ಒಟ್ಟು 1248 ಕಡೆಗಳಲ್ಲಿ , 95 ದಾಸರು , 856 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂದಿತಯ್ಯ ಪ್ರಾಯವು |ಸಂದಿತಯ್ಯ ಪ್ರಾಯವು ಪಮೂರು ತಿಂಗಳುಸಂದುಹೋಯಿತು ತಿಳಿಯದೆ ||ಬಂದೆ ತಾಯಿಯ ಜಠರದಲಿ ಮ-|ತ್ತೊಂದು ಬುದ್ಧಿಯನರಿಯದೆ ||ಬೆಂದೆ ನವಮಾಸದಲಿ ಗರ್ಭದಿ |ಒಂದು ದಿವಸವು ತಡೆಯದೆ ||ಕುಂದದೀಪರಿಯೊಂದು ವರುಷವು |ಇಂದಿರೇಶನೆ ಕೇಳು ದುಃಖವ 1ಕತ್ತಲೆಯೊಳಿರಲಾರೆನೆನುತಲಿ |ಹೊತ್ತೆ ಹರಕೆಯ ನಿನ್ನನು ||ಮತ್ತೆ ಜನಿಸಲು ಭೂಮಿಯೊಳು ನಾ |ಅತ್ತುನಿನ್ನನು ಮರೆತೆನು ||ಮತ್ತೆ ಮಲ-ಮೂತ್ರದೊಳು ಬಾಲ್ಯದಿ |ಹೊತ್ತು ದಿನಗಳ ಕಳೆದೆನು ||ಮತ್ತೆ ನರಕದೊಳುರುಳುತುರುಳುತ |ಉತ್ತಮೋತ್ತಮ ನಿನ್ನ ನೆನೆಯದೆ 2ಚಿಕ್ಕತನವನು ಮಕ್ಕಳಾಟದಿ |ಅಕ್ಕರಿಂದಲಿ ಕಳೆದೆನು ||ಸೊಕ್ಕಿ ಹದಿನಾರಲಿ ನಾನತಿ |ಮಿಕ್ಕಿ ನಡೆದೆನು ನಿನ್ನನು ||ಸಿಕ್ಕಿ ಬಹು ಸಂಸಾರ ಮಾಯೆಯ |ಕಕ್ಕುಲಿತೆಯೊಳು ಬಿದ್ದೆನು ||ಹೊಕ್ಕುದಿಲ್ಲವು ನಿನ್ನ ಪಾದವ |ರಕ್ಕಸಾರಿಯೆ ಕೇಳು ದುಃಖವ 3ಸುಳಿದೆ ಮನೆಮನೆ ಕಳೆದೆ ಕಾಲವ |ಉಳಿದ ಯೋಚನೆ ಮಾಡದೆ ||ಬೆಳೆದೆ ತಾಳೆಯ ಮರದ ತೆರದಲಿ ||ಉಳಿವ ಬಗೆಯನು ನೋಡದೆ ||ಎಳೆಯ ಮನದೊಳೆ ಇಳೆಯ ಜನರೊಳು |ಬಳಕೆ ಮಾತುಗಳಾಡಿದೆ ||ಕಳೆದೆ ಈ ಪರಿಯಿಂದ ಕಾಲವ |ನಳಿನನಾಭನೆ ನಿನ್ನ ನೆನೆಯದೆ 4ಎಡೆಬಿಡದೆಅನುದಿನದಿ ಪಾಪದ |ಕಡಲೊಳಗೆ ನಾನಾಳ್ದೆನು ||ದರವ ಕಾಣೆದೆ ಮಧ್ಯದಲಿ ಎ-|ನ್ನೊಡಲೊಳಗೆ ನಾನೊಂದನು ||ದೃಢದಿ ನಿನ್ನಯ ಧ್ಯಾನವೆಂಬಾ |ಹಡಗವೇರಿಸು ಎನ್ನನು ||ಒಡೆಯ ಪುರಂದರವಿಠಲ ಎನ್ನನು |ಬಿಡದೆ ಕಾಯೈ ಬೇಗ ಶ್ರೀಹರಿ5
