ಒಟ್ಟು 44128 ಕಡೆಗಳಲ್ಲಿ , 139 ದಾಸರು , 10983 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು
ಸಾವಧನಾಗಿ ಮನುಜಾ | ಕೇಳು | ನಿಜ ಸ್ಥಿತಿಯಾ ಪ ಕೇಳು ನಿಜ ಸ್ಥಿತಿಯಾ | ಪಡೆದೇನೆಂದರೆ ಗತಿಯಾ | ಬೀಳದೆ ನೀ ಕವಳದಾರಿಗೆ | ನಂಬು ಗುರು ಮೂರ್ತಿಯಾ 1 ಗಗನ ಮುರಿದು ಬೀಳಲಿ | ಸಾಗರ ಮೇರೆದಪ್ಪಲಿ | ಬಾಗದೇ ನೀ ಅನ್ಯದೈವಕ | ಭಾವ ದೃಢ ವಿರಲಿ 2 ದಾಸರ ಕಂಡರೆ ರಂಗಯ್ಯಾ | ಜಂಗಮ ಕಂಡರೆ ಲಿಂಗಯ್ಯಾ | ವೇಷಿಯಂತೆ ತಿರುಗಬ್ಯಾಡಾ | ಹಿಡಿಯೋ ಒಂದೇ ನಿಷ್ಠೆಯಾ 3 ಕಂಡ ಮಾರ್ಗ ನೋಡದೆ | ಕಂಡ ಮಾತನಾಡದೆ | ಗಂಡನೊಬ್ಬನ ಮಾಡದೆ ನಾರಿ | ಪತಿವೃತೆ ಮೆರಿವದೇ 4 ಎಲ್ಲಿ ಒಂದೇ ನಿಷ್ಠೆಯು | ಅಲ್ಲಿ ಶ್ರೀ ಹರಿ ಕೃಪೆಯು | ನಿಲ್ಲದೆ ಮಹಿಪತಿ ನಂದನಸ್ವಾಮಿ | ಇದಿರಿಡುವನು ಸಂಗತಿಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾವಧಾನವಾಗಿ ನೋಡಿ ನಿಜ ಭಾವಬಲಿದು ನೋಡಲಿಕ್ಯದೆ ವಸ್ತು ಸಹಜ ಧ್ರುವ ಹತ್ತಿಲಿದೆ ತಾ ಸರ್ವಕಾಲ ಚಿತ್ತೊಂದೆ ಮಾಡಿ ನೋಡು ಗುರುಪಾದ ಕಮಲ ನೆತ್ತಿಯೊಳಗದೆ ನಿಶ್ಚಲ ಉತ್ತಮೋತ್ತವಾದ ಸದ್ವಸ್ತು ಅನುಕೂಲ 1 ಅತ್ತಿತ್ತಲೆ ನೋಡಲಾಗದು ತುಂಬಿ ತುಳುಕುವದು ಸುತ್ತೆ ಸೂಸ್ಯಾಡುತಲಿಹುದು ಮತ್ತೆ ಉನ್ಮನವಾಗಿ ತನ್ನೊಳು ತಾ ನೋಡುವದು2 ಸಾರವೆ ಅದೆ ಸತ್ಯನೋಡಿ ಮಿಥ್ಯ ಭ್ರಾಂತನೆ ಈಡಾಡಿ ಗುರುಕೃಪೆಯಿಂದ ನಿಜಗೂಡಿ ತರಳ ಮಹಿಪತಿ ಹರುಷಗೈದ ಬೆರೆದಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡಿ ಶ್ರೀ ವಾಸುದೇವನ ದ್ರುವ ಆವಾಗ ನೋಡಿ ಚರಣ ಸೇವಿಸಿ ನಿಧಾನ 1 ಕಣ್ಣಮುಂದೆ ಕಟ್ಯಾನೆ ಭಿನ್ನವಿಲ್ಲದೆ ತುಂಬ್ಯಾನೆ ಸಣ್ಣ ದೊಡ್ಡರೊಳಗ್ಹಾನೆ ಕಾಣಿಸುತಲ್ಹ್ಯಾನೆ 2 ಚಿತ್ತಮನೊಂದು ಮಾಡಿ ಹತ್ತಿಲಿ ಸಾಭ್ಯಸ್ತ ನೋಡಿ ನಿತ್ಯ ನಿಜಗೂಡಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವೆಂದು ಶ್ರುತಿಸಾರುತಿದೆಕೊ ಸಾವಧಾನ ಸಾವಧಾನಾಗಿ ಸಾಧಿಸಿ ಶ್ರೀಹರಿ ಸ್ವರೂಪಜ್ಞಾನ ಧ್ರುವ ಕಾಯದ ಕಳವಳ ಕಂಗೆಡಿಸದೆ ಮುನ್ನೆ ಸಾವಧಾನ ಮಾಯಮೋಹದ ಭ್ರಮೆದೋರದ ಮುನ್ನೆ ಸಾವಧಾನ 1 ಕಾಮಕ್ರೋಧ ತನ್ನ ನೇಮಗೆಡಿಸಿದ್ಹಾಂಗ ಸಾವಧಾನ ತಾಮಸದೊಳು ಕೂಡಿ ತರ್ಕಸ್ಯಾಡದ್ಹಾಂಗ ಸಾವಧಾನ 2 ಆಸನ ವ್ಯಸನ ಕೂಡಿ ಹಸನ ಕೆಡದ್ಹಾಂಗ ಸಾವಧಾನ ವಿಷಯ ವಿಭ್ರಮದೊಳು ವಶವಗುಡದ್ಹಾಂಗ ಸಾವಧಾನ 3 ನಿದ್ರಿವೆಂಬುದು ತನ್ನ ಬುದ್ಧಿಗೆಡಿಸದ್ಹಾಂಗ ಸಾವಧಾನ ಸದ್ಯ ತಾನಾರೆಂದು ಶುದ್ಧಿ ತಿಳುವ್ಹಾಂಗ ಸಾವಧಾನ 4 ಪಾದ ರಕ್ಷಿಸುವದರಲಿ ಸಾವಧಾನ ನಿತ್ಯ ಸಾವಧಾನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನವೆಂದು ಶ್ರುತಿಸಾರುತಿದೆಕೋ ಭಾವದಿಂದಲಿ ಮನವೆ ನೀ ಎಚ್ಚತ್ತುಕೋ ಧ್ರುವ ಭವದ ನಿದ್ರಿಗಳೆದು ಸಾವದಾನವಾಗೋ ನಿವಾಂತ ಕೂಡಲಿಕ್ಯದ ಬಲು ಬೆಳಗೋ ವಿವೇಕವೆಂಬ ಸ್ಮರಣೆ ಇದೆ ನಿನಗೋ ಭವಹರ ಗುರುವಿಗೆ ಶರಣಯುಗೋ 1 ಮುಚ್ಚಿದ ಮಾಯದ ಮುಸಕ್ಹಾರಿಸುವದೆ ಙÁ್ಞನ ಎಚ್ಚತ್ತಮ್ಯಾಲಿದೆ ಖೂನ ಸುವಸ್ತು ಧ್ಯಾನ ಅಚ್ಯುತಾನಂತನ ಕಾಂಬುದನುಸಂಧಾನ ಅಚಲವೆಲ್ಲಕ್ಕಿದೆ ಸುಪಥಸಾಧನ 