ಒಟ್ಟು 1497 ಕಡೆಗಳಲ್ಲಿ , 112 ದಾಸರು , 1202 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಧನ್ವಂತ್ರಿ ಸ್ತೋತ್ರ(ನಾರಾಯಣಾಚ್ಯುತ ವಿಠಲ ದಾಸಿಗಾಗಿ) ಕಾರುಣ್ಯ ನಿಧಿ ತವಾ | ಪಾರ ಮಹಿಮೆಯ ಕೇಳಿಸಾರಿದೆನೊ ಪಾದಾಬ್ಜ ಶರಣೆಂದು | ಶರಣೆಂದೆಶ್ರುನಾಥಪಾರು ಮಾಡಾಕೆಯ ವೃಜಿನವ 1 ಆಂತ್ರಕೆಟ್ಟಿಹುದೆಂದು | ತಾಂತ್ರಿಕರು ಪೇಳುವರುಆಂತ್ರ ಸರಿಮಾಡುವ ಕಾರ್ಯವ | ಕಾರ್ಯನಿರ್ವಹಿಸಿ ಸ್ವಾ-ತಂತ್ರ ಪುರುಷಾ ದಯತೋರೋ 2 ಪಾದ ಭಜಿಸೂವ | ಭಜಿಸೂವ ದಾಸಿಗೆಈ ರೀತಿ ಭವಣ್ಯಾಕೊ ಧನ್ವಂತ್ರಿ 3 ಆರೋಗ್ಯ ಆಯುಷ್ಯ | ಆರಾಧಕರ್ಗೀವೆಈರನುತ ಧನ್ವಂತ್ರಿ ಕರುಣಾಳು | ಕರುಣಾಳು ಸರ್ವಜ್ಞಆರೋಗ್ಯ ದಾಸಿಗೆ ಕೊಡು ಎಂಬೆ4 ಧಂ ಎಂದು ಉಚ್ಛರಿಸೆ | ಧ್ವಂಸ ಮಾಡುವೆ ರೋಗಧನಂತ್ರಿಯೆನ್ನೆ ಭವರೋಗ | ಭವರೋಗ ವಾರಿಸುವಧನ್ವಂತ್ರಿ ರೂಪಿ ನಮೊ ಎಂಬೆ 5 ಕರದಲ್ಲಿ ಸುಧೆ ಕಲಶ | ಧರಿಸಿರುವ ಬಗೆಯೇನೊಶರಣರ್ಗೆ ಸುಧೆಯಾನುಣಿಸುತ್ತ | ಉಣಿಸುತ್ತಲಮರತ್ವಕರುಣಿಸುವಿ ಎಂದೂ ಶ್ರುತಿ ಸಿದ್ಧ 6 ಇಂತಿರಲು ದಾಸಿಸ | ತ್ಪಂಥಗಳನ್ನುದ್ದರಿಸೊಅಂತು ತವ ಚರಣಾಬ್ಜ ಬೇಡುವೆ | ಬೇಡುವೆನೋಪಾದಾಕ್ರಾಂತಳಿಗೆ ಸುಧೆಯಾ ನೂಣೀಸೊ7 ಚಂದ್ರ ನಿವಹದ ಕಾಂತಿ | ಯಿಂದಮೃತ ಕಿರಣದಿಂಹೊಂದ್ಯಮಿತ ಸುಖರೂಪಿ ಉಲ್ಲಾಸವೀವುತ್ತಚಂದುಳ್ಳ ಸುಧೆ ಕಲಶ ಪಿಡಿಯುತ್ತ 8 ಆತು ಜ್ಞಾನಾಂಕವನು | ಆತ್ಮಸ್ಥಶೀತಾಂಶುಧೌತ ಮಂಡಲಗ ಲಕ್ಷ್ಮೀಶ | ಲಕ್ಷ್ಮೀಶ ಹರಿಯನ್ನುಮಾತು ಮಾತಿಗೆ ನಾನು ಸ್ಮರಿಸೂವೆ 9 ಉತ್ತಮಾಂಗದಲಿರುವ | ಹತ್ತೆರಡು ದಳ ಕಮಲಪ್ರಸ್ಥಿತನು ಧನ್ವಂತ್ರಿ ಮಕರಂದ | ಮಕರಂದ ಸ್ರವಿಸುವನಭಕ್ತಿಯಲಿ ಸ್ಮರಿಸೋದು ರೋಗಾರ್ತೆ 10 ಕಮಲ ಹೃದಯಸ್ಥ 11 ಸದನ ಷಟ್ದಳ ಕಮಲಗುದವು ಮೂಲಾಧಾರಾನಾಲ್ದಳವುನಾಲ್ದಳ ಕಮಲಸ್ಥಬದಿಗನು ಧನ್ವಂತ್ರಿ ರೂಪೀಯು 12 ರೂಪೀ ಈ ದೇಹವನು | ವ್ಯಾಪಿಸುತ ತಾನಿದ್ದುಕಾಪಾಡಲೋಸುಕದಿ ಮಕರಂದ | ಮಕರಂದ ಸುರಿಸುವವ್ಯಾಪಾರದಿಂ ಜೀವರುದ್ಧಾರ 13 ಹತ್ತಿರುವ ಅಜ್ಞಾನ | ವತ್ತಿಬಹ ಭಯದುಃಖಮತ್ತೆ ಮಹವಿಷವು ಇದರಿಂದ | ಇದರಿಂದ ಪರಿಹಾರ ಭಕ್ತಿಯಿಂ ಭಜಿಸೇ - ಸುಖ ಸೌಖ್ಯ 14 ಶರಣರ್ಗೆ ತಪ್ಪದೆಲೆ | ಗೆರೆವೆ ಸೌಖ್ಯಂಗಳನುಗುರು ಗೋವಿಂದ ವಿಠಲಾ | ವಿಠ್ಠಲ ಧನ್ವಂತ್ರಿಮರುತಾಂತರಾತ್ಮಾ ಸಲಹಯ್ಯ15
--------------
ಗುರುಗೋವಿಂದವಿಠಲರು
ಶ್ರೀ ಪಾಂಡುರಂಗ ಪ್ರಾರ್ಥನೆ ಪಾದ ಅಮಿತ ನೀಲಮೇಘಶ್ಯಾಮ ವಿಠಲನ್ನ 1 ಶಿಲೆಯನುದ್ಧರಿಸಿರ್ಪ ಪಾದಕೆ ಬಲಿಯ ಮೆಚ್ಚಿದ ಪಾದಕಮಲಕೆ ನಲಿವಿನಿಂದಲಿ ನಮಿಸಿ ಪೊಗಳುವೆಕಲಿಮಲಂಗಳನೆಲ್ಲ ತರಿಯುತತಲೆಯೊಳಾಶೀರ್ವಾದವೀಯಲು ಬಿದ್ದು ಬೇಡುವೆನು 2 ಕ್ರೂರ ರಕ್ಕಸರುಪಟಳಂಗಳ ವೀರತನದಿಂ ಚಕ್ರದಡಗಿಸಿ ಮಾರಪಿತ ಭವದೂರ ಕಂಸರಲಿ ದಣಿಯುತಲಿ ಯಾರ ಗೊಡವೆ ನಮಗೇನು ಎನ್ನುತ ಶ್ರೀ ರಮಾವರ ದೇವಿ ಸಹಿತೀ ದಾರಿಯೋಳ್ಮಿಜ ಭಕ್ತಗಾಶ್ರಯನಾಗಿ ನಿಂತಿಹನೆ 3 ಕಾಯ ಧರಿಸಿದ ಭಕ್ತವರ್ಯನ ಮಾಯೆಯಿಂದಲಿ ನೋಡಿ ನಲಿಯಲು ಬಂದ ವಿಠ್ಠಲನೆತೋಯಜಾಕ್ಷಿಯಳಾದ ಲಕುಮಿಯರಾಯ ಶ್ರೀಹರಿ ನಿನಗೆ ಇಟ್ಟಿಗೆ ಯಾಯಿತೇ ಬಲು ಸಂಖ್ಯದಂಸನ ನಿಂತುಕೊಳ್ಳಿಲ್ಕೆ 4 ತಾತನಂಘ್ರಿಯ ಸೇವೆಗೆಯ್ದಿರು-ವಾತ ಬರ¯ಂದನಿಮಿಷಾಗ್ರಣಿ ತಾತ ನಿಂತೆಯ ಸೊಂಟದ ಮೇಲೆ ಕೈಯಿಟ್ಟುಮಾತೆಯಾದವರು ಹಾಗೆ ಸಂಗಡ ಪ್ರೀತಿಯಿಂದಲೆ ನಿಂತುಕೊಂಡಳು ಖ್ಯಾತಿಯಾಯಿತು ಪಾಂಡುರಂಗನ ಲೀಲೆ ಭಕ್ತರಲಿ 5 ಸತ್ತು ಹುಟ್ಟುವ ಬಾಧೆಯಿಲ್ಲದಸತ್ಯವಂತನೆ ಕೊಟ್ಟ ಇಟ್ಟಿಗೆ ಮೆತ್ತಗಿಹುದೆÉೀನಷ್ಟು ದಿವಸವು ನಿಂತುಕೊಂಡಿರುವೆಮತ್ತೆ ಪೇಳುವುದೇನು ದೇವನೆ ಸುತ್ತು ಮುತ್ತಿನ ಜಗಕೆ ಆಸರವಿತ್ತೆ ನಿನಗಾಸರವು ಯಾವುದು ಭಕ್ತವತ್ಸಲನೆ 6 ಹೇ ದಯಾನಿಧೆ ಯಾದವಾಗ್ರಣಿ ಮಂದವಾಖ್ಯನೆ ಭೀಮತಡೆಯೊಳು ಆದರಮ್ಮಿಗೆ ತೋರಿ ಕರೆದನೆ ನಿಮ್ಮನೀರ್ವರನು ಬಾಧೆಬಡುತೀ ನಿಂತ ಕಾಲಿಗೆಹಾದಿನೋಡುವವೆಷ್ಟೊ ಬೆಳೆಯುಚೋದ್ಯವಲ್ಲವೆ ನಿನ್ನ ಲೀಲೆಯು ದಿವ್ಯವಿಗ್ರಹನೇ 7 ಆದಿಮೂರುತಿ ನಿನ್ನ ಹುಡುಕಲುವೇದ ಶಾಸ್ತ್ರ ಪುರಾಣವೆಂಬವು ಹಾದಿ ಕಾಣದೆ ನಿಂತವಲ್ಲೈ ನೀನೆ ಬಂದೀಗಮೇದಿನೀ ತಳದಲ್ಲಿ ಭಕ್ತರಹಾದಿ ನೋಡುತ ನಿಂತುಕೊಂಡಿರೆಹೋದವೆಷ್ಟೋ ದಿವಸ ಶ್ರೀಹರಿ ನಿನ್ನ ಲೀಲೆಯಲಿ 8 ನೀಲಮೇಘ ಶ್ಯಾಮ ಕೀರ್ತಿಯ ಜಾಲವನ್ನುರೆ ಭಜನೆ ಮಾಡುತತಾಳಹಾಕುತ ಸಂತಮಂಡಳಿ ಕುಣಿದು ಬರುತಿರಲುಧೂಳವೇಳುವದನ್ನು ಕಣ್ಣಲಿವೇಳೆಗಳೆಯದೆ ನೋಡಿ ನಲಿವುದುಲೀಲೆಯಲ್ಲವೆ ಪಾಂಡುರಂಗನೆ ವಿಶ್ವಚಾಲಕನೆ9 ಸರಸಿಜಾಕ್ಷನೆ ಕರಗಳೆರಡನುಇರಿಸಿ ಟೊಂಕದೊಳೇನು ನೋಡುವಿಪರಮ ಭಕುತನ ತಂದೆ ತಾಯ್ಗಳ ಸೇವೆ ಮಾಡುವುದುದೊರೆಯಲಾರದೆ ಕಲಿಯ ಕಾಲದೆ ದುರಿತ ನೀಗಿಸಿಕೊಂಡನಲ್ಲವೆ ಆರುಗಿಯಾದರು ನೋಡಲೊಲ್ಲನು ಭಕ್ತಿಬಲದಿಂದ 10 ಚಿನ್ನದರಸನೆÉ ನಿನ್ನ ಕೈಯನುಘನ್ನ ಟೊಂಕದ ಮೇಲೆ ಇರಿಸುತನನ್ನಿಯಿಂ ಭರವಸೆಯ ಕೊಡುವಿಯೊ ಭವದ ಸಾಗರವುತನ್ನ ನಂಬುತ ದಾಟಿ ಹೋಗುವಸನ್ನುತಾತ್ಮರಿಗಿಷ್ಟಯೆಂಬುದ ಚೆನ್ನವಾಗಿಯೆ ತಿಳಿಸಲೋಸುಗ ಹೀಗೆ ನಿಂತಿಹೆಯಾ 11 ನಾನು ನಿನ್ನನು ಕರೆಯದಿದ್ದರು ನೀನೆ ಬಂದಿಲ್ಲೇಕೆ ನಿಂತೆಯೊ ದೀನಪಾಲಕನೆಂಬ ಬಿರುದನೆ ಕಾಯಲೋಸುಗವೇಶಾನೆ ಸಂಪದವಿದ್ದ ದ್ವಾರಕೆ ಯಾನೆ ಕುದುರೆಗಳಿಂದ ಶೋಭಿಪ ದಾನವಾಂತಕ ಕೃಷ್ಣರಾಯನೆ ಈಗ ಪಂಡರದೀ 12 ಕರ್ಮ ಮುಗಿದಿಹುದೇಮಿಕ್ಕಿದವರೇನನ್ಯಯ ಪುತ್ರರೆ ತಕ್ಕ ಯೋಚನೆಗೆಯ್ದು ನಂತರತೆಕ್ಕೆಯೋಳ್ಸಲಹುವದು ಲೇಸೈ ಭಕ್ತವತ್ಸಲನೆ 13 ಹಾಲು ಮೊಸರಾ ಬೆಣ್ಣೆಯುಂಡೆಯ |ಲೀಲೆಯಿಂದಲೆ ಕದ್ದ ಕಳ್ಳನೆಚ್ಯಾಳಿಬಲಿತಾ ಬಳಿಕ ಬಿಡುವೆಯಾ ಭಕ್ತರಂತಹರಗಾಳಿ ಸೋಂಕಿದ ನೆವ ಮಾತ್ರಕೆಜಾಲಬೀಸುತ ಕದ್ದು ಕೊಳ್ಳುವಿಹೇಳಲೇನೈ ಹಿಂದಿನೆಷ್ಟೊ ಜನ್ಮದಘನಿದನಾ 14 ನಿನ್ನನೇ ನೆರೆ ನಂಬಿ ಭಜಿಸುವಪುಣ್ಯವಂತರ ಹೃದಯಮಂದಿರ-ವನ್ನೆಮಾಡಿದ ಪಾಂಡುರಂಗನೆ ನೀನು ಜಗದೊಳಗೆಘನ್ನ ಪಾಪದಿ ಬಳಲುತಿರುವವ-ರನ್ನುಸಲುಹಲು ಬಂದೆಯೇನೈಸನ್ನುತಾಂಗನೆ ಭಜನಿಗೊಲೆಯುವ ದಿವ್ಯ ವಿಠ್ಠಲನೆ 15 ವೇದಗಳ್ಳನ ಸದೆದು ಬ್ರಹ್ಮಗೆ ಮೋದದಿಂದಲಿ ಕೊಟ್ಟ ಮತ್ಸ್ಯನೆಆದಿಕೂರ್ಮನೆಯಾಗಿ ಮಂದರನೆಗಹಿ ನಿಂದವನೇಬಾಧೆÉ ಬಿಡಿಸುವ ಕ್ರೂರ ರಕ್ಕಸಭೇದಿಯಾಗುತ ಧರಣಿ ಮಂಡಲಸೇದಿ ತಂದನ ನೀನೆಯಲ್ಲದೆ ದಿವ್ಯ ವಿಠ್ಠಲನೆ 16 ಒಂದೆ ಮನದೊಳು ನೆನೆದ ಕುವರಗೆಬಂದೆ ಕಂಬದೆ ನಾರಸಿಂಹನೆನಿಂದ ಮಾತ್ರಕೆ ಮೂರು ಪಾದದ ಭೂಮಿದಾನದಲೀತಂದು ಪಾತಾಳದಲಿ ಬಲಿಯನುಚಂದದಿಂದಲಿ ಇಟ್ಟ ವಾಮನತಂದೆಯಾಡಿದ ನುಡಿಯ ನಡಿಸಿದ ಭಾರ್ಗವತ್ತೀ 17 ಸೀತೆಗೋಸುಗ ರಾಮನಾಗುತಖ್ಯಾತಿಗೋಸುಗ ಕೃಷ್ಣನಾದೆಯಲೇಪ್ರೀತಿಗೋಸುಗ ಬಾಧ್ಯನಾಗುತ ಜಗವ ಪಾಲಿಸಿದ್ಯಾಜಾತಿಯಶ್ವವನೇರಿ ರಿಪುಗಳÁತ ಮಾಡಿದ ಕಲ್ಕ್ಯರೂಪನೇಯಾತಕೀಪರಿ ಚಂದ್ರಭಾಗದಿ ನಿಂತೆ ಬೆರಗಾಗಿ 18 ನಿನ್ನ ನಾಮಗಳಮಿತವಿದ್ದರುನನ್ನ ನಾಲಿಗೆಗಷ್ಟು ಬರುವವೆ ?ಸನ್ನುತಾಂಗನೆ ಪಾಂಡುರಂಗನೆ ದಿವ್ಯ ವಿಠ್ಠಲನೆನ್ನುತಿಷ್ಟೇ ನಾಮಗರೆವೆನುಚಿನ್ನದರಸನೆ ಭಕ್ತಸಂಘದೊಳೆನ್ನ ಕೂಡಿಸಿ ಕಾಯಬೇಕೈ ಪರಮ ಭಗವಂತಾ 19 ಕಾಲಕಾಲಕೆ ನೇಮನಿತ್ಯಗ-ಳಾಲಯಂಗಳ ಮಧ್ಯದೆಸಗದೆಜಾಲಿಯಂತೇಗೆಲ್ಲ ಜನರಿಗೆ ಬೆಳೆದೆ ಬಾಧಿಸುತಬಾಲ ಯೌವನ ವಾರ್ಧಿಕತ್ವದೆಕಾಲಪೋಯಿತು ನಿನ್ನ ನೆನೆಯದೇ ಹೇಳಲೇನೈ ಕಾಲನೆಳೆಯುವನು 20 ಕಂತು ಜನಕನೆ ನಿನ್ನ ನಾಮದಮಂತ್ರವೆನಗಿನ್ನೆಲ್ಲಿ ಬರುವುದು ಶುದ್ಧ ಪಶುವಾದೇಅಂತರಾತ್ಮನೆ ನೀನು ಈ ತೆರನಿಂತುಕೊಂಡರೆ ನನ್ನ ಗತಿಯೇ-ನೆಂತ ಹೇಳಲಿ ಸಂತೆ ತೀರಿತು ಸಲಹೊ ವಿಠ್ಠಲನೇ 21 ಕಾಲ ಬಂದಿದೆಸದ್ಯಕಾರೂ ಕಾವರಿಲ್ಲವುದ್ಧಪಾಶದಿ ಬಿಡಿಸಬಾರೈ ದೀನ ಬಾಂಧವನೇ 22 ಕಾಯಕಿರುವದ ಬಂಧು ಬಳಗವು ಹೇಯ ದುಡ್ಡನೆ ಶಳಯಲೋಸುಗಜೀಯ ನಿನ್ನಂತಾರು ಇಲ್ಲವು ಜೀವಕನು ಸರಿಸೀತಾಯ ತಂದೆಯ ಜಗಕೆ ಲಕ್ಷ್ಮೀರಾಯ ನೀನೇ ಅಲ್ಲವೇನೈ ಬಾಯ ಬಿಡುವೆ ಅಜ್ಞಬಾಲರ ಕಾಯೊ ವಿಠ್ಠಲನೇ 23 ಅಣ್ಣನಾಗುತ ದ್ರುಪದ ಸುತೆಗಾಬಣ್ಣದಂಚಿನ ಸೀರೆ ಉಡಿಸಿದೆನಿನ್ನ ಬಾಲ್ಯದ ಸುಖ ಸುಧಾಮಗೆ ಕೊಟ್ಟಿಯ್ಯೆಸಿರಿಯಹಣ್ಣಿನಾಶೆಗೆ ಶಬರಿ....ಗೊಲಿದೈಬೆಣ್ಣೆಯಾಶೆಗೆ ಗೋಪಿಗೊಲಿದೈಮಣ್ಣಿನಾಶೆಗೆ ಬಲಿಯ ಬಾಗಿಲ ಕಾಯ್ದ ವಿಠ್ಠಲನೇ 24 ನಿನ್ನ ನೆಂದು ಕಾಣದಿದ್ದವಕುನ್ನಿ ಪಾಮರನಣ್ಣನೆಂಬೆನೆಹಣ್ಣು ಹಂಪಲವೆನಗೆ ಸಾಲವು ನಿನಗೆ ಕೊಡಬಹುದೇನನ್ನ ತೆರದಾಚಾರ ಹೀನರೆಇನ್ನು ಗೆಳೆಯರು ನನಗೆ ಆದರುಮುನ್ನ ಮಾಡಿದ ಪಾಪ ಬಹಳಿದೆ ಕೊಳ್ಳೊ ನೀನದನೂ 25 ಹಿರಿಯರೆಸಗಿದ ಪುಣ್ಯದಿಂದಲೆದೊರಕಿತಲ್ಲವೆ ನಿನ್ನ ನೆನೆವುದುಪರಮ ಸುಂದರ ಪಾಂಡುರಂಗನೆ ಬಾರೊ ಮಾನಸದೀತರಳರಾಟದಿ ತನ್ನ ತಾಯಿಯಮರೆತ ತೆರದಿಂ ಬಿಟ್ಟು ಕೆಟ್ಟೆನುಕರಗದೇನೈ ನನ್ನ ಮನವದು ನಿನ್ನ ದೆಶೆಯಿಂದ 26 ಕೂಸು ಆಟದೊಳಿದ್ದರೇನೈಹೇಸಿ ಕೆಲಸಹೊಳಿದ್ದರೇನೈದೋಷಗಳೆಯುತ ಪೊರೆವಳಲ್ಲಿದೆ ಪಡೆದ ತಾಯವ್ವಶ್ರೀಶ ವಿಠ್ಠಲ ಪಾಂಡುರಂಗನೆಘಾಸಿಗೊಳಿಸುವ ಮುನ್ನಯವನರುಪಾಶ ಬಿಡಿಸೈ ಭಕ್ತವತ್ಸಲ ದಿವ್ಯ ವಿಠ್ಠಲನೇ 27 ಕಾಮನಯ್ಯ ಸುಧಾಮ ಸಖ ಶ್ರೀರಾಮ ವಿಠ್ಠಲ ದಿವ್ಯ ರೂಪನೆಪ್ರೇಮವೆನ್ನಲ್ಲಿಟ್ಟು ಸಲಹೊ ಪುಣ್ಯವರ್ಜಿತನೆತಾಮಸತ್ವದ ಕೆಲಸವೆಲ್ಲವನೇಮದಿಂದಲೆ ಮಾಡಿ ನಾ ನಿ-ಸ್ಸೀಮನಾಗಿಹೆ ಕಾಯೆಯೊ ವಿಶ್ವವ್ಯಾಪಿ ವಿಠ್ಠಲನೇ 28 ನಾನು ಹೇಳುವುದೇನು ದೇವನೆನೀನೆ ತಿಳಕೊಂಡಿರ್ಪೆ ಎನ್ನಯಮಾನಕುಚಿತಪ್ಪಂತೆ ಸತ್ಫಲ ಕೊಡು ದಯಾಂಬುಧಿಯೇನೀನು ನಿಂvಡೆÉಗೆನ್ನ ಜಗ್ಗುತಸಾನುರಾಗದೆ ಪೊರೆಯೊ ವಿಠ್ಠಲನೀನೆಯಾದರು ಬಾರೊ ಭಕ್ತರ ಹೃದಯ ಮಂದಿರಕೆ 29 ಮಂಗಳಂ ಮಧುಕೈಟಭಾರಿಗೆಮಂಗಳಂ ಶ್ರೀವತ್ಸಧಾರಿಗೆಮಂಗಳಂ ಬ್ರಹ್ಮಾಂಡ ಪಾಲಕ ಪಾಂಡುರಂಗನಿಗೆಮಂಗಳಂ ಶ್ರೀ ಲಕುಮಿದೇವಿಗೆಮಂಗಳಂ ಭೀಮಾತಟಾಕಿಗೆಮಂಗಳಂ ಸದ್ಭಕ್ತ ಮಂಡಳಿಗೆಗಳ ಭೂತಳಕೆ 30
--------------
ಪಾಂಡುರಂಗ
ಶ್ರೀ ಪುರಂದರದಾಸರ ಸ್ತೋತ್ರ ಪದ ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ ಪಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ ಅ.ಪ ಒದಗಿದ ಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್‍ಮುದದಿ ಪಾಲಿಪರ ಧ್ಯಾನಿಸಿ 1 ಮೊರೆ ಹೊಕ್ಕ ಸುಜನಗಿಹಪರದ ಸುಖತರಗಳನೊದಗಿಸಿ ಹರಿಪದದಪರಮಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆನವರಿಗೆ ಕರಮುಗಿದು 2 ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ 3
--------------
ವೇಣುಗೋಪಾಲದಾಸರು
ಶ್ರೀ ಬದರಿ ಬದರೀಯಾ | ಯಾತ್ರೆಯಾ ಮಾಡಿ | ಬದರೀಯಾ ಪ ಬದರಿಯ ಯಾತ್ರೆಯ ಮಾಡಿ | ನಿಮ್ಮಮುದ ಶಾಶ್ವತವನ್ನೆ ಬೇಡಿ | ಆಹಸದಮಲ ದೇಹದಾಲಯವೆ | ಸದಾಶ್ರಿತ್ಹಿಮಾಲಯಹೃದಯ ಮಧ್ಯದಲೀಹ | ಬದರೀನಾಥನ ನೋಡೀ ಅ.ಪ. ಶ್ವೇತ | ದ್ವೀಪಾದ್ಯಾಲಯಗಳಸುಪದ ತೀರ್ಥವು ಸ | ರಿತ್ಪ್ರವರಾದಿ ಚಿಂತಿಸಿ 1 ತನುಮನ ಧನಗಳಾಶೆಯ | ತೊರೆದುಮನ ಆದಿಕರಣಗಳ್ಹರಿಯ | ಪಾದವನಜದಲ್ಲಿಡೆ ಅದು ಅಭಯ | ಸುದತಿಮಣಿ ಸಹ ಪೋಗೋದೆ ಹೃದಯ | ಆಹವನ ಭುವನ ಚರಿಸಿ ಸತ್ಪಾ | ವನ ಕ್ಷೇತ್ರಗಳಮಣಿದು ಸರ್ವತೀರ್ಥ | ಸ್ನಾನಾದಿ ಗೈಯುತ 2 ಸಿಂಧು ಮಾಧವ ಸಿರಿ ಕೃಷ್ಣನ ನೆನೆದು 3 ಶೌರಿ ಪಾಂಡುರಂಗರಾರಾಧನೆಯ ಗೈದು | ತೋರುತ ಮುದವನು 4 ಶಾರದ ನಾಡೀಲಿ ಗಂಡಕೀ ಮತ್ತೆಚಾರು ಲಂಬುಶಿಖಿ ಗೋಮತಿ | ಆ ಗಾಂ-ಧಾರಿಯೊಳಗೆ ಮಾರುಧೃತಿ | ನೆನೆಚಾರು ಶಂಕಿನಿ ನಾಡಿ ತಪತೀ | ಆಹವೀರ ರಾಮಾ ಮಧು | ವೈರಿಯು ಶ್ರೀರಂಗನಾರಾಯಣನ ರೂಪ | ಸಾರುತ ತಪತೀಲಿ 5 ಸಿರಿ ಮಾಧವನ ನೆನೆಯೆಪರಿಹರಿಸುತ ಪಾಪ ಸರುವಾಭೀಷ್ಟವ ನೀವ 6 ಸ್ತವರನದಲೀಪರಿ ಮಿಂದು | ದೇಹಪವಿತರವಾಯಿತು ಎಂದು | ಕ್ಷೇತ್ರಸರ್ವವ ಸ್ತುತಿಸುತ ಮುಂದೆ | ಪೋಗೆಭವರಹಿತ ಹರಿದ್ವಾರ ಅಂದು | ಆಹಭುವನ ಪಾವನ ಗಂಗಾ | ಪ್ರವಹಮೀಯುತ ಮತ್ತೆಭವಹರ ಹರಿನಾಮ | ಶ್ರವಣ ಮನನಗೈದೂ 7 ಸೂರ್ಯ ಪ್ರಭೆ ನೇತ್ರಎಸೆವೊ ಲಲಾಟದಿ | ಹೃದಯ ದೋಳ್ವಿಕಾಲ 8 ಹೇಮ ಧಾಮ | ಕಂಡುನೀಗೊ ನೀ ದೇಹದ ಶ್ರಮ | ಓಡಿಪಂಚ ರೂಪಗಳನೆ ತಂದು | ಆಹಪಂಚ ನಾಡಿಯ ಮಧ್ಯ | ಮಿಂಚಿಪ ಗೃಹದಿ ವಿ-ರಂಚಿ ಪಿತನ ನೋಡಿ | ಸಂಚಿತಾದಿಯ ಕಳೆ 9 ಕಮಲ ಮಧ್ಯ | ಮುದದಲರ್ಚಿಸುತಲಿ 10
--------------
ಗುರುಗೋವಿಂದವಿಠಲರು
ಶ್ರೀ ಭಾರತೀದೇವಿ ಎಂತು ನೀವಶವಾದಿಯೇ ಭಾರತಿದೇವಿ ಎಂತು ನೀ ಮರುಳಾದಿಯೆ ಪ ಕಂತು ಹರನ ತಾಯಿ ದಂತಿಗಮನೆ ದಮಯಂತಿ ಕಾಂತಸುತೆ ಅ.ಪ ಧರೆಯೊಳು ಪುಟ್ಟುತಲಿ | ಆಕಾಶಕ್ಕೆ ಭರದಿಂದ ಜಿಗಿಯುತಲಿ ಸರಸಿಜ ಸಖನಾದ | ತರಣಿಯ ಫಲವೆಂದು ಅರಿತು ಭಕ್ಷಿಸಲ್ಹೋದ | ತರು ಚರ ರೂಪಿಗೆ 1 ಪುಂಡರೀಕಾಕ್ಷ ಕೇಳಿ | ದ್ವಾಪರದಿ ಪ್ರಚಂಡಗೆ ಒಲಿಯುತಲಿ ಭಂಡ ಬಕನ ಶಿರದಿಂಡು ಗೆಡಹಿ ಅವನ ಭಂಡಿ ಓದನವನ್ನು ಉಂಡ ಪುಂಡಗೆ ಮಾತೆ 2 ಶ್ರೀ ಶಾಮಸುಂದರನೇ ತ್ರೈಲೋಕ್ಯಕ್ಕೆ ಈಶನೆಂಬುದು ತಾನು ಲೇಸಾಗಿ ಪೇಳಲು | ಲೇಶವಾದರು ನಿನ್ನ ಆಶೆ ಇಲ್ಲದೆ ಸನ್ಯಾಸಿ ಆದವನಿಗೆ 3