--------------
ಪುರಂದರದಾಸರು
ಸಂದು ತೀರದಿರಲಿ ಆನಂದಭಕುತಿ ಕೃಷ್ಣಹೊಂದಿ ಬಿಡಲಾರೆನೊ ಮುಕುಂದ ನಿನ್ನಂಘ್ರಿ ನಿಷ್ಠೆಯ ಪ.ಸಿರಿಭಾಗವತಶಾಸ್ತ್ರವರಪಂಚರಾತ್ರಾಗಮಪರಮಭಾರತದ ತಾತ್ಪರ್ಯಾರ್ಥದಪರಿಚಯವಮಾಡುಹರಿಮಹೋದಾರಿ ಕೃಷ್ಣಗುರುಮಧ್ವ ನಿರೂಪದ ತರತಮ ಭಾವಾರ್ಥದ1ಜಯರಾಯ ಗುರುಗಳ ವಿಜಯವಾಕ್ಯವ ಕೇಳಿಸುನಯತಂತ್ರಸಾರಮಂತ್ರಾಶ್ರಯ ಬಲಿಸುದ್ವಯಸಪ್ತ ಭಕ್ತಿಯಿಂದ ಆಯುಷ್ಯ ಸಾಗಿಸು ತತ್ವಚಯಜ್ಞಾನವೆಂಬ ದಿವ್ಯ ಪೀಯೂಷವುಣಿಸುವ ಸವಿ2ಲಲಿತ ಶ್ರೀಮುದ್ರೆ ಊಧ್ರ್ವತಿಲಕ ತಪ್ತಲಾಂಛನಹೊಳೆವ ದ್ವಾದಶನಾಮ ತುಲಸಿದಂಡೆಕಳಧೌತ ಮೀರ್ವಾಂಗಾರ ನಳಿನಾಕ್ಷ ಧಾತ್ರಿಸರಗಳದೊಳೊಪ್ಪುವ ಶ್ಲಾಘ್ಯ ಬಲುವೈರಾಗ್ಯ ಭಾಗ್ಯದ 3ಅಹರ್ನಿಶಾತ್ಮಜ ಸವಿ ಸ್ನೇಹವೆ ಶ್ರೀಪಾದದಲ್ಲಿದೇಹ ಧನ ಮನ ಒಪ್ಪಿಸಿಹೊ ವೃತ್ತಿಲಿಬಹಿರಂತಕ್ಷಣಕೆ ರೂಹುದೋರ್ವ ಭಾಷ್ಪ ತನುರುಹತೋಷಾಬ್ದಿಯೊಳು ಮಗ್ನರಹ ಮಹಿಮರ ಸಂಗ4ಎಸೆವ ಹರಿದಿನಅನಿಮಿಷಜಾಗರದ ಕೀತ್ರ್ನೆಲಸತ್ತಿರುಳಿನಾಪರವಶನರ್ತನ ಕುಶತಲ್ಪ ಪ್ರಸನ್ವೆಂಕಟೇಶನಂಘ್ರಿಲಂಪಟನಿಯಮೇರ ತಾಳ ಮೇಳಸುಸುಖ ಸುಬ್ಬಾನ ಸೂರೆ 5
--------------
ಪ್ರಸನ್ನವೆಂಕಟದಾಸರು
ಸಮಾಧಿಸಾಧಕಗೆಸಮಾಧಿಸಾಧಕಗೆಇವು ಎಲ್ಲಿ ಇರಬೇಕುಪಮಾತುಗಳು ಕಿವಿಯಲ್ಲಿ ಬೀಳದಿರಬೇಕುಮಹಾ ಕಠೋರ ರವಗಳು ಬೀಳದಿರಬೇಕುವಾತವೆಂಬುದು ಸುತ್ತ ಸುಳಿದಾಡದಿರಬೇಕುದುರ್ಜನರು ದೂರದಲಿರೆ ನೋಡದಲಿರಬೇಕು1ಆಕಳಿಕೆ ಆಲಸ್ಯಗಳಿಲ್ಲದಿರಬೇಕುತೇಗು ಬಿಕ್ಕಳಿಕೆ ಕಡಿಕಿಲ್ಲದಿರಬೇಕುಉಗುಳುವುದು ತೂಕಡಿಕೆ ಇವು ಇಲ್ಲದಿರಬೇಕುತಾಗುವ ಮದನಿದ್ರೆಗೆ ತವಕಿಸದಿರಬೇಕು2ಕನಸು ಸೀನು ಕಳವಳಿಕೆಗಳಿಲ್ಲದಿರಬೇಕುಜಿನುಗು ಸಂಶಯಗಳು ಜಾರುತಲಿರಬೇಕುಘನಚಿದಾನಂದನ ಘನಸುಖ ಕಾಣಬೇಕುಮನವೀ ಪರಿನಿಂದು ಮೈಮರೆತು ಇರಬೇಕು3
--------------
ಚಿದಾನಂದ ಅವಧೂತರು
ಸಂಸಾರ ಕನಸಣ್ಣ ಸಕಲರಿಗೆ ಹೇಳುವೆನಣ್ಣಸಂಸಾರ ಸತ್ಯವೆಂಬುವನ ಬಾಯಲ್ಲಿ ಹೊರೆ ಮಣ್ಣಣ್ಣಪಹೆಂಡತಿಯು ಕನಸಣ್ಣ ಗಂಡನೂ ಕನಸಣ್ಣಗಂಡು ಮಗ ಸೊಸೆ ಸಹೋದರರು ಬಂಧುಗಳು ಕನಸಣ್ಣ1ದನಕರು ಕನಸಣ್ಣ ದವಲತ್ತು ಕನಸಣ್ಣಮನೆ ಮದುವೆ ಮಂಟಪ ಮಹಾಲಕ್ಷ್ಮೀ ಕನಸಣ್ಣ2ವೈಯ್ಯಾರ ಕನಸಣ್ಣ ವಸ್ತುಗಳು ಕನಸಣ್ಣಮೈಯಲ್ಲಿಹ ಬಲವದು ಮತ್ತೆ ಮುರಿ ಮೀಸೆ ಕನಸಣ್ಣ3ನಾನಿಹುದು ಕನಸಣ್ಣ ನೀನಿಹುದು ಕನಸಣ್ಣಶಾಣೆತನ ಮಾನಾಪಮಾನಗಳು ಸೈನ್ಯ ಕನಸಣ್ಣ4ಸಂಸಾರ ಮಾಡಿದರಣ್ಣ ಸಾಕ್ಷಿಯಾಗಿರಬೇಕಣ್ಣಹಂಸ ಚಿದಾನಂದ ಸದ್ಗುರು ಹೊಂದಲು ಸರಿವುದು ಜನನವಣ್ಣ 5
--------------
ಚಿದಾನಂದ ಅವಧೂತರು
ಸಂಸಾರ ನಂಬುವೆಯ ಹೆಡ್ಡ ಈಸಂಸಾರವಿಹುದು ಮುಕ್ತಿಗೆ ಅಡ್ಡಪಮನೆಯು ಎಂಬುದುವಸ್ತಿ ಮಳಿಗೆಸತಿತನಯಹೋಹರು ಹಾದಿಗಳಿಗೆಎನಿತು ಮಮತೆ ಇದರೊಳಗೆ ಯಮಮನಮುಟ್ಟಿ ಹಿಡಿದಿಹ ಗುದಿಗೆ1ಸುಳ್ಳುಗಳಾಡೋದು ಎಷ್ಟುಮಹಾತಳ್ಳಿಕಾರಿಕೆ ಬೆಟ್ಟದಷ್ಟುಬೆಳ್ಳಿಟ್ಟು ಬಗುಳೋದು ಯಷ್ಟು ಯಮ ಕಕ್ಕಲಿಹಶೀಳುಯಂಬಾಕೊಲ್ಲೆಯಿವನ ಕುಟ್ಟುಕುಟ್ಟು2ಮಕ್ಕಳು ಮನೆಗಿಲ್ಲವೆಂಬ ಎನಗೆತಕ್ಕ ಹೆಂಡತಿ ಅಲ್ಲವೆಂಬರೊಕ್ಕವ ದಿನ ನೋಡಿಕೊಂಬ ಯಮಕಕ್ಕರಲಿರು ಶೀಳುಯೆಂಬ3ಗುರುಹಿರಿಯರ ನಿಂದಿಪನುಸತಿಮರುಕಕೆ ಹಲ್ಲು ತೆರವನುಹೊರಡಿಪ ತಂದೆ ತಾಯಿಯನುಯಮನರಕಕೆ ಹಾಕುಯೆಂಬುವನು4ನಾನಾರುಯೆಂಬುದು ಅಣಕೆ ಹಿಂದಕ್ಕೆನಿದ್ದೆಯೆಂಬುದು ಒಣಗಿಏನೋಮುದೆಂಬುದು ಜಣಗಿ ಚಿದಾನಂದ-ನೆಂಬುದು ಮುಣಗಿ5
