಸೇವೆ ಕೊಟ್ಟು ರಕ್ಷಿಸೊ ದೇವಾ 5 ನಾದಕ್ಕೆ ಪರನಾಗಿ ವಾದಕ್ಕೆದೊರೆಯೇ ನೀ ವೇದವೇದಾಂತವೇದ್ಯ ಸಾಧನವು ಕಾಣೆ ಸಾಧನಶರೀರವಿದು ಸಾದರದಿ ಕರುಣಿಸಿದೆ ಅನಿರುದ್ಧದೇವ ಬಾಧಿಪುದು ಬಂಧಗಳು ಅನಾದಿಕರ್ಮದಿ ಬಂದು ನಾ ಅಧಮತಮಸಾಧನವನ್ನೆಸಗಿದೆ ನೀ ದಯಾಸಿಂಧು ಎಂದಡಿಗಡಿಗೆ ಬೇಡುವೆನು ಕೃದ್ಧನಾಗದೆ ಇನ್ನು ಉದ್ಧರಿಸು ತಂದೇ ಎಂದೇ 6 ಶಂಖಚಕ್ರಾಂಕಿತನೆ ಮಂಕುಬುದ್ಧಿಯ ಬಿಡಿಸೋ ಅಂಕಿತವೆನಗೆ ಇಲ್ಲ ಅಂಕೆ ಇಲ್ಲವೊ ನಿನ್ನ ನೆನೆಹುದಕೆ ಎಂದಿಗೂ ಶಂಕೆಯ ಪಡುವನಲ್ಲ ವೇಂಕಟಾದ್ರಿಯ ವಾಸ ಶ್ರೀ ವೇಂಕಟೇಶನು ಮಮಕುಲಸ್ವಾಮಿ ದೈವವೆಂದನುದಿನ ಸಂಕಟಾಗಾಮಿಗಳ ಕಂಟಕವ ಹರಿಸಿ ಪದ ಪಂಕಜದಿ ಮನವ ನಿಲ್ಲಿಸೋ ಬಿಂಕದ ಮಾತಲ್ಲ ಪಂಕಜದಳಾಯತಾಕ್ಷ ಅಕ- ಳಂಕಮಹಿಮ ಕಾಯೋ ಜೀಯಾ7
--------------
ಉರಗಾದ್ರಿವಾಸವಿಠಲದಾಸರು
ಹೆಂಡತಿ ನೋಡಣ್ಣ ಈಕಿನ ನ್ನ್ಹೆಂಡತಿ ನೋಡಣ್ಣ ಪ ಮಂಡೆಮುಸುಕು ತೆಗೆದ್ಹಿಂಡುಜನರ ಮುಂದೆ ಬಂಡುಮಾಡಿ ಎನ್ನ ಬೈಲಿಗೆ ತರುವಳು ಅ.ಪ ಕಂಡದ್ದು ಬೇಡುವಳು ತರದಿರೆ ಗಂಡನಲ್ಲೆಂಬುವಳು ತಿಂಡಿಗಾಗಿ ಎನ್ನ ಕಂಡವರ ಕಾಲ್ಹಿಡಿಸಿ ಮಿಂಡೆ ಭಂಡ 1 ಮಾತುಮಾತಿಗಿವಳು ಎನ್ನನು ಕೋತ್ಯಂತೆ ಕುಣಿಸುವಳು ಸೋತೆನೆಂದ್ಹೇಳುತ ಪಾತಕದ್ಹಾಕೆನ್ನ ನೀತಿಗೆಡಿಸುವಳು ಭೀತಿಲ್ಲದ 2 ಒಯ್ಯಾರ ಮಾಡುವಳು ಬೈದರೆ ಬಾಯಿ ತೆರೆದಳುವಳು ಬಾಯಿ ಮುಚ್ಚೆಂದರೆ ಕೈಬಿಟ್ಟೋಡ್ವಳು ದಾಯಾದಿಗಳು ಮುಂದೆ ಹೊಯ್ಮಾಲಿ 3 ತೊಡರು ಬಿಡಳು ಒಡಲಿನ ಕೆಡಕುಗುಣವ ಕಡಿಯಳು ಅಡಿಗಡಿಗೆನ್ನನು ದುಡುಕು ನುಡಿದು ಮನ ಮಿಡುಕಿಸುವಳು ಬಾಯ್ಬಡಕಿ ಬಿಡಿಕಿ 4 ಒದಗಿಸಿ ನಾಂ ತರಲು ಅದರೊಳು ಕದಿದರ್ಧ ತಿನ್ನುವಳು ಪದುಮನಾಭ ನಮ್ಮ ಸದಯ ಶ್ರೀರಾಮನ ಪಾದ ಕೃಪೆಯ ಪಡೆಯದಧಮ 5
--------------
ರಾಮದಾಸರು
ಹೇ ದಯಾಸಾಗರ ಸ್ವಾಮಿ ವೇದ ಮಾಧವ ಮುಕುಂದ ಮನುಮುನಿ ಪ್ರೇಮಿ ಪ ವೇದಗೋಚರ ಸಾಧುಸನ್ನುತ ನಾದಪ್ರಿಯ ಭವಬಾಧೆರಹಿತ ಭೇದಹರ ಜಗ ಪಾದ ಭಜಿಸುವೆ ಪಾಲಿಸೆನ್ನ ಅ.ಪ ಮದಗಜ ಮುದದಿಂದ ಪೊರೆದಿ ಪ್ರಭುವೆ ಮದಗಜಗಮನೆಯ ಮಾನದಿಂ ಕಾಯ್ದೆ ಪದುಮವದನೆಶಾಪ ಕಳೆದೆ ಕರುಣಿ ಸದಮಲಬಾಲನ ತಪಕೆ ನೀನೊಲಿದಿ ಸುದಯಹೃದಯ ಸುಸದನಪಾಲ್ಸಿದಿ ಸದಮಲಾಂಗನೆ ಪದುಮವದನ ಮುದದಿ ನಿಮ್ಮಡಿ ಪದುಮಗಳು ಎ ನ್ಹøದಯ ಮಂದಿರದಿರಿಸಿ ರಕ್ಷಿಸು 1 ಗರುಡಂಗೆ ವರಮೋಕ್ಷ ನೀಡ್ದಿ ನಿನ್ನ ಸ್ಮರಿಪರಿಗೆ ದರುಶನಕೊಡುತಲಿ ನಡೆದಿ ತರುಣಿಯ ಎಂಜಲ ಸವಿದಿ ವನ ಚರನಿಗೆ ವಶನಾಗಿ ಅಭಯ ಪಾಲಿಸಿದಿ ಭರದಿ ದಕ್ಷಿಣಶರಧಿ ಹೂಳಿಸಿ ಮೆರೆವ ಲಂಕಾಪುರವ ಮುತ್ತಿದಿ ದುರುಳರ್ಹಾವಳಿ ದೂರಮಾಡಿ ಧರೆಯ ಭಾರವ ನಿಳುಹಿದಯ್ಯ 2 ನುಡಿಸಿದರೆನ್ನಿಂದಲಾವ ವಚನ ನುಡಿಸಿದ ಬಳಿಕದನು ನಡೆಸಿಕೊಡಭವ ನುಡಿಯಂತೆ ನಡೆಯೆನಗೆ ಸ್ಥಿರವ ಕೊಟ್ಟೆ ನ್ನೊಡಲೊಳಗದಂತೆಯಿರು ಅನುದಿನವು ಪೊಡವಿ ಮೂರನು ಒಡಲೊಳಿಟ್ಟಿಡೆ ಬಿಡದೆ ಆಳುವ ಒಡೆಯ ಶ್ರೀರಾಮ ದೃಢದಿ ನಿಮ್ಮಯ ಅಡಿಯ ನಂಬಿದೆ ಬಿಡಿಸು ಎನ್ನಯ ಮಂದಜ್ಞಾನವ 3
--------------
ರಾಮದಾಸರು
ಹೇಮಾಂಬರ ಕದಂಬ ವೆಂಕಟರಾಯಾ ಅ.ಪಎಷ್ಟೆಂದುಸುರೆ ಕೋಟಲೆಗಳಇಷ್ಟ ಮೂರುತಿಯೆ ಅಟ್ಟಿ ಬರುತ 'ಷಹುಟ್ಟು ಹೊಂದುಗಳೆಂಬ ಕಷ್ಟವ ಬಿಡಿಸೊ 'ಶಿಷ್ಟ ವೆಂಕಟರಾಯಾ1ದಂದುಗದಿಂದಾ ಎನ್ನಯಮನ ಕಂದಿಕುಂದುತಿದೆ ಇಂದು ನೀ ಬೆದರದಿರೆಂದಭಯವನಿತ್ತು ಬಂಧವ ಕಳೆಯೆನ್ನತಂದೆ ವೆಂಕಟರಾಯಾ 2ಕಡು ಮನೋವ್ಯಥೆಯಾ 'ಭಾಡಿಸುನುಡಿಯಾಲಿಸಯ್ಯಾ ಬಿಡದೆ ನೀ ಎನ್ನ ಕೈಪಿಡಿದು ಸಂಸøತಿಯೆಂಬ ಕಡಲ ದಾಂಟಿಸೊ ಎನ್ನೊಡೆಯ ವೆಂಕಟರಾಯಾ 3ಗತಿ ನೀನೆಯೆಂದು ಸಾರಿದೆ ನಿನ್ನನತಿ ದೀನ ಬಂಧು ಪತಿತ ಪಾವನ ನೆಂದತಿಶಯದಿಂ ಶೃತಿ ನುತಿಸುತಲಿದೆ ತಿರುಪತಿಯ ವೆಂಕಟರಾಯ 4ಅಪರಾಧ ಶತವಾ ಮಾಡಿದೆ ನಾನುಕೃಪೆುಂದ ಕ್ಷ'ುಸೈ ಜಪತಪವರಿಯದಚಪಲ ಚಿತ್ತನು ನಾನು 'ಮಲಪರಾನಂದನಿಪುಣ ವೆಂಕಟರಾಯಾ 5'ಪ್ರವತ್ಸಲನೆ ಯನಗೆ ನೀನುಸುಪ್ರೀತನಾಗೈ ತಪ್ಪುಗಳೆಲ್ಲವನೊಪ್ಪುಗೊಳ್ಳುತ ಸಲಹಪ್ಪ ನಿಚ್ಚಲು ತಿಮ್ಮಪ್ಪ ವೆಂಕಟರಾಯಾ 6ದುರಿತ ಭಂಜನನೆ ಮಹಾಪುಣ್ಯಚರಿತ ರಾಜಿತನೆ ನೆರೆ ನಂಬಿದರ ಪತಿಕರಿಸುವ ಬಿರುದುಳ್ಳ ಪರಮಾತ್ಮ ಮೂಡಲಗಿರಿಯ ವೆಂಕಟರಾಯಾ 7ವಾರಿಜನಾಭ ಮಹೋನ್ನತವಾರಣಾಧಾರಾ ಗಾರುಗೊಳಿಸುವ ಸಂಸಾರ ದುಃಖವನಿದನಾರಿಗುಸುರುವೆ ಕೊನೇರಿ ವೆಂಕಟರಾಯಾ 8ಮಂಗಳಾತ್ಮಕನೆ ಸೀತಾಕಾಂತಮಂಗಳ ಮ'ಮ ಮಂಗಳಗಿರಿ ನರಸಿಂಗರಾಘವ ರಘುಪುಂಗವ ಅಲಮೇಲುಮಂಗ ವೆಂಕಟರಾಯಾ9
--------------
ತಿಮ್ಮಪ್ಪದಾಸರು
ಹೊಂದದಿರುವಿ ಯಾಕೆ ಮನವೆ ಇಂದಿರೇಶನ ಹಿಂದೆ ಮುಂದೆ ಸುಖವನೀವ ಮಂದರಾದ್ರಿಧರನ ಬೇಗ ಪ. ಸುತ್ತಿ ಬರುವಿ ನೀ ಮತ್ತೆ ವಿಷಯದಿ ಎತ್ತಲಾದರೀಶನಂಥ ವೃತ್ತಿ ದೊರೆವುದುಂಟೆ ನಿನಗೆ 1 ತೋಷಗೊಳುವೆನೆಂಬಾಸ್ಥೆ ತಾಳುವಿ ದೋಷಗಳಲಿ ಸಿಲುಕಿ ಬಹಳ ಘಾಸಿಯಾಗಿ ನೊಂದುಕೊಳುವಿ 2 ಅರಿಯದಾದಿ ನೀ ಹರಿಯ ಗುಣಗಳ ಚರಣಪದ್ಮ ಮಧುರ ರಸವ ಸುರಿವ ಸುಖವನೆಂದು ತಿಳಿವಿ 3 ಕೇಳು ನುಡಿಯನು ಕರುಣಾಳು ಒಡೆಯನು ತಾಳ ತನ್ನ ನಂಬಿದವರ ಗೋಳ ಬಿಡಿಸಿ ಸಲಹುತಿಹನು 4 ಭ್ರಾಂತಿಗೊಳದಿರು ಶ್ರೀಕಾಂತನಲ್ಲಿರುಕಂತುಜನಕ ವೆಂಕಟೇಶ ಚಿಂತಿತಾರ್ಥವಿತ್ತು ಕಾವ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹ್ಯಾಗಾಗುವುದೊ ತಿಳಿಯದು ಈಶನಜ್ಞೆ ಪ ಭಾಗವರತ ಸೇವೆಯಲ್ಲಿ ಬಹು ಪ್ರವೀಣವೆನೆಪುದೊ ರಾಗಲೋಭದಲ್ಲಿ ಮುಳುಗಿಸಿ ರಚ್ಚೆಗಿಕ್ಕಿ ಬಿಡುವುದೊ ಅ.ಪ ಕೋರಿಕೆಗಳ ಬಿಡಿಸಿ ಸದಾ ಗುಣವಂತನೆನಿಸುವುದೊ ನಾರಿ ಮಕ್ಕಳಾಸೆಯಲಿಯನಾಥವ ಮಾಡಿಸುವುದೊ 1 ದ್ವಂದ್ವಗಳಲಿಲೇಪವಿಲ್ಲದಾನಂದವ ಪೊಂದಿಸುವುದೊ ಮಂದಮತಿಯನಿಸುವುದೊ 2 ಶ್ರವಣಮನನ ಸಾಧನೆಗಳ ಸದಾ ಮಾಡಿಸುವುದೊ ಭವಭವದಲಿ ಮೂಢನೆನಿಸಿ ಪಾಪರತನ ಮಾಳ್ವದೊ 3 ಸರ್ವರಲ್ಲಿ ಗುಣವೆ ಕಾಣಿಸಿ ಸಂತೋಷಪಡಿಸುವುದೊ ದುರ್ವಿನೀತನೆನಸಿ ಸದಾ ದುಷ್ಕಾರ್ಯ ಮಾಡಿಸುವುದೊ 4 ಪಂಚಭೇದ ಜ್ಞಾನ ತತ್ವ ತಿಳಿಸಿ ಸುಖಿಪುದೊ ದುರಹಂಕಾರರಲ್ಲಿ ಮೆರೆಸಿ ನರಕದಿ ಬೀಳಿಸುವುದೊ 5 ದಾನಧರ್ಮ ಪರೋಪಕಾರ ದಯಾವಂತನೆನಿಪುದೊ ಹೀನನೆನಸಿ ಸಕಲರಿಂದ ಹೀಯ್ಯಾಳಿಸಿಬಿಡುವುದೊ 6 ಭಾರ ಅವರವರಧಿಕಾರದಂತೆ ಎಲ್ಲರಿಗೂ ನಡಿಸುವಾ 7
--------------
ಗುರುರಾಮವಿಠಲ
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ. ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ 1 ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ 2 ವಾಕು ಪಾಲಿಸೊ ಹರೆ 3 ಮಲ್ಲಮರ್ದನ ಕೃಷ್ಣ 4 ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ 5
--------------
ವ್ಯಾಸವಿಠ್ಠಲರು
ಆ ರಣಾಗ್ರದಿ ಭೀಮಗಡ್ಡಯಿಪರಾರು? |ವಾರಿಧಿಮೇರೆದಪ್ಪಲು ನಿಲ್ಲಿಸುವವರಾರು?ಪನಾನಾ ದೇಶದ ಭೂನಾಯಕರಿದ್ದರಲ್ಲವೆತಾನು ದುಶ್ಯಾಸನನ ತತ್ತರಿವಾಗ ||ಮೌನಗೊಂಡರಲ್ಲದೆ ಮುಂಕೊಂಡು ಬಿಡಿಸಿದರೆಆನೆಯ ಕೈಯ ಕಬ್ಬಿಗೆ ಅಂಗಯಿಸುವರಾರು? 1ಘುಡುಘುಡಿಸುತ ರಾಯ ಕುರುಪತಿಯನು ಕೆಡಹಿತೊಡೆಗಳನು ಗದೆಯಿಂದ ತುಂಡಿಸುವಾಗ ||ಕಡುಕೋಪದವ ಹಲಧರನೇನ ಮಾಡಿದ?ಬಡವನ ಕೋಪ ದವಡೆಗೆ ಮೃತ್ಯುವಲ್ಲವೆ? 2ಸಂದಿಗೆ ಸಾವಿರ ಸಿಂಹಸತ್ತ್ವದ ಕೀಚಕನಕೊಂದು ಬಿಸುಡುವಾಗ ಮುಂಕೊಂಡರುಂಟೆ? ||ಚೆಂದದಿಪುರಂದರವಿಠಲದಾಸರು ಮನದಂದಕೆ ಬಂದಂತೆ ನಡೆದುದೆಮಾರ್ಗ3
--------------
ಪುರಂದರದಾಸರು
ಆರೋಗಣೆಯ ಮಾಡೇಳಯ್ಯ ಶ್ರೀಮನ್ನಾರಾಯಣಭೋಗ ಸ್ವೀಕರಿಸಯ್ಯಪ.ಸರಸಿಜಭವಾಂಡದ ಮೇರು ಮಂಟಪದಿ ದಿನಕರಕರ ದೀಪ್ತ ಜ್ಯೋತಿಶ್ಚಕ್ರವು ||ತರಣಿ ಮಂಡಲ ಪೋಲುವ ರತುನದ ಹೊನ್ನಹರಿವಾಣದಲಿ ದೇವಿ ಬಿಡಿಸಿಹಳಯ್ಯ 1ಅಲ್ಲ ಹೇರಳೆ ಲಿಂಬೆ ಯಾಲಕ್ಕಿ ಮೆಣಸು ಕಾಯ್ನೆಲ್ಲೆ ಅಂಬಟೆಕಾಯಿ ಚೆಲ್ವ ಮಾಂಗಾಯಿ ||ಬೇಲ ಮಂಗರೋಳಿ ಹುಣಸೆ ಪಾಪಟೆಕಾಯಿಎಲ್ಲ ಧರಾದೇವಿ ಅಣಿಗೊಳಿಸಿಹಳಯ್ಯ 2ಹಪ್ಪಳ ಸಂಡಿಗೆ ವಿವಿಧ ಶಾಕಂಗಳುತುಪ್ಪ ಸಕ್ಕರೆ ಹಣ್ಣು-ಹಂಪಲವು ||ಕರ್ಪೂರ ಕಸ್ತೂರಿ ಬೆರಸಿದ ಸಿಖರಿಣಿಒಪ್ಪದಿ ಶ್ರೀದೇವಿ ಬಡಿಸಿಹಳಯ್ಯ 3ಎಣ್ಣೂರಿಗತಿರಸ ಚೆನ್ನಾದ ಮಂಡಿಗೆಅನ್ನಕ್ಷೀರಾನ್ನ ಪರಮಾನ್ನಗಳು ||ಸಣ್ಣ ಸೇವೆಗೆ ಶಾಲ್ಯನ್ನವ ನಿಮಿಷದಿಚೆನ್ನೆ ದುರ್ಗಾದೇವಿ ಬಡಿಸಿಹಳಯ್ಯ 4ನೀ ನಿತ್ಯತೃಪ್ತನಹುದು ನಿನ್ನ ಉದರದೊಳುನಾನಾ ಜನರು ಬಂದು ಉಣ್ಣಬೇಕೋ ||ಶ್ರೀನಾಥ ಗದುಗಿನ ವೀರನಾರಾಯಣಅನಾಥ ಬಂಧು ಶ್ರೀ ಪುರಂದರವಿಠಲ 5
--------------
ಪುರಂದರದಾಸರು
ಆವ ಪುಣ್ಯವೊ ಗೋಪಿಗಾವ ಪುಣ್ಯವೊ ಪ.ಆವ ಪರಬೊಮ್ಮನಾವಾವ ಪರಿಯಲಾಡಿಸುವ ಅ.ಪ.ಮಾರನನ್ನ ಪೆತ್ತನ ಕುಮಾರನೆಂದು ಕರೆದು ತನ್ನಮಾರಬೀಸಿ ಬಿಗಿದಪ್ಪಿ ಮೋರೆ ನೋಡಿ ಮೊಲೆಯ ಕೊಡುವ1ಕಾಲನಾಗಿ ಜಗವ ತತ್ಕಾಲದಲ್ಲಿ ನುಂಗುವಂಗೆಕಾಲಮೇಲೆ ಮಲಗಿಸಿ ತ್ರಿಕಾಲದಲ್ಲಿ ಹಾಲನೆರೆವ2ನೀತ ಪ್ರಭು ವಿಶ್ವಕೆ ವಿನೀತನಾಗಿ ಕೈಯ ಒಡ್ಡೆನೀತಿ ಹೇಳಿ ನವನವನೀತವಿತ್ತು ರಂಜಿಸುವ 3ಆನೆಗೊಲಿದು ಎಂಟುದಿಕ್ಕಿನಾನೆಯಾಳ್ದ ಅಪ್ರತಿಮ ದಯಾನಿಧಿಯ ಕುಳ್ಳಿರಿಸಿ ಆನೆ ಬಂತಂತಾನೆಯೆಂಬ 4ತೋಳನೋಡುಧೈರ್ಯದೀರ್ಹತ್ತು ತೋಳಿನವನ ಹೋರುವ ನಳಿತೋಳವಿಡಿದು ವಾರಂವಾರ ತೋಳನ್ನಾಡೊ ಮಗನೆ ಎಂಬ 5ತಾರಕೋಪದೇಶಕಗೆತಾರಕರಂಗನಳಲುತಾರಕಪತಿಯ ತೋರಿ ತಾರಕ್ಕ ಬಿಂದಿಗೆಯೆಂಬ 6ದಟ್ಟವಾದ ಜೀವಜಾಲದಅಟ್ಟುಳಿನಿವಾರಣಂಗೆದಟ್ಟು ದಟ್ಟು ಎಂದು ರಂಗನ ದಟ್ಟ ಸಾಲನಿಕ್ಕಿಸುವ 7ಚಿನ್ಮಯಾತ್ಮ ಮುಕ್ತಾಮುಕ್ತ ಚಿನ್ನರನಾಡಿಸುವಂಗೆಚಿನ್ನ ತಾ ಹೊನ್ನ ಗುಬ್ಬಿ ಚಿನ್ನ ಗುಬ್ಬಿಯಾಡಿಸುವ 8ದೃಷ್ಟಾದೃಷ್ಟದೇಹಿಗಳದೃಷ್ಟ ನಿಯಾಮಕಂಗೆದೃಷ್ಟಿ ತಾಕಿತೆಂದು ತೆಗೆದು ದೃಷ್ಟಿ ದಣಿಯೆತುಷ್ಟಿಬಡುವ9ಅನ್ನಮಯನು ಬ್ರಹ್ಮಾದ್ಯರಿಗೆ ಅನ್ನಕಲ್ಪತರುಪರಮಾನ್ನ ಚಿನ್ನಿಪಾಲಿನಿಂದ ಅನ್ನಪ್ರಾಶನ ಮಾಡಿಸುವ 10ನಿತ್ಯತೃಪ್ತ ನಿತ್ಯಾನಂದ ನಿತ್ಯಭೋಗಿ ನಿತ್ಯತಂತ್ರನಿತ್ಯಕರ್ಮನ್ನೆತ್ತಿಕೊಂಡುನೆತ್ತಿಮೂಸಿ ಮುದ್ದಿಸುವ11ಆ ಲಯದಲ್ಲಾಲದೆಲೆ ಆಲಯಗೆ ತೊಟ್ಟಿಲು ಉಯ್ಯಾಲೆಯಿಟ್ಟು ಮುದ್ದು ಮಾತನಾಲಿಸಿ ಜೋಗುಳವ ಪಾಡುವ 12ಅಂಜಲಿಪುಟದಿ ಸುರರಂಜಿಕೆಯ ಬಿಡಿಸುವ ನಿರÀಂಜನಗಭ್ಯಂಜನಿಸಿ ಅಂಜನಿಟ್ಟುಅಮ್ಮೆಕೊಡುವ13ಸಪ್ತ ಸಪ್ತಭುವನಜನಕೆಸುಪ್ತಿಎಚ್ಚರೀವನಿಗೆಸುಪ್ತಿಕಾಲವೆಂದು ತಾನು ಸುಪ್ತಳಾಗಿ ಸ್ತನವ ಕೊಡುವ14ತನ್ನ ಮಗನ ನಡೆಯ ನುಡಿಯ ತನ್ನ ಪತಿಗೆ ಹೇಳಿ ಹಿಗ್ಗಿತನ್ನ ಭಾಗ್ಯ ಲಕ್ಷ್ಮೀಶ ಪ್ರಸನ್ನವೆಂಕಟ ಕೃಷ್ಣಯೆಂಬ 15
--------------
ಪ್ರಸನ್ನವೆಂಕಟದಾಸರು
ಇಕ್ಕೊಳ್ಳಕ್ಕೊ ಸಿಕ್ಕ ರಂಗನೋಡುಈಠಕ್ಕ ಮಾಡಿಹ ಬಹು ಕೇಡು ಪಪೆಟ್ಟಿಗೆಯೊಳು ದೇವರುಗಳು ಗಂಡಸ- |ರಿಟ್ಟಿರಲವ ಅಂಜದಾಲೆ ||ಮುಟ್ಟಿ ಮನೆಗೊಂದೊಂದೊಗೆದು ಮುರು-ಬಟ್ಟಿ ಮಾಡಿಬಿಟ್ಟನಲ್ಲೆ 1ತಾ ಕೆಡಿಸಿ ಒಡೆದಡಕಲಿ ಗಡಿಗೆಗಳನು |ಆಕಳ ಒಳಘೊಗಿಸಿಹ್ಯನೂ ||ಈ ಕರಕರೆಯರಿಯಳು ನಮ್ಮತೆಯೆಂ-ಬಾಕೆನ್ನನು ಕೊಲ್ಲುವಳಲ್ಲೆ 2ಅಡಕಲಿಯೊಳು ದೇವರ ತಾಳಿಯ ಸರ |ತುಡುಗು ಮಾಡಿ ತಕ್ಕೊಂಡು ||ಗಡಬಿಡಿ ಮಾಡೆಲ್ಲೊಗೆದನೊ ನಾ ಎ- |ಷ್ಠುಡುಕಿದರೂ ಸಿಗವಲ್ಲೆ3ನೆಲವಿಗೇರಿಸಿದ ಚಟ್ಟಿಗಿಗಳು ಒಂ- |ದಳುಕದೆ ಮೊದಲಂತಿಹವೆ ||ಇಳುಕಲು ಒಂದಕ್ಕೊಂದಕೆ ತೂತು |ಪಾಲ್ಗಳು ಈಸನಿಲ್ಲವಲ್ಲೆ 4ಅಡವಿಯ ದೇವರ ಹೆಸರಿಲಿ ತುಪ್ಪವ |ಮಡಿಯ ಮಾಡಿ ತುಂಬಿರಲು ||ಕುಡಿದು ಮುಚ್ಚಿ ಮೊದಲಪ್ಪಂದಿಟ್ಟಿಹ |ಕೊಡದೊಳು ಬರಿ ನೀರಲ್ಲೇ 5ಅಂಡಜವಾಹನಓಕಳಿ ಚಲ್ಲಿಹ |ಪುಂಡತನದಿ ಮಂಚದ ಮೇಲೆ ||ಭಂಡಿದು ಏನೆಂಧೇಳಲಿ ಮನೆಯೊಳು |ಗಂಡನ ಸಿಟ್ಟು ನೀ ಬಲ್ಲೆಲ್ಲೆ 6ಏನೆನರಿಯದವಳಿಗಿದು ಬಂದಿತು |ಕ್ಷೋಣಿಯೊಳಗೆ ಒಣಹರಲೆ ||ಮಾನನೀಯಳೆ ಈಪರಿಮಾಡಿ- |ದನಿಕೋ ಪ್ರಾಣೇಶ ವಿಠಲನೀಗ 7
--------------
ಪ್ರಾಣೇಶದಾಸರು
ಇಂದುನಾಳ್ಯೊ ಈಗಾವಾಗೊ ಈಕಾಯಸ್ಥಿರವಲ್ಲಇಂದಿರೇಶ ನಿನ್ನ ನೆನೆವ ಮತಿಯ ನೀಡೊ ಮನ್ನಿಸಿ ನೋಡೊ ಪ.ಕುಚ್ಛಿತ ಕರ್ಮವಾಚರಿಸಿ ಕಶ್ಮಲ ಜನ್ಮನುಭವಿಸಿದುಶ್ಚಿತ್ತದಿ ಬಾಳ್ದೆನಯ್ಯ ದೂರಾದೆ ನಿಮಗೆ ದಮ್ಮ್ಮಯ್ಯಅಚ್ಚುತ ನಿನ್ನಿಚ್ಛೆಯಿಂದೆ ಆದಿವರ್ಣದವನಾದೆಸ್ವಚ್ಛಿತ ಭಕ್ತಿಯನಿಲಯ ಸುಜನಬಂಧು ಸುಗುಣಸಿಂಧು 1ಹೊಟ್ಟೆಯ ಹೋರಟೆಗಾಗಿ ಹೊತ್ತಾರೆದ್ದು ತಿರುಗಿ ತಿರುಗಿಕೆಟ್ಟ ವೃತ್ತಿಯನ್ನು ಹಿಡಿದೆ ಕೀಳುಮನುಜರೊಳಾಡಿದೆಬಿಟ್ಟೆ ನಿಮ್ಮ ಪೂಜೆಯನ್ನು ಬಿದ್ದೆ ಭವಾಂಬುಧಿಯನ್ನುವಿಠ್ಠಲ ಎನ್ನುದ್ಧರಿಸೊ ವಿದ್ವದ್ಹøದ್ಯ ವೇದವೇದ್ಯ 2ವೇದಶಾಸ್ತ್ರಾಭ್ಯಾಸವಿಲ್ಲ ವೇದಜÕರರ್ಚಿಸಲಿಲ್ಲಬೋಧವನು ಕೇಳಲಿಲ್ಲ ಬುದ್ಧಿ ಎನ್ನೊಳು ಚೂರಿಲ್ಲಸಾಧನವ ತಿಳಿಯಲಿಲ್ಲ ಸಾಧುಮಾರ್ಗವ ಕಾಣಲಿಲ್ಲಭೇದಜÕರೊಳ್ ಕೂಡಿಸೆನ್ನ ಭೀಮಪಾಲಾಭಿನವಲೀಲ 3ಕಾಂತೇರ ಕುಚೇಷ್ಟೆಗಳಿಗೆ ಕೀಳುಚ್ಚಾರದ ಮಕ್ಕಳಿಗೆಭ್ರಾಂತನಾಗಿ ಸ್ನೇಹ ತೋರ್ದ ಬಲೆಯೊಳ್ ಸಿಲುಕಿದೆಸಂತರಂಘ್ರಿ ಸಖ್ಯವನೊಲ್ಲೆ ಸತ್ಕಥೆಯನಾಲಿಸಲೊಲ್ಲೆಅಂತು ಮದವನಿಳಿಸಿ ಕಾಯೊಅಂಗಜಪಿತನೆ ಅಘರಹಿತನೆ4ಬಳಲಿಸಿದೆ ತನುವನು ಬಯಸಿ ಖಳರಾರ್ಥವನ್ನುನಳಿನಾಕ್ಷ ನಿನ್ನ ಬೇಡದೆ ನಾಸ್ತಿಕರಿಗೆ ಕೈಯನೊಡ್ಡಿದೆಹೊಳೆವ ಸುರಭಿಯ ಬಿಟ್ಟು ಹುಲಿಪಾಲಿಗಾಯಾಸಬಟ್ಟೆಕಳೆದೆನನಘ್ರ್ಯಾಯುಷ್ಯವ ಕುಚೇಲಮಿತ್ರ ಕರುಣನೇತ್ರ 5ವಿಷ್ಣು ತತ್ವವರಿಯದೆ ಧೀರ ವೈಷ್ಣವನೆನಿಸದೆಭ್ರಷ್ಟಮನವ ತೊಳೆಯದೆ ಬಹಿಛ್ಛಿನ್ನದಲ್ಲೆ ಮೆರೆದೆಶಿಷ್ಯ ಗುರುಗಳ ಜರಿದೆ ಶಠರನು ಅನುಸರಿಸಿದೆದುಷ್ಟವೃತ್ತಿಯನು ಬಿಡಿಸೊ ದುರ್ಗುಣಧಾಮನ ದುರಿತಶಮನ 6ಇಂದ್ರಿಯಗ್ರಾಮ ನಿನ್ನದು ಇಷ್ಟ ಬಳಗವು ನಿನ್ನದುಸೌಂದರ್ಯ ಸುಖ ನಿನ್ನದು ಸ್ವರೂಪ ಸ್ವಾತಂತ್ರ್ಯ್ರನಿನ್ನದುಮಂದಮತಿಯಿಂದ ಅಹಂಮತಿಯಲ್ಲಿ ನೊಂದೆ ಬಹುಕುಂದನೋಡದೆನ್ನ ಸಲಹೊ ಕುಂಜರವರದ ಕುಶಲಪದದ7ನಿನ್ನ ಕಥಾಮೃತವು ಕಿವಿಗೆ ನಿನ್ನ [ಕೀರ್ತನೆ ನಾಲಗೆಗೆ]ನಿನ್ನ ಲಾವಣ್ಯವು ಕಣ್ಣಿಗೆ ನಿನ್ನ ಸೇವೆ ಸರ್ವ ಇಂದ್ರಿಯಕ್ಕೆಎನಗೆ ಬೇಗ ಕರುಣಿಸಿ ಎಲ್ಲ ದುರಿಚ್ಛೆಗಳ ನೂಕುಇನ್ನು ದಾಸದಾಸ್ಯವು ಬೇಕೊ ಋಷಿಕುಲೇಶ ಹೃಷಿಕೇಶ 8ಅಚ್ಯುತಾನಂತಗೋವಿಂದ ಆದಿಪುರುಷ ಮುಕುಂದಸಚ್ಚಿದಾನಂದಸರ್ವೇಶ ಸುಚರಿತ್ರ ಕರಿವರದನೆಚ್ಚಿದೆ ತವ ಪಾದಾಂಬುಜ ನಮೊ ಬೊಮ್ಮಾದ್ಯರ ದೇವನಿಚ್ಚಪ್ರಸನ್ವೆಂಕಟ [ನಿನ್ನ ನೆನೆವ ಮ್ಮತಿಯನೀಡೊಮನ್ನಿಸಿ ನೋಡೊ] 9
--------------
ಪ್ರಸನ್ನವೆಂಕಟದಾಸರು
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |ಸವ್ಯಸಾಚಿ ಪ್ರೀತ ಹೋಮಧ್ಯಗೇಹಜಾತ ಹೋ ಪತರಣಿಬಿಂಬಕೆ ಜಿಗಿದೆ ಗದೆಯನು ವಗೆದೆಅಸುರಗ ಕರವನು ಮುಗಿದೆ |ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |ತರಿದೆ,ವಜ್ರಶರೀರ, ಧರಣಿಯಭಾರವಿಳುಹಿದುದಾರಮತಿ, ಕಪಿ |ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ 1ದಂಡ ಮೇಖಲ ಧಾರ ಕುಜನಕುಠಾರ|ಬ್ರಹ್ಮ ಶರೀರ ಜೈಸಿದೆಮಂಡೋದರಿ ವಲ್ಲಭನ ಚರಿಸಿದೆಯೋವನ|ತಂದೆ ಮಾಧವನ ಉಡುಪಿಲಿಚಂಡವಿಕ್ರಮರಾಮ ಸೇವಕ ಭೀಮ |ಸದಾಚಾರಧಾಮಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ 2ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |ಮುಕುತಿಪತಿಪ್ರಾಣೇಶ ವಿಠಲನದಾಸ ಸಲಹೋ ನಿರ್ದೋಷ3
--------------
ಪ್ರಾಣೇಶದಾಸರು
ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯಎನ್ನ ದಯದಿ ಪಾಲಿಸಯ್ಯ ಪನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪಅಮರೇಂದ್ರವಂದಿತನೆ ಅನಂತಮಹಿಮನೆಕಮಲಸಖಾನಂತಕರನೆ ||ಕಮಲಾಯತಾಂಬಕನೆ ಕಾಮಿತದಾಯಕನೆವಿಮಲಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ1ಅಜಮಿಳ ಅಂಬರೀಷ ಅಕ್ರೂರ ವಿದುರಗೆಗಜರಾಜ ಗಿರಿಜೇಶಗೆ ||ನಿಜಭಕ್ತ ಪ್ರಹ್ಲಾದಅಜ ಧ್ರುವ ಅರ್ಜುನಗೆದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ2ಅವರಂತೆ ನಾನಲ್ಲಅವರ ದಾಸರ ದಾಸಸವರಿ ಬಿಸುಟೆನ್ನ ದೋಷ ||ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತುಎಂದೆಂದು ನಿನ್ನ ನಾಮಭಜನೆ ||ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನುಚಿಂತೆಗಳ ಪರಿಹರಿಸೊ ||ಸಂತತ ಪಾಲಿಸೊಪುರಂದರ ವಿಠಲನೆಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ 5
--------------
ಪುರಂದರದಾಸರು