--------------
ಶಾಮಸುಂದರ ವಿಠಲ
ಶ್ರೀ ಮದ್ಭಾಗವತ ಚಿಂತಯಾಮಿ | ಶಿರಿಕೃಷ್ಣ | ಸತತ ಸುಗುಣೋ | ಪೇತಂ ಪ ಸಂತತ ಭಕುತರ ಕೃಪಾ | ಪಾಂಗ ವೀಕ್ಷಾ ಹಸಿತಂಅ.ಪ. ಚಿಟ್ಟೆಸ್ವರ - ಸರಿ ಗಸರೀ | ಮಪ ದಪ ಧಾ | ರಿಸ ನಿಧ ನಿಧ | ಪಮ ಗರಿ ಸಧ |ದ್ರುತ :- ಸರಿಮಾ ಗರಿ | ಮಪ ದಾಸಮ || ಪದ ಸಾ ನಿಧ | ನಿಧ ಪಮಪಧ |ಗರಿ ಸಧ | ರಿಸ ಧಾ ಸ | ಧಾ ಗರಿ ನಿಧಮ ಗರಿಸಧ || ದುರುಳ ಬಂಧಂ | ವಸುಮತಿಯೆಂ, ಗಗನಖಾರಿ, ಕಂಸಗರ್ವಹರ, ದುರ್ಗಾಂಬಂ 1 ವಿಗತಾ ಅಸು, ಪಾಲುಣಿಸಿದ, ರಕ್ಕಸಿ, ಪೂಥಣಿಯುಮಿಗೆ ಊರ್ವಶಿ ಸುರೆ ಶಾಪಹರಂ | ಶಕಟಾಖ್ಯಾಸುರವಿಗಡ ಪ್ರಾಣಹರ | ಶೀಲಂ ತೃಣ ವತ್ಸಾಹರ | ಬಕ ಧುನಿ ಚಮುಮಿಗಿಲಾದವರ ಅಸುಹರಣಂ | ಮಣಿಗೊರಳರ ಶಾಪಹರಂ |ಮದ ವಿಭಂಜನ ಕಾಳೀಯನ | ವನ್ಹಿಯ ಪಾನಂ ಚರಿತಂ 2 ಚಿಟ್ಟೆಸ್ವರ - ನಿಸ ಗಾ ಮಪ | ಗಮ ಪಾ ನಿಸ | ರಿ ಸ ರಿ ನಿ ಸಸ | ಧಪ ಗಾರಿಸ |ನೀ ಸಗ ಮಪ ಗಾ ಮಪನಿಸ | ಪಾನಿಸ ಗರಿಸನಿ ಧ ಪನಿಸ |ಗರಿಸಧ, ಆರಿಸ ಧಾ, ಸ || ಧಾ, ಗರಿ ನಿಧಮ ಗರಿಸಧ || ರಾಗ ಮೋಹನ : ಹನನ ಅಸುರ | ವಿಷತರು ರೂಪಿ | ಘನ ಧೇನುಕ ಭಂಜನಹನನ ಪ್ರಲಂಬನು ಬಲ ನಿಂ | ಪುನರಪಿ ವನ್ಹಿಯ ಪಾನಂಮುನಿ ಪತ್ನ್ಯಾನೀತಾನ್ನ | ಸುಭೋಜನ ಶೀಲಂ |ತೃಣಸಮ ಗಿರಿಧರ ಶಂಖನ | ಮಣಿಹರ ಅರಿಷ್ಠಾ ಅಸುರ ಹರ 3 ಗಾ ಅಪ ಗರಿ, ಗರಿ ಸಧ ಸರಿ | ಗಾಪ ಧಸ, ಧಪ ಗರಿ ಸರಿ |ಗಪ ಗಗ ರಿಸ, ರಿಗ ರಿರಿಸ ಧ | ಸರಿಗರಿ ಗಪಗಪ ಧಪ ಧಸ |ಗರಿಸಧ, ಆರಿಸ, ಧಾ ಸ || ಧಾ, ಗರಿ ನಿಧಮ ಗರಿಸಧ || ಕೇಶಿ ಅಸುರನ ಅಂತೆ ವ್ಯೋಮಾಸುರ ಹನನದಕ್ಲೇಶ ವಾರ್ತೆಯ ಕೇಳಿ ಕಂಸನು ದಾನಪತಿಯನುಯಶೋದೆ ಕಂದನ ಕರೆಯೆ ಅಜ್ಞಾಪಿಸಿದ ಬಿಲ್ಲು ಹಬ್ಬಕೆಲೇಸೆನುತ ಬರವಾಯ್ತು ಸಖ ಅಕ್ರೂರ ಗೋಕುಲಕೆ 4 ಚಿಟ್ಟೆಸ್ವರ - ಅರಿ ಗಮ | ಪಾಧಪಸ | ನಿಧಪಮಗರಿಗಮಪ ಮಾಪ, ಗಾಮರೀಗ, ಸಾರಿಗಾ ಮ, ಪದ ಪ, ಸಾನಿ ||ಗರಿ ಸಧಾ, ರಿ ಸಧಾ ಸದಾ ಗರಿ ನಿಧಮ, ಗರಿ ಸಧ || ಪತಿ | ಸ್ನಾನದಲಿ ಹರಿ ವೀಕ್ಷಣಂಮನ ಕಲಕಿ ಹರಿ ಮಹಿಮೆ ಆಶ್ಚರ್ಯದಿ ಮಧುರೆ ಸೇರಿವನದಿ ಪರಿವಾರ ನಿಲೆ ಬಲ ಸಹಿತ ಪುರಖೊರಟ 5 ಪಾ ಮಗರಿ | ಸಾ ನಿಧ ಸರಿ | ಮಾ ಗರಿಸ | ರಿಮ ಪಮನಿಧ |ಸಾ ಸನಿ ಧಪ ಪಾ ಮಗರಿಸ | ನಿಧ ಸರಿ ಮಪನಿಧ ಮಪಧಸ |ಗರಿ ಸಧ ಆರಿ ಸ ಧಾ ಸ || ಧಾ ಗರಿ ನಿಧಮ, ಗರಿಸಧ || ಭಾರ ಕಳೆದ ಗುರು ಗೋವಿಂದ ವಿಠಲ 6 ಚಿಟ್ಟೆಸ್ವರ ರೀ, ಮರಿ ಮಪ | ನೀ ಪಮ ಪನಿ | ಸಾರಿಸನಿ | ಪಪ ಮಮ ರಿಸ |ರೀ ಪಮ ರಿಸ ನಿಸ ರಿಮಪಾ || ರಾಗ :ಪೂರ್ವಿಕಲ್ಯಾಣಿ :ಧಪಸಾ ನಿಧಪಮ | ಪಮಗರಿ ರಾಗ :ಮೋಹನ :ಸರಿಮಾ ಗರಿ ಸರಿಗಾ | ದಪಗರಿ ಸರಿ ಗಪದಸರಾಗ :ಮುಖಾರಿ :ರೀ ಸದಾ ಪ ದಪ ಗಾರಿಸ | ರಾಗ :ನಾಟಿ ಕುರಂಜಿ :ನಿಸ ಮಗ ಮನಿ ಧನಿ ಪದನಿಸ | ರಾಗ :ಸಾವೇರಿ :ಗರಿ ಸಧಾ ರಿಸ ಧಾ ಸ || ಧಾ ಗರಿ ನಿದಮ ಗರಿ ಸಧ
--------------
ಗುರುಗೋವಿಂದವಿಠಲರು
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ ಆ ಮಹಾತತ್ವ ತಾರತಮ್ಯಗಳ ತಿಳಿದು ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ ಅಕ್ಷರಿ ಎನೊ ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | 1 ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ ರಿರ್ಮುರಿದು ಸೀಳಿ ಬಿಸಟು ಕಿರ್ಮೀರ ದನುಜರ ಸದೆದು ಪೂತಂದು ಸು- ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ 2 ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ ಭಜಿಸಿರಯ್ಯಾ | ಅಯ್ಯಯ್ಯಾ 3 ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ ಇವನೆಂದು ವೇದಗಳು ಸಾರುತಿವೆ ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ4 ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ ಜಾತರನ ಉದ್ಧರಿಸ ಪೋಗೆನಲು ಜಯ ತನೋ ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | 5 ಇಳಿಯೊಳಗೆ ಬಲವಂತನಾದ ಮತ ಮಧ್ವಮತ ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ ಹರಿನಾಮ ದಂಡವಾ ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |6 ದುರವಾದಿಗಳ ಗಂಡ ಗಜದಭೇರುಂಡ ಸಂ ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ ಕುಹಕ ಮುರಿದು ಉರಹಿ ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ 7 ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ ಉರಗ ಉಪವಾಸ ತಂತ್ರ ಕರಿ ಕರುಣತಿಪ್ಪುವದು ಗುರು ದಯಾಕರನಾಗೆ ಹರಿವೊಲಿದು ಸಲಹುವನು ಪಾದವ ನಂಬಿರೈಯ್ಯ | ಅಯ್ಯಯ್ಯಾ 8 ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ ಸಿರಿ ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ 9
--------------
ವಿಜಯದಾಸ
ಶ್ರೀ ಮನೋಹರ ಸಲಹೋ ಎನ್ನ ಕಾಮಿತ ಫಲವಿತ್ತು ಸಾಮಜಪತಿ ಪರಿಪಾಲಕ ನಂಬಿದೆ ಪ ಅಂಡಜಗಮನ ದಶರುಂಡವೈರಿ ರಾಜೀವಾಕ್ಷ ಕುಂಡಲಿಶಯನ ಕೋದಂಡ ಪಾಣಿಯ ತೋಂಡಮಾನಗೊಲಿದ ಮಾರ್ತಂಡ ತೇಜ ಪಾದ ಪುಂಡರೀಕ ಸೇವಿಸುವ ತೋಂಡರೊಳಿಡು ಪಾಂಡವಪಕ್ಷ1 ನಾಳಿತ ಸಂಭವಪಿತ ಶೈಲಜಾವಲ್ಲಭನುತ ಭಂಜನ ವನಮಾಲಿ ಭೂಲೋಲ ಕಾಲ ಕೋಲರೂಪಿ ಕೋಮಲಾಂಗ ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2 ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ ದಾತ ನಂದಕ ಹಸ್ತ ನಂದಮುನಿವಂದಿತ ಸಂಕ್ರಂದನ ನಂದನವರದ ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3
--------------
ಶಾಮಸುಂದರ ವಿಠಲ