--------------
ಚಿದಾನಂದ ಅವಧೂತರು
ಸಂಸಾರ ಶರಧಿಯೊಳು ಮುಳುಗಿ ಮುಳುಗಿ ಸಂಶಯವಿಲ್ಲದೆಬಳಲುತಿಹ ಮರುಗಿ ಮರುಗಿಪಅಜ್ಞಾನ ತಿಮಿರವೆಂಬ ವ್ಯಾಪಾರದೊಳೋಡಾಡಿಸುಜ್ಞಾನ ಜ್ಯೋತಿಯ ಬಿಡುಗಡೆಯ ಮಾಡಿಭಗ್ನ ಮಾಡಿಯೆ ಶಾಂತ ಬುದ್ಧಿಗಳನೇ ನೋಡಿಪ್ರಾಜÕನಾಗದೆ ಕೆಡುವೆ ನರಕವನು ಕೂಡಿ1ಕಾಲವಿಪರೀತದಿಂದ ಕೇಡುಬರೆ ನೀನದನುಕಾಲಲೊದೆಯದೆ ಬಹಳ ಚಿಂತೆಯನು ಮಾಡಿಓಲಗಿಸಿ ಮನದೊಳಗೆ ತಾ ಕೆಟ್ಟೆಯೆನ್ನುವನುಪಾಲಿಸುವರಿಲ್ಲೆಂದು ಸೇರುವೆಯ ನರಕವನು2ಬೇಡ ಮನದೆ ಇನ್ನುಖುಲ್ಲಗುಣಗಳ ಬಿಟ್ಟುಖೋಡಿಸಂಸಾರವೆಂಬುದನು ಸುಟ್ಟುಗೂಢ ಚಿದಾನಂದಾವಧೂತನೊಳು ಅಳವಟ್ಟುಕೂಡು ಕೆಲಸಾರದಲೆ ದೃಷ್ಟಿ ಆತ್ಮನಲಿಟ್ಟು3
--------------
ಚಿದಾನಂದ ಅವಧೂತರು
ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿಸಂಸಾರ ಎನಗೊಂದೆ ಅಲ್ಲದೆ ಸಂಸಾರ ಎನಗುಂಟೇನಯ್ಯಪಸತ್ಯವೆಂಬುದೆನ್ನಸತಿಯು ಶಾಂತವೆಂಬುದೆನ್ನಸುತನುಸತ್ಯವೆಂಬುದೆನ್ನ ಸೊಸೆಯು ನಿಜವಿದೀಗಅತ್ಯಧಿಕ ಗುಣಿಯೆಂಬ ಅಗಣಿತದ ಪಿತನಿರಲುಮಿಥ್ಯವಾದ ಸಂಸಾರದಲಿ ಮಗ್ನರಹರೇ1ಬುದ್ಧಿ ಎಂಬುದೆನ್ನಭ್ರಾತೃ ಭಾವನೆ ಎಂಬುದೆನ್ನಭಾವಅದ್ವೈತವೆಂಬ ಅತ್ತೆ ಅಂತಃಕರಣವೆಂಬ ಮಾವಶುದ್ಧಾತ್ಮವೆಂಬ ಬಂಧು ಸಂಬಂಧವೆನಗಿರಲಾಗಿಈ ದ್ವೈತಸಂಸಾರದಲ್ಲಿ ಮಗ್ನರಹರೇ2ಇಂತು ಸಂಸಾರ ಸುಖ ನಿಜದೊಳಗೆನಗಿರಲುಭ್ರಾಂತದಲ್ಲವೆ ನಿಮ್ಮ ಮಾತಿದೆಲ್ಲಚಿಂತಯಕ ಚಿದಾನಂದ ಚಿನ್ಮಯನೆ ತಾ ಬಲ್ಲಅಂತರಂಗದ ಮಾಟಕೆ ಅವನೆ ಸಾಕ್ಷಿ3
--------------
ಚಿದಾನಂದ ಅವಧೂತರು
ಸಂಸಾರವೆಂಬ ಸಾಗರವನುತ್ತರಿಸುವರೆಕಂಸಾರಿಯೆಂಬ ನಾಮವೊಂದೆ ಸಾಕು ಮರುಳೆ ಪ.ಯತಿಯಾಗಬೇಡ ವೈರಾಗ್ಯವರಿತು ಸಕಲವ್ರತವ ಮಾಡುವೆನೆಂಬ ನೇಮ ಬೇಡ ||ಶ್ರುತಿ - ಸ್ಮøತಿಗಳನರಿತು ನಡೆವೆನೆನಬೇಡ ಶ್ರೀ -ಪತಿಯ ಶ್ರೀನಾಮವೊಂದೆ ಸಾಕು ಮರುಳೆ 1ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡ ||ಅನುವರಿತು ನೀರೊಳಗೆ ಬಿಡದೆ ಮುಳುಗಲುಬೇಡ |ವನಜಾಕ್ಷ ನಾಮವೊಂದೇ ಸಾಕು ಮರುಳೆ 2ತೀರ್ಥಯಾತ್ರೆಗೆ ನೀನು ತಿರುಗಿ ಝೊಂಪಿಸಿ ಕೃ -ತಾರ್ಥನಾದೆನೆಂಬ ಹೆಮ್ಮೆ ಬೇಡ ||ಧೂರ್ತಭಂಜನ ನಮ್ಮ ಪುರಂದರವಿಠಲ ಸಂ -ಕೀರ್ತಿನೆಯ ಮಾಡಿ ಮೋಕ್ಷವನೈದು ಮರುಳೆ ** 3
--------------
ಪುರಂದರದಾಸರು
ಸಾಂಖ್ಯತಾರಕ ಅಮನಸ್ಕಾ ಬಿರುದಂತಾಗಿತೆಗೆವುದುಮಾಯೆಮುಸುಕುಪಜೀವನು ನೀನಲ್ಲವೆಂದು ನನಗಾವ ಪ್ರಪಂಚವು ಕಾರಣವಿಲ್ಲೆಂದುಇವ ಬ್ರಹ್ಮವು ನೀ ಸತ್ಯವೆಂದು ಗುರುದೇವನಿಂದಲಿಬೋಧಿಪುದೇ ಸಾಂಖ್ಯ ಎಂದು1ತನ್ನಲ್ಲಿಯೆ ಇಟ್ಟು ಕಣ್ಣು ಒಳಗೊಳಗೆ ತಾಕುಳಿತುಥಳಥಳಿಸುತಲಿನ್ನು ಭಿನ್ನವೆಂಬುದ ಕಳೆದಿನ್ನುಸಂಪನ್ನ ಸುಖವನು ಎಂಬುವುದ ತಾರಕವೆನ್ನು2ಮರತೆ ಮನದ ಎಚ್ಚರದು ಏನು ಕರುಹಿಲ್ಲದವಳಹೊರಗೆಂಬುದನು ಬರೆತುಂಬಿಹ ತೇಜದೊಳ್ ಸದ್ಗುರು ಚಿದಾನಂದನ ಮನವೆಯಿದು3
--------------
ಚಿದಾನಂದ ಅವಧೂತರು
ಸಾರಿಗೆಯ ಮಾಡೋಣ ಸಜ್ಜನರು ಬನ್ನಿರೋನಾರಾಯಣನ ದಿವ್ಯನಾಮ ಭಾರಿ ಕೊಂಬ ಬನ್ನಿರೋ ಪ.ಹೃದಯವೆಂಬ ಚೀಲದೊಳಗೆ ಹರಿಯ ನಾಮ ಹೊನ್ನಹಾಕಿತುದಿ ನಾಲಿಗೆಯಿಂದ ತೆಗದು ವೆಚ್ಚವನ್ನು ಮಾಡಿರೊ 1ಙ್ಞÕನವೆಂಬ ಎತ್ತಿನಲ್ಲಿ ಕರುಣವೆಂಬ ಗೋಣಿಹಾಕಿದಾನ - ಧರ್ಮವೆಂಬ ದವಸ ಸರಕುಗಳ ತುಂಬಿರೊ 2ನೇಮ - ನಿತ್ಯವೆಂಬ ಗಟ್ಟಿ ನಡುವಿನಲ್ಲಿ ಬಿಗಿದು ಸುತ್ತಿಪ್ರೇಮವೆಂಬ ಚೊಕ್ಕ ಬುತ್ತಿ ಸೆರಗಿನಲ್ಲಿ ಕಟ್ಟಿರೋ 3ಕಾವಲಿಗರೈವರನ್ನು ಕಾಣದಂತೆ ಟಕ್ಕುದೋರಿಭಾವವೆಂಬ ಮಾರ್ಗದಲ್ಲಿ ಬೇಗ ಬೇಗ ಬನ್ನಿರೊ 4
--------------
ಪುರಂದರದಾಸರು
ಸಿರಿಗೋವಿಂದಶ್ರೀ ಪುರಂದರದಾಸರ ಸ್ತ್ರೋತ್ರಇದೇ ಪೇಳಿ ಪೋದರುವಿಧುವದನೆನಮ್ಮ ಬುಧನುತ ಪದದ ನಾರದರು ಈ ಜಗದಿ ಬಂದು ಪಸಿರಿಅರಸನೆ ಈ ಧರೆಯೊಳಗುತ್ತಮಮರುತ ದೇವರೆ ಜಗದ್ಗುರುಗಳೆಂದುತರತಮಪಂಚಭೇದಜ್ಞಾನ ಶೀಲನೆಸುರಲೋಕವಾಸಿ ಶ್ರಿಹರಿ ಪ್ರೇಮ ಪಾತ್ರನೆಂಬೊದೆ ಪೇಳಿ 1ಜರದೂರನರಹರಿ ಧರೆಯೊಳು ವ್ಯಾಪಿಸಿಇರಲು ತ್ರಿಗುಣ ಕಾರ್ಯವಾಹವೆನ್ನುತಾಪರತಂತ್ರ ಜೀವವೆಂದರಿದು ಪಾಪ ಪುಣ್ಯಸರಸಿಜನಾಭನಿಗರ್ಪಿಸಿರೆಲೋಯಂದು 2ಶಿರಿಗೋವಿಂದ ವಿಠಲ ವಿಶ್ವವ್ಯಾಪಕಗಿರುವವುಎರಡು ಪ್ರತಿಮೆಜಗದಿಚರಅಚರಗಳನ್ನು ಅರಿತು ಮಾನಸದಲ್ಲಿಹರಿಪೂಜೆ ಮಾಡಿ ಸೇರಿರಿ ವೈಕುಂಠವೆಂಬೊದೆಪೇಳಿ ಪೋದರು 3
--------------
ಸಿರಿಗೋವಿಂದವಿಠಲ
ಸುಕಾಲಕೆ ಧರ್ಮವ ಮಾಡುವುದೆ ಲೇಸುದುಷ್ಕಾಲಕೆ ಮಾಡಗೊಡದಲ್ಪಾಯು ಪ.ಯೌವನವೆಂಬ ಸುಕಾಲಕೆ ಸುರಮುನಿಸೇವ್ಯನ ಭಾಗವತರ ಮೆಚ್ಚಿಪದಿವ್ಯಜ್ಞಾನ ಭಕ್ತಿ ವೈರಾಗ್ಯವಿರಬೇಕುಹವ್ಯಾಸ ನಡೆಯದು ಮುಪ್ಪು ದುಷ್ಕಾಲ 1ಧನದಾಗಮದ ಸುಕಾಲಕೆಸತ್ಪಾತ್ರರನು ಕರೆದರ್ಚಿಸಿ ಉಣಿಸಿ ಕೃಷ್ಣಾರ್ಪಣ ಬುದ್ಧಿಯಿಂದ ಸರ್ವಸ್ವನೊಪ್ಪಿಸಬೇಕುತನಗಿಲ್ಲದಾಗೆ ದಾರಿದ್ರ್ಯ ದುಷ್ಕಾಲ 2ವೃತ್ತಿಕ್ಷೇತ್ರಿದ್ದ ಸುಕಾಲಕೆ ಶ್ರೀ ಮಧ್ವಶಾಸ್ತ್ರ ವ್ಯಾಖ್ಯಾತರಿಗಿತ್ತು ಜನ್ಮಸಾರ್ಥಕ ಮಾಡಿ ಸಂತೋಷದಲ್ಲಿರಬೇಕುತಾ ಸ್ಥಾನ ಭ್ರಷ್ಟನಾಗಿಹುದೆ ದುಷ್ಕಾಲ 3ಸಂಸಾರಾವಸ್ಥೆಯವರಿಗೀ ಸುಕಾಲಕೆಹಂಸವಾಹನಪಿತನಂಘ್ರಿ ಪದುಮಪಾಂಸುಲಭ್ಯವು ಕೇಚಿತ್ಕಾಲಕೆ ಹರಿಯಲಿಸಂಶಯ ಭಕ್ತಿಯವನಿಗೆ ದುಷ್ಕಾಲ 4ಮುಕ್ತಮಹಿಮಗೆ ಜ್ಞಾನವೆ ದ್ರವ್ಯ ವಿಷಯವಿರಕ್ತಿಯೆ ಭಾಗ್ಯವಿಜಯಭಕ್ತವತ್ಸಲ ಪ್ರಸನ್ವೆಂಕಟೇಶನ ಸೇವಾಸಕ್ತಿಲ್ಲದವಗಾವಕಾಲ ದುಷ್ಕಾಲ 5
--------------
ಪ್ರಸನ್ನವೆಂಕಟದಾಸರು
ಸುಪುತ್ರನು ಎಂಬುವನಿವನುಸುಪುತ್ರನನು ಹೇಳುವೆ ನಾನುಪತಂದೆ ತಾಯಿಗಳ ಪೂಜಿಸುವಬಂಧುಗಳಿಗೆ ಬಹು ಪ್ರಿಯನಾಗಿ ಇರುವಎಂದಿಗೂ ಕೆಟ್ಟದ್ದ ನುಡಿಯ ಆವ-ಬಂದವರಿಗೆಲ್ಲ ಅನ್ನವ ಕೊಡುವ1ಕುಲದ ಆಚಾರವ ತಪ್ಪಿಸನುಹಲವು ವ್ರತಗಳನವ ತಾ ಬಿಡನುಬಲು ತಿಳುವಳಿಕೆಯನು ತಿಳಿದಿಹನುನೆಲೆಯಿಲ್ಲದ ತಪಮಾಡುವನು2ಅಣ್ಣ ಅತ್ತಿಗೆಗೆ ಉತ್ತರಕೊಡನುಪುಣ್ಯ ಕಥೆಯನು ಕೇಳ್ವುದ ಬಿಡನುತನ್ನ ದೇಹವ ಪೋಷಣೆ ಮಾಡನುಭಿನ್ನ ಬುದ್ಧಿಯನೆಂದಿಗು ತೋರನು3ತತ್ವ ವಿಚಾರವೆಂಬುದೆ ಜೀವನಿತ್ಯಅನಿತ್ಯವ ತಿಳಿದು ಅವನೀವಸತ್ಪುರುಷರೊಳು ಒಡನಾಡುವಎಲ್ಲಮಿಥ್ಯೆಎಂದರಿವ4ಸಂಶಯ ಸಂಕಲ್ಪನೀಗಿಧ್ವಂಸ ಮಾಡಿ ವಾಸನೆಯೆಲ್ಲವಶಿಂಶುಮಾರದ ಚಕ್ರಕೆ ಹೋಗಿಹಂಸ ಚಿದಾನಂದ ಗುರುವಾಗಿ5
--------------
ಚಿದಾನಂದ ಅವಧೂತರು
ಸುಳ್ಳೇ ತೋರಿದೆ ಜಗವೆಲ್ಲಸುಳ್ಳಾದವರಿಗೆ ಸುಳ್ಳುಸುಳ್ಳೇ ತೋರಿದೆ ಜಗವೆಲ್ಲಪಮೂರು ಮೂರುತಿ ಮೂರು ಶಕ್ತಿಯೆ ಸುಳ್ಳುಮೂರು ಸ್ಥಾನ ಮೂರು ಗುಣಗಳೇ ಸುಳ್ಳುಮೂರು ಮೂಲವೇ ಸುಳ್ಳು ತಾನಿಹುದೇ ಸುಳ್ಳು1ಚಂದ್ರ ಸೂರ್ಯರುಗಳೆಂಬುವರೆ ಸುಳ್ಳುಇಂದ್ರರು ಅಹಮಿಂದ್ರರು ಸುಳ್ಳುಸಾಂದ್ರನಕ್ಷತ್ರವೇ ಇದು ಸುಳ್ಳು ತಾನಿಹುದೆ ಸುಳ್ಳು2ದಿಗ್ಗಜಗಳು ದಿಕ್ಪಾಲಕರೆ ಸುಳ್ಳುವಗ್ಗಿಗರಹ ವಸು ಎಂಬರು ಸುಳ್ಳುಸ್ವರ್ಗವೆಂಬುದು ಅದು ಸುಳ್ಳು3ಬಹುಲೋಕವು ಭುವನಂಗಳು ಸುಳ್ಳುಇಹಪರ ಎಂಬವು ಎರಡಿವು ಸುಳ್ಳುಬಹಿರಂಗವೆಂಬುದಿದು ಸುಳ್ಳು ತಾನಿಹುದೆ ಸುಳ್ಳು4ನಾನಾರೂಪದ ಬಹೂರೂಪವೆ ಸುಳ್ಳುನಾನಾ ವಿನೋದಂಗಳು ಇವು ಸುಳ್ಳುನಾನಾ ಬೆಳಕುಗಳು ಅವು ಸುಳ್ಳು ತಾನಿಹುದೆ ಸುಳ್ಳು5ಬ್ರಹ್ಮಾಂಡವು ತಾನಿಹುದೇ ಸುಳ್ಳುಪಿಂಡಾಂಡವು ತಾ ಮೊದಲಿಗೆ ಸುಳ್ಳುಕಂಡೆನೆಂದೆಂಬುವು ಎಲ್ಲ ಸುಳ್ಳು ತಾನಿಹುದೆ ಸುಳ್ಳು6ಸುಳ್ಳು ಚಿದಾನಂದನೆಂಬುದು ಸುಳ್ಳುಸುಳ್ಳಿನ ಕೀಲನು ಅರಿತರಿಗೆ ಸುಳ್ಳುತಿಳಿಯದವರಿಗೆ ನಿಜಸುಳ್ಳು ತಾನಿಹುದೇ ಸುಳ್ಳು7
--------------
ಚಿದಾನಂದ ಅವಧೂತರು
ಸೊಕ್ಕು ನೋಡಿ ಯೋಗೀಶನ ಸೊಕ್ಕು ನೋಡಿಮಿಕ್ಕು ಮೀರಿ ಮೂರಕ್ಕರಗಳಕಂಡುನಕ್ಕು ಪಶ್ಚಿಮಗಿರಿ ಪೊಕ್ಕು ಬೆಳಗಿ ಜನಪಮೂರಕಟ್ಟಿಮೂರನು ಅರಶೀರಗುಟ್ಟಿಆರು ಎಂಟನೆ ಅಟ್ಟಿ ಐದು ಏಳನು ಮೆಟ್ಟಿತೋರುವ ಎರಡು ನಾಲ್ಕನು ತೊಲಗಿಸಿದಾತನ1ಲೋಕದ ಕೂಡ ಕೂಡಿಯೆ ವಿವೇಕ ಬೇಡಏಕವೆಂಬುದು ಬಿಡ ಅನೇಕವೆಂಬುದ ನಾಡಮೂಕ ಪದಗಳೆಂದು ನಿರಾಕರಿಸುತಲಿಹನು2ಅಕ್ಷಯಮುಚ್ಚಿ ತೆರದು ತೆರದಕ್ಷಯ ಮುಚ್ಚಿರಕ್ಷಿಸುತಿಪ್ಪ ಭಾಳೇಕ್ಷಣ ತಾನೆಂದು-ಪೇಕ್ಷೆಮಾಡುತ ಸರ್ವವ ನಿರೀಕ್ಷಿಸುತಿರುವವನ3ಮತಗಳ ನೆನೆದು ಶಾಸ್ತ್ರಗಳ ಗೆಲಿದುಪಾತಾಳಕಿಟ್ಟ ಮತಿ ಮೋಕ್ಷಗಳ ಬಿಟ್ಟ ತಿರುಗಿಸಿ ತಿರುಗಿಸಿ ಹುಟ್ಟಸತತ ಕಾಲದಿ ತನ್ನ ಮತಿ ಹಿಡಿಯೆಂಬನ4ಏನುಪಾಯ ಈ ಯೋಗಿಗೆ ಇನ್ನೇನು ನ್ಯಾಯತಾನಾಗದಗುರುಚಿದಾನಂದನ ತಾ ಕಂಡುತಾನೆ ತಾನಾಗಿ ತೋರುವ ನಿಜ ಯೋಗಿಯ5
--------------
ಚಿದಾನಂದ ಅವಧೂತರು