2 ಬೆಳಗಿನ ಬೆಳಗಿದೆ ಬಲು ನಿಶ್ಚಲ ಒಳಗೆ ಹೊರಗೆ ತೋರುವ ಆನಂದ ಕಲ್ಲೋಳ ಹೊಳೆವ ಮಹಿಪತಿಸ್ವಾಮಿ ಪ್ರಭೆಯು ಬಹಳ ಬೆಳಗಾಯಿತು ಗುರುದಯ ಪ್ರಬಳ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾವಧಾನಾಗಿ ಮಾಡೆಲೋ ಗುರುಭಕ್ತಿ | ಕಾವಕರುಣಾಳುದೋರಿ ನಿಜ ಮುಕ್ತಿ ಪ ಗುರುನಾಮ ಸ್ಮರಣೆ ಅನುದಿನಾ | ಗುರುಮೂರ್ತಿಯ ಮಾಡಿ ನಿಜಧ್ಯಾನಾ | ಗುರುಚರಣವ ಪೂಜಿಸು ನಿಧಾನಾ | ಗುರು ನಮನದಿ ಹಾಕಿ ಲೋಟಾಂಗಣಾ 1 ಗುರುಭಕ್ತರ ಸಂಗವನು ಮಾಡಿ | ಗುರು ಕರುಣದ ಮಹಿಮೆಯ ಪಾಡಿ | ಗುರುವಾಕ್ಯ ಪ್ರಸಾದವನು ಬೇಡಿ | ಗುರು ಅಭಯವ ಕೊಂಡು ನಲಿದಾಡಿ 2 ಗುರುವಿನಲ್ಲಿ ಹಿಡಿಯದೆ ನರಭಾವಾ | ಗುರುವಿಗರ್ಪಿಸಿ ತನುಧನ ಮನ ಜೀವಾ | ಭವ ಬಂಧನವಾ | ಗುರುಮಹಿಪತಿ ಬಾಲನಾಗಿರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾವಧಾನೊ ಜೀವ ಭವಸಂತತಂಜೀವನ್ಮುಕ್ತಿ ಸಾಧನ ಸಂತತೋದ್ಧರಂ ಪಆಶಾ ಪಿಶಾಚಿ ಕಾಮ ವಧೂಯ ಕಷ್ಟತರಪಾಶ್ಯಾಕಾವೃತಿಂ ಪರಿಭೂಯಚಈಶಣತ್ರಯ ಮೂಲ ಮುತ್ಪಾಟ್ಯಚೌಥನಿಷ್ಕೋಶಾಸಿವಜ್ವಲಣ ಸರ್ವ ವಿಷಯೋಝ್ಝಿತಃ 1ಏಕಾಗ್ರತಾಮಾಕಲಯ್ಯ ಕೂಟಸ್ಥಾತ್ಮನಾಕಲಿತ ಚಿಂತಯಾನ್ಯದ್ವಿಲಾಪ್ಯಶೋಕ ಮೋಹಾದಿ ಪರಿಹೃತ್ಯಸುಪ ಬ್ರಹ್ಮಾಕಾರ ತಾಮನುಭವನ್ನಿತ್ಯ ಮುಕ್ತಯೋ 2ತಾಪತ್ರಯಂತ್ಯಜನ್ ತದಹಮಿತ್ಯಾನಂದರೂಪಿಣ ನಿತ್ಯತೃಪ್ತಿಂ ಪ್ರಪದ್ಯೆವ್ಯಾಪಕಾತ್ಮ ಭವ ನಿಜಾದ್ವೈತ ಬೋಧತೋಗೋಪಾಲಾರ್ಯ ದಯಯಾತೀವ ಧನ್ಯಃ 3
--------------
ಗೋಪಾಲಾರ್ಯರು