ಶ್ರೀ ರಘುವರತೇ ನಮೋ ನಮೋ ಪ ಆಶ್ರಿತ ಪರಿಪಾಲತೇ ನಮೋ ನಮೋ ಅ.ಪ ಸರಸಿಜಭವಪಿತ ಸರಸಿಜಲೋಚನ ಪರಮಪುರಷ ಖಗಪತಿ ಗಮನ ಸುರಕಿನ್ನರ ಭೂಸುರನರವರನುತ ಸೂರಿಜನಪ್ರಿಯತೇ ನಮೋ ನಮೋ 1 ಮದನಕೋಟಿ ಲಾವಣ್ಯ ಶರಣ್ಯ ನಾ- ರದ ವೀಣಾಗಾನ ವಿಲೋಲ ಮುದತೀರ್ಥವರದ ಮುನಿಜನಪಾಲಕ ಸದಮಲಾತ್ಮಕತೇ ನಮೋ ನಮೋ 2 ರಾಮಭೂವರ ವಿರಾದಾಂತಕಬಲ- ರಾಮಾನುಜ ರಘುರಾಮವಿಭೋ ಸೋಮಸೂರ್ಯನಯನ ಶುಭ- ತಮ ಶ್ರೀ ಗುರುರಾಮವಿಠ್ಠಲತೇ ನಮೋ 3
--------------
ಗುರುರಾಮವಿಠಲ
ಶ್ರೀ ರಮಣ ಭಯಹರಣ ಭವಾಬ್ಧಿತರಣ ಸಾರಸಗುಣಭೂರಿ ಕರುಣಾಪೂರಿತೇಕ್ಷಣ ಪ. ಶರಧಿಶಯನ ಗರುಡಗಮನ ಶರಣರಕ್ಷಣ ಆರ್ಯಮವಂಶಾರ್ಣವರಾಕಾಸಿತ ಕಿರಣ 1 ದುರಿತದಮನ ದೀನಭರಣ ಪರಮಪಾವನ ಸುರಾರಿ ವಿರೋಧಿ ಖರಾರಿ ಪುರಾರಿಪ್ರಿಯ ರಘೋತ್ತಮ 2 ಅರಿಜನೈಕ ತ್ರೈವಿಕ್ರಮ ಅನಘ ಚರಿತ ರಾಮಚಂದ್ರ ರಂಗಧಾಮಮಂಗಳಂ 3 ಭವಂತುತೇಸದಾ ಶ್ರೀನಿಧಾ ಶ್ರೀರಮಣ ಭಯಹರಣ ಭವಾಬ್ಧಿತರಣ 4
--------------
ನಂಜನಗೂಡು ತಿರುಮಲಾಂಬಾ
ಶ್ರೀ ರಮಣಪತಿ ವಿಠಲ ನೀ ಕರುಣಿಸೋ |ಮಾರಪಿತ ಮರುತ ಮನೆಮಂದಿರ ನಿವಾಸಾ ಪ ಉದಯದಲಿ ಎದ್ದು ಹರಿಧ್ಯಾನವನು |ಮುದದಿಂದ ಬ್ಯಾಸರದೆ ನಿರುತ ಮಾಡಿ |ಸದಮಲ ಶ್ರೀ ಮುದ್ರಿಊಧ್ರ್ವಪುಂಡ್ರವ |ಪದುಮಾಕ್ಷಿ ಶ್ರೀತುಲಸಿಸರಗಳಿಂದಾ 1 ಸಿರಿ ಬೊಮ್ಮ ಪಂಚಭೇದ ಜ್ಞಾನದ, ತತ್ವವಿಚಾರ |ಹರಿದಾಸ ಸಹವಾಸ ಸರ್ವದಾ ಕೊಟ್ಟು 2 ಶ್ರೀಶ ಪ್ರಾಣೇಶ ವಿಠ್ಠಲರಾಯನೇ ನಿನ್ನ |ದಾಸತ್ವವನೆ ಕೊಟ್ಟು ಉದ್ಧರಿಪದೋ ||ಲೇಸಾಗಿ ಪ್ರಾರ್ಥಿಸದೆ ಎನ್ನ ಭಿನ್ನಪವು ಉ |ದಾಸಿಸದೆ ನೀ ಕರುಣಿಸೆಂದು ದಿನದೇ 3
--------------
ಶ್ರೀಶಪ್ರಾಣೇಶವಿಠಲರು
ಶ್ರೀ ಲಕ್ಷ್ಮೀ ದೇವಿಯರು ಕಾಯೆ_ಕಾಯೆ _ ಶ್ರೀ ಹರಿಜಾಯೆ ಪ ಕಾಯೆ ಕಾಯೆ ಸಂತೋಷವೀಯೆ ಮೂರು ಜಗ ಕಾಯೆ ವಿಷ್ಣುಮನ ಛಾಯೆ ಭಕುತಿವರವೀಯೆ ನಿತ್ಯ ಎಳೆಕಾಯೆ ಸುಜನಗಣ ಧ್ಯೇಯೆ ನಿಗಮತತಿಗೇಯೆ ಮಾಯೆ ಅ.ಪ. ಶರಣು-ಶರಣು-ಶರಣು ಗುಣಭರಣಿ ಭವ ತರಣೀ ಶರಣು ತ್ರಿಗುಣ ಧಣಿ ಶರಣು ಸೊಬಗು ಖಣಿ ಶರಣು ನಿಗಮಧ್ವನಿ ಮಣಿ ಸಿರಿ 1 ಅಂಬೇ-ಅಂಬೇ-ಅಂಬೇ-ಅಂಬೇ ನಿರುತಹರಿ ಕಾಂಬೆ ಉರದಲಿಹೆ ಎಂಬೆ ಪಡೆದೆ ಜಗ- ವೆಂಬೆ ಭಕುತಿ ಜನಸ್ತಂಭೆ ಅಮಿತಶಶಿ ವಿಧಿ ಯಿಂಬೆ ತ್ರಿಗುಣ ಹರಿ ಕೃತಿ 2 ರಾಣೀ_ರಾಣೀ-ಶ್ರೀ ಅನಿರುದ್ಧನ ರಾಣಿ ಲಕ್ಷಣ ಶ್ರೇಣಿ ಪಂಕಜಪಾಣಿ ಭುಜಂಗ ಸು- ನಿತ್ಯ ಕಲ್ಯಾಣಿ ಮಂಗಳವಾಣಿ ದುಃಖವ ಕಾಣಿ ನೀ ಬಹು ಜಾಣಿ ವಲಿದಿಹ ಹರಿ 3 ಅಮ್ಮ-ಅಮ್ಮ-ನೀಜಗದಮ್ಮ ಅಮ್ಮ ಕಣ್ ತೆಗೆಯಮ್ಮ ಸಿರಿಸುರಿಸಮ್ಮ ಉರಿಹರಿಸಮ್ಮ ದಯಮಾಡಮ್ಮ ವಿಧಿಗುರುವಮ್ಮ ಭುಜಿಸೊಸೆಯಮ್ಮ ಹರಿಗ್ಹೇಳಮ್ಮ ದಕ್ಷಣೆ 4 ಶೀಲೆ-ಶೀಲೆ- ನಿರುತ ಹರಿಯ ಜಪ ಶೀಲೆ ಕುಂಕುಮ ವಾಲೆ ಇಟ್ಟಹೆ ಬಾಲೇ, ಚಂಚಲ ಲೀಲೆ ನತಜನ ಪಾಲೆ ಖಳರೆದೆಶೂಲೆ ಹರಿಗಿಹೆಮಾಲೆ 5 ಹೇತು-ಹೇತು-ಕಾರ್ಯ ಕಾರಣ ನೀ ಒಡವೆಗಳಾಗಿ ವಸ್ತ್ರಗಳಾಗಿ ಶಸ್ತ್ರಗಳಾಗಿ ಚರಣದಿ ಬಾಗಿ ಹರಿಗನುವಾಗಿ ಸಾಧಕಳಾಗಿ ಧೊರೆವಶಳಾಗಿ ಗಂಡನ ಭಜಿಪೆ 6 ಇಲ್ಲ-ಇಲ್ಲ-ಹರಿಯಗಲಿಕೆ ನಿನಗಿಲ್ಲ ಕ್ಲೇಶವು ಇಲ್ಲ ದೋಷಗಳಿಲ್ಲ ಪಾಶಗಳಿಲ್ಲ ಹರಿ ಬಿಡನಲ್ಲ ಸರಿಯಾರಿಲ್ಲ ಮುಕ್ತರಿಗೆಲ್ಲ ಒಡೆಯಳೆ ಚೆಲ್ವೆ ನೀ ಆಕಾಶೆ7 ನೀರೆ-ನೀರೆ-ಹರಿ ಸಮಾಸಮನೀರೆ ಘನ ಗಂಭೀರೆ-ಶ್ರುತಿಗಳ ಮೇರೆ ಮೀರುತ ಧೀರೆ ಹರಿಮನಸಾರೆ-ಪೊಗಳುವೆ ಬೇರೆ ಸಾಟಿಯು ಯಾರೆ-ಹರಿಪುರ ತೋರೆ ಕರುಣದಿ 8 ಕಂದ-ಕಂದ-ನಾನಿಹೆ ನಿನ್ನ ನಂದದ ಶ್ರೀ ಕೃಷ್ಣವಿಠಲನ ರಾಣಿ ಇಂದಿರೆಸಲಹೆ ಕುಂದುಗಳಳಿಸೆ ತಂದೆಯ ತೋರೆ ಚೆಂದದ ಭಕುತಿ ಮುಂದಕೆ ತಂದೂ 9
--------------
ಕೃಷ್ಣವಿಠಲದಾಸರು
ಶ್ರೀ ಲಕ್ಷ್ಮೀನಾರಾಯಣ ಪ ಕಾಲ ಕಾಲ ಗಾನವಿಲೋಲ ಜಯ ಜಯ ಅ.ಪ ವಿರಿಂಚಿ ಸ್ತೋತ್ರ ಪಡೆದ ಮಹಾತ್ಮ ಜಯ ಜಯ 1 ಗಿರಿಯು ನೀರೊಳ್ ಮುಳುಗಲಾಕ್ಷಣ | ಗೆರೆದೆಯಮೃತವ ಪೊರೆದೆ ಕರುಣದಿ2 ಶೇಷಗಿರಿಯ ವರಾಹರೂಪನೆ 3 ಭರದೊಳಿರಲೊಡೆದ್ವಜ್ರ ಕಂಭದಿ | ಶರಣನು ಪೊರೆದಾ ನೃಸಿಂಹನೆ 4 ಳೊದಗಿರುವ ತ್ರಿವಿಕ್ರಮನೆ ಜಯ ಜಯ 5 ಸಮಗೊಳಿಸಿ ಪೊರೆದಮಲ ಭಾರ್ಗವ 6 ಕುಶಲವರ ಪಿತ ರಾಮಚಂದ್ರನೆ 7 ಕುವರಿಯರಸ ಗೋಪಾಲಕೃಷ್ಣನೆ 8 ದತಿಕುಶಲ ಬುದ್ಧಾವತಾರನೆ 9 ಲಟ್ಟಹಾಸದಿ ಮೆರೆವ ಕಲ್ಕಿಯೆ 10 ಮಾಧವ ಗತಿ ಜಗದ್ಗುರು ಸಚ್ಚಿದಾನಂದ 11
--------------
ಸದಾನಂದರು
ಶ್ರೀ ವಾದಿರಾಜರು ಗುರುವರ ದಯಮಾಡೈ ಹಯಮುಖ ಪದಯುಗ ನಿಜ ಭಕ್ತಾಗ್ರಣೀ ಪ ಚರಣವ ನಂಬಿದೆ ಮುಂದಿನ ಪರಿಸರ ಸರಸರ ಸುರಿಸುತ ವರಗಳ ಕರುಣದಿ ಅ.ಪ ನಿನ್ನನೆ ನಂಬಿದ ಅನ್ಯರವಲ್ಲದ ಚಿಣ್ಣರ ಬಿಡುವರೆ ಘನ್ನಗುಣಾರ್ಣವ ಸಣ್ಣವರೆನ್ನೆದೆ ಮನ್ನಿಸಿ ಕೈಪಿಡಿ ಚಿನ್ಮಯ ನಂದನ ಅನ್ಯರ ಪೋಷಕನೆ 1 ದಾಸರ ದೋಷವಿನಾಶಗೈವುದು ಕ್ಲೇಶವ ಭಾವೀಶ್ವಾಸ ನಿಯಾಮಕಗೆ ವಾಸವ ಗುರುಶಿವ ಶೇಷಸುವಂದಿತ ವಾಸಿಸಿ ಹೃದಯದಿ ಭಾಸಿಸು ಹರಿದಾರಿ 2 ಆರ್ರ್ತಿವಿದೂರ ಪರಾರ್ಥಕೆ ನೆಲಸಿಹ ಖ್ಯಾತ ಕವೀಂದ್ರನೆ ಪ್ರೀತಿಯ ಬೇಡುವೆನು ಮಾತೆಯ ತೆರಮುರವ್ರಾತವ ನೋಡದೆ ನಾಥನೆ ನೀಡಿಸು ಆತ್ಮವಿಕಾಸವನು 3 ವಿಜ್ಞಾನಾಸಿಯ ದಾನವ ಗೈಯುತ ದೀನನ ಮೌಢ್ಯದಿ ಶೂನ್ಯವಗೈಯುತ ಪ್ರಾಜ್ಜನ ಮಾಡೈ ಪ್ರಾಜ್ಞಲಲಾಮನೆ ಆಜ್ಞಾಧಾರಕ ನಿನ್ನ ಜನುಮ ಜನುಮದಲಿ4 ವೇದವ್ಯಾಸರ ಪಾದಾರಾಧಕ ಮೋದಮುನೀಂದ್ರರ ಪ್ರೇಮವ ಪಡೆದಿಹನೆ ವೇದವ್ಯಾಸರ ಸೇವಿಪ ಭಾಗ್ಯವ ಸಾದರದಿಂ ಕೊಡು ಕಾಮಿತ ಕೊಡುವವನೆ5 ಹಿರಿಯರ ಕರುಣದಿ ಕಿರಿಯರ ಸಾಧನೆ ಶರಣನ ಭಾರವು ಸೇರಿದೆ ನಿಮ್ಮಡಿ ಹರಣವ ವಪ್ಪಿಸಿ ಚರಣವ ಪಿಡಿದಿಹೆ ಪೊರೆಯೈ ಮನತರ ಕುರುಡನು ನಾನಿಹೆ 6 ಮಿಥ್ಯಾಮತ ವಿಧ್ವಂಸನೆ ಗೈಯುವ ಸದ್ಗ್ರಂಥಂಗಳದಾತನೆ ಬಾಗುವೆನು ಪಾರ್ಥನಸಖ “ಶ್ರೀಕೃಷ್ಣವಿಠಲ”ನ ಭಕ್ತಿತರಂಗವ ನೀಡುತ ಕಾಯುತ 7
--------------
ಕೃಷ್ಣವಿಠಲದಾಸರು
ಶ್ರೀ ವಾದಿರಾಜರು ಸೋಜಗವೆನಿಸಿ ರಾಜಿಸುತಿದಕೊ ರಾಜರ ಭಾಗ್ಯವಿದು ಪ ಬುಧಜನಕೊಪ್ಪುವ ಪದ ಸುಳಾದಿ ಖಳ ರೆದೆಗಿಚ್ಚೆನಿಸುವ ಚತುರತೆಯಾ ಸದಮಲ ನಾನಾವಿಧ ಗ್ರಂಥದಿ ಹಯ- ವದನನ ಪೂಜೆಯು ಯಜಿಸುವುದೆಲ್ಲ1 ತಮ್ಮಯ ನೇಮವು ಒಮ್ಮಿಗು ಬಿಡದಂ- ತಮ್ಮಯ ಬಿಡದಲೆ ಸಮ್ಮೊಗದಾ ಅಮ್ಮಹ ಶಾಸಖಿ ಬÉೂಮ್ಮಭೂತವನು ಘಮ್ಮನೆ ನಿರ್ಮಿಸಿ ರಮ್ಮಿಪುದೆಲ್ಲ2 ಮೇದಿನಿಯೊಳಗೆ ಶುಭೋದಯಕಾರಕ ಸ್ವಾದೀಸ್ಥಳ ಸರ್ವಾಧಿಕವೈ ಪಾದದ್ವಯದ ಅಗಾಧ ಮಹಿಮನೇ ಶ್ರೀದವಿಠಲನಾರಾಧಿಪುದೆಲ್ಲ 3
--------------
ಶ್ರೀದವಿಠಲರು