ಸಾವಾತ ನಾನಲ್ಲಾ ಸಾವು ಮೊದಲೆನಗಿಲ್ಲಾ ಯೋಗಿ ತಾ ಬಲ್ಲಾ ಪ ಧರೆಯೆನಿಸಿ ದೊರೆಯಾಜÉ್ಞಯೊಳಾಳುತಿಹೆ ನಾನು ವರಮಂತ್ರಿಯಾಗಿ ವರ್ತಿಸುವವನೆ ನಾನು ಕರಣಿಕರ ತೆರದಿ ಲೆಕ್ಕವ ನೋಡುತಿಹೆ ನಾನು ಪರಿವಾರವಾಗಿ ಓಲೈಸುವವನೆ ನಾನು 1 ವಾಹನ ಹೊರುವಾತ ನಾನು ಹೊತ್ತಂತಿರುವೆ ನಾನು ಹರಿನಾಮ ಹರನಾನು ನರನಾನು ಸರ್ವವೀ ಪರಿಯೊಳಗೆ ಮೆರೆದು ವಿಸ್ತರಿಪೆ ನಾನು 2 ಅಣುರೇಣು ತೃಣಕಾಷ್ಠ ಭರಿತನಾಗಿಹೆ ನಾನು ಗಣನೆಯಿಲ್ಲದ ಗುಣವ ತೋರ್ಪೆ ನಾನು ಉಣಲಿಕ್ಕುವವ ನಾನು ಉಂಡು ತೃಪ್ತಿಪೆ ನಾನು ರಣನಾನು ರಣವ ಗೆಲುವಾತ ನಾನು 3 ಭೂಮಿಯಾಗಿಹೆ ನಾನು ಬೆಳೆವ ಬೆಳೆಯೇ ನಾನು ಸೋಮ ಸೂರ್ಯಾಗ್ನಿ ವಾಯುಗಳೆ ನಾನು ನಾಮರೂಪಾತೀತ ವಸ್ತುವಾಗಿಹೆ ನಾನು ಕಾಮಿನಿಯರಾಗಿ ಕಾಮಿಸುವವನೆ ನಾನು 4 ಒಲಿವಾತನೇ ನಾನು ಒಲಿದರಗಲೆ ನಾನು ಕೊಲಿಸಿಕೊಂಬುವೆ ನಾನು ಕೊಲುವಾತ ನಾನು ಸುಲಭದಿಂದಲಿ ಜ್ಞಾನ ಫಲವಿಕ್ಕುವವ ನಾನು ಚೆಲುವ ವಿಮಲಾನಂದ ಗುರುರಾಯ ನಾನು 5
--------------
ಭಟಕಳ ಅಪ್ಪಯ್ಯ
ಸಾಸಿರ ಜಿಹ್ವೆಗಳುಳ್ಳ ಶೇಷನೆ ಕೊಂಡಾಡಬೇಕುವ್ಯಾಸಮುನಿರಾಯರ ಸಂನ್ಯಾಸದಿರವ ಪ ಆಸೆಯಿಂದ ತಮ್ಮುದರ ಪೋಷಣೆಗಾಗಿ ಛಪ್ಪನ್ನದÉೀಶವ ತಿರುಗಿ ಸಂಚಾರ ಮಾಡುತಮೀಸಲ ಮಡಿ ಬಚ್ಚಿಟ್ಟು ಮಿಂಚುಕೂಳನುಂಡು ದಿನಮೋಸಮಾಡಿ ಕಳೆವ ಸನ್ಯಾಸಿಗಳ ಸರಿಯೆ1 ಕೆರೆ ಬಾವಿ ಪುರ ಅಗ್ರಹಾರಂಗಳ ಮಾಡಿ ಭೂಸುರರೊಂದು ಲಕ್ಷ ಕುಟುಂಬಗಳಪೊರೆವ ವೈಭವ ಕೀರ್ತಿಯಿಂದಲಿ ವ್ಯಾಸರಾಯರ ಗುಣಗಣ ಗಾಂಭೀರ್ಯಾದಿಗಳ2 ಹಗಲಿರುಳೆನ್ನದೆ ಆವಾಗ ಶ್ರೀಹರಿ ಪದಪದ್ಮಯುಗಳವನರ್ಚಿಸಿ ಭಕುತಿಯಿಂದರಘುಪತಿಭಜಕ ಬ್ರಹ್ಮಣ್ಯತೀರ್ಥರ ಕುವರರಂಗವಿಠಲನನ್ನು ಬಿಡೆಬಿಡೆನು ಎಂಬ3
--------------
ಶ್ರೀಪಾದರಾಜರು
ಸಾಸಿರ ನಾಮವ ಹಾಡೆ | ತಂಗಿ ಪ ದಾಸರು ಬಂದರೆ ಕೈ ಜೋಡಿಸಿ ವಂದಿಸೆ ತೋಷದಿ ವರಗಳ ಸೀಡುವರಮ್ಮ ಅ.ಪ ಪರಿಮಳ ಭರದಲಿ ಮೆರೆಯುವ ಹೂಗಳ ಅರಸಿ ತಂದಿರುವಳು ನೀನಲ್ಲವೇ ಪರಮ ಮಂಗಳಕರ ಸರಸಿಜಪಾದಕೆ ಹರುಷದೊಳರ್ಪಿಸೆ ಮರೆಯದಿರಮ್ಮ 1 ಮಂದರಧರ ಗೋವಿಂದನು ಮನದಲಿ ನಿಂದಿರುವನು ತಾನೆಂದೆಣಿಸಮ್ಮ ಬಂಧಿಸಿ ಪಂಚೇಂದ್ರಿಯಗಳನೆಲ್ಲ ವಂದಿಸಿ ಕೈಪಿಡಿ ಎಂದು ಬೇಡಮ್ಮ 2 ಅಂಗನೆಯರ ಭಾವಭಂಗಿಗೆ ನಲಿಯುವ ಮಾಂಗಿರಿಯರಸನು ನಿಜವಮ್ಮ ಇಂಗಿತವರಿತು ಗೋಪಾಂಗನೆಯರಿಗಾ- ಲಿಂಗನವಿತ್ತವನಿವನಮ್ಮ 3 ಇವನಮ್ಮ ಮನದೈವ ಗೋಪಾಲನು ಇವನಮ್ಮ ಪರದೈವ ನೀಲಾಂಗನು ಭವದೂರ ಸುಕುಮಾರ ಸಿರಿಲೋಲನು ನವನೀತ ದಧಿಚೋರ ಸುವಿಲಾಸನು 4 ಪರಮಾರ್ಥ ಚರಿತಾರ್ಥ ವರದಾತನು ಪರತತ್ವ ಚಿರತತ್ವ ಗುರುವೀತನು ದುರಿತಾರಿ ಉಪಕಾರಿ ಪರಮಾತ್ಮನು ಸಿರಿರಂಗ ಮಾಂಗಿರಿಯ ದೊರೆಯೀತನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾಸಿರನಾಮ ಪೂಜೆಸಾಸಿರ ನಾಮ ಪೂಜೆಯ ಸಮಯಾ ಶ್ರೀವಾಸುದೇವನೆ ರಕ್ಷಿಪ ಸಮಯಾ ಸ್ವಾಮಿ ಪಸಾಸಿರ ದಳ ಪದ್ಮ ಮಧ್ಯಕೆ ಶ್ರೀ ವೇದವ್ಯಾಸ ಗುರುವು ಬಂದಿಹ ಸಮಯಾ ಭಾಸುರ ಛಂದಸ್ಸು ಮುಖಮಂಡಲದಿ ಪ್ರಕಾಶಿಸಿ ಮಂತ್ರ ಸಿದ್ಧಿಪ ಸಮಯಾ ಸ್ವಾಮಿ 1ಶ್ರೀರಮೆ ಧರೆ ಸಹ ಹೃದಯಮಧ್ಯದಿ ಶ್ರೀಮನ್‍ನಾರಾಯಣ ನೀನಿಹ ಸಮಯಾತೋರುತಿದಿರೆ ಪೀಠದಿ ಪೂಜೆಗೊಳುತೆನ್ನಸ್ಮೇರಾಸ್ಯದಿಂ ನೋಡುವ ಸಮಯಾ ಸ್ವಾಮಿ 2ಬೀಜನಾಮವು ದಕ್ಷಿಣ ಸ್ತನ ದೇಶದಿಭ್ರಾಜಿಸಿ ಭಕ್ತಿಗೂಡುವ ಸಮಯಾರಾಜಿಪ ಶಕ್ತಿ ನಾಮವು ವಾಮದಿ ಫಲರಾಜಿಯ ಬೆಳಸುತಿರುವ ಸಮಯಾ ಸ್ವಾಮಿ 3ಹೃದಯದಿ ಕೀಲಕ ನಾಮವು ನಿನ್ನಯಪದಸನಿಯವ ಸೇರಿಪ ಸಮಯಾಪದರದೆ ವಿಘ್ನತತಿಗೆ ಭಜಿಸೆನ್ನುತಸದಯ ಸದ್ಗುರು ನಿಯಮಿಪ ಸಮಯಾ ಸ್ವಾಮಿ 4ಅಂಗುಲಿಗಳು ನಿನ್ನ ಮಂಗಳ ನಾಮಗಳಸಂಗದಿ ಶುದ್ಧಿವಡೆದಿಹ ಸಮಯಾಗಂಗೆಯ ಪಡೆದ ನಿನ್ನಡಿಗೆ ತುಲಸಿ ಕುಸುಮಂಗಳನರ್ಪಿಸುತಿಹ ಸಮಯಾ ಸ್ವಾಮಿ 5ಅಂಗಗಳಾರು ಶುಭಾಂಗಗಳಾಗಿ ನಿನ್ನಮಂಗಳ ತನುವ ಧ್ಯಾನಿಪ ಸಮಯಾತೊಂಗದೆ ವಿಷಯಗಳೊಳು ನಿನ್ನ ಪದದುಂಗುಟದುದಿಯ ಸೇರಿಹ ಸಮಯಾ ಸ್ವಾಮಿ 6ದಶನಾಮ ದಶಕ ದಶಕ ಸಮಯದಿ ದಿವ್ಯದಶವಿಧ ಭೋಜ್ಯ ಭೋಜಿಪ ಸಮಯಾದಶವಿಧದಾರತಿಗಳ ಬೆಳಕಿಗಿಂದ್ರಿಯದಶಕವು ವಶಕೆ ಬಂದಿಹ ಸಮಯಾ ಸ್ವಾಮಿ 7ಮೀನ ಕಮಠ ಬುದ್ಧ ಕಲ್ಕಿನೀನಾಗಿ ಭಕತರಿಷ್ಟವನಿತ್ತೆ ನನ್ನಯದೀನತೆಯಳಿವರಿದೇ ಸಮಯಾ ಸ್ವಾಮಿ 8ಅನುಗ್ರಹಶಕ್ತಿಯೊಳಿರುತಷ್ಟಶಕ್ತಿಗಳನು ನೋಡಿ ಸೇವೆಗೊಳುವ ಸಮಯಾಸನಕಾದಿಗಳು ಶ್ರುತಿ ಸ್ಮøತಿ ಪುರಾಣಂಗಳುವಿನಮಿತರಾಗಿ ನುತಿಪ ಸಮಯಾ ಸ್ವಾಮಿ 9ವರ ಸಿಂಹಾಸನದಗ್ನಿ ದಿಕ್ಕಿನೊಳ್ ಧರ್ಮನುಹರುಷದಿಂ ಸೇವೆಗೈಯುವ ಸಮಯಾನಿರುರುತಿ ದೇಶದಿ ಜ್ಞಾನನು ತಾಮಸಬರದಂತೆ ಕಾದು ನಿಂದಿಹ ಸಮಯಾ ಸ್ವಾಮಿ 10ವೈರಾಗ್ಯ ವಾಯವ್ಯದೊಳು ನಿಂದು ದುಃಖವಹಾರಿಸುತಲಿ ಸೇವಿಪ ಸಮಯಾಸಾರಿರುತೈಶ್ವರ್ಯನೀಶನೆಡೆಯೊಳ್ ನೀನುತೋರಿದೂಳಿಗ ಗೈಯುವ ಸಮಯಾ ಸ್ವಾಮಿ 11ಸುರಪತಿ ದೆಶೆಯೊಳಧರ್ಮನು ಬೆದರುತಕರವ ಮುಗಿದು ನಿಂದಿಹ ಸಮಯಾಇರುತ ದಕ್ಷಿಣದಲಜ್ಞಾನನು ಚೇಷ್ಟೆಯತೊರೆದು ಭಯದಿ ಭಜಿಸುವ ಸಮಯಾ ಸ್ವಾಮಿ 12ವರುಣದಿಕ್ಕಿನೊಳವೈರಾಗ್ಯನು ನಿನ್ನಡಿಗೆರಗುವವರ ನೋಡುವ ಸಮಯಾಇರುತಲುತ್ತರದಲನೈಶ್ವರ್ಯ ಮಂತ್ರದುಚ್ಚರಣೆಯ ತಪ್ಪನೆಣಿಪ ಸಮಯಾ ಸ್ವಾಮಿ 13ಕಾಮಾದಿಗಳು ಪೀಠಸೀಮೆಯೊಳಗೆ ನಿಂತು ಕೈಮುಗಿದಲುಗದಿರುವ ಸಮಯಾತಾಮಸ ರಾಜಸ ಸಾತ್ವಿಕಗಳು ನಿನ್ನನಾಮದ ಬಲುಹ ತಿಳಿವ ಸಮಯಾ ಸ್ವಾಮಿ 14ಎಂಟು ದಿಕ್ಕಿನ ದೊರೆಗಳು ಪರಿವಾರ ಸಹಬಂಟರಾಗಿಯೆ ಕಾದಿಹ ಸಮಯಾಎಂಟು ಬಗೆಯ ಸಿರಿದೇವಿಯರೊಂದಾಗಿನಂಟುತನವ ಬಳಸಿಹ ಸಮಯಾ ಸ್ವಾಮಿ 15ಮೊದಲ ನಾಮವು ವಿಶ್ವಮಯ ನಿನ್ನ ನಿರ್ಗುಣಪದವ ಸೂಚಿಸಿ ಸಲಹುವ ಸಮಯಾತುದಿಯ ನಾಮದಿ ಭಕತರಿಗಾಗಿ ತನುದಾಳಿಒದೆದು ದುರಿತವ ರಕ್ಷಿಪ ಸಮಯಾ ಸ್ವಾಮಿ 16ದೂರಕೆ ದುರಿತವು ಹಾರಿ ಹೋಗಿಯೆ ಭಕ್ತಿಸೇರಿ ನಿನ್ನೆಡೆಯೊಳಾನಿಹ ಸಮಯಾದಾರಿದ್ರ್ಯ ದುಃಖವು ತೋರದಾನಂದವ ಸಾರಿ ನಿನ್ನನು ನುತಿಸುವ ಸಮಯಾ ಸ್ವಾಮಿ 17ಸಾಸಿರ ತಾರಕ ಜಪ ಮೊದಲು ಲಭಿಸಿಸಾಸಿರ ನಾಮ ಜಪವು ಮಧ್ಯದಿಸಾಸಿರ ವಂದನೆ ಕುಸುಮ ತುಲಸಿಗಳಸಾಸಿರದಿಂದೊಪ್ಪುವ ಸಮಯಾ ಸ್ವಾಮಿ 18ಸಾಸಿರ ಸಾಸಿರ ಜನ್ಮ ಜನ್ಮಗಳೊಳುಸಾಸಿರ ಸಾಸಿರ ತಪ್ಪುಗಳಾಸಾಸಿರ ಬಾರಿ ಮಾಡಿದ್ದರು ನಾಮದಸಾಸಿರ ಪ್ರಭೆಯೊಳಳಿವ ಸಮಯಾ ಸ್ವಾಮಿ 19ಮುಂದೆನ್ನ ಕುಲವೃದ್ಧಿಯೊಂದಿ ನಿನ್ನಯ ಕೃಪೆುಂದ ಭಕತಮಯವಹ ಸಮಯಾುಂದೆನ್ನ ಭಾಗ್ಯಕೆಣೆಯ ಕಾಣದೆ ನಿನ್ನಮುಂದೆ ನಾ ನಲಿದು ಕುಣಿವ ಸಮಯಾ ಸ್ವಾಮಿ 20ಗುರುವÀರನುಪದೇಶಿಸಿದ ಮಂತ್ರಕೆ ಸಿದ್ಧಿಬರುವ ನಿನ್ನಯ ಕೃಪೆಗಿದು ಸಮಯಾಕರುಣದಿಂ ನೋಡಿ ಕೈವಿಡಿದಭಯವನಿತ್ತುಪೊರೆವದಕೆನ್ನನಿದೇ ಸಮಯಾ ಸ್ವಾಮಿ 21ಧನ್ಯನು ಧನ್ಯನು ಧನ್ಯನು ನಾನೀಗಧನ್ಯನು ಮತ್ತು ಧನ್ಯನು ವಿಭುವೆಧನ್ಯರು ಜನನೀ ಜನಕ ಬಾಂಧವರೆಲ್ಲಧನ್ಯರೆಮ್ಮನು ನೋಡುವ ಸಮಯಾ ಸ್ವಾಮಿ 22ಮೂಲ ಮಂತ್ರಾಕ್ಷರ ಮೂಲ ನೀನಾಗಿಯೆಮೂಲಾವಿದ್ಯೆಯ ತೊಲಗಿಪ ಸಮಯಾಮೂಲೋಕನಾಯಕ ಮುಕ್ತಿ ಮಾರ್ಗಕೆುದೆಮೂಲವಾಗಿಯೆ ಬದುಕುವ ಸಮಯಾ ಸ್ವಾಮಿ 23ಮುರಹರ ಮಾಧವ ತಿಮಿರ ಭಾಸ್ಕರ ಕೃಷ್ಣಶರಣುಹೊಕ್ಕೆನು ನಿನ್ನ ಚರಣ ಪಂಕಜಗಳಪೊರೆಯುವರೆನ್ನನಿದೆ ಸಮಯಾ ಸ್ವಾಮಿ 24ತಿರುಪತಿಯೊಡೆಯನೆ ಶ್ರೀ ವಾಸುದೇವಾರ್ಯಗುರುವಾಗಿ ಕಾವೇರಿ ತೀರದಲಿಕರುಣದಿಂ ಪಾದುಕೆಗಳನಿತ್ತ ಭಾಗ್ಯವುಸ್ಥಿರವಾಗಿ ಭಕತಿ ಹೆಚ್ಚುವ ಸಮಯಾ ಸ್ವಾಮಿ 25 ಓಂ ಶಕಟಾಸುರಭಂಜನಾಯ ನಮಃ
--------------
ತಿಮ್ಮಪ್ಪದಾಸರು
ಸಾಹುಕಾರರು ನಾವು ಜಗದ ಹುಟ್ಟುಸಾವಿಗೆ ಭಯಪಡೆವು ಪ ದೇಹಗಳ್ ವಸ್ತ್ರಗಳಂದದಿ ಬರುವುವು ಸಾಹಸಿವಳಗಿರುವನೊಬ್ಬನವನಕಡೆಯ ಅ.ಪ ಮೂಲ್ಯರತ್ನಗಳು ನೇಮ ಕಾಲಕಾಲಕೆ ನಿತ್ಯಕರ್ಮಾಚರಣೆ ಬಂಡ- ವಾಳವಾಗಲು ಸದ್ವ್ಯಾಪಾರ ಮಾಡುವಂಥ 1 ರಡ್ಡಿಯು ಉಂಟಾಗದು ಕಡ್ಡಿಯ ಕೊಟ್ಟು ಪೇಳುವೆವು ನಿಜದಲಿ ಕೇಳಿ ಕಲುಷಾತ್ಮರಿಗೆ ಸಾಲಕೊಡುವುದಿಲ್ಲವು 2 ದೊಡ್ಡಸಮಯಕೆ ಬೇಕಾದಷ್ಟು ಬಡ್ಡಿಯು ಬರೆ ಸಮವಾಗಿಹುದಿದುವೆ ಗುಟ್ಟು ಕ್ರಮವಾಗಿ ಲೆಕ್ಕ ಒಪ್ಪಿಸಬೇಕು ವರುಷಕೊಮ್ಮೆ 3
--------------
ಗುರುರಾಮವಿಠಲ